Homeನಿಜವೋ ಸುಳ್ಳೋಮೋದಿ ಬಂದ ನಂತರವೇ ಕಾಶ್ಮೀರದಲ್ಲಿ ಹಿಂದೂ ಆಚರಣೆಗಳಿಗೆ ಮುಕ್ತ ಅವಕಾಶ ಸಿಕ್ಕಿತಾ? ಅಸಲಿ ವಿಚಾರವೇನು ಗೊತ್ತೇ?

ಮೋದಿ ಬಂದ ನಂತರವೇ ಕಾಶ್ಮೀರದಲ್ಲಿ ಹಿಂದೂ ಆಚರಣೆಗಳಿಗೆ ಮುಕ್ತ ಅವಕಾಶ ಸಿಕ್ಕಿತಾ? ಅಸಲಿ ವಿಚಾರವೇನು ಗೊತ್ತೇ?

ಮೋದಿ ಬಂದ ಮೇಲೆ ಕಾಶ್ಮೀರದಲ್ಲಿ ಹಿಂದೂ ಆಚರಣೆಗಳಿಗೆ ಮುಕ್ತ ಅವಕಾಶ ಸಿಕ್ಕಿದೆ ಎಂದು ಬಿಂಬಿಸಲು ಮಬ್ಭಕ್ತರು ಪ್ರಯತ್ನಿಸುತ್ತಿದ್ದಾರೆ. ವಾಸ್ತವ ಅಂದರೆ ಕಳೆದ ಐದು ವರ್ಷಗಳಲ್ಲಿ ಅಲ್ಲಿ ಭಯೋತ್ಪಾದನಾ ಕೃತ್ಯಗಳು ಹೆಚ್ಚಿವೆ ಮತ್ತು ಸೈನಿಕರ ಸಾವಿನ ಪ್ರಮಾಣದಲ್ಲಿ ಶೇ.106% ರಷ್ಟು ಏರಿಕೆಯಾಗಿದೆ

- Advertisement -
- Advertisement -

‘40 ವರ್ಷಗಳ ನಂತರ ಕಾಶ್ಮೀರದ ಶ್ರೀನಗರದಲ್ಲಿ ಪ್ರಭಾತ್ ಫೇರಿ’: ಅಸಲಿ ವಿಚಾರವೇನು ಗೊತ್ತಾ?

ಈ ದೇಶದ ಭಾಗವೇ ಆಗಿರುವ ಕಾಶ್ಮೀರದ ಶ್ರೀನಗರದ ಬೀದಿಯಲ್ಲಿ ಪ್ರಭಾತ್ ಪೇರಿ ನಡೆದರೆ ಆಶ್ಚರ್ಯದ ವಿಷಯವೂ ಅಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ‘40 ವರ್ಷಗಳ ನಂತರ ಇದು ಸಾಧ್ಯವಾಗಿದೆ. ಇದಕ್ಕೆ ಮೋದಿಯೇ ಕಾರಣ. ಮೋದಿ ಹೈತೋ ಮುಮ್ಕಿನ್ ಹೈ’ ಎಂದೆಲ್ಲ ವೇಗವಾಗಿ ಹರಡಲಾಗುತ್ತಿದೆ. ಪ್ರಭಾತ್ ಪೇರಿ ಅಂದರೆ ಬೀದಿಯಲ್ಲಿ ಜನರು ಸಾಲಿನಲ್ಲಿ ಚಲಿಸುತ್ತ ಭಜನೆ ಆಥವಾ ಇನ್ನಾವುದೋ ಹಾಡನ್ನು ಹೇಳುತ್ತ ಸಾಗುವುದು. ಅದು ಜೂನ್ 27ರಂದು ನಡೆಯಿತಂತೆ. ನಡೆಯಲು ಬಿಡಿ, ತಪ್ಪೇನು ಎಂದು ನಾವು ಕೇಳಬಹುದು.

ಈಗ ವಿಷಯಕ್ಕೆ ಬರೋಣ. ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಓಡಿಸುತ್ತಿದ್ದು, ಅದರಲ್ಲಿ ರಸ್ತೆ ಪಕ್ಕ ಸಾಲಾಗಿ ಚಲಿಸುತ್ತಿರುವ ಜನರು ‘ಹರೇ ರಾಮ ಹರೇ ಕೃಷ್ಣ’ ಎಂದು ಭಕ್ತಿಪೂರ್ವಕವಾಗಿ ಪಠಿಸುತ್ತ ನಡೆದಿದ್ದು, ಇದಕ್ಕೆ ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ. ಮೋದಿ ಸೇರಿದಂತೆ ಬಿಜೆಪಿಯ ಹಲವು ಗಣ್ಯರು ಟ್ವಿಟರ್‍ನಲ್ಲಿ ಫಾಲೋ ಮಾಡುವ ಪುನೀತ್ ಶರ್ಮಾ ಎಂಬ ಟ್ವಿಟರಿಗ ಜೂನ್ 27ರಂದು ಈ ವಿಡಿಯೋ ಹಾಕಿ, ‘40 ವರ್ಷಗಳಲ್ಲಿ ಮೊದಲ ಬಾರಿ ಶ್ರೀನಗರದಲ್ಲಿ ಪ್ರಭಾತ್‍ಪೇರಿ ಆಯೋಜಿಸಲಾಗಿತ್ತು. ಇದೆ ಹೇಗೆ ಸಾಧ್ಯವಾಯ್ತು ಎಂದು ಆಶ್ಚರ್ಯ ಪಡುತ್ತಿದ್ದಿರಾ? ಮೋದಿ ಹೈ ತೊ ಮುಮ್ಕಿನ್ ಹೈ’ ಎಂದು ಪ್ರಸಾರ ಮಾಡಿದ್ದಾರೆ. ಇದು ಎಂದಿನಂತೆ ಸಾವಿರಾರು ಸಲ ರಿಟ್ವೀಟ್ ಆಗಿದೆ, ಫೇಸ್‍ಬುಕ್, ವ್ಯಾಟ್ಸಾಪ್‍ನಲ್ಲು ‘ಪ್ರಭಾತ್ ಪೇರಿ’ ಮಾಡುತ್ತಿದೆ.

ಈ ಪೋಸ್ಟ್ ನ ಹುನ್ನಾರ ಏನೆಂದರೆ ಕಾಶ್ಮೀರದಲ್ಲಿ 40 ವರ್ಷಗಳಿಂದ ಹಿಂದೂಗಳು ಮೆರವಣಿಗೆ (ಪ್ರಭಾತ್‍ಪೇರಿ) ಮಾಡಲು ಅಲ್ಲಿನವರು ಅವಕಾಶ ನೀಡಿರಲಿಲ್ಲ. ಈಗ ಅದು ಸಾಧ್ಯವಾಗಿದೆ. ಮೋದಿಯಿದ್ದರೆ ಎಲ್ಲ ಸಾಧ್ಯ ಎಂದು ಡಂಗುರ ಸಾರುವುದು. ‘ಲೇ ನೋಡ್ಲೇ, ಮೋದಿ-ಶಾ ಬಂದ ಮೇಲೆ ಹ್ಯಾಂಗ ಕಾಶ್ಮೀರದ ಸಾಬರು ಬಾಲ ಮುಚ್ಚಿಕೊಂಡ್ಯಾರ’ ಅಂತ ಇಲ್ಲಿನವರು ಬಿಜೆಪಿಗೆ ಬಿಲ್ಡ-ಅಪ್ ಕೊಡುವುದು ಮತ್ತು ಕಾಶ್ಮೀರದ ಜನರೆಲ್ಲ ನಮ್ಮ ಹಿಂದೂ ಧಾರ್ಮಿಕ ಆಚರಣೆಗಳನ್ನು ಸಹಿಸುತ್ತಿರಲಿಲ್ಲ ಎಂಬಂತೆ ಅಪಪ್ರಚಾರ ಮಾಡುವುದು. ಇದಕ್ಕೆ ಪೂರ್ವಭಾವಿಯಾಗಿ ನಮ್ಮ ಕನ್ನಡ ಚಾನೆಲ್‍ಗಳು ಹಲವು ವಿಶೇಷ ಕಾರ್ಯಕ್ರಮ ತೋರಿಸಿ, ಇನ್ನು ಕಾಶ್ಮೀರ ದಾರಿಗೆ ಬರಲಿದೆ ಎಂದು ಗ್ರೌಂಡ್ ರೆಡಿ ಮಾಡಿವೆ. ಅಂದರೆ ಅಲ್ಲಿ ಇಲ್ಲವರೆಗೆ ಸಹಜವಾಗಿ ನಡೆಯುತ್ತಿದ್ದಿಲ್ಲ ಎಂದು ಜನರಲ್ಲಿ ತಪ್ಪು ಗ್ರಹಿಕೆ ಬಿತ್ತುವ ಕೆಲಸ ಮಾಡಿವೆ.

ಕಾಶ್ಮೀರದ ಬಗ್ಗೆ ನಮ್ಮ ಮುಖ್ಯಧಾರೆಯ ಮಾಧ್ಯಮಗಳು ಕೂಡ ಇಂತಹ ಒಂದು ನೆಗೆಟಿವ್ ಅಭಿಪ್ರಾಯ ತುಂಬುತ್ತ ಬಂದಿವೆ. ಕಾಶ್ಮೀರ ಒಂದು ಪಾಕಿಸ್ತಾನ ಇದ್ದಂತೆ, ಅಲ್ಲಿ ಹಿಂದೂಗಳು ಭಜನೆ ಮತ್ತು ಇತರ ಧಾರ್ಮಿಕ ಆಚರಣೆ ಮಾಡಲು ಅವಕಾಶವೇ ಇಲ್ಲ ಎಂಬಂತೆ ಬಿಂಬಿಸುತ್ತ ಬಂದಿದ್ದು, ಕಾಶ್ಮೀರಿ ಜನರೆಲ್ಲ ಹಿಂದೂ ವಿರೋಧಿಗಳು ಎಂಬಂತೆ ಬಿಂಬಿಸುತ್ತ ಬರಲಾಗಿದೆ. ಇದರ ಹಿಂದೆ ಸಂಘದ ದೊಡ್ಡ ಕುತಂತ್ರವೂ ಇದೆ.

ಈಗ ಮತ್ತೆ ವಿಡಿಯೋ ವಿಷಯಕ್ಕೆ ಬರೋಣ: ವಿಡಿಯೋದಲ್ಲಿ ‘ಹರೇ ರಾಮ್ ಹರೇ ಕೃಷ್ಣ’ ಎಂಬ ಭಜನೆ ಇದೆ. ಅದು ಶ್ರೀನಗರದಲ್ಲಿ ನಡೆದದ್ದು ಹೌದು. ಆದರೆ ಈ ಘಟನೆ ಮೋದಿ ಅಧಿಕಾರಕ್ಕೆ ಬಂದ ನಂತರ ಅಥವಾ ಮೋದಿ ಅಧಿಕಾರಕ್ಕೆ ಬಂದ ಕಾರಣಕ್ಕಾಗಿಯೇ ನಡೆಯಲು ಸಾಧ್ಯವಾಯಿತೇ?

ವಿಡಿಯೋದಲ್ಲಿರುವುದು ಇಸ್ಕಾನ್‍ನವರ ಒಂದು ಕಾರ್ಯಕ್ರಮ. (ಟ್ವೀಟರಿಗ ಹೇಳಿದಂತೆ ಅದು ಪ್ರಭಾತ್‍ಪೇರಿ ಅಲ್ಲ ಎಂಬುದುನ್ನು ಮುಂದಿನ ಪ್ಯಾರಾ ನೋಡಿ) ಅಲ್ಟ್ ನ್ಯೂಸ್ ಶ್ರೀನಗರದ ಇಸ್ಕಾನ್ ಸಂಸ್ಥೆಯನ್ನು ಸಂಪರ್ಕಿಸಿತು. ವಿಡಿಯೋದಲ್ಲಿ ಪಲ್ಲಕ್ಕಿಯಲ್ಲಿ ನಿಂತು ಪವಿತ್ರ ತೀರ್ಥವನ್ನು ಚುಮುಕಿಸುತ್ತಿರುವ ಪೂಜಾರಿ ಅಥವಾ ಭಟ್ಟರ ಹೆಸರು ಮೋತಿಲಾಲ್ ರೈನಾ. ಅಲ್ಟ್‍ನ್ಯೂಸ್ ಜೊತೆ ಮಾತಾಡಿದ ಮೋತಿಲಾಲ್ ರೈನಾ, ‘ವಿಡಿಯೋದಲ್ಲಿರುವುದು ಪ್ರಭಾತ್‍ಪೇರಿ (ಮುಂಜಾನೆ ಜನರು ಭಜನೆ ಹಾಡುತ್ತ ಸಾಗುವುದು)ಗೆ ಸಂಬಂಧಿಸಿದ್ದಲ್ಲ. ಆದರೆ ಈ ಸಲದ ರಾಮನವಮಿಯಲ್ಲಿ ಚಿತ್ರೀಕರಿಸಿದ ವಿಡಿಯೋ ಇದು. ರಾಮನವಮಿಯಲ್ಲಿ ಶ್ರೀನಗರದ ಬೀದಿಗಳಲ್ಲಿ ಹೀಗೆ ಪಲ್ಲಕ್ಕಿಯಲ್ಲಿ ಮೆರವಣಿಗೆಯನ್ನು ಮಾಡುತ್ತೇವೆ’ ಎಂದಿದ್ದಾರೆ.

ಮುಂದುವರೆದ ಅವರು, ‘ಪ್ರತಿವರ್ಷ ರಾಮನವಮಿ ಮತ್ತು ಕೃಷ್ಣಜಯಂತಿಯಂದು ಇಂತಹ ಮೆರವಣಿಗೆ ಆಚರಣೆಗಳನ್ನು ಮಾಡುತ್ತೇವೆ. ಯಾವಾಗಲೋ ಒಮ್ಮೆ ಭದ್ರತೆ ಕಾರಣದಿಂದ ಇಂತಹ ಆಚರಣೆಗಳಿಗೆ ನಮಗೆ ಅವಕಾಶ ಸಿಗುವುದಿಲ್ಲ. ಆದರೆ ಶ್ರೀನಗರದಲ್ಲಿ ಇಂತಹ ಆಚರಣೆ 40 ವರ್ಷಗಳಿಂದ ನಡೆದೇ ಇಲ್ಲ ಎಂಬುದು ಅಪ್ಪಟ ಸುಳ್ಳು. ಮೊದಲಿಂದಲೂ ಇವು ನಡೆಯುತ್ತಾ ಬಂದಿವೆ. 2008ರಿಂದಂತೂ ಇಂತಹ ಆಚರಣೆಗಳು ಸುಲಿಲತವಾಗಿ ನಡೆಯುತ್ತಲೇ ಬಂದಿವೆ’ ಎಂದು ವಾಸ್ತವವನ್ನು ತೆರದು ಇಟ್ಟರು.

ಮೇಲಿನ ವಿಡಿಯೋ ಈ ಸಲದ ರಾಮನವಮಿಯದ್ದು. ಅದು ಜರುಗಿದ್ದು ಏಪ್ರಿಲ್‍ನಲ್ಲಿ. ಅಲ್ಟ್ ನ್ಯೂಸ್ ಪರಿಶೀಲಿಸಿದ ದಾಖಲೆಗಳ ಪ್ರಕಾರ, ಮೋದಿ ಅಧಿಕಾರಕ್ಕೆ ಬರುವ ಬಹಳ ಮೊದಲಿಂದಲೂ ಶ್ರೀನಗರದಲ್ಲಿ ರಾಮನವಮಿ ಆಚರಣೆಗಳು ಸೇರಿದಂತೆ ಪ್ರಭಾತ್‍ಪೇರಿಗಳು ಸುಲಲಿತವಾಗಿ ಶಾಂತಿಯುತವಾಗಿ ನಡೆಯುತ್ತ ಬಂದಿವೆ.
ವೈರಲ್ ವಿಡಿಯೋದಲ್ಲಿರುವುದು ಏನು?
ವೈರಲ್ ಆಗಿರುವ ವಿಡಿಯೋದಲ್ಲಿರುವುದು ರಾಮನವಮಿಯ ಆಚರಣೆಯ ದೃಶ್ಯ. ಅದು ಟ್ವೀಟ್ ಹೇಳುವಂತೆ ಭಜನೆ ಹಾಡುತ್ತ ಸಾಗುವ ಪ್ರಭಾತ್‍ಪೇರಿಯಲ್ಲ! ಪ್ರಭಾತ್ ಪೇರಿಯೂ ಶ್ರೀನಗರಕ್ಕೆ ಹೊಸದೇನೂ ಅಲ್ಲ, ಹಿಂದೆಯೂ ಅವು ಜರುಗಿವೆ. ಪೂಜಾರಿ ರೈನಾ ಪ್ರಕಾರ, ‘ಶ್ರೀನಗರದಲ್ಲಿ ಭದ್ರತೆ ದೃಷ್ಟಿಯಿಂದ ಪ್ರಭಾತ್ ಪೇರಿ ಆಗಾಗ ನಡೆಯುವುದಿಲ್ಲ, ಆದರೆ ಸಾಧ್ಯವಿರುವಾಗ ಅವನ್ನು ಸಂಘಟನೆ ಮಾಡುತ್ತ ಬರಲಾಗಿದೆ. ಆದರೆ ಜಮ್ಮು ಭಾಗದ ದೊಡ್ಡ ನಗರಗಳಲ್ಲಿ ಒಂದಾಗಿರುವ ಉಧಮಪುರದ ಇಸ್ಕಾನ್ ಮಂದಿರದಲ್ಲಿ ಪ್ರತಿ ದಿನ ಬೆಳಿಗ್ಗೆ ಪ್ರಭಾತ್ ಪೇರಿ ಸುಲಲಿತವಾಗಿ ನಡೆಯುತ್ತ ಬಂದಿದೆ….’

ಅಂದರೆ, ಈ ವರ್ಷ ಶ್ರೀನಗರದಲ್ಲಿ ನಡೆದ ರಾಮನವಮಿ ಉತ್ಸವದ ಆಚರಣೆಯನ್ನು ಸಾಮಾಜಿಕ ಜಾಲತಾಣದಲ್ಲಿ ಎರಡು ಸುಳ್ಳು ವಿಷಯಗಳನ್ನು ಸೇರಿಸಿ ಹರಡಲಾಗುತ್ತಿದೆ: 1) ಅದು ಪ್ರಭಾತ್ ಪೇರಿ ಎಂಬುದು. 2) 40 ವರ್ಷಗಳಿಂದ ಈ ಸಂಪ್ರದಾಯ ಶ್ರೀನಗರದಲ್ಲಿ ನಡೆದೇ ಇಲ್ಲ ಎಂದು…

ಅಲ್ಟ್ ನ್ಯೂಸ್ ಇವೆರಡು ಸುಳ್ಳು ಎಂಬುದನ್ನು ಈ ಮೂಲಕ ಸಾಬೀತು ಮಾಡಿದೆ…..
ಕಾಶ್ಮೀರದಲ್ಲಿ ಹಿಂದೂ ಆಚರಣೆಗಳು ಇಲ್ಲಿನಷ್ಟೇ ಸಹಜವಾಗಿ ನಡೆಯುತ್ತ ಬಂದಿವೆ. ಕೆಲವು ಸಂದರ್ಭಗಳಲ್ಲಿ ಭದ್ರತೆ ಕಾರಣದಿಂದ ಮುಸ್ಲಿಂ ಆಚರಣೆಗಳಿಗೆ ಅವಕಾಶ ನಿರಾಕರಿಸಿದಂತೆ, ನಿರ್ಬಂಧ ಹೇರಿದಂತೆ, ಹಿಂದೂ ಆಚರಣೆಗಳಿಗೂ ಅವಕಾಶ ನಿರಾಕರಿಸಲಾಗಿತ್ತು ಅಥವಾ ನಿರ್ಬಂಧ ಹೇರಲಾಗಿತ್ತು. ಇದೇನೂ ಅಲ್ಲಿ ಇಶ್ಯೂ ಕೂಡ ಆಗಿಲ್ಲ. ಸಹಜ ಸ್ಥಿತಿಯಲ್ಲಿ ಎಲ್ಲ ಆಚರಣೆಗಳೂ ಮುಕ್ತವಾಗಿ ಸಂಭ್ರಮÀದಿಂದ ನಡೆಯುತ್ತ ಬಂದಿವೆ.

ಮೋದಿ ಬಂದ ಮೇಲೆ ಕಾಶ್ಮೀರದಲ್ಲಿ ಹಿಂದೂ ಆಚರಣೆಗಳಿಗೆ ಮುಕ್ತ ಅವಕಾಶ ಸಿಕ್ಕಿದೆ ಎಂದು ಬಿಂಬಿಸಲು ಮಬ್ಭಕ್ತರು ಪ್ರಯತ್ನಿಸುತ್ತಿದ್ದಾರೆ. ವಾಸ್ತವ ಅಂದರೆ ಕಳೆದ ಐದು ವರ್ಷಗಳಲ್ಲಿ ಅಲ್ಲಿ ಭಯೋತ್ಪಾದನಾ ಕೃತ್ಯಗಳು ಹೆಚ್ಚಿವೆ ಮತ್ತು ಸೈನಿಕರ ಸಾವಿನ ಪ್ರಮಾಣದಲ್ಲಿ ಶೇ.106% ರಷ್ಟು ಏರಿಕೆಯಾಗಿದೆ ಎಂದು ಈ ಹಿಂದೆ ಲೋಕಸಭೆ ನತ್ತು ರಾಜ್ಯಸಭೆಯಲ್ಲಿ ಗೃಹ ಇಲಾಖೆಯೇ ಅಂಕಿಸಂಖ್ಯೆ ನೀಡಿದೆ..

ಸಾಮಾಜಿಕ ಜಾಲತಾಣದ ಫೇಕ್ ಸುದ್ದಿಗಳನ್ನು ಬಿಡಿ, ನಮ್ಮ ಮುಖ್ಯವಾಹಿನಿಯ ರಾಷ್ಟ್ರೀಯ ಮಾಧ್ಯಮಗಳು ಕೂಡ ಕಾಶ್ಮೀರದ ಬಗ್ಗೆ ಜನರಲ್ಲಿ ತಪ್ಪು ಗ್ರಹಿಕೆ ಹುಟ್ಟುವಂತೆ ವರದಿ ಮಾಡುತ್ತ ಬಂದಿವೆ…. ಅದನ್ನೇ ಸಂಘ ಪರಿವಾರ ಬಳಸಿಕೊಳ್ಳುತ್ತ ಧ್ರುವೀಕರಣ ಮಾಡುವ ಕೆಲಸವನ್ನು ಮಾಡುತ್ತ ಬಂದಿದೆ.

ಕೃಪೆ: ಅಲ್ಟ್ ನ್ಯೂಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...