Homeಮುಖಪುಟವ್ಯಕ್ತಿತ್ವ ವಿಕಸನ 2 : ನಿಮ್ಮನ್ನು ನೀವು ಅರಿತುಕೊಳ್ಳಿ

ವ್ಯಕ್ತಿತ್ವ ವಿಕಸನ 2 : ನಿಮ್ಮನ್ನು ನೀವು ಅರಿತುಕೊಳ್ಳಿ

- Advertisement -
- Advertisement -

ಜೀವನ ಕಲೆಗಳು: ಅಂಕಣ-3

| ಜಿ. ಆರ್. ವಿದ್ಯಾರಣ್ಯ |

ತನ್ನ ಸ್ವಂತ ಶಕ್ತಿ/ದೌರ್ಬಲ್ಯವನ್ನು ಅರಿತುಕೊಳ್ಳುವ ಕಲೆಗೆ “ಸ್ವೊಟ್ ಎನಾಲಿಸಿಸ್” (SWOT ANALYSIS) ಎನ್ನುತ್ತಾರೆ. ಇದನ್ನು ವ್ಯಕ್ತಿಗಳು ಮತ್ತು ಸಂಸ್ಥೆಗಳು ಕೂಡ ಬಳಸಬಹುದು. ಇದರಿಂದ ವ್ಯಕ್ತಿಯ/ಸಂಸ್ಥೆಯ ಶಕ್ತಿ (Strength), ದೌರ್ಬಲ್ಯ (Weakness), ಅವಕಾಶ (Opportunity) ಮತ್ತು ಭೀತಿ (Threat) ಗಳನ್ನು ಅರಿತುಕೊಳ್ಳಬಹುದು.ಈ ವಿಶ್ಲೇಷಣೆಯನ್ನು ವ್ಯಕ್ತಿಯ ಪರವಾಗಿ ಬಳಸಿದಲ್ಲಿ ವ್ಯಕ್ತಿಯ ಸಹಜ ಶಕ್ತಿ-ಸಾಮರ್ಥ್ಯಗಳನ್ನು ಅರಿತು ಅದಕ್ಕೆ ತಕ್ಕ ಅವಕಾಶಗಳನ್ನು ಹುಡುಕಲು ನೆರವಾಗುತ್ತದೆ. ಸಂಸ್ಥೆಯ ಪರವಾಗಿ ಉಪಯೋಗಿಸಿದಲ್ಲಿ ಅದರ ಮಾರುಕಟ್ಟೆಯ ಹಿಡಿತ ಬಲಪಡಿಸುವುದಕ್ಕೆ ಅಥವಾ ಹೊಸ ಆವಿಶ್ಕಾರವನ್ನು ಹೊರಬಿಡಲು ಸಹಕಾರಿಯಾಗುತ್ತದೆ.

ಸ್ವೊಟ್ ಎನಾಲಿಸಿಸ್ (SWOT ANALYSIS)ಮಾಡುವುದರಿಂದ ನಮ್ಮ ಶಕ್ತಿ ಏನು ಮತ್ತು ದೌರ್ಬಲ್ಯ ಏನು ಎಂಬುದನ್ನು ತಿಳಿಯಬಹುದು. ಉದಾಹರಣೆಗೆ ನಿಮ್ಮ ಇತ್ತೀಚಿನ ಶಾಲಾ/ಕಾಲೇಜು ತರಗತಿಯ ಅಂಕ ಪಟ್ಟಿ ನೋಡಿದಾಕ್ಷಣ ಯಾವ ವಿಷಯದಲ್ಲಿ ನೀವು ಗಟ್ಟಿಗರು, ಯಾವುದರಲ್ಲಿ ನಿಮಗೆ ಶಕ್ತಿ ಸಾಲದು ಎಂಬುದು ಕೂಡಲೇ ತಿಳಿಯುತ್ತದೆ. ಯಾವ ವಿಷಯದಲ್ಲಿ ನೀವು ಹೆಚ್ಚು ಅಂಕ ಗಳಿಸಿದ್ದೀರೋ, ಅದು ನಿಮ್ಮ ಸಹಜ ಶಕ್ತಿ. ಯಾವ ವಿಷಯ ಎಷ್ಟೇ ಪರಿಶ್ರಮ ಪಟ್ಟರೂ, ನಿಮ್ಮ ತಲೆಗೆ ಹತ್ತುವುದಿಲ್ಲವೋ ಅದು ನಿಮ್ಮ ದೌರ್ಬಲ್ಯ, ಆದರೆ ಎರಡೂ, ಶಕ್ತಿ ಮತ್ತು ದೌರ್ಬಲ್ಯ, ತಾತ್ಕಾಲಿಕ. ಇದಕ್ಕೆ ಕಾರಣ ನೀವು ಕಂಡುಕೊಳ್ಳಬೇಕು. ಬಹುಶಃ ನಿಮ್ಮ ಕಲಿಯುವ ರೀತಿ ಸರಿಯಾಗಿಲ್ಲದಿರಬಹುದು ಅಥವಾ ಶಾಲೆಯಲ್ಲಿ ಕಲಿಸುವ ವಿಧಾನದಲ್ಲಿ ತೊಂದರೆ ಇರಬಹುದು. ಸರಿಯಾದ ಕಾರಣ ತಿಳಿದು ಸಮಸ್ಯೆ ಪರಿಹರಿಸಿದಲ್ಲಿ ದೌರ್ಬಲ್ಯವನ್ನು ಶಕ್ತಿಯಾಗಿ ಬದಲಾಯಿಸಿಕೊಳ್ಳಲು ಸಾಧ್ಯ.

ಅದೇ ರೀತಿಯಲ್ಲಿ ನಿಮ್ಮ ಶಕ್ತಿಯಿಂದ ನಿಮಗೆ ಈಗಿರುವ ಅಥವಾ ಸಿಗಬಹುದಾದ ಅವಕಾಶಗಳನ್ನು ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಯಾವುದೇ ವಿಷಯದಲ್ಲಿ ಅತಿ ಹೆಚ್ಚಿನ ಆಸಕ್ತಿ/ಉತ್ಸಾಹವಿದ್ದಲ್ಲಿ ಅದಕ್ಕೆ ಸಿಗಬಹುದಾದ ಪಾರಿತೋಷಕ, ವಿದ್ಯಾರ್ಥಿವೇತನ, ಪ್ರೋತ್ಸಾಹಧನ ಮುಂತಾದವುಗಳನ್ನು ಪಡೆಯಲು ಅರ್ಜಿ ಸಲ್ಲಿಸಬಹುದು. ಕೆಲವೊಮ್ಮೆ ಅದಕ್ಕೆ ಪೂರಕವಾದ ಲೇಖನ ರಚಿಸಿ ಲಗತ್ತಿಸಬೇಕಾಗಬಹುದು. ಅದೇ ವಿಷಯದಲ್ಲಿ ಉನ್ನತ ಅಭ್ಯಾಸಕ್ಕೆ ಇರುವ ಬೇರೆ ಬೇರೆ ಮಾರ್ಗಗಳನ್ನು ನೀವು ಕಂಡುಕೊಳ್ಳಬಹುದು.

ವಿಜ್ಞಾನ ಸಂಬಂಧಿ ವಿಷಯಗಳಲ್ಲಿ ನಿಮಗೆ ಹೆಚ್ಚು ಅಂಕಗಳು ಬರುತ್ತಿದ್ದು, ಕನ್ನಡ, ಇಂಗ್ಲಿಷ್, ಹಿಂದಿ ಭಾಷೆ ಕಷ್ಟವಾಗಿದ್ದರೆ ನೀವು ಎಸ್.ಎಸ್.ಎಲ್.ಸಿ. ನಂತರ ಪಿ.ಸಿ.ಎಂ.ಬಿ., ಪಿ.ಸಿ.ಎಂ.ಸಿ. ಅಥವಾ ಪಿ.ಸಿ.ಎಂ.ಇ. ಇತ್ಯಾದಿ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಅದೇ ರೀತಿ ವಿಜ್ಞಾನ ಸಂಬಂಧಿ ವಿಷಯಗಳುನಿಮಗೆ ಕಷ್ಟಕರ ಎನಿಸುತ್ತಿದ್ದು, ಭಾಷೆ, ಇತಿಹಾಸ, ಭೂಗೋಳ ಮುಂತಾದವು ಸುಲಭವಾಗಿದ್ದರೆ ನೀವು ಹ್ಯುಮಾನಿಟೀಸ್ ಶಾಖೆ ಆಯ್ಕೆ ಮಾಡಿಕೊಳ್ಳಬಹುದು. ಹಾಗೆಯೇ ನೀವು ಲೆಕ್ಕದಲ್ಲಿ ಗಟ್ಟಿಗರು ಮತ್ತು ಭಾಷೆಯೂ ಸುಲಭ ಎನಿಸಿದರೆ ಕಾಮರ್ಸ್ ನಿಮಗೆ ಉತ್ತಮ ಆಯ್ಕೆಯಾಗಿರಬಹುದು. ಎಲ್ಲರೂ ಡಾಕ್ಟರ್ ಅಥವಾ ಇಂಜಿನಿಯರ್ ಆಗಲೇ ಬೇಕೆಂಬ ನಿಯಮವೂ ಇಲ್ಲ, ಅಗತ್ಯವೂ ಇಲ್ಲ. ಯಾವುದೇ ಮಾರ್ಗವನ್ನು ನೀವು ನಿಮ್ಮ ಸಹಜ ಶಕ್ತಿ ಗುಣವನ್ನು ಆಧರಿಸಿ ಆಯ್ಕೆ ಮಾಡಿದ್ದಲ್ಲಿ, ಹೆಚ್ಚು ಪರಿಶ್ರಮವಿಲ್ಲದೇ ಉನ್ನತ ಸಾಧನೆ ಮಾಡಲು ಬಹಳಷ್ಟು ಅವಕಾಶವಿರುತ್ತದೆ.

ಇತ್ತೀಚೆಗೆ ಏಪ್ರಿಲ್/ಮೇ ತಿಂಗಳಲ್ಲಿ ಕಾಲೇಜುಗಳು ಮತ್ತು ಉನ್ನತ ವಿದ್ಯಾಸಂಸ್ಥೆಗಳು ನಗರದಾದ್ಯಂತ ಮಾರಾಟ ಮೇಳಗಳನ್ನು ಆಯೋಜಿಸುತ್ತಾರೆ. ಇದರಲ್ಲಿ, ಶಿಕ್ಷಣ ತಜ್ಞರು ಮಕ್ಕಳನ್ನುದ್ದೇಶಿಸಿ ಮಾತನಾಡಿ, ಅವರಿಗೆ ಇರುವ ಹೊಸ ಹೊಸ ವೃತ್ತಿಪರ ಕೋರ್ಸುಗಳ ಬಗ್ಗೆ ತಿಳಿಸಿಕೊಡುತ್ತಾರೆ. ಇಂತಹ ಮೇಳಗಳಲ್ಲಿ ಮಕ್ಕಳು ಮತ್ತು ಪೋಷಕರು ಭಾಗವಹಿಸಬೇಕು. ಒಳ್ಳೆಯ ವರಮಾನ/ಬಡ್ತಿ ಅವಕಾಶವಿರುವ ಹುದ್ದೆಗಳ ದೃಷ್ಟಿಯಿಂದ ಯಾವ ಯಾವ ಕ್ಷೇತ್ರದಲ್ಲಿ, ಮುಂಬರುವ ಎಷ್ಟು ವರ್ಷದಲ್ಲಿ, ಎಷ್ಟು ಹುದ್ದೆಗಳು ಸೃಷ್ಟಿಯಾಗಲಿವೆ ಎಂಬ ಖಚಿತ ಮಾಹಿತಿ ದುರದೃಷ್ಟವಶಾತ್ ಎಲ್ಲೂ ಸಿಗುವುದಿಲ್ಲ. ಈಗ ಕಂಪ್ಯೂಟರ್ ಕ್ಷೇತ್ರದಲ್ಲಿ ಎ.ಐ. (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ – ಕೃತಕ ಬುದ್ಧಿಶಕ್ತಿ) ಕ್ಷೇತ್ರದಲ್ಲಿ ಸಾಕಷ್ಟು ಅವಕಾಶವಿದೆ ಎಂದು ಕೇಳಿಬಂದರೂ ಸಹ ಮುಂಬರುವ ಐದು ವರ್ಷದಲ್ಲಿ ಏನಾಗಬಹುದು ಎಂದು ಯಾರಿಗೂ ಗೊತ್ತಿಲ್ಲ ಆದ್ದರಿಂದ ಈಗ ಆ ಕೋರ್ಸಿಗೆ ಸೇರುವ ಮಕ್ಕಳಿಗೆ ತಮ್ಮ ಭವಿಷ್ಯ ಹೇಗಿರುತ್ತದೆ ಎಂದು ಖಚಿತಗೊಳಿಸಿಕೊಳ್ಳಲು ಸಾಧ್ಯವಿಲ್ಲ.

ದ್ವಿತೀಯ ಪಿಯುಸಿ ಓದುತ್ತಿರುವ ಮಕ್ಕಳು ಆನ್-ಲೈನ್ ಉಚಿತ ಪರೀಕ್ಷೆ ಮಾಡಿಕೊಂಡಲ್ಲಿ ಅವರ ವ್ಯಕ್ತಿತ್ವ ಮಾದರಿ ಯಾವುದು ಎಂಬುದು ತಿಳಿಯುತ್ತದೆ. ಈ ಸ್ವ-ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ, ವ್ಯಕ್ತಿತ್ವದ ಇಂಡಿಕೇಟರ್ ಪ್ರಕಾರ ಯಾವ ಜೀವನೋಪಾಯ/ವೃತ್ತಿ ಅವರಿಗೆ ಸಹಜ ಮತ್ತು ಸರಳ ಎಂಬುದನ್ನು ನಿರ್ಧರಿಸಬಹುದು. ಅದೇ ರೀತಿ ಅವರ ಮುಂದಿನ ಉನ್ನತ ಶೈಕ್ಷಣಿಕ ಆಯ್ಕೆಯನ್ನೂ ಸಹ ಅವರು ಅಥವಾ ಪೋಷಕರು ನಿರ್ಧರಿಸಬಹುದು.

ಅಪಾಯದ ಎಚ್ಚರಿಕೆ: ಎಂಬಿಟಿಐ ಅಥವಾ ಬಿಗ್-ಫೈವ್ ಆಗಲೀ ಸಂಪೂರ್ಣ ವೈಜ್ಞಾನಿಕ ತತ್ವವಾದ ಅಲ್ಲ, ಆದ್ದರಿಂದ ಮಕ್ಕಳ ಭವಿಷ್ಯ ರೂಪಿಸುವ ಮುನ್ನ, ಪರಿಣಿತರ, ವೃತ್ತಿಪರರ ಸಲಹೆ ಪಡೆಯುವುದು ಅತ್ಯಂತ ಅವಶ್ಯಕ. ಕೇವಲ ಅಂತರ್ಜಾಲದ ಮಾಹಿತಿ ನಂಬಿ, ಅಥವಾ ಒಂದು ಲೇಖನ ಓದಿ ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಬಹು ದೊಡ್ಡ ನಿರ್ಧಾರಕ್ಕೆ ಬರಬೇಡಿ.

ಎಸ್.ಎಸ್.ಎಲ್.ಸಿ. ನಂತರ ದ್ವಿತೀಯ ಪಿಯುಸಿ ಸಾಕು (ಅಥವಾ ಯಾವುದೋ ಒಂದು ಪದವಿ ಗಿಟ್ಟಿಸಿದರೆ ಸಾಕು) ಎಂದು ಓದನ್ನು ಅಲ್ಲಿಗೇ ನಿಲ್ಲಿಸಿ, ಯಾವ ಕೆಲಸಕ್ಕೆ ಸೇರಬೇಕು ಎಂಬುದನ್ನು ನಿರ್ಧರಿಸಲಾಗದೇ ಇರುವ ಯುವಕ/ಯುವತಿಯರಿಗೆ ಇಲ್ಲಿದೆ ಒಂದು ಸರಳ ದಾರಿ. ಮೊದಲು ಮೇಲೆ ತಿಳಿಸಿದಂತೆ, ನಿಮ್ಮ ಸ್ವೊಟ್ ಎನಾಲಿಸಿಸ್ ನೀವೇ ಮಾಡಿಕೊಳ್ಳಿ. ನೀವು ಎಂತಹ ವ್ಯಕ್ತಿ ಎಂದು ನೀವೇ ನಿರ್ಧರಿಸಿಕೊಳ್ಳಿ. ನಂತರ ಶಾಲೆ/ಕಾಲೇಜಿನಲ್ಲಿ ನೀವು ಸುಲಭವಾಗಿ ಕಲಿತ ವಿಷಯ, ನೀವು ಸ್ವ-ಇಚ್ಛೆಯಿಂದ, ಸ್ವಯಂಸೇವಕರಾಗಿ, ಇಷ್ಟ ಪಟ್ಟು ಮಾಡಿದ ಕೆಲಸಗಳು (ಸ್ಕೌಟ್/ಗೈಡ್, ಎನ್.ಎಸ್.ಎಸ್., ಗ್ರಾಹಕ ಕ್ಲಬ್, ವಿಜ್ಞಾನ ಕ್ಲಬ್, ಬರವಣಿಗೆ/ಚಿತ್ರಕಲೆ, ಸಾಮಾಜಿಕ/ಧಾರ್ಮಿಕ ಚಟುವಟಿಕೆ, ಅಥವಾ ಧನಸಂಗ್ರಹ ಇತ್ಯಾದಿ), ಇಷ್ಟವಾದ/ಭಾಗವಹಿಸಿದ ಕ್ರೀಡೆಗಳು ಯಾವುದು ಎಂದು ಒಂದನ್ನೂ ಬಿಡದೆ, ಹಾಳೆಯಲ್ಲಿ ಗುರುತು ಹಾಕಿಕೊಳ್ಳಿ. ಇವನ್ನೆಲ್ಲಾ ಒಂದೊಂದು ಮಣಿಗಳು ಎಂದು ಭಾವಿಸಿ, ಅವನ್ನು ಪೋಣಿಸಿ ಹಾರವನ್ನಾಗಿ ಮಾಡಬಹುದೇ ಯೋಚಿಸಿ. ಹಾರಕ್ಕೆ ಒಂದೆರಡು ಮಣಿಗಳು ಕಡಿಮೆ ಎಂದೆನಿಸಿದರೆ ಅವನ್ನು ಪಡೆಯಲು ನಿಮ್ಮ ಪ್ರಯತ್ನ ಹೇಗಿರಬೇಕು ಎಂದು ಯೋಚಿಸಿ. ನಿಮ್ಮ ಮುಂದಿನ ದಾರಿ ತಾನಾಗಿಯೇ ಗೋಚರಿಸುತ್ತದೆ.

ಇದನ್ನೂ ಒದಿ: ನಮ್ಮ ಬದುಕನ್ನು ಸುಂದರ ಮತ್ತು ಅರ್ಥಪೂರ್ಣಗೊಳಿಸಿಕೊಳ್ಳಲು ಬೇಕಿರುವ ಜೀವನಾವಶ್ಯಕ ಕಲೆಗಳು

ಇದನ್ನೂ ಓದಿ: ನಿಮ್ಮನ್ನು ನೀವೇ ಅರಿತುಕೊಳ್ಳಿ: ವ್ಯಕ್ತಿತ್ವ ವಿಕಸನ 1

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ಚಿಂತಕ ಪರಕಾಲ ಪ್ರಭಾಕರ್‌ಗೆ ಚುನಾವಣಾ ಆಯೋಗದಿಂದ ನೋಟಿಸ್

ಅರ್ಥಶಾಸ್ತ್ರಜ್ಞ, ರಾಜಕೀಯ ವಿಶ್ಲೇಷಕ ಡಾ. ಪರಕಾಲ ಪ್ರಭಾಕರ್ ಅವರಿಗೂ ಈಗ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಡಿ ಚುನಾವಣಾ ಆಯೋಗದ ನೋಟಿಸ್ ಜಾರಿಯಾಗಿದೆ. ವೋಟರ್ ಐಡಿ ಪರಿಶೀಲನೆಯಲ್ಲಿ ‘Logical Discrepancy’ (ತಾರ್ಕಿಕ ಅಸಂಗತತೆ)...

ಕರ್ನಾಟಕ ಎಸ್‌ಐಆರ್: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಮಂಗಳೂರು: ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ವಿಶಿಷ್ಟ ಸೇವೆಯ ಮೂಲಕ ದೇಶ-ವಿದೇಶಗಳಲ್ಲಿ ಗುರುತಿಸಿಕೊಂಡಿರುವ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ...

SIR ಸೂತ್ರದಿಂದ ಬದಲಾಗುತ್ತಾ ಬೆಂಗಳೂರಿನ 28 ಕ್ಷೇತ್ರಗಳ ಗೆಲುವಿನ ಸಮೀಕರಣ?

ರಾಜ್ಯ ರಾಜಕೀಯದ ಶಕ್ತಿಕೇಂದ್ರವಾದ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR)’ ಪ್ರಕ್ರಿಯೆಯು ಮಹತ್ವದ ರಾಜಕೀಯ ಮತ್ತು ಆಡಳಿತಾತ್ಮಕ ಚರ್ಚೆಯನ್ನು ಹುಟ್ಟುಹಾಕಿದೆ. ಎಸ್‌ಐಆರ್‌ಗೂ ಮುನ್ನ ನಗರದಲ್ಲಿದ್ದ ಸುಮಾರು 1.03...

ಮಣಿಪುರದಲ್ಲಿ ಹಿಂಸಾಚಾರಕ್ಕೆ 306 ಬಲಿ, 49 ಮಂದಿ ನಾಪತ್ತೆ: ವಿಧಾನಸಭೆಯಲ್ಲಿ ಗೃಹ ಸಚಿವರ ಸ್ಪಷ್ಟನೆ

ಇಂಫಾಲ್: ಮಣಿಪುರದಲ್ಲಿ 2023ರ ಮೇ ತಿಂಗಳಲ್ಲಿ ಭುಗಿಲೆದ್ದ ಜನಾಂಗೀಯ ಹಿಂಸಾಚಾರಕ್ಕೆ ಮೂರು ವರ್ಷಗಳಿಗೂ ಹೆಚ್ಚು ಕಾಲ ಕಳೆದಿದ್ದರೂ, ಅದರ ಪರಿಣಾಮದಿಂದ ರಾಜ್ಯ ಸಂಪೂರ್ಣವಾಗಿ ಹೊರಬಂದಿಲ್ಲ. ಹಿಂಸಾಚಾರ ಆರಂಭವಾದ ಬಳಿಕ ಇದುವರೆಗೆ ಕನಿಷ್ಠ 306...

ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ನಿಧಿ ದುರ್ಬಳಕೆ; ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷದ ಸಿ.ಸಿ. ರಸ್ತೆ ನಿರ್ಮಾಣ!

ಸಮಾಜ ಕಲ್ಯಾಣ ಇಲಾಖೆಯ 'ಪ್ರಗತಿ ಕಾಲೋನಿ' ಯೋಜನೆಯ ನಿಧಿ ದುರ್ಬಳಕೆಯಾಗಿರುವ ಆರೋಪ ಕೇಳಿಬಂದಿದ್ದು, ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿರುವ ಪ್ರಕರಣ ಬೆಂಗಳೂರು...

SIR: ‘ಚುನಾವಣಾ ಆಯೋಗದಿಂದ ನೋಟಿಸ್‌’ ಇಲ್ಲದಿರುವ ದಾಖಲೆಗಳನ್ನು ಎಲ್ಲಿಂದಾ ತರೋದು? ಸಾರ್ವಜನಿಕರ ಪ್ರಶ್ನೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವು ಬಳಸುತ್ತಿರುವ 'Logical Discrepancy' (ತಾರ್ಕಿಕ ವ್ಯತ್ಯಾಸ) ಎಂಬ ಸಾಫ್ಟ್‌ವೇರ್ ಆಧಾರಿತ ಪರಿಶೀಲನೆಯು ತಾಂತ್ರಿಕವಾಗಿ ದೋಷರಹಿತವೆಂದು ತೋರಿದರೂ, ವಾಸ್ತವದಲ್ಲಿ ಲಕ್ಷಾಂತರ ನೈಜ...

SIR ರಗಳೆ: ಕೊನೆಗೂ 43.81 ಲಕ್ಷ ಮತದಾರರ ನೋಟಿಸ್ ಪಟ್ಟಿ ಬಹಿರಂಗಪಡಿಸಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿರುವ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಲ್ಲಿ ನೋಟಿಸ್‌ಗೆ ಗುರಿಯಾಗಿರುವ 43.81 ಲಕ್ಷ ಮತದಾರರ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಕೊನೆಗೂ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ...

‘ಆರ್‌ಎಸ್‌ಎಸ್‌ ಅಡಗಿಕೊಂಡಿದೆ’: ಮೋಹನ್ ಭಾಗವತ್‌ ಯುಕೆ ಭೇಟಿ ವಿರೋಧಿಸಿ ಲಂಡನ್‌ನಲ್ಲಿ ಪ್ರತಿಭಟನೆ

ಲಂಡನ್: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಯುನೈಟೆಡ್ ಕಿಂಗ್‌ಡಮ್‌ ಭೇಟಿಯನ್ನು ವಿರೋಧಿಸಿ ಲಂಡನ್‌ನ ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ನೂರಾರು ಜನರು ಪ್ರತಿಭಟನೆ ನಡೆಸಿದ್ದಾರೆ. ಭಾಗವತ್ ಅವರ ಯುಕೆ ಪ್ರವಾಸದ...

ಪಂಚಾಯಿತಿಯಲ್ಲಿ ಅಸ್ಪೃಶ್ಯತೆ ಆಚರಣೆ-ಪ್ರತ್ಯೇಕ ಟೀ ಲೋಟ; ಆತ್ಮಹತ್ಯೆಗೆ ಯತ್ನಿಸಿದ ಪೌರಕಾರ್ಮಿಕ ಮಹಿಳೆ

ಕೆಲಸದ ಸ್ಥಳದಲ್ಲಿ ನಡೆಯುತ್ತಿದ್ದ ಅಸ್ಪೃಶ್ಯತೆ ಆಚರಣೆಯಿಂದ ಮನನೊಂದ 37 ವರ್ಷದ ದಲಿತ ನೈರ್ಮಲ್ಯ ಕಾರ್ಮಿಕರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡಿನ ಮೇಲೂರು ಸಮೀಪದ ಕಂಬೂರ್ ಪಂಚಾಯತ್‌ನಲ್ಲಿ ಬೆಳಕಿಗೆ ಬಂದಿದೆ. ...

ಗೌರಿ, ಗಾಂಧಿಯನ್ನು ಕೊಂದದ್ದು ಬರೀ ಬುಲೆಟ್‌ಗಳಲ್ಲ, ಕೋಮುವಾದಿ ಸಿದ್ಧಾಂತ: ವಿದ್ಯಾರ್ಥಿ ನಾಯಕಿ ದಾನಿಶ್ ಅಲಿ

"ಗಾಂಧಿ, ಗೌರಿಯನ್ನು ಕೊಂದಿದ್ದು ಬರೀ ಬುಲೆಟ್‌ಗಳಲ್ಲ, ಅದು ಸಿದ್ಧಾಂತ ಎಂಬುದನ್ನು ನಾವು ನೆನಪಿಡಬೇಕು. ಈ ಸಿದ್ಧಾಂತಗಳ ವಿರುದ್ಧವಾಗಿ ನಾವು ಇಂದು ಹೋರಾಡಬೇಕಿದೆ” ಎಂದು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ವಿದ್ಯಾರ್ಥಿ ನಾಯಕಿ...