Homeಸಾಮಾಜಿಕಈ ನೆಲದ ಶೋಷಿತರು ಕಲಿಯಬೇಕಾದದ್ದು ಸಾಕಷ್ಟಿದೆ 

ಈ ನೆಲದ ಶೋಷಿತರು ಕಲಿಯಬೇಕಾದದ್ದು ಸಾಕಷ್ಟಿದೆ 

- Advertisement -
ನಗರಗೆರೆ ರಮೇಶ್ |
ಈ ಸಂಭಾಷಣೆಯ ತುಣುಕುಗಳನ್ನು ಗಮನಿಸಿ:
1) ನಮ್ಮ ಮನೆಯ ಮುಂದೆ ನಮ್ಮ ಬೀದಿಯಲ್ಲಿ ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿದ್ದ ಗುಂಪು. ಅದರ ನಾಯಕ ಕೆಲವು ವರ್ಷಗಳ ಹಿಂದೆ ಜೆಡಿಎಸ್‍ನಲ್ಲಿದ್ದು ನಂತರ ಬಿಜೆಪಿ ಸೇರಿ ತನ್ನ ಪತ್ನಿಯನ್ನು ವಾರ್ಡಿನ ಕಾರ್ಪೊರೇಟರ್ ಆಗಿಸಿದ ಒಬ್ಬ ಪುಢಾರಿ.
`ನಮಸ್ಕಾರ ಸಾರ್!’
`ನಮಸ್ಕಾರ?’
ಕರಪತ್ರವನ್ನು ನನ್ನ ಕೈಗೆ ಕೊಡುತ್ತಾ, `ಈ ಬಾರಿ ಬಿಜೆಪಿಗೆ ಓಟ್ ಹಾಕಬೇಕು ಸಾರ್. ಈ ಏರಿಯಾದವರೆಲ್ಲಾ ನಮಗೇ ಓಟ್ ಹಾಕ್ತಾ ಇದಾರೆ.’
`ಆಯ್ತು, ಹಾಕೋಣ. ಆದ್ರೆ ಬಿಜೆಪಿಗೆ ಯಾಕೆ ಓಟ್ ಹಾಕಬೇಕು?’
`ನಮ್ಮ ಹಿಂದೂ ಧರ್ಮಕ್ಕೋಸ್ಕರ.’
`ಹಿಂದೂ ಧರ್ಮಕ್ಕೆ ಈಗ ಏನಾಗಿದೆ.’
`ಏನ್ಸಾರ್ ಹೀಗೆ ಹೇಳ್ತೀರ? ಅವರು ನೋಡಿ ಎಲ್ಲಾ ಕಡೆ ಹೇಗೆ ಬೆಳೀತಾ ಇದಾರೆ!’
`ಏನು, ಈ ದೇಶದಲ್ಲಿ ಬರೀ ಹಿಂದೂಗಳು ಮಾತ್ರ ಇರಬೇಕಾ? ನಿಮ್ಮ ಪಾಡಿಗೆ ನೀವು ಪೂಜೆ ಮಾಡಿ. ಅವರು ನಮಾಜೋ, ಮತ್ತೊಂದೋ ಮಾಡ್ಕೋತಾರೆ. ನಿಮಗೇನು ಕಷ್ಟ?’
`ಆದ್ರೂ, ನಾವು ಹುಷಾರಾಗಿರಬೇಕು ಅಲ್ವಾ ಸಾರ್! ದೇವೇಗೌಡ್ರು ನೋಡಿ, ಒಂದು ಸಲ ಹೇಳಿದ್ರು: ಮುಂದಿನ ಜನ್ಮ ಅನ್ನೋದಿದ್ರೆ ನಾನು ಮುಸ್ಲಿಮರ ಮನೇಲಿ ಹುಟ್ಟೋಕೆ ಬಯಸ್ತೀನಿ ಅಂತ.’
`ನೋಡ್ರಿ! ಕೆಲವು ವರ್ಷಗಳ ಹಿಂದೆ ನೀವು ಅವರ ಜತೆಯಲ್ಲಿದ್ರಿ. ಈಗ ಈ ರೀತಿ ಮಾತಾಡ್ತಾ ಇದೀರಲ್ರೀ! ಅಷ್ಟೇ ಅಲ್ಲದೆ ಒಂದು ಧರ್ಮದ ಹೆಸರಿನಲ್ಲಿ ಮತ ಕೇಳೋದು ತಪ್ಪು ಅಂತ ನಿಮಗೆ ಗೊತ್ತಿಲ್ವಾ?’
“ಅದು ಬಿಡಿ ಸಾರ್. ನಾವು ಅಭಿವೃದ್ಧಿ ಮಾಡ್ತಾ ಇದೀವಿ. ರೋಡುಗಳಿಗೆ ಟಾರ್ ಹಾಕಿಸ್ತಾ ಇದೀವಿ.”
“ಹೌದಾ! ಸ್ವಲ್ಪ ನಮ್ಮ ಬೀದಿ ಕಡೆ ನೋಡಿ. ಇಲ್ಲಿ ಟಾರ್ ಹಾಕಿ ಅದೆಷ್ಟೋ ಕಾಲ ಆಗ್ಹೋಗಿದೆ. ಇದು ಅಭಿವೃದ್ಧಿನಾ?”
“ನಿಮ್ಮಿಷ್ಟ ಸಾರ್, ಯಾರಿಗಾದ್ರೂ ಹಾಕ್ಕೊಳ್ಳಿ.”
ಎಂದ ಆ ವ್ಯಕ್ತಿ ಮತ್ತೊಂದು ಬಾರಿ ನಮಸ್ಕರಿಸಿ ತನ್ನ ಹಿಂಬಾಲಕರ ಜತೆ ಓಟ ಕಿತ್ತ.
* * * *
2) ದೂರವಾಣಿ ಸಂಭಾಷಣೆ:
“ನಮಸ್ಕಾರ ಸಾರ್! ರಮೇಶ್ ಅವರಾ?”
“ಹೌದು, ನೀವೂ?”
“ನಾನು ಈ ಏರಿಯಾದ ಬ್ರಾಹ್ಮಣ ಸಂಘದಿಂದ ಮಾತಾಡ್ತಾ ಇದೀನಿ ಈ ಬಾರಿ ಎಲೆಕ್ಷನ್‍ನಲ್ಲಿ ಬ್ರಾಹ್ಮಣರೆಲ್ಲಾ ಬಿಜೆಪಿಗೆ ಓಟು ಹಾಕಬೇಕು.”
“ನಾನು ಆ ರೀತಿ ಯೋಚನೆ ಮಾಡೋನಲ್ಲ. ನೇರವಾಗಿ ಹೇಳ್ತೀನಿ ಕೇಳಿ. ನಾನು ಬಿಜೆಪಿ ವಿರೋಧಿ.”
“ತುಂಬಾ ಬೇಜಾರಾಯ್ತು ಸಾರ್, ನಿಮ್ಮ ಮಾತು ಕೇಳಿ!”
“ಯಾಕೆ?”
“ನಾನು ಬಿಜೆಪಿ, ಅರ್‍ಎಸ್‍ಎಸ್. ನೀವು ಬಿಜೆಪಿನ ವಿರೋಧಿಸ್ತೀನಿ ಅಂದ್ರಿ. ಅದಕ್ಕೇ ಬೇಜಾರು.”
“ನಾನೇನೂ ಮಾಡೋಕಾಗಲ್ಲ”
* * * *
3) ಅಂಗಡಿಯೊಂದರಲ್ಲಿ ಒಬ್ಬ ಮಹಿಳೆ:
ಅಂಗಡಿಯವನನ್ನುದ್ದೇಶಿಸಿ: “ ನಾಳೆ ಎಲೆಕ್ಷನ್ ಅಲ್ವಾ! ಬಿಜೆಪಿಗೆ ಹಾಕ್ತಿರಿ ತಾನೇ!”
“ಹಾಕ್ಲೇ ಬೇಕಾಲ್ಲಾ ಇಲ್ದಿದ್ರೆ ನಾವು ಉಳಿಯೋದು ಹೇಗೆ?”
ಮಹಿಳೆ ಈಗ ನನ್ನನ್ನುದ್ದೇಶಿಸಿ;
“ಇಲ್ಲೆಲ್ಲಾ ಬಿಜೆಪಿಗೇ ಓಟು ಸಾರ್, ನೀವೇನಂತೀರಾ ಸಾರ್?”
“ಬಿಜೆಪಿಗೆ ಯಾಕೆ ಓಟು ಹಾಕಬೇಕಮ್ಮಾ?”
“ಯಾಕೆ ಸಾರ್? ಮೋದಿ ನೋಡಿ. ಪ್ರಪಂಚದಲ್ಲೆಲ್ಲಾ ಜನ ನಮ್ಮ ದೇಶನಾ ಗಮನಿಸೋತರ ಮಾಡಿದಾನೆ.”
“ಅಂದ್ರೆ ಅದಕ್ಕೆ ಮೊದಲು ಯಾರಿಗೂ ನಮ್ಮ ದೇಶದ ಬಗ್ಗೆ ಗೊತ್ತೇ ಇರಲಿಲ್ವಾ? ಗಾಂಧಿ, ನೆಹರೂ ಎಲ್ಲಾ ಇದ್ರಲ್ಲಾ!”
“ಇದ್ರು ಸಾರ್. ಆದ್ರೆ ಈಗ ಮೋದಿ ನಮ್ಮನ್ನ ಹೆಚ್ಚು ಫೇಮಸ್ ಮಾಡಿದಾನೆ”
“ಗಾಂಧಿನ ಕೊಂದ ಗುಂಪಿಗೆ ಸೇರಿದ ಮೋದಿಗೂ, ಇವರಿಗೂ ಹೋಲಿಕೆ ಇದೆಯೇನಮ್ಮಾ!”
“ಏನೋ ಸಾರ್! ಇಲ್ಲಿನ ಬ್ರಾಹ್ಮಣರಂತೂ ಎಲ್ಲಾ ಬಿಜೆಪಿನೇ. ಇಲ್ದೇ ಇದ್ರೆ ಇನ್ನು ಮುಂದೆ ಸಾಬರು ನಮ್ಮ ಮನೆಗಳಿಗೇ ನುಗ್ಗಿ ನಮಾಜ್ ಮಾಡ್ತಾರಷ್ಟೇ!”
“ನೋಡೀಮ್ಮಾ. ನಿಮಗಿಷ್ಟ ಆದ್ರೆ ಬಿಜೆಪಿಗೆ ಓಟು ಹಾಕ್ಕೋಳ್ಳಿ. ಆದರೆ, ಇಂಥ ಸುಳ್ಳುಗಳನ್ನು ತಲೀಲಿ ತುಂಬಿಕೊಂಡಿರಬೇಡಿ.”
ಮೇಲಿನ ಸಂಭಾಷಣೆಗಳ ತುಣುಕುಗಳು ಕಲ್ಪನೆಯಲ್ಲ. ಅವು ನನ್ನ ಮತ್ತು ಆ ಮೂವರು ವ್ಯಕ್ತಿಗಳ ನಡುವೆ ನಡೆದ ಮಾತುಗಳು.
ಸಂಘ ಪರಿವಾರದ ರಾಜಕೀಯ ಘಟಕವಾದ ಬಿಜೆಪಿಯ ಬೆಂಬಲದ ಮೂಲ (Support Base) ಪ್ರಮುಖವಾಗಿ ಯಾವುದು ಮತ್ತು ಆ ಬೆಂಬಲದ ಹಿಂದಿನ ಪ್ರಧಾನ ಕಾರಣಗಳು ಯಾವು ಅನ್ನುವುದು ಅವರುಗಳ ಮಾತುಗಳಿಂದ ಸ್ಪಷ್ಟವಾಗುತ್ತದೆ.
ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ದೇಶದ ಪ್ರಧಾನ ಸೇವಕ ಮತ್ತೆ ಮತ್ತೆ ಕೂಗಿಕೊಂಡರೂ, ಅದು ಎಷ್ಟು ಪೊಳ್ಳು ಎನ್ನುವುದು ಆತನಿಗೂ ಮತ್ತು ಆತನ ಆರಾಧಕರಿಗೂ ಗೊತ್ತು. ಬಿಜೆಪಿಯ ಹಲವರು ನಾಯಕರು, ಮಂತ್ರಿಗಳೂ ಸೇರಿದಂತೆ ನಿರ್ಭಿಡೆಯಿಂದ ಇಲ್ಲಿನ ಮುಸಲ್ಮಾನರ ವಿರುದ್ಧ ಕೆಂಡ ಕಾರುವುದನ್ನು, ಅದಕ್ಕೆ ಆಪ್ರಧಾನ ಸೇವಕ ಅಡ್ಡಿಪಡಿಸಿರುವುದನ್ನು ಕಂಡ ಯಾರಿಗಾದರೂ ಅವರೆಲ್ಲರೂ ತಮ್ಮ ಗುರೂಜಿಯ ‘ಚಿಂತನಗಂಗಾ’ದ ವಿಚಾರಧಾರೆಗೇ ಜೋತು ಬಿದ್ದಿರುವುದು ಸ್ಪಷ್ಟವಾಗಬೇಕು.
ಇನ್ನೂ ಬ್ರಾಹ್ಮಣರೆಲ್ಲಾ ಬಿಜೆಪಿಗೆ ಮತ ನೀಡಬೇಕು ಎನ್ನುವ ಮಾತಂತೂ ಆ ಪಕ್ಷ ತೋರಿಕೆಗಾಗಿಯಾದರೂ ಎಷ್ಟೇ ಹೆಣಗಿದರೂ ‘ಬ್ರಾಹ್ಮಣರ ಪಕ್ಷ’ ಎನ್ನುವ ಹಣೆ ಪಟ್ಟಿಯಿಂದ ದೂರಬರುವುದಂತೂ ಸಾಧ್ಯವೇ ಇಲ್ಲ. ಬ್ರಾಹ್ಮಣರೆನಿಸಿಕೊಂಡವರು ಒಂದು ಕಡೆ ಸೇರಿದಾಗ ವ್ಯಕ್ತವಾಗುವ ಅಭಿಪ್ರಾಯ ಅದು. ಯಾರಾದರೂ ಆ ಮಾತನ್ನು ಒಪ್ಪದಿದ್ದರೆ, ‘ತಲೆಕೆಟ್ಟವ’ ಎನ್ನುವ ಬಿರುದಿಗೆ ಸಿದ್ಧವಾಗಿರಬೇಕು. ಆದರೆ ಅಂಥವರಿಂದ ಬ್ರಾಹ್ಮಣರ ಬಿಜೆಪಿ ಒಲವಿಗೆ ಧಕ್ಕೆಯಾಗದು.
ಬಿಜೆಪಿ ನಮ್ಮ ದೇಶಕ್ಕೆ ಏನೋ ತಂದು ಕೊಡುತ್ತದೆ, ಅಭಿವೃದ್ಧಿ ಪಥದಲ್ಲಿ ನಡೆಸುತ್ತದೆ ಎಂದು ನಂಬುವ, ನಂಬಿದಂತೆ ನಟಿಸುತ್ತಿರುವ ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದವರು ಕಲಿಯಬೇಕಾದದ್ದು ಸಾಕಷ್ಟಿದೆ. ಈ ಮಾತನ್ನು ಹೇಳಲು ಮುಖ್ಯ ಕಾರಣವೆಂದರೆ ಎಷ್ಟೇ ನಿದರ್ಶನಗಳು ನಮ್ಮ ಮುಂದಿದ್ದರೂ ಈಗಲೂ ಹಿಂದುಳಿದ ಜಾತಿಗಳ, ದಲಿತರ, ಸ್ವಲ್ಪಮಟ್ಟಿಗೆ ಅಲ್ಪಸಂಖ್ಯಾಂತರ ಬೆಂಬಲ ಬಿಜೆಪಿಗೆ ದೊರೆತಿರುವುದು ಇತ್ತೀಚಿನ ಚುನಾವಣೆಗಳಲ್ಲಿ ಕಂಡುಬಂದಿದೆ. ಇನ್ನು ದೊಡ್ಡ ಸಂಖ್ಯೆಯಲ್ಲಿರುವ ಲಿಂಗಾಯತ(ವೀರಶೈವರೂ ಸೇರಿ)ರ ಬಲವಂತೂ ಬಿಜೆಪಿಯ ಕಡೆಗೇ ಇದೆ ಎನ್ನುವುದಂತೂ ಸೂರ್ಯ ಸ್ಪಷ್ಟೆ. ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಮಾನ್ಯತೆ ಸಿಗಬೇಕೆಂಬ ಒತ್ತಾಯದ ನಡುವೆಯೂ, ಅವರ ಬಿಜೆಪಿ ಪ್ರೇಮ ಕುಂಠಿತಗೊಂಡಿಲ್ಲ. ಅಲ್ಪಸಂಖ್ಯಾತ ಹಣೆಪಟ್ಟಿಯೂ ಬೇಕು, ನಮ್ಮವನೇ ಮುಖ್ಯಮಂತ್ರಿಯೂ ಆಗಬೇಕು ಎನ್ನುವ ಧೋರಣೆ ಅವರದು.
ಪ್ರತಿದಿನವೂ ನಡೆಯುತ್ತಿರುವ ತಂತ್ರ-ಪ್ರತಿತಂತ್ರಗಳನ್ನು ಗಮನಿಸಿದರೆ ನಮ್ಮಾ ಸಮಾಜ ಪ್ರಜಾ ತಾಂತ್ರಿಕತೆ ಎಂದರೆ ಏನು ಎನ್ನುವುದರ ಬಗ್ಗೆ ಇನ್ನೂ ಪ್ರಾಥಮಿಕ ಪಾಠಗಳೇ ಕಲಿತಿಲ್ಲ ಎನ್ನುವುದನ್ನು ಬೇರೆಯಾಗಿ ಹೇಳಬೇಕಾಗಿಲ್ಲ. ಜನರು ಮತ್ತು ಅವರಿಂದ ಆರಿಸಿಬಂದ ಜನಪ್ರತಿನಿಧಿಗಳು, ಅವರ ನಾಯಕರುಗಳು ಯಾರಿಗೂ ಪ್ರಜಾತಂತ್ರ, ಸಂವಿಧಾನ ಇವು ಯಾವುದರ ಬಗ್ಗೆಯೂ ಕಿಂಚಿತ್ತೂ ಕಾಳಜಿ ಇಲ್ಲ. ಅವೆಲ್ಲವೂ ಕೇವಲ ಜನರನ್ನು ಮರಳು ಮಾಡಲು ಬಳಸುವ ಪದಗಳು ಆ ವಿಷಯ ಜನರಿಗೂ ಗೊತ್ತು.
ಇಂಥ ಸನ್ನಿವೇಶದಲ್ಲಿಯೇ ಪ್ರಗತಿಪರವಾಗಿ, ಮೌಲ್ಯಗಳ ಬಗ್ಗೆ, ಅವುಗಳ ನಾಶದ ಬಗ್ಗೆ ಗಮನ ಹರಿಸುವವರ ಜವಾಬ್ಧಾರಿ ಇನ್ನೂ ಹೆಚ್ಚು. ಬಹಳ ಬೇಗ ಸಿನಿಕತನಕ್ಕೆ ನಮ್ಮನ್ನುದೂಡುವ ಇಂಥ ಬೆಳವಣಿಗೆಗಳನ್ನು ಅರ್ಥಮಾಡಿಕೊಂಡು ಸಮಾಜವನ್ನು ಸರಿಯಾದ ಮಾರ್ಗದ ಕಡೆ ಕರೆದೊಯ್ಯುವ ಪ್ರಯತ್ನಗಳು ನಡೆದರೆ ದೇಶಕ್ಕೆ ಸದ್ಗತಿ ಇಲ್ಲವೇ ದುರ್ಗತಿ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...

NICE ನಲ್ಲಿ ಯೋಜನೆಯಲ್ಲಿ ‘ನೈಸ್’ ಎನ್ನುವಂತಹದ್ದು ಏನೂ ಇಲ್ಲ: ರಾಜ್ಯದ ಅತಿದೊಡ್ಡ ಹಗರಣ ಎಂದ ಹೈಕೋರ್ಟ್

ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (ಬಿಎಂಐಸಿಪಿ) ಅಥವಾ 'ನೈಸ್' ಯೋಜನೆ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣಿಸುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್...