Homeಮುಖಪುಟರಾಷ್ಟ್ರೀಯ ಲಾಂಛನ ವಿರೂಪ; ಬಿಜೆಪಿ ವಿರುದ್ಧ ಪ್ರತಿಪಕ್ಷಗಳಿಂದ ವಾಗ್ದಾಳಿ

ರಾಷ್ಟ್ರೀಯ ಲಾಂಛನ ವಿರೂಪ; ಬಿಜೆಪಿ ವಿರುದ್ಧ ಪ್ರತಿಪಕ್ಷಗಳಿಂದ ವಾಗ್ದಾಳಿ

- Advertisement -
- Advertisement -

“ತಾಳ್ಮೆ ಹಾಗೂ ಘನತೆಯಿಂದ ಕೂಡಿದ ನಾಲ್ಕು ತಲೆಯ ಸಿಂಹವನ್ನು ಶತಮಾನದಿಂದ ನೋಡುತ್ತಿದ್ದೇವೆ. ಆದರೆ ಅಶೋಕ ಚಕ್ರವರ್ತಿಯ ಸಿಂಹಗಳು ಸಹ ಈಗ ಕೋಪಗೊಂಡಿವೆ…” ಎಂಬ ಟೀಕೆಗಳು ವ್ಯಕ್ತವಾಗಿವೆ.

ಹೊಸ ಸಂಸತ್ ಭವನದ ಮೇಲ್ಛಾವಣಿಯ ಮೇಲೆ ರಾಷ್ಟ್ರೀಯ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅನಾವರಣಗೊಳಿಸಿದರು. ಆದರೆ ರಾಷ್ಟ್ರೀಯ ಲಾಂಛನವು ಮೂಲವನ್ನು ಹೋಲುತ್ತಿಲ್ಲ ಎಂಬ ಆಕ್ಷೇಪಗಳು ಕೇಳಿಬಂದಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳ ಟ್ವೀಟ್ ಮಾಡಿ, “ರಾಷ್ಟ್ರೀಯ ಲಾಂಛನದಲ್ಲಿರುವ ಸಿಂಹಗಳು ಸೌಮ್ಯವಾದ ಅಭಿವ್ಯಕ್ತಿಯನ್ನು ಹೊಂದಿವೆ. ಆದರೆ ಹೊಸ ಶಿಲ್ಪದಲ್ಲಿ ನರಭಕ್ಷಕ ಪ್ರವೃತ್ತಿ ಕಾಣಬಹುದು” ಎಂದು ಟೀಕಿಸಿದೆ.

“ಆಕರ್ಷಕತೆಯಿಂದ ವಿರೂಪದ ಕಡೆಗೆ, ಫಿಟ್‌ನಿಂದ ಕೊಬ್ಬಿನ ಕಡೆಗೆ, ಸೌಂದರ್ಯದಿಂದ ಕುರೂಪದ ಕಡೆಗೆ ರಾಷ್ಟ್ರೀಯ ಲಾಂಛನವೂ ಏಕೆ ಕೆಟ್ಟ ಸ್ವಭಾವವನ್ನು ಹೊಂದಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ರಾಷ್ಟ್ರವು ವಿಫಲವಾಗಿದೆ” ಎಂದು ಎಐಸಿಸಿ ರಾಷ್ಟ್ರೀಯ ಕಾರ್ಯದರ್ಶಿ ಆಶಿಷ್‌ ದುಅ ತಿಳಿಸಿದ್ದಾರೆ.

ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭಾ ಸಂಸದ ಜವಾಹರ್ ಸಿರ್ಕಾರ್ ಪ್ರತಿಕ್ರಿಯೆ ನೀಡಿದ್ದು, “ನಮ್ಮ ರಾಷ್ಟ್ರೀಯ ಲಾಂಛನಕ್ಕೆ ಮಾಡಿದ ಅವಮಾನ” ಎಂದಿದ್ದಾರೆ.

ಎನ್‌ಡಿಟಿವಿ ಜೊತೆ ಮಾತನಾಡಿದ ಅವರು, “ಸಿಂಹದ ಮುಖದ ನೋಟದಲ್ಲಿ ಆಕ್ರಮಣಶೀಲತೆ ಇದೆ ಎಂದು ಸೂಕ್ಷ್ಮವಾಗಿ ಗಮನಿಸಬಹುದು, ಆದರೆ ಸಾಮ್ರಾಟ್ ಅಶೋಕ ಹೇಳಲು ಪ್ರಯತ್ನಿಸಿದ್ದು ಇದಲ್ಲ. ತುಂಬಾ ಆಕ್ರಮಣಕಾರಿ ಜೀವಿಗಳ ಮುಖದಲ್ಲಿನ ಶಾಂತ ಅಭಿವ್ಯಕ್ತಿಯನ್ನು ಸಾಮ್ರಾಟ್ ಅಶೋಕ ತೆರೆದಿಟ್ಟಿದ್ದನು. ಅಶೋಕನು ನೀಡಲು ಪ್ರಯತ್ನಿಸುತ್ತಿದ್ದ ಶಾಂತಿಯ ಸಂದೇಶದ ಸಾಕಾರವಾಗಿ ಸಿಂಹಗಳನ್ನು ನೋಡಬಹುದು” ಎಂದು ಸ್ಪಷ್ಟಪಡಿಸಿದ್ದಾರೆ.

“ಭವ್ಯವಾದ, ಶಾಂತಿಪ್ರಿಯ, ತಾಳ್ಮೆ ಮತ್ತು ವೈಭವದಿಂದ ಕೂಡಿದ ಸಿಂಹವು ಈಗ ತನ್ನ ಹೊಸ ನೋಟದಲ್ಲಿ ಕೋಪಗೊಂಡಿದೆ, ಕ್ರೂರವಾಗಿದೆ, ಬೆದರಿಸುತ್ತಿದೆ ಮತ್ತು ಹಿಂಸಾತ್ಮಕವಾಗಿ ಕಾಣುತ್ತಿದೆ. ಬಹುತೇಕ ದ್ವೇಷವನ್ನು ಹುಟ್ಟುಹಾಕುವ ರಂಗಾ ಬಿಲ್ಲಾ ಮತ್ತು ಅವರ 8 ವರ್ಷಗಳ ವಿಶ್ವಾಸಘಾತುಕ ಆಡಳಿತವನ್ನು ಇದು ಪುನರಾವರ್ತಿಸುತ್ತದೆ. ಮೋದಿ ಸರ್ಕಾರ ನಮ್ಮ ರಾಷ್ಟ್ರೀಯ ಲಾಂಛನವನ್ನು ಏಕೆ ವಿರೂಪಗೊಳಿಸಿದೆ ಎಂದು ನಾವು ಪ್ರಶ್ನಿಸಬಹುದೇ?” ಎಂದು ಕಾಂಗ್ರೆಸ್ ನಾಯಕ ವಿನಯ್‌ ಕುಮಾರ್‌ ದೊಕನಿಯ ಪ್ರಶ್ನಿಸಿದ್ದಾರೆ.

“ಈ ದೇಶದಲ್ಲಿ ಏನಾದ್ರೂ ಆಗ್ತಿದೆ ಎಲ್ಲರೂ ಸುಮ್ಮನಿರ್ತಾರಾ? ಇದು ರಾಷ್ಟ್ರೀಯ ಚಿಹ್ನೆಗೆ ಮಾಡಿದ ಅವಮಾನ” ಎಂದು ಚಲನಚಿತ್ರ ನಿರ್ದೇಶಕ ವಿನೋದ್ ಕಾಪ್ರಿ ಟ್ವೀಟ್ ಮಾಡಿದ್ದಾರೆ.

‌ಈ ಲಾಂಛನವು ಒಟ್ಟು 9,500 ಕೆಜಿ ತೂಕದ ಕಂಚಿನಿಂದ ಮಾಡಲ್ಪಟ್ಟಿದೆ, 6.5 ಮೀಟರ್ ಎತ್ತರವಿದೆ. ಲಾಂಛನವನ್ನು ಈಗಿನಂತೆ ಕಾಣುವಂತೆ ಮಾಡಲು 100ಕ್ಕೂ ಹೆಚ್ಚು ಕುಶಲಕರ್ಮಿಗಳು ಆರು ತಿಂಗಳ ಕಾಲ ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಸಾಮ್ರಾಟ್ ಅಶೋಕನ ಕಾಲದ ನಾಲ್ಕು ತಲೆಯ ಸಿಂಹಕ್ಕೂ, ಹೊಸ ಸಂಸತ್‌‌ ಭವನದ ಮೇಲೆ ನಿರ್ಮಿಸಲಾಗಿರುವ ಸಿಂಹಕ್ಕೂ ವ್ಯತ್ಯಾಸಗಳು ಕಂಡು ಬರುತ್ತಿವೆ.

ಭಾರತದ ಲಾಂಛನವನ್ನು ಜನವರಿ 26, 1950ರಂದು ಅಂದರೆ ಭಾರತದ ಸಂವಿಧಾನವು ಜಾರಿಗೆ ಬಂದ ದಿನ ಅಂಗೀಕರಿಸಲಾಗಿದೆ.

ಬಿಜೆಪಿ ನಾಯಕನ ಸಮರ್ಥನೆ

ಬಿಜೆಪಿ ನಾಯಕ ಚಂದ್ರಕುಮಾರ್ ಬೋಸ್ ಪ್ರತಿಕ್ರಿಯೆ ನೀಡಿದ್ದು, “ಸಮಾಜದಲ್ಲಿ ಎಲ್ಲವೂ ವಿಕಸನವಾಗುತ್ತಿದೆ. ಸ್ವಾತಂತ್ರ್ಯದ 75 ವರ್ಷಗಳ ನಂತರ ನಾವು ಕೂಡ ವಿಕಸನಗೊಂಡಿದ್ದೇವೆ. ಕಲಾವಿದನ ಅಭಿವ್ಯಕ್ತಿಗೆ ಸರ್ಕಾರದ ಅನುಮೋದನೆ ಅಗತ್ಯವಿಲ್ಲ. ಎಲ್ಲದಕ್ಕೂ ನೀವು ಭಾರತ ಸರ್ಕಾರವನ್ನು, ಪ್ರಧಾನಿ ಮೋದಿಯನ್ನು ದೂಷಿಸಲು ಸಾಧ್ಯವಿಲ್ಲ. ಸಂರಚನೆಯಲ್ಲಿ ಬದಲಾವಣೆ, ಮಾರ್ಪಾಡು ಇದೆ ಎಂಬ ವಾದವನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ನಾವು ಯಾವಾಗಲೂ ಟೀಕಿಸಬಾರದು. ಬಹುಶಃ ಭಾರತ ಇಂದು ವಿಭಿನ್ನವಾಗಿದೆ” ಎಂದು ಸಮರ್ಥಿಸಿದ್ದಾರೆ.

‘ರಾಷ್ಟ್ರ ಲಾಂಛನ ತಿರುಚುವುದು ಶಿಕ್ಷಾರ್ಹ ಅಪರಾಧ’

‘ರಾಷ್ಟ್ರ ಲಾಂಛನವನ್ನು ತಿರುಚುವುದು ಶಿಕ್ಷಾರ್ಹ ಅಪರಾಧ’ ಎಂದು ಚಿಂತಕ, ರಾಜಕೀಯ ವಿಶ್ಲೇಷಕರಾದ ರಾಜಾರಾಮ್ ತಲ್ಲೂರು ತಿಳಿಸಿದ್ದಾರೆ.

ಈ ಕುರಿತು ಫೇಸ್‌ಬುಕ್‌ ಪೋಸ್ಟ್ ಮಾಡಿರುವ ಅವರು, “ಸಾರನಾಥದ ಮ್ಯೂಸಿಯಂನಲ್ಲಿ ಸಂರಕ್ಷಿಸಲಾಗಿರುವ ಅಶೋಕ ಚಕ್ರವರ್ತಿಯ -ಲಯನ್ ಕ್ಯಾಪಿಟಲ್- ಈ ದೇಶದ ಲಾಂಛನ. THE STATE EMBLEM OF INDIA (PROHIBITION OF IMPROPER USE) ACT, 2005 ACT NO. 50 OF 2005 ಎಂಬ ಸಾಂವಿಧಾನಿಕ ರಕ್ಷಣೆ ಈ ಲಾಂಛನಕ್ಕಿದೆ. ಈ ಲಾಂಛನವನ್ನು ವಿರೂಪಗೊಳಿಸುವುದು ಶಿಕ್ಷಾರ್ಹ ಅಪರಾಧ” ಎಂದು ಎಚ್ಚರಿಸಿದ್ದಾರೆ.

“ಒಕ್ಕೂಟ ಸರ್ಕಾರಕ್ಕೆ ಈ ಲಾಂಛನದ ಬಳಕೆಯನ್ನು ನಿರ್ದೇಶಿಸುವ ಕಾನೂನುಬದ್ಧ ಅಧಿಕಾರ ಇದೆಯೇ ಹೊರತು ಇದನ್ನು ವಿರೂಪಗೊಳಿಸುವ ಅಥವಾ ತನ್ನ ಮನಸ್ಸಿಗೆ ಬಂದಂತೆ ಸ್ವರೂಪದಲ್ಲಿ ಬದಲಾವಣೆಗಳನ್ನು ಮಾಡುವ ಹಕ್ಕಿಲ್ಲ. ಈಗ ಹೊಸ ಸಂಸತ್ ಭವನದ ಮೇಲುಭಾಗದಲ್ಲಿ ಉದ್ಘಾಟನೆಗೊಂಡಿರುವ ವ್ಯಗ್ರ ಸಿಂಹಗಳನ್ನು ಹೊಂದಿರುವ ಪ್ರತಿಮೆಗೂ ಮತ್ತು ಸಾರನಾಥದ ಪ್ರಶಾಂತ ಮುದ್ರೆಯ ಘನಗಂಭೀರ ಸಿಂಹಗಳಿರುವ ದೇಶದ ಲಾಂಛನಕ್ಕೂ ಎದ್ದು ಕಾಣುವ ವ್ಯತ್ಯಾಸ ತೋರುತ್ತಿದೆ. ಇದನ್ನು ಉದ್ಘಾಟನೆಗೆ ಮುನ್ನ ಒಕ್ಕೂಟ ಸರ್ಕಾರ ಗಮನಿಸಬೇಕಿತ್ತು. ಇದೊಂದು ಲೋಪವೇ ಸರಿ” ಎಂದು ಅಭಿಪ್ರಾಯಪಟ್ಟಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಲೇ ಗಾಂಡುಗಳ,ಇಷ್ಟು ದಿನ ಸಿಂಹ ಸೈಲಾಂಟಾಗಿ ಕುಳಿತಿತ್ತು,ಆದರೆ ಈಗ ಸಿಂಹ ಘರ್ಜನೆ ಮಾಡ್ತಿದೆ ಪ್ರಪಂಚದಾದ್ಯಂತ ಆ ಸಂಕೇತ ಕಣ್ರೋ ಇದು ಕಲಬೆರಕೆಗಳಾ

  2. ರಾಷ್ಟ್ರೀಯ ಲಾಂಚನವನ್ನು ಬೇಕಾಬಿಟ್ಟಿಯಾಗಿ ತಮಗಿಶ್ಟ ಬಂದಂತೆ ಬದಲಾಯಿಸುವ ಯಾವ ಅದಿಕಾರವೂ, ಯಾವ ಸರ್ಕಾರಕ್ಕೂ ಇಲ್ಲ. ಆದ್ದರಿಂದ ಮೋದಿ ಸರ್ಕಾರದ ಈ ಕ್ರಮ ಕಂಡನಾರ್ಹ.

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...