Homeಕರ್ನಾಟಕಸಾವರ್ಕರ್ ಸಿ.ಐ.ಎ. ಏಜೆಂಟರಾಗಿದ್ದರೆ?

ಸಾವರ್ಕರ್ ಸಿ.ಐ.ಎ. ಏಜೆಂಟರಾಗಿದ್ದರೆ?

- Advertisement -
- Advertisement -

ಸಾವರ್ಕರ್ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಸ್ವಾತಂತ್ರ್ಯದ 75ನೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕರ್ನಾಟಕ ಸರಕಾರ ಹೊರಡಿಸಿದ ಒಂದು ಜಾಹೀರಾತಿನಲ್ಲಿ ಭಾರತದ ಮೊದಲನೆಯ ಪ್ರಧಾನಿ ಜವಾಹರಲಾಲ ನೆಹರೂ ಅವರ ಚಿತ್ರವನ್ನು ಕೈಬಿಟ್ಟು ಸಾವರ್ಕರ್ ಅವರ ಚಿತ್ರವನ್ನು ಸೇರಿಸಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಶಿವಮೊಗ್ಗದಲ್ಲಿ ಸಾವರ್ಕರ್ ಅವರ ಚಿತ್ರವನ್ನು ಕಿತ್ತುಹಾಕಿದ ಸುದ್ದಿಬಂದಿತ್ತು. ಅದೇ ಸ್ಥಳದಲ್ಲಿ ಟಿಪ್ಪು ಸುಲ್ತಾನನ ಚಿತ್ರವನ್ನು ಇಡಲು ಹೋದವರನ್ನು ಬಂಧಿಸಲಾಗಿರುವ ವರದಿಯಾಗಿತ್ತು. ಮಂಗಳೂರಿನಲ್ಲಿ ರಾಷ್ಟ್ರೀಯ ಹಿಂದೂ ಸೇನೆಯ ಅಧ್ಯಕ್ಷರಾದ ಪ್ರಮೋದ ಮುತಾಲಿಕ ಅವರಂತೂ ಸಾವರ್ಕರ್ ಅವರ ಚಿತ್ರವನ್ನು ಕಿತ್ತು ಹಾಕುವವರ ಕೈಗಳನ್ನು ಕತ್ತರಿಸುತ್ತೇವೆ ಎಂಬ ಬೆದರಿಕೆಯನ್ನು ಹಾಕಿದ್ದಾರೆಂಬ ಸುದ್ದಿಯೂ ಬಂದಿದೆ.

ಈ ಹಿಂದುತ್ವವಾದಿಗಳಿಗೆ ಸಾವರ್ಕರ್ ಅವರ ಮೇಲೆ ಯಾಕೆ ಇಷ್ಟೊಂದು ಪ್ರೀತಿ? ಈ ಹಿಂದುತ್ವವಾದಿಗಳು ಬ್ರಿಟಿಷರ ವಿರುದ್ಧ ನಡೆದ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೇ ಬ್ರಿಟಿಷರಿಗೆ ಸಹಾಯ ಮಾಡಿದ್ದು ಈಗ ಇವರಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ. ಸ್ವಾತಂತ್ರ್ಯದ ಹೋರಾಟದಲ್ಲಿ ಭಾಗವಹಿಸಿರುವವರಲ್ಲಿ ಇವರಲ್ಲಿ ಇರಬಹುದಾದ ಒಂದೇಒಂದು ಹೆಸರು ವಿನಾಯಕ ದಾಮೋದರ ಸಾವರ್ಕರ್ ಅವರದ್ದು. 23.12.1910ರಂದು ಅವರನ್ನು ರಾಜ್ಯವ್ಯವಸ್ಥೆಯ ವಿರುದ್ಧ ಯುದ್ಧವನ್ನು ಸಾರಿದ್ದಕ್ಕಾಗಿ 25 ವರ್ಷಗಳ ಕಾರಾವಾಸವನ್ನೂ, 30.01.1911ರಂದು ಒಬ್ಬ ಬ್ರಿಟಿಷ್ ಅಧಿಕಾರಿಯ ಕೊಲೆಯ ಸಂಚಿನಲ್ಲಿ ಭಾಗಿಯಾಗಿದ್ದಕ್ಕಾಗಿ ಮತ್ತೊಂದು 25 ವರ್ಷಗಳ ಕಾರಾವಾಸವನ್ನೂ ಬ್ರಿಟಿಷರು ವಿಧಿಸಿದ್ದರು. ಆದುದರಿಂದ ಸಾವರ್ಕರ್ ಅವರು ಮಹಾನ್ ದೇಶಭಕ್ತರಾಗಿದ್ದರೆಂದೂ, ಬ್ರಿಟಿಷರ ವಿರುದ್ಧ ಹೋರಾಡಿದ್ದರೆಂದೂ ಹಿಂದುತ್ವವಾದಿಗಳು ಬೀಗುತ್ತಾರೆ.

ಸಾವರ್ಕರ್ ಅವರು ತಾವು ಇನ್ನು ಬ್ರಿಟಿಷರ ವಿರುದ್ಧ ಯಾವ ಹೋರಾಟವನ್ನೂ ಮಾಡುವುದಿಲ್ಲವೆಂದೂ, ಬ್ರಿಟಿಷರಿಗೆ ವಿಧೇಯನಾಗಿರುತ್ತೇನೆಂದೂ ಬ್ರಿಟಿಷರಲ್ಲಿ ಒಂದಲ್ಲ ಎಂಟು ಬಾರಿ ಕ್ಷಮೆ ಯಾಚಿಸಿ ಪತ್ರ ಬರೆದು ಕೇಳಿಕೊಂಡು ಬಿಡುಗಡೆ ಹೊಂದಿದ್ದರೂ ಅವರ ಕ್ಷಮಾ ಯಾಚನಾ ಪತ್ರಗಳು ಅವರ ಬದುಕಿನ ಅವಧಿಯಲ್ಲಿ ಹೊರಬಂದಿರಲಿಲ್ಲ. ಆದರೆ ಅವರ ದುರಾದೃಷ್ಟಕ್ಕೆ ಅವರ ಮರಣದ ನಂತರ ಅವರ ಕ್ಷಮಾ ಯಾಚನಾ ಪತ್ರಗಳು ಬಹಿರಂಗವಾಗಿದ್ದು ಹಿಂದುತ್ವವಾದಿಗಳಿಗೆ ಮುಜುಗರವನ್ನುಂಟು ಮಾಡುತ್ತಿವೆ.

ಹಿಂದುತ್ವವಾದಿಗಳಿಂದ ’ವೀರ ಸಾವರ್ಕರ್’ ಎಂದು ಬಿರುದು ಪಡೆದಿರುವ ಅವರು ಅಂತಹ ಮಹಾನ್ ದೇಶಭಕ್ತರಾಗಿದ್ದರೆ ಬ್ರಿಟಿಷರಿಂದ ಪ್ರತಿ ತಿಂಗಳು ರೂ. 60/- ಮಾಸಾಶನವನ್ನು ಏಕೆ ಪಡೆಯುತ್ತಿದ್ದರು? ಸಾವರ್ಕರ್ ಅವರು ಅಷ್ಟೊಂದು ಬಡವರಾಗಿದ್ದರೆ? ಆದರೆ ಅವರು ಮಹಾತ್ಮಾ ಗಾಂಧಿಯನ್ನು ಗುಂಡು ಹಾರಿಸಿ ಸಾಯಿಸಿದ ನಾಥುರಾಮ ಗೋಡ್ಸೆಗೆ ಸ್ವಾತಂತ್ರ್ಯಪೂರ್ವದಲ್ಲಿಯೇ ’ಅಗ್ರಣಿ’ ಎಂಬ ತಮ್ಮ ಪತ್ರಿಕೆಯನ್ನು ಹೊರಡಿಸಲು ರೂ. 15000/- ಗಳನ್ನು ಸಾಲವಾಗಿ ನೀಡಿದ್ದರು. ಅಂದು ಸಾವರ್ಕರ್ ಅವರು ಗೋಡ್ಸೆಗೆ ನೀಡಿದ ಹಣದ ಬೆಲೆ ಇಂದಿನ ರೂ. 3,42,000/- ಗಳಿಗೆ ಸಮ ಎಂದು ಅಂದಾಜಿಸಬಹುದು. ಸಾವರ್ಕರ್ ಅವರಿಗೆ ಇಷ್ಟೊಂದು ಹಣ ಎಲ್ಲಿಂದ ಬರುತ್ತಿತ್ತು? ಈ ಆದಾಯದ ಮೂಲ ಯಾವುದು?

ಇತಿಹಾಸಕಾರ ಶ್ರೀ ಅಶೋಕ್ ಕುಮಾರ್ ಪಾಂಡೆ ಹಿಂದಿಯಲ್ಲಿ – “ಸಾವರ್ಕರ್ – ಕಾಲಾ ಪಾನಿ ಔರ್ ಉಸ್ಕೆ ಬಾದ್”- (ಸಾವರ್ಕರ್- ಕಾಲಾ ಪಾನಿ ಮತ್ತು ಅದರ ನಂತರ) ಎಂಬ ಒಂದು ಪುಸ್ತಕವನ್ನು ಬರೆದಿದ್ದಾರೆ. ಇತ್ತೀಚೆಗೆ ರಾಜಕಮಲ ಪ್ರಕಾಶನ ಅದನ್ನು ಪ್ರಕಟಿಸಿದೆ. ಅದರ ಪುಟ 200ರಲ್ಲಿ ಅವರು ಸಾವರ್ಕರ್ ಅವರ ಬದುಕಿನ ಒಂದು ಹೊಸ ಆಯಾಮವನ್ನು ಹೊರಹಾಕಿದ್ದಾರೆ. “ಇತ್ತೀಚೆಗೆ ಬಹಿರಂಗಪಡಿಸಲಾದ ವರ್ಗೀಕೃತ ಕೆಲವು ಸಿಐಎ (ಅಮೆರಿಕದ ಗುಪ್ತಚರ ವಿಭಾಗ) ಫೈಲ್‌ಗಳಲ್ಲಿ ಸಾವರ್ಕರ್ ಹೆಸರನ್ನು ಕಂಡು ನನಗೆ ಆಶ್ಚರ್ಯವಾಯಿತು. ಜೂನ್ 27, 1961ರ ಫೈಲ್ ಸಂಖ್ಯೆ ಎಸ್‌ಆರ್/2-ಬಿ -61-292, ಸಿಐಎ ಏಜೆಂಟರಾದ ರಾಬರ್ಟ್ ಟಿ. ಗೋಫೋರ್ತ್ (ಅವರ ಗುಪ್ತ ಹೆಸರು) ಸಿಐಎ ಅಧಿಕಾರಿಯೊಂದಿಗಿನ ಸಭೆಯ ವರದಿಯಾಗಿದೆ. ವರದಿಯಲ್ಲಿ, ಗೋಫೋರ್ತ್ ಅವರು ತನ್ನ ಸಂಪರ್ಕದಲ್ಲಿರುವ ಬೇರೆಬೇರೆ ವ್ಯಕ್ತಿಗಳ ವಿವರಗಳನ್ನು ನೀಡುತ್ತಾರೆ”. ಈ ವರದಿಯಲ್ಲಿ ಅವರು ಸಾವರ್ಕರ್ ಅವರ ಹೆಸರನ್ನೂ ಉಲ್ಲೇಖಿಸಿದ್ದಾರೆ. ಪಾಂಡೆ ಅವರು ತಮ್ಮ ಪುಸ್ತಕದ ಕೊನೆಯಲ್ಲಿ ಸಾವರ್ಕರ್ ಹೆಸರನ್ನು ಪ್ರಸ್ತಾಪಿಸುವ ವರದಿಯ ಸಂಬಂಧಿತ ಪ್ಯಾರಾಗಳ ಛಾಯಾಪ್ರತಿಗಳನ್ನೂ ಪ್ರಕಟಿಸಿದ್ದಾರೆ.

ಅಶೋಕ್ ಕುಮಾರ್ ಪಾಂಡೆ ಅವರು ಪ್ರಕಟಿಸಿರುವ ಸಂಬಂಧಿತ ಮೂರು ಪುಟಗಳಲ್ಲಿ ಪ್ರಮುಖವಾದ ಅಂಶಗಳ ಕನ್ನಡ ಅನುವಾದ ಹೀಗಿದೆ: ಸಾವರ್ಕರ್ ಬಾಂಬೆ ಪ್ರಾಂತ್ಯದ ಪೂನಾದಲ್ಲಿರುವ ಕೆಸ್ಟ್ರೆ ಹೆಸರಿನ ಪತ್ರಿಕೆಯ ವರದಿಗಾರರಾಗಿದ್ದಾರೆ. ಇದಲ್ಲದೆ, ಅವರು ಬಾಲ್ಟಿಕ್ ಇನ್ಸ್ಟಿಟ್ಯೂಟ್‌ಗಾಗಿಯೂ ಕೆಲಸ ಮಾಡುತ್ತಿದ್ದಾರೆ. ಇವರು ಸಾಮಾನ್ಯವಾಗಿ ಪ್ರತಿ ವಾರ ಕಮ್ಯುನಿಸಂನ ಕೆಲವು ಅಂಶಗಳನ್ನು ಸ್ಪರ್ಶಿಸುವ ಒಂದು ಲೇಖನವನ್ನು ಸಿದ್ಧಪಡಿಸುತ್ತಾರೆ. ಈ ಲೇಖನವನ್ನು ನಂತರ ಆಫ್ರಿಕಾ ಮತ್ತು ಏಷ್ಯಾದ ಸುಮಾರು 168 ವಿವಿಧ ಪತ್ರಿಕೆಗಳಿಗೆ ಕಳುಹಿಸಲಾಗುತ್ತದೆ. ಈ ಪ್ರಕಟಣೆಗಳಿಂದ ಸಾಮಾನ್ಯವಾಗಿ ತಿಂಗಳಿಗೆ ಅವರ ಲೇಖನಗಳನ್ನು ಬಳಸಿದ್ದಕ್ಕೆ ರುಜುವಾತಾಗಿ ಮೂರರಿಂದ ಐದು ಪತ್ರಿಕಾ ತುಣುಕುಗಳು ಬರುತ್ತವೆ. ಆದರೆ ಇದು ಈ ಲೇಖನಗಳನ್ನು ಸಂಪಾದಕೀಯಕ್ಕಾಗಿ ಅಥವಾ ಇತರ ವಿಶೇಷ ಲೇಖನಗಳಿಗಾಗಿ ಆಧಾರವಾಗಿ ಬಳಸಿರುವುದನ್ನು ಒಳಗೊಂಡಿರುವುದಿಲ್ಲ. ಆದುದರಿಂದ ಅಂತಹುವುಗಳ ಶ್ರೇಯವನ್ನು ಸಾವರ್ಕರ್ ಅವರಿಗೆ ಕೊಡುತ್ತಿಲ್ಲ. ಬಾಲ್ಟಿಕ್ ಇನ್ಸ್ಟಿಟ್ಯೂಟ್ ಇದು ಯುರೋಪನ್ನು ಸ್ವತಂತ್ರಗೊಳಿಸುವ ಯೋಜನೆಯ ಒಂದು ಭಾಗವಾಗಿದ್ದು (Free Europe Project) ಶೀಘ್ರದಲ್ಲೇ ಅದನ್ನು ನಿಲ್ಲಿಸಲಾಗುವುದು. ಪ್ರಸ್ತುತ ಇದಕ್ಕೆ ಪ್ರಮುಖ ವೆಚ್ಚಗಳೆಂದರೆ ಸಾವರ್ಕರ್‌ಗೆ ಲೇಖನಗಳಿಗಾಗಿ ಪ್ರತಿವಾರ 75 ಡಾಲರಗಳನ್ನು ಪಾವತಿಸುವುದನ್ನು ಒಳಗೊಂಡಿದೆ. ಅವರಿಗೆ ಈ ಲೇಖನಗಳನ್ನು ಪ್ರತಿವಾರ ಮುದ್ರಿಸುವ ಮತ್ತು ಮೇಲ್ ಮಾಡುವ ವೆಚ್ಚವನ್ನು ಸೇರಿಸಿ ಸುಮಾರು 120 ಡಾಲರ್‌ಗಳನ್ನು ಕೊಡಲಾಗುತ್ತಿದೆ. ಸಾವರ್ಕರ್ ಅವರ ಲೇಖನಗಳನ್ನು ಕಳುಹಿಸಲಾಗುತ್ತಿರುವ ಪ್ರಮುಖ ಪತ್ರಿಕೆಗಳ ಪಟ್ಟಿಯನ್ನು, ಅವರು ಸಿದ್ಧಪಡಿಸಿದ ಲೇಖನಗಳನ್ನು ಹಾಗೂ ಅವರ ಲೇಖನಗಳನ್ನು ಬಳಸಿದ ಲೇಖನಗಳ ತುಣುಕುಗಳನ್ನು ತಾವು ಶೀಘ್ರದಲ್ಲಿಯೇ ಒದಗಿಸುವುದಾಗಿ ಅವರು ಭರವಸೆ ನೀಡಿದರು”.

1961ರಲ್ಲಿ ಅಮೇರಿಕೆಯ 1 ಡಾಲರ್ ಭಾರತದ 4.76 ರೂಪಾಯಿಗಳಿಗೆ ಸಮನಾಗಿತ್ತು. ಸಾವರ್ಕರ್ ಅವರಿಗೆ ಪ್ರತಿವಾರ 75 ಡಾಲರ್ ಕೊಡಲಾಗುತ್ತಿತ್ತು ಅಂದರೆ ಪ್ರತಿವಾರ ಸುಮಾರು ರೂ. 357 ಕೊಡಲಾಗುತ್ತಿತ್ತು. ಈ ಮೊತ್ತದ ಇಂದಿನ ಮೌಲ್ಯ ಸುಮಾರು ರೂ. 30,000 ಆಗುತ್ತದೆ. ಅಂದರೆ ಸಾವರ್ಕರ್ ಅವರಿಗೆ ಪ್ರತಿ ತಿಂಗಳು ಇಂದಿನ ಮೌಲ್ಯದಲ್ಲಿ ರೂ. 1,20,000ಗಳನ್ನು ಅಮೆರಿಕದ ಗುಪ್ತಚರ ವಿಭಾಗದಿಂದ ನೀಡಲಾಗುತ್ತಿತ್ತು ಎಂದಾಗುತ್ತದೆ. ಇನ್ನು ಮುದ್ರಣದ ಖರ್ಚು ಮುಂತಾದವನ್ನು ಸೇರಿಸಿದರೆ ಅಮೆರಿಕದ ಗುಪ್ತಚರ ವಿಭಾಗ ಸಾವರ್ಕರ್ ಅವರಿಗೆ ಪ್ರತಿ ತಿಂಗಳು ಇಂದಿನ ಮೌಲ್ಯದಲ್ಲಿ ಸುಮಾರು ರೂ. 1,77,000ಗಳನ್ನು ನೀಡುತ್ತಿತ್ತು ಎಂದು ಅಂದಾಜಿಸಬಹುದು.

ಹಾಗಾದರೆ ಸಾವರ್ಕರ್ ಅವರು ಅಮೆರಿಕದ ಗುಪ್ತಚರ ವಿಭಾಗಕ್ಕಾಗಿ ಕೆಲಸ ಮಾಡಿ ಅದರಿಂದ ಹಣ ಪಡೆಯುತ್ತಿದ್ದರೆ? ಇದು ಎಷ್ಟು ವರ್ಷಗಳಿಂದ ನಡೆಯುತ್ತಿತ್ತು? ಈ ಬಗ್ಗೆ ವಿವರವಾದ ತನಿಖೆ ಅಗತ್ಯವಿದೆ.

ಬಾಪು ಹೆದ್ದೂರಶೆಟ್ಟಿ

ಬಾಪು ಹೆದ್ದೂರಶೆಟ್ಟಿ
ವಕೀಲರು ಹಾಗೂ ಸಮಾಜವಾದಿ ಚಿಂತಕ-ಲೇಖಕ-ಚಳವಳಿಕಾರ. ’ಲೋಹಿಯಾ – ವ್ಯಕ್ತಿ ಮತ್ತು ವಿಚಾರ’, ’ಗಾಂಧಿ-ಅಂಬೇಡ್ಕರ್ ಮತ್ತು ಸಮಾಜವಾದ’, ’ಸಮಾಜವಾದ: ವಾದ-ವಿವಾದ’ ಅವರ ಪುಸ್ತಕಗಳಲ್ಲಿ ಕೆಲವು.


ಇದನ್ನೂ ಓದಿ: ಸಾವರ್ಕರ್ ಕುರಿತ ಉತ್ಪ್ರೇಕ್ಷಿತ ಕನ್ನಡ ಪಠ್ಯಕ್ಕೆ ತೀವ್ರ ವಿರೋಧ: ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...