Homeಕರ್ನಾಟಕಸಾಧ್ವಿಯ ಬಾಯಲ್ಲಿ ಹಿಂಸೆಯ ಮಾತು!

ಸಾಧ್ವಿಯ ಬಾಯಲ್ಲಿ ಹಿಂಸೆಯ ಮಾತು!

- Advertisement -
- Advertisement -

ಶಿವಮೊಗ್ಗದಲ್ಲಿ ಆ ದಿನ ಕ್ರಿಸ್‌ಮಸ್ ಹಬ್ಬ. ಎಂದಿನಂತೆ ಶಾಂತಿ ಸಮಾಧಾನದಿಂದ ಕ್ರಿಸ್‌ಮಸ್ ಆಚರಿಸುವ ಕ್ರಿಶ್ಚಿಯನ್ನರು, ಹಬ್ಬದ ದಿನ ಏರ್ಪಡಿಸುವ ಮೆರವಣಿಗೆ ನೋಡುವುದೇ ಚಂದ. ಅವರ ಪ್ರಯರ್ ಮತ್ತು ನಡಿಗೆ ಸಮ್ಮಿಳನಗೊಂಡಿರುತ್ತದೆ; ರಸ್ತೆ ಬದಿಯಲ್ಲಿ ನಿಂತು ನೋಡುವ ಧರ್ಮಸಹಿಷ್ಣು ಜನರಿಗೆ ತಾವೂ ಹೋಗಿ ಶಾಂತಿ ನಡಿಗೆಯಲ್ಲಿ ಭಾಗವಹಿಸಬೇಕೆಂಬ ಆಸೆ ಮೂಡಿದರೂ ಆಶ್ಚರ್ಯವಿಲ್ಲ. ಕ್ರಿಶ್ಚಿಯನ್ನರ ಈ ಹಬ್ಬದಲ್ಲಿ ತಮ್ಮ ಹಿಂದೂ ಗೆಳೆಯರನ್ನ ಕರೆದು ಮಾಂಸಾಹಾರ, ಪಾನೀಯಗಳ ನೀಡಿ ಉಪಚರಿಸುವುದನ್ನು ಅನುಭವಿಸಿ ನೋಡುವುದೇ ಚಂದ. ತಮ್ಮ ಈ ಸಂಭ್ರಮವನ್ನು ಚಾಚು ತಪ್ಪದೆ ನಡೆಸುತ್ತ ಬಂದ ಕ್ರಿಶ್ಚಿಯನ್ನರಿಗೆ ಪ್ರಥಮ ಬಾರಿಗೆ ಈ ವರ್ಷ ಮನಸ್ಸು ಕದಡಿಹೋಗಿತ್ತು. ಕಾರಣ, ಹಿಂದೂ ಜಾಗರಣ ವೇದಿಕೆಯವರು ಮಾಡಿದ ಸಮ್ಮೇಳನ ಮತ್ತು ಅಲ್ಲಿಗೆ ಬಂದಿದ್ದ ಪ್ರಜ್ಞಾ ಸಿಂಗ್ ಎಂಬ ಸಂಸದೆ ಮಾಡಿದ ಭಾಷಣ. ’ಕ್ರಿಶ್ಚಿಯನ್ನರ ಮಿಷನರಿ ಶಾಲೆಗೆ ನಿಮ್ಮ ಮಕ್ಕಳನ್ನ ಕಳುಹಿಸಬೇಡಿ, ಅಲ್ಲಿ ಕಲಿಯುವ ಮಕ್ಕಳು ಸ್ವಾರ್ಥಿಗಳಾಗಿ ತಂದೆ ತಾಯಿಗಳನ್ನ ವೃದ್ಧಾಶ್ರಮಕ್ಕೆ ಸೇರಿಸುತ್ತವೆ. ಆದ್ದರಿಂದ ನಮ್ಮ ಸಂಸ್ಕೃತಿ ಸಂಸ್ಕಾರ ಕಲಿಸುವ ಶಾಲೆಗೆ ಕಳಿಸಿ’ ಎಂದು ಅವರು ಕರೆಕೊಟ್ಟಿದ್ದರು.

ಮಿಷನರಿ ಶಾಲೆಯಲ್ಲಿ ಓದಿದ ಮಕ್ಕಳೆಲ್ಲಾ ತಂದೆ ತಾಯಿಗಳನ್ನು ವೃದ್ಧರ ಆಶ್ರಮಕ್ಕೆ ಸೇರಿಸುತ್ತಾರೆ ಎಂದು ಯಾವ ಸಮೀಕ್ಷೆ ಹೇಳಿದೆ ಎಂದು ಸಾದ್ವಿಯವರನ್ನು ಯಾರೂ ಕೇಳಲಿಲ್ಲ; ಅವರೂ ಹೇಳುವ ಗೋಜಿಗೆ ಹೋಗಲಿಲ್ಲ. ಹೇಳಿಕೇಳಿ ಕ್ರಿಸ್‌ಮಸ್ ಹಬ್ಬದ ಸಂಭ್ರಮವನ್ನು ಹಾಳುಮಾಡಲೆಂದೇ ಆಯೋಜಿಸಿದ್ದ ಶೋಭಯಾತ್ರೆ ಅಂಗವಾಗಿ ಇಡೀ ಊರನ್ನು ಕೇಸರಿಮಯಗೊಳಿಸಿದ್ದ ಜಾಗರಣ ವೇದಿಕೆ ಜನರು, ಚರ್ಚಿನ ಎದುರೇ ಹೆಚ್ಚಾಗಿ ಕೇಸರಿ ಧ್ವಜಗಳನ್ನು ಹರಡಿದ್ದರು. ಅಲ್ಲದೆ ಆ ದಿನ ಮದ್ಯಮಾರಟವನ್ನು ನಿಷೇಧಿಸಿದ್ದರು. ಇದಕ್ಕೆ ಪ್ರತಿಯಾಗಿ ಕ್ರಿಶ್ಚಿಯನ್ನರ ಕಡೆಯಿಂದ ಯಾವ ಪ್ರತಿರೋಧವಾಗಲಿ ಪ್ರತಿಕ್ರಿಯೆಯಾಗಲಿ ಇರಲಿಲ್ಲ. ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಯೊಡ್ಡುವಂತೆ ಆದೇಶಿಸಿರುವ ಕ್ರಿಸ್ತನ ಬೋಧನೆಯನ್ನು ಒಂದು ಮಟ್ಟಕ್ಕಾದರೂ ಅನುಸರಿಸುವ ಈ ತೀರ ಅಲ್ಪಸಂಖ್ಯಾತ ಸಮುದಾಯ ಹೇಗೋ ಇಷ್ಟು ದಿನ ನೆಮ್ಮದಿಯನ್ನು ಅರಸಿ ಬದುಕುತ್ತಿದ್ದಾರೆ.

ಶಿವಮೊಗ್ಗದಲ್ಲಿ ಕ್ರಿಶ್ಚಿಯನ್ನರ ಹಬ್ಬಕ್ಕೆ ಹಿಂದೂ ಜಾಗರಣದವರು ತೋರಿದ ಅಸಹನೆ ಅವರಿಗೇ ತಿರುಗುಬಾಣವಾಗಿ ಪರಿಣಮಿಸಿತು. ಜನರಿಂದ ಟೀಕೆಗೆ ಗುರಿಯಾದರು; ಅದರಲ್ಲೂ ಕ್ರಿಶ್ಚಿಯನ್ನರ ಶಾಲೆಯಲ್ಲಿ ಓದಿ ಸತ್ಪ್ರಜೆಗಳಾಗಿರುವ ಹೆಣ್ಣುಮಕ್ಕಳ ಆಕ್ರೋಶಕ್ಕೆ ಗುರಿಯಾದರು. ಇಲ್ಲಿ ಮನುಷ್ಯರನ್ನು ಮನುಷ್ಯರಾಗಿ ನೋಡದ ಮನಸ್ಸುಗಳಲ್ಲಿ ದ್ವೇಷವೂ ಶ್ರೇಣೀಕರಣಗೊಂಡಿರುತ್ತದೆ. ಸದ್ಯಕ್ಕೆ ಮುಸ್ಲಿಮರನ್ನ ತನ್ನ ಪರಮವೈರಿ ಎಂದು ಪರಿಗಣಿಸಿರುವ ಪ್ರಜ್ಞಾಸಿಂಗ್ ಮನಸ್ಸು ಬಿಡುವು ಸಿಕ್ಕಾಗ ಕ್ರಿಶ್ಚಿಯನ್ನರ ಮೇಲೆ ಹರಿಹಾಯುತ್ತೆ; ಆ ನಂತರ ದಲಿತರ ಮೇಲೆರಗುತ್ತದೆ. ಸದ್ಯಕ್ಕೆ ಅವರ ಪರಮ ವೈರಿ ಮುಸ್ಲಿಮರಾಗಿರುವುದರಿಂದ ಶಿವಮೊಗ್ಗದಲ್ಲಿ ನಡೆದ ಹಿಂದೂ ಜಾಗರಣ ವೇದಿಕೆ ಕಾರ್ಯಕ್ರಮದಲ್ಲಿ ನೇರವಾಗಿ ಮುಸ್ಲಿಂ ವಿರುದ್ಧ ಸಮರದ ಹೇಳಿಕೆ ಕೊಡುತ್ತಾರೆ. ಸಾಲದ್ದಕ್ಕೆ, ಭಾರತದ ಚೈತನ್ಯವಾದ ಮತ್ತು ಜಾತ್ಯತೀತ ಪರಿಕಲ್ಪನೆಯನ್ನ ಎತ್ತಿಹಿಡಿದ ಸಂವಿಧಾನದ ಅಡಿಯಲ್ಲಿ ಗೆದ್ದು ಬಂದು, ಸಂಸತ್ ಭವನದಲ್ಲಿ ಕುಳಿತ ಗೌರವಾನ್ವಿತ ಸಂಸದೆ ಬೇರೆ ಇವರು! (ಬಾಂಬ್ ಬ್ಲಾಸ್ಟ್ ಆಪಾದನೆಯಲ್ಲಿ ವಿಚಾರಣೆಯನ್ನು ಎದುರಿಸುತ್ತಿರುವ ಇವರು, ಸದ್ಯ ಸಂಸದೆಯಾಗಿ ಅದರ ಸ್ಥಾನಮಾನಕ್ಕೂ ಬಿಡಿಗಾಸು ಗೌರವ ನೀಡುತ್ತಿಲ್ಲ!) ತಮ್ಮ ಸ್ಥಾನಮಾನದ ಘನತೆಯ ಅರಿವಿಲ್ಲದ ಇವರಿಂದ ಉದುರಿದ ಮಾತುಗಳು ಇಂತಿದ್ದವು: ’ಮುಂದೆ ಎಂತಹ ಸಂದರ್ಭ ಬರುತ್ತದೋ ಗೊತ್ತಿಲ್ಲ; ಆದ್ದರಿಂದ ನಮ್ಮ ಹೆಣ್ಣುಮಕ್ಕಳು ತರಕಾರಿ ಕತ್ತರಿಸುವ ಚಾಕುಗಳನ್ನು ಇನ್ನಷ್ಟು ಹರಿತ ಮಾಡಿಸಿ ಇಟ್ಟುಕೊಳ್ಳಿ. ನಮ್ಮ ಹೆಣ್ಣುಮಕ್ಕಳು ನಡೆದಾಡುವ ಅಟಂಬಾಂಬುಗಳಂತಿರಬೇಕು’ ಎಂದು ಕರೆಕೊಟ್ಟಿದ್ದಾರೆ. ಜೊತೆಗೆ ತನ್ನ ಇಡೀ ಭಾಷಣವನ್ನು ಹಿಂಸಾಪ್ರಚೋದಕವಾಗಿ ಮಾಡಿಮುಗಿಸಿದರು. ಈ ಸಾಧ್ವಿಯ ಮಾತು ನೆರೆದವರಲ್ಲಿ ರೋಮಾಂಚನವುಂಟು ಮಾಡಿ ಚಪ್ಪಾಳೆ ಗಿಟ್ಟಿಸಿತು! ಅಂದರೆ ಈ ಭಾಷಣ ಬರೀ ಪ್ರಜ್ಞಾಸಿಂಗ್ ಭಾಷಣ ಮಾತ್ರವಾಗಿರದೆ ಎಲ್ಲಾ ಬಿಜೆಪಿಗಳು ಚಪ್ಪರಿಸುತ್ತಿದ್ದಾರೆ!

ಇದನ್ನೂ ಓದಿ: ಚುನಾವಣಾ ಪರ್ವ: ಜನವರಿಯಲ್ಲಿ ಎರಡು ಬಾರಿ ರಾಜ್ಯಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ

ಭಾರತದ ಸಂವಿಧಾನಕ್ಕೆ ಗೌರವ ಕೊಡುವ ಯಾವೊಬ್ಬ ಬಿಜೆಪಿಯವನೂ ಇಲ್ಲವೇ? ಇದ್ದರೆ ಸಾಧ್ವಿಯ ಭಾಷಣವನ್ನು ಖಂಡಿಸಬೇಕಿತ್ತು ಮತ್ತು ಅವರನ್ನು ಪ್ರಶ್ನಿಸಬೇಕಿತ್ತು. ಆದರೆ ಅದಾಗಲಿಲ್ಲ. ಎಂತಹ ನರಹತ್ಯೆಯ ಮಾತನ್ನಾಡಿದರೂ ಅದನ್ನು ಖಂಡಿಸುವ-ಪ್ರಶ್ನಿಸುವ ಮನುಷ್ಯರು ಬಿಜೆಪಿಯಲ್ಲಿ ಯಾರೂ ಇಲ್ಲ. ಅವರುಗಳ ಅಂತರಂಗದ ಮಾತುಗಳು ಪ್ರಜ್ಞಾಸಿಂಗ್ ಬಾಯಲ್ಲಿ ಉದುರತ್ತವಷ್ಟೇ. ಪ್ರಜ್ಞಾಸಿಂಗರ ಚಾಕು ಚೂರಿ ಮಾತಿಗೆ ಹರ್ಷನನ್ನು ಕೊಂದವರ ಕಡೆಯವರ್‍ಯಾರೂ ತಲೆಕೆಡಿಸಿಕೊಂಡಂತಿಲ್ಲ. ಈ ಶಿವಮೊಗ್ಗದ ಇತಿಹಾಸವನ್ನು ಕೆದಕಿದರೆ ಕೋಮು ರಾಡಿ ಹಬ್ಬಿಸಿದಾಗಲೆಲ್ಲಾ ಕೊಲೆಗಳಾಗಿವೆ. ಕೊಲೆಯಾದವನ ಶವವನ್ನು ಊರ ತುಂಬ ಮೆರವಣಿಗೆ ಮಾಡಿ ಈಶ್ವರಪ್ಪನಂತಹವರು ಗೆದ್ದು ಬರುತ್ತಿದ್ದಾರೆ. ಆದರೆ ಈ ಬಾರಿ ಅವರು ತೊಂದರೆಯಲ್ಲಿದ್ದಾರೆ. ಅದಕ್ಕಾಗಿ ಹರ್ಷನ ಕೊಲೆಯನ್ನು ಜೀವಂತವಾಗಿಟ್ಟಿದ್ದಾರೆ ಮತ್ತು ಸಾವರ್ಕರ್ ಸಾಮ್ರಾಜ್ಯ ಎಂಬ ಕಾರ್ಯಕ್ರಮ ಮಾಡಿದ್ದಾರೆ. ಜೊತೆಗೆ ಪ್ರಜ್ಞಾಸಿಂಗ್ ಕರೆಸಿ ಚಾಕು ಚೂರಿ ಸಾಣೆ ಹಿಡಿಸಲು ಸಲಹೆಕೊಡಿಸಿದ್ದಾರೆ. ಈಶ್ವರಪ್ಪನವರ ಕೆಲಸಗಳಿಗೆ ಪ್ರತಿಯಾಗಿ ಕೆಲವು ಮುಸ್ಲಿಂ ಮೂಲಭೂತವಾದಿಗಳು ಕೂಡ ಕೆಲಸ ಮಾಡುತ್ತಿದ್ದಾರೆ. ಶಿವಮೊಗ್ಗದ ಹಿಂದೂ ಮುಸ್ಲಿಂ ದ್ವೇಷಕ್ಕೆ ಶತಮಾನದ ಇತಿಹಾಸವಿದೆ. ಆದರೆ, ಇದರ ನಡುವೆ ರಂಜಾನ್ ಹಬ್ಬದಲ್ಲಿ ಬಿರಿಯಾನಿಗಾಗಿ ಹಂಬಲಿಸುವ ಹಿಂದೂಗಳಿದ್ದಾರೆ; ಹಾಗೆಯೇ ಕ್ರಿಸ್‌ಮಸ್ ಹಬ್ಬದ ಊಟಕ್ಕಾಗಿ ಕಾಯುವ ಕೆಲ ಹಿಂದೂಗಳು ಸದ್ದಿಲ್ಲದೆ ಧರ್ಮ ಸಾಮರಸ್ಯದ ಝರಿ ಬತ್ತದಂತೆ ಕಾಯ್ದುಕೊಂಡು ಹೋಗುತ್ತಿದ್ದಾರೆ. ಇವರ ನಡುವೆ ಪ್ರಜ್ಞಾ ಮತ್ತು ಈಶ್ವರಪ್ಪನ ದನಿ ಕರ್ಕಷವಾಗುತ್ತಿದೆಯಷ್ಟೇ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಮಿಳುನಾಡು| ರಸ್ತೆ ಅಪಘಾತದಲ್ಲಿ ಇಬ್ಬರು ದಲಿತ ಯುವಕರು ಸಾವು; ಜಾತಿ ವೈಷಮ್ಯ ಆರೋಪ

ತಮಿಳುನಾಡಿನ ಧರ್ಮಪುರಿಯಲ್ಲಿ ಬುಧವಾರ ರಾತ್ರಿ ಚಿನ್ನಾರ್ಥಳ್ಳಿ ಕೂಟ್ ರಸ್ತೆಯ ಬಳಿ ಅಪರಿಚಿತ ವಾಹನವೊಂದು ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸೊನ್ನಂಪಟ್ಟಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ ಎಂದು...

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...