Homeಕರ್ನಾಟಕಅವಕಾಶವಾದವನ್ನು ಸಿದ್ಧಾಂತವಾಗಿಸಿಕೊಂಡಾಗ ವಿಶ್ವಾಸ ಉಳಿಯುವ ಬಗೆ ಎಂತು?

ಅವಕಾಶವಾದವನ್ನು ಸಿದ್ಧಾಂತವಾಗಿಸಿಕೊಂಡಾಗ ವಿಶ್ವಾಸ ಉಳಿಯುವ ಬಗೆ ಎಂತು?

- Advertisement -
- Advertisement -

ಅವಕಾಶವಾದವು ನಮ್ಮ ಸಿದ್ಧಾಂತದ ಭಾಗ ಎಂದು ಬಹಿರಂಗವಾಗಿ ಘೋಷಿಸಿಕೊಂಡಿರುವ ಪಕ್ಷ ಬಹುಜನ ಸಮಾಜ ಪಕ್ಷ. ಆ ಪಕ್ಷದ ಸಿದ್ಧಾಂತದ ಕುರಿತು ಸಾವಿರಾರು ಯುವಜನರಿಗೆ ಪಾಠ ಹೇಳಿದವರು ಎನ್.ಮಹೇಶ್. ಇಂದು ನಡೆದ ವಿಶ್ವಾಸಮತ ಯಾಚನೆಯಲ್ಲಿ ತಮ್ಮ ಪಕ್ಷದ ಅಧಿನಾಯಕಿ ಮಾಯಾವತಿಯವರ ಸೂಚನೆಯನ್ನೂ ಧಿಕ್ಕರಿಸಿ ಗೈರು ಹಾಜರಾಗಿದ್ದಾರೆ. ಇದು ಹಲವರಿಗೆ ಶಾಕಿಂಗ್ ಇರಬಹುದು; ಆದರೆ ಆಶ್ಚರ್ಯಕರವಲ್ಲ. ಏಕೆಂದರೆ ಅವಕಾಶವಾದವು ಸಿದ್ಧಾಂತದ ಭಾಗ.

ಇನ್ನು ಕೆಲವರಿಗೆ ಶಾಕ್ ಅನಿಸಿರುವುದು ಎಚ್.ವಿಶ್ವನಾಥ್ ಅವರ ನಡವಳಿಕೆ. ಅವರು ಪುಸ್ತಕವೊಂದರಲ್ಲಿ ಬರೆದ ಕೆಲವು ಭಾಗಗಳನ್ನು ಡಿ.ಕೆ.ಶಿವಕುಮಾರ್ ಸದನದಲ್ಲಿ ಓದಿ ಹೇಳಿದರು. ಪಕ್ಷಾಂತರಿಗಳ ಯಾವುದೇ ವಾದವು ನಂಬಲರ್ಹವಲ್ಲ ಎಂದು ಸ್ವತಃ ವಿಶ್ವನಾಥ್ ಬರೆದಿರುವ ಮಾತುಗಳವು. ದೀರ್ಘಕಾಲದ ತಮ್ಮ ರಾಜಕೀಯ ವಿರೋಧಿ ಸಾ.ರಾ.ಮಹೇಶ್ ಸದನದಲ್ಲಿ ಹೇಳಿದ ನೈತಿಕತೆಯ ಪಾಠವನ್ನು ಮುಂಬೈನ ಹೋಟೆಲ್ ರೂಂನ ಟಿವಿಯಲ್ಲಿ ಎಚ್.ವಿಶ್ವನಾಥ್ ಕೇಳಿಸಿಕೊಂಡಿರುತ್ತಾರೆ. ‘ಇಂಥವರಿಂದ ತಾನು ಬುದ್ಧಿವಾದ ಕೇಳಬೇಕಾಯಿತು’ ಎಂದು ಪಕ್ಕದಲ್ಲಿದ್ದವರಿಗೆ ಹೇಳಿರದಿದ್ದರೆ ಅದು ಆಶ್ಚರ್ಯ. ಆದರೆ, ವಿಶ್ವನಾಥ್ ಇಂದು ಗಟಾರದ ರಾಜಕಾರಣದ ಭಾಗವಾಗಿರುವುದರಲ್ಲಿ ಸಂಶಯವೇ ಇಲ್ಲ.

ಸದನದಲ್ಲಿ ಶಿವಲಿಂಗೇಗೌಡ ಮತ್ತು ಬಿ.ನಾರಾಯಣರಾವ್‍ರ ಮಾತುಗಳು ಒಳಗಿನಿಂದ ಬಂದ ಮಾತುಗಳು ಎಂದು ಅನಿಸಿದ್ದರಿಂದ ಅವುಗಳು ಎಲ್ಲರ ಹೃದಯಕ್ಕೆ ತಟ್ಟಿದವು. ಕೃಷ್ಣಭೈರೇಗೌಡರ ಪ್ರಾಮಾಣಿಕತೆಯನ್ನು ಅನುಮಾನಿಸಲೂ ಕಾರಣಗಳಿಲ್ಲ.
ಆದರೆ, ಇಂಥದೇ ಮಾತನ್ನು ಸ್ವತಃ ಸ್ಪೀಕರ್ ರಮೇಶ್‍ಕುಮಾರ್‍ರ ಕುರಿತು ಹೇಳುವುದು ಸಾಧ್ಯವಿಲ್ಲ. ಅಪಾರ ಅನುಭವ, ಬುದ್ಧಿವಂತಿಕೆ ಮತ್ತು ಹಣಕಾಸಿನ ವಿಚಾರದಲ್ಲಿ ಎಂದೂ ಭ್ರಷ್ಟರಾಗದ ಮತ್ತು ಜಾತಿವಾದಿಯಾಗದ ರಮೇಶ್‍ಕುಮಾರ್ ಪಕ್ಷಾಂತರ ಮಾಡದೇ ತಮ್ಮ ಪಕ್ಷದ (ಸ್ಪೀಕರ್‍ಗೆ ಪಕ್ಷ ಇರುವುದಿಲ್ಲ ಎಂಬುದು ತಾಂತ್ರಿಕವಾದ ಸಂಗತಿಯಷ್ಟೇ) ಅಭ್ಯರ್ಥಿ ಸೋಲಲು ಮೊನ್ನೆಯ ಚುನಾವಣೆಯಲ್ಲಿ ತಮ್ಮ ಕೊಡುಗೆಯನ್ನೂ ಸಲ್ಲಿಸಿದ್ದರು. ಮಿಕ್ಕಂತೆ ಸ್ವಚ್ಛ ರಾಜಕಾರಣದ ಹಾಗೂ ತತ್ವನಿಷ್ಠೆಯ ಕುರಿತು ಅವರಾಡುವ ಮಾತುಗಳಲ್ಲಿ ಇಂತಹ ದ್ವಂದ್ವಗಳು ಇದ್ದೇ ಇವೆ.

ಮುಂದೊಂದು ದಿನ ತಾನು ಮುಖ್ಯಮಂತ್ರಿಯಾಗಲೇಬೇಕು, ಬಿಜೆಪಿಗೆ ಹೋದರೆ ಅದು ಸಾಧ್ಯವೇ ಇಲ್ಲ ಎಂದು ಖಚಿತವಾಗಿ ಗೊತ್ತಿರುವ ಡಿ.ಕೆ.ಶಿವಕುಮಾರ್ ಅದಕ್ಕಾಗಿ ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ. ಆದರೆ, ಇದೇ ಯಡಿಯೂರಪ್ಪನವರ ಜೊತೆಗಿನ ಅವರ ಸಖ್ಯ ಮತ್ತು ಇಂಧನ ಇಲಾಖೆಯ ಅವ್ಯವಹಾರದಲ್ಲಿ ಯಡಿಯೂರಪ್ಪನವರಿಗೆ ಮಾಡಿದ ಉಪಕಾರವನ್ನು ಪಕ್ಷಾಂತರ ಎಂದು ಕರೆಯಲಾಗದು. ಆದರೆ, ಪಕ್ಷ ಮೀರಿದ ಸಖ್ಯ ಕೇವಲ ಮನುಷ್ಯ ಸಂಬಂಧವಲ್ಲ. ಅದರಲ್ಲಿ ವ್ಯವಹಾರಿಕ ಮತ್ತು ಸ್ವಾರ್ಥದ ಲೆಕ್ಕಾಚಾರಗಳಿವೆ.

ದೇವೇಗೌಡರ ಕುಟುಂಬದ ಅವಕಾಶವಾದಕ್ಕೆ ಎಣೆಯೇ ಇಲ್ಲ. ಅವರಾಡುವ ಯಾವ ಮಾತುಗಳನ್ನೂ ನಂಬಬಹುದು ಎನಿಸುವುದಿಲ್ಲ. ನಿಖಿಲ್‍ನ್ನು ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿಸಿದ್ದೇಕೆ ಎಂಬ ಕುರಿತು ಮಂಡ್ಯದ ಸಿಲ್ವರ್ ಜ್ಯುಬಿಲಿ ಪಾರ್ಕ್‍ನಲ್ಲಿ ದೇವೇಗೌಡರು ವಿವರಿಸಿದ್ದನ್ನು ಸ್ವತಃ ನಿಖಿಲ್ ನಂಬಿರುವುದಿಲ್ಲ.

ಪಕ್ಷ ಸಿದ್ಧಾಂತ, ಭಾರತೀಯ ಸಂಸ್ಕøತಿ, ಭ್ರಷ್ಟಾಚಾರಕ್ಕೆ ವಿರೋಧ, ಕಾಂಗ್ರೆಸ್ ಸಂಸ್ಕøತಿಗೆ ಪ್ರತಿರೋಧ, ಪಕ್ಷಕ್ಕೆ ಬದ್ಧರಾಗಿ ದುಡಿವ ಕಾರ್ಯಕರ್ತರಿಗೆ ಮನ್ನಣೆ ಇತ್ಯಾದಿಗಳನ್ನು ಹೇಳುತ್ತಾ ಬಂದಿರುವ ಬಿಜೆಪಿ ಈಗಲೂ ಆ ಮಾತುಗಳನ್ನು ಹೇಳಲು ಹಿಂಜರಿಯುವುದಿಲ್ಲ. ಅದೇ ಸೋಜಿಗದ ಸಂಗತಿ. ಆ ಹಿಂಜರಿಕೆಯೂ ಏಕಿಲ್ಲವೆಂದರೆ ಅದರಷ್ಟೇ ಅವಕಾಶವಾದಿಯಾದ ಮಾಧ್ಯಮ ಸಮೂಹ ಅಂತಹ ಪ್ರಶ್ನೆಗಳು ವಿರೋಧ ಪಕ್ಷಗಳಿಗೆ ಕೇಳಲು ಮಾತ್ರ ಇವೆಯೆಂದು ಭಾವಿಸಿವೆ. ಮಾಧ್ಯಮಗಳು ಮತ್ತು ಬಿಜೆಪಿ ಪಕ್ಷ ಎನ್ನುವುದು ಒಂದೇ ಪ್ಯಾಕೇಜ್‍ನ ಭಾಗ.
ಬಿಜೆಪಿ ಪಕ್ಷದಲ್ಲಿ ಸಜ್ಜನರೆಂದು ತೋರಿಸಿಕೊಳ್ಳಲು ಹಾತೊರೆಯುವ ಶಾಸಕರೊಬ್ಬರಿದ್ದಾರೆ. ರಾಜಾಜಿನಗರದ ಸುರೇಶ್‍ಕುಮಾರ್. ಅವರು ‘ವಿಶ್ವಾಸಮತ ಯಾಚನೆಗೆ ಮುಂದಾದ ಮೇಲೂ ವರ್ಗಾವಣೆಗಳನ್ನು ಮಾಡುತ್ತಿರುವ ಕುಮಾರಸ್ವಾಮಿ ಸರ್ಕಾರವನ್ನು’ ಸಕಾರಣವಾಗಿ ತರಾಟೆಗೆ ತೆಗೆದುಕೊಳ್ಳುತ್ತಾರೆ. ಆದರೆ, ತಮ್ಮ ಪಕ್ಷದಿಂದ ಮುಖ್ಯಮಂತ್ರಿ ಮಾಡಲು ಹೊರಟಿರುವ ಯಡಿಯೂರಪ್ಪನವರು ಈ ಹಿಂದೆ ಪ್ರಮಾಣವಚನ ಸ್ವೀಕರಿಸಿ ವಿಶ್ವಾಸಮತ ಯಾಚನೆ ಮಾಡುವುದಕ್ಕೆ ಮುಂಚೆಯೇ ವರ್ಗಾವಣೆ ಮಾಡಿದ್ದನ್ನು ಮರೆಯುತ್ತಾರೆ. ಇಂತಹವರ ಅವಕಾಶವಾದಕ್ಕೆ ಸಾವಿರಾರು ಉದಾಹರಣೆಗಳು ಸಿಗುತ್ತವೆ.

ಈಗಾಗಲೇ ಹೇಳಿರುವಂತೆ ಅವಕಾಶವಾದಕ್ಕೆ ಮತ್ತೊಂದು ಹೆಸರೇ ಮಾಧ್ಯಮವಾಗಿದೆ. ಒಂದೇ ಬಗೆಯ ಎರಡು ಪ್ರಕರಣಗಳಲ್ಲಿ ಬಿಜೆಪಿ ಅಥವಾ ವಿರೋಧ ಪಕ್ಷಗಳಲ್ಲಿ ಯಾರು ಇದ್ದಾರೆ ಎಂಬುದರ ಮೇಲೆ ಅವರ ನಿಲುವೇ ಬದಲಾಗುತ್ತದೆ. ಪಕ್ಷವೊಂದರ ಪರವಾಗಿ ಪ್ರಚಾರಕ್ಕೇ ನಿಂತಿರುವ ಉಪಕರಣ ಅದು.

ಈ ರೀತಿಯಾಗಿ ಅವಕಾಶವಾದವನ್ನೇ ಬಿತ್ತಿ ಬೆಳೆದಿರುವ ಇಂದಿನ ರಾಜಕಾರಣದಲ್ಲಿ ಯಾವ ವಿಶ್ವಾಸ ಉಳಿದಿದೆ. ಕೆಲವು ಅತ್ಯುತ್ತಮ ಭಾಷಣಗಳನ್ನೂ, ಸಾಂವಿಧಾನಿಕ ನಡಾವಳಿಗಳನ್ನೂ ಕಂಡ ವಿಶ್ವಾಸಮತ ಯಾಚನೆಯ ಅಧಿವೇಶನದಲ್ಲಿ ಒಂದೆರಡು ಉತ್ತಮ ಅಂಶಗಳು ಇದ್ದವು. ಆದರೆ, ಅದಕ್ಕಿಂತ ನೂರು ಪಟ್ಟು ಕೊಳಕು ಎದ್ದು ಕಾಣುತ್ತಿತ್ತು. ತಮ್ಮನ್ನು, ತಮ್ಮ ಪಕ್ಷವನ್ನು ವಾಚಾಮಗೋಚರವಾಗಿ ಬಯ್ಯುತ್ತಿದ್ದಾಗ ಅದಕ್ಕೆ ಪ್ರತ್ಯುತ್ತರವನ್ನು ಕೊಡದೇ ವಿರೋಧ ಪಕ್ಷ ಕೂತಿದ್ದು ಇತಿಹಾಸದಲ್ಲಿ ದಾಖಲಾಗಿ ನಿಲ್ಲುತ್ತದೆ. ಹಾಗಾಗಿ ರಾಜಕೀಯ ವ್ಯವಸ್ಥೆಯ ವಿರುದ್ಧವೇ ಅವಿಶ್ವಾಸವು ಮೂಡುವಂತಹ ವಾತಾವರಣ ಇಂದು ಮೇಲುಗೈ ಸಾಧಿಸಿದೆ.

ಅವಕಾಶವಾದ ಹಾಗೂ ಅನೈತಿಕ ರಾಜಕಾರಣದ ಮೂಲಕ್ಕೆ ಹೋಗಿ ಅದಕ್ಕೆ ಮದ್ದು ಕಂಡುಹಿಡಿದಾಗ ಮಾತ್ರ ವಿಶ್ವಾಸ ಹುಟ್ಟುತ್ತದೆ. ಆ ನಿಟ್ಟಿನಲ್ಲಿ ಮಾನ-ಮರ್ಯಾದೆ ಇರುವ ಎಲ್ಲರೂ ಪ್ರಯತ್ನಿಸುವ ಅಗತ್ಯ ಎದುರಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗೋಮಾಂಸ ಸಾಗಣೆ ಆರೋಪದ ಮೇಲೆ ವಾಹನ ಮುಟ್ಟುಗೋಲು: ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ಗೋಮಾಂಸ ಸಾಗಣೆ ಮಾಡುತ್ತಿದ್ದಾರೆ ಎಂದು ಕೇವಲ ಅನುಮಾನದ ಮೇಲೆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದು ಕಾನೂನುಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಅಂತಹ ಯಾವುದೇ ಕ್ರಮ ತೆಗೆದುಕೊಳ್ಳುವ ಮೊದಲು ವೈಜ್ಞಾನಿಕ ದೃಢೀಕರಣ ಅಗತ್ಯ...

ಎಕ್ಸಿಟ್‌ ಪೋಲ್ಸ್‌ಗಳು ‘ಹಣ-ಒತ್ತಡ’ದಿಂದ ಕೂಡಿವೆ; ಟಿಎಂಸಿ 226 ಸ್ಥಾನಗಳನ್ನು ಮೀರಲಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನದ ನಂತರ ಇತ್ತೀಚಿನ ಚುನಾವಣೋತ್ತರ ಸಮೀಕ್ಷೆಗಳ ವಿಶ್ವಾಸಾರ್ಹತೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಲವಾಗಿ ತಳ್ಳಿಹಾಕಿದ್ದಾರೆ. ಅವರ ಪಕ್ಷವಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) 294 ಸದಸ್ಯರ ವಿಧಾನಸಭೆಯಲ್ಲಿ 226...

ಗುಜರಾತ್‌| ರಾಮ ಮಂದಿರ ಕಾರ್ಯಕ್ರಮದಲ್ಲಿ ದಲಿತರಿಗೆ ಪ್ರತ್ಯೇಕ ಊಟದ ವ್ಯವಸ್ಥೆ; ಅಸ್ಪೃಶ್ಯತೆ ಆಚರಣೆ ಆರೋಪ

ಗುಜರಾತ್‌ನ ಜುನಾಗಢ್ ಜಿಲ್ಲೆಯಲ್ಲಿ ಜಾತಿ ತಾರತಮ್ಯದ ಆರೋಪ ಹೊರಿಸಲಾಗಿದ್ದು, ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ದೇವಾಲಯದ ಆಯೋಜಕರು ಅಸ್ಪೃಶ್ಯತೆ ಆಚರಿಸುತ್ತಿದ್ದಾರೆ ಎಂದು ದಲಿತ ಸಮುದಾಯದ ಸದಸ್ಯರು ಆರೋಪಿಸಿದ್ದಾರೆ. ಭುಟ್ಡಿ ಗ್ರಾಮದ ನಿವಾಸಿ 25 ವರ್ಷದ ಅಜಯ್...

ಕೋಗಿಲು ಬಡಾವಣೆ ಮನೆಗಳ ನೆಲಸಮ: ಹದಿನೈದು ದಿನಗಳೊಳಗೆ ಪುನರ್ವಸತಿ ಕಲ್ಪಿಸದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ

ಬೆಂಗಳೂರು ಉತ್ತರ ತಾಲ್ಲೂಕಿನ ಯಲಹಂಕ ಪ್ರದೇಶದ ಕೋಗಿಲು ಲೇಔಟ್‌ನ ಫಕೀರ್ ಕಾಲೋನಿ ಮತ್ತು ಮಹಾನಾಯಕ ಅಂಬೇಡ್ಕರ್ ನಗರ (ವಾಸಿಂ ಲೇಔಟ್‌) ಪ್ರದೇಶದ ಬಡ ನಿವಾಸಿಗಳ ಮನೆಗಳನ್ನು 2025 ಡಿಸೆಂಬರ್ 20ರಂದು ಬೆಳಿಗ್ಗೆ ಸುಮಾರು...

ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟ 95.20 ರೂ.ಗೆ ಕುಸಿತ ಕಂಡ ಭಾರತೀಯ ರೂಪಾಯಿ ಮೌಲ್ಯ 

ನವದೆಹಲಿ: ಏಪ್ರಿಲ್ 30ರಂದು ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಮೌಲ್ಯವು ಅಮೆರಿಕನ್ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 95.07 ಕ್ಕೆ ಕುಸಿದಿದೆ. ಕರೆನ್ಸಿ 0.4% ಕುಸಿತದೊಂದಿಗೆ 95.2325 ಕ್ಕೆ ಇಳಿದಿದೆ. ಇದು ಮಾರ್ಚ್...

ತಮಿಳುನಾಡು| ದಲಿತ ಯುವಕನ ಶವ ಪತ್ತೆ; ‘ಜಾತಿ ಕಾರಣಕ್ಕೆ ಹತ್ಯೆಯಾಗಿದೆ’ ಎಂದು ಕುಟುಂಬದ ಆರೋಪ

ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲೆಯ ಕ್ವಾರಿ ಕೆರೆಯ ಬಳಿ 20 ವರ್ಷದ ದಲಿತ ಯುವಕನ ಶವ ಪತ್ತೆಯಾಗಿದ್ದು, ಹಿಂದುಳಿದ ವರ್ಗದ ಯುವತಿಯೊಂದಿಗಿನ ಸಂಬಂಧದಿಂದಾಗಿ ಆತನನ್ನು ಕೊಲ್ಲಲಾಗಿದೆ ಎಂದು ಆತನ ಕುಟುಂಬ ಆರೋಪಿಸಿದೆ. ಆದರೆ, ಈ...

‘ಬಾಲ ಕಾರ್ಮಿಕ’ ಶಂಕೆಯ ಮೇಲೆ 155 ಮುಸ್ಲಿಂ ವಿದ್ಯಾರ್ಥಿಗಳ ಬಂಧನ: ಧಾರ್ಮಿಕ ಗುರುತಿನ ಕಾರಣಕ್ಕೆ ಬಂಧಿಸಿರುವುದಾಗಿ ಪೋಷಕರ ಆರೋಪ

ಮಧ್ಯಪ್ರದೇಶದ ಕಟ್ನಿಯಲ್ಲಿ ಸರ್ಕಾರಿ ರೈಲ್ವೆ ಪೊಲೀಸರು (GRP) 155 ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಎಂಟು ಶಿಕ್ಷಕರನ್ನು "ಬಾಲ ಕಾರ್ಮಿಕ" ಶಂಕೆಯ ಮೇಲೆ ಬಂಧಿಸಿದ ನಂತರ, ಪೋಷಕರು ಮುಸ್ಲಿಂ ವಿರೋಧಿ ಪಕ್ಷಪಾತವನ್ನು ಹೊಂದಿದ್ದಾರೆಂದು ಆರೋಪಿಸಿದ್ದಾರೆ....

ಜನಿವಾರದ ಹಿಂದೆ ಬಿದ್ದಿರುವ ವಿರೋಧ ಪಕ್ಷ ಮತ್ತು ಮಾಧ್ಯಮಗಳು

ಏಪ್ರಿಲ್ 23, 2026 ರಂದು ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ವೇಳೆ ಬೆಂಗಳೂರಿನ ಕೋರಮಂಗಲದಲ್ಲಿರುವ ಕೃಪಾನಿಧಿ ಪಿಯು ಕಾಲೇಜಿನಲ್ಲಿ ಐವರು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಿದ ಘಟನೆ ರಾಜಕೀಯ...

ಒಡಿಶಾ| ಸಾವಿನ ದಾಖಲೆ ಕೇಳಿದ ಬ್ಯಾಂಕ್‌ ಸಿಬ್ಬಂದಿ; ಸಮಾದಿ ಅಗೆದು ಸಹೋದರಿಯ ಅಸ್ಥಿಪಂಜರ ತಂದ ಬುಡಕಟ್ಟು ವ್ಯಕ್ತಿ

ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ, ಬುಡಕಟ್ಟು ವ್ಯಕ್ತಿಯೊಬ್ಬ ತನ್ನ ಮೃತ ಸಹೋದರಿಯ ಅಸ್ಥಿಪಂಜರವನ್ನು ಅಗೆದು ಗ್ರಾಮೀಣ ಬ್ಯಾಂಕ್‌ಗೆ ತೆಗೆದುಕೊಂಡು ಹೋಗಿದ್ದಾನೆ. ಆಕೆಯ ಸಾವನ್ನು ಸಾಬೀತುಪಡಿಸುವ ಮೂಲಕ ಆಕೆಯ ಖಾತೆಯಲ್ಲಿ ಜಮಾ ಮಾಡಿದ ಹಣವನ್ನು ಪಡೆಯಲು...

ಜಾತಿ ಕಿರುಕುಳಕ್ಕೆ ದಲಿತ ವಿದ್ಯಾರ್ಥಿ ಸಾವು ಪ್ರಕರಣ: ಇಂದು ಸಂಜೆ 6 ರವರೆಗೆ ಕೇರಳ ಬಂದ್

ಜಾತಿ ಆಧಾರಿತ ಕಿರುಕುಳದಿಂದ ಮನನೊಂದಿದ್ದ ಕೇರಳದ ಅಂಚರಕಂಡಿಯ ಕಣ್ಣೂರು ದಂತ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಡಿಎಸ್ ವಿದ್ಯಾರ್ಥಿ ಆರ್.ಎಲ್. ನಿತಿನ್ ರಾಜ್ ಆತ್ಮಹತ್ಯೆಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆ...