Homeಕರ್ನಾಟಕಮಂಗಳೂರು: ಮುಸ್ಲಿಮರ ವ್ಯಾಪಾರ ನಿಷೇಧಿಸಿದೆ ಎಂದು ಹಾಕಲಾಗಿದ್ದ ಬ್ಯಾನರ್‌ ತೆರವು

ಮಂಗಳೂರು: ಮುಸ್ಲಿಮರ ವ್ಯಾಪಾರ ನಿಷೇಧಿಸಿದೆ ಎಂದು ಹಾಕಲಾಗಿದ್ದ ಬ್ಯಾನರ್‌ ತೆರವು

‘ದೇವಾಲಯಗಳ ಬಳಿ ಮುಸ್ಲಿಮರು ವ್ಯಾಪಾರ ಮಾಡುವಂತಿಲ್ಲ ಎಂಬ ವಾದಕ್ಕೆ ಕಾನೂನು, ಸಂವಿಧಾನದಲ್ಲಿ ಅವಕಾಶವಿಲ್ಲ’

- Advertisement -
- Advertisement -

ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಜಾತ್ರೆಯಲ್ಲಿ ದೇವಸ್ಥಾನದ ಬಳಿ ಮುಸ್ಲಿಮರು ವ್ಯಾಪಾರ ಚಟುವಟಿಕೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ಹಾಕಲಾಗಿದ್ದ ಬ್ಯಾನರ್‌ಗಳನ್ನು ಮಂಗಳೂರು ಪೊಲೀಸರು ತೆರವು ಮಾಡಿದ್ದಾರೆ. ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದವರು ಬ್ಯಾನರ್‌ಗಳನ್ನು ಹಾಕಿದ್ದಾರೆ ಎಂದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಜಾತ್ರೆಯು ಜನವರಿ 15ರಂದು ಪ್ರಾರಂಭವಾಗಿ ಜನವರಿ 21ರಂದು ಕೊನೆಗೊಳ್ಳಲಿದೆ. ಬಲಪಂಥೀಯ ಸಂಘಟನೆಗಳು ಹಾಕಿರುವ ಬ್ಯಾನರ್‌ಗಳಲ್ಲಿ ನವೆಂಬರ್ 19ರಂದು ಮಂಗಳೂರಿನಲ್ಲಿ ನಡೆದ ಕುಕ್ಕರ್ ಸ್ಫೋಟದ ಬಗ್ಗೆ ಉಲ್ಲೇಖಿಸಲಾಗಿದೆ. ಪ್ರಕರಣದಲ್ಲಿ ಮೊಹಮ್ಮದ್ ಶಾರಿಕ್ ಎಂಬ ವ್ಯಕ್ತಿಯನ್ನು ಬಂಧಿಸಲಾಯಿತು. ಆತ ಕದ್ರಿ ಮಂಜುನಾಥ ದೇವಾಲಯವನ್ನು ಟಾರ್ಗೆಟ್ ಮಾಡಿದ್ದ ಎಂದು ಆರೋಪಿಸಲಾಗಿದೆ. ಇಂತಹ ‘ಮನಸ್ಸು’ ಹೊಂದಿರುವವರು ಮತ್ತು ಮೂರ್ತಿ ಪೂಜೆಯನ್ನು ವಿರೋಧಿಸುವವರು ಪೂಜಾ ಸ್ಥಳದ ಬಳಿ ಜಾತ್ರೆಯ ಸಮಯದಲ್ಲಿ ವ್ಯಾಪಾರ ಮತ್ತು ವ್ಯವಹಾರದಲ್ಲಿ ತೊಡಗುವಂತಿಲ್ಲ ಎಂದು ಬ್ಯಾನರ್‌ನಲ್ಲಿ ಹೇಳಲಾಗಿದೆ.

ಹಿಂದೂ ಧರ್ಮದ ಆಚರಣೆಗಳನ್ನು ನಂಬುವ ವ್ಯಾಪಾರಿಗಳಿಗೆ ಮಾತ್ರ ದೇವಾಲಯದ ಬಳಿ ವ್ಯಾಪಾರ ಮತ್ತು ವ್ಯವಹಾರವನ್ನು ಮುಂದುವರಿಸಲು ಅವಕಾಶವಿದೆ ಎಂದು ಬ್ಯಾನರ್‌ಗಳಲ್ಲಿ ತಿಳಿಸಲಾಗಿದೆ.

ಆದರೆ, ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ದೇವಸ್ಥಾನದ ಆಡಳಿತ ಮಂಡಳಿಯು ದೇವಸ್ಥಾನದ ಜಾತ್ರೆಯ ಆಸುಪಾಸಿನಲ್ಲಿ ಹಾಕಲಾಗಿದ್ದ ಬ್ಯಾನರ್‌ಗೆ ಒಪ್ಪಿಗೆ ನೀಡಿಲ್ಲ. ಶಾಂತಿ ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಪೊಲೀಸರು ಬ್ಯಾನರ್‌ಗಳನ್ನು ತೆಗೆಸಿದ್ದಾರೆ. ಈ ಸಂಬಂಧ ಇದುವರೆಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹಿಂದೂಯೇತರ ಸಮುದಾಯಗಳು ದೇವಸ್ಥಾನದ ಬಳಿ ವ್ಯಾಪಾರ ಮಾಡಬಾರದು ಎಂದು ಹಿಂದುತ್ವ ಮತೀಯ ಸಂಘಟನೆಗಳು ಆಗಾಗ್ಗೆ ವಿವಾದ ಸೃಷ್ಟಿಸುವುದು ಸಾಮಾನ್ಯವಾಗಿದೆ. 2022ರ ಮಾರ್ಚ್‌ನಲ್ಲಿ ಇಂತಹದ್ದೇ ನಿರ್ಬಂಧ ಉಡುಪಿಯ ಕಾಪುವಿನಲ್ಲಿ ವರದಿಯಾಗಿತ್ತು. ಕರ್ನಾಟಕ ವಿಧಾನಸಭೆಯಲ್ಲೂ ಈ ಕುರಿತು ಚರ್ಚೆಯಾಗಿತ್ತು. ಬಿಜೆಪಿ ಸರ್ಕಾರ ಪರೋಕ್ಷವಾಗಿ ಈ ನಡೆಯನ್ನು ಸಮರ್ಥಿಸಲು ಯತ್ನಿಸಿತ್ತು.

ಹಿಂದೂ ದೇವಾಲಯಗಳ ಬಳಿ ಮುಸ್ಲಿಮರ ವ್ಯಾಪಾರಕ್ಕೆ ನಿಷೇಧ; ಕಾನೂನು ಏನು ಹೇಳುತ್ತದೆ?

2022ರಂದು ಮಾರ್ಚ್ 23ರಂದು ಬುಧವಾರ ಕರ್ನಾಟಕ ವಿಧಾನಸಭೆಯಲ್ಲಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡುತ್ತಾ ಮುಸ್ಲಿಂ ಮಾರಾಟಗಾರರಿಗೆ ನಿರ್ಬಂಧ ವಿಧಿಸುವ ಪೋಸ್ಟರ್‌ಗಳನ್ನು ಸಮರ್ಥಿಸಲು ಪ್ರಯತ್ನಿಸಿದ್ದರು.

2002ರಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಕಾಯಿದೆಗೆ ನಿಯಮಗಳನ್ನು ರೂಪಿಸುವಾಗ ನಿಯಮ 12ರ ಪ್ರಕಾರ ಸಂಸ್ಥೆಯ ಬಳಿ ಇರುವ ಜಮೀನು, ಕಟ್ಟಡ ಅಥವಾ ನಿವೇಶನ ಸೇರಿದಂತೆ ಯಾವುದೇ ಆಸ್ತಿಯನ್ನು ಹಿಂದೂಯೇತರರಿಗೆ ಭೋಗ್ಯಕ್ಕೆ ನೀಡಬಾರದು ಎಂದಿರುವುದನ್ನು ಉಲ್ಲೇಖಿಸಿದ್ದರು.

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಕಾಯಿದೆಯನ್ನು ಮೂಲತಃ 1997ರಲ್ಲಿ ರಚಿಸಲಾಯಿತು. ಆದರೆ 2001ರಲ್ಲಿ ಜಾರಿಗೆ ಬಂದಿತು. ಕಾನೂನು ಶೀಘ್ರದಲ್ಲೇ ವಿವಾದವನ್ನು ಉಂಟುಮಾಡಿತು ಮತ್ತು ಕರ್ನಾಟಕ ಹೈಕೋರ್ಟ್ 2006ರಲ್ಲಿ ಕೆಲವು ಷರತ್ತುಗಳ ಕಾರಣದಿಂದ ಕಾಯ್ದೆಯ ಕಾರ್ಯಾಚರಣೆಯನ್ನು ತಡೆಹಿಡಿಯಿತು.

ಹಿಂದೂಯೇತರರು ಅಂಗಡಿಗಳನ್ನು ದೇವಸ್ಥಾನಗಳಲ್ಲಿ ಅಥವಾ ಸಮೀಪದಲ್ಲಿ ನಡೆಸುವುದನ್ನು ನಿಷೇಧಿಸುವ ಅಥವಾ ಅಂತಹ ನಿಷೇಧಗಳನ್ನು ಜಾರಿಗೆ ತರಲು ದೇವಾಲಯದ ಅಧಿಕಾರಿಗಳಿಗೆ ಅಧಿಕಾರ ನೀಡುವ ಯಾವುದೇ ಷರತ್ತು ಈ ಕಾಯ್ದೆಯಲ್ಲಿಯೇ ಇಲ್ಲ.

2012ರಲ್ಲಿ ಕಾಯ್ದೆಗೆ ಕೆಲವು ತಿದ್ದುಪಡಿಗಳನ್ನು ಸರ್ಕಾರ ತಂದಿತು. ಈ ನಿಯಮಗಳಿಂದಲೇ ಈ ವಿಷಯದ ಬಗ್ಗೆ ಸ್ವಲ್ಪ ಮಟ್ಟಿಗೆ ಗೊಂದಲಕ್ಕೆ ಅವಕಾಶವಿದೆ. ಕರ್ನಾಟಕ ಕಾನೂನು ಸಚಿವರು ಹೇಳಿರುವುದಕ್ಕೆ ವ್ಯತಿರಿಕ್ತವಾಗಿ, ಹಿಂದೂಯೇತರರಿಗೆ ವ್ಯಾಪಾರ ಮಾಡಲು ಅವಕಾಶ ನೀಡುವ ಬಗ್ಗೆ ನಿಯಮ 12 ಏನನ್ನೂ ಹೇಳುವುದಿಲ್ಲ. ದೇವಾಲಯದ ಸೇವಕರು ಮತ್ತು ಅರ್ಚಕರ ನೇಮಕಾತಿಗೆ ಸಂಬಂಧಿಸಿದಂತೆ ನಿಯಮ 12 ಹೇಳುತ್ತದೆ.

ಆದಾಗ್ಯೂ, ನಿಯಮ 31, ಉಪ-ಕಲಂ 12, “ಸಂಸ್ಥೆಯ ಸಮೀಪದಲ್ಲಿರುವ ಭೂಮಿ, ಕಟ್ಟಡ ಅಥವಾ ಸೈಟ್‌ಗಳನ್ನು ಒಳಗೊಂಡಂತೆ ಯಾವುದೇ ಆಸ್ತಿಯನ್ನು ಹಿಂದೂಯೇತರರಿಗೆ ಗುತ್ತಿಗೆ ನೀಡಲಾಗುವುದಿಲ್ಲ” ಎಂದು ಹೇಳುತ್ತದೆ. ನಿಯಮ 31 ಕಾಯ್ದೆಯ ಅಡಿಯಲ್ಲಿ ಅಧಿಸೂಚಿಸಲಾದ ಹಿಂದೂ ಧಾರ್ಮಿಕ ಸಂಸ್ಥೆಯ ಒಡೆತನದ ಸ್ಥಿರ ಆಸ್ತಿಯ ಗುತ್ತಿಗೆಗೆ ಸಂಬಂಧಿಸಿದಂತೆ ಹೇಳುತ್ತದೆ.

ಆದರೆ ಇದರರ್ಥ ಹಿಂದೂ ಹಬ್ಬಗಳಲ್ಲಿ ಮುಸ್ಲಿಂ ಮಾರಾಟಗಾರರಿಗೆ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗುವುದಿಲ್ಲವೇ?

ಹಿರಿಯ ವಕೀಲ ಚಂದರ್ ಉದಯ್ ಸಿಂಗ್ ಅವರು ಇಲ್ಲ ಎಂದು ಹೇಳುತ್ತಾರೆ. ಏಕೆಂದರೆ ನಿಯಮ 31 ದೇವಸ್ಥಾನದ ಒಡೆತನದ ಸ್ಥಿರ ಆಸ್ತಿಯ ದೀರ್ಘಾವಧಿಯ ಗುತ್ತಿಗೆಗೆ ಮಾತ್ರ ಅನ್ವಯಿಸುತ್ತದೆ (ಭೂಮಿ ಗುತ್ತಿಗೆ 30 ವರ್ಷಗಳವರೆಗೆ ಮತ್ತು ಅಂಗಡಿಗಳು, ಕಟ್ಟಡಗಳ ಗುತ್ತಿಗೆ ಐದು ವರ್ಷಗಳವರೆಗೆ).

ಹಬ್ಬದ ಸಮಯದಲ್ಲಿ ವರ್ತಕರು ಮಳಿಗೆ ಅಥವಾ ಸ್ಥಳಗಳನ್ನು ಅಲ್ಪಾವಧಿಗೆ ಬಳಸುವ ಪರವಾನಗಿಗೆ ಇದು ಅನ್ವಯಿಸುವುದಿಲ್ಲ.

ವಾಸ್ತವವಾಗಿ, ಈ ‘ಜಾತ್ರೆಗಳ’ ನಡವಳಿಕೆಗೆ ಸಂಬಂಧಿಸಿದಂತೆ ಒಂದು ನಿರ್ದಿಷ್ಟ ನಿಯಮವಿದೆ. ನಿಯಮಗಳು 40-ಡಿ ದೇವಸ್ಥಾನದ ಜಾತ್ರೆಗಳಿಗೆ ಸಂಬಂಧಿಸಿದೆ. ಇದು ಹಿಂದೂಗಳಲ್ಲದವರ ಬಗ್ಗೆ ಏನನ್ನೂ ಹೇಳುವುದಿಲ್ಲ. 40-ಡಿ ನಿಯಮವು ಈ ಉತ್ಸವಗಳಲ್ಲಿ ಶುಲ್ಕವನ್ನು ಸಂಗ್ರಹಿಸುವ ಹಕ್ಕಿನ ಕುರಿತು, ಹರಾಜು ಅಥವಾ ಟೆಂಡರ್ ಮೂಲಕ ಹೆಚ್ಚಿನ ಬಿಡ್ದಾರರಿಗೆ ಹಂಚುವ ವಿಧಾನದ ಕುರಿತು ಹೇಳುತ್ತದೆ.

ಈ ನಿಯಮವನ್ನು 2012ರಲ್ಲಿ ಸೇರಿಸಲಾಗಿದೆ. ಕಳೆದ 10 ವರ್ಷಗಳಿಂದಲೂ ಮುಸ್ಲಿಂ ವ್ಯಾಪಾರಿಗಳು ಹಬ್ಬಗಳಲ್ಲಿ ಮಳಿಗೆಗಳನ್ನು ಹಾಕುವಲ್ಲಿ ಯಾವುದೇ ತೊಂದರೆಯನ್ನು ಎದುರಿಸಿಲ್ಲ. 2002 ರಿಂದ ಜಾರಿಯಲ್ಲಿರುವ ನಿಯಮ 31, ಹಿಂದೂ ಹಬ್ಬಗಳಲ್ಲಿ ಮುಸ್ಲಿಮರು ಮಳಿಗೆಗಳನ್ನು ಹಾಕುವುದನ್ನು ನಿಷೇಧಿಸುವುಕ್ಕೆ ಈ 20 ವರ್ಷಗಳಲ್ಲಿ ಎಂದಿಗೂ ಬಳಕೆಯಾಗಿಲ್ಲ.

ದೇವಾಲಯದ ಅಧಿಕಾರಿಗಳು ಸಂವಿಧಾನದ ಆರ್ಟಿಕಲ್ 15(2) ಅನ್ನು ಉಲ್ಲಂಘಿಸುತ್ತಿದ್ದಾರೆಯೇ?

ಮುಸ್ಲಿಂ ಮಾರಾಟಗಾರರನ್ನು ಜಾತ್ರೆಗಳಿಂದ ನಿಷೇಧಿಸುವ ಕ್ರಮಗಳನ್ನು ದೇವಸ್ಥಾನದ ಅಧಿಕಾರಿಗಳು ಕಾಯಿದೆ ಅಥವಾ ನಿಯಮಗಳ ಆಧಾರದ ಮೇಲೆ ಸಮರ್ಥಿಸಲು ಸಾಧ್ಯವಿಲ್ಲ.ಅವರು ಅಗತ್ಯವಾಗಿ ಕಾನೂನುಬಾಹಿರವಾಗಿ ಏನಾದರೂ ಮಾಡುತ್ತಿದ್ದಾರೆ ಎಂದು ಅರ್ಥವಲ್ಲ.

ಅವರು ಸರ್ಕಾರಿ ಅಧಿಕಾರಿಗಳಲ್ಲದ ಕಾರಣ, ಸಂವಿಧಾನದ 15 (1) ವಿಧಿಯಲ್ಲಿನ ತಾರತಮ್ಯ ವಿರೋಧಿ ಅವರು ಷರತ್ತಿಗೆ ಒಳಪಡುವುದಿಲ್ಲ. “ಸರ್ಕಾರವು ಯಾವುದೇ ನಾಗರಿಕರ ವಿರುದ್ಧ ಕೇವಲ ಧರ್ಮ, ಜನಾಂಗ, ಜಾತಿ, ಹುಟ್ಟಿದ ಸ್ಥಳ, ಲಿಂಗ ಅಥವಾ ಅವುಗಳಲ್ಲಿ ಯಾವುದಾದರೂ ಆಧಾರದ ಮೇಲೆ ತಾರತಮ್ಯ ಮಾಡಬಾರದು” ಎಂದು ಸಂವಿಧಾನ 15 (1) ವಿಧಿ ಹೇಳುತ್ತದೆ.

ಆದರೆ 15ನೇ ವಿಧಿಯ ಉಪ-ಕಲಂ 2 ರಲ್ಲಿ, ನಾಗರಿಕರ ನಡುವಿನ ತಾರತಮ್ಯವನ್ನೂ ನಿಷೇಧಿಸಲಾಗಿದೆ. “ಯಾವುದೇ ನಾಗರಿಕನು ಕೇವಲ ಧರ್ಮ, ಜನಾಂಗ, ಜಾತಿ, ಲಿಂಗ, ಜನ್ಮಸ್ಥಳ ಅಥವಾ ಅವುಗಳಲ್ಲಿ ಯಾವುದಾದರೂ ಆಧಾರದ ಮೇಲೆ ಯಾವುದೇ ಅಂಗವೈಕಲ್ಯ, ಹೊಣೆಗಾರಿಕೆ, ನಿರ್ಬಂಧ ಅಥವಾ ಷರತ್ತುಗಳಿಗೆ ಒಳಪಟ್ಟಿರುವುದಿಲ್ಲ: (ಎ) ಅಂಗಡಿಗಳು, ಸಾರ್ವಜನಿಕ ರೆಸ್ಟೋರೆಂಟ್‌ಗಳಿಗೆ ಪ್ರವೇಶ, ಹೋಟೆಲ್‌ಗಳು ಮತ್ತು ಸಾರ್ವಜನಿಕ ಮನರಂಜನೆಯ ಅರಮನೆಗಳು; ಅಥವಾ (ಬಿ) ಬಾವಿಗಳು, ತೊಟ್ಟಿಗಳು, ಸ್ನಾನಘಟ್ಟಗಳು, ರಸ್ತೆಗಳು ಮತ್ತು ಸಾರ್ವಜನಿಕ ರೆಸಾರ್ಟ್‌ಗಳ ಬಳಕೆಯನ್ನು ಸಂಪೂರ್ಣವಾಗಿ ಅಥವಾ ಭಾಗಶಃ ರಾಜ್ಯದ ನಿಧಿಯಿಂದ ನಿರ್ವಹಿಸಲಾಗುತ್ತದೆ ಅಥವಾ ಸಾರ್ವಜನಿಕರ ಬಳಕೆಗೆ ಸಮರ್ಪಿಸಲಾಗಿದೆ” ಎನ್ನಲಾಗಿದೆ.

ಈ ಮಳಿಗೆಗಳನ್ನು ಹಂಚುವ ಪ್ರಕ್ರಿಯೆಯು ವಾಣಿಜ್ಯ ಪ್ರಕ್ರಿಯೆಯಾಗಿರುವುದರಿಂದ, ಮಾರಾಟಗಾರರು ಬಿಡ್‌ಗಳನ್ನು ಸಲ್ಲಿಸುವ ಮೂಲಕ ಆಗಿರುವುದರಿಂದ, ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವುದು ಸಂಪೂರ್ಣವಾಗಿ ಆರ್ಟಿಕಲ್ 15(2) ಅನ್ನು ಉಲ್ಲಂಘಿಸುತ್ತದೆ ಎಂದು ವಾದಿಸಬಹುದು.

“ಈ ಕ್ರಮವು ಆರ್ಟಿಕಲ್ 15 (2) ರ ಉಲ್ಲಂಘನೆಯಾಗಿದೆ. ಏಕೆಂದರೆ ನೀವು ಸಂವಿಧಾನದ ರಚನೆಯ ಇತಿಹಾಸವನ್ನು ನೋಡಿದರೆ, ‘ಅಂಗಡಿಗಳು’ ಎಂಬ ಪದವನ್ನು ನಿಬಂಧನೆಯ ಸಂದರ್ಭದಲ್ಲಿ ಬಹಿಷ್ಕಾರ-ವಿರೋಧಿ ನಿಬಂಧನೆ ಎಂದು ಅರ್ಥೈಸಿಕೊಳ್ಳಬೇಕು” ಎಂದು ಸಾಂವಿಧಾನಿಕ ವಿದ್ವಾಂಸ ಮತ್ತು ವಕೀಲ ಗೌತಮ್ ಭಾಟಿಯಾ ‘ದಿ ಕ್ವಿಂಟ್‌’ನೊಂದಿಗೆ ವಿವರಿಸಿದ್ದರು.

“ಧರ್ಮ, ಜಾತಿ ಮತ್ತು ಮುಂತಾದವುಗಳ ಆಧಾರದ ಮೇಲೆ ಬಹಿಷ್ಕಾರಗಳ ಮೂಲಕ ಇತರರನ್ನು ಆರ್ಥಿಕ ಜೀವನದಿಂದ ಹೊರಗಿಡುವುದನ್ನು ನಿಷೇಧಿಸಲಾಗಿದೆ” ಎನ್ನುವ ಗೌತಮ್‌, “ಇದೇ ಮಾತನ್ನು ಐಎಂಎ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ” ಎಂದಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಮಮಂದಿರ ದೇಣಿಗೆ ಕಳವು ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ರಾಮಮಂದಿರದಲ್ಲಿ ದೇಣಿಗೆ ಹಣ ಕಳವು ಮಾಡಿದ ಆರೋಪದ ಮೇಲೆ ಬಂಧಿಸಲಾಗಿರುವ ಎಲ್ಲಾ ಎಂಟು ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 21ರವರೆಗೆ ವಿಸ್ತರಿಸಲಾಗಿದೆ ಎಂದು ಅವರ ವಕೀಲರು (ಸೆ.18) ತಿಳಿಸಿದ್ದಾರೆ. ಅಯೋಧ್ಯೆಯ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ...

ಬಂಗಾಳದಲ್ಲಿ ಬಿಜೆಪಿ ದ್ವೇಷ ರಾಜಕಾರಣ: ಮಾಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬೆನ್ನಲ್ಲೇ ನಂದಿಗ್ರಾಮ ಕಾಂಗ್ರೆಸ್ ಅಭ್ಯರ್ಥಿ ಬಂಧನ

ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಹಳೆಯ ಪ್ರಕರಣವೊಂದರಲ್ಲಿ ಶುಕ್ರವಾರ (ಸೆ.18) ಬಂಧಿಸಲಾಗಿದೆ ಎಂದು ಪೂರ್ವ ಮೇದಿನಿಪುರ ಜಿಲ್ಲಾ ಪೊಲೀಸ್...

‘ವೆಟ್ಟುವಂ’ ಪಾ.ರಂಜಿತ್ ಅವರ ಅದ್ಭುತ ಅಪೋಕಲಿಪ್ಟಿಕ್ ಆಕ್ಷನ್ ಸಿನಿಮಾ: ರಂಗನಾಥ್ ಆರ್. ವಿ

ತಮಿಳಿನ ಖ್ಯಾತ ನಿರ್ದೇಶಕ ಪಾ.ರಂಜಿತ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ವೆಟ್ಟುವಂ' ಚಿತ್ರವನ್ನು 'ಲರ್ನ್ ಆಂಡ್ ಟೀಚ್ ಪ್ರೊಡಕ್ಷನ್' ಸಂಸ್ಥೆಯ ಸಹಯೋಗದೊಂದಿಗೆ, ಪಾ.ರಂಜಿತ್ ಅವರ 'ನೀಲಂ ಪ್ರೊಡಕ್ಷನ್ಸ್' ನಿರ್ಮಿಸಿದೆ. ಈ ಚಿತ್ರದ ಜಗತ್ತನ್ನು ಪರಿಚಯಿಸುವ...

SIR ಮೋಸ: ಅಗತ್ಯಬಿದ್ದರೆ ಕಾಂಗ್ರೆಸ್‌ನಿಂದ ಕಾನೂನು ಹೋರಾಟ ಬಿ.ಕೆ. ಹರಿಪ್ರಸಾದ್ ಎಚ್ಚರಿಕೆ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ 2026ರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ತಾಂತ್ರಿಕ ಲೋಪಗಳು, ಅಂಕಿಅಂಶಗಳ ವ್ಯತ್ಯಾಸ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸ್ಪಷ್ಟತೆಯ ಕೊರತೆ ಎದ್ದುಕಾಣುತ್ತಿದೆ ಎಂದು...

ವಿಚಾರಣೆಯಿಲ್ಲದೆ ಆರು ವರ್ಷ ಜೈಲುವಾಸ: ಉಮರ್ ಖಾಲಿದ್ ಹೋರಾಟದ ಹಾದಿ

ಸೆಪ್ಟೆಂಬರ್ 13, 2020 ರಂದು, ಮಾನವ ಹಕ್ಕುಗಳ ಯುವ ಕಾರ್ಯಕರ್ತ ಉಮರ್ ಖಾಲಿದ್ ಅವರನ್ನು ದೇಶದ ರಾಜಧಾನಿಯಲ್ಲಿ ಗುರಿಯಾಗಿಸಿಕೊಳ್ಳಲಾಯಿತು. ವಿಚಾರಣೆಯೇ ಇಲ್ಲದೆ ಅವರು ಜೈಲಿನಲ್ಲಿ ಆರು ವರ್ಷಗಳನ್ನು ಪೂರೈಸಿದ್ದಾರೆ. ಸರ್ಕಾರದ ವಿರುದ್ಧದ ರಾಜಕೀಯ...

ಕನ್ವರ್ ಯಾತ್ರೆ ವೇಳೆ 18 ದ್ವೇಷ ಘಟನೆಗಳು: ಮುಸ್ಲಿಮರು, ಅವರ ವ್ಯಾಪಾರಗಳನ್ನು ಗುರಿಯಾಗಿಸಿಕೊಂಡ ಪ್ರಕರಣಗಳೇ ಹೆಚ್ಚು; APCR ವರದಿ

ನವದೆಹಲಿ: 2026ರ ಕನ್ವರ್ ಯಾತ್ರೆಯ 13 ದಿನಗಳ ಅವಧಿಯಲ್ಲಿ ಹಿಂಸಾಚಾರ, ಬಲವಂತ, ತಾರತಮ್ಯ, ಆರ್ಥಿಕ ಬಹಿಷ್ಕಾರ ಹಾಗೂ ಸಾರ್ವಜನಿಕ ಅಶ್ಲೀಲ ವರ್ತನೆಗೆ ಸಂಬಂಧಿಸಿದ ಕನಿಷ್ಠ 18 ಘಟನೆಗಳು ವರದಿಯಾಗಿವೆ ಎಂದು ನಾಗರಿಕ ಹಕ್ಕುಗಳ...

ಸಿಐಟಿಯು ಕಾನೂನು ಹೋರಾಟಕ್ಕೆ ಮೊದಲ ಜಯ: ಕನಿಷ್ಠ ವೇತನ ತಡೆಹಿಡಿದಿದ್ದ ಸರ್ಕಾರದ ಮೂರು ಸುತ್ತೋಲೆಗಳಿಗೆ ಹೈಕೋರ್ಟ್ ತಡೆ

ಸರ್ಕಾರಿ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರ ಹೊಸ ಕನಿಷ್ಠ ವೇತನವನ್ನು ತಡೆಹಿಡಿದಿದ್ದ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಹೊಸ ವೇತನ ನೀಡುವುದನ್ನು ಅಮಾನತಿನಲ್ಲಿಟ್ಟಿದ್ದ ಸರ್ಕಾರದ ಮೂರು...

ಟಿಎಂಸಿ ಹೆಸರು, ಚಿಹ್ನೆ ಫ್ರೀಜ್: ಮಮತಾ ಬ್ಯಾನರ್ಜಿಗೆ ‘ಫುಟ್‌ಬಾಲ್ ಪ್ಲೇಯರ್’, ಬಂಡಾಯ ಬಣಕ್ಕೆ ‘ಲಕೋಟೆ’ ಚಿಹ್ನೆ ನೀಡಿದ ಚುನಾವಣಾ ಆಯೋಗ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂಲ ಹೆಸರು ಮತ್ತು ಸಾಂಪ್ರದಾಯಿಕ 'ಹೂವು-ಹುಲ್ಲು' ಚಿಹ್ನೆಯನ್ನು ಮುಟ್ಟುಗೋಲು (ಫ್ರೀಜ್) ಹಾಕಿದ ನಂತರ, ಭಾರತೀಯ ಚುನಾವಣಾ ಆಯೋಗವು ಶುಕ್ರವಾರ ಎರಡೂ ಎದುರಾಳಿ ಬಣಗಳಿಗೆ ಪ್ರತ್ಯೇಕ ಮಧ್ಯಂತರ ಹೆಸರು...

‘ರೋಹಿತ್ ವೇಮುಲಾ ಸ್ಥಿತಿ ನನಗೆ ಬಾರದಿರಲಿ..’; ವಿದೇಶದಲ್ಲಿ ಕಷ್ಟಕ್ಕೆ ಸಿಲುಕಿದ ತಮಿಳುನಾಡಿನ ದಲಿತ ಸಂಶೋಧಕ

ಮಲೇಷ್ಯಾದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ತಮಿಳುನಾಡಿನ ದಲಿತ ಸಂಶೋಧನಾ ವಿದ್ಯಾರ್ಥಿ ಭಾರತಿ ದಾಸನ್ ರಾಮನ್, ತಮಿಳುನಾಡು ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆಯು ನನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ ಎಂದು 'ದಿ ನ್ಯೂಸ್‌ ಮಿನಿಟ್'...

DUSU ಚುನಾವಣೆ: ಮತದಾನ ಆರಂಭ; ವಿಜಯೋತ್ಸವ ಮೆರವಣಿಗೆಗೆ ದೆಹಲಿ ಹೈಕೋರ್ಟ್ ತಡೆ

ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (DUSU) 2026-27ನೇ ಸಾಲಿನ ಚುನಾವಣೆಗೆ ಶುಕ್ರವಾರ (ಸೆ.18) ಮತದಾನ ಆರಂಭವಾಗಿದೆ. ಬೆಳಗಿನ ಅವಧಿಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 8:30ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಸಂಜೆ ಕಾಲೇಜುಗಳ ವಿದ್ಯಾರ್ಥಿಗಳಿಗೆ...