HomeUncategorizedಉನ್ನಾವ್ ಅತ್ಯಾಚಾರ ಆರೋಪಿ ಶಾಸಕನೂರಲ್ಲಿ ಸೆಂಗರ್ ಕುಟುಂಬದ್ದೇ ಪಾಳೇಗಾರಿಕೆ: ಇಲ್ಲಿದೆ ಗ್ರೌಂಡ್ ರಿಪೋರ್ಟ್

ಉನ್ನಾವ್ ಅತ್ಯಾಚಾರ ಆರೋಪಿ ಶಾಸಕನೂರಲ್ಲಿ ಸೆಂಗರ್ ಕುಟುಂಬದ್ದೇ ಪಾಳೇಗಾರಿಕೆ: ಇಲ್ಲಿದೆ ಗ್ರೌಂಡ್ ರಿಪೋರ್ಟ್

- Advertisement -
- Advertisement -

ಅತ್ಯಾಚಾರ ಮತ್ತು ಕೊಲೆಯತ್ನ ಆರೋಪ ಎದುರಿಸುತ್ತಿರುವ ಬಿಜೆಪಿಯ ಉಚ್ಛಾಟಿತ ಶಾಸಕ ಕುಲದೀಪ್ ಸೆಂಗರ್ ನ ಉನ್ನಾವ್ ಗ್ರಾಮಕ್ಕೆ ‘ದಿ ಕ್ವಿಂಟ್’ ತಂಡ ಭೇಟಿ ನೀಡಿ ಅಲ್ಲಿನ ಭಯಭೀತ ವಾತಾವರಣವನ್ನು ತೆರೆದಿಟ್ಟಿದೆ.

‘ಸೆಂಗರ್ ಗಳ ಹುಕುಂ ಇಲ್ಲದೇ ಇಲ್ಲಿ ಹುಲ್ಲುಕಡ್ಡಿ ಕೂಡ ಚಲಿಸುವಂತಿಲ್ಲ. ಅವರ ಒಪ್ಪಿಗೆಯಿಲ್ಲದೇ ತುಂಡುಭೂಮಿ ಮಾರಂಗಿಲ್ಲ, ಕೊಳ್ಳಂಗಿಲ್ಲ….’ – ಎನ್ನುತ್ತಾನೆ ಗ್ರಾಮದ ಯುವಕ ಅಜೀತ್.

ಇದು ಉನ್ನಾವ್. ಅತ್ಯಾಚಾರ ಮತ್ತು ಕೊಲೆಯತ್ನದ ಆರೋಪಿ ಶಾಸಕ ಕುಲದೀಪ್ ಸೆಂಗರ್ ನ ಗ್ರಾಮ. ಇಲ್ಲಿ ಶಾಸಕ ಮತ್ತು ಕುಟುಂಬದ ವಿರುದ್ಧ ಯಾರೂ ಮಾತಾಡುವಂತಿಲ್ಲ. ಈ ಕುಟುಂಬದ ನಜರ್ ಇಲ್ಲದೇ ಏನೂ ನಡೆಯುವಂತಿಲ್ಲ. ಒಂಥರಾ ಹಳೇ ಸಿನಿಮಾಗಳಲ್ಲಿ ಗೌಡರ ದರ್ಪ, ಪಾಳೇಗಾರಿಕೆಯಡಿ ನಲುಗುವ ಊರಿನಂತಿದೆ ಉನ್ನಾವ್.

ಸತತ ಸಾರ್ವಜನಿಕ ಒತ್ತಾಯ ಮತ್ತು ಒತ್ತಡಗಳ ಪರಿಣಾಮವಾಗಿ ಈಗ ಬಿಜೆಪಿ ಕುಲದೀಪ್ ಸೆಂಗರ್ ನನ್ನು ಪಕ್ಷದಿಂದ ಉಚ್ಛಾಟಿಸಿದೆ. ಅತ್ಯಾಚಾರ ಆರೋಪಕ್ಕೆ ಸಿಕ್ಕ 14 ತಿಂಗಳ ಬಳಿಕ ಬಿಜೆಪಿ ಈ ಕ್ರಮಕ್ಕೆ ಮುಂದಾಗಿದೆ. ಈ ಶಾಸಕರ ಉನ್ನಾವ್ 30 ಸಾವಿರದಷ್ಟು ಜನಸಂಖ್ಯೆ ಹೊಂದಿರುವ ದೊಡ್ಡ ಗ್ರಾಮವಾಗಿದ್ದು ಇಲ್ಲಿ ಯಾರೂ ಶಾಸಕರಿಗೆ ಅಹಿತ ಅನಿಸುವುದನ್ನು ಮಾತಾಡಲು ಒಲ್ಲರು, ಶಾಸಕರ ನಜರ್ ಗೆ ಬೀಳದಂತೆ ಬದುಕಲು ಯತ್ನಿಸುವವರು.

60 ವರ್ಷದಿಂದ ಸೆಂಗರ್ ಕುಟುಂಬದ್ದೇ ರಾಜಕೀಯ ಪಾರುಪತ್ಯ!

ಶಾಸಕ ಸೆಂಗರ್ ಅಜ್ಜ (ತಾಯಿಯ ತಂದೆ) 37 ವರ್ಷಗಳವರೆಗೆ ಗ್ರಾಮದ ಮುಖ್ಯಸ್ಥನಾಗಿದ್ದ. ನಂತರ ಕುಲದೀಪ್ ರಾಜಕೀಯ ಶುರು ಮಾಡಿದ. ಈಗ 4ನೇ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದಾನೆ. ಸೆಂಗರ್ ತಾಯಿ ಎರಡು ಸಲ ಗ್ರಾಮ್ ಪ್ರಧಾನ್ ಆಗಿದ್ದರೆ, ಸಂಗರ್ ಸೊಸೆ, ಸಹೋದರನ ಪತ್ನಿ-ಹೀಗೆ ಗ್ರಾಮ್ ಪ್ರಧಾನ್ ಅಧಿಕಾರ ಅವರ ಕುಟುಂಬದ ಬಳಿಯೇ ಇದೆ ಎಂದು ಅಲ್ಲಿನ ಕೆಲವರು ಹೇಳುವಾಗ, ತಮ್ಮನ್ನು ಯಾರೂ ಗಮನಿಸುತ್ತಿಲ್ಲ ಎಂಬುದನ್ನು ಖಚಿತ ಮಾಡಿಕೊಳ್ಳುತ್ತಾರೆ.

ಆರಂಭದಲ್ಲಿ ಕಾಂಗ್ರೆಸ್‍ನಲ್ಲಿದ್ದ ಕುಲದೀಪ್ ಪಾರ್ಟಿಗಳನ್ನು ಬದಲಿಸುತ್ತಲೇ ಬಂದು ಈಗ ಬಿಜೆಪಿಯ ಪ್ರಭಾವಿ ಶಾಸಕನೂ, ಮುಖ್ಯಮಂತ್ರಿ ಯೋಗಿಯವರಿಗೆ ಆಪ್ತನೂ ಆಗಿದ್ದಾನೆ. ಅಕ್ರಮ ಕಲ್ಲು ಗಣಿಗಾರಿಕೆಯಿಂದ ಲೂಟಿ ಮಾಡುತ್ತಿರುವ ಈ ಕುಟುಂಬ ಪೊಲೀಸ್ ಅಧಿಕಾರಿಗಳ ಮೇಲೆಯೇ ದಾಳಿಗಳನ್ನು ಮಾಡುತ್ತ ಬಂದಿದೆ. 2004ರಲ್ಲಿ ಕುಲದೀಪ್ ಸೆಂಗರ್ ಸಹೋದರ ಅತುಲ್ ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿ ರಾಮಲಾಲ್ ವರ್ಮಾ ಅವರ ಹೊಟ್ಟೆಗೆ ಗುಂಡು ಹೊಡೆದಿದ್ದ. ಈ ಕುಟುಂಬದ ಒತ್ತಡಕ್ಕೆ ಮಣಿದು ರಾಮಲಾಲ್ ವರ್ಮಾರೇ ದೂರು ಹಿಂಪಡೆಯಬೇಕಾಗಿತು.

ಪೊಲೀಸ್ ಅಧಿಕಾರಿಗಳ ಮೇಲೆಯೇ ಏರಿ ಹೋಗುವ ಈ ಕುಟುಂಬ ಸಾಮಾನ್ಯ ಜನರನ್ನು ಅದೆಷ್ಟು ಭಯಭೀತಿಯಲ್ಲಿ ಇಟ್ಟಿರಬಹುದು ಎಂದು ಊಹಿಸಿ. ಈ ಭೇಟಿಯ ವೇಳೆ ನಮ್ಮ ತಂಡಕ್ಕೆ ಅದರ ದರ್ಶನವೂ ಆಯಿತು. ‘ಪರಿಸ್ಥಿತಿ ಹೀಗಿರುವಾಗ ಅತ್ಯಾಚಾರ ಸಂತ್ರಸ್ತೆಯ ಕುಟುಂಬಕ್ಕೆ ಎಂತಹ ಹಿಂಸೆ ಕೊಟ್ಟಿರಬಹುದು ಊಹಿಸಿ’ ಎಂದ ಯುವಕ ಅಜಿತ್. (ಹೆಸರು ಬದಲಿಸಿದೆ).

2018ರಲ್ಲಿ ಇದೇ ಅತುಲ್ ಸೆಂಗರ್ ಅತ್ಯಾಚಾರ ಸಂತ್ರಸ್ತೆಯ ತಂದೆಯನ್ನು ಮರಕ್ಕೆ ಕಟ್ಟಿ ವಿಪರೀತ ಹಡೆದಿದ್ದ ಎಂದು ಹೆಸರು ಹೇಳಲು ಇಚ್ಛಿಸದ ಜನ ಹೇಳುತ್ತಾರೆ. ಆಗ ಬಹುಶಃ ಒಳಗಾಯಗಳಾಗಿದ್ದವು ಎನಿಸುತ್ತದೆ. ಮುಂದೆ ಐದೇ ದಿನದಲ್ಲಿ ಆಕೆಯ ತಂದೆ ಪೊಲೀಸ್ ಲಾಕಪ್ಪಿನಲ್ಲಿ ಮೃತಪಟ್ಟರು. ಪೊಲೀಸ್ ಸ್ಟೇಷನ್ನಿನಲ್ಲೂ ಅತುಲ್ ಒತ್ತಡ ಹೇರಿ ಮತ್ತೆ ದೌರ್ಜನ್ಯ ನಡೆಸಿದ್ದಾನೆ ಎಂಬ ಆರೋಪವೂ ಇದೆ. ಈ ಕುರಿತು ದೂರು ದಾಖಲಾಗಿದೆ.

ಅತುಲ್ ಮರಕ್ಕೆ ಕಟ್ಟಿ ದೌರ್ಜನ್ಯ ನಡೆಸಿದಾಗ ದೂರು ಕೊಟ್ಟರೂ ಬಂಧಿಸದ ಪೊಲೀಸರು, ಸಂತ್ರಸ್ತೆಯ ತಂದೆಯನ್ನೇ, ‘ ಅಕ್ರಮವಾಗಿ ಶಸ್ತ್ರಾಸ್ತ ಹೊಂದಿದ್ದ’ ಎಂದು ಆರೋಪಿಸಿ ಬಂಧಿಸಿದ್ದರು. ಶಾಸಕ ಮತ್ತು ಆತನ ಇಬ್ಬರು ಸಹೋದರರ ಈ ದರ್ಪ ಮತ್ತು ಪಾಳೇಗಾರಿಕೆಯ ಬಗ್ಗೆ ಭಯದಿಂದಲೇ ಇಲ್ಲಿನ ಜನರು ಹೇಳುತ್ತಾರೆ.

ಈಗ ಶಾಸಕನ ಅತ್ಯಾಚಾರ, ಕೊಲೆಯತ್ನ, ಸಂಚು ಕೇಸುಗಳಲ್ಲಿ, ಇನ್ನಿಬ್ಬರು ಸಹೋದರರು ಕೊಲೆಯತ್ನ ಕೇಸು ಎದುರಿಸುತ್ತಿದ್ದಾರೆ. ಇಷ್ಟೆಲ್ಲದರ ನಂತರವೂ ಶಾಸಕನ ವಿರುದ್ಧ ಇಲ್ಲಿ ಯಾರೂ ಸೊಲ್ಲೆತ್ತುವಂತಿಲ್ಲ. ಉತ್ತರ ಪ್ರದೇಶದ ಪಕ್ಷೇತರ ಶಾಸಕ, ಡಾನ್ ‘ರಾಜಾ ಭಯ್ಯಾ’ನ ಮಾದರಿಯಲ್ಲೇ ಕುಲದೀಪ್ ಕೂಡ ಜನರನ್ನು ಭಯದಲ್ಲಿಟ್ಟು ನಾಲ್ಕು ಸಲ ಗೆದ್ದಿದ್ದಾನೆ.

ಆಧಾರ: ದಿ ಕ್ವಿಂಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...