Homeಕರ್ನಾಟಕ2018ರ ಪ್ರಣಾಳಿಕೆಯನ್ನೇ ಮರೆತ ಬಿಜೆಪಿ ಈಗ ಮತ್ತೊಂದು ಬಿಡುಗಡೆ ಮಾಡಿದೆ: ಕೆಪಿ ಸುರೇಶ್

2018ರ ಪ್ರಣಾಳಿಕೆಯನ್ನೇ ಮರೆತ ಬಿಜೆಪಿ ಈಗ ಮತ್ತೊಂದು ಬಿಡುಗಡೆ ಮಾಡಿದೆ: ಕೆಪಿ ಸುರೇಶ್

- Advertisement -
- Advertisement -

ರಾಜ್ಯ ವಿಧಾನಸಭಾ ಚುನಾವಣೆಯ ಈ ಸಂದರ್ಭದಲ್ಲಿ ಬಿಜೆಪಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. 2018ರ ಪ್ರಣಾಳಿಕೆಯನ್ನೇ ಪೂರೈಸಿಲ್ಲ ಇದೀಗ ಮತ್ತೊಂದು ಪ್ರಣಾಳಿಕೆ ಬಿಡುಗಡೆ ಮಾಡಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಶುರುವಾಗಿದೆ.

ಈ ಬಗ್ಗೆ ಲೇಖಕ ಕೆಪಿ ಸುರೇಶ್ ಅವರು ಪೋಸ್ಟ್ ಮಾಡಿದ್ದು, ”ಈ ಬಿಜೆಪಿಗೆ ಒಂದೋ ಬುದ್ಧಿಗೆಟ್ಟಿದೆ, ಇಲ್ಲಾ ಸಂಪೂರ್ಣ ಮಾನಗೆಟ್ಟಿದೆ! 2018ರಲ್ಲಿ ತಾನೊಂದು ಪ್ರಣಾಳಿಕೆ ಬಿಡುಗಡೆ ಮಾಡಿದ್ದೆ ಎಂಬು ಮರೆತೇ ಹೋದಂತೆ ಈ ಪಕ್ಷ ನಟಿಸುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

”ಸರಕಾರಕ್ಕೂ ಸರಕಾರ ರಚಿಸುವ ಪಕ್ಷಕ್ಕೂ ಒಂದು ಉತ್ತರದಾಯಿತ್ವ ಇದೆ. ಉದಾ: ಒಂದು ಯೋಜನೆ ಅನುಷ್ಠಾನವಾಗಲು ಮೂರು ವರ್ಷ ಬೇಕಿದ್ದರೆ ಮುಂದಿನ ವರ್ಷದ ಬಜೆಟ್‌ನಲ್ಲಿ ಅದಕ್ಕೆ ನಿಗದಿ ಪಡಿಸಿದ ಅನುದಾನ ನೀಡುವುದು ಕಡ್ಡಾಯ. ಕೈಗೆತ್ತಿಕೊಂಡ/ ಘೋಷಿಸಿದ ಕಾರ್ಯಕ್ರಮ ಪೂರೈಸದೇ ಇನ್ನೊಂದನ್ನು ತೆಗೆದುಕೊಳ್ಳುವುದು ಆರ್ಥಿಕ, ಆಡಳಿತ ನಿರ್ವಹಣೆಯ ನೈತಿಕತೆಗೆ ವಿರುದ್ಧವಾಗಿದೆ” ಎಂದಿದ್ದಾರೆ.

ಪಕ್ಷವೊಂದರ ಪ್ರಣಾಳಿಕೆಯೂ ಅಂಥಾದ್ದೇ?

”ಈ ಭಾಜಪ 2018ರಲ್ಲಿ ಹೇಳಿದ ಶೇ.10ರಷ್ಟನ್ನೂ ಅನುಷ್ಠಾನಗೊಳಿಸಿಲ್ಲ. ಶೇ.40ರಷ್ಟು ಸಾಧನೆ ಮಾಡಿದ್ದು ಭ್ರಷ್ಟಾಚಾರದಲ್ಲಿ ಮಾತ್ರ. ಉದಾ: ಕೆ.ಎಂ.ಎಫ್ ಮೂಲಕ ಇತರೇ ಉತ್ಪನ್ನ ಮಾರಲು ಸಾವಿರ ಕೋಟಿ ನೀಡುವ ಭರವಸೆ ಪ್ರಣಾಳಿಕೆಯಲ್ಲಿತ್ತು. ಇಂಥಾ ನೂರು ಉದಾಹರಣೆ ಆ 1ಪ್ರಣಾಳಿಕೆ ಇಟ್ಟುಕೊಂಡರೆ ಕಾಣಿಸುತ್ತೆ.
ಈಗ ಹೊಸದಾಗಿ ಸ್ಪರ್ಧಿಸುವ ಹೊಸ ಪಕ್ಷದ ಹಾಗೆ ಬಿಜೆಪಿ ಪ್ರಣಾಲಿಕೆ ಪ್ರಕಟಿಸಿದೆ. ಬಾಯಿಗೆ ಬಂದ ಸುಳ್ಳುಗಳನ್ನು ಅಸಂಬದ್ಧವಾಗಿ ಪೋಣಿಸಿದ ಪ್ರಣಾಳಿಕೆ ಇದು” ಎಂದು ಟೀಕಿಸಿದ್ದಾರೆ.

”ವಾಕ್ಯ ರಚನೆಗಳೂ ಹೀಗೇ ಇವೆ. ಮಾಡಿದ್ದೇವೆ, ಮಾಡಲಿದ್ದೇವೆ, ಘೋಷಿಸಿದ್ದೇವೆ, ಹೀಗೆ ಗಲಿಬಿಲಿ ಉಂಟು ಮಾಡುವ ವಾಕ್ಯಗಳಿವೆ. ಸಾಧನೆಗಳ ಪಟ್ಟಿ ನೋಡಬೇಕು. ಸತ್ಯದ ತಲೆ ಮೇಲೆ ಹೊಡೆದ ಹಾಗೆ ಕ್ಲೈಮ್ ಮಾಡಿರುವುದು ನೋಡಿದರೆ ಈ ರಾಜ್ಯದ ಮತದಾರರು ಗಾಂಪರು ಅಂತ ಬಿಜೆಪಿ ತಿಳಿದುಕೊಂಡಂತಿದೆ” ಎಂದು ಬರೆದಿದ್ದಾರೆ.

”55 ಲಕ್ಷ ಉದ್ಯೋಗ ಸೃಷ್ಟಿ ಮಾಡಿದ್ದೇವೆ ಎನ್ನುವ ಬಿಜೆಪಿ ಯಾವ ವಲಯದಲ್ಲಿ ಎಷ್ಟು ಅಂತ ಹೇಳಿದರೂ ಸಾಕು! ಕೌಶಲ್ಯ ತರಬೇತಿಯಲ್ಲಿ ಸರ್ಟಿಫಿಕೇಟ್ ನೀಡಿರುವ ಅಂಕಿ-ಅಂಶ ನೀಡಲಾಗಿದೆ. ಆದರೆ ದಾಖಲೆ ನೋಡಿ:
ಮೊದಲ ಹಂತದಲ್ಲಿ 1,12,445 ಯುವಕರಿಗೆ ತರಬೇತಿ ಕೊಟ್ಟರೂ ಉದ್ಯೋಗ ಲಭಿಸಿದ್ದು ಕೇವಲ 20956. 2ನೇ ಹಂತದಲ್ಲಿ 4,32,411 ಮಂದಿಗೆ ತರಬೇತಿ ಕೊಟ್ಟ ದಾಖಲೆ ಇದೆ. ಆದರೆ ಉದ್ಯೋಗ ಲಭಿಸಿದ್ದು ಕೇವಲ 58,960 ಯುವಕರಿಗೆ. 3ನೇ ಹಂತದಲ್ಲಿ 31,120 ಮಂದಿಗೆ ತರಬೇತಿ ನೀಡಿದರೆ, ಉದ್ಯೋಗ ಲಭಿಸಿದ್ದು ಕೇವಲ 1388 ಯುವಕರಿಗೆ. ಇದು ಅಧಿಕೃತ ದಾಖಲೆ” ಎಂದು ಮಾಹಿತಿ ನೀಡಿದ್ದಾರೆ.

”ಆರೋಗ್ಯ ಕ್ಷೇತ್ರದಲ್ಲಿ ಕೇಂದ್ರದ ಅನುದಾನ 500+ ಕೋಟಿಯಲ್ಲಿ ಒಂದು ರೂಪಾಯಿಯೂ ಬಂದಿಲ್ಲ ಎಂದು ಮೊನ್ನೆ ಮೊನ್ನೆ ಬಯಲಾಗಿದೆ” ಎಂದಿದ್ದಾರೆ.

ಕೇಂದ್ರದ ವಿಶೇಷ ಅನುದಾನ ರಾಜ್ಯಕ್ಕೆ ಸೊನ್ನೆ

”ಭದ್ರಾ, ಮೇಕೆದಾಟು, ಕಳಸಾ ಬಂಡೂರಿ ಯೋಜನೆಗಳು ಅಂತರ್‌ರಾಜ್ಯ ಪ್ರಕರಣಗಳಾಗಿರುವ ಕಾರಣ ಅವು ಪ್ರಸ್ತಾವದಿಂದಾಚೆ ಜರುಗಿಯೇ ಇಲ್ಲ. ಇದರ ಬಗ್ಗೆ ಪ್ರಭಾವ ಬೀರಬಹುದಾದ ಮೋದಿ ಬಾಯಿಮುಚ್ಚಿ ಕೂತಿದ್ದಾರೆ” ಎಂದು ಆರೋಪಿಸಿದ್ದಾರೆ.

”ಈಗ ಹೊಸ ಪ್ರಣಾಳಿಕೆ ಬಿಡುಗಡೆ ಮಾಡುವ ಭಂಡ ಧೈರ್ಯ ಬೇರೆ ಈ ಪಕ್ಷಕ್ಕೆ!! 2018ರ ಪ್ರಣಾಳಿಕೆ ಮುಖಕ್ಕೆ ಹಿಡಿದು ಮತದಾರರು ಇದರಲ್ಲಿರುವ ಭರವಸೆ ಕಳೆದ ನಾಲ್ಕು ವರ್ಷ ಯಾಕೆ ಅನುಷ್ಠಾನ ಮಾಡಿಲ್ಲ ಎಂದು ಕೇಳಬೇಕಿದೆ” ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...