Homeಮುಖಪುಟಕರೆನ್ಸಿಯೊಂದಿಗೆ ಆಡುವ ಆಟ ಕರೆಂಟ್ ಜೊತೆಗೆ ಆಡಿದ ಆಟದಂತೆ; ಇದು ತುಘಲಕ್ ಮೋಜಿನಾಟ

ಕರೆನ್ಸಿಯೊಂದಿಗೆ ಆಡುವ ಆಟ ಕರೆಂಟ್ ಜೊತೆಗೆ ಆಡಿದ ಆಟದಂತೆ; ಇದು ತುಘಲಕ್ ಮೋಜಿನಾಟ

- Advertisement -
- Advertisement -

ದೆಹಲಿಯ ತೀನ್‌ಮೂರ್ತಿ ಭವನದಲ್ಲಿರುವ ದೇಶದ ಪ್ರಧಾನಮಂತ್ರಿಗಳ ಸಂಗ್ರಹಾಲಯದಲ್ಲಿ ಸದ್ಯಕ್ಕೆ ನರೇಂದ್ರ ಮೋದಿಯವರ ಕೊಠಡಿ ಅಪೂರ್ಣವಾಗಿದೆ. ಯಾವಾಗ ಅವರನ್ನು ಬೀಳ್ಕೊಡಲಾಗುವುದೋ ಆಗ, ಅವರು ತೆಗೆದುಕೊಂಡು ಒಳ್ಳೆಯ, ಕೆಟ್ಟ ತೀರ್ಮಾನಗಳ ನೆನಪುಗಳನ್ನು ಹೆಣೆಯುತ್ತ ಹೋದಲ್ಲಿ, ಆ ಮ್ಯೂಸಿಯಂನಲ್ಲಿ ನೋಟು ರದ್ದತಿಗೆ ಒಂದು ಸ್ಥಾನ ಅಥವಾ ಕೊಠಡಿ ಖಂಡಿತವಾಗಿಯೂ ಇರಲಿದೆ. ಆ ಕೊಠಡಿಯಲ್ಲಿ ಗುಲಾಬಿ ಬಣ್ಣದ 2000 ರೂಪಾಯಿಯ ನೋಟಿಗೂ ಸ್ಥಾನ ಇರಲಿದೆ. ಆ ಕೊಠಡಿಯನ್ನು ಹುಚ್ಚ ತುಘಲಕ್ ಎಂದು ಕರೆಯಲಾಗುವುದೋ ಅಥವಾ ತಮಾಷೆಯ ಕೊಠಡಿಯೆಂದು ಕರೆಯಲಾಗುವದೋ ಗೊತ್ತಿಲ್ಲ.

ಆ ಹೊಸ ರೀತಿಯ ಸಂಗ್ರಹಾಲಯದಲ್ಲಿ ಈ ನೋಟಿನ ಬಗ್ಗೆ ರಚಿಸಲಾದ ಜೋಕುಗಳಿಗೂ ಜಾಗ ಇರುವ ಸಾಧ್ಯತೆ ಇದೆ. ಬೇರೆ ಏನಾದರೂ ಇರಲಿ ಬಿಡಲಿ, ‘ಆಜ್ ತಕ್’ನ ಆಂಕರ್‌ನ ಆ ವಿಡಿಯೋ ತುಣುಕು; ನೋಟು ರದ್ದತಿಯ ದಿನದಂದು 2000 ರೂಪಾಯಿಯಲ್ಲಿ ‘ನ್ಯಾನೊ ಚಿಪ್’ನ ಇದೆ ಎಂದು ಖಡಾಖಂಡಿತವಾಗಿ ವರದಿ ಮಾಡುತ್ತಿರುವ ವಿಡಿಯೋ ತುಣುಕಂತೂ ಇರಲಿದೆ. ನನ್ನ ಮಾತು ನಡೆದರೆ, 2000 ರೂಪಾಯಿ ನೋಟನ್ನು ಹಿಂಪಡೆದಾಗ, ಆರ್‌‌ಓ‌ಎಫ್‌ಎಲ್ ಗಾಂಧಿ (ROFL Gandhi) ಹೆಸರಿನಲ್ಲಿ ಬಂದ ಈ ಟ್ವೀಟ್‌ಗೂ ಸಂಗ್ರಾಹಲಯದಲ್ಲಿ ಸ್ಥಾನ ನೀಡಬೇಕು; “ವಿಶ್ವಾಸಾರ್ಹ ಮೂಲಗಳ ಪ್ರಕಾರ 2000ದ ನೋಟಿನ ಚಿಪ್‌ಗೆ 5Gಯೊಂದಿಗೆ ಕನೆಕ್ಷನ್ ಆಗುತ್ತಿಲ್ಲ. ಈಗ 5G ಹೊಂದಿರುವ ಹೊಸ 5000ದ ಸೂಪರ್ ನ್ಯಾನೋ ಚಿಪ್‌ನ ನೋಟು ಬರಲಿದೆ. ಒಂದು ವೇಳೆ ಕಾಳಧನದ ಧಣಿಗಳು ಇದನ್ನು ತಿಜೋರಿಯಲ್ಲಿ ಇಟ್ಟರೆ, ಅದು ಖುದ್ದಾಗಿ ಊಬರ್ ಟ್ಯಾಕ್ಸಿ ಬುಕ್ ಮಾಡಿಕೊಂಡು ಆರ್‌ಬಿಐನ ಕಚೇರಿಗೆ ವಾಪಸ್ ಬರುವುದು!”

ಆ ಕೊಠಡಿಯಲ್ಲಿ 2016ರ ನವೆಂಬರ್ 8ರ ಸಂಜೆಯಿಂದ ಶುರುಮಾಡಿ 2023ರ ಮೇ 23ರತನಕದ ನೋಟುರದ್ದತಿಯ ಕಥೆಯನ್ನು ಹೇಳಲಾಗುವುದು. ಪ್ರಧಾನ ಮಂತ್ರಿ ದೊಡ್ಡದೊಡ್ಡ ಭರವಸೆ ನೀಡಿದ ಭಾಷಣದ ವಿಡಿಯೋ ತುಣುಕಿನೊಂದಿಗೆ ಆ ಕಥೆ ಪ್ರಾರಂಭವಾಗುವುದು. ಅದರಲ್ಲಿ ಇತರ ಅನೇಕ ಉಪಕಥೆಗಳು ಇರಲಿವೆ: ದೇಶಾದ್ಯಂತ ಕಂಡುಬಂದ ಸರತಿ ಸಾಲುಗಳು, ಹಳೆಯ ನೋಟುಗಳನ್ನು ಕೈಯಲ್ಲಿ ಹಿಡಿದುಕೊಂಡು ಕಾತುರದಿಂದ ಕಾಯುತ್ತಿರುವ ಕಣ್ಣುಗಳು ಇತ್ಯಾದಿ. ನಿಸ್ಸಂದೇಹವಾಗಿ, ಅಲ್ಲಿ ಅನೇಕ ದಸ್ತಾವೇಜುಗಳೂ ಇರಲಿವೆ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮೂರು ಹೊಸ ನಿರ್ದೇಶನಗಳು, ದಿನನಿತ್ಯ ಬದಲಾಗುತ್ತಿರುವ ಬ್ಯಾಂಕ್‌ಗಳ ನಿಯಮಗಳು.

ಒಂದು ವೇಳೆ ಆ ಸಂಗ್ರಹಾಲಯವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿದರೆ, ಯಾವುದೇ ವಿತ್ತೀಯ ಅರ್ಥಶಾಸ್ತ್ರಜ್ಞರ ಅಭಿಪ್ರಾಯ ಪಡೆದುಕೊಳ್ಳದೇ, ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ರಘುರಾಮ್ ರಾಜನ್‌ನ ಎಚ್ಚರಿಕೆಯನ್ನು ಕಡೆಗಣಿಸಿ ಹೇಗೆ ದೇಶದ ಕರೆನ್ಸಿಯೊಂದಿಗೆ ಇಷ್ಟು ದೊಡ್ಡ ಆಟ ಆಡಲಾಯಿತು ಎಂಬುದನ್ನು ಅದರಲ್ಲಿ ದಾಖಲಿಸಲಾಗುವುದು. ಒಂದು ವೇಳೆ ಆ ಸಂಗ್ರಹಾಲಯ ಭವಿಷ್ಯದ ಪ್ರಜ್ಞೆಯನ್ನು ಹೊಂದಿದ್ದರೆ ಅದರಲ್ಲಿ ನೋಟು ರದ್ದತಿಯ ದಾವೆಗಳು ಮತ್ತು ಅದರ ಅಸಲಿಯತ್ತನ್ನು ಎದುರುಬದರು ಇರಿಸುವ ಒಂದು ಪ್ಯಾನೆಲ್ ಕೂಡ ಇರಿಸಬೇಕಾಗುವುದು. ನೋಟು ರದ್ದತಿಯಿಂದ ದೊಡ್ಡ ಪ್ರಮಾಣದಲ್ಲಿ ಕಾಳ ಧನ ಇಲ್ಲವಾಗುವುದು, ಭ್ರಷ್ಟಾಚಾರಕ್ಕೆ ಪೆಟ್ಟು ಬೀಳುವುದು ಎಂಬ ದಾವೆಗಳನ್ನು ಮಾಡಲಾಗಿತ್ತು. ಹೊರಬಂದ ಅಸಲಿಯತ್ತೇನೆಂದರೆ, ರಿಸರ್ವ್ ಬ್ಯಾಂಕಿನದ್ದೇ ವರದಿಯ ಪ್ರಕಾರ 99.3% ನೋಟುಗಳು ವಾಪಸ್ ಬಂದುಬಿಟ್ಟವು. ದುಡ್ಡಿನ ದೊಡ್ಡದೊಡ್ಡ ಚೀಲಗಳನ್ನು ಹೊಂದಿದ್ದ ಸೇಠರ ದುಡ್ಡು ಮುಳುಗಲಿಲ್ಲ, ಆದರೆ ಬಡವರ ಕರುಳಲ್ಲಿದ್ದ ಒಂದಿಷ್ಟು ನೋಟುಗಳು ಖಂಡಿತವಾಗಿಯೂ ಕೊಳೆತುಹೋದವು. ಕಾಳ ಧನ ಇರಿಸಿಕೊಳ್ಳುವ ದೊಡ್ಡ ದೊಡ್ಡ ಭ್ರಷ್ಟಾಚಾರಿಗಳು ಕರೆನ್ಸಿ ನೋಟುಗಳ ಕಂತೆಗಳನ್ನು ಬಚ್ಚಿಟ್ಟುಕೊಂಡಿರುತ್ತಾರೆ ಎಂಬುದು ಈ ತೀರ್ಮಾನದ ಹಿಂದಿದ್ದ ತಿಳಿವಳಿಕೆ. ಗೊತ್ತಾಗಿದ್ದೇನೆಂದರೆ, ಕಾಳಧನ ಇಟ್ಟುಕೊಳ್ಳುವವರು ನಮಗಿಂತ ಜಾಣರಾಗಿರುತ್ತಾರೆ, ಅವರು ತಮ್ಮ ಧನ, ಬೇನಾಮಿ ಸಂಪತ್ತನ್ನು ಭೂಮಿ ಅಥವಾ ವಜ್ರದಂತಹ ವಸ್ತುಗಳಲ್ಲಿ ಹೂಡಿಕೆ ಮಾಡಿರುತ್ತಾರೆ. ನಕಲಿ ನೋಟುಗಳ ಸಂಖ್ಯೆಯೂ ಹೆಚ್ಚಿದೆ ಎಂಬ ದಾವೆ ಹೂಡಲಾಗುತ್ತು. ನಂತರ ರಿಸರ್ವ್ ಬ್ಯಾಂಕ್ ಹೇಳಿದ್ದೇನೆಂದರೆ, ನಕಲಿ ನೋಟುಗಳು ಅನುಪಾತ ಇರುವುದು ಕೇವಲ 0.0007%ರಷ್ಟು ಎಂದು.

ಇಲ್ಲಿ ಪ್ರಧಾನಮಂತ್ರಿ ಸಂಗ್ರಾಹಾಲಯದ ಗುಲಾಬಿ ಬಣ್ಣದ ವ್ಯಂಗದ ಕೊಠಡಿ ನಿಮಗೆ ಒಂದು ಪ್ರಶ್ನೆ ಕೇಳಲಿದೆ: ಒಂದು ವೇಳೆ 500 ಮತ್ತು 1000 ರೂಪಾಯಿಗಳ ದೊಡ್ಡ ನೋಟಿನದ್ದೇ ಸಮಸ್ಯೆಯಾಗಿದ್ದಲ್ಲಿ ಅದಕ್ಕಿಂತ ದೊಡ್ಡ ಮೌಲ್ಯದ 2000 ರೂಪಾಯಿ ನೋಟಿನಿಂದ ಆ ಸಮಸ್ಯೆಯ ಪರಿಹಾರ ಆಗುವುದು ಹೇಗೆ? ಒಂದು ವೇಳೆ ಭ್ರಷ್ಟರಿಗೆ 1000 ರೂಪಾಯಿಯ ನೋಟುಗಳಿಂದ ಹಣ ಶೇಖರಣೆ ಮಾಡಲು ಅನುಕೂಲ ಆಗುತ್ತಿದೆ ಎಂದಲ್ಲಿ 2000 ರೂಪಾಯಿಯ ನೋಟುಗಳಿಂದ ಅವರಿಗೆ ಇನ್ನಷ್ಟು ಅನುಕೂಲ ಆಗುವುದಿಲ್ಲವೇ? ಈ ಪ್ರಶ್ನೆಯ ಉತ್ತರ ಆಗಲೂ ಸಿಗಲಿಲ್ಲ, ಇಲ್ಲಿಯತನಕವೂ ಸಿಕ್ಕಿಲ್ಲ. ತುಘಲಕ್ ದರ್ಬಾರಿನಿ ರೀತಿಯ ನೋಟು ರದ್ದತಿ ತೀರ್ಮಾನಕ್ಕಾಗಿ ಸರಕಾರವು ದೇಶದ ಜನತೆಗೆ ಎಂದೂ ಕ್ಷಮೆ ಕೇಳಿಲ್ಲ. ಆದರೆ ಕಾಳಧನ ಇಲ್ಲವಾಗಿಸುವ ದಾವೆಯ ಆಧಾರದ ಮೇಲೆ ಚುನಾವಣೆ ಗೆದ್ದರು, ಒಂದೆರಡು ಬಾರಿ ನೋಟು ರದ್ದತಿಯ ವಾರ್ಷಿಕ ಸಂಭ್ರಮ ಆಚರಿಸಿದರು ಹಾಗೂ ಅದರ ನಂತರ ಅದನ್ನು ಮರೆತುಬಿಟ್ಟರು. ಯಾರಿಗೂ ಗೊತ್ತಾಗದ ಹಾಗೆ ಸರಕಾರವು 2018ರಲ್ಲಿಯೇ 2000 ರೂಪಾಯಿಯ ನೋಟುಗಳ ಮುದ್ರಣ ನಿಲ್ಲಿಸಿತು ಹಾಗೂ ಮತ್ತೆ 2022 ಮೇ 19ರಂದು ಮತ್ತೆ ಇದನ್ನು ವಾಪಸ್ ಪಡೆಯುವ ಘೋಷಣೆ ಮಾಡಿತು. ಮತ್ತೆ ಇದನ್ನು ಭ್ರಷ್ಟಾಚಾರದ ವಿರುದ್ಧದ ಅಂತಿಮ ಯುದ್ಧ ಎಂದು ಭಟ್ಟಂಗಿಗಳು ದಾವೆ ಹೂಡಿದರು, ಆದರೆ ಈ ಬಾರಿ ಕೇಳುವವರು ಯಾರೂ ಇಲ್ಲ. 2000 ರೂಪಾಯಿ ನೋಟುಗಳ ಚಲಾವಣೆ ಹೆಚ್ಚು ಇಲ್ಲ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಆದರೆ ಇಷ್ಟು ಸರಳ ವಿಷಯವನ್ನು ತಿಳಿದುಕೊಳ್ಳಲು ಇಡೀ ದೇಶದೊಂದಿಗೆ ಇಂತಹ ಪ್ರಯೋಗ ಮಾಡುವ ಅವಶ್ಯಕತೆ ಏನಿತ್ತು ಎಂಬುದರ ಬಗ್ಗೆ ಹೇಳಿಲ್ಲ. 2000ದ ನಕಲಿ ನೋಟುಗಳನ್ನು ಮಾಡುವುದು ಮುಂಚಿನ 1000 ನೋಟುಗಳಿಗಿಂತ ಸುಲಭ ಎಂಬುದು ಕೇಳಿಬಂದಿದೆ. ಈಗ ಮತ್ತೊಮ್ಮೆ 2000 ಮೌಲ್ಯದ 181 ಕೋಟಿ ನೋಟುಗಳನ್ನು ಬ್ಯಾಂಕಿಗೆ ಮರಳಿಸುವ ಕಸರತ್ತು ಶುರುವಾಗಿದೆ, ಈಗ ಮತ್ತೊಮ್ಮೆ ಪ್ರತಿನಿತ್ಯ ಮಿತಿಗಳನ್ನು ನಿಗದಿಪಡಿಸಲಾಯಿತು, ಮತ್ತೊಮ್ಮೆ ಪ್ರತಿ ವಾರ ನಿಯಮಗಳನ್ನು ಬದಲಿಸಲಾಯಿತು, ಯಾವ ನೋಟುಗಳು ತನ್ನಿಂತಾನೆ ಚಲಾವಣೆಯಿಂದ ಹೊರಹೋಗುತ್ತಿದ್ದವೋ, ಅವುಗಳನ್ನು ಇಲ್ಲವಾಗಿಸಲು ಇಷ್ಟು ದೊಡ್ಡ ದುಬಾರಿಯಾದ ಕಸರತ್ತನ್ನು ಏಕೆ ಮಾಡಲಾಯಿತು ಎಂಬುದಕ್ಕೆ ಕಾರಣ ಎಂದೂ ಯಾರಿಗೂ ಗೊತ್ತಾಗುವುದಿಲ್ಲ. ಇಷ್ಟು ಅಂದುಕೊಂಡುಬಿಡಿ, ಸರಕಾರವು ನೋಟುರದ್ದತಿಯ ಸಮಾಧಿಯ ಮೇಲೆ 2000ದ ನೋಟಿನ ರೂಪದ ಗುಲಾಬಿ ಹೂ ಅರ್ಪಿಸಿದೆ ಎಂದು.

ಪ್ರಧಾನಮಂತ್ರಿ ಸಂಗ್ರಹಾಲಯದಲ್ಲಿ, ಮೋದಿಯವರ ಪ್ರಧಾನಿ ಅವಧಿಯ ನೋಟು ರದ್ದತಿಯ ಕೊಠಡಿ ಎಂದಿಗಾದರೂ ತಯ್ಯಾರಾಗಲಿ, ಅಲ್ಲಿಯತನಕ ವಿಶ್ವದೆಲ್ಲೆಡೆಯ ಅರ್ಥಶಾಸ್ತ್ರದ ಪುಸ್ತಕಗಳಲ್ಲಿ, ಭಾರತದ ನೋಟು ರದ್ದತಿಯ ಕೇಸ್ ಸ್ಟಡಿ ಪ್ರಕಟವಾಗುವುದು; ಚಲನೆಯಲ್ಲಿರುವ ಆರ್ಥವ್ಯವಸ್ಥೆಯೊಂದಿಗೆ ಆಟವಾಡಬಾರದು ಎಂಬುದು ಉದಾಹರಣೆಯ ರೂಪದಲ್ಲಿ ಅದು ಚರ್ಚೆಯಾಗುವುದು. ಹೇಗೆ ಕಣ್ಣಿನ ಆಪರೇಷನ್‌ನ್ನು ಸ್ಕ್ರೂಡ್ರೈವರ್‌ನಿಂದ ಮಾಡಲಾಗುವುದಿಲ್ಲವೋ ಹಾಗೆಯೇ ಆಧುನಿಕ ಅರ್ಥವ್ಯವಸ್ಥೆಯ ಕರೆನ್ಸಿಯನ್ನು ಹವ್ಯಾಸಿಗಳ ಕೈಗೆ ನೀಡಲಾಗುವುದಿಲ್ಲ ಎಂಬ ಪಾಠ ಮಾಡಲಾಗುವುದು. ಆ ಕೊಠಡಿಯ ಕೊನೆಯಲ್ಲಿ ಈ ಬರಹವಿರುವ ಒಂದು ಪಟ್ಟಿಯನ್ನು ಇರಿಸುವ ಸಾಧ್ಯತೆ ಇದೆ; “ಎಚ್ಚರಿಕೆ: ಕರೆನ್ಸಿ ನೋಟುಗಳೊಂದಿಗೆ ಆಟವಾಡುವುದು ಕರೆಂಟ್‌ನೊಂದಿಗೆ ಆಟವಾಡಿದಂತೆ!”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...