Homeಮುಖಪುಟಮಣಿಪುರವನ್ನು ಸಾಮಾಜಿಕವಾಗಿ ಅರ್ಥಮಾಡಿಕೊಳ್ಳುವುದು ಅಗತ್ಯ..

ಮಣಿಪುರವನ್ನು ಸಾಮಾಜಿಕವಾಗಿ ಅರ್ಥಮಾಡಿಕೊಳ್ಳುವುದು ಅಗತ್ಯ..

- Advertisement -
- Advertisement -

’ದಿ ಆಲ್ ಟ್ರೈಬಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಮಣಿಪುರ್’ ಸಂಘಟನೆಯು ಮೈತೇಯಿಗಳ ಮೀಸಲಾತಿ ಬೇಡಿಕೆಯನ್ನು ವಿರೋಧಿಸಿ ಒಂದು ಪ್ರತಿಭಟನಾ ಮೆರವಣಿಗೆ ನಡೆಸಿತು. ಆ ಸಂದಭದಲ್ಲಿ ಘರ್ಷಣೆಗಳು ಉಂಟಾದವು ಮತ್ತು ಅವುಗಳನ್ನು ತಪ್ಪಿಸಲಾಗಲೀ, ನಿಯಂತ್ರಿಸಲಾಗಲೀ ರಾಜ್ಯದ ಆಡಳಿತ ಏನನ್ನೂ ಮಾಡಲಿಲ್ಲ.

ಸರಿಯಾದ ಜನಗಣತಿ ಇಲ್ಲದೇ ಇರುವುದು- ರಾಜಕಾರಣಿಗಳಿಗೆ ಮಣಿಪುರದ ಜನರ ಆಶೋತ್ತರಗಳು, ಭರವಸೆಗಳು, ಭಾವನೆಗಳು, ಭಾಷಾ ಪರಂಪರೆಗಳು ಮತ್ತು ಸಾಮಾಜಿಕ ಗುರುತು ಅಥವಾ ಅಸ್ಮಿತೆಗಳನ್ನು ತಮಗೆ ಬೇಕಾದಂತೆ ದುರುಪಯೋಗ ಮಾಡುವುದಕ್ಕೆ ಆವಕಾಶ ಒದಗಿಸುತ್ತದೆ.

ಇತ್ತೀಚಿನ ವಾರಗಳಲ್ಲಿ ಮಣಿಪುರವು ಎದುರಿಸುತ್ತಿರುವ ಮಾನವೀಯ ದುರಂತ ಮತ್ತು ಸಾಮಾಜಿಕ ತಲ್ಲಣಗಳು- ವಿಭಜನಕಾರಿ ರಾಜಕಾರಣದ ಪರಿಣಾಮ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ವಿವರಣಾತ್ಮಕ ಜನಾಂಗೀಯ ಪರಿಭಾಷೆಯ ಗೊಂದಲ, ವಿವಿಧ ಸಮುದಾಯಗಳ ಮೂಲಗಳ ಕುರಿತು ದತ್ತಾಂಶ-ಮಾಹಿತಿಗಳ ಕೊರತೆ, ವೈಜ್ಞಾನಿಕವಾದ ಜನಗಣತಿ ನಡೆಯದೇ ಇರುವುದು ಸೇರಿದಂತೆ ಇನ್ನೂ ಹಲವು ಸಂಗತಿಗಳು ಈ ಬಿಕ್ಕಟ್ಟಿಗೆ ತಮ್ಮ ಪಾಲು ಸಲ್ಲಿಸಿವೆ.

ಇತ್ತೀಚಿನ ಹಿಂಸಾತ್ಮಕವಾದ ಘರ್ಷಣೆಗಳು ಮತ್ತು ರಕ್ತಪಾತವು ಮೈತೇಯಿ (Meitei ಅಥವಾ Meiteyi) ಸಮುದಾಯಕ್ಕೆ ಪರಿಶಿಷ್ಟ ಬುಡಕಟ್ಟು (ಎಸ್‌ಟಿ) ಸ್ಥಾನಮಾನ ನೀಡಬೇಕೆಂಬ ಬೇಡಿಕೆಗೆ ಸಂಬಂಧಿಸಿದಂತೆ ಮುಂದಡಿಯಿಡಲು ಮಣಿಪುರ ಸರಕಾರಕ್ಕೆ ಅನುಮತಿ ನೀಡುವ ಹೈಕೋರ್ಟಿನ ನಿರ್ಧಾರದ ಪರಿಣಾಮವಾಗಿ ಉಂಟಾಯಿತು.

ಈ ಬೇಡಿಕೆ- ಮತ್ತು ಅದಕ್ಕೆ ಈಗಾಗಲೇ ಎಸ್‌ಟಿ ಸ್ಥಾನಮಾನ ಹೊಂದಿರುವ ಗುಂಪುಗಳ ತೀವ್ರ ವಿರೋಧವು- ರಾಜ್ಯದಲ್ಲಿರುವ ಗುಡ್ಡ-ಕಣಿವೆ ಪ್ರತ್ಯೇಕತೆಯಲ್ಲಿ ಮತ್ತು ಈ ಮೈತೇಯಿ ಸಮುದಾಯದವರು ಯಾರು ಎಂಬುದರ ಸುತ್ತ ಇರುವ ಗೊಂದಲದಲ್ಲಿ ದೊಡ್ಡ ಪಾತ್ರ ಹೊಂದಿದೆ.

ಮೈತೇಯಿ (ಮೈತೈ ಅಥವಾ ಮೈತ್‌ಯಿ ಎಂದೂ ಕರೆಯಲಾಗುತ್ತದೆ) ಎಂಬುದು ಸಾಮಾನ್ಯವಾಗಿ ಮಣಿಪುರದ ನಿವಾಸಿಗಳನ್ನು ಕರೆಯಲಾಗುವ ಜನಜನಿತ ಹೆಸರು. ಮಣಿಪುರದಲ್ಲಿ ಮುಖ್ಯವಾಗಿ ಮಾತನಾಡಲಾಗುವ ಭಾಷೆ ಮಣಿಪುರಿ ಮತ್ತು ಅದು ರಾಜ್ಯದ ಅಧಿಕೃತ ಭಾಷೆಯೂ ಹೌದು. ಮತ್ತಿದು ಭಾರತೀಯ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಮಾನ್ಯತೆ ಪಡೆದಿರುವ ಭಾಷೆಯೂ ಕೂಡಾ.

ಆದರೆ, ಮಣಿಪುರಿ ಭಾಷೆಯನ್ನು ಮಣಿಪುರ ಮಾತ್ರವಲ್ಲದೇ, ಅಸ್ಸಾಂ, ತ್ರಿಪುರ ಮುಂತಾದ ಈಶಾನ್ಯ ರಾಜ್ಯಗಳಲ್ಲಿ ಮತ್ತು ಪಶ್ಚಿಮ ಬಂಗಾಳ ಹಾಗೂ ನೆರೆಯ ದೇಶಗಳಾದ ಮಯನ್ಮಾರ್ ಮತ್ತು ಬಾಂಗ್ಲಾದೇಶದಲ್ಲಿಯೂ ಮಾತನಾಡಲಾಗುತ್ತದೆ. ಈ ಸಮಾನಾತ್ಮಕವಾದ ಅಂಶವು- ಮಣಿಪುರಿ ಭಾಷೆಯನ್ನು ಮಾತನಾಡುವ ಎಲ್ಲರೂ ಮೈತೇಯಿಗಳು ಎಂಬ ಭಾವನೆಯನ್ನು ಮೂಡಿಸುತ್ತದೆ. ’ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೇ ಆಫ್ ಇಂಡಿಯಾ’ (ಪಿಎಲ್‌ಎಸ್‌ಐ- ಲೇಖಕರು ಇದರ ಸ್ಥಾಪಕರು)ದ ’ದಿ ಲ್ಯಾಂಗ್ವೇಜಸ್ ಆಫ್ ಮಣಿಪುರ್’ (ಮಣಿಪುರದ ಭಾಷೆಗಳು) ನೀಡಿರುವ ಪರಿಚಯದ ಪ್ರಕಾರ, ಮಣಿಪುರವು, ಸ್ವಭಾವತಃ ಬಹುಭಾಷೆಗಳ, ಹಲವು ಬುಡಕಟ್ಟುಗಳ, ಬಹುಸಂಸ್ಕೃತಿಗಳ ಒಂದು ರಾಜ್ಯ.

ಈ ರಾಜ್ಯದ ಕಣಿವೆಯನ್ನು ಬಿಷ್ಣುಪುರ್, ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ ಮತ್ತು ತೌಬಲ್ ಎಂಬ ನಾಲ್ಕು ಆಡಳಿತಾತ್ಮಕ ಜಿಲ್ಲೆಗಳಾಗಿ ವಿಭಜಿಸಲಾಗಿದೆ. ಅದೇ ರೀತಿಯಲ್ಲಿ, ಗುಡ್ಡಗಾಡು (ಅಥವಾ ಬೆಟ್ಟಗಳನ್ನು) ಪ್ರದೇಶವನ್ನು ಚಂದೇಲ್, ಚೂರಾಚಂದ್‌ಪುರ್, ಸೇನಾಪತಿ, ತಮೆಂಗ್‌ಲಾಂಗ್ ಮತ್ತು ಉಖ್ರುಲ್ ಜಿಲ್ಲೆಗಳಾಗಿ ವಿಭಜಿಸಲಾಗಿದೆ. ರಾಜ್ಯದ ಭೂಪ್ರದೇಶವು 22,327 ಚದರ ಕಿ.ಮೀ. ವಿಸ್ತಾರವಾಗಿದ್ದು, ವಿವಿಧ ಭಾಷೆಗಳನ್ನು ಮಾತನಾಡುವ, ವಿವಿಧ ಸಂಸ್ಕೃತಿಗಳನ್ನು ಅನುಸರಿಸುವ ಮೂರು ಡಜನ್ನಿಗೂ ಹೆಚ್ಚು ಬುಡಕಟ್ಟುಗಳಿಗೆ ಮನೆಯಾಗಿದೆ.

ರಾಜ್ಯವು ಮುಖ್ಯವಾಗಿ ಮೈತೇಯಿ, ಕುಕಿ ಮತ್ತು ನಾಗಾಗಳ ವಾಸಸ್ಥಾನವಾಗಿದ್ದು, ಅವು ಟಿಬೆಟೋ-ಬರ್ಮನ್ ಭಾಷಾ ಗುಂಪುಗಳಿಗೆ ಸೇರಿವೆ. ಇನ್ನಷ್ಟು ಪರಿಶೀಲನೆ ನಡೆಸಿದಲ್ಲಿ, ಪೂರ್ವ ಇಂಫಾಲ್ ಜಿಲ್ಲೆಯ ಜಿರಿಬಾಮ್ ಉಪವಿಭಾಗದಲ್ಲಿ ಆಸ್ಟ್ರೋ-ಏಷಿಯಾಟಿಕ್ ಭಾಷೆಗಳನ್ನು ಮಾತನಾಡುವವರನ್ನೂ, ಚಂದೇಲ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿರುವ ಮೊರೆಹ್ ಪಟ್ಟಣದಲ್ಲಿ ದ್ರಾವಿಡ ಭಾಷೆ ಮಾತಾಡುವವರನ್ನೂ, ರಾಜಧಾನಿ ಇಂಪಾಲ್‌ನಲ್ಲಿ ಹೆಚ್ಚಾಗಿ ಮತ್ತು ರಾಜ್ಯದ ವಿವಿಧ ಭಾಗಗಳಲ್ಲಿ ಇಂಡೋ-ಆರ್ಯನ್ ಭಾಷೆಗಳನ್ನು ಮಾತನಾಡುವವರನ್ನೂ ಕಾಣಬಹುದು.

ರಾಜ್ಯದ ಒಳಗೆ ಮಣಿಪುರಿಯನ್ನು ಜನವಾಸವಿರುವ ಪ್ರದೇಶಗಳಿಗೆ ಅನುಗುಣವಾಗಿ ವಿವಿಧ ರೂಪಗಳಲ್ಲಿ ಮಾತನಾಡಲಾಗುತ್ತದೆ. ಈ ರೂಪಗಳ ವ್ಯತ್ಯಾಸ ಎಲ್ಲರಿಗೂ ಗೊತ್ತಾಗುವುದಿಲ್ಲ. ರಾಜ್ಯದಲ್ಲಿ ಎಲ್ಲಾ ಸರಕಾರಿ ವ್ಯವಹಾರಗಳಲ್ಲಿ ಮೂರು ಲಿಪಿಗಳನ್ನು ಬಳಸಲಾಗುತ್ತದೆ- ಬಂಗಾಳಿ ಲಿಪಿ, ಮೈತೇಯಿ-ಮಾಯೆಕ್ ಲಿಪಿ ಮತ್ತು ರೋಮನ್ ಲಿಪಿ. ಮೈತೇಯಿಗಳು ಬಾಂಗ್ಲಾ (ಬಂಗಾಳಿ) ಲಿಪಿಯನ್ನು ಬಳಸಲು ಆರಂಭಿಸುವುದಕ್ಕೆ ಮೊದಲು ಬರವಣಿಗೆಗೆ ಮೈತೇಯಿ-ಮಾಯೆಕ್ ಲಿಪಿಯನ್ನು ಬಳಸುತ್ತಿದ್ದರು. ಇಂದು, ಸ್ಥಳೀಯ ಎಂದು ಪರಿಗಣಿಸಲಾಗುತ್ತಿರುವ ಮೈತೇಯಿ-ಮಾಯೆಕ್ ಲಿಪಿಯು ಸರಕಾರಿ ಮತ್ತು ಸರಕಾರೇತರ ವ್ಯವಹಾರಗಳಲ್ಲಿ ಬಳಕೆಯಲ್ಲಿ ಮತ್ತೆ ತನ್ನ ನೆಲೆಯನ್ನು ಹೆಚ್ಚಿಸುತ್ತಾ ಬರುತ್ತಿದೆ.

ಕೆಲವು ಮೈತೇಯಿ ಸಮುದಾಯಗಳನ್ನು (ಮೈತೇಯಿ ಒಂದು ಏಕರೂಪಿ-ಏಕ ಮೂಲದ ಸಮುದಾಯವಲ್ಲ) ಈಗಾಗಲೇ ಪರಿಶಿಷ್ಟ ಬುಡಕಟ್ಟು ಆಥವಾ ಇತರೆ ಹಿಂದುಳಿದ ವರ್ಗಗಳ ಗುಂಪುಗಳಿಗೆ ಸೇರಿಸಲಾಗಿದೆ. ಮಣಿಪುರದ ಪರಿಸ್ಥಿತಿಯನ್ನು ಮಹಾರಾಷ್ಟ್ರದೊಂದಿಗೆ ಹೋಲಿಸಿದರೆ, ಬೇರೆ ರಾಜ್ಯದವರು ಮಣಿಪುರದಲ್ಲಿನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ಮರಾಠ ಎಂಬುದು ಹಲವು ಜಾತಿ-ಉಪಜಾತಿ, ಜನಾಂಗಿಯ ಗುಂಪುಗಳನ್ನು ಹೊಂದಿರುವ ಒಂದು ಸಾಮಾನ್ಯ ಸಮುದಾಯ. ಅದಕ್ಕೆ ಹೊರತಾಗಿ, ಸಾಮಾನ್ಯವಾಗಿ- ಅದರಲ್ಲೂ ವಿಶೇಷವಾಗಿ ವಸಾಹತುಶಾಹಿ ಕಾಲಘಟ್ಟದ ಸಾಂಸ್ಕೃತಿಕ ಬರಹಗಳಲ್ಲಿ ’ಮರಾಠ’ ಮತ್ತು ’ಮಹಾರಾಷ್ಟ್ರ’ ಎಂಬುದನ್ನು ಜೊತೆಜೊತೆಗೇ ಸೇರಿಸಲಾಗಿದೆ. ಆದರೆ, ಎಲ್ಲಾ ಮಹಾರಾಷ್ಟ್ರೀಯರು ಮರಾಠರಲ್ಲ ಅಥವಾ ಮರಾಠಿ ಭಾಷೆ ಮಾತನಾಡುವವರೆಲ್ಲರೂ ಮರಾಠರಲ್ಲ ಎಂಬುದು ಎಲ್ಲರಿಗೂ ಗೊತ್ತಿರುವಂತದ್ದು. ಆದುದರಿಂದ ಎಸ್‌ಸಿ ಸ್ಥಾನಮಾನ ನೀಡಬೇಕೆಂಬ ಮೈತೇಯಿಗಳ ಬೇಡಿಕೆಯನ್ನು ಮಹಾರಾಷ್ಟ್ರದ ಮರಾಠ ಆರಕ್ಷಣ್ (ಮೀಸಲಾತಿ) ಮೋರ್ಚಾ ಮತ್ತು ರಾಜಸ್ಥಾನದ ಜಾಟ್ ಮೀಸಲಾತಿ ಆಂದೋಲನಗಳಿಗೆ ಹೋಲಿಸಬಹುದು.

ಇದನ್ನೂ ಓದಿ: ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದ್ದರೂ ಪ್ರಧಾನಿ ಮೋದಿ ಮೌನವಾಗಿರುವುದೇಕೆ?: ಜೈರಾಮ್ ರಮೇಶ್ ಪ್ರಶ್ನೆ

’ದಿ ಆಲ್ ಟ್ರೈಬಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಮಣಿಪುರ್’ ಸಂಘಟನೆಯು ಮೈತೇಯಿಗಳ ಮೀಸಲಾತಿ ಬೇಡಿಕೆಯನ್ನು ವಿರೋಧಿಸಿ ಒಂದು ಪ್ರತಿಭಟನಾ ಮೆರವಣಿಗೆ ನಡೆಸಿತು. ಆ ಸಂದಭದಲ್ಲಿ ಘರ್ಷಣೆಗಳು ಉಂಟಾದವು ಮತ್ತು ಅವುಗಳನ್ನು ತಪ್ಪಿಸಲಾಗಲೀ, ನಿಯಂತ್ರಿಸಲಾಗಲೀ ರಾಜ್ಯದ ಆಡಳಿತ ಏನನ್ನೂ ಮಾಡಲಿಲ್ಲ.

ಈ ಗಲಭೆಗಳ ಪ್ರಾಥಮಿಕ ಜವಾಬ್ದಾರಿಯು ಆಳುವ ಸರಕಾರದ ಹೆಗಲೇರುತ್ತದೆ. ಭಾರತೀಯ ಜನತಾ ಪಕ್ಷವು 60 ಸದಸ್ಯಬಲದ ವಿಧಾನಸಭೆಯಲ್ಲಿ 32 ಸ್ಥಾನಗಳನ್ನು ಗೆದ್ದು ಮಣಿಪುರದಲ್ಲಿ ಸರಕಾರ ರಚಿಸಿತ್ತು. ಸಂಯುಕ್ತ ಜನತಾ ದಳ (ಜೆಡಿ-ಯು) ಆರು ಸ್ಥಾನಗಳನ್ನು ಗೆದ್ದಿತ್ತು. ಇದೀಗ ಜೆಡಿ-ಯು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದಿಂದ (ಎನ್‌ಡಿಎ) ಹೊರಬಂದಿರುವುದರಿಂದ ಬಿಜೆಪಿಯು ರಾಜಕೀಯ ಅನಿಶ್ಚಿತತೆಯನ್ನು ಎದುರಿಸುತ್ತಿದೆ. ಭವಿಷ್ಯದಲ್ಲಿ ಚುನಾವಣಾ ಯಶಸ್ಸನ್ನು ಖಾತರಿಪಡಿಸಿಕೊಳ್ಳಲು ಅದು ಮೈತೇಯಿಗಳಿಗೆ ಮೀಸಲಾತಿ ಕೊಡಮಾಡುವುದರ ಜೊತೆಗೆ, ಬಹುಸಂಖ್ಯಾತರನ್ನು ಅಲ್ಪಸಂಖ್ಯಾತರ ವಿರುದ್ಧ ಎತ್ತಿಕಟ್ಟುವ ಎಂದಿನ ಮಾಮೂಲಿ ತಂತ್ರವನ್ನು ಅನುಸರಿಸಿದೆ.

ಈ ಆಳುವ ಸರಕಾರವು ಪ್ರಾಮಾಣಿಕವಾಗಿ ಬಹುಸಂಖ್ಯಾತರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಆಸಕ್ತಿ ಹೊಂದಿದ್ದೇ ಆಗಿದ್ದಲ್ಲಿ-ಅದು ಬಹಳ ಕಾಲದಿಂದ ನೆನೆಗುದಿಗೆ ಬಿದ್ದಿರುವ ವಿಷಯವಾಗಿರುವ- ರಾಜ್ಯಮಟ್ಟದ ಸಮುದಾಯಗಳ ಗಣತಿಯನ್ನು ನಡೆಸುತ್ತಿತ್ತು. ಸರಿಯಾದ ಜನಗಣತಿ ಇಲ್ಲದೇ ಇರುವುದು- ರಾಜಕಾರಣಿಗಳಿಗೆ- ಯಾರ ಹೆಸರಿನಲ್ಲಿ ಅವರು ಅಧಿಕಾರ ಬಯಸುತ್ತಾರೋ, ಅದೇ ಜನರ ಆಶೋತ್ತರಗಳು, ಭರವಸೆಗಳು, ಭಾವನೆಗಳು, ಭಾಷಾ ಪರಂಪರೆಗಳು ಮತ್ತು ಸಾಮಾಜಿಕ ಗುರುತು ಅಥವಾ ಅಸ್ಮಿತೆಗಳನ್ನು ತಮಗೆ ಬೇಕಾದಂತೆ ದುರುಪಯೋಗ ಮಾಡುವುದಕ್ಕೆ ಅವಕಾಶ ಒದಗಿಸುತ್ತದೆ.

ಮಣಿಪುರವು ಬಹಳ ದೀರ್ಘಕಾಲದಿಂದಲೂ ಭಾರೀ ಮಿಲಿಟರಿ ಪಡೆಯ ಅಸ್ತಿತ್ವ ಹೊಂದಿರುವ ನಾಗರಿಕ ಪ್ರದೇಶವಾಗಿದೆ. ತೀವ್ರವಾದ ಸ್ವತಂತ್ರ ಮನೋಭಾವದ ಮತ್ತು ತಮ್ಮ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಅಪಾರ ಗೌರವ ಹೊಂದಿರುವ ಇಲ್ಲಿನ ಜನರ ಮೇಲೆ, ಕೇಂದ್ರ ಸರಕಾರದ ತನ್ನಿಚ್ಛೆಗಳನ್ನು ಹೇರುವುದರ ವಿರುದ್ಧ ದೀರ್ಘಕಾಲದ ಪ್ರತಿಭಟನೆಗಳೂ ಇಲ್ಲಿ ನಡೆಯುತ್ತಾ ಬಂದಿವೆ. ಒಂದು ವೈಜ್ಞಾನಿಕವಾದ ಜನಗಣತಿಯು ಭವಿಷ್ಯದ ರಾಜ್ಯಾಡಳಿತಕ್ಕೆ ಮಣಿಪುರದ ಹಲವು ಜನಾಂಗೀಯ ಮತ್ತು ಭಾಷಾ ಸಮುದಾಯಗಳ ಅಗತ್ಯಗಳನ್ನು ಅಂದಾಜು ಮಾಡಲು ನೆರವಾಗುತ್ತದೆ. ಆದರೆ, ಅಧಿಕಾರದ ಲಾಲಸೆ ಹೊತ್ತಿರುವ ವಿಭಜನಕಾರಿ ರಾಜಕೀಯವು ಅದಕ್ಕೆ ಅವಕಾಶ ನೀಡುವುದಿಲ್ಲ.

ಈ ಹೊತ್ತಿನಲ್ಲಿ ಮಣಿಪುರವು ಬಹುದೊಡ್ಡ ಮಾನವೀಯ ದುರಂತವನ್ನು ಎದುರಿಸುತ್ತಿದೆ. ಅದಕ್ಕೆ- ಸಂತ್ರಸ್ತರ ಜನಾಂಗ, ಭಾಷೆ, ಧರ್ಮಗಳನ್ನು ಮೀರಿ- ಸಮಾಧಾನ, ಆರೈಕೆ, ಕಾಳಜಿಯ ಆಗತ್ಯವಿದೆ. ಆದರೆ, ದೂರಗಾಮಿಯಾಗಿ, ಅದಕ್ಕೆ ಪೊಲೀಸ್ ಕಣ್ಗಾವಲು ಹೆಚ್ಚಿಸಬೇಕಾದ ಅಗತ್ಯವೇನೂ ಇಲ್ಲ. ಅದಕ್ಕೆ ಬೇಕಾಗಿರುವುದು ಯಾವುದೆಂದರೆ ಮತ್ತು ಅದು ಅರ್ಹವಾಗಿರುವುದು ಯಾವುದಕ್ಕೆಂದರೆ, ಸರಿಯಾದ ಸಾಮಾಜಿಕ ತಿಳಿವಳಿಕೆ ಮತ್ತು ಎಲ್ಲರ ಅಭಿವೃದ್ಧಿಯು ಪ್ರತಿಯೊಂದು ಸರಕಾರದ ಸಾಂವಿಧಾನಿಕ ಜವಾಬ್ದಾರಿ ಎಂಬುದನ್ನು ಅರ್ಥ ಮಾಡಿಕೊಂಡಿರುವಂಥ ಒಂದು ಸರಕಾರ. ವಿಭಜನಕಾರಿ ರಾಜಕೀಯವು ಈ ಸುಂದರ ರಾಜ್ಯವನ್ನು ಇನ್ನಷ್ಟು ಸಂಕಷ್ಟ, ನೋವು ಮತ್ತು ದುಃಖಕ್ಕೆ ತಳ್ಳಬಹುದು.

ಜಿ.ಎನ್.ದೇವಿ ಮತ್ತು ನಿಪುಣಿ ಕೆ. ಮಾಓ
(ಗಣೇಶ್ ಎನ್. ದೇವಿಯವರು ಭಾಷಾ ವಿದ್ವಾಂಸರು ಮತ್ತು ಸಾಂಸ್ಕೃತಿಕ ಕಾರ್ಯಕರ್ತರು ಹಾಗೂ ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೇ ಆಫ್ ಇಂಡಿಯಾ- ಪಿಎಲ್‌ಎಸ್‌ಐದ ಸ್ಥಾಪಕರು. ನಿಪುಣಿ ಕೆ. ಮಾಓ ಅವರು ಮಣಿಪುರ ’ಪಿಎಲ್‌ಎಸ್‌ಐ’ಯ ಸಂಪಾದಕರು.)

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...

ಆಕಸ್ಮಿಕವಾಗಿ ಗಡಿ ದಾಟಿದ್ದ 7 ಭಾರತೀಯರನ್ನು ಹಸ್ತಾಂತರಿಸಿದ ಪಾಕಿಸ್ತಾನ

2023 ರ ಪ್ರವಾಹದ ಸಮಯದಲ್ಲಿ ಅಜಾಗರೂಕತೆಯಿಂದ ಗಡಿ ದಾಟಿದ ನಂತರ ಬಂಧಿಸಲ್ಪಟ್ಟ ಏಳು ಭಾರತೀಯ ನಾಗರಿಕರನ್ನು ಪಾಕಿಸ್ತಾನ ಶನಿವಾರ ಸ್ವದೇಶಕ್ಕೆ ವಾಪಸ್ ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್‌ನ ಅಟ್ಟಾರಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ನಲ್ಲಿ...

ಮೀರತ್| ಅಪಹರಣ ಪ್ರಕರಣ ಹಿಂಪಡೆಯುವಂತೆ ಪೊಲೀಸರ ಒತ್ತಡ; ‘ಗೃಹಬಂಧನ’ದಲ್ಲಿ ದಲಿತ ಕುಟುಂಬ

ಜನವರಿ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಕಪ್ಸಾದ್ ಗ್ರಾಮದಲ್ಲಿ ತಾಯಿಯ ಕೊಲೆಯ ನಂತರ ಅಪಹರಿಸಲ್ಪಟ್ಟ ದಲಿತ ಹುಡುಗಿಯ ಕುಟುಂಬ ಸದಸ್ಯರು ತಾವು ಗೃಹಬಂಧನದಲ್ಲಿದ್ದು, ಆರೋಪಿಗಳ ವಿರುದ್ಧ ಪ್ರಕರಣವನ್ನು ಮುಂದುವರಿಸದಂತೆ ಪೊಲೀಸರು...

ಉದ್ಯಮಿ ಸಿಜೆ ರಾಯ್ ಮರಣೋತ್ತರ ಪರೀಕ್ಷೆ; ಹೃದಯ-ಶ್ವಾಸಕೋಶದಲ್ಲಿ 6.35 ಎಂಎಂ ಗುಂಡಿನ ಗಾಯ

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆಯ ಮರಣೋತ್ತರ ಪರೀಕ್ಷೆಯ ವರದಿಗಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಎಂಎನ್ ವಿವರಿಸಿದ್ದಾರೆ. 6.35 ಎಂಎಂ ಗುಂಡಿನ ದಾಳಿಯು ತಕ್ಷಣದ...

ಮುಂಬೈ| ನಿರ್ದೇಶಕ ರೋಹಿತ್ ಶೆಟ್ಟಿ ಮನೆಯ ಹೊರಗೆ 4 ಸುತ್ತು ಗುಂಡು ಹಾರಿಸಿದ ಅಪರಿಚಿತರು

ಶನಿವಾರ ತಡರಾತ್ರಿ, ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬೈನ ಜುಹು ನಿವಾಸದ ಹೊರಗೆ ನಾಲ್ಕು ಸುತ್ತು ಗುಂಡು ಹಾರಿಸಲಾಗಿದ್ದು, ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಚಿತ್ರ ನಿರ್ಮಾಪಕ-ನಿರ್ದೇಶಕರ ಕಟ್ಟಡದ ಬಳಿ ಅಪರಿಚಿತ...

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...