Homeಚಳವಳಿಉತ್ತರದಾದ್ಯಂತ ಪ್ರಶ್ನೆ ಕೇಳುತ್ತಿರುವ ರೈತರು

ಉತ್ತರದಾದ್ಯಂತ ಪ್ರಶ್ನೆ ಕೇಳುತ್ತಿರುವ ರೈತರು

- Advertisement -
- Advertisement -

ಉತ್ತರ ಭಾರತದ ರೈತರು ಗ್ರಾಮ ಬಂದ್ ಪ್ರತಿಭಟನೆಯ ಹೋರಾಟ ಆರಂಭಿಸಿದ್ದಾರೆ. ತಮ್ಮ ಯಾವುದೇ ಉತ್ಪನ್ನವನ್ನೂ ಮಂಡಿಗಳಿಗೆ ಕಳಿಸುವುದಿಲ್ಲ; ಇಲ್ಲೇ ಕೊಳೆಯಲಿ ಪರವಾಗಿಲ್ಲ ಎಂಬ ವಿನೂತನ ಪ್ರತಿಭಟನೆ ಇದು. ಹಾಲು, ತರಕಾರಿ, ಹಣ್ಣುಗಳ ಪೂರೈಕೆ ನಗರಗಳಿಗೆ ಬಂದ್ ಆದಾಗಲೇ ನಗರಿಗರಿಗೆ ರೈತರ ಕಷ್ಟ ಗೊತ್ತಾಗುವುದು.
ಈ ಪ್ರತಿಭಟನೆ ಉತ್ತರ ಭಾರತದಲ್ಲಿ, ಅದರಲ್ಲೂ ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್‍ಗಢ, ಮಹಾರಾಷ್ಟ್ರ ಮತ್ತು ಪಂಜಾಬುಗಳಲ್ಲಿ ತೀವ್ರ ಸ್ವರೂಪ ಪಡೆದಿದೆ. ಈ ಹೋರಾಟ ಭಾಜಪ ಆಳ್ವಿಕೆಯ ರಾಜ್ಯಗಳಲ್ಲಿ ತೀವ್ರವಾಗಿದೆ ಎನ್ನುವುದು ಕಾಕತಾಳೀಯ ಅಲ್ಲ; ಹಾಗೆಂದು ಅದು ರಾಜಕೀಯ ಕುತಂತ್ರದ ಆಟವೂ ಅಲ್ಲ. ಈ ರಾಜ್ಯಗಳ ಸರಕಾರಗಳು ರೈತರ ಬಗ್ಗೆ ಸತತವಾಗಿ ತಾತ್ಸಾರದ ಧೋರಣೆ ತಳೆದ ಕಾರಣ ರೈತರ ಬೇಗುದಿ ಹೆಚ್ಚಿದೆ. ಈ ಹೋರಾಟ ಏಕಾಏಕಿ ಹುಟ್ಟಿಕೊಂಡದ್ದೂ ಅಲ್ಲ, ಯಾವುದೋ ಭಾವನಾತಕ ಕಾರಣಕ್ಕೇ ಭುಗಿಲೆದ್ದ ಪ್ರತಿಭಟನೆಯೂ ಅಲ್ಲ. ಇದು ಭೂಕಂಪದ ಮೊದಲಿನ ಸರಣಿ ಗುರುಗಾಟದ ಹಾಗೆ; ಕಳೆದ ಕೆಲವು ವರ್ಷಗಳಿಂದ ಅಲ್ಲಿಇಲ್ಲಿ ವ್ಯಕ್ತವಾಗುತ್ತಲೇ ಇದೆ.
ಕಳೆದ ವರ್ಷ ಮಧ್ಯಪ್ರದೇಶದ ಮಾಂಡ್‍ಸೂರಿನಲ್ಲಿ ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಪೋಲೀಸರು ಗೋಲೀಬಾರ್ ಮಾಡಿ ಆರು ರೈತರ ಜೀವ ಹೋಗಿತ್ತು. ಈ ದಮನದ ನೆನಪು ರೈತರಲ್ಲಿ ಇನ್ನೂ ಹಸಿಯಾಗಿದೆ. ಈ ಗೋಲೀಬಾರಿನ ಬಳಿಕ ಸರ್ಕಾರ ಅಷ್ಟಿಷ್ಟು ಕ್ರಮ ಕೈಗೊಂಡರೂ ಮತ್ತೆ ರೈತ ನಿರ್ಲಕ್ಷದ ಜಾಡಿಗೆ ಮರಳಿದೆ. ಈ ಬಾರಿಯ ಗ್ರಾಮ ಬಂದ್ ಹೋರಾಟದ ಭಾಗವಾಗಿ ಮಾಂಡ್‍ಸೂರಿನಲ್ಲಿ ಇದೇ ಜೂನ್ ಆರರಂದು, ಗೋಲೀಬಾರಿನಲ್ಲಿ ಹುತಾತ್ಮರಾದ ರೈತರನ್ನು ಸ್ಮರಿಸುವ ಹುತಾತ್ಮ ದಿನಾಚರಣೆಯೂ ನಡೆಯಲಿದೆ. ಸಾವಿರಾರು ರೈತರು ಸೇರಲಿದ್ದಾರೆ.
ಈ ಹೋರಾಟಕ್ಕೆ ಇನ್ನೊಂದು ಆಯಾಮವಿದೆ. ಇಷ್ಟು ದಿನ ಆಯಾ ರಾಜ್ಯ ಅಥವಾ ಸಂದರ್ಭಗಳಲ್ಲಿ ಬೇಗುದಿ ಅನುಭವಿಸಿದ ರೈತರು ಬೀದಿಗಿಳಿದಾಗ ಉಳಿದ ಸಂಘಟನೆಗಳು ಅದಕ್ಕೆ ಬೆಂಬಲ ನೀಡಿ ಹೋರಾಟದ ಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಿದ್ದರು. ಕಳೆದ ವರ್ಷದ ಮಧ್ಯಪ್ರದೇಶದ ರೈತ ಹೋರಾಟವಿರಬಹುದು, ಭೂ ಸ್ವಾಧೀನದ ವಿರುದ್ಧ ರಾಜಸ್ತಾನದಲ್ಲಿ ಭುಗಿಲೆದ್ದ ಹೋರಾಟ ಇರಬಹುದು. ಆದರೆ ಈ ಬಾರಿ ಕಳೆದ ಎರಡು ವರ್ಷಗಳಿಂದ ಸಮಾಲೊಚನೆ ನಡೆಸಿ ಸುಮಾರು 150 ರೈತಪರ ಸಂಘಟನೆಗಳ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ರೂಪುತಳೆದಿದೆ. ಕಳೆದ ವರ್ಷದ ಜುಲೈನಲ್ಲಿ ಈ ಸಮಿತಿಗೊಂದು ಸಾಂಸ್ಥಿಕ ಸ್ವರೂಪವೂ ದೊರಕಿತು. ಕೃಷಿಕ್ ಮುಕ್ತಿ ಸಂಗ್ರಾಮ ಸಮಿತಿ, ಅಖಿಲ ಭಾರತ ಕಿಸಾನ್ ಸಭಾ, ಆಶಾ, ಕರ್ನಾಟಕ ರಾಜ್ಯ ರೈತ ಸಂಘ, ಜನ ಚಳವಳಿಯ ರಾಷ್ಟ್ರೀಯ ಒಕ್ಕೂಟ, ಸ್ವರಾಜ್ ಅಭಿಯಾನ್ ಸೇರಿ ದೇಶದ ಸುಮಾರು 150 ಮುಖ್ಯ ರೈತಪರ/ ಜನಪರ ಹೋರಾಟಗಳು ಸಂಘಟನೆಗಳು ಈ ಸಮಿತಿಯ ಭಾಗವಾಗಿವೆ.
ನಮ್ಮದೆರಡೇ ಬೇಡಿಕೆಗಳು
ಕೃಷಿ ಬಿಕ್ಕಟ್ಟಿನ ಎಲ್ಲಾ ಸಮಸ್ಯೆಗಳ ವಿವರ ಈ ಎರಡು ಮೂಲಗಳಲ್ಲಿ ಹುದುಗಿದೆ ಎಂಬ ಸ್ಪಷ್ಟತೆಯನ್ನು ಈ ಸಮನ್ವಯ ಸಮಿತಿ ಅನಾವರಣಗೊಳಿಸಿದೆ. ಈ ಸಮನ್ವಯ ಸಮಿತಿ ಎರಡು ಸ್ಥೂಲ ಬೇಡಿಕೆಗಲನ್ನು ಮುಂದಿಟ್ಟಿದೆ. ಬೆಳೆಗೆ ಲಾಭದಾಯಕ ಬೆಲೆ ಮತ್ತು ಋಣಮುಕ್ತ ರೈತ. ಬೆಳೆಗೆ ಲಾಭದಾಯಕ ಬೆಲೆ ನೀಡಿದರೆ ಸಾಲ ಮನ್ನಾದಂಥಾ ಬೇಡಿಕೆಗಳೇ ಅಸಂಗತವಾಗುತ್ತದೆ ಎಂಬ ನಿಲುವನ್ನು ಬಹುತೇಕ ಆರ್ಥಿಕ ತಜ್ಞರಷ್ಟೇ ಅಲ್ಲ, ರೈತ ನಾಯಕರೂ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರವೇ ನೇಮಿಸಿದ ಸ್ವಾಮಿನಾಥನ್ ಸಮಿತಿ ಈ ಕುರಿತ ಶಿಫಾರಸ್ಸುಗಳನ್ನು ಪ್ರಕಟಗೊಳಿಸಿದ್ದು ಕೇಂದ್ರ ಸರ್ಕಾರ ಅದನ್ನು ಜಾರಿಗೊಳಿಸದೇ ನುಣುಚಿಕೊಳ್ಳುತ್ತಿದೆ. ಕಳೆದ ವರ್ಷ ಸರ್ವೋಚ್ಛ ನ್ಯಾಯಾಲಯದಲ್ಲಿ ‘ಈ ಶಿಫಾರಸ್ಸನ್ನು ಜಾರಿಗೊಳಿಸಲು ಸಾಧ್ಯವೇ ಇಲ್ಲ; ಅದು ಬೆಲೆ ಏರಿಕೆಗೆ ಕಾರಣವಾಗುತ್ತದೆ’ ಎಂದು ಅಫಿಡವಿಟ್ ಸಲ್ಲಿಸಿದ್ದ ಮೋದಿ ಈ ವರ್ಷ ರೈತ ಅಸಹನೆಯ ಬಿಸಿ ತಟ್ಟಿದ್ದರಿಂದ ಸ್ವಾಮಿನಾಥನ್ ಶಿಫಾರಸು ಜಾರಿ ಮಾಡುತ್ತಿದ್ದೇವೆ ಎಂದು ಘೋಷಿಸಿದ್ದಾರೆ. ಆದರೆ ಮೋದಿ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆಯ ಚೌಕಟ್ಟು ಪೂರಾ ಲೊಳಲೊಟ್ಟೆ. ಸರ್ಕಾರ ಉತ್ಪಾದನಾ ವೆಚ್ಚ + 50% ಎಂಬ ಸೂತ್ರ ಮುಂದಿಟ್ಟಿರುವುದರಲ್ಲಿ ಭೂಮಿಯ ಬಂಡವಾಳದ ವೆಚ್ಚ ಮತ್ತಿತರ ಪರೋಕ್ಷ ವೆಚ್ಚಗಳು ಸೇರಿಲ್ಲ. ಅಷ್ಟೇಕೆ ಉತ್ಪಾದನಾ ವೆಚ್ಚವನ್ನು ಸರ್ಕಾರ ಲೆಕ್ಕ ಹಾಕಿದ್ದೇ ಅವಾಸ್ತವವಾಗಿದೆ. ಕುಗ್ಗಿದ ಉತ್ಪಾದನಾ ವೆಚ್ಚವನ್ನು ತಾನೇ ತೀರ್ಮಾನಿಸಿ ಅದರ ಆಧಾರದ ಮೇಲೆ ತಾನೇ ಬೆಲೆ ಘೋಷಿಸುವ ಸರ್ಕಾರದ ಅಡ್ಡ ಕಸುಬಿತನ ರೈತ ಮುಖಂಡರಿಗೆ ಅರ್ಥವಾಗಿದೆ.
ಈ ರೀತಿ ಅತಾರ್ಕಿಕವಾದ ಕನಿಷ್ಠ ಬೆಂಬಲ ಬೆಲೆಯೂ ರೈತರಿಗೆ ದಕ್ಕುತ್ತಿಲ್ಲ ಎಂಬುದನ್ನು ಸಾಬೀತುಪಡಿಸಲು ಈ ಸಮಿತಿಯು ದೇಶದ ಬಹುತೇಕ ಮಾರುಕಟ್ಟೆಗಳಿಗೆ ಹೋಗಿ ಅಧ್ಯಯನ ನಡೆಸಿದೆ. ಎಲ್ಲಾ ಕಡೆ ಒಂದೇ ಚಿತ್ರಣ. ಕನಿಷ್ಠ ಬೆಂಬಲ ಬೆಲೆ ಎನ್ನುವುದೇ ದೊಡ್ಡ ಮೋಸ. ಆದ್ದರಿಂದಲೇ ಲಾಭದಾಯಕ ಬೆಲೆ ಕುರಿತಂತೆ ನಿಷ್ಕರ್ಷೆಗೆ ಬರಲು ಕಾನೂನು ರೂಪಿಸಲೂ ಈ ಸಮಿತಿ ಒತ್ತಾಯಿಸುತ್ತಿದೆ. ಬೆಲೆ ಕುಸಿತದ ಸಮಯದಲ್ಲಿ ಸರ್ಕಾರದ ಮಧ್ಯಪ್ರವೇಶ, ಮಾರುಕಟ್ಟೆ ಬೆಲೆ ಮತ್ತು ಸರ್ಕಾರದ ಬೆಲೆಯ ಮಧ್ಯೆಯ ವ್ಯತ್ಯಾಸವನ್ನು ರೈತರಿಗೆ ಸಬ್ಸಿಡಿ ರೂಪದಲ್ಲಿ ನೀಡುವುದು ಎಲ್ಲಾ ಈ ಬೇಡಿಕೆಗಳಲ್ಲಿ ಸೇರಿದೆ.
ಈ ಸಮಿತಿ ಗಹನವಾಗಿ ಯೋಚಿಸಿರುವ ಇನ್ನೊಂದು ಆಯಾಮ ಸಾಲದ್ದು. ಋಣಮುಕ್ತ ರೈತ ಎಂಬ ಪರಿಕಲ್ಪನೆಯನ್ನು ಮುಂದಿಟ್ಟಿರುವ ಸಮಿತಿ, ರೈತ ಸಂಕುಲ ಯಾವುದೇ ಋಣ ಬಾಧೆಯಿಂದ ನರಳದಂತೆ ಮಾಡುವ ಮಾರ್ಗೋಪಾಯಗಳನ್ನು ಸರ್ಕಾರ ರಚಿಸಬೇಕು ಎಂದು ಒತ್ತಾಯಿಸಿದೆ. ಮುಖ್ಯ ಅಂಶವೆಂದರೆ ಈ ಬೇಡಿಕೆ ಯಾಕೆ ಎಂಬುದಷ್ಟೇ ಅಲ್ಲ, ಇದನ್ನು ಹೇಗೆ ಮಾಡಬಹುದು ಎಂಬು ಅನುಷ್ಠಾನ ಯೊಗ್ಯ ಸಲಹೆಗಳೂ ಈ ಸಮಿತಿಯಲ್ಲಿದೆ. ಸರ್ಕಾರಗಳು ನುಣುಚಿಕೊಳ್ಳಲು ಸಾದ್ಯವೇ ಇಲ್ಲ!
ಹಾಗಿದ್ದರೆ ಸರ್ಕಾರಗಳು ಯಾಕೆ ನುಣುಚಿಕೊಳ್ಳುತ್ತಿವೆ?
ಈ ಚಳವಳಿ ಉತ್ತರಭಾರತದಲ್ಲಿ ಪ್ರಖರವಾಗಿ ಬೆಳೆಯುತ್ತಿರುವುದರ ಹಿಂದೆ ಭಾಜಪದ ರಾಜಕೀಯ ಹಿತಾಸಕ್ತಿಗಳ ಜನದ್ರೋಹ ಇದೆ. ಗ್ರಾಮೀಣ ವರ್ಗವನ್ನು ಭಾವುಕ ವಿಷಯಗಳ ಮೂಲಕ ಹಾದಿ ತಪ್ಪಿಸುತ್ತಾ ಆಡಳಿತದ ತಣ್ಣನೆ ಆಟದಲ್ಲಿ ಕಾರ್ಪೋರೇಟ್ ಹಿತಾಸಕ್ತಿಗೆ ಮಣೆ ಹಾಕುವ ಕೆಲಸ ಭಾಜಪ ಕಾಂಗ್ರೆಸ್ಸಿಗಿಂತಲೂ ತೀವ್ರವಾಗಿ ಮಾಡುತ್ತಿದೆ. ಕಾರ್ಪೋರೇಟ್ ಕುಳಗಳ ಕೆಟ್ಟ ಸಾಲಗಳನ್ನು ನಿರಂತರವಾಗಿ ಮನ್ನಾ ಮಾಡುತ್ತಾ ಬಂದಿರುವ ಈ ಸರ್ಕಾರ ಆ ನಷ್ಟ ತುಂಬಿಸಲು ಬ್ಯಾಂಕುಗಳಿಗೆ ಬಜೆಟ್ ಅನುದಾನ ಬೇರೆ ನೀಡುತ್ತಿದೆ. ಅರ್ಥಾತ್ ಕಾರ್ಪೋರೇಟ್ ನಷ್ಟವನ್ನು ನೇರಾ ನೇರಾ ಸರ್ಕಾರ ತುಂಬಿ ಕೊಡುತ್ತಿದೆ; ಅದೂ ನಮ್ಮ ತೆರಿಗೆ ಮೂಲಕ.
ಈ ಕಳ್ಳಾಟಕ್ಕೆ ಶಾಶ್ವತ ಕೊನೆ ಹೇಳಲು ಈ ಸಂಯುಕ್ತ ಸಮನ್ವಯ ಸಮಿತಿಯ ನೇತೃತ್ವದ ರೈತ ಹೋರಾಟ ನಿರ್ಧರಿಸಿದಂತಿದೆ. ಭಾಜಪ ತನ್ನ ಭಾವನಾತ್ಮಕ ಕೋಮು ಧ್ರುವೀಕರಣದ ಮೂಲಕ ಹುಲುಸು ಬೆಲೆ ಪಡೆದಿರುವ ರಾಜ್ಯಗಳಲ್ಲೇ ಈ ಭೂಕಂಪದ ಅದುರುವಿಕೆ ತೀವ್ರವಾಗುತ್ತಿದೆ. ಮೊದಲೇ ಅಭಿವೃದ್ಧಿ ಕುಂಠಿತವಾಗಿರುವ ಈ ರಾಜ್ಯಗಳಲ್ಲಿ ರೈತ ನಿರ್ಲಕ್ಷ್ಯವೂ ಸೇರಿಕೊಂಡರೆ ಅಧಿಕಾರಸ್ಥ ಪಕ್ಷಕ್ಕೆ ಅದಕ್ಕಿಂತ ದೊಡ್ಡ ಅಪಾಯದ ಸೂಚನೆ ಇಲ್ಲ. ದಕ್ಷಿಣದ ರಾಜ್ಯಗಳಲ್ಲಿ ಅದೂ ಕರ್ನಾಟಕದಲ್ಲಿ ಸ್ಥಳೀಯ ಮಂಥನದ ಸಂಕ್ರಮಣ ಸ್ಥಿತಿಯಲ್ಲಿ ಉತ್ತರದಷ್ಟು ತೀವ್ರ ಹೋರಾಟ ತಕ್ಷಣಕ್ಕೆ ಹೊಮ್ಮದು. ಆದರೆ ಈ ಚಳವಳಿ ರೈತ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಪಡೆವ ಸ್ಪಷ್ಠತೆಯೊಂದಿಗೆ ಹೊರಟಿರುವ ಕಾರಣ ಈ ವರ್ಷ ಅಭೂತಪೂರ್ವ ಚಳವಳಿ ಎಲ್ಲೆಡೆ ಭುಗಿಲೇಳಲಿದೆ. ಕರ್ನಾಟಕವೂ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

– ಕೆ.ಪಿ.ಸುರೇಶ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...