Homeಕರ್ನಾಟಕಬೆಂಕಿ ಹಚ್ಚುವ ಕಿಚ್ಚು ರಾಜಕೀಯ ಪ್ರೇರಿತವೇ ಹೊರತು ಜನಪರ ಕಾಳಜಿಯದ್ದಲ್ಲ

ಬೆಂಕಿ ಹಚ್ಚುವ ಕಿಚ್ಚು ರಾಜಕೀಯ ಪ್ರೇರಿತವೇ ಹೊರತು ಜನಪರ ಕಾಳಜಿಯದ್ದಲ್ಲ

- Advertisement -
- Advertisement -

ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಒಂದು ಬಸ್ ನಿಂತಿದೆ. ಅದು ಎಲ್ಲಾ ಬಸ್‍ಗಳಿಗಿಂತಲೂ ವಿಭಿನ್ನವಾಗಿದೆ. ಆ ಬಸ್‍ನಲ್ಲಿ ಯಾವ ಪ್ರಯಾಣಿಕರೂ ಪ್ರಯಾಣ ಮಾಡಲಾರರು, ಯಾವ ಚಾಲಕರೂ ಮುಂದೆ ಓಡಿಸಲಾರರು. ಆ ಬಸ್ ನೋಡಿದರೆ ಎಂತವರೂ ವಿಷಾಧ ವ್ಯಕ್ತಪಡಿಸದೇ ಇರಲಾರರು. ಅದು ತನ್ನ ಸುತ್ತ ನಾಲ್ಕಾರು ಬ್ಯಾನರ್‍ಗಳನ್ನು ಹೊತ್ತು ನಿಂತಿದೆ. “ನನ್ನ ಯಾವ ತಪ್ಪಿಗೆ ಈ ಶಿಕ್ಷೆ? ತಪ್ಪೇ ಇಲ್ಲದ ಸೇವೆಗೆ ಕಲ್ಲಿನೇಟು, ಬೆಂಕಿಯ ಸ್ಪರ್ಶ. ಇದು ನ್ಯಾಯವೇ?”, “ಲಕ್ಷಾಂತರ ಜನರಿಗೆ ಸೇವೆ ಒದಗಿಸುತ್ತೇನೆ, ನನ್ನ ಯಾವ ತಪ್ಪಿಗೆ ಈ ಘೋರ ಶಿಕ್ಷೆ” ಎಂಬ ಮೊದಲಾದ ವಾಕ್ಯಗಳು ಆ ಬ್ಯಾನರ್‍ಗಳಲ್ಲಿವೆ. ಅಂದರೆ ಆ ಬಸ್‍ಗೆ ಬೆಂಕಿ ಹಚ್ಚಿ ಸುಟ್ಟು ಕರಕಲು ಮಾಡಲಾಗಿದೆ. ಸುಟ್ಟವರು ಯಾರು?

ಸರ್ಕಾರಿ ಬಸ್‍ಗಳು, ಸರ್ಕಾರದ ಕಟ್ಟಡಗಳಂತ ಸರ್ಕಾರಕ್ಕೆ ಸಂಬಂಧಿಸಿದ ಆಸ್ತಿಗಳು ಸಾರ್ವಜನಿಕರ ಆಸ್ತಿಗಳಲ್ಲವೇ? ಅವುಗಳನ್ನು ರಕ್ಷಿಸಿ ಉಳಿಸಿಕೊಳ್ಳುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಲ್ಲವೇ? ಹೌದು ಇದೆಲ್ಲವೂ ಸತ್ಯ, ಉಳಿಸಿ ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಹಾಗಾದರೆ ಬಸ್‍ಗಳಿಗೆ ಬೆಂಕಿ ಹಚ್ಚಿದವರಾರು ಎಂಬ ಪ್ರಶ್ನೆಗೆ ತಟ್ ಬರುವ ಉತ್ತರ ಹೋರಾಟಗಾರರು ಎಂಬುದು. ಬೆಂಕಿ ಹಚ್ಚುವ ಆ ಹೋರಾಟಗಾರರು ಯಾರು?

ಜನರ ಪರವಾಗಿ, ಜನರ ಕಷ್ಟ-ನಷ್ಟಗಳ ಜೊತೆನಿಂತು, ದೇಶದ ಸಮಸ್ಯೆಗಳ ವಿರುದ್ಧ ಹೋರಾಟ ಮಾಡುವ ಯಾವ ಹೋರಾಟಗಾರರೂ, ಸಂಘಟನೆಯೂ ಬೆಂಕಿ ಹಚ್ಚಲಾರರು. ಏಕೆಂದರೆ ಅದು ದೇಶದ ಆಸ್ತಿ, ಅದನ್ನು ನಾಶ ಮಾಡುವುದು ನಮ್ಮ ಆಸ್ತಿಯನ್ನು ನಾವೇ ಹಾಳುಮಾಡಿದಂತೆ ಎಂಬುದನ್ನು ಅವರು ಅರಿತಿರುತ್ತಾರೆ. ಕರ್ನಾಟಕದಲ್ಲಿ ಬಸ್‍ಗಳಿಗೆ ಬೆಂಕಿ, ಕಲ್ಲು ತೂರಾಟ ಮುಂದಾದ ಹಾನಿಮಾಡುವ ಪ್ರಕರಣಗಳು ಹೆಚ್ಚಾಗಿ ಸದ್ದು ಮಾಡುವುದು ಕಾವೇರಿ ನೀರು ಹೋರಾಟದ ಸಂದರ್ಭದಲ್ಲಿ, ಆ ಹೋರಾಟದಲ್ಲಿ ಸಾರ್ವಜನಿಕ ಆಸ್ತಿಯನ್ನು ನಾಶಮಾಡುವವರು ಯಾರು. ರೈತರ ಪರ ಸದಾ ಚಳುವಳಿಯನ್ನು ಮುನ್ನಡೆಸುತ್ತಿರುವ ರೈತಸಂಘ, ಮೊದಲಾದ ಸಂಘಟನೆಗಳು ಸಾರ್ವಜನಿಕ ಆಸ್ತಿಯನ್ನು ನಾಶ ಮಾಡುವುದಿಲ್ಲ. ದಿನನಿತ್ಯ ಜನರ ಸಂಕಷ್ಟಗಳ ಪರ ಹೋರಾಟ ಮಾಡುವ ಸಂಘಟನೆಗಳು ಅಂದು ಬೆಂಕಿ ಹಚ್ಚಲು ಬರುವುದಿಲ್ಲ. ಅವು ಶಾಂತ ರೀತಿಯಲ್ಲಿ ಹೋರಾಟ ನಡೆಸುತ್ತಿರುತ್ತವೆ.

ಬೆಂಕಿ ಹಚ್ಚುವ ಹುಚ್ಚು ಉಮೇದಿಗೆ ಒಳಗಾಗುವುದು ಯಾವ ಜೀವಪರ ಕಾಳಜಿಯೂ ಇಲ್ಲದ, ರಾಜಕೀಯ ಪುಡಾರಿತನ ಮಾಡಿಕೊಂಡಿರುವ ಚೇಲಾಗಳಲ್ಲದೆ ಮತ್ತಾರಾಗಿರಲು ಸಾಧ್ಯ. ಏಕೆಂದರೆ ಬೆಂಕಿ ಹಚ್ಚಿದಾಕ್ಷಣ ಸಮಸ್ಯೆಗಳು ಬಗೆಹರಿದುಬಿಡುವುದಿಲ್ಲ.. ಆದೂ ಯಾರು ಯಾರದ್ದೋ ರಾಜಕೀಯ ಲಾಭಕ್ಕಾಗಿ ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಉದ್ದೆರಶದಿಂದ ಇಂತಹ ಕೃತ್ಯಕ್ಕೆ ಕೈ ಹಾಕುತ್ತಾರೆ.

ಈ ರೀತಿ ಸಾರ್ವಜನಿಕ ಆಸ್ತಿಪಾಸ್ತಿಯನ್ನು ಹಾಳು ಮಾಡುವುದರಿಂದ ಅದರ ನಷ್ಟ ಅನುಭವಿಸಬೇಕಾದವರೂ ಕೂಡ ನಾವೇ ಅನ್ನುವುದನ್ನು ಮರೆಯಬಾರದು. ಅವೆಲ್ಲವೂ ಪ್ರತಿಯೊಬ್ಬ ಜನಸಾಮಾನ್ಯರ ತೆರಿಗೆ ಹಣದಿಂದ ಕೊಂಡುತಂದ ಆಸ್ತಿಗಳು. ಅವುಗಳನ್ನು ನಾಶ ಮಾಡಿದಷ್ಟೂ ಮತ್ತೆ ನಮ್ಮ ತೆರಿಗೆ ಹಣಕ್ಕೆ ಸರ್ಕಾರ ಕೈ ಹಾಕುತ್ತದೆ ಎಂಬ ಎಚ್ಚರಿಕೆ ಇರಬೇಕು.

ಇನ್ನು ಸರ್ಕಾರಗಳು ಕೂಡ ಇಂತವುಗಳನ್ನು ನಿಗ್ರಹಿಸಲು ಕೇವಲ ಕಾನೂನುಗಳನ್ನು ತಂದರೆ ಸಾಲದು. ಜನರು  ಹಾಗೆ ಮಾಡುವುದರಿಂದ ಸರ್ಕಾರ ಮತ್ತು ಮಾಧ್ಯಮಗಳ ಗಮನಸೆಳೆಯಬಹುದು ಎಂದು ಭಾವಿಸಿದ್ದಾರೆ. ಕೆಲ ಟಿ.ವಿ ಮಾಧ್ಯಮಗಳಂತೂ ಹೋರಾಟ ಪ್ರತಿಭಟನೆ ಎಂದರೆ ಬಸ್‍ಗೆ ಕಲ್ಲು ಹೊಡೆಯುವುದು, ಬೆಂಕಿ ಹಚ್ಚುವುದು ಮಾತ್ರವೇ ಎಂಬಂತೆ ಮತ್ತಷ್ಟು ಜನರನ್ನು ಉದ್ರೇಕಿಸುತ್ತವೆ. ಹಾಗಾಗಿ ಸರ್ಕಾರಗಳು ತಮ್ಮ ನೀತಿ ಮತ್ತು ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಜನರನ್ನು ಒಳಗೊಂಡು ಅವರ ಅಭಿಪ್ರಾಯ ತೆಗೆದುಕೊಳ್ಳುವುದು ಮುಖ್ಯ..

ಎಲ್ಲಕ್ಕಿಂತ ಮುಖ್ಯವಾಗಿ ಜನರ ಪ್ರತಿಭಟನೆಗಳನ್ನು, ಅವರ ನೋವುಗಳನ್ನು ಸಾವಧಾನದಿಂದ ಕೇಳಿಸಿಕೊಳ್ಳುವ, ಪ್ರತಿಕ್ರಿಯಿಸುವ ಮನಸ್ಥಿತಿಯನ್ನು ಸರ್ಕಾರಗಳು ಹೊಂದಬೇಕು. ಅದು ಎಷ್ಟೇ ಚಿಕ್ಕ ಪ್ರತಿಭಟನೆಯಾದರೂ ಅದರ ಉದ್ದೇಶವನ್ನು ಸರ್ಕಾರಗಳು ಅರ್ಥಮಾಡಿಕೊಂಡರೆ ಆಗ ಜನರು ಸಹ ಹಿಂಸಾತ್ಮಕ ಪ್ರತಿಭಟನೆಗಳ ಮಾರ್ಗ ತುಳಿಯುವುದಿಲ್ಲ. ಆದರೆ ಸರ್ಕಾರಗಳೇ ಇಂತಹ ಹಿಂಸಾಚಾರಕ್ಕೆ ಕುಮ್ಮಕ್ಕು ಕೊಡುತ್ತಿರುವುದರಿಂದ ಇಂತಹ ಕ್ರೌರ್ಯಗಳು ಇನ್ನೂ ಹೆಚ್ಚಾಗುತ್ತಿವೆ.

ಸರ್ಕಾರ ಮತ್ತು ಜನಸಾಮಾನ್ಯರು ಇಬ್ಬರು ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕು. ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಹಾಗೆಯೇ ನಮ್ಮ ಪರಿಸರವನ್ನು ಸ್ವಚ್ಛ ಮತ್ತು ಸುಂದರವಾಗಿಟ್ಟುಕೊಳ್ಳಬೇಕು. ಆಗ ನಾವು ಮಾದರಿ ರಾಜ್ಯವಾಗಲು ಸಾಧ್ಯ..

ಸುಟ್ಟು ಕರಕಲಾದ ಬಸನ್ನು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಮೆಜೆಸ್ಟಿಕ್‍ಗೆ ತಂದು ನಿಲ್ಲಿಸಿ ಅದರ ಮೇಲೆ ಬ್ಯಾನರ್ ಹಾಕಿ ಸಾರ್ವಜನಿಕ ಪ್ರದರ್ಶನಕ್ಕಿಟ್ಟಿದ್ದಾರೆ. ಇದನ್ನು ನೋಡಿದ ಜನರಿಗೆ ಅರ್ಥವಾಗಲಿ ಎಂದು.. ಈಗಲಾದರೂ ಎಚ್ಚೆತ್ತುಕೊಳ್ಳೋಣವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...