Homeಅಂತರಾಷ್ಟ್ರೀಯವಿಶ್ವಸಂಸ್ಥೆಯಲ್ಲಿ ಹವಾಮಾನ ವೈಪರೀತ್ಯದ ಕುರಿತು 16ರ ಬಾಲೆ ಗ್ರೇಟಾ ತನ್ಬೆರ್ಗ್‌ ಮಾಡಿದ ಭಾಷಣ..

ವಿಶ್ವಸಂಸ್ಥೆಯಲ್ಲಿ ಹವಾಮಾನ ವೈಪರೀತ್ಯದ ಕುರಿತು 16ರ ಬಾಲೆ ಗ್ರೇಟಾ ತನ್ಬೆರ್ಗ್‌ ಮಾಡಿದ ಭಾಷಣ..

ನೀವು ನಮ್ಮನ್ನು ವಿಫಲಗೊಳಿಸುತ್ತಿದ್ದೀರಿ. ಆದರೆ ಯುವಜನರು ನಿಮ್ಮ ದ್ರೋಹವನ್ನು ಅರಿಯಲು ಪ್ರಾರಂಭಿಸಿದ್ದಾರೆ. ಮುಂದಿನ ಪೀಳಿಗೆಗಳ ಎಲ್ಲಾ ಕಣ್ಣುಗಳು ನಿಮ್ಮ ಮೇಲಿವೆ. ಒಂದು ವೇಳೆ ನೀವು ನಮ್ಮನ್ನು ವಿಫಲಗೊಳಿಸುವುದನ್ನು ಆಯ್ಕೆ ಮಾಡಿಕೊಂಡರೆ, ನಾವು ನಿಮ್ಮನ್ನು ಎಂದೆಂದಿಗೂ ಕ್ಷಮಿಸಲಾರೆವು.

- Advertisement -
- Advertisement -

ನಿಮ್ಮನ್ನು ಸತತವಾಗಿ ಗಮನಿಸುವೆ; ಇದುವೆ ನನ್ನ ಸಂದೇಶ : ಗ್ರೇಟಾ ತನ್ಬೆರ್ಗ್‌

ಕನ್ನಡಕ್ಕೆ: ರಾಜಶೇಖರ್ ಅಕ್ಕಿ

ಇದು ತಪ್ಪು. ನಾನಿಲ್ಲಿ ಇರಬಾರದಾಗಿತ್ತು. ನಾನೀಗ ನನ್ನ ಶಾಲೆಯಲ್ಲಿ, ಸಾಗರದಾಚೆ ಇರಬೇಕಿತ್ತು. ಆದರೂ ನೀವು ನಮ್ಮ ಕಡೆ, ಯುವಜನರ ಕಡೆ ಬರುತ್ತೀರ, ನಿಮ್ಮ ಭರವಸೆ, ನಿರೀಕ್ಷೆಗಳನ್ನು ಹುಡುಕಿಕೊಂಡು. ನಿಮಗೆಷ್ಟು ಧೈರ್ಯ?

ನೀವು ನಿಮ್ಮ ಖಾಲಿ ಮಾತುಗಳಿಂದ ನನ್ನ ಕನಸುಗಳನ್ನು ಹಾಗೂ ನನ್ನ ಬಾಲ್ಯವನ್ನು ನನ್ನಿಂದ ಕದ್ದಿದ್ದೀರ. ಆದರೂ ನಾನು ಅದೃಷ್ಟವಂತೆ. ಆದರೆ ಜನರು ನರಳುತ್ತಿದ್ದಾರೆ. ಜನರು ಸಾಯುತ್ತಿದ್ದಾರೆ. ಪರಿಸರ ವ್ಯವಸ್ಥೆಯು ಸಂಪೂರ್ಣವಾಗಿ ನಾಶವಾಗುತ್ತಿದೆ. ಒಂದು ಸಾಮೂಹಿಕ ಅಳಿವಿನ ಪ್ರಾರಂಭದ ಘಟ್ಟದಲ್ಲಿದ್ದೇವೆ. ಹಾಗೂ ಇಂಥ ಸಮಯದಲ್ಲಿ ನೀವು ದುಡ್ಡು ಮತ್ತು ಆರ್ಥಿಕ ಬೆಳವಣಿಗೆಯ ಚೆಂದದ ಕಥೆಗಳ ಬಗ್ಗೆಯೇ ಮಾತನಾಡುತ್ತೀರಿ. ನಿಮಗೆಷ್ಟು ಧೈರ್ಯ?

ಮೂವತ್ತು ವರ್ಷಗಳಗಿಂದ ವಿಜ್ಞಾನವು ಸ್ಪಷ್ಟವಾಗಿ ಹೇಳುತ್ತಲಿದೆ. ಆದರೂ ನಿಮ್ಮ ಮುಖವನ್ನು ಬೇರೆಡೆ ತಿರುಗಿಸಲು ನಿಮಗೆಷ್ಟು ಧೈರ್ಯ? ಹಾಗೂ ಈ ಸಮಸ್ಯೆಯ ಪರಿಹಾರ ಮತ್ತು ಇದಕ್ಕೆ ಬೇಕಿರುವ ರಾಜಕೀಯ ಕಾಣಿಸಿಕೊಳ್ಳದೇ ಇದ್ದರೂ ಇಲ್ಲಿ ಬಂದು, ನಾವು ಮಾಡಬೇಕಾದದ್ದನ್ನು ಮಾಡುತ್ತಿದ್ದೇವೆ ಎಂದು ಹೇಳಲು ನಿಮಗೆಷ್ಟು ಧೈರ್ಯ?

ನಮ್ಮ ಮಾತುಗಳನ್ನು ಕೇಳಿಸಿಕೊಳ್ಳುತ್ತೀರಿ ಮತ್ತು ಇದರ ತುರ್ತನ್ನು ಅರ್ಥಮಾಡಿಕೊಳ್ಳುತ್ತೀರಿ ಎಂದು ನೀವು ಹೇಳುತ್ತೀರಿ. ಆದರೆ, ನಾನೆಷ್ಟೇ ಸಿಟ್ಟಿನಲ್ಲಿರಲಿ ಮತ್ತು ದುಃಖದಲ್ಲಿರಲಿ, ನಿಮ್ಮ ಈ ಮಾತುಗಳನ್ನು ನಂಬಲು ಸಾಧ್ಯವಿಲ್ಲ. ಏಕೆಂದರೆ, ಒಂದು ವೇಳೆ ನೀವು ಪರಿಸ್ಥಿತಿಯನ್ನು ನಿಜವಾಗಿಯೂ ಅರ್ಥಮಾಡಿಕೊಂಡು ಇದರ ಬಗ್ಗೆ ಕ್ರಮ ತೆಗೆದುಕೊಳ್ಳಲು ವಿಫಲವಾಗುತ್ತಿದ್ದರೆ, ನೀವು ದುಷ್ಟರು ಎಂತಾಗುವುದು. ಹಾಗೂ ನಾನು ಇದನ್ನು ನಂಬಲು ತಯಾರಿಲ್ಲ.

ಹತ್ತು ವರ್ಷಗಳಲ್ಲಿ ಹೊರಸೂಸುವಿಕೆಯನ್ನು (ಎಮಿಷನ್ಸ್) ಅರ್ಧದಷ್ಟು ಕಡಿತಗೊಳಿಸುವ ಈ ಜನಪ್ರಿಯ ಪರಿಕಲ್ಪನೆ ಏನು ಮಾಡಬಲ್ಲದು ಗೊತ್ತೆ? ಇದು 1.5 ಡಿಗ್ರಿಗಿಂತ ಕಡಿಮೆ ಇರಲು ಕೇವಲ 50% ಅವಕಾಶವನ್ನು ನೀಡುತ್ತದೆ ಹಾಗೂ ಮನುಷ್ಯನ ನಿಯಂತ್ರಣವನ್ನು ಮೀರಿದ ಮತ್ತೇ ಬದಲಾಯಿಸಲಾಗದಂತಹ ಸರಣಿ ಪ್ರತಿಕ್ರಿಯೆಗಳನ್ನು ಪ್ರಾರಂಭಿಸುವ ಅಪಾಯ ಹೊಂದಿದೆ.

50% ನಿಮಗೆ ಒಪ್ಪಿಗೆ ಇರಬಹುದು. ಆದರೆ, ಈ ಸಂಖ್ಯೆಗಳು ನಿರ್ಣಾಯಕ ಹಂತಗಳನ್ನು (ಟಿಪಿಂಗ್ ಪಾಯಿಂಟ್ಸ್), ಹೆಚ್ಚಿನ ಫೀಡ್‍ಬ್ಯಾಕ್ ಲೂಪ್ಸ್, ವಾಯು ಮಾಲಿನ್ಯದಿಂದ ಕಾಣಿಸಿಕೊಳ್ಳದ ತಾಪಮಾನದ ಹೆಚ್ಚುವರಿ ಏರಿಕೆ ಅಥವಾ ಹವಾಮಾನದ ನ್ಯಾಯದ ಅಂಶಗಳನ್ನು ಹೊಂದಿಲ್ಲ. ಇದರೊಂದಿಗೆ, ಗಾಳಿಯಲ್ಲಿರುವ ಶತಕೋಟಿ ಟನ್‍ಗಳಷ್ಟಿರುವ ನಿಮ್ಮ ಕಾರ್ಬನ್ ಡೈಆಕ್ಸೈಡ್ ಅನ್ನು ನಮ್ಮ ಪೀಳಿಗೆಯ ಜನರು ಹೀರವವರು ಎನ್ನುವುದರ ಮೇಲೆ ಅವಲಂಬಿಸಿಲಾಗಿದೆ. ಈ ಗಾಳಿಯನ್ನು ಸೇವಿಸಲು ಬೇಕಾದ ತಂತ್ರಜ್ಞಾನದ ಅಭಿವೃದ್ಧಿಯೂ ಕಾಣಿಸಿಕೊಳ್ಳುತ್ತಿಲ್ಲ.

ಹಾಗಾಗಿ, ಈ 50% ನಮಗೆ ಒಪ್ಪಿಗೆಯಿಲ್ಲ – ಇದರ ಪರಿಣಾಮಗಳನ್ನು ಎದುರಿಸಬೇಕಾದ ನಮಗೆ ಒಪ್ಪಿಗೆಯಿಲ್ಲ.

ಜಾಗತಿಕ ತಾಪಮಾನದಲ್ಲಿ 1.5 ಡಿಗ್ರಿ ಹೆಚ್ಚಳಕ್ಕಿಂತ ಕೆಳಗಿರಬೇಕಾದ 67% ಅವಕಾಶವನ್ನು ಹೊಂದಬೇಕಾದರೆ, ಕ್ಲೈಮೇಟ್ ಚೇಂಜ್‍ನ ಅಂತತರಾಷ್ಟ್ರೀಯ ಪ್ಯಾನೆಲ್ ನೀಡಿದ ಅತಿ ಹೆಚ್ಚಿನ ಸಂಭವನೀಯತೆ – ಇಡೀ ವಿಶ್ವವು ಹೊರಸೂಸಲು 1ನೇ ಜನವರಿ 2018ರಂದು ಕಾರ್ಬನ್ ಡೈಆಕ್ಸೈಡ್ ನ 420 ಗಿಗಾಟನ್ ಹೊಂದಿತ್ತು. ಇಂದು ಆ ಸಂಖ್ಯಯೂ ಈಗಾಗಲೇ 350 ಗಿಗಾಟನ್‍ಗಳಗಿಂತ ಕಡಿಮೆಯಾಗಿದೆ.

ಕೆಲವು ತಾಂತ್ರಿಕ ಪರಿಹಾರಗಳಿಂದ ಮತ್ತು ‘ಎಂದಿನಂತೆ ನಡೆಯುವ ವ್ಯವಹಾರ’ದಿಂದ ಇದನ್ನು ಬಗೆಹರಿಸಬಹುದು ಎಂದು ನಟಿಸಲು ನಿಮಗೆಷ್ಟು ಧೈರ್ಯ? ಇಂದಿನ ಹೊರಸೂಸುವಿಕೆಯ ಲೆವೆಲ್ ನೋಡಿದರೆ, ಈಗ ಬಾಕಿ ಉಳಿದಿರುವ ಕಾರ್ಬನ್ ಡೈಆಕ್ಸೈಡ್ ಬಜೆಟ್ ಕೇವಲ ಎಂಟೂವರೆ ವರ್ಷಗಳಲ್ಲಿ ಮುಗಿದುಹೋಗುವುದು.

ಈ ಅಂಕಿ ಅಂಶಗಳಿಗೆ ಪೂರಕವಾಗಿ ಯಾವುದೇ ಪರಿಹಾರಗಳು ಅಥವಾ ಯೋಜನೆಗಳು ಇಂದು ಕಾಣಿಸಿಕೊಳ್ಳುವುದಿಲ್ಲ, ಏಕೆಂದರೆ, ಈ ಅಂಕಿಅಂಶಗಳು ತುಂಬಾ ಅನಾನುಕೂಲಕರವಾಗಿವೆ. ಹಾಗೂ ನೀವುಗಳು ಇದನ್ನು ಹೀಗೆಯೇ ಇದೆ ಎಂದು ಹೇಳಿಕೊಳ್ಳುವಷ್ಟು ಪ್ರಬುದ್ಧರಾಗಿಲ್ಲ.

ನೀವು ನಮ್ಮನ್ನು ವಿಫಲಗೊಳಿಸುತ್ತಿದ್ದೀರಿ. ಆದರೆ ಯುವಜನರು ನಿಮ್ಮ ದ್ರೋಹವನ್ನು ಅರಿಯಲು ಪ್ರಾರಂಭಿಸಿದ್ದಾರೆ. ಮುಂದಿನ ಪೀಳಿಗೆಗಳ ಎಲ್ಲಾ ಕಣ್ಣುಗಳು ನಿಮ್ಮ ಮೇಲಿವೆ. ಒಂದು ವೇಳೆ ನೀವು ನಮ್ಮನ್ನು ವಿಫಲಗೊಳಿಸುವುದನ್ನು ಆಯ್ಕೆ ಮಾಡಿಕೊಂಡರೆ, ನಾವು ನಿಮ್ಮನ್ನು ಎಂದೆಂದಿಗೂ ಕ್ಷಮಿಸಲಾರೆವು.

ಇದರಿಂದ ತಪ್ಪಿಸಿಕೊಳ್ಳಲು ನಿಮ್ಮನ್ನು ಬಿಡುವುದಿಲ್ಲ. ಇಲ್ಲಿಯೇ, ಇದೇ ಸಮಯದಲ್ಲಿ ನಾವು ಗೆರೆಯನ್ನು ಎಳೆಯುತ್ತಿದ್ದೇವೆ. ಜಗತ್ತು ಎಚ್ಚೆತ್ತುಕೊಳ್ಳುತ್ತಿದೆ. ಬದಲಾವಣೆ ಬರುತ್ತಿದೆ, ನಿಮಗಿಷ್ಟವಾಗಲಿ ಆಗದೇ ಇರಲಿ ಬದಲಾವಣೆ ಬರುತ್ತಿದೆ…

ಧನ್ಯವಾದಗಳು…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...