Homeಚಳವಳಿಯುವಜನರು ಗಾಂಧೀಜಿಯನ್ನೇಕೆ ತಿಳಿಯಬೇಕು?

ಯುವಜನರು ಗಾಂಧೀಜಿಯನ್ನೇಕೆ ತಿಳಿಯಬೇಕು?

- Advertisement -
- Advertisement -

-ಪ್ರೊ. ಅವಿಜಿತ್ ಪಾಠಕ್, ಸಮಾಜ ಶಾಸ್ತ್ರ ಪ್ರಾಧ್ಯಾಪಕರು, ಜೆಎನ್‌ಯು

ಸಂಗ್ರಹಿತ ಭಾವಾನುವಾದ: ನಿಖಿಲ್ ಕೋಲ್ಪೆ

ಕೃಪೆ: ದಿವೈರ್‌

ಹಿಂಸೆಯು ಮಾನ್ಯತೆ ಪಡೆದು ಸಾಮಾನ್ಯ ಎನಿಸಿರುವ ಈ ಪ್ರಪಂಚದಲ್ಲಿ ಸಾಮೂಹಿಕ ಪರಿಹಾರಕ್ಕಾಗಿ ಶ್ರಮಿಸುತ್ತಿರುವ ಎಲ್ಲರೂ ಗಾಂಧಿಯವರತ್ತ ನೋಡಬೇಕು. ಗಾಂಧಿಯವರು ಅಸಾಮಾನ್ಯ ಎನಿಸುವುದು ಅವರು ಯಶಸ್ವಿಯಾದರು ಎಂಬುದಕ್ಕಲ್ಲ ಎಂದು ನನಗನಿಸಿದ ಕ್ಷಣಗಳಿವೆ. ಬದಲಾಗಿ ಅವರು ‘ಅಸಾಧ್ಯ’ವಾದುದಕ್ಕಾಗಿ ಶ್ರಮಿಸಿದರು ಎಂಬುದಕ್ಕೆ. ಹಿಂಸೆಯ ಕಾಲದಲ್ಲಿ ಅಹಿಂಸೆಗಾಗಿ; ಅಧಿಕಾರಶಾಹಿ ಮತ್ತು ತಾಂತ್ರಿಕತೆಯ ಅಮಾನವೀಯತೆಯು ಮಾನ್ಯತೆ ಪಡೆದಿರುವ ಕಾಲದಲ್ಲಿ ಸ್ವಾವಲಂಬನೆಗಾಗಿ; ಹೊರಗಿನ ತೋರಿಕೆಯೇ ಮಾನ್ಯತೆ ಪಡೆದಿರುವ ಕಾಲದಲ್ಲಿ ಆತ್ಮವಿಮರ್ಶೆಗಾಗಿ ದುಡಿದರು ಎಂಬ ಕಾರಣಕ್ಕಾಗಿ. ಗಾಂಧಿ ‘ವಿಫಲ’ರಾದರೆಂದು ಬಹಳಷ್ಟು ಸಲ ಹೇಳಲಾಗುತ್ತದೆ. 1948ರ ಜನವರಿ 30ದಂದು ಅವರಿಗೆ ಗುಂಡಿಕ್ಕಿದಾಗ ನಾಥುರಾಂ ಗೋಡ್ಸೆ ನೀಡಿದ ಸಂದೇಶವೆಂದರೆ, ಗಾಂಧಿಯವರ ವೈಫಲ್ಯ ಅಕ್ಷಮ್ಯ ಮತ್ತು ಅದಕ್ಕಾಗಿ ಅವರನ್ನು ತಿಳಿದುಕೊಳ್ಳುವ ಬದಲು ಕೊಲ್ಲಬೇಕು ಎಂಬುದಾಗಿದೆ.

ಸಾಮಾನ್ಯವಾಗಿ ಗೋಡ್ಸೆಯ ರಾಜಕೀಯದ ಜೊತೆ ಸಂಬಂಧವಿಲ್ಲದ ನಮ್ಮಲ್ಲಿನ ಹಲವರಲ್ಲಿಯೂ ಗೋಡ್ಸೆಯ ತುಣುಕೊಂದು ಅಡಗಿದೆಯೆ? ‘ಗಾಂಧಿ ನಿಂದನೆ’ ಎಂದು ನಾನು ಕರೆಯಲಿಚ್ಛಿಸುವ ಕೃತ್ಯದಲ್ಲಿ ನಾವು ತೊಡಗಿರುವುದನ್ನು ಗಮನಿಸಿ. ಆಧುನಿಕವಾದಿಗಳು (ಗಾಂಧಿಯವರ ಅತ್ಯಂತ ನಿಕಟ ಶಿಷ್ಯ ಎನಿಸಿದ ಜವಾಹರಲಾಲ್ ನೆಹರೂ ಅವರನ್ನೂ ಈ ಗುಂಪಿನಲ್ಲಿ ಸೇರಿಸಲು ಇಚ್ಛಿಸುತ್ತೇನೆ)  ಅವರ ‘ಸರಳ’ ಆದರೂ ವಿಸ್ತೃತವಾದ ಹಿಂದ್ ಸ್ವರಾಜ್ ಎಂಬ ವಸಾಹತುವಿರೋಧಿ ಮಾರ್ಗದರ್ಶಿ ಸೂತ್ರದ ಬಗ್ಗೆ ಇರಿಸುಮುರುಸು ಹೊಂದಿರುವುದು ನಿಜ.

ಜಾತಿಪ್ರಜ್ಞೆಯ ಬೀಜಗಳನ್ನು ನಿವಾರಿಸುವಲ್ಲಿ ಗಾಂಧಿಯವರು ಯಾವುದೇ ಅರ್ಥಪೂರ್ಣ ಪಾತ್ರ ಹೊಂದಿದ್ದರು ಎಂಬುದನ್ನು ನಂಬಲು ಅಂಬೇಡ್ಕರ್‌ವಾದಿಗಳು ನಿರಾಕರಿಸಬಹುದು. ಕಮ್ಯುನಿಸ್ಟರು ಅವರ ‘ಅಹಿಂಸಾತ್ಮಕ ಸಮಾಜವಾದ’ ಕಲ್ಪನೆಯ ಕುರಿತು ಬಹಳಷ್ಟು ಸಲ ನಗುತ್ತಾರೆ. ಮಧ್ಯಯುಗದ, ಮೃದು ಹಿಂದೂ, ಪಿತೃಪ್ರಧಾನ ಗಾಂಧಿ- ನಮ್ಮ ಇತಿಹಾಸದಲ್ಲಿನ ಅಪ್ರಿಯವಾದ ಎಲ್ಲಾ ವಿಷಯಗಳಿಗೆ ಹೊಣೆ ಎಂಬ ಭಾವ ಎಷ್ಟು ಬಾರಿ ನಮ್ಮ ಆತ್ಮಸಾಕ್ಷಿಯಲ್ಲಿ ಸುಳಿದಿಲ್ಲ? ಗೋಡ್ಸೆ ಅವರನ್ನು ದೈಹಿಕವಾಗಿ ಕೊಂದ. ಅವರಿಗೆ ಸಹಾನುಭೂತಿಯಿಲ್ಲದೇ ಕಳಂಕಹಚ್ಚುವ ಕೃತ್ಯದಿಂದ ನಮ್ಮಲ್ಲನೇಕರು ಅವರ ಚೈತನ್ಯವನ್ನು ಕೊಲ್ಲಲು ಬಯಸಿದ್ದೇವೆ.

ಗಾಂಧಿಯವರ ಕುರಿತು ಒಲವಿರುವ, ಅವರನ್ನು ಆಳವಾಗಿ ಮತ್ತು ಅರ್ಥಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಬಯಸುವ  ಕ್ರಾಂತಿಕಾರಿ ಯುವಜನರನ್ನು ಹುಡುಕುವುದು ಅಷ್ಟು ಸುಲಭದ ಕೆಲಸವಲ್ಲ ಎಂಬುದರಲ್ಲಿ ಯಾವುದೇ ಅಚ್ಚರಿಯಿಲ್ಲ. ಇದು ಬದಲಾಗಬೇಕೆಂದು ನಾನು ಭಾವಿಸುತ್ತೇನೆ. ಈ ಲೇಖನದಲ್ಲಿ ಇದು ಏಕೆ ಅಗತ್ಯ-ಅದರಲ್ಲೂ ಯುವ ಜನರು ಗಾಂಧಿಯವರನ್ನು ಸ್ವಲ್ಪ ಮಟ್ಟಿನ ಗಂಭೀರತೆಯಿಂದ ತಿಳಿದುಕೊಳ್ಳುವುದು ಏಕೆ ಅಗತ್ಯ ಎಂದು ನಾನು ವಾದಿಸುತ್ತೇನೆ.

ಮೂರು ಸೂಕ್ತ ಪ್ರಶ್ನೆಗಳು

ಮೊದಲಿಗೆ ನಮ್ಮ ಕಾಲದಲ್ಲಿ ನಮ್ಮ ಬದುಕೇ ಎತ್ತುವ ಮೂರು ಪ್ರಶ್ನೆಗಳನ್ನು ನಾನು ಎತ್ತುತ್ತೇನೆ. ಮೊದಲನೆಯದಾಗಿ ನವ ಉದಾರವಾದಿ ಜಾಗತಿಕ ಬಂಡವಾಳಶಾಹಿಯ ಮಾರುಕಟ್ಟೆ ಪ್ರೇರಿತ ಚಿಂತನೆ ಮತ್ತು ಅದರ ಜವಾಬ್ದಾರಿಯಿಲ್ಲದ ಸ್ಪರ್ಧೆ- ಪ್ರೀತಿ, ಕಾಳಜಿ ಮತ್ತು ನ್ಯಾಯಪ್ರಜ್ಞೆಯಿಲ್ಲದ ಸ್ವಾರ್ಥ ತುಂಬಿದ ವ್ಯಕ್ತಿಯನ್ನು ಕೇವಲ ಒಬ್ಬ ಸದಾ ಅತೃಪ್ತನಾದ ಚಡಪಡಿಕೆಯ ಗ್ರಾಹಕನನ್ನಾಗಿ ಮಾತ್ರ ಕಾಣುವ ಅದರ ಸೂಚ್ಯವಾದ ಚಿಂತನೆಯ ಕುರಿತು ಯೋಚಿಸಿ.

ಎರಡನೆಯದಾಗಿ, ಧರ್ಮವನ್ನು ಆತ್ಮರತಿಯನ್ನಾಗಿ ಪರಿವರ್ತಿಸುವ ಮತ್ತು ನಂಬಿಕೆ, ಜೀವನಶೈಲಿ, ಸಾಂಸ್ಕೃತಿಕ ಆಚಾರಗಳ ವೈವಿಧ್ಯಕ್ಕೆ ಕುರುಡಾಗಿರುವ ಕೇಂದ್ರೀಕೃತ, ಏಕರೂಪಿ ಚಿಂತನೆಯ ಧಾರ್ಮಿಕ ರಾಷ್ಟ್ರವಾದದ ಬೆಳವಣಿಗೆಯನ್ನು ನೋಡಿ.

ಮೂರನೆಯದಾಗಿ, ನಾನು ಆತ್ಮದ ಮಿಲಿಟರೀಕರಣ ಎಂದು ಕರೆಯುವ ಮೌಲ್ಯಗಳ ವೈಭವೀಕರಣವನ್ನು ನೋಡಿ. ಇಲ್ಲಿ ಕಾಳಜಿ, ಕರುಣೆ ಮತ್ತು ಉಳಿದವರ ಮಾತುಗಳನ್ನು ತಾಳ್ಮೆಯಿಂದ ಕೇಳುವುದನ್ನು ದೌರ್ಬಲ್ಯ ಎಂದು ಪರಿಗಣಿಸಲಾಗುತ್ತದೆ. ಬದಲಾಗಿ ಅತ್ಯಂತ ಆಕ್ರಮಣಕಾರಿಯಾದ ‘ಕಠೋರ’ ನಿರ್ಧಾರಗಳನ್ನು ಆರಾಧಿಸಲಾಗುತ್ತದೆ. ಯುದ್ಧದ ಅಥವಾ ಸರ್ಜಿಕಲ್ ಸ್ಟ್ರೈಕ್‌ನಂತಹಾ ಪ್ರತಿಮೆಗಳು ನಮ್ಮ ಮನೋಭಿತ್ತಿಯಲ್ಲಿ ಸದ್ದಿಲ್ಲದೇ ಸೇರಿಬಿಟ್ಟಿವೆ.

ಆದುದರಿಂದ, ಸಾಮೂಹಿಕವಾಗಿ ಇದಕ್ಕೆ ಪರಿಹಾರ ಮತ್ತು ನಮ್ಮ ಕಾಲದ ಉನ್ನತಿಗಾಗಿ ಶ್ರಮಿಸುತ್ತಿರುವ ಎಲ್ಲರೂ ಕೆಳಗಿನ ಮೂರು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು ಎಂದು ನಾನು ಹೇಳಿದರೆ ತಪ್ಪಾಗಲಾರದು.

1. ಮಾನಸಿಕವಾಗಿ ಮತ್ತು ಪಾರಿಸರಿಕವಾಗಿ ವಿನಾಶಕಾರಿಯಾದ ಕೊಳ್ಳುಬಾಕ ಸಂಸ್ಕೃತಿಗೆ ಅಸಹಕಾರ ತೋರಿಸಿ, ನಿಸರ್ಗ, ಪರಿಸರ ಮತ್ತು ಸಮಾಜದೊಂದಿಗೆ ಸಾಮರಸ್ಯದ ಸಂಬಂಧವನ್ನು ಹೊಂದಿರುವ ಜೀವಪ್ರೇಮಿಯಾದ, ಶಾಂತಿ ಮತ್ತು ಸರಳತೆಯೇ ಕೇಂದ್ರವಾಗಿರುವ ಚಿಂತನೆಯ ಕಡೆಗೆ ಸಾಗಬಲ್ಲ ಧೈರ್ಯವನ್ನು ತೋರುವ ವ್ಯಕ್ತಿಯನ್ನು ಮರುಕಲ್ಪಿಸಿಕೊಳ್ಳಲು ಸಾಧ್ಯವಿದೆಯೇ?

2. ಧರ್ಮವನ್ನು ಆಕ್ರಮಣಕಾರಿ ರಾಷ್ಟ್ರವಾದದ ಸಿದ್ಧಾಂತವನ್ನಾಗಿ ಕಾಣದೆ, ಜಾತ್ಯತೀತವಾದ, ಆಧ್ಯಾತ್ಮಿಕವಾದ, ಪ್ರೀತಿ ಮತ್ತು ಸಾಮರಸ್ಯದ ಭಾವನೆಯಾಗಿ ಧಾರ್ಮಿಕತೆಯನ್ನು ಕಾಣಲು ಸಾಧ್ಯವಿದೆಯೇ?

3.  ಕ್ರೌರ್ಯದಿಂದ ಕೂಡಿದ ಅಧಿಕಾರದ ತಕ್ಷಣದ ಲಾಲಸೆಗೆ ಬಲಿಬೀಳದೆ, ಅಹಿಂಸೆಯ ನೈತಿಕಶಕ್ತಿಯಾಗಿ ಧೈರ್ಯವನ್ನು ಮರುವ್ಯಾಖ್ಯಾನಿಸಲು, ಬಂಡಾಯವನ್ನು ಆತ್ಮದ ಉನ್ನತ ಮಟ್ಟಕ್ಕೆ ಒಯ್ದು, ಆ ಮೂಲಕ ಶೋಷಕನ ಹೃದಯವನ್ನು ಮುಟ್ಟಬಯಸುವ ಪ್ರತಿರೋಧದ ವಿಧಾನವನ್ನು ಕಂಡುಕೊಳ್ಳಲು ಸಾಧ್ಯವಿದೆಯೇ? ಬೇರೆ ಮಾತುಗಳಲ್ಲಿ ಹೇಳುವುದಾದರೆ ಗೆರಿಲ್ಲಾ ತಂತ್ರದಲ್ಲಿ ತರಬೇತಿ ಹೊಂದಿದ ಕ್ರಾಂತಿಕಾರಿಯಾಗುವ ಬದಲು ಸತ್ಯಾಗ್ರಹಿಯಾಗಲು ಸಾಧ್ಯವೆ?

ಗಾಂಧಿಯವರ ಅರ್ಥಪೂರ್ಣ ಅಧ್ಯಯನದಿಂದ ಈ ಮೂರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಯುವಜನರಿಗೆ ಸಾಧ್ಯವಾದೀತು. ಅದಕ್ಕೆ ಮೊದಲು ಯಾವುದೇ ಚಿಂತಕ ಪರಿಪೂರ್ಣನಲ್ಲ; ತಪ್ಪುಗಳನ್ನು ಮಾಡುವುದು ಮಾನವ ಸಹಜ ಎಂಬ ತಿಳುವಳಿಕೆಯ ಅಗತ್ಯವಿದೆ. ಗಾಂಧಿಯವರಿಗೆ ಅವರ ತಪ್ಪುಗಳು ಗೊತ್ತಿದ್ದವು ಮತ್ತು ಅವುಗಳನ್ನು ಅವರು ಅತ್ಯಂತ ನಿರ್ಭಿಡೆಯಿಂದ ಮತ್ತು ಪಾರದರ್ಶಕತೆಯಿಂದ ಒಪ್ಪಿಕೊಂಡಿದ್ದಾರೆ ಕೂಡಾ. ನೀವು ಬಿ.ಆರ್. ಅಂಬೇಡ್ಕರ್ ಅಥವಾ ಕಾರ್ಲ್ ಮಾರ್ಕ್ಸ್ ಅಂತವರನ್ನು ಮೆಚ್ಚುತ್ತಿದ್ದರೂ ಗಾಂಧಿಯವರ ಜೊತೆ ಯಾವತ್ತೂ ಹೆಜ್ಜೆಹಾಕಲು ಸಾಧ್ಯವಿದೆ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....