Homeಅಂಕಣಗಳುಆಘಾತವಾಣಿ : ಅಟ್ಯಾಕ್ ಹನ್ಮಂತ

ಆಘಾತವಾಣಿ : ಅಟ್ಯಾಕ್ ಹನ್ಮಂತ

- Advertisement -
- Advertisement -

ಕೇಳುಗರಿಗೆಲ್ಲ ಸ್ವಾಗತ, ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ. ಈಗ ವಾರ್ತೆಗಳ ವಿವರ.

ಜಯನಗರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯ ಸಾವಿನಿಂದಾಗಿ ಮುಂದೂಡಲ್ಪಟ್ಟ ಚುನಾವಣೆಯ ಫಲಿತಾಂಶದಲ್ಲಿ ಹೀನಾಯವಾಗಿ ಸೋತುಹೋದ ಕಾರಣದಿಂದ ಸನ್ಮಾನ್ಯ ಧಡಿಯೂರಪ್ಪನವರ ಎದೆ ಧಸಕ್ ಪುಸುಕ್ ಎಂದ ಸುದ್ದಿ ಬಂದಿದೆ. ಈ ಚಿಂತಾಜನಕ ಸಂದರ್ಭದಲ್ಲಿ ಮನೆ ಸೇರಿಕೊಂಡಿರೋ ಧಡಿಯೂರಪ್ಪನವರು ನಾನು ಯಾರಿಗೂ ಮುಖ ತೋರಿಸೋದಿಲ್ಲವೆಂದು ಕಂಬಳಿ ಹೊದ್ದು ಕಾಲೆತ್ತಿಕೊಂಡು ಮಲಗಿದ್ದಾರೆ. ಮಾತನಾಡಿಸಿ ಪ್ರತಿಕ್ರಿಯೆ ಕೇಳಲು ಹೋದ ಮಾಧ್ಯಮದವರ ಮೇಲೆ ನಾಯಿ ಛೂಬಿಟ್ಟು ಓಡಿಸಲು ತಮ್ಮ ಸಹಾಯಕರಿಗೆ ತಿಳಿಸಿರುವ ಅವರು, ತಮ್ಮ ಪಕ್ಷದ ಮುಖಂಡರು ಬಂದರೆ ಅವರನ್ನು ನೆಲಕ್ಕೆ ಕೆಡವಿ, ಅವರ ಮುಖ ಮತ್ತು ಹೊಟ್ಟೆಗೆ ಕಚ್ಚಿ ಓಡಿಸಲು ತಮ್ಮ ಭದ್ರತಾ ಸಿಬ್ಬಂದಿಗೆ ತಿಳಿಸಿದ್ದಾರೆಂದು ಸುದ್ದಿಮೂಲಗಳು ಸ್ಪಷ್ಟ ಪಡಿಸಿವೆ. ಹಾಸಿಗೆ ಹಿಡಿದಿರುವ ಧಡಿಯೂರಪ್ಪನವರಿಗೆ ಸ್ಕೋಪಕ್ಕ ತಮ್ಮ ಸೆರಗಿನಿಂದ ಗಾಳಿ ಬೀಸಿಕೊಂಡು ಶುಶ್ರೂಷೆ ಮಾಡುತ್ತಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.

****

ನೋಟ್ ಬ್ಯಾನ್‍ನಿಂದಾಗಿ ದೇಶದಲ್ಲಿ ಭಯೋತ್ಪಾದಕರು, ನಕ್ಸಲೈಟರೆಲ್ಲರೂ ಕೈಯಲ್ಲಿ ಕಾಸಿಲ್ಲದೆ ಸಾಮೂಹಿಕವಾಗಿ ಶಸ್ತ್ರತ್ಯಾಗ ಮಾಡಿ ತಪಸ್ಸಿಗೆ ಕುಳಿತುಬಿಟ್ಟಿದ್ದಾರೆ ಎಂದಿದ್ದ ಫೇಕಪ್ಪನ ಸುಳ್ಳು ಮತ್ತೊಮ್ಮೆ ಮಕಾಡೆ ಮಲಗಿದೆ. ನಕ್ಸಲೈಟರು ಫೇಕಪ್ಪನನ್ನು ಕೊಲ್ಲಲು ಸಂಚು ಮಾಡಿದ್ದಾರೆ, ಇದರ ಬಗ್ಗೆ ನಕ್ಸಲೈಟರು “ಪಕೋಡೇಂದ್ರ ಮಟ್ಯಾಶ್ ಸ್ವಾಹ” ಎಂಬ ಕಾದಂಬರಿಯನ್ನು ಬರೆದು, ಅದರಲ್ಲಿ ತಮ್ಮ ಒರಿಜಿನಲ್ ಹೆಸರುಗಳನ್ನೂ ಬರೆದು ಪೊಲೀಸರ ಕೈಗೆ ಸಿಗುವಂತೆ ಇಟ್ಟಿದ್ದಾರೆ ಎಂಬ ನಗೆಪಾಟಲು ಪ್ರಚಾರಕ್ಕೆ ಫೇಕಪ್ಪ ಇಳಿದಿರುವುದು ಇದಕ್ಕೆ ಪುಷ್ಟಿ ನೀಡಿದೆ. ನನ್ನನ್ನ ಸಾಯಿಸ್ತಾರೆ, ಆದ್ರಿಂದ ಓಟು ಕೊಡಿ ಅಂತ ಗೋಳಾಡ್ತಿರೋ ಫೇಕಪ್ಪನ 3ನೇ ದರ್ಜೆ ಡ್ರಾಮೇಬಾಜಿ ಸರ್ಕಸ್ಸಿಗೆ ಜನ ಬಿದ್ದೂ ಬಿದ್ದೂ ನಗುತ್ತಿದ್ದಾರೆಂದು ತಿಳಿದುಬಂದಿದೆ.

****

ಸಲ್ಮಾನ್ ಖಾನ್ ‘ಚುಲ್‍ಬುಲ್ ಪಾಂಡೆ’ ಅವತಾರದಲ್ಲಿ ದಬಾಂಗ್ ಚಿತ್ರದಲ್ಲಿ ರಂಜಿಸಿದ ನಂತರ ಅದೇ ರೇಂಜಿಗೆ ‘ಬೋಂಡಾ ಪಾಂಡೆ’ ಎಂದು ರಾಜ್ಯದಾದ್ಯಂತ ಫೇಮಸ್ಸಾಗಿರುವ ಆರುವಿ ದೋಶಪಾಂಡೆ ಬಗ್ಗೆ ಹೊಸ ಸುದ್ದಿಯೊಂದು ಲಭ್ಯವಾಗಿದೆ. ಉದ್ಯೋಗಕ್ಕಾಗಿ ನಮ್ಮನ್ನು ನೆಚ್ಚಿಕೊಳ್ಳಬೇಡಿ, ಬೋಂಡಾ ಬಜ್ಜಿ ಮಾರುವ ಗೌರವಯುತ ಕೆಲಸ ಮಾಡಿ ಕೋಟಿಗಟ್ಟಲೆ ಸಂಪಾದನೆ ಮಾಡಿ ಎಂದು ಶ್ರೀ ಬೋಂಡಾಪಾಂಡೆಯವರು ವದರಿದ್ದಾರೆ. ಈ ತಲೆಕೆಟ್ಟ ಹೇಳಿಕೆಯ ಗಮನಿಸಿದರೆ, ‘ಉದ್ಯೋಗ ಕೊಟ್ಟು ಸಾಯ್ರಿ’ ಎಂಬ ಜನರ ಬೇಡಿಕೆಗೆ ಪಕೋಡ ಮಾರಿ, ಪಂಚರ್ ಹಾಕಿ ಅಂತ ಬಡಬಡಿಸುತ್ತಿದ್ದ ಫೇಕೇಂದ್ರನೇನಾದ್ರೂ ಈ ‘ದೋಶಪಾಂಡೆ’ಯ ಆಯಕಟ್ಟಿನ ಭಾಗಕ್ಕೆ ಕಚ್ಚಿರಬಹುದಾ ಎಂಬ ಅನುಮಾನ ಎಲ್ಲೆಡೆ ವ್ಯಕ್ತವಾಗಿದೆ.

****

ಗೌರಿ ಲಂಕೇಶ್ ಹತ್ಯೆಯ ಒಬ್ಬೊಬ್ಬ ಪಾತಕಿಗಳನ್ನೂ ಎರಡೂ ಕಾಲಿಗೆ ಹಗ್ಗ ಕಟ್ಟಿ ಸತ್ತನಾಯಿಗಳಂತೆ ದರದರ ಎಳೆದು ತಂದು ರುಬ್ಬುತ್ತಿರುವ ರಾಜ್ಯದ ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಂ ಜನರ ಪ್ರಶಂಸೆಗೆ ಪಾತ್ರವಾಗಿದೆ. ರೌಡಿಗಳು ಕೊಲೆಗಡುಕರ ಕೈಗೆ ಧರ್ಮದ ಹೆಂಡ ಕೊಟ್ಟು ತಮಗಾಗದವರನ್ನು ಕೊಲ್ಲಿಸೋ ಸಣಕಲು ತೊಡೆಯ ಹೇಡಿಪಡೆಗಳ ಪಂಚೆ ಲಳಲಳನೆ ಒದ್ದೆಯಾಗುತ್ತಿರುವುದು ಕೇಳಿಬರುತ್ತಿದೆ. ಗೌರಿಹತ್ಯೆಯ ಕೇಸಿನಲ್ಲಿ ಆ ಸೇನೆ ಈ ಸೇನೆ, ಈ ಜಾಗೃತಿ, ಆ ವಿಕೃತಿ ಅಂತ ಮಕಮೂತಿ ನೋಡದೇ ಎಸ್.ಐ.ಟಿ ತಂಡವು ಒಬ್ಬೊಬ್ಬರನ್ನೇ ಹಿಡಿದುತಂದು ಬೋನಿಗೆ ಬಿಸಾಕುತ್ತಿದ್ದರೆ, ಅತ್ತ ದಾಬೋಲ್ಕರ್, ಪನ್ಸಾರೆ ಕೊಲೆ ಕೇಸನ್ನು ಏನೋ ಕಿತ್ತು ದಬಾಕ್ತೀವಿ ಎಂದು ಕೈಗೆತ್ತಿಕೊಂಡ ಸಿಬಿಐ ಪೊಮೇರಿಯನ್‍ಗಳು ಸರ್ಕಾರಿ ದುಡ್ಡಲ್ಲಿ ಕುಷ್ಕ ಕಬಾಬ್ ಮುಕ್ಕಿಕೊಂಡು ಓತ್ಲಾ ಹೊಡೆಯುತ್ತಿದ್ದಾರೆಂದು ಜನರು ಆಡಿಕೊಂಡು ನಗುತ್ತಿರುವ ವರದಿಗಳು ಬರುತ್ತಿವೆ.

****

ಭೂಮಿಯ ಮೇಲೆ ಇನ್ನೆಲ್ಲೂ ಕಾಣಸಿಗದ ಮಾಸ್ಟರ್ ಪೀಸ್ ಮೆಂಟ್ಲು ಗಿರಾಕಿಗಳಾದ ಉತ್ತರ ಕೊರಿಯಾದ ಕಿಮ್‍ಜಾಂಗ್ ಉನ್ನೇಶ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪೇಶ ಅವರು ಸಿಂಗಪೂರ್‍ನಲ್ಲಿ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ‘ನಿನ್ ಮೇಲೆ ನಾನು ಬಾಂಬ್ ಹಾಕಲ್ಲ, ನನ್ ಮೇಲೆ ನೀನು ಬಾಂಬ್ ಹಾಕ್ಬೇಡ’ ಅಂತ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಐತಿಹಾಸಿಕ ತಲೆತಿಕ್ಕಲರ ಸಂಗಮದಲ್ಲಿ ನಮ್ ಹಾಫ್ ಮೆಂಟ್ಲು ಫೇಕಪ್ಪನೂ ಇದ್ದಿದ್ರೆ ಈ ಶುದ್ದ ಮುಠ್ಠಾಳರ ಸಮ್ಮೇಳನ ಸಂಪೂರ್ಣವಾಗುತ್ತಿತ್ತೆಂದು ತೇಜಾವರ ಶ್ರೀಗಳು ನಿದ್ದೆಯಲ್ಲೇ ಕಣ್ಣನ್ನೆಲ್ಲ ತೇವ ಮಾಡಿಕೊಂಡು ಕನವರಿಸಿಕೊಳ್ಳುತ್ತಿದ್ದರೆಂದು ಅವರ ಕಾರ್ ಡ್ರೈವರ್ ಫೇಸ್ಬುಕ್ಕಲ್ಲಿ ಪೋಸ್ಟ್ ಹಾಕಿದ್ದಾನೆ.

****

ಹೋರಿಯ ಹಿಂದೆ ನಡೆಯುತ್ತ ಅದರ ಯಾವುದಾದರೊಂದು ಪಾರ್ಟು ಲೂಸಾಗಿ ಕಳಚಿಕೊಂಡು ಉದುರಬಹುದೆಂದು ಆಸೆಯಿಂದ ಫಾಲೋ ಮಾಡುತ್ತಿರೋ ಗುಳ್ಳೆನರಿಯಂತೆ ಧಡಿಯೂರಪ್ಪನವರು ರಾಜ್ಯದ ಬೆರಕೆ ಸರ್ಕಾರದ ಹಿಂದೆ ಬಿದ್ದಿರುವುದು ತಿಳಿದ ಸಂಗತಿ. ದಿನಕಳೆದಂತೆ ಬೆರಕೆ ಸರ್ಕಾರದ ಮಂದಿ ಕೇರಳದ ಮಾಟಮಂತ್ರ ತಜ್ಞರೂ ನಾಚಿ ನೀರಾಗುವ ಹಾಗೆ ಬುರುಡೆ ಮಂತ್ರವಾದಿಗಳಂತೆ ಆಡುತ್ತಿರುವುದನ್ನು ಕಂಡು ಧಡಿಯೂರಪ್ಪ ಗಾಬರಿಯಾಗಿದ್ದಾರೆಂದು ಸುದ್ದಿ ಲಭ್ಯವಾಗಿದೆ. ತಮ್ಮ ಪಕ್ಷವೇ ಅಧಿಕಾರದಲ್ಲಿದ್ರೆ ಏನೇನು ನೌಟಂಕಿ ಆಟವಾಡುತ್ತಿದ್ದೆವೋ, ಅದೆಲ್ಲವನ್ನೂ ತಮ್ಮ ಎದುರಾಳಿಗಳೇ ಕಚ್ಚೆ ಬಿಚ್ಚಿಕೊಂಡು ಆಡುತ್ತಿರುವುದನ್ನು ಕಂಡು ಧಡಿಯೂರಪ್ಪ, ತಮ್ಮ ಪಕ್ಷದೋರು ಯಾರು? ಬೆರಕೆ ಸರ್ಕಾರದ ಪಕ್ಷದೋರು ಯಾರು? ಎಂದು ಗುರುತಿಸಲಾಗದ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆಂದು ಸ್ಕೋಪಕ್ಕನವರು ಚೀಟಿ ರೆವಿಗೆ ವಾಟ್ಸಾಪ್ ಮೆಸೇಜ್ ಮಾಡಿದ್ದಾರೆಂದು ಗೊತ್ತಾಗಿದೆ.

****

ಭೀಮ ಕೊರೆಗಾಂವ್ ಮೆರವಣಿಗೆಯಲ್ಲಿ ತನ್ನ ಪಟಾಲಂನಿಂದ ದಲಿತರ ಮೇಲೆ ಹಲ್ಲೆ ನಡೆಸಿದ್ದ ಮಹಾರಾಷ್ಟ್ರದ ಪೊರಕೆ ಮೀಸೆ ಸಂಘಿ ಮುದುಕನೊಬ್ಬ ತಾನು ತನ್ನ ತೋಟದಲ್ಲಿ ಬೆಳೆಯೋ ಮಾವಿನಹಣ್ಣು ತಿಂದ್ರೆ ಗಂಡು ಮಕ್ಕಳಾಗ್ತವೆ, ಅಂಥ ವಿಶೇಷ ಶಕ್ತಿ ತನ್ನ ಮ್ಯಾಂಗೋಗಳಿಗೆ ಇದೆಯೆಂದು ಕಕ್ಕಿಕೊಂಡಿದ್ದಾನೆ. ಸಂಘಿ ಮಂಗಿಗಳ ಈ ಮ್ಯಾಂಗೋ ಸಂತಾನ ಪ್ರಾಪ್ತಿ ಮ್ಯಾಜಿಕ್ ಥಿಯರಿ ಕೇಳಿದ ದೇಶದ ಜನರು ನಗಬಾರದ ಜಾಗದಲ್ಲೆಲ್ಲ ನಗುತ್ತ “ಅಲ್ಲಾ ಕಣೋ ಬುಡ್ಡಾ, ಮ್ಯಾಂಗೋ ತಿಂದ್ರೆ ಮಕ್ಕಳಾಗ್ತವೆ ಅಂದ್ರೆ ಜನ ಬಾಟಾ ಕಂಪನಿ ಮೆಟ್ಟು ತಗೊಂಡು ಅಟ್ಟಿಸಿಕೊಂಡು ಬಂದು ಬಡೀತಾರೆ” ಎಂದು ಆಡಿಕೊಳ್ಳುತ್ತಿರುವ ಸುದ್ದಿ ತಡವಾಗಿ ವರದಿಯಾಗಿದೆ. ಬೆದರಿದ ಸಂಘಿ ಮುದುಕನು ಮಹಾರಾಷ್ಟ್ರ ಸಿಎಂ ಭಡ್ನಊಸು ಕಚೇರಿಯ ಶೌಚಾಲಯದಲ್ಲಿ ಕದ್ದು ಕುಳಿತಿದ್ದಾನೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಇಲ್ಲಿಗೆ ಆಘಾತಕಾರಿ ಸುದ್ದಿಗಳನ್ನು ನಿಮ್ಮ ಮುಂದಿಡುವ ‘ಆಘಾತವಾಣಿ’ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಭೇಟಿ ಮುಂದಿನ ವಾರ. ನಮಸ್ತೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...