Homeಅಂಕಣಗಳುಆಘಾತವಾಣಿ : ಅಟ್ಯಾಕ್ ಹನ್ಮಂತ

ಆಘಾತವಾಣಿ : ಅಟ್ಯಾಕ್ ಹನ್ಮಂತ

- Advertisement -
- Advertisement -

ಕೇಳುಗರಿಗೆಲ್ಲ ಸ್ವಾಗತ, ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ. ಈಗ ವಾರ್ತೆಗಳ ವಿವರ.

ಜಯನಗರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯ ಸಾವಿನಿಂದಾಗಿ ಮುಂದೂಡಲ್ಪಟ್ಟ ಚುನಾವಣೆಯ ಫಲಿತಾಂಶದಲ್ಲಿ ಹೀನಾಯವಾಗಿ ಸೋತುಹೋದ ಕಾರಣದಿಂದ ಸನ್ಮಾನ್ಯ ಧಡಿಯೂರಪ್ಪನವರ ಎದೆ ಧಸಕ್ ಪುಸುಕ್ ಎಂದ ಸುದ್ದಿ ಬಂದಿದೆ. ಈ ಚಿಂತಾಜನಕ ಸಂದರ್ಭದಲ್ಲಿ ಮನೆ ಸೇರಿಕೊಂಡಿರೋ ಧಡಿಯೂರಪ್ಪನವರು ನಾನು ಯಾರಿಗೂ ಮುಖ ತೋರಿಸೋದಿಲ್ಲವೆಂದು ಕಂಬಳಿ ಹೊದ್ದು ಕಾಲೆತ್ತಿಕೊಂಡು ಮಲಗಿದ್ದಾರೆ. ಮಾತನಾಡಿಸಿ ಪ್ರತಿಕ್ರಿಯೆ ಕೇಳಲು ಹೋದ ಮಾಧ್ಯಮದವರ ಮೇಲೆ ನಾಯಿ ಛೂಬಿಟ್ಟು ಓಡಿಸಲು ತಮ್ಮ ಸಹಾಯಕರಿಗೆ ತಿಳಿಸಿರುವ ಅವರು, ತಮ್ಮ ಪಕ್ಷದ ಮುಖಂಡರು ಬಂದರೆ ಅವರನ್ನು ನೆಲಕ್ಕೆ ಕೆಡವಿ, ಅವರ ಮುಖ ಮತ್ತು ಹೊಟ್ಟೆಗೆ ಕಚ್ಚಿ ಓಡಿಸಲು ತಮ್ಮ ಭದ್ರತಾ ಸಿಬ್ಬಂದಿಗೆ ತಿಳಿಸಿದ್ದಾರೆಂದು ಸುದ್ದಿಮೂಲಗಳು ಸ್ಪಷ್ಟ ಪಡಿಸಿವೆ. ಹಾಸಿಗೆ ಹಿಡಿದಿರುವ ಧಡಿಯೂರಪ್ಪನವರಿಗೆ ಸ್ಕೋಪಕ್ಕ ತಮ್ಮ ಸೆರಗಿನಿಂದ ಗಾಳಿ ಬೀಸಿಕೊಂಡು ಶುಶ್ರೂಷೆ ಮಾಡುತ್ತಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.

****

ನೋಟ್ ಬ್ಯಾನ್‍ನಿಂದಾಗಿ ದೇಶದಲ್ಲಿ ಭಯೋತ್ಪಾದಕರು, ನಕ್ಸಲೈಟರೆಲ್ಲರೂ ಕೈಯಲ್ಲಿ ಕಾಸಿಲ್ಲದೆ ಸಾಮೂಹಿಕವಾಗಿ ಶಸ್ತ್ರತ್ಯಾಗ ಮಾಡಿ ತಪಸ್ಸಿಗೆ ಕುಳಿತುಬಿಟ್ಟಿದ್ದಾರೆ ಎಂದಿದ್ದ ಫೇಕಪ್ಪನ ಸುಳ್ಳು ಮತ್ತೊಮ್ಮೆ ಮಕಾಡೆ ಮಲಗಿದೆ. ನಕ್ಸಲೈಟರು ಫೇಕಪ್ಪನನ್ನು ಕೊಲ್ಲಲು ಸಂಚು ಮಾಡಿದ್ದಾರೆ, ಇದರ ಬಗ್ಗೆ ನಕ್ಸಲೈಟರು “ಪಕೋಡೇಂದ್ರ ಮಟ್ಯಾಶ್ ಸ್ವಾಹ” ಎಂಬ ಕಾದಂಬರಿಯನ್ನು ಬರೆದು, ಅದರಲ್ಲಿ ತಮ್ಮ ಒರಿಜಿನಲ್ ಹೆಸರುಗಳನ್ನೂ ಬರೆದು ಪೊಲೀಸರ ಕೈಗೆ ಸಿಗುವಂತೆ ಇಟ್ಟಿದ್ದಾರೆ ಎಂಬ ನಗೆಪಾಟಲು ಪ್ರಚಾರಕ್ಕೆ ಫೇಕಪ್ಪ ಇಳಿದಿರುವುದು ಇದಕ್ಕೆ ಪುಷ್ಟಿ ನೀಡಿದೆ. ನನ್ನನ್ನ ಸಾಯಿಸ್ತಾರೆ, ಆದ್ರಿಂದ ಓಟು ಕೊಡಿ ಅಂತ ಗೋಳಾಡ್ತಿರೋ ಫೇಕಪ್ಪನ 3ನೇ ದರ್ಜೆ ಡ್ರಾಮೇಬಾಜಿ ಸರ್ಕಸ್ಸಿಗೆ ಜನ ಬಿದ್ದೂ ಬಿದ್ದೂ ನಗುತ್ತಿದ್ದಾರೆಂದು ತಿಳಿದುಬಂದಿದೆ.

****

ಸಲ್ಮಾನ್ ಖಾನ್ ‘ಚುಲ್‍ಬುಲ್ ಪಾಂಡೆ’ ಅವತಾರದಲ್ಲಿ ದಬಾಂಗ್ ಚಿತ್ರದಲ್ಲಿ ರಂಜಿಸಿದ ನಂತರ ಅದೇ ರೇಂಜಿಗೆ ‘ಬೋಂಡಾ ಪಾಂಡೆ’ ಎಂದು ರಾಜ್ಯದಾದ್ಯಂತ ಫೇಮಸ್ಸಾಗಿರುವ ಆರುವಿ ದೋಶಪಾಂಡೆ ಬಗ್ಗೆ ಹೊಸ ಸುದ್ದಿಯೊಂದು ಲಭ್ಯವಾಗಿದೆ. ಉದ್ಯೋಗಕ್ಕಾಗಿ ನಮ್ಮನ್ನು ನೆಚ್ಚಿಕೊಳ್ಳಬೇಡಿ, ಬೋಂಡಾ ಬಜ್ಜಿ ಮಾರುವ ಗೌರವಯುತ ಕೆಲಸ ಮಾಡಿ ಕೋಟಿಗಟ್ಟಲೆ ಸಂಪಾದನೆ ಮಾಡಿ ಎಂದು ಶ್ರೀ ಬೋಂಡಾಪಾಂಡೆಯವರು ವದರಿದ್ದಾರೆ. ಈ ತಲೆಕೆಟ್ಟ ಹೇಳಿಕೆಯ ಗಮನಿಸಿದರೆ, ‘ಉದ್ಯೋಗ ಕೊಟ್ಟು ಸಾಯ್ರಿ’ ಎಂಬ ಜನರ ಬೇಡಿಕೆಗೆ ಪಕೋಡ ಮಾರಿ, ಪಂಚರ್ ಹಾಕಿ ಅಂತ ಬಡಬಡಿಸುತ್ತಿದ್ದ ಫೇಕೇಂದ್ರನೇನಾದ್ರೂ ಈ ‘ದೋಶಪಾಂಡೆ’ಯ ಆಯಕಟ್ಟಿನ ಭಾಗಕ್ಕೆ ಕಚ್ಚಿರಬಹುದಾ ಎಂಬ ಅನುಮಾನ ಎಲ್ಲೆಡೆ ವ್ಯಕ್ತವಾಗಿದೆ.

****

ಗೌರಿ ಲಂಕೇಶ್ ಹತ್ಯೆಯ ಒಬ್ಬೊಬ್ಬ ಪಾತಕಿಗಳನ್ನೂ ಎರಡೂ ಕಾಲಿಗೆ ಹಗ್ಗ ಕಟ್ಟಿ ಸತ್ತನಾಯಿಗಳಂತೆ ದರದರ ಎಳೆದು ತಂದು ರುಬ್ಬುತ್ತಿರುವ ರಾಜ್ಯದ ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಂ ಜನರ ಪ್ರಶಂಸೆಗೆ ಪಾತ್ರವಾಗಿದೆ. ರೌಡಿಗಳು ಕೊಲೆಗಡುಕರ ಕೈಗೆ ಧರ್ಮದ ಹೆಂಡ ಕೊಟ್ಟು ತಮಗಾಗದವರನ್ನು ಕೊಲ್ಲಿಸೋ ಸಣಕಲು ತೊಡೆಯ ಹೇಡಿಪಡೆಗಳ ಪಂಚೆ ಲಳಲಳನೆ ಒದ್ದೆಯಾಗುತ್ತಿರುವುದು ಕೇಳಿಬರುತ್ತಿದೆ. ಗೌರಿಹತ್ಯೆಯ ಕೇಸಿನಲ್ಲಿ ಆ ಸೇನೆ ಈ ಸೇನೆ, ಈ ಜಾಗೃತಿ, ಆ ವಿಕೃತಿ ಅಂತ ಮಕಮೂತಿ ನೋಡದೇ ಎಸ್.ಐ.ಟಿ ತಂಡವು ಒಬ್ಬೊಬ್ಬರನ್ನೇ ಹಿಡಿದುತಂದು ಬೋನಿಗೆ ಬಿಸಾಕುತ್ತಿದ್ದರೆ, ಅತ್ತ ದಾಬೋಲ್ಕರ್, ಪನ್ಸಾರೆ ಕೊಲೆ ಕೇಸನ್ನು ಏನೋ ಕಿತ್ತು ದಬಾಕ್ತೀವಿ ಎಂದು ಕೈಗೆತ್ತಿಕೊಂಡ ಸಿಬಿಐ ಪೊಮೇರಿಯನ್‍ಗಳು ಸರ್ಕಾರಿ ದುಡ್ಡಲ್ಲಿ ಕುಷ್ಕ ಕಬಾಬ್ ಮುಕ್ಕಿಕೊಂಡು ಓತ್ಲಾ ಹೊಡೆಯುತ್ತಿದ್ದಾರೆಂದು ಜನರು ಆಡಿಕೊಂಡು ನಗುತ್ತಿರುವ ವರದಿಗಳು ಬರುತ್ತಿವೆ.

****

ಭೂಮಿಯ ಮೇಲೆ ಇನ್ನೆಲ್ಲೂ ಕಾಣಸಿಗದ ಮಾಸ್ಟರ್ ಪೀಸ್ ಮೆಂಟ್ಲು ಗಿರಾಕಿಗಳಾದ ಉತ್ತರ ಕೊರಿಯಾದ ಕಿಮ್‍ಜಾಂಗ್ ಉನ್ನೇಶ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪೇಶ ಅವರು ಸಿಂಗಪೂರ್‍ನಲ್ಲಿ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ‘ನಿನ್ ಮೇಲೆ ನಾನು ಬಾಂಬ್ ಹಾಕಲ್ಲ, ನನ್ ಮೇಲೆ ನೀನು ಬಾಂಬ್ ಹಾಕ್ಬೇಡ’ ಅಂತ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಐತಿಹಾಸಿಕ ತಲೆತಿಕ್ಕಲರ ಸಂಗಮದಲ್ಲಿ ನಮ್ ಹಾಫ್ ಮೆಂಟ್ಲು ಫೇಕಪ್ಪನೂ ಇದ್ದಿದ್ರೆ ಈ ಶುದ್ದ ಮುಠ್ಠಾಳರ ಸಮ್ಮೇಳನ ಸಂಪೂರ್ಣವಾಗುತ್ತಿತ್ತೆಂದು ತೇಜಾವರ ಶ್ರೀಗಳು ನಿದ್ದೆಯಲ್ಲೇ ಕಣ್ಣನ್ನೆಲ್ಲ ತೇವ ಮಾಡಿಕೊಂಡು ಕನವರಿಸಿಕೊಳ್ಳುತ್ತಿದ್ದರೆಂದು ಅವರ ಕಾರ್ ಡ್ರೈವರ್ ಫೇಸ್ಬುಕ್ಕಲ್ಲಿ ಪೋಸ್ಟ್ ಹಾಕಿದ್ದಾನೆ.

****

ಹೋರಿಯ ಹಿಂದೆ ನಡೆಯುತ್ತ ಅದರ ಯಾವುದಾದರೊಂದು ಪಾರ್ಟು ಲೂಸಾಗಿ ಕಳಚಿಕೊಂಡು ಉದುರಬಹುದೆಂದು ಆಸೆಯಿಂದ ಫಾಲೋ ಮಾಡುತ್ತಿರೋ ಗುಳ್ಳೆನರಿಯಂತೆ ಧಡಿಯೂರಪ್ಪನವರು ರಾಜ್ಯದ ಬೆರಕೆ ಸರ್ಕಾರದ ಹಿಂದೆ ಬಿದ್ದಿರುವುದು ತಿಳಿದ ಸಂಗತಿ. ದಿನಕಳೆದಂತೆ ಬೆರಕೆ ಸರ್ಕಾರದ ಮಂದಿ ಕೇರಳದ ಮಾಟಮಂತ್ರ ತಜ್ಞರೂ ನಾಚಿ ನೀರಾಗುವ ಹಾಗೆ ಬುರುಡೆ ಮಂತ್ರವಾದಿಗಳಂತೆ ಆಡುತ್ತಿರುವುದನ್ನು ಕಂಡು ಧಡಿಯೂರಪ್ಪ ಗಾಬರಿಯಾಗಿದ್ದಾರೆಂದು ಸುದ್ದಿ ಲಭ್ಯವಾಗಿದೆ. ತಮ್ಮ ಪಕ್ಷವೇ ಅಧಿಕಾರದಲ್ಲಿದ್ರೆ ಏನೇನು ನೌಟಂಕಿ ಆಟವಾಡುತ್ತಿದ್ದೆವೋ, ಅದೆಲ್ಲವನ್ನೂ ತಮ್ಮ ಎದುರಾಳಿಗಳೇ ಕಚ್ಚೆ ಬಿಚ್ಚಿಕೊಂಡು ಆಡುತ್ತಿರುವುದನ್ನು ಕಂಡು ಧಡಿಯೂರಪ್ಪ, ತಮ್ಮ ಪಕ್ಷದೋರು ಯಾರು? ಬೆರಕೆ ಸರ್ಕಾರದ ಪಕ್ಷದೋರು ಯಾರು? ಎಂದು ಗುರುತಿಸಲಾಗದ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆಂದು ಸ್ಕೋಪಕ್ಕನವರು ಚೀಟಿ ರೆವಿಗೆ ವಾಟ್ಸಾಪ್ ಮೆಸೇಜ್ ಮಾಡಿದ್ದಾರೆಂದು ಗೊತ್ತಾಗಿದೆ.

****

ಭೀಮ ಕೊರೆಗಾಂವ್ ಮೆರವಣಿಗೆಯಲ್ಲಿ ತನ್ನ ಪಟಾಲಂನಿಂದ ದಲಿತರ ಮೇಲೆ ಹಲ್ಲೆ ನಡೆಸಿದ್ದ ಮಹಾರಾಷ್ಟ್ರದ ಪೊರಕೆ ಮೀಸೆ ಸಂಘಿ ಮುದುಕನೊಬ್ಬ ತಾನು ತನ್ನ ತೋಟದಲ್ಲಿ ಬೆಳೆಯೋ ಮಾವಿನಹಣ್ಣು ತಿಂದ್ರೆ ಗಂಡು ಮಕ್ಕಳಾಗ್ತವೆ, ಅಂಥ ವಿಶೇಷ ಶಕ್ತಿ ತನ್ನ ಮ್ಯಾಂಗೋಗಳಿಗೆ ಇದೆಯೆಂದು ಕಕ್ಕಿಕೊಂಡಿದ್ದಾನೆ. ಸಂಘಿ ಮಂಗಿಗಳ ಈ ಮ್ಯಾಂಗೋ ಸಂತಾನ ಪ್ರಾಪ್ತಿ ಮ್ಯಾಜಿಕ್ ಥಿಯರಿ ಕೇಳಿದ ದೇಶದ ಜನರು ನಗಬಾರದ ಜಾಗದಲ್ಲೆಲ್ಲ ನಗುತ್ತ “ಅಲ್ಲಾ ಕಣೋ ಬುಡ್ಡಾ, ಮ್ಯಾಂಗೋ ತಿಂದ್ರೆ ಮಕ್ಕಳಾಗ್ತವೆ ಅಂದ್ರೆ ಜನ ಬಾಟಾ ಕಂಪನಿ ಮೆಟ್ಟು ತಗೊಂಡು ಅಟ್ಟಿಸಿಕೊಂಡು ಬಂದು ಬಡೀತಾರೆ” ಎಂದು ಆಡಿಕೊಳ್ಳುತ್ತಿರುವ ಸುದ್ದಿ ತಡವಾಗಿ ವರದಿಯಾಗಿದೆ. ಬೆದರಿದ ಸಂಘಿ ಮುದುಕನು ಮಹಾರಾಷ್ಟ್ರ ಸಿಎಂ ಭಡ್ನಊಸು ಕಚೇರಿಯ ಶೌಚಾಲಯದಲ್ಲಿ ಕದ್ದು ಕುಳಿತಿದ್ದಾನೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಇಲ್ಲಿಗೆ ಆಘಾತಕಾರಿ ಸುದ್ದಿಗಳನ್ನು ನಿಮ್ಮ ಮುಂದಿಡುವ ‘ಆಘಾತವಾಣಿ’ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಭೇಟಿ ಮುಂದಿನ ವಾರ. ನಮಸ್ತೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...