Homeಕರ್ನಾಟಕಯಡ್ಯೂರಪ್ಪಗೆ ರಾಜ್ಯಪಾಲ ಹುದ್ದೆ!? ಸಿಎಂ ಗಾದಿಯಿಂದ ಕೆಳಗಿಳಿಸಲು ನಡೆದಿದೆಯಾ ಹೊಸ ಮಸಲತ್ತು...

ಯಡ್ಯೂರಪ್ಪಗೆ ರಾಜ್ಯಪಾಲ ಹುದ್ದೆ!? ಸಿಎಂ ಗಾದಿಯಿಂದ ಕೆಳಗಿಳಿಸಲು ನಡೆದಿದೆಯಾ ಹೊಸ ಮಸಲತ್ತು…

ಪ್ರಮಾಣ ವಚನದ ವಿಳಂಬ ಇರಬಹುದು, ಸಂಪುಟ ರಚನೆಗೆ ಕೊಕ್ಕೆ ಹಾಕಿದ್ದಿರಬಹುದು, ಮೂವರು ಡಿಸಿಎಂ ನೇಮಕ, ರಾಜ್ಯಾಧ್ಯಕ್ಷರ ಶಾಕಿಂಗ್ ನೇಮಕ, ಮೇಯರ್ ಆಯ್ಕೆ, ನೆರೆ ಪರಿಹಾರದ ನಿರ್ಲಕ್ಷ್ಯ ಹೀಗೆ ಸಿಎಂ ಆದ ನಂತರದಲ್ಲಿ ಯಡ್ಯೂರಪ್ಪನವರು ತಮ್ಮದೇ ಪಕ್ಷದಿಂದ ಅನುಭವಿಸುತ್ತಿರುವ ಅವಮಾನಗಳು ಒಂದೆರಡಲ್ಲ..

- Advertisement -
- Advertisement -

ಯಡ್ಯೂರಪ್ಪರನ್ನು ರಾಜ್ಯ ರಾಜಕಾರಣದಲ್ಲಿ ಮೂಲೆಗುಂಪು ಮಾಡಲು ಸಕಲ ತಯಾರಿ ನಡೆಸಿರುವ ಬಿಜೆಪಿ ಹೈಕಮಾಂಡ್, ಅದಕ್ಕಾಗಿ ಅವರನ್ನು ಯಾವುದಾದರೊಂದು ರಾಜ್ಯಕ್ಕೆ ಗೌರ್ನರ್ ಆಗಿ ನೇಮಿಸುವ ಯೋಜನೆ ಹಾಕಿಕೊಂಡಿದೆಯಾ? ಇಂತದ್ದೊಂದು ಚರ್ಚೆ ಮಲ್ಲೇಶ್ವರಂನಲ್ಲಿರುವ ಬಿಜೆಪಿಯ ರಾಜ್ಯ ಕಚೇರಿ ಜಗನ್ನಾಥ್ ಭವನದ ಆಸುಪಾಸಿನಲ್ಲಿ ಹರಿದಾಡುತ್ತಿದೆ.

ಹೌದು, ಈಗ ಕೇಳಿಬರುತ್ತಿರುವ ವರ್ತಮಾನ ನಿಜವೇ ಆದಲ್ಲಿ ಯಡ್ಯೂರಪ್ಪನವರನ್ನು ಗೋವಾ ಅಥವಾ ಜಾರ್ಖಂಡ್, ಈ ಎರಡರಲ್ಲಿ ಯಾವುದಾದರು ಒಂದು ರಾಜ್ಯಕ್ಕೆ ಗೌರ್ನರ್ ಆಗಿ ಆಯ್ಕೆ ಮಾಡಲು ತಯಾರಿಗಳು ನಡೆದಿವೆ. ಬಿಜೆಪಿ ಹೈಕಮಾಂಡ್‌ಗೆ, ಕರ್ನಾಟಕದ ಯಡ್ಯೂರಪ್ಪನವರ ಸರ್ಕಾರ ಬೇಡದ ಕೂಸು. ಅದಕ್ಕಾಗಿ ಎಷ್ಟೆಲ್ಲ ನಿರ್ಲಕ್ಷ್ಯ ತೋರಲು ಸಾಧ್ಯವೋ ಅಷ್ಟೂ ನಿರ್ಲಕ್ಷ್ಯದೊಂದಿಗೆ ಯಡ್ಯೂರಪ್ಪನವರಿಗೆ ನಿರಂತರವಾಗಿ ಅವಮಾನ ಮಾಡಲಾಗುತ್ತಿದೆ. ಪ್ರಮಾಣ ವಚನದ ವಿಳಂಬ ಇರಬಹುದು, ಸಂಪುಟ ರಚನೆಗೆ ಕೊಕ್ಕೆ ಹಾಕಿದ್ದಿರಬಹುದು, ಮೂವರು ಡಿಸಿಎಂ ನೇಮಕ, ರಾಜ್ಯಾಧ್ಯಕ್ಷರ ಶಾಕಿಂಗ್ ನೇಮಕ, ಮೇಯರ್ ಆಯ್ಕೆ, ನೆರೆ ಪರಿಹಾರದ ನಿರ್ಲಕ್ಷ್ಯ ಹೀಗೆ ಸಿಎಂ ಆದ ನಂತರದಲ್ಲಿ ಯಡ್ಯೂರಪ್ಪನವರು ತಮ್ಮದೇ ಪಕ್ಷದಿಂದ ಅನುಭವಿಸುತ್ತಿರುವ ಅವಮಾನಗಳು ಒಂದೆರಡಲ್ಲ. ಅದಕ್ಕೆಲ್ಲ ಕಾರಣ ಬಿ.ಎಲ್.ಸಂತೋಷ್ ಎಂಬ ಆರೆಸ್ಸೆಸ್ ತಂತ್ರಗಾರ!

ಬಹಳ ದಿನಗಳಿಂದಲೇ ಕರ್ನಾಟಕ ಸಿಎಂ ಗಾದಿಯ ಮೇಲೆ ಕಣ್ಣಿಟ್ಟಿರುವ ಈ ಸಂತೋಷ್ ಹಂತಹಂತವಾಗಿ ರಾಜ್ಯ ಬಿಜೆಪಿಯನ್ನು ತನ್ನ ಕಬ್ಜಾಕ್ಕೆ ತೆಗೆದುಕೊಳ್ಳುತ್ತಾ ಬರುತ್ತಿದ್ದಾರೆ. ಯಡ್ಯೂರಪ್ಪ ಸಿಎಂ ಆಗುವುದು ನಿಕ್ಕಿಯಾಗುವುದಕ್ಕು ಕೆಲ ದಿನಗಳ ಮೊದಲಷ್ಟೇ ತಾನು ಬಿಜೆಪಿ ‘ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ’ಯಂತಹ ಪವರ್‌ಫುಲ್ ಹುದ್ದೆಗೆ ನೇಮಕವಾಗುವಂತೆ ನೋಡಿಕೊಂಡ ಸಂತೋಷ್, ಯಡ್ಯೂರಪ್ಪರನ್ನು ನಿಯಂತ್ರಿಸಲು ಬೇಕಾದ ಶಸ್ತ್ರಗಳನ್ನು ತನ್ನ ಬತ್ತಳಿಕೆಗೆ ಸೇರ್ಪಡೆ ಮಾಡಿಕೊಂಡಿದ್ದರು. ‘ಬ್ರಾಹ್ಮಣ’ ಜಾತಿಯ ಜೊತೆಗೆ ಸಂಘ ಪರಿವಾರದ ಪವರ್‌ಫುಲ್ ಬ್ಯಾಕ್‌ಅಪ್ ಇರುವ ಸಂತೋಷ್‌ರನ್ನು ಕರ್ನಾಟಕದಲ್ಲಿ ಸಿಎಂ ಮಾಡಿ, ಆ ಮೂಲಕ ಲಿಂಗಾಯತ ಜಾತಿಯ ಹಂಗೇ ಇಲ್ಲದೆ ಹಿಂದೂತ್ವದ ಅಜೆಂಡಾದಲ್ಲಿ ಕರ್ನಾಟಕವನ್ನು ಕಬ್ಜಾ ಮಾಡಿಕೊಳ್ಳಬೇಕೆನ್ನುವುದು ನಾಗ್ಪುರ ಹೆಡ್‌ಕ್ವಾರ್ಟರ್‌ನ ಲೆಕ್ಕಾಚಾರ.

ಹಾಗಂತ, ಯಡ್ಯೂರಪ್ಪನವರನ್ನು ಏಕಾಏಕಿ ಮೂಲೆಗುಂಪು ಮಾಡಿದರೆ ಕರ್ನಾಟಕದ ಮಟ್ಟಿಗೆ ತನ್ನ ಸುಭದ್ರ ಓಟ್‌ಬ್ಯಾಂಕ್ ಆದ ಲಿಂಗಾಯತರ ವಿರೋಧ ಕಟ್ಟಿಕೊಳ್ಳಬೇಕಾಗುತ್ತೆ ಅನ್ನೋದು ಬಿಜೆಪಿಗೆ ಗೊತ್ತಿಲ್ಲದ ಸಂಗತಿಯೇನಲ್ಲ. ವೀರೇಂದ್ರ ಪಾಟೀಲರ ವಿಚಾರದಲ್ಲಿ ಇಂಥಾ ತಪ್ಪು ಮಾಡಿದ ಕಾಂಗ್ರೆಸ್, ಲಿಂಗಾಯತರ ಒಲವು ಕಳೆದುಕೊಂಡ ಇತಿಹಾಸ ಕರ್ನಾಟಕದ ರಾಜಕೀಯ ಪುಟಗಳಲ್ಲಿದೆ. ಈಗಾಗಲೇ ಕೆಲ ಲಿಂಗಾಯತ ಸ್ವಾಮೀಜಿಗಳು ಮತ್ತು ಬಿಜೆಪಿ ಯುವ ಮೋರ್ಚಾದ ಉಪಾಧ್ಯಕರಂತಹ ಜಾತ್ಯಸ್ಥ ಅಭಿಮಾನಿಗಳು ಬಹಿರಂಗವಾಗಿಯೇ `ಯಡ್ಯೂರಪ್ಪನವರಿಗೆ ತೊಂದ್ರೆ ಕೊಟ್ಟರೆ ಸುಮ್ಮನಿರಲ್ಲ’ ಎಂಬ ಸಂದೇಶಗಳನ್ನು ದಾಟಿಸುತ್ತಿದ್ದಾರೆ.  ಹಾಗಾಗಿ ಅವರನ್ನು ಬೇರೊಂದು ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ಕಳಿಸಿಬಿಟ್ಟರೆ, ಗೌರವಯುತವಾಗೇ ಅವರ ರಾಜಕೀಯವನ್ನು ಸಮಾಧಿ ಮಾಡಬಹುದು, ಜೊತೆಗೆ ಲಿಂಗಾಯತರ ವಿರೋಧವೂ ಬರುವುದಿಲ್ಲ ಅನ್ನೋದು ಬಿಜೆಪಿಯ ಲೇಟೆಸ್ಟ್ ಲೆಕ್ಕಾಚಾರ.

ಸಾಮಾನ್ಯವಾಗಿ ರಾಜ್ಯಪಾಲರ ಅಧಿಕಾರಾವಧಿ ಐದು ವರ್ಷಗಳು. ಕೆಲವೊಮ್ಮೆ, ಅವರ ಅಧಿಕಾರಾವಧಿ ಮುಗಿದರು ರಾಷ್ಟ್ರಪತಿಗಳು (ಕೇಂದ್ರ ಸರ್ಕಾರದ ಶಿಫಾರಸ್ಸಿನ ಅನ್ವಯ) ಆ ಸ್ಥಾನಕ್ಕೆ ಬೇರೊಬ್ಬರನ್ನು ನೇಮಿಸುವವರೆಗೆ ಅವರೇ ಮುಂದುವರೆಯುತ್ತಾರೆ. ಸದ್ಯ ಗೋವಾದ ಮೃದುಲಾ ಸಿನ್ಹಾ ಅವರ ಅಧಿಕಾರಾವದಿ ಮುಗಿದು ಒಂದೂವರೆ ತಿಂಗಳಾಗಿದ್ದರು ಹೊಸ ರಾಜ್ಯಪಾಲರನ್ನು ಇನ್ನೂ ನೇಮಕ ಮಾಡಿಲ್ಲ. ಅದೇ ರೀತಿ ಜಾರ್ಖಂಡ್‌ನ ದ್ರೌಪದಿ ಮುರ್ಮು ಅವರ ಅವಧಿ ಇನ್ನು ಆರು ತಿಂಗಳಲ್ಲಿ ಮುಗಿಯಲಿದೆ. ಯಡ್ಯೂರಪ್ಪನವರನ್ನು ಆದಷ್ಟು ಬೇಗ ಇವರೆಡರಲ್ಲಿ ಒಂದು ಸ್ಥಾನಕ್ಕೆ ನಿಯೋಜಿಸಲು ಯೋಜನೆ ಸಿದ್ಧವಾಗಿದೆ ಎನ್ನಲಾಗುತ್ತಿದೆ.

ರಾಜ್ಯಪಾಲರಾಗಬೇಕೆಂದರೆ, ಆ ವ್ಯಕ್ತಿ ಸಂಸತ್ತು ಅಥವಾ ರಾಜ್ಯ ವಿಧಾನಸಭೆಗಳ ಸದಸ್ಯನಾಗಿರಬಾರದು. ಆದರೆ ಯಡ್ಯೂರಪ್ಪ ಸದ್ಯ ಎಂಎಲ್‌ಎ. ಹೇಗೂ ಮುಂದಿನ ಜನವರಿ ಅಥವಾ ಮಾರ್ಚ್‌ನೊಳಗೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗುವ ತಯಾರಿಯಲ್ಲಿ ಬಿಜೆಪಿ ಹೈಕಮಾಂಡ್ ಇರೋದ್ರಿಂದ ಯಡ್ಯೂರಪ್ಪನವರು ಸಹಜವಾಗಿಯೇ ತಮ್ಮ ಎಂಎಲ್‌ಎ ಸ್ಥಾನದಿಂದ ತೆರವುಗೊಳ್ಳುತ್ತಾರೆ. ಆಗ ಅವರನ್ನು ರಾಜ್ಯಪಾಲರನ್ನಾಗಿ ಬೀಳ್ಕೊಟ್ಟು ಮೋದಿ-ಶಾ ನೇತೃತ್ವದಲ್ಲಿ ಚುನಾವಣೆ ಎದುರಿಸಬಹುದು. ಆಗೊಮ್ಮೆ ಬಹುಮತ ದೊರಕಿದರೆ ಆರೆಸ್ಸೆಸ್ ಆಣತಿಯಂತೆ ಸಂತೋಷ್‌ರನ್ನು ಸಿಎಂ ಮಾಡಬಹುದು ಅನ್ನೋದು ಇಡೀ ಲೆಕ್ಕಾಚಾರದ ಹಿಂದಿರುವ ಅಂಕಗಣಿತ!

ರಾಜಕಾರಣದಲ್ಲಿ ಅಸ್ತಿತ್ವದಲ್ಲಿರುವ ರೂಢಿಯ ಪ್ರಕಾರ, ಸಾಮಾನ್ಯವಾಗಿ ರಾಜ್ಯಪಾಲರ ಹುದ್ದೆ ಅನ್ನೋದು ಒಬ್ಬ ರಾಜಕಾರಣಿಯ ಸಕ್ರಿಯ ರಾಜಕಾರಣಕ್ಕೆ ಮಂಗಳ ಹಾಡಿದಂತೆ. ಹಿಂದೆ ೨೦೦೩ರಲ್ಲಿ ಎಸ್.ಎಂ.ಕೃಷ್ಣ ವಿರುದ್ಧ ದೇವೇಗೌಡರು ಇಂತದ್ದೇ ದಾಳ ಉರುಳಿಸಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಮಾಡುವ ಸಂದರ್ಭ ಎದುರಾದಾಗ ತಮ್ಮ ಒಕ್ಕಲಿಗ ಜಾತಿ ರಾಜಕಾರಣಕ್ಕೆ ಮುಳ್ಳಾಗುತ್ತಾರೆನ್ನುವ ಕಾರಣಕ್ಕೆ ದೇವೇಗೌಡರು ಕಾಂಗ್ರೆಸ್‌ನ ಮುಂದೆ ಎಸ್.ಎಂ.ಕೃಷ್ಣರನ್ನು ರಾಜ್ಯ ರಾಜಕಾರಣದಿಂದ ದೂರ ಇಡಬೇಕೆನ್ನುವ ‘ಭೀಷ್ಮ’ ಷರತ್ತು ವಿಧಿಸಿದ್ದರು. ಅದೇ ಕಾರಣಕ್ಕೆ ಅಂದಿನ ಯುಪಿಎ ಸರ್ಕಾರ ಅವರನ್ನು ಮಹಾರಾಷ್ಟ್ರದ ರಾಜ್ಯಪಾಲರನ್ನಾಗಿ ನೇಮಕ ಮಾಡಿತ್ತು. ಅದಾದ ಮೇಲೆ ಕರ್ನಾಟಕದ ರಾಜಕಾರಣದಲ್ಲಿ ಕೃಷ್ಣರ ಗಾರುಡಿ ಮತ್ತೆ ಗರಿಬಿಚ್ಚಲೇ ಇಲ್ಲ.

ಯಡ್ಯೂರಪ್ಪನವರು ಗೌರ್ನರ್ ಆಫರ್‌ಗೆ ಅಷ್ಟು ಸುಲಭಕ್ಕೆ ಒಪ್ಪಲಾರರು ಎಂಬುದು ಎಷ್ಟು ಸತ್ಯವೋ ಸಿಬಿಐ, ಇಡಿಗಳ ಕರಾಮತ್ತಿನ ಮುಂದೆ ಯಡ್ಯೂರಪ್ಪನವರಿಗೆ ಬೇರೆ ಆಯ್ಕೆಗಳೇ ಇರುವುದಿಲ್ಲ ಅನ್ನೋದೂ ಅಷ್ಟೇ ಸತ್ಯ. ಕಡೇಪಕ್ಷ ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದಾದರು ಯಡ್ಯೂರಪ್ಪನವರು ಒಪ್ಪಿಕೊಳ್ಳಲೇಬೇಕಾಗುತ್ತೆ. ಈಗಾಗಲೇ ತನ್ನ ಬ್ಯುಸಿನೆಸ್ ಪಾರ್ಟ್ನರ್ ಡಿ.ಕೆ.ಶಿವಕುಮಾರ್‌ಗೆ ಬಂದಿರುವ ಗತಿ ಕಂಡಿರುವ ಯಡ್ಯೂರಪ್ಪನವರು ೨೦೧೩ರಲ್ಲಿ ಬಂಡಾಯವೆದ್ದಂತೆ ಕೆಜೆಪಿಯನ್ನೋ, ಮತ್ತೊಂದನ್ನೋ ಕಟ್ಟಲಾರರು ಅನ್ನೋದು ಸಂತೋಷ್‌ರ ತಂಡಕ್ಕೆ ಸ್ಪಷ್ಟವಾಗಿ ಗೊತ್ತು.

ಬಿಜೆಪಿಯೊಳಗೆ ಯಡ್ಯೂರಪ್ಪನವರ ವಿರುದ್ಧ ಇಂಥಾ ಚಿತಾವಣೆಗಳು ನಡೆಯುತ್ತಿರೋದ್ರಿಂದಲೇ ಅವರನ್ನು ನಂಬಿ ತಮ್ಮತಮ್ಮ ಪಕ್ಷಗಳಿಗೆ ‘ಕೈ’ಕೊಟ್ಟು, ಅನರ್ಹತೆಯ ತೂಗುಗತ್ತಿಯಲ್ಲಿ ಹೊಯ್ದಾಡುತ್ತಿರುವ ರೆಬೆಲ್ ಶಾಸಕರಲ್ಲಿ ಒಂದಷ್ಟು ಜನ ವಾಪಾಸ್ ಮಾತೃಪಕ್ಷಗಳ ಕದ ತಟ್ಟುವ ಆಲೋಚನೆಯಲ್ಲಿರೋದು ಎನ್ನಲಾಗುತ್ತಿದೆ. ಅದೇನೆ ಆಗಲಿ, ಯಡ್ಯೂರಪ್ಪನವರನ್ನು ಗೌರವಯುತವಾಗಿಯೋ, ಜಬರ್‌ದಸ್ತಿಯಿಂದಲೋ, ಬೆದರಿಸಿಯೋ ‘ಮಾರ್ಗದರ್ಶಕ ಮಂಡಳಿ’ಯ ‘ಗೃಹಪ್ರವೇಶ’ ಮಾಡಿಸುವ ಲಕ್ಷಣಗಳು ಬಿಜೆಪಿ ಪಾಳೆಯದಲ್ಲಿ ದಿನದಿಂದ ದಿನಕ್ಕೆ ದಟ್ಟವಾಗುತ್ತಲೇ ಬರುತ್ತಿವೆ. ಹಾಗಾಗಿ ‘ಗೌರ್ನರ್’ ತರದ ಗಾಳಿಸುದ್ದಿಗಳೂ ವಿಪರೀತ ಕುತೂಹಲ ಕೆರಳಿಸುತ್ತಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...