ಐತಿಹಾಸಿಕ ನಿರ್ಧಾರವೊಂದರಲ್ಲಿ, ತನ್ನ ಎಲ್ಲ ಅಧಿಕೃತ ದಾಖಲೆಗಳಲ್ಲಿ ತನ್ನ ಹೆಸರು ಮತ್ತು ಲಿಂಗವನ್ನು ಬದಲಾಯಿಸಲು ಹಿರಿಯ ಭಾರತೀಯ ಕಂದಾಯ ಸೇವೆ (ಐಆರ್ಎಸ್) ಅಧಿಕಾರಿಯ ವಿನಂತಿಯನ್ನು ಹಣಕಾಸು ಸಚಿವಾಲಯವು ಅನುಮತಿಸಿದೆ. ಭಾರತೀಯ ನಾಗರಿಕ ಸೇವೆಗಳಲ್ಲೆ ಇದೊಂದು ಮೊದಲ ಪ್ರಕರಣವಾಗಿದೆ.
ಹೈದರಾಬಾದ್ನಲ್ಲಿರುವ ಕಸ್ಟಮ್ಸ್ ಅಬಕಾರಿ ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ (ಸಿಇಎಸ್ಟಿಎಟಿ) ಮುಖ್ಯ ಆಯುಕ್ತರ (ಅಧಿಕೃತ ಪ್ರತಿನಿಧಿ) ಕಚೇರಿಯಲ್ಲಿ ಜಂಟಿ ಆಯುಕ್ತರಾಗಿ ನೇಮಕಗೊಂಡಿದ್ದ 35 ವರ್ಷದ ಎಂ ಅನುಸೂಯಾ ಅವರು ಈ ವಿನಂತಿಯನ್ನು ಮಾಡಿದ್ದಾರೆ. ಆಕೆ ತನ್ನ ಹೆಸರನ್ನು ಎಂ ಅನುಕತಿರ್ ಸೂರ್ಯ ಎಂದು ಬದಲಾಯಿಸಲು ನಿರ್ಧರಿಸಿದ್ದು, ಆಕೆ ತನ್ನ ಲಿಂಗವನ್ನು ಹೆಣ್ಣಿನಿಂದ ಗಂಡಿಗೆ ಬದಲಾಯಿಸುವಂತೆ ಮನವಿ ಮಾಡಿದ್ದರು.
“ಎಂ ಅನುಸೂಯಾ ಅವರ ಮನವಿಯನ್ನು ಪರಿಗಣಿಸಲಾಗಿದೆ. ಇನ್ನು ಮುಂದೆ, ಎಲ್ಲ ಅಧಿಕೃತ ದಾಖಲೆಗಳಲ್ಲಿ ಅಧಿಕಾರಿಯನ್ನು ಎಂ ಅನುಕತಿರ್ ಸೂರ್ಯ ಎಂದು ಗುರುತಿಸಲಾಗುತ್ತದೆ” ಎಂದು ಹಣಕಾಸು ಇಲಾಖೆ ತಿಳಿಸಿದೆ.
ಅನುಕತಿರ್ ಸೂರ್ಯ ಲಿಂಕ್ಡ್ಇನ್ ಪ್ರೊಫೈಲ್ನ ಪ್ರಕಾರ, ಅವರು ಡಿಸೆಂಬರ್ 2013 ರಲ್ಲಿ ಚೆನ್ನೈನಲ್ಲಿ ಸಹಾಯಕ ಆಯುಕ್ತರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 2018 ರಲ್ಲಿ ಡೆಪ್ಯೂಟಿ ಕಮಿಷನರ್ ಶ್ರೇಣಿಗೆ ಬಡ್ತಿ ಪಡೆದರು. ಅವರು ಕಳೆದ ವರ್ಷ ಹೈದರಾಬಾದ್ನಲ್ಲಿ ತಮ್ಮ ಪ್ರಸ್ತುತ ಪೋಸ್ಟಿಂಗ್ಗೆ ಸೇರಿದರು.
ಅವರು ಚೆನ್ನೈನ ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ನಲ್ಲಿ ತಮ್ಮ ಬ್ಯಾಚುಲರ್ ಪದವಿಯನ್ನು ಪೂರ್ಣಗೊಳಿಸಿದರು. 2023 ರಲ್ಲಿ ಭೋಪಾಲ್ನ ನ್ಯಾಷನಲ್ ಲಾ ಇನ್ಸ್ಟಿಟ್ಯೂಟ್ ವಿಶ್ವವಿದ್ಯಾಲಯದಿಂದ ಸೈಬರ್ ಕಾನೂನು ಮತ್ತು ಸೈಬರ್ ಫೋರೆನ್ಸಿಕ್ಸ್ನಲ್ಲಿ ಪಿಜಿ ಡಿಪ್ಲೊಮಾವನ್ನು ಪೂರ್ಣಗೊಳಿಸಿದರು.
ಇದನ್ನೂ ಓದಿ; ಬಿಜೆಪಿ ದಲಿತ ವಿರೋಧಿ ಎಂದು ಹಲವರು ಎಚ್ಚರಿಸಿದ್ದರು..’; ಅಸಮಾಧಾನ ಹೊರಹಾಕಿದ ಜಿಗಜಿಣಗಿ


