ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಅವರೊಂದಿಗೆ ಅತ್ಯುತ್ತಮ ಸಭೆ ನಡೆಯಿತು. ಮಾನವ ಸಬಲೀಕರಣದ ಬಗೆಗಿನ ಅವರ ಉತ್ಸಾಹ ಸ್ಪಷ್ಟವಾಗಿ ಗೋಚರಿಸುತ್ತದೆ. ವಿವಿಧ ವಿಷಯಗಳ ಕುರಿತು ಇಬ್ಬರೂ ಆರೋಗ್ಯಕರ ಮತ್ತು ಉತ್ತಮ ಚರ್ಚೆ ನಡೆಸಿದೆವು. ಅವರ ಸಾಧನೆಗಳ ಬಗ್ಗೆ ಭಾರತ ಹೆಮ್ಮೆಪಡುತ್ತದೆ. ಅವರ ಮುಂದಿನ ಪ್ರಯತ್ನಗಳಿಗೆ ಅವರಿಗೆ ಶುಭ ಹಾರೈಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದಾರೆ.
ನಾನು ಎಡಪಂಥೀಯ ಎಂದು ಘೋಷಿಸಿಕೊಂಡ ಮತ್ತು ಪ್ರಧಾನಿ ಮೋದಿಯವರ ಆರ್ಥಿಕ ನೀತಿಗಳನ್ನು ಟೀಕಿಸಿದ ನೊಬೆಲ್ ಪ್ರಶಸ್ತಿ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಅವರ ಸಾಧನೆಗಳನ್ನು ಕೊಂಡಾಡಿ ಶುಭ ಹಾರೈಸಿದ್ದಾರೆ.
Excellent meeting with Nobel Laureate Abhijit Banerjee. His passion towards human empowerment is clearly visible. We had a healthy and extensive interaction on various subjects. India is proud of his accomplishments. Wishing him the very best for his future endeavours. pic.twitter.com/SQFTYgXyBX
— Narendra Modi (@narendramodi) October 22, 2019
ಇನ್ನು ಎನ್ಡಿಟಿವಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ್ದ ಅಭಿಜಿತ್ ಬ್ಯಾನರ್ಜಿ, ‘ನಾನು ಆರ್ಥಿಕ ಚಿಂತನೆಗಳಲ್ಲಿ ಯಾವುದೇ ಭೇದಭಾವ ಮಾಡುವುದಿಲ್ಲ. ಯಾವುದೇ ಪಕ್ಷವಿದ್ದರೂ ಕೆಲಸ ಮಾಡಲು ತಯಾರಿದ್ದೇನೆ. ಮೋದಿ ಅವರು ಗುಜರಾತ್ ಸಿಎಂ ಆಗಿದ್ದಾಗ ಅವರೊಂದಿಗೆ ಕೆಲಸ ಮಾಡಿದ್ದೆ. ಅಲ್ಲಿನ ಅನುಭವ ಅತ್ಯುತ್ತಮವಾಗಿತ್ತು’. ಎಂದು ಹೇಳಿದ್ದಾರೆ. ಅವರ ಹೇಳಿಕೆಯ ನಂತರ ಪ್ರಧಾನಿ ಮೋದಿ ಅಭಿಜಿತ್ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದಾರೆ.
ಈಗಾಗಲೇ ದೇಶದಲ್ಲಿ ಆರ್ಥಿಕ ಕುಸಿತ, ಜಿಡಿಪಿ ಮಂದಗತಿಯಲ್ಲಿ ಸಾಗಿದ್ದು, ನಿರುದ್ಯೋಗ, ಮೂಲ ಸೌಕರ್ಯಗಳ ಕೊರತೆ, ಬಡತನ ಹೆಚ್ಚುವ ಭೀತಿ ಶುರುವಾಗಿದೆ. ಅಲ್ಲದೇ ಈ ಹಿಂದೆ ಅಭಿಜಿತ್ ಬ್ಯಾನರ್ಜಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಆರ್ಥಿಕತೆ ಕುಸಿತ ಮತ್ತು ನೋಟು ನಿಷೇಧ, ಜಿಎಸ್ಟಿ ಹೇರಿಕೆಯ ನಂತರ ಕಟುವಾಗಿ ಟೀಕಿಸಿದ್ದರು. ಮುಂದಿನ ದಿನಗಳಲ್ಲಿ ನೋಟ್ ಬ್ಯಾನ್ ಸಾಕಷ್ಟು ಪರಿಣಾಮ ಬೀರಲಿದೆ. ಬಿಜೆಪಿ ಮಾಡಿದ ನೋಟ್ ಬ್ಯಾನ್ ಮತ್ತು ಜಿಎಸ್ಟಿ ಅರ್ಥವೇ ಆಗಿಲ್ಲ ಎಂದಿದ್ದರು. ಅರ್ಥಶಾಸ್ತ್ರ ವಿಭಾಗದಲ್ಲಿ ಅಭಿಜಿತ್ ಬ್ಯಾನರ್ಜಿ ನೊಬೆಲ್ ಪುರಸ್ಕಾರ ಪಡೆದ ನಂತರ ಅವರ ಹೇಳಿಕೆಗಳಿಗೆ ಮತ್ತಷ್ಟು ಬಲ ಬಂದಿತ್ತು.
ಇನ್ನು ಮೊನ್ನೆಯಷ್ಟೇ ಕೇಂದ್ರ ಸಚಿವ ಪಿಯೂಷ್ ಗೋಯಲ್, ಅಭಿಜಿತ್ ಬ್ಯಾನರ್ಜಿ ಅವರು ನೊಬೆಲ್ ಪ್ರಶಸ್ತಿಗೆ ಭಾಜನರಾಗಿರುವುದಕ್ಕೆ ಅಭಿನಂದಿಸುತ್ತೇವೆ. ಆದರೆ ಅವರು ಎಡಪಂಥೀಯ ವಿಚಾರಧಾರೆಯುಳ್ಳವರು ಎಂದಿದ್ದರು. ಗೋಯಲ್ ಮಾತು ಸಾಕಷ್ಟು ಟೀಕೆ, ವಿವಾದಕ್ಕೆ ಗುರಿಯಾಗಿತ್ತು. ಈಗ ಇದೆಲ್ಲ ಬೆಳವಣಿಗೆಯ ನಂತರ ಪ್ರಧಾನಿ ಮೋದಿ ಸ್ವತಃ ಅಭಿಜಿತ್ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ, ಅಭಿನಂದನೆ ತಿಳಿಸಿದ್ದಾರೆ.



ಅವರು ಹೇಳಿದ ಒಂದು ಮಾತಾದರೂ ಈ ಮನುಷ್ಯನಿಗೆ ಅರ್ಥವಾಗಿದ್ದೀತೆ? ಸಂಶಯ! ಅವರ ಸಲಹೆ ಮೇರೆಗೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸೇರಿಸಿದ್ದ ಯೋಜನೆಯನ್ನು ಚುನಾವಣೆಯ ವೇಳೆ ಗೇಲಿ ಮಾಡಿದ್ದು ಈತನೇ ಅಲ್ಲವೆ?