ಬಾಂಗ್ಲಾದೇಶದ ದೇವಸ್ಥಾನವೊಂದಕ್ಕೆ ಪ್ರಧಾನಿ ಮೋದಿ ಉಡುಗೊರೆಯಾಗಿದ್ದ ಕಾಳಿ ದೇವಿಯ ಕಿರೀಟವನ್ನು ದಸರಾ ಆಚರಣೆಯ ವೇಳೆ ಕಳವು ಮಾಡಲಾಗಿದ್ದು, ಇದನ್ನು ಭಾರತ ಶನಿವಾರ ಖಂಡಿಸಿದೆ. ಇದು “ದೇಶದ ವ್ಯವಸ್ಥಿತ ಅಪವಿತ್ರಗೊಳಿಸುವಿಕೆ” ಎಂದು ಕರೆದಿದೆ. ಬಾಂಗ್ಲಾದೇಶ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಮಾರ್ಚ್ 2021 ರಲ್ಲಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು ಸತ್ಖೈರಾದ ಜೆಶೋರೇಶ್ವರಿ ದೇವಸ್ಥಾನದಲ್ಲಿರುವ ಹಿಂದೂ ದೇವತೆಗೆ ಬೆಳ್ಳಿ, ಚಿನ್ನದ ಲೇಪಿತ ಕಿರೀಟವನ್ನು ಉಡುಗೊರೆಯಾಗಿ ನೀಡಿದ್ದರು. ದಸರಾ ಆಚರಣೆ ನಡೆಯುತ್ತಿರುವ ವೇಳೆ ಕಿರೀಟವನ್ನು ಕಳ್ಳತನ ಮಾಡಲಾಗಿದ್ದು, ಕಳ್ಳತನ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ವರದಿಯಾಗಿದೆ.
ಇದನ್ನೂಓದಿ: ಬೆದರಿಕೆ ಆರೋಪ : ಹೆಚ್ಡಿಕೆ ವಿರುದ್ದ ದೂರು ದಾಖಲಿಸಿದ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್
ಢಾಕಾದ ತಂತಿಬಜಾರ್ನಲ್ಲಿನ ಪೂಜಾ ಮಂಟಪದ ಮೇಲಿನ ದಾಳಿ ಮತ್ತು ಸತ್ಖೈರಾದ ಪೂಜ್ಯ ಜೇಶೋರೇಶ್ವರಿ ಕಾಳಿ ದೇವಸ್ಥಾನದಲ್ಲಿ ನಡೆದ ಕಳ್ಳತನವನ್ನು ನಾವು ಗಂಭೀರ ಕಳವಳದಿಂದ ಗಮನಿಸಿದ್ದೇವೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಬಾಂಗ್ಲಾದೇಶ
“ಇವು ಶೋಚನೀಯ ಘಟನೆಗಳಾಗಿದ್ದು, ಅವು ವ್ಯವಸ್ಥಿತ ಮಾದರಿಯಲ್ಲಿ ನಡೆಯುತ್ತಿವೆ. ಈ ಅಪವಿತ್ರಗೊಳಿಸುವಿಕೆ ಮತ್ತು ದೇವಾಲಯಗಳು ಮತ್ತು ದೇವತೆಗಳಿಗೆ ಹಾನಿಯನ್ನು ನಾವು ಹಲವಾರು ದಿನಗಳಿಂದ ನೋಡಿದ್ದೇವೆ” ಎಂದು ಸರ್ಕಾರ ಹೇಳದೆ.
“ವಿಶೇಷವಾಗಿ ಇಂತಹ ಮಂಗಳಕರ ಹಬ್ಬದ ಸಮಯದಲ್ಲಿ ಹಿಂದೂಗಳು ಮತ್ತು ಎಲ್ಲಾ ಅಲ್ಪಸಂಖ್ಯಾತರು ಮತ್ತು ಅವರ ಪೂಜಾ ಸ್ಥಳಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಾವು ಬಾಂಗ್ಲಾದೇಶ ಸರ್ಕಾರಕ್ಕೆ ಕರೆ ನೀಡುತ್ತೇವೆ.” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಜೇಶೋರೇಶ್ವರಿ ದೇವಸ್ಥಾನವು ಭಾರತ ಮತ್ತು ನೆರೆಯ ದೇಶಗಳಲ್ಲಿ ಹರಡಿರುವ 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ.
ಇದನ್ನೂಓದಿ: ತಮಿಳುನಾಡು | ತಾಂತ್ರಿಕ ಸಮಸ್ಯೆ ಬಳಿಕ ಸುರಕ್ಷಿತವಾಗಿ ಲ್ಯಾಂಡ್ ಆದ ಏರ್ ಇಂಡಿಯಾ ವಿಮಾನ : ಪ್ರಯಾಣಿಕರು ಸೇಫ್
ಶುಕ್ರವಾರ ಢಾಕಾದ ತಂತಿಬಜಾರ್ ಪ್ರದೇಶದಲ್ಲಿ ದುರ್ಗಾ ಪೂಜಾ ಮಂಟಪದ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಘಟನೆಯನ್ನು ಸಚಿವಾಲಯ ಹೈಲೈಟ್ ಮಾಡಿದ್ದು, ದಾಳಿಯಲ್ಲಿ ಕನಿಷ್ಠ 20 ಜನರು ಗಾಯಗೊಂಡಿದ್ದರು.
ದಸರಾ ಆಚರಣೆಯ ವಿರುದ್ಧ ಆರಂಭದಲ್ಲಿ ಹಿಂದೂ ಸಮುದಾಯಕ್ಕೆ ಬಹುಸಂಖ್ಯಾತ ಸಮುದಾಯದಿಂದ ಬೆದರಿಕೆಗಳು ಬಂದಿದ್ದವು. ಹಿಂದೂಗಳು ತಮ್ಮ ಹಬ್ಬವನ್ನು ಬಹುಸಂಖ್ಯಾತ ಮುಸ್ಲಿಮರ ಭಾವನೆಗಳನ್ನು ಉಲ್ಲಂಘಿಸುವುದರಿಂದ ತಮ್ಮ ಹಬ್ಬವನ್ನು ಬಹಿರಂಗವಾಗಿ ಆಚರಿಸದಂತೆ ಎಚ್ಚರಿಕೆ ನೀಡಲಾಗಿತ್ತು ಎಂದು ವರದಿಯಾಗಿದೆ.
“ಅಕ್ಟೋಬರ್ 1 ರಿಂದ, ನಡೆಯುತ್ತಿರುವ ದಸರಾ ಆಚರಣೆಗೆ ಸಂಬಂಧಿಸಿದ 35 ಘಟನೆಗಳು ದೇಶಾದ್ಯಂತ ಸಂಭವಿಸಿವೆ. ಒಟ್ಟು 11 ಪ್ರಕರಣಗಳನ್ನು ದಾಖಲಿಸಲಾಗಿದ್ದು, 24 ಸಾಮಾನ್ಯ ಡೈರಿಗಳು (ಜಿಡಿ) ದಾಖಲಿಸಲಾಗಿದೆ ಮತ್ತು 17 ವ್ಯಕ್ತಿಗಳನ್ನು ಬಂಧಿಸಲಾಗಿದೆ” ಎಂದು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ) ಎಂಡಿ ಮೊಯಿನುಲ್ ಇಸ್ಲಾಂ ಹೇಳಿದ್ದಾರೆ ಎಂದು ದಿ ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.
ವಿಡಿಯೊ ನೋಡಿ: ಮಾರಕಾಸ್ತ್ರದಿಂದ ಹಲ್ಲೆಗೆ ಯತ್ನಸಿದವನಿಗೆ ಪೊಲೀಸರಿಂದ ಗುಂಡೇಟು


