Homeಕರ್ನಾಟಕಬೇರೆ ಮಾಧ್ಯಮಗಳಿಗೆ ಹೋಲಿಸಿದರೆ ಡಿಜಿಟಲ್ ಮಾಧ್ಯಮ ಸತ್ಯ ತಿಳಿಸುತ್ತದೆ - ಸಿಎಂ ಸಿದ್ದರಾಮಯ್ಯ

ಬೇರೆ ಮಾಧ್ಯಮಗಳಿಗೆ ಹೋಲಿಸಿದರೆ ಡಿಜಿಟಲ್ ಮಾಧ್ಯಮ ಸತ್ಯ ತಿಳಿಸುತ್ತದೆ – ಸಿಎಂ ಸಿದ್ದರಾಮಯ್ಯ

- Advertisement -
- Advertisement -

ಟಿವಿ, ಸೇರಿದಂತೆ ಇತರ ಮಾಧ್ಯಮಗಳನ್ನು ಅವಲೋಕನ ಮಾಡಿದಾಗ ಡಿಜಿಟಲ್ ಮಾಧ್ಯಮ ಹೆಚ್ಚು ಜನರಿಗೆ ಸತ್ಯವನ್ನು ತಿಳಿಸುವ ಪ್ರಯತ್ನ ಮಾಡುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಹೇಳಿದರು. ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ನಡೆದ ಈದಿನ.ಕಾಮ್ ಎರಡನೇ ವರ್ಷದ ಓದುಗರ ಸಮಾವೇಶದಲ್ಲಿ ಮಾತನಾಡಿದ ಅವರು, ಮಾಧ್ಯಮ ಬಹಳ ಪ್ರಭಲವಾದ ಅಸ್ತ್ರವಾಗಿದ್ದು, ಅದು ಧ್ವನಿ ಇಲ್ಲದವರ ಪರವಾಗಿ, ಓದಿ ಬರುವವರಿಗೂ ಮತ್ತು ಓದು ಬರದವರಿಗೆ ಧ್ವನಿಯಾಗಬೇಕು ಎಂದು ಅವರು ತಿಳಿಸಿದರು. ಬೇರೆ ಮಾಧ್ಯಮಗಳಿಗೆ

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಮ್ಮ ಸಮಾಜದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಇದೆ. ಈ ಅಸಮಾನತೆ ಯಾಕೆ ಬಂತು? ಸುಮ್ಮ ಸುಮ್ಮನೆ ಅಸಮಾನತೆ ಬಂದಿಲ್ಲ. ನನ್ನ ಪ್ರಕಾರ, ಜಾತಿ ವ್ಯವಸ್ಥೆಯೆ ಇದಕ್ಕೆ ಮೂಲಕ ಕಾರಣ. ಜಾತಿ ವ್ಯವಸ್ಥೆ ಇಲ್ಲದೆ ಹೋಗಿದ್ದರೆ, ಇಷ್ಟೊಂದು ಅಸಮಾನತೆ ಬರಲು ಸಾಧ್ಯವಿರಲಿಲ್ಲ. ಜಾತಿ ಕಾರಣಕ್ಕೆ ಅನೇಕ ಶತಮಾನಗಳ ಕಾಲ ಶೂದ್ರರು, ಮಹಿಳೆಯರು ಮತ್ತು ದಲಿತರು ಅಸಮಾನತೆಗೆ ಒಳಗಾದರು” ಎಂದು ಅವರು ಹೇಳಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ

“ನಮ್ಮ ಸಮಾಜ ಮತ್ತು ದೇಶ ಹೇಗಿರಬೇಕು ಹಾಗೂ ದೇಶದ ಗುರಿ ಹೇಗಿರಬೇಕು ಎಂದು ನಾವು ಸಂವಿಧಾನದಲ್ಲಿ ಒಂದು ಚೌಕಟ್ಟು ರಚಿಸಿದ್ದೇವೆ. ಹೆಣ್ಮಕ್ಕಳಿಗೆ ಬಸವಣ್ಣ ಅವರ ಕಾಲದ ನಂತರ ಸಮಾನ ಅವಕಾಶ ಸಿಕ್ಕಲು ಪ್ರಾರಂಭವಾಯಿತು. ನಮ್ಮ ಜಾತಿ ವ್ಯವಸ್ಥೆಯಲ್ಲಿ ಒಬ್ಬ ವ್ಯಕ್ತಿಯ ಸಾಮಾಜಿಕ ಸ್ಥಾನಮಾನ ಅಳೆಯುತ್ತಾ ಇದ್ದಿದ್ದು ಜಾತಿ ಆಧಾರದಲ್ಲಿ. ಅವರ ಪ್ರತಿಭೆ ಮತ್ತು ವ್ಯಕ್ತಿತ್ವಕ್ಕೆ ಯಾವುದೆ ಬೆಲೆ ಇರಲಿಲ್ಲ. ಜಾತಿಯ ಆಧಾರದಲ್ಲಿ ಅವರ ಸ್ಥಾನಮಾನ ಅಳೆಯುತ್ತಿದ್ದರು” ಎಂದು ಹೇಳಿದರು.

“ನಮಗೆ ರಾಜಕೀಯ ಪ್ರಜಾಪ್ರತಭುತ್ವ ಸಿಕ್ಕಿದೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಬುತ್ವ ಸಿಕ್ಕಿಲ್ಲ. ರಾಜಕೀಯ ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ, ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಬುತ್ವ ಸಿಗಬೇಕು ನಾವು ಸಮಾನತೆಯ, ಜಾತಿ ರಹಿತವಾದ, ಕಂದಾಚಾರ ಮತ್ತು ಮೌಢ್ಯ ರಹಿತ ಸಮಾಜ ನಿರ್ಮಿಸಬೇಕು. ಅವಕಾಶ ವಂಚಿತ ಸಮುದಾಯಕ್ಕೆ ಆರ್ಥಿಕ, ಸಾಮಾಜಿಕ ಶಕ್ತಿಯನ್ನು ತುಂಬುವವರೆಗೆ ಸಮಸಮಾಜ ನಿರ್ಮಿಸಲು ಅಸಾಧ್ಯ” ಎಂದು ಅವರು ತಿಳಿಸಿದರು.

“ಬಸವಣ್ನ ಶತಮಾನಗಳ ಹಿಂದೆಯೆ ಇವ ನಮ್ಮವ ಎಂದು ಹೇಳಿದ್ದ. ಆದರೆ ಜನರು ಮೌಢ್ಯವನ್ನು, ಕಂದಾಚಾರವನ್ನು ಇನ್ನೂ ಬಿಟ್ಟಿಲ್ಲ. ಯಾಕೆಂದರೆ ನಮಗೆ ಸಿಕ್ಕ ಜ್ಞಾನವು ಗುಣಮಟ್ಟದ ಶಿಕ್ಷಣ ಮತ್ತು ವೈಜ್ಞಾನಿಕತೆಯದ್ದಲ್ಲ. ಹಾಗಾಗಿ ಅದು ಇನ್ನೂ ಹಾಗೆ ಇದೆ. ಗುಣಮಟ್ಟದ ಶಿಕ್ಷಣ ಮತ್ತು ವೈಜ್ಞಾನಿಕತೆಯ ಶಿಕ್ಷಣ ಸಿಕ್ಕರೆ ನಾವು ವಿಚಾರವಂತರು ಆಗುತ್ತೇವೆ ಮತ್ತು ಸಮಸಮಾಜ ನಿರ್ಮಾಣ ಸಾಧ್ಯ. ಇಷ್ಟೆಲ್ಲ ಶಿಕ್ಷಣ ಆದರೂ ಕೂಡಾ ಜನರು ಕರ್ಮ ಸಿದ್ದಾಂತವನ್ನು ತಿರಸ್ಕರಿಸುತ್ತಿಲ್ಲ. ಬಡತನ, ಸಂಕಷ್ಟಗಳಿಗೆ ನಮ್ಮ ಜನರು ಹಿಂದಿನ ಜನ್ಮದ ಕತೆ ಹೇಳುತ್ತಾರೆ. ಇದನ್ನು ಅಸ್ತ್ರವಾಗಿಟ್ಟು ಕೊಂಡು ಅವರನ್ನು ಶೋಷಣೆ ಮಾಡಲಾಗುತ್ತದೆ” ಎಂದು ಸಿದ್ದರಾಮಯ್ಯ ಹೇಳಿದರು.

“ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ನಾನು ನಂಬಿಕೆ ಇಟ್ಟಿದ್ದೇನೆ. ಹಾಗಾಗಿಯೆ ನನಗೆ ಬಯ್ಯುವ ಯಾವುದೇ ಮಾಧ್ಯಮಗಳಿಗೆ ಯಾಕೆ ಹೀಗೆ ಮಾಡುತ್ತೀರಿ ಎಂದು ಕೇಳುತ್ತಿಲ್ಲ. ಈ ಮಾಧ್ಯಮಗಳು ನನ್ನ ಬಗ್ಗೆ ದುರುದ್ದೇಶದಿಂದ ಬರೆದಿದ್ದರೆ, ಸುಳ್ಳು ಬರೆದರೆ ಅದನ್ನು ಓದುಗರು ಖಂಡಿಸಬೇಕು. ಫೇಕ್ ನ್ಯೂಸ್ ವಿರುದ್ಧ ಕೇಸ್ ಹಾಕಿ ಎಂದು ಹೇಳಿದ್ದೇನೆ. ಒಬ್ಬ ವ್ಯಕ್ತಿಯನ್ನು ತೇಜೋವಧೆ ಮಾಡುವುದು ತುಂಬಾ ಕೆಟ್ಟದು. ಈಗ ತನಿಖಾ ಜರ್ನಲಿಸಂ ಹೋಗಿಯೆ ಬಿಟ್ಟಿದೆ. ಯಾವುದೆ ವಿಚಾರವನ್ನು ನೋಡದರೆ ವರದಿ ಮಾಡಲಾಗುತ್ತಿದೆ” ಎಂದು ಅವರು ಹೇಳಿದರು. ಬೇರೆ ಮಾಧ್ಯಮಗಳಿಗೆ

“ಕೊನೆಯಲ್ಲಿ ನಾವು ಸಂವಿಧಾನದ ಧ್ಯೇಯ ಮತ್ತು ಗುರಿಗಳನ್ನು ತಲುಪಬೇಕಿದೆ. ಈ ಗುರಿಗಳನ್ನು ತಲುಪದೆ ಹೋದರೆ ಹೇಗೆ? ಸಂವಿಧಾನವನ್ನು ವಿರೋಧ ಮಾಡುವರು ಇದ್ದಾರೆ ಮತ್ತು ಪರವಾಗಿ ಇರುವವರೂ ಇದ್ದಾರೆ. ನಮ್ಮ ಹಕ್ಕುಗಳನ್ನು ಮಾತ್ರ ನಾವು ಕೇಳುತ್ತೇವೆ ಆದರೆ, ನಮ್ಮ ಕರ್ತವ್ಯಗಳನ್ನು ಮರೆತು ಬಿಟ್ಟಿದ್ದೇವೆ. ನಾವು ಬರಿಯ ಹಕ್ಕುಗಳನ್ನು ಮಾತ್ರ ಕೇಳುವುದಲ್ಲ, ಕರ್ತವ್ಯಗಳನ್ನು ಕೂಡಾ ಪಾಲಿಸಬೇಕು” ಎಂದು ಅವರು ಹೇಳಿದರು.

ಬಿಜೆಪಿ ಮತ್ತು ಮೋದಿ ವಿರುದ್ಧ ವಾಗ್ದಾಳಿ

“ನಾನು ಮುಖ್ಯಮಂತ್ರಿ ಆಗಿದ್ದು ದೊಡ್ಡ ವಿಚಾರವಲ್ಲ. ಸಂವಿಧಾನದ ಆಶಯದಂತೆ ನಡೆದುಕೊಂಡಿದ್ದೇವೆಯೆ ಅಥವಾ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದೇವೆ ಎಂಬುವುದು ಬಹಳ ಮುಖ್ಯ ವಿಚಾರವಾಗಿದೆ. 2013-18ರ ವೇಳೆ ನಾವು ನೀಡಿದ್ದ ಹೆಚ್ಚಿನ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ. ಇದೇ ವೇಳೆ ಬಿಜೆಪಿ 600 ಭರವಸೆ ನೀಡಿತ್ತು, ಆದರೆ ಅವರು 10% ಭರವಸೆ ಕೂಡಾ ಈಡೇರಿಸಿಲ್ಲ” ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

“ಇತಿಹಾಸದಲ್ಲೆ ಕರ್ನಾಟಕದಲ್ಲಿ ಬಿಜೆಪಿ ಜನರ ಆಶಿರ್ವಾದ ಪಡೆದು ಅಧಿಕಾರಕ್ಕೆ ಬಂದಿಲ್ಲ. ಭ್ರಷ್ಟಾಚಾರ ಮತ್ತು ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಮಹಾರಾಷ್ಟ್ರ ಚುನಾವಣೆ ವೇಳೆ ನಾನು ಕೋಟ್ಯಾಂತರ ರೂ. ಹಣ ಎಕ್ಸೇಂಜ್ ಮಾಡಿದ್ದೇನೆ ಎಂದು ಪ್ರಧಾನಿ ಆರೋಪಿಸಿದ್ದರು. ನಾನು ಹಾಗೆ ಮಾಡಿದ್ದು ಸಾಬೀತಾದರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದ್ದೇನೆ. ಇದನ್ನೆಲ್ಲಾ ಮಾಧ್ಯಮ ತೋರಿಸಬವೇಕು ಅಲ್ಲವೆ” ಎಂದು ಕೇಳಿದರು.

“ಗಂಡ – ಹೆಂಡತಿ ಜಗಳ ಆಡಿದರೆ ಅದಕ್ಕೂ ರಾಜ್ಯಕ್ಕೂ, ರಾಜ್ಯದ ಜನರಿಗೂ ಏನಾದರೂ ಸಂಬಂಧ ಇದೆಯೆ? ಆದರೆ, ಮಾಧ್ಯಮಗಳು ಅದನ್ನೆ ತೋರಿಸುತ್ತಿವೆ. ಮಾಧ್ಯಮಗಳು ಜನರ ನಾಡಿ ಮಿಡಿತ ಗೊತ್ತಿಲ್ಲದೆ ಮಾತನಾಡುತ್ತವೆ. ಇತ್ತಿಚೆಗೆ ನಡೆದ ಉಪ ಚುನಾವಣೆಯಲ್ಲಿ ಮತ್ತು ಈ ಹಿಂದಿನ ವಿಧಾನಸಭೆ ಚುನಾವಣೆ ಸಮಯದಲ್ಲಿ ಕೂಡಾ ಮಾಧ್ಯಮಗಳು ತಪ್ಪಾಗಿ ಹೇಳಿತ್ತು. ಸರ್ಕಾರದ ವಿರುದ್ಧ ಬರಿ ಅಪಪ್ರಚಾರ ಮಾಡಲಾಗುತ್ತಿತ್ತು. ಆದರೆ ಜನರಿಗೆ ಸತ್ಯ ಏನೆಂದು ಗೊತ್ತಾಯಿತು. ಹಾಗಾಗಿಯೆ ಕುಟಿಲ ಮತ್ತು ದುಷ್ಟ ಪ್ರಯತ್ನಗಳು ಈಡೇರಿಲ್ಲ” ಎಂದು ಅವರು ಹೇಳಿದರು. ಬೇರೆ ಮಾಧ್ಯಮಗಳಿಗೆ

“ಮಾಧ್ಯಮಗಳು ಜನರಿಗೆ ಸತ್ಯವನ್ನು ಮುಟ್ಟಿಸುವ ಪ್ರಯತ್ನ ಮಾಡಬೇಕು. ನಮ್ಮ ಐದು ಗ್ಯಾರೆಂಟಿಗಳಿಂದ ಜನರಿಗೆ ಉಪಯೋಗ ಆಗುತ್ತಿದೆ ಅಲ್ಲವೆ? ಕೆಲವೊಂದು ಮಾಧ್ಯಮಗಳು ಜನರಿಗೆ ಅದು ಉಪಯೋಗ ಆಗುತ್ತಿವೆ ಎಂದು ಹೇಳುತ್ತಿವೆ, ಆದರೆ ಕೆಲವೊಂದು ಮಾಧ್ಯಮಗಳು ಸುಳ್ಳು ಹೇಳುತ್ತಿವೆ. ಬಡವರಿಗೆ ಆರ್ಥಿಕ ಮತ್ತು ಸಾಮಾಜಿಕ ಶಕ್ತಿ ತುಂಬದೆ ಹೋದರೆ ಅವರರಿಗೆ ರಾಜಕೀಯ ಶಕ್ತಿ ಬರಲು ಸಾಧ್ಯವಿಲ್ಲ.” ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂಓದಿ: ಈದಿನ.ಕಾಮ್ ಓದುಗರ ಸಮಾವೇಶ | ದೇಶದಲ್ಲಿ ಲಕ್ಷ ಮಾಧ್ಯಮಗಳಿವೆ, ಆದರೆ ಎಷ್ಟರಲ್ಲಿ ವಾಸ್ತವ ಸಂಗತಿಗಳು ದೊರೆಯುತ್ತಿವೆ – ದಿ ವೈರ್ ಸಂಪಾದಕಿ ಸೀಮಾ ಚಿಸ್ತಿ ಪ್ರಶ್ನೆ

ಈದಿನ.ಕಾಮ್ ಓದುಗರ ಸಮಾವೇಶ | ದೇಶದಲ್ಲಿ ಲಕ್ಷ ಮಾಧ್ಯಮಗಳಿವೆ, ಆದರೆ ಎಷ್ಟರಲ್ಲಿ ವಾಸ್ತವ ಸಂಗತಿಗಳು ದೊರೆಯುತ್ತಿವೆ – ದಿ ವೈರ್ ಸಂಪಾದಕಿ ಸೀಮಾ ಚಿಸ್ತಿ ಪ್ರಶ್ನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...