Homeಅಂಕಣಗಳುಜಾತಿಜಾಡ್ಯದಿಂದ ನಾವು ಪಾರಾಗುವುದೆಂದು?

ಜಾತಿಜಾಡ್ಯದಿಂದ ನಾವು ಪಾರಾಗುವುದೆಂದು?

- Advertisement -
ತಿಜಾಡ್ಯದ ವಿರುದ್ಧ ಬಹುಕಾಲದಿಂದಲೂ ಸಂತರು, ಸಮಾಜಸುಧಾರಕರು ಎಷ್ಟೇ ಮಾತನಾಡಿದ್ದರೂ ಅವರುಗಳ ಜಾತಿ ಮೂಲವನ್ನೇ ಎತ್ತಿ ಹಿಡಿದು ಅವರನ್ನು ಅವರವರ ಜಾತಿಗಳ ಐಕಾನುಗಳನ್ನಾಗಿಸಿದ ಹಿರಿಮೆ ನಮ್ಮದು. ಈ ಮನೋಧರ್ಮದ ಬಲಿಪಶುಗಳಾಗಿರುವವರು ಇಲ್ಲಿನ ಅಸ್ಪøಶ್ಯರು. ಆರ್ಥಿಕವಾಗಿ ಸ್ವಲ್ಪ ಮಟ್ಟಿಗಾದರೂ ಸಬಲರಾದರೂ ಇವರನ್ನು ಸಾಮಾಜಿಕವಾಗಿ ತಮ್ಮ ಸಮಾನರೆಂದು ಒಪ್ಪಿಕೊಳ್ಳುವುದಕ್ಕೆ ಮೇಲ್ಜಾತಿ ಮನಸ್ಥಿತಿಯವರು ಸಿದ್ಧರಿಲ್ಲ. ಈ ಮನಸ್ಥಿತಿ ಆಗಾಗ ತನ್ನ ವಿಕೃತ ರೂಪವನ್ನು ಪ್ರದರ್ಶಿಸಿ ಸಮಾಜವನ್ನೇ ಕದಡುತ್ತದೆ.
ಈ ಮಾತಿಗೊಂದು ತಾಜಾ ಉದಾಹರಣೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಮೂಲೆಯಲ್ಲಿರುವ ಗೋನಾಳ ಗ್ರಾಮ. ಕುರುಬ ಸಮುದಾಯದ ಸುಮಾರು 70, ಮಾದಿಗ ಸಮುದಾಯದ ಸುಮಾರು 50, ಲಿಂಗಾಯತ, ನಾಯಕ, ಮುಸ್ಲಿಂ ಸಮುದಾಯದ ತಲಾ 10 – 15 ಮನೆಗಳಿರುವ ಈ ಹಳ್ಳಿ. ಇಲ್ಲಿ ಆರ್ಥಿಕವಾಗಿ ಹೇಳಿಕೊಳ್ಳುವಂಥ ಅಂತರ ಕಂಡು ಬರುವುದಿಲ್ಲ. ಕುರುಬರಲ್ಲಿರುವಂತೆಯೇ ಮಾದಿಗರಲ್ಲಿಯೂ ಸ್ಥಿತಿವಂತರು, ಸಣ್ಣ ಭೂಹಿಡುವಳಿದಾರರು, ಭೂಹೀನರು ಇದ್ದಾರೆ. ಎಲ್ಲ ಮನೆಗಳಲ್ಲಿಯೂ ಬಸವಣ್ಣನವರ ಪಟಗಳು ರಾರಾಜಿಸುತ್ತವೆ. ಆದರೆ ದೇವರ ಸ್ಥಾದಲ್ಲಿರುವ ಬಸವೇಶ್ವರರ ಬೋಧನೆಗಳು ಸಾಮಾಜಿಕವಾಗಿ ನೆಲೆನಿಂತಿರುವ ಸಂಬಂಧಗಳನ್ನು ಬದಲಾಯಿಸುವಷ್ಟು ಶಕ್ತನಾಗಿಲ್ಲದಿರುವುದೊಂದು ದುರಂತ.
ತಾವು ಮೇಲ್‍ಸ್ತರದವರು ಎಂದು ಕೊಳ್ಳುವ ಕುರುಬ ಸಮುದಾಯದವರು, ತಮ್ಮ ಕಣ್ಣ ಮುಂದೆಯೇ ಅಸ್ಪøಶ್ಯರೆನಿಸಿಕೊಂಡವರು ಬೆಳೆಯುವುದನ್ನು ಸಹಿಸಲಾರದೇ ಹೋದರು. ಆ ಊರಿನ ಬಹುತೇಕರು ಕಂಪ್ಲಿ, ಹೊಸಪೇಟೆಗಳಂಥಾ ಊರುಗಳಲ್ಲಿ ಶಿಕ್ಷಣವನ್ನು ಪಡೆದಿದ್ದರೂ ಆ ಶಿಕ್ಷಣ ಕೇವಲ ಸರ್ಟಿಫಿಕೇಟುಗಳಿಗೆ ಸೀಮಿತವಾಗಿದೆ. ಮನೋಭಾವಗಳಂತೂ ಹಳೆಯ ಮಾದರಿಯವೇ ಆಗಿವೆ. ಕೆಳಜಾತಿಗಳ ಬಗೆಗಿನ ಅಸಹನೆಯ ಕಿಚ್ಚು ಮೇಲ್ಜಾತಿ ಎನಿಸಿಕೊಂಡವರನ್ನು ಒಳಗೊಳಗೇ ಸುಡುತ್ತಿರುವುದನ್ನು ಕಾಣಬಹುದು.
ಜೂನ್ 19ರಂದು ಆ ಹಳ್ಳಿಗೆ ಬೇಟಿ ನೀಡಿದ ಸತ್ಯಶೋಧನ ಸಮಿತಿಗೆ ತಿಳಿದು ಬಂದಂತೆ 2012ರಿಂದ ಎರಡೂ ಸಮುದಾಯಗಳ ನಡುವೆ ಆಗಾಗ ಆಡಳಿತ ಕೈಗೊಳ್ಳುವ ಶಾಂತಿ ಸಭೆಗಳಂಥಾ ಕಾರ್ಯಕ್ರಮಗಳು ತೇಪೆ ಹಚ್ಚುವುದನ್ನು ಬಿಟ್ಟರೆ ಮತ್ತೇನೂ ಸಾಧಿಸಲಿಲ್ಲ. ಇಂಥ ತಿಕ್ಕಾಟಗಳು ಒಂದು ಕದನವಾಗಿ ಪ್ರಕಟಗೊಂಡಿದ್ದು 2018ರ ಮೇ 25ರಂದು. ಬನ್ನೆಪ್ಪ ಮಾದಿಗ ಸಮುದಾಯದ ಹಣವಂತನಾಗಿದ್ದು, ಆತನೇ ಸಮುದಾಯದ ನಾಯಕ. ಗ್ರಾಮಪಂಚಾಯತಿಯ ಸದಸ್ಯನೂ ಆಗಿರುವ ಈತನ ಮಾತೇ ಆ ಸಮುದಾಯದ ಇತರರಿಗೆ ಅಂತಿಮ. ಅದೇರೀತಿ ಹೊಸಕೆರಪ್ಪ ಎಂಬುವವನು ಕುರುಬರ ನಾಯಕನಾಗಿದ್ದು, ಇವರಿಬ್ಬರ ನಡುವಿನ ಜಗಳಗಳೇ ಎರಡು ಸಮುದಾಯಗಳ ಜಗಳಗಳಾಗಿ ಮಾರ್ಪಡುತ್ತವೆ. ಅಲ್ಲಿನ ಜನಕ್ಕೆ ರಾಜಕೀಯವಾಗಿಯೂ ಸ್ಪಷ್ಟ ನಿಲುವುಗಳೇನಿಲ್ಲ. ತಮ್ಮ ನಾಯಕರು ಕಾಂಗ್ರೇಸ್ಸಾದರೆ ಅವರೂ ಕಾಂಗ್ರೇಸ್, ಬಿಜೆಪಿಯಾದರೆ ಬಿಜೆಪಿ.
ಕೆಲವು ತಿಂಗಳುಗಳ ಕೆಳಗೆ ಪರಿಶಿಷ್ಟರು ಅಂಬೇಡ್ಕರ್ ಹಾಗೂ ಜಗಜೀವನ್‍ರಾಮ್‍ರವರ ಚಿತ್ರಗಳನ್ನೊಳಗೊಂಡ ಫಲಕವೊಂದನ್ನು ಊರಿನ ಮಧ್ಯಭಾಗದ ರಸ್ತೆಯ ಪಕ್ಕದಲ್ಲಿ ಸ್ಥಾಪಿಸಿದರು. 5*5 ಅಳತೆಯ ಆ ಜಾಗ ಕುರುಬ ಸಮುದಾಯದ ಕುಟುಂಬವೊಂದಕ್ಕೆ ಸೇರಿದ್ದು. ಶಿಕ್ಷಣವಿಲ್ಲದಿದ್ದರೂ ಇತರರಿಗಿಂತಲೂ ಭಿನ್ನವಾಗಿ ಯೋಚಿಸುವ ಈ ಕುಟುಂಬದವರು ತಮ್ಮ ಜಾಗದಲ್ಲಿ ಆ ಫಲಕವನ್ನು ನೆಡಲು ಪರಿಶಿಷ್ಟರಿಗೆ ಅನುಮತಿಯನ್ನೂ ನೀಡಿದ್ದರು. ಆರ್ಥಿಕವಾಗಿ ತಮಗಿಂತಲೂ ಕಡಿಮೆ ಇಲ್ಲವೆಂದು ತೋರಿಸಿಕೊಳ್ಳುವ ಪರಿಶಿಷ್ಟರು ಈಗ ತಮ್ಮ ಸಾಮಾಜಿಕ ಅಸ್ತಿತ್ವವನ್ನು ಗಟ್ಟಿಯಾಗಿ ನೆಲೆಗೊಳಿಸಲು ಮಾಡಿದ ಈ ಹೊಸ ಪ್ರಯತ್ನ ಮೇಲ್ಜಾತಿ ಎಂದುಕೊಳ್ಳುವ ಕುರುಬರಿಂದ ಸಹಿಸಲಾಗಲಿಲ್ಲ. ಈ ಫಲಕ ತಮಗೆ ಸವಾಲಾಗಿದೆಯೆಂದು ಭಾವಿಸಿದ ಕುರುಬ ಸಮಾಜದ ಇತರರು ಫಲಕದ ಬಗ್ಗೆ ತಗಾದೆ ತೆಗೆದು ಒಂದು ರೀತಿಯ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಗ್ರಾಮದಲ್ಲಿದ್ದ ಒಂದೇ ಒಂದು ಹೋಟಲಿನಲ್ಲಿ ಮತ್ತು ಬಸವಣ್ಣನವರ ದೇವಸ್ಥಾನದಲ್ಲಿ ಅಸ್ಪøಶ್ಯತೆಯ ಆಚರಣೆಯನ್ನು ಭಿನ್ನ ರೀತಿಯಲ್ಲಿ ಅವರ ಮೇಲೆ ಹೇರುವ ಪ್ರಯತ್ನ ನಡೆಯಿತು.
ಮೇ 24ರಂದು ಈ ಎರಡೂ ಸಮುದಾಯಗಳ ಇಬ್ಬರು ಊರ ಬದಿಯ ಕಾಲುದಾರಿಯಲ್ಲಿ ವಿರುದ್ಧ ದಿಕ್ಕುಗಳಿಂದ ನಡೆದು ಬಂದಿದ್ದು ಯಾರು ಯಾರಿಗೆ ದಾರಿ ಬಿಡಬೇಕೆಂಬ ಬಗ್ಗೆ ಸಣ್ಣ ಜಗಳ ನಡೆದಿದೆ. ಅಂದು ಸಂಜೆ ತನ್ನ ಸಮುದಾಯದವನ ಪರವಾಗಿ ಮೇಲ್ಜಾತಿಯವರನ್ನು ಪ್ರಶ್ನೆ ಮಾಡಿದ ಬನ್ನೆಪ್ಪನ ಮಾತುಗಳು ಮಾರನೆಯ ದಿನದ ಭಯಂಕರ ಆಗುಹೋಗುಗಳಿಗೆ ನೆಪವಾದವು. ಇಂತಹ ಸನ್ನಿವೇಶಗಳಲ್ಲಿ ಮೇಲ್ಜಾತಿ ಮನಸ್ಥಿತಿಗಳ ಸ್ಪಂದನೆ ಒಂದೇ ರೀತಿಯದ್ದು, ಅದು ತಮ್ಮ ಕಣ್‍ಕಿಚ್ಚಿಗೆ ಕಾರಣವಾದ ದಲಿತರ ಮೇಲೆ ದಾಳಿ ನಡೆಸುವುದು. ಮೇ 25ರಂದು ನಡೆದದ್ದು ಅದೇ. ಚುಂಡೂರು, ಕಾರಂಚೇಡು, ಕಂಬಾಲಪಲ್ಲಿಗಳಲ್ಲಿ ನಡೆದಿದ್ದೂ ಹೀಗೆಯೇ.
ಅಂದು ಯೋಜಿತ ರೀತಿಯಲ್ಲಿ ನಡೆದ ದಾಳಿಯನ್ನು ಎದುರಿಸಲಾಗದ ಮಾದಿಗ ಜನಾಂಗದವರು ತಿರುಗೇಟು ನೀಡಲು ಪ್ರಯತ್ನಿಸಿದರೂ, ಸಂಘಟಿತ ದಾಳಿಯನ್ನೆದುರಿಸಲಾರದೆ, ಬಹುತೇಕ ಜನ ದಾಳಿಯಿಂದ ತಪ್ಪಿಸಿಕೊಳ್ಳಲು ಊರು ಬಿಟ್ಟು ಓಡಿದರು. ಈ ನಡುವೆ ಬನ್ನೆಪ್ಪನ ಮಗ ದೊಡ್ಡದೇವಣ್ಣ ದಾಳಿಕೋರರಿಂದ ಪಾರಾಗಲು ಒಂದು ಮನೆಗೆ ನುಗ್ಗಿದ. ಅವನನ್ನು ಹಿಂಬಾಲಿಸಿದ ಐದಾರು ಜನರ ಗುಂಪೊಂದು ಆ ಮನೆಯಲ್ಲಿಯೇ ಅವನನ್ನು  ಮನಸೋಇಚ್ಚೆ ಚಚ್ಚಿದರು. ಕೊನೆಗೆ ಸತ್ತನೆಂದೇ ಭಾವಿಸಿ ದೇಹವನ್ನು ಒಂದು ಛಾಪೆಯಲ್ಲಿ ಸುತ್ತಿಟ್ಟು ಜಾಗ ಖಾಲಿ ಮಾಡಿದರು. ಆದರೆ ಸುಮಾರು 4 ಘಂಟೆಗಳ ಕಾಲ ನೆತ್ತರ ಮಡುವಿನಲ್ಲಿ ಬಿದ್ದಿದ್ದ ಆ ಯುವಕ ಜಾÐನ ತಪ್ಪಿದ ಸ್ಥಿತಿಯಲ್ಲಿದ್ದ. ಸಂಜೆ ಅವನನ್ನು ಕಂಡವರು ಆ ಹೊತ್ತಿಗೆ ಹಳ್ಳಿಗೆ ಬಂದಿದ್ದ ಪೊಲೀಸರಿಗೆ ತಿಳಿಸಿದ್ದರಿಂದ ಅವರು ದೇವಣ್ಣನನ್ನು ಮೊದಲು ಬಳ್ಳಾರಿಗೆ, ನಂತರ ಬೆಂಗಳೂರಿಗೆ ಚಿಕಿತ್ಸೆಗಾಗಿ ಕಳುಹಿಸಿದರು. ತನ್ನ ಎರಡೂ ಕೈಗಳಿಗೆ ಆದ ತೀವ್ರವಾದ ಗಾಯಗಳು ತಲೆಯ ಮೇಲೆ ಬಿದ್ದಿರುವ ಪೆಟ್ಟು ಮತ್ತು ಮಾತನಾಡಲಾಗದಂತೆ ನಾಲಗೆಗೂ ಪೆಟ್ಟುಗಳಿಂದ ಆಘಾತಕ್ಕೊಳಗಾಗಿರುವ ದೇವಣ್ಣ ತನ್ನ ಮನೆಯಲ್ಲಿ ಈಗಲೂ ಅಸಹಾಯಕನಾಗಿ ಮಲಗಿದ್ದಾನೆ. ಆವನ ತಂದೆಯೂ ಸೇರಿದಂತೆ ಹತ್ತಿರದ ಬಂಧುಗಳು ಜೈಲು ಪಾಲಾಗಿದ್ದು, ಈತನಿಗೆ ಸರಿಯಾದ ಚಿಕಿತ್ಸೆಯೂ ದೊರಕದೆ, ಆತನ ಮುಂದಿನ ಸ್ಥಿತಿ ಏನಾಗುತ್ತದೋ ಹೇಳಲಾಗದು.
ಪೊಲೀಸರು ಯಥಾಪ್ರಕಾರ ಎರಡು ಕಡೆಯವರ ಮೇಲೂ ಕೇಸು ಜಡಿದು ಅವರಲ್ಲಿ ಕೆಲವರನ್ನು ಬಂಧಿಸಿದ್ದಾರೆ. ಕೆಲವರು ಈಗ ಬಳ್ಳಾರಿಯ ಜೈಲಿನಲ್ಲಿದ್ದಾರೆ. ಹಳ್ಳಿಯಲ್ಲಿ ಕೇವಲ ಮುದುಕರು, ಹೆಂಗಸರು ಮತ್ತು ಮಕ್ಕಳು ಮಾತ್ರವಿದ್ದು ಕೃಷಿ ಚಟುವಟಿಕೆಗಳು ಭರದಿಂದ ಸಾಗಬೇಕಾದ ಈ ಕಾಲದಲ್ಲಿ ಗಂಡಸರು ಪೊಲೀಸರ ಭಯದಿಂದಾಗಿ ಊರಿನಿಂದ ದೂರವೇ ಉಳಿದಿದ್ದಾರೆ. ಹೆಚ್ಚಾಗಿ ಭಯ ಕಾಡುತ್ತಿರುವುದು ಮಾದಿಗ ಸಮುದಾಯದವರನ್ನು. ಇದರ ಪರಿಣಾಮವಾಗಿ ಈ ವರ್ಷದ ಬೆಳೆಹಾಳು.
ಮಾದಿಗ ಸುಮದಾಯದವರ ವಿರುದ್ಧ ಒಟ್ಟು ಸಮಾಜಕ್ಕೇ ಇರುವ ಪೂರ್ವಗ್ರಹ ಕಂಪ್ಲಿಯಲ್ಲಿನ ಪೊಲೀಸರ ಜತೆ ಮಾತನಾಡುವಾಗಲೂ ಕಂಡುಬಂತು. ಸಾಮಾಜಿಕ ವಾಸ್ತವಗಳನ್ನು ವಸ್ತುನಿಷ್ಠವಾಗಿ ಅರ್ಥಮಾಡಿಕೊಳ್ಳಲಾಗದ ಇಂಥ ಅಧಿಕಾರ ವರ್ಗದವರಿಂದ ನಿಜವಾದ ನ್ಯಾಯ ಸಿಗುವುದನ್ನು ನಿರೀಕ್ಷಿಸುವುದೂ ಕಷ್ಟ. ಸಮಾಜದ ವಿವಿಧ ಗುಂಪುಗಳ ನಡುವೆ ಏರ್ಪಟ್ಟಿರುವ ಕಂದಕವನ್ನು ಮುಚ್ಚುವ ಕೆಲಸ ಮಾಡಬೇಕಾದರೆ ಎಲ್ಲ ರೀತಿಯ ಸ್ವಾರ್ಥವನ್ನು, ಪೂರ್ವಗ್ರಹಗಳಿಂದ ದೂರವಿಟ್ಟು ಸಮಾಜದ ಸ್ವಾಸ್ಥ್ಯಯನ್ನು ಬಯಸುವ ಅದಕ್ಕಾಗಿ ಕಾಳಜಿ, ಬದ್ಧತೆಗಳಿಂದ ದುಡಿಯುವ ಮನಸ್ಸುಗಳು ಬೇಕು. ಆಗ ಮಾತ್ರ ದೇಶಕ್ಕಂಟಿದ ಜಾತಿಜಾಡ್ಯ ವಾಸಿಯಾಗಬಹುದು. ಇಂದಿನ ವ್ಯವಸ್ಥೆಯಲ್ಲಿ ಅದು ಸಾಧ್ಯವೇ ಎಂಬುದೇ ದೊಡ್ಡ ಪ್ರಶ್ನೆಯಾಗಿಯೇ ಕಾಡುತ್ತದೆ? ಇನ್ನೆಷ್ಟು ದಿನ ಹೀಗೆ…?
 – ನಗರಗೆರೆ ರಮೇಶ್ 
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...