Homeಅಂತರಾಷ್ಟ್ರೀಯಟರ್ಕಿಯಿಂದ ಸಿರಿಯಾಕ್ಕೆ ಮರಳಿದ 3 ಮಿಲಿಯನ್ ನಿರಾಶ್ರಿತರಲ್ಲಿ 31,000 ನಿರಾಶ್ರಿತರು

ಟರ್ಕಿಯಿಂದ ಸಿರಿಯಾಕ್ಕೆ ಮರಳಿದ 3 ಮಿಲಿಯನ್ ನಿರಾಶ್ರಿತರಲ್ಲಿ 31,000 ನಿರಾಶ್ರಿತರು

- Advertisement -
- Advertisement -

ಟರ್ಕಿಯಲ್ಲಿ ಆಶ್ರಯ ಪಡೆದಿದ್ದ 3 ಮಿಲಿಯನ್ ನಷ್ಟು ಸಿರಿಯನ್ ರಲ್ಲಿ ಸುಮಾರು 31,000 ಸಿರಿಯನ್ನರು  ಬಶರ್ ಅಲ್-ಅಸ್ಸಾದ್ ಅವರ ಆಡಳಿತ ಪತನದ ನಂತರ ತಮ್ಮ ತವರಿಗೆ ಮರಳಿದ್ದಾರೆ ಎಂದು  ಟರ್ಕಿಯ ಆಂತರಿಕ ಮಂತ್ರಿ  ಹೇಳಿದ್ದಾರೆ.

ಏತನ್ಮಧ್ಯೆ ಸಿರಿಯಾದ ಅಲ್-ಅಸ್ಸಾದ್ ಆಡಳಿತದಲ್ಲಿ ಮತ್ತು 13 ವರ್ಷಗಳ ಅಂತರ್ಯುದ್ಧದ ಬಲಿಪಶುಗಳ ಗೌರವಾರ್ಥವಾಗಿ ಸಿರಿಯನ್ನರು ಸ್ಮರಣಾರ್ಥ ದಿನವಾಗಿ ರ್ಯಾಲಿ ನಡೆಸಿದರು. 2011ರಲ್ಲಿ ಯುದ್ಧದ ನಂತರ ಲಕ್ಷಾಂತರ ಜನ ಸಿರಿಯಾದಿಂದ ಟರ್ಕಿಗೆ ಪಲಾಯನ ಮಾಡಿದ್ದರು. ಡಿಸೆಂಬರ್ 8 ರಂದು ಅಲ್-ಅಸ್ಸಾದ್ ಆಡಳಿತ ಪತನದ ನಂತರ ಅನೇಕರು ಹಿಂತಿರುಗುವ ಎಂಬ ಭರವಸೆ ಹೊಂದಿದ್ದಾರೆ.

ಈಗ ಟರ್ಕಿಯಿಂದ ಸಿರಿಯಾಕ್ಕೆ ಹಿಂತಿರುಗಿದ ಜನರ ಸಂಖ್ಯೆ 30,663 ಆಗಿದೆ. ಅವರಲ್ಲಿ ಶೇ.30ರಷ್ಟು ಟರ್ಕಿಯಲ್ಲಿ ಜನಿಸಿದವರಾಗಿದ್ದಾರೆ ಎಂದು ಟರ್ಕಿಯ ಆಂತರಿಕ ಸಚಿವ ಅಲಿ ಯೆರ್ಲಿಕಾಯಾ ಶುಕ್ರವಾರ ಸ್ಥಳೀಯ ಟಿಜಿಆರ್‌ಟಿ ಸುದ್ದಿ ವಾಹಿನಿಗೆ ತಿಳಿಸಿದ್ದಾರೆ.

25,000ಕ್ಕೂ ಹೆಚ್ಚು ಸಿರಿಯನ್ನರು ಮರಳಿದ್ದಾರೆ. ಅವರಿಗೆ 2025ರ ಮೊದಲಾರ್ಧದಲ್ಲಿ ಮೂರು ಬಾರಿ ಟರ್ಕಿಯನ್ನು ತೊರೆಯಲು ಮತ್ತು ಮರು-ಪ್ರವೇಶಿಸಲು ಅನುಮತಿಸಲಾಗುವುದು ಎಂದು ರಾಜ್ಯ ಸುದ್ದಿ ಸಂಸ್ಥೆ ಅನಾಡೋಲುಗೆ ಮಂಗಳವಾರ ಯೆರ್ಲಿಕಾಯಾ ಹೇಳಿದ್ದಾರೆ.

ಟರ್ಕಿಯಲ್ಲಿ ವಾಸಿಸುವ ಹೆಚ್ಚಿನ ನಿರಾಶ್ರಿತರು ಸಿರಿಯಾದ ಎರಡನೇ ನಗರವಾದ ಅಲೆಪ್ಪೊದವರಾಗಿದ್ದಾರೆ. ಈ ಅಲೆಪ್ಪೊದಲ್ಲಿ  “ವಲಸೆ ನಿರ್ವಹಣಾ ಕಚೇರಿ” ಯನ್ನು ತೆರೆಯಲಿದೆ ಎಂದು ಅವರು ಹೆಚ್ಚಿನ ವಿವರಗಳನ್ನು ನೀಡದೆ ಹೇಳಿದ ಅವರು, ಟರ್ಕಿಯು ಅಲೆಪ್ಪೊದಲ್ಲಿ ತನ್ನ ರಾಯಭಾರ ಕಚೇರಿಯನ್ನು ಕೆಲವೇ ದಿನಗಳಲ್ಲಿ ಮತ್ತೆ ತೆರೆಯುತ್ತದೆ ಎಂದು ಈ ವಾರದ ಆರಂಭದಲ್ಲಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರ ಹೇಳಿಕೆಗಳನ್ನು ಪುನರುಚ್ಚರಿಸಿದ್ದಾರೆ.

ಹಯಾತ್ ತಹ್ರೀರ್ ಅಲ್-ಶಾಮ್ (HTS) ಬಂಡುಕೋರರಿಂದ ಅಲ್-ಅಸ್ಸಾದ್ ಆಡಳಿತವನ್ನು ಪತನಗೊಳಿಸಿದ ಆರು ದಿನಗಳ ನಂತರ, ಡಿಸೆಂಬರ್ 14ರಂದು ಟರ್ಕಿಯಲ್ಲಿ ಡಮಾಸ್ಕಸ್ ರಾಯಭಾರ ಕಚೇರಿಯನ್ನು ಪುನಃ ತೆರೆಯಲಾಯಿತು. ಏತನ್ಮಧ್ಯೆ, ರಾಜಧಾನಿ ಡಮಾಸ್ಕಸ್ ಮತ್ತು ಇತರೆಡೆಗಳಲ್ಲಿ, ಅಲ್-ಅಸ್ಸಾದ್‌ನ ಸುಮಾರು 25 ವರ್ಷಗಳ ಆಳ್ವಿಕೆಯಲ್ಲಿ ಕೊಲ್ಲಲ್ಪಟ್ಟ ಮತ್ತು ಜೈಲಿನಲ್ಲಿದ್ದವರಿಗಾಗಿ ಸಿರಿಯನ್ನರು ಸ್ಮರಣಾರ್ಥ ದಿನವನ್ನು ನಡೆಸಿದರು.

ಅಲ್-ಅಸ್ಸಾದ್ ಅಧಿಕಾರಾವಧಿಯಲ್ಲಿ ಕಾಣೆಯಾದ ಸಂಬಂಧಿಕರ ಭವಿಷ್ಯದ ಕುರಿತು ಹೊಸ ಅಧಿಕಾರಿಗಳನ್ನು ಒತ್ತಾಯಿಸಲು ಡಮಾಸ್ಕಸ್‌ನ ಮಧ್ಯಭಾಗದ ಹಿಜಾಜ್ ಸ್ಕ್ವೇರ್‌ನಲ್ಲಿ ಪ್ರತಿಭಟನಾಕಾರರು ಕಣ್ಮರೆಯಾದವರ ಚಿತ್ರಗಳನ್ನು ಹಿಡಿದುಕೊಂಡು ರ್ಯಾಲಿ ನಡೆಸಿದರೆಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ನಿರಂಕುಶಾಧಿಕಾರಿಗಳು ಜವಾಬ್ದಾರಿ ಹೊಂದಲು ಇದು ಸಮಯ ಎಂಬ ಸೊಗಸಾದ ಕಪ್ಪು ಬ್ಯಾನರ್ ಅನ್ನು ಒಟ್ಟೋಮನ್ ರೈಲು ನಿಲ್ದಾಣದ ಬಾಲ್ಕನಿಯಿಂದ ಪ್ರದರ್ಶಿಸಲಾಯಿತು. ಹಾಗೆಯೇ ಇತರ ಫಲಕಗಳಲ್ಲಿ “ಕಾಣೆಯಾದವರ ಗುರುತು ಬಹಿರಂಗಪಡಿಸುವ ಹಕ್ಕು” ಮತ್ತು “ನನ್ನ ಮಗನಿಗೆ ಗುರುತು ಇಲ್ಲದ ಸಮಾಧಿ ನನಗೆ ಬೇಕಾಗಿಲ್ಲ, ನನಗೆ ಸತ್ಯ ಬೇಕು” ಎಂದು ಬರೆಯಲಾಗಿತ್ತು ಎಂದು ಡಮಾಸ್ಕಸ್‌ನಿಂದ ವರದಿ ಮಾಡುತ್ತಿರುವ ಅಲ್ ಜಜೀರಾದ ಹಶೆಮ್ ಅಹೆಲ್ಬರ್ರಾ ವರದಿ ಮಾಡಿದ್ದಾರೆ.

ಬಶರ್ ಅಲ್-ಅಸ್ಸಾದ್ ಅಥವಾ ಅವರ ತಂದೆ ಹಫೀಜ್ ಅಲ್-ಅಸ್ಸಾದ್ ಸಮಯದಲ್ಲಿ ಜೈಲುಗಳಲ್ಲಿ ಕೊಲ್ಲಲ್ಪಟ್ಟ ಅಥವಾ ಕಣ್ಮರೆಯಾದ ಅವರ ಪ್ರೀತಿಪಾತ್ರರ ಬ್ಯಾನರ್ ಗಳು ಮತ್ತು ಪೋಸ್ಟರ್ ಗಳು ಮತ್ತು ಚಿತ್ರಗಳನ್ನು ಹಿಡಿದಿದ್ದ ಅನೇಕ ಜನರನ್ನು ನಾನು ನೋಡಿದೆ ಎಂದು ಅವರು ವರದಿ ಮಾಡಿದ್ದಾರೆ.

ಒಂದು ಹಂತದಲ್ಲಿ ಅಹೆಲ್ಬರ್ರಾ ಬೀದಿಗಳಲ್ಲಿನ ದೃಶಗಳು “ಅಸ್ತವ್ಯಸ್ತ”ವಾಗಿದ್ದವು. ಏಕೆಂದರೆ ಜನರು   ಗಾಳಿಯಲ್ಲಿ ತಮ್ಮ ಬಂದೂಕುಗಳಿಂದ ಗುಂಡು ಹಾರಿಸಿ  ಸ್ಮರಣಾರ್ಥ ರ್ಯಾಲಿ ನಡೆಸುತ್ತಿದ್ದರು ಎಂದು ಹಶೆಮ್ ಅಹೆಲ್ಬರ್ರಾ ಹೇಳಿದ್ದಾರೆ.

ಅಲ್-ಅಸ್ಸಾದ್ ಆಡಳಿತಕ್ಕೆ ಸಿರಿಯಾದ ಜೈಲುಗಳು ವಿರೋಧಿಗಳನ್ನು ಮಟ್ಟಹಾಕಲು ಪ್ರಮುಖ ಆಧಾರಸ್ತಂಭವಾಗಿದ್ದವು. 2013ರಲ್ಲಿ ಸಿರಿಯಾದಿಂದ ಕಳ್ಳಸಾಗಣೆಯಾದವರ ಚಿತ್ರಗಳು, ಬಂಧನದಲ್ಲಿ ವ್ಯಾಪಕವಾದ ಚಿತ್ರಹಿಂಸೆ, ಹಸಿವು, ಹೊಡೆತಗಳು ಮಾನವೀಯತೆಯ ವಿರುದ್ಧದ ಅಪರಾಧವಾಗಿದೆ ಎಂದು ಮಾನವ ಹಕ್ಕುಗಳ ಗುಂಪು ಹೇಳಿದೆ.

ಇರಾನ್‌ನ ಉನ್ನತ ರಾಜತಾಂತ್ರಿಕರು ಸಿರಿಯಾದ ಭವಿಷ್ಯದಲ್ಲಿ “ವಿನಾಶಕಾರಿ ಹಸ್ತಕ್ಷೇಪ” ದ ವಿರುದ್ಧ ಎಚ್ಚರಿಕೆ ನೀಡಿದ್ದಾರೆ. ಸಿರಿಯಾದ ಯಾವುದೇ ನಿರ್ಧಾರಗಳು ದೇಶದ ಜನರೊಂದಿಗೆ ಮಾತ್ರ ಇರಬೇಕು ಎಂದು ಹೇಳಿದ್ದಾರೆ.

ಸಿರಿಯಾದಲ್ಲಿ ವಿನಾಶಕಾರಿ ಹಸ್ತಕ್ಷೇಪ ಅಥವಾ ವಿದೇಶಿ ಹೇರಿಕೆ ಇಲ್ಲದ, ಅಲ್ಲಿಯ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಜನರ ಸಂಪೂರ್ಣ ಜವಾಬ್ದಾರಿ ಎಂದು ಪರಿಗಣಿಸುತ್ತೇವೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಬೀಜಿಂಗ್‌ಗೆ ಭೇಟಿ ನೀಡಿದಾಗ ಚೀನಾದ ರಾಜ್ಯ ಮಾಧ್ಯಮ ಪೀಪಲ್ಸ್ ಡೈಲಿಯಲ್ಲಿ ಬರೆದಿದ್ದಾರೆ. ಅವರು ಸಿರಿಯಾದ ಏಕತೆ, ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗಾಗಿ ಇರಾನ್‌ನ ಗೌರವವನ್ನು ಒತ್ತಿ ಹೇಳಿದ್ದಾರೆ.

ವಿದೇಶಾಂಗ ಸಚಿವರಾಗಿ ನೇಮಕಗೊಂಡ ನಂತರ ತನ್ನ ಮೊದಲ ಅಧಿಕೃತ ಭೇಟಿಯನ್ನು ಪ್ರಾರಂಭಿಸಲು ಅಬ್ಬಾಸ್ ಅರಾಘ್ಚಿ ಶುಕ್ರವಾರ ಮಧ್ಯಾಹ್ನ ಚೀನಾದ ರಾಜಧಾನಿಯನ್ನು ತಲುಪಿದರು ಎಂದು ಇರಾನ್ ರಾಜ್ಯ ಮಾಧ್ಯಮ ವರದಿ ಮಾಡಿದೆ. ಚೀನಾ ಮತ್ತು ಇರಾನ್ ಎರಡೂ ಮಾಜಿ ಅಧ್ಯಕ್ಷ ಅಲ್-ಅಸ್ಸಾದ್ ಬೆಂಬಲಿಗರಾಗಿದ್ದರು.

ಮಾನವೀಯ ನೆಲೆಯಲ್ಲಿ  ಸುಮಾರು 50 ಟನ್‌ಗಳಷ್ಟು ಯುರೋಪಿಯನ್ ಯೂನಿಯನ್ ನಿಧಿಯ ವೈದ್ಯಕೀಯ ಸೌಲಭ್ಯಗಳು ಈ ವರ್ಷದ ಅಂತ್ಯದ ವೇಳೆಗೆ ಸಿರಿಯಾವನ್ನು ಪ್ರವೇಶಿಸುವ ನಿರೀಕ್ಷೆಯಿದೆ ಎಂದು ವಿಶ್ವಸಂಸ್ಥೆಯ ಆರೋಗ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹಾಗೆಯೇ ದುಬೈನಲ್ಲಿರುವ ಇಯು ದಾಸ್ತಾನುಗಳಿಂದ ಕಳುಹಿಸಲಾದ ವೈದ್ಯಕೀಯ ಸೌಲಭ್ಯಗಳು ಗುರುವಾರ ಇಸ್ತಾನ್‌ಬುಲ್‌ಗೆ ಬಂದಿಳಿದಿವೆ ಮತ್ತು ಮುಂದಿನ ದಿನಗಳಲ್ಲಿ ಗಡಿಗೆ ತಲುಪಿಸಲಾಗುವುದು ಎಂದು ದಕ್ಷಿಣ ಟರ್ಕಿಯ ವಿಶ್ವ ಆರೋಗ್ಯ ಸಂಸ್ಥೆಯ ಗಾಜಿಯಾಂಟೆಪ್ ಕಚೇರಿಯಿಂದ ಮೃಣಾಲಿನಿ ಸಂತಾನಂ ಅವರು ಎಎಫ್‌ಪಿಗೆ ತಿಳಿಸಿದ್ದಾರೆ.

ಇವುಗಳು 8,000 ತುರ್ತು ಶಸ್ತ್ರಚಿಕಿತ್ಸಾ ಕಿಟ್‌ಗಳು, ಅರಿವಳಿಕೆ ಸರಬರಾಜುಗಳು, IV ದ್ರವಗಳು, ಕ್ರಿಮಿನಾಶಕ ವಸ್ತುಗಳು ಮತ್ತು ರೋಗ ಹರಡುವುದನ್ನು ತಡೆಗಟ್ಟುವ ಔಷಧಿಗಳನ್ನು ಒಳಗೊಂಡಿವೆ. ಇಡ್ಲಿಬ್ ಮತ್ತು ಉತ್ತರ ಅಲೆಪ್ಪೊದಲ್ಲಿನ ಆರೋಗ್ಯ ವ್ಯವಸ್ಥೆಯನ್ನು ಬೆಂಬಲಿಸಲು ಇವುಗಳನ್ನು ಕಳುಹಿಸಲಾಗುವುದು ಎಂದು EU (ಯುರೋಪಿಯನ್ ಯೂನಿಯನ್) ಹೇಳಿದೆ.

2011ರಲ್ಲಿ ಪ್ರಾರಂಭವಾದ ಅಂತರ್ಯುದ್ಧವು  ಸಿರಿಯಾ ದೇಶ ಮತ್ತು ಆರೋಗ್ಯ ವ್ಯವಸ್ಥೆಯನ್ನು ಧ್ವಂಸಗೊಳಿಸಿತು. ಇಲ್ಲಿ ಅರ್ಧದಷ್ಟು ಆಸ್ಪತ್ರೆಗಳು ಈಗ ಕಾರ್ಯನಿರ್ವಹಿಸುತ್ತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮೃಣಾಲಿನಿ ಸಂತಾನಂ ಹೇಳಿದ್ದಾರೆ.

ದಕ್ಷಿಣ ಕೊರಿಯಾ: ಲ್ಯಾಂಡಿಂಗ್ ವೇಳೆ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು 62 ಪ್ರಯಾಣಿಕರ ಸಾವು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...