Homeಅಂತರಾಷ್ಟ್ರೀಯಟರ್ಕಿಯಿಂದ ಸಿರಿಯಾಕ್ಕೆ ಮರಳಿದ 3 ಮಿಲಿಯನ್ ನಿರಾಶ್ರಿತರಲ್ಲಿ 31,000 ನಿರಾಶ್ರಿತರು

ಟರ್ಕಿಯಿಂದ ಸಿರಿಯಾಕ್ಕೆ ಮರಳಿದ 3 ಮಿಲಿಯನ್ ನಿರಾಶ್ರಿತರಲ್ಲಿ 31,000 ನಿರಾಶ್ರಿತರು

- Advertisement -
- Advertisement -

ಟರ್ಕಿಯಲ್ಲಿ ಆಶ್ರಯ ಪಡೆದಿದ್ದ 3 ಮಿಲಿಯನ್ ನಷ್ಟು ಸಿರಿಯನ್ ರಲ್ಲಿ ಸುಮಾರು 31,000 ಸಿರಿಯನ್ನರು  ಬಶರ್ ಅಲ್-ಅಸ್ಸಾದ್ ಅವರ ಆಡಳಿತ ಪತನದ ನಂತರ ತಮ್ಮ ತವರಿಗೆ ಮರಳಿದ್ದಾರೆ ಎಂದು  ಟರ್ಕಿಯ ಆಂತರಿಕ ಮಂತ್ರಿ  ಹೇಳಿದ್ದಾರೆ.

ಏತನ್ಮಧ್ಯೆ ಸಿರಿಯಾದ ಅಲ್-ಅಸ್ಸಾದ್ ಆಡಳಿತದಲ್ಲಿ ಮತ್ತು 13 ವರ್ಷಗಳ ಅಂತರ್ಯುದ್ಧದ ಬಲಿಪಶುಗಳ ಗೌರವಾರ್ಥವಾಗಿ ಸಿರಿಯನ್ನರು ಸ್ಮರಣಾರ್ಥ ದಿನವಾಗಿ ರ್ಯಾಲಿ ನಡೆಸಿದರು. 2011ರಲ್ಲಿ ಯುದ್ಧದ ನಂತರ ಲಕ್ಷಾಂತರ ಜನ ಸಿರಿಯಾದಿಂದ ಟರ್ಕಿಗೆ ಪಲಾಯನ ಮಾಡಿದ್ದರು. ಡಿಸೆಂಬರ್ 8 ರಂದು ಅಲ್-ಅಸ್ಸಾದ್ ಆಡಳಿತ ಪತನದ ನಂತರ ಅನೇಕರು ಹಿಂತಿರುಗುವ ಎಂಬ ಭರವಸೆ ಹೊಂದಿದ್ದಾರೆ.

ಈಗ ಟರ್ಕಿಯಿಂದ ಸಿರಿಯಾಕ್ಕೆ ಹಿಂತಿರುಗಿದ ಜನರ ಸಂಖ್ಯೆ 30,663 ಆಗಿದೆ. ಅವರಲ್ಲಿ ಶೇ.30ರಷ್ಟು ಟರ್ಕಿಯಲ್ಲಿ ಜನಿಸಿದವರಾಗಿದ್ದಾರೆ ಎಂದು ಟರ್ಕಿಯ ಆಂತರಿಕ ಸಚಿವ ಅಲಿ ಯೆರ್ಲಿಕಾಯಾ ಶುಕ್ರವಾರ ಸ್ಥಳೀಯ ಟಿಜಿಆರ್‌ಟಿ ಸುದ್ದಿ ವಾಹಿನಿಗೆ ತಿಳಿಸಿದ್ದಾರೆ.

25,000ಕ್ಕೂ ಹೆಚ್ಚು ಸಿರಿಯನ್ನರು ಮರಳಿದ್ದಾರೆ. ಅವರಿಗೆ 2025ರ ಮೊದಲಾರ್ಧದಲ್ಲಿ ಮೂರು ಬಾರಿ ಟರ್ಕಿಯನ್ನು ತೊರೆಯಲು ಮತ್ತು ಮರು-ಪ್ರವೇಶಿಸಲು ಅನುಮತಿಸಲಾಗುವುದು ಎಂದು ರಾಜ್ಯ ಸುದ್ದಿ ಸಂಸ್ಥೆ ಅನಾಡೋಲುಗೆ ಮಂಗಳವಾರ ಯೆರ್ಲಿಕಾಯಾ ಹೇಳಿದ್ದಾರೆ.

ಟರ್ಕಿಯಲ್ಲಿ ವಾಸಿಸುವ ಹೆಚ್ಚಿನ ನಿರಾಶ್ರಿತರು ಸಿರಿಯಾದ ಎರಡನೇ ನಗರವಾದ ಅಲೆಪ್ಪೊದವರಾಗಿದ್ದಾರೆ. ಈ ಅಲೆಪ್ಪೊದಲ್ಲಿ  “ವಲಸೆ ನಿರ್ವಹಣಾ ಕಚೇರಿ” ಯನ್ನು ತೆರೆಯಲಿದೆ ಎಂದು ಅವರು ಹೆಚ್ಚಿನ ವಿವರಗಳನ್ನು ನೀಡದೆ ಹೇಳಿದ ಅವರು, ಟರ್ಕಿಯು ಅಲೆಪ್ಪೊದಲ್ಲಿ ತನ್ನ ರಾಯಭಾರ ಕಚೇರಿಯನ್ನು ಕೆಲವೇ ದಿನಗಳಲ್ಲಿ ಮತ್ತೆ ತೆರೆಯುತ್ತದೆ ಎಂದು ಈ ವಾರದ ಆರಂಭದಲ್ಲಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರ ಹೇಳಿಕೆಗಳನ್ನು ಪುನರುಚ್ಚರಿಸಿದ್ದಾರೆ.

ಹಯಾತ್ ತಹ್ರೀರ್ ಅಲ್-ಶಾಮ್ (HTS) ಬಂಡುಕೋರರಿಂದ ಅಲ್-ಅಸ್ಸಾದ್ ಆಡಳಿತವನ್ನು ಪತನಗೊಳಿಸಿದ ಆರು ದಿನಗಳ ನಂತರ, ಡಿಸೆಂಬರ್ 14ರಂದು ಟರ್ಕಿಯಲ್ಲಿ ಡಮಾಸ್ಕಸ್ ರಾಯಭಾರ ಕಚೇರಿಯನ್ನು ಪುನಃ ತೆರೆಯಲಾಯಿತು. ಏತನ್ಮಧ್ಯೆ, ರಾಜಧಾನಿ ಡಮಾಸ್ಕಸ್ ಮತ್ತು ಇತರೆಡೆಗಳಲ್ಲಿ, ಅಲ್-ಅಸ್ಸಾದ್‌ನ ಸುಮಾರು 25 ವರ್ಷಗಳ ಆಳ್ವಿಕೆಯಲ್ಲಿ ಕೊಲ್ಲಲ್ಪಟ್ಟ ಮತ್ತು ಜೈಲಿನಲ್ಲಿದ್ದವರಿಗಾಗಿ ಸಿರಿಯನ್ನರು ಸ್ಮರಣಾರ್ಥ ದಿನವನ್ನು ನಡೆಸಿದರು.

ಅಲ್-ಅಸ್ಸಾದ್ ಅಧಿಕಾರಾವಧಿಯಲ್ಲಿ ಕಾಣೆಯಾದ ಸಂಬಂಧಿಕರ ಭವಿಷ್ಯದ ಕುರಿತು ಹೊಸ ಅಧಿಕಾರಿಗಳನ್ನು ಒತ್ತಾಯಿಸಲು ಡಮಾಸ್ಕಸ್‌ನ ಮಧ್ಯಭಾಗದ ಹಿಜಾಜ್ ಸ್ಕ್ವೇರ್‌ನಲ್ಲಿ ಪ್ರತಿಭಟನಾಕಾರರು ಕಣ್ಮರೆಯಾದವರ ಚಿತ್ರಗಳನ್ನು ಹಿಡಿದುಕೊಂಡು ರ್ಯಾಲಿ ನಡೆಸಿದರೆಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ನಿರಂಕುಶಾಧಿಕಾರಿಗಳು ಜವಾಬ್ದಾರಿ ಹೊಂದಲು ಇದು ಸಮಯ ಎಂಬ ಸೊಗಸಾದ ಕಪ್ಪು ಬ್ಯಾನರ್ ಅನ್ನು ಒಟ್ಟೋಮನ್ ರೈಲು ನಿಲ್ದಾಣದ ಬಾಲ್ಕನಿಯಿಂದ ಪ್ರದರ್ಶಿಸಲಾಯಿತು. ಹಾಗೆಯೇ ಇತರ ಫಲಕಗಳಲ್ಲಿ “ಕಾಣೆಯಾದವರ ಗುರುತು ಬಹಿರಂಗಪಡಿಸುವ ಹಕ್ಕು” ಮತ್ತು “ನನ್ನ ಮಗನಿಗೆ ಗುರುತು ಇಲ್ಲದ ಸಮಾಧಿ ನನಗೆ ಬೇಕಾಗಿಲ್ಲ, ನನಗೆ ಸತ್ಯ ಬೇಕು” ಎಂದು ಬರೆಯಲಾಗಿತ್ತು ಎಂದು ಡಮಾಸ್ಕಸ್‌ನಿಂದ ವರದಿ ಮಾಡುತ್ತಿರುವ ಅಲ್ ಜಜೀರಾದ ಹಶೆಮ್ ಅಹೆಲ್ಬರ್ರಾ ವರದಿ ಮಾಡಿದ್ದಾರೆ.

ಬಶರ್ ಅಲ್-ಅಸ್ಸಾದ್ ಅಥವಾ ಅವರ ತಂದೆ ಹಫೀಜ್ ಅಲ್-ಅಸ್ಸಾದ್ ಸಮಯದಲ್ಲಿ ಜೈಲುಗಳಲ್ಲಿ ಕೊಲ್ಲಲ್ಪಟ್ಟ ಅಥವಾ ಕಣ್ಮರೆಯಾದ ಅವರ ಪ್ರೀತಿಪಾತ್ರರ ಬ್ಯಾನರ್ ಗಳು ಮತ್ತು ಪೋಸ್ಟರ್ ಗಳು ಮತ್ತು ಚಿತ್ರಗಳನ್ನು ಹಿಡಿದಿದ್ದ ಅನೇಕ ಜನರನ್ನು ನಾನು ನೋಡಿದೆ ಎಂದು ಅವರು ವರದಿ ಮಾಡಿದ್ದಾರೆ.

ಒಂದು ಹಂತದಲ್ಲಿ ಅಹೆಲ್ಬರ್ರಾ ಬೀದಿಗಳಲ್ಲಿನ ದೃಶಗಳು “ಅಸ್ತವ್ಯಸ್ತ”ವಾಗಿದ್ದವು. ಏಕೆಂದರೆ ಜನರು   ಗಾಳಿಯಲ್ಲಿ ತಮ್ಮ ಬಂದೂಕುಗಳಿಂದ ಗುಂಡು ಹಾರಿಸಿ  ಸ್ಮರಣಾರ್ಥ ರ್ಯಾಲಿ ನಡೆಸುತ್ತಿದ್ದರು ಎಂದು ಹಶೆಮ್ ಅಹೆಲ್ಬರ್ರಾ ಹೇಳಿದ್ದಾರೆ.

ಅಲ್-ಅಸ್ಸಾದ್ ಆಡಳಿತಕ್ಕೆ ಸಿರಿಯಾದ ಜೈಲುಗಳು ವಿರೋಧಿಗಳನ್ನು ಮಟ್ಟಹಾಕಲು ಪ್ರಮುಖ ಆಧಾರಸ್ತಂಭವಾಗಿದ್ದವು. 2013ರಲ್ಲಿ ಸಿರಿಯಾದಿಂದ ಕಳ್ಳಸಾಗಣೆಯಾದವರ ಚಿತ್ರಗಳು, ಬಂಧನದಲ್ಲಿ ವ್ಯಾಪಕವಾದ ಚಿತ್ರಹಿಂಸೆ, ಹಸಿವು, ಹೊಡೆತಗಳು ಮಾನವೀಯತೆಯ ವಿರುದ್ಧದ ಅಪರಾಧವಾಗಿದೆ ಎಂದು ಮಾನವ ಹಕ್ಕುಗಳ ಗುಂಪು ಹೇಳಿದೆ.

ಇರಾನ್‌ನ ಉನ್ನತ ರಾಜತಾಂತ್ರಿಕರು ಸಿರಿಯಾದ ಭವಿಷ್ಯದಲ್ಲಿ “ವಿನಾಶಕಾರಿ ಹಸ್ತಕ್ಷೇಪ” ದ ವಿರುದ್ಧ ಎಚ್ಚರಿಕೆ ನೀಡಿದ್ದಾರೆ. ಸಿರಿಯಾದ ಯಾವುದೇ ನಿರ್ಧಾರಗಳು ದೇಶದ ಜನರೊಂದಿಗೆ ಮಾತ್ರ ಇರಬೇಕು ಎಂದು ಹೇಳಿದ್ದಾರೆ.

ಸಿರಿಯಾದಲ್ಲಿ ವಿನಾಶಕಾರಿ ಹಸ್ತಕ್ಷೇಪ ಅಥವಾ ವಿದೇಶಿ ಹೇರಿಕೆ ಇಲ್ಲದ, ಅಲ್ಲಿಯ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಜನರ ಸಂಪೂರ್ಣ ಜವಾಬ್ದಾರಿ ಎಂದು ಪರಿಗಣಿಸುತ್ತೇವೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಬೀಜಿಂಗ್‌ಗೆ ಭೇಟಿ ನೀಡಿದಾಗ ಚೀನಾದ ರಾಜ್ಯ ಮಾಧ್ಯಮ ಪೀಪಲ್ಸ್ ಡೈಲಿಯಲ್ಲಿ ಬರೆದಿದ್ದಾರೆ. ಅವರು ಸಿರಿಯಾದ ಏಕತೆ, ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗಾಗಿ ಇರಾನ್‌ನ ಗೌರವವನ್ನು ಒತ್ತಿ ಹೇಳಿದ್ದಾರೆ.

ವಿದೇಶಾಂಗ ಸಚಿವರಾಗಿ ನೇಮಕಗೊಂಡ ನಂತರ ತನ್ನ ಮೊದಲ ಅಧಿಕೃತ ಭೇಟಿಯನ್ನು ಪ್ರಾರಂಭಿಸಲು ಅಬ್ಬಾಸ್ ಅರಾಘ್ಚಿ ಶುಕ್ರವಾರ ಮಧ್ಯಾಹ್ನ ಚೀನಾದ ರಾಜಧಾನಿಯನ್ನು ತಲುಪಿದರು ಎಂದು ಇರಾನ್ ರಾಜ್ಯ ಮಾಧ್ಯಮ ವರದಿ ಮಾಡಿದೆ. ಚೀನಾ ಮತ್ತು ಇರಾನ್ ಎರಡೂ ಮಾಜಿ ಅಧ್ಯಕ್ಷ ಅಲ್-ಅಸ್ಸಾದ್ ಬೆಂಬಲಿಗರಾಗಿದ್ದರು.

ಮಾನವೀಯ ನೆಲೆಯಲ್ಲಿ  ಸುಮಾರು 50 ಟನ್‌ಗಳಷ್ಟು ಯುರೋಪಿಯನ್ ಯೂನಿಯನ್ ನಿಧಿಯ ವೈದ್ಯಕೀಯ ಸೌಲಭ್ಯಗಳು ಈ ವರ್ಷದ ಅಂತ್ಯದ ವೇಳೆಗೆ ಸಿರಿಯಾವನ್ನು ಪ್ರವೇಶಿಸುವ ನಿರೀಕ್ಷೆಯಿದೆ ಎಂದು ವಿಶ್ವಸಂಸ್ಥೆಯ ಆರೋಗ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹಾಗೆಯೇ ದುಬೈನಲ್ಲಿರುವ ಇಯು ದಾಸ್ತಾನುಗಳಿಂದ ಕಳುಹಿಸಲಾದ ವೈದ್ಯಕೀಯ ಸೌಲಭ್ಯಗಳು ಗುರುವಾರ ಇಸ್ತಾನ್‌ಬುಲ್‌ಗೆ ಬಂದಿಳಿದಿವೆ ಮತ್ತು ಮುಂದಿನ ದಿನಗಳಲ್ಲಿ ಗಡಿಗೆ ತಲುಪಿಸಲಾಗುವುದು ಎಂದು ದಕ್ಷಿಣ ಟರ್ಕಿಯ ವಿಶ್ವ ಆರೋಗ್ಯ ಸಂಸ್ಥೆಯ ಗಾಜಿಯಾಂಟೆಪ್ ಕಚೇರಿಯಿಂದ ಮೃಣಾಲಿನಿ ಸಂತಾನಂ ಅವರು ಎಎಫ್‌ಪಿಗೆ ತಿಳಿಸಿದ್ದಾರೆ.

ಇವುಗಳು 8,000 ತುರ್ತು ಶಸ್ತ್ರಚಿಕಿತ್ಸಾ ಕಿಟ್‌ಗಳು, ಅರಿವಳಿಕೆ ಸರಬರಾಜುಗಳು, IV ದ್ರವಗಳು, ಕ್ರಿಮಿನಾಶಕ ವಸ್ತುಗಳು ಮತ್ತು ರೋಗ ಹರಡುವುದನ್ನು ತಡೆಗಟ್ಟುವ ಔಷಧಿಗಳನ್ನು ಒಳಗೊಂಡಿವೆ. ಇಡ್ಲಿಬ್ ಮತ್ತು ಉತ್ತರ ಅಲೆಪ್ಪೊದಲ್ಲಿನ ಆರೋಗ್ಯ ವ್ಯವಸ್ಥೆಯನ್ನು ಬೆಂಬಲಿಸಲು ಇವುಗಳನ್ನು ಕಳುಹಿಸಲಾಗುವುದು ಎಂದು EU (ಯುರೋಪಿಯನ್ ಯೂನಿಯನ್) ಹೇಳಿದೆ.

2011ರಲ್ಲಿ ಪ್ರಾರಂಭವಾದ ಅಂತರ್ಯುದ್ಧವು  ಸಿರಿಯಾ ದೇಶ ಮತ್ತು ಆರೋಗ್ಯ ವ್ಯವಸ್ಥೆಯನ್ನು ಧ್ವಂಸಗೊಳಿಸಿತು. ಇಲ್ಲಿ ಅರ್ಧದಷ್ಟು ಆಸ್ಪತ್ರೆಗಳು ಈಗ ಕಾರ್ಯನಿರ್ವಹಿಸುತ್ತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮೃಣಾಲಿನಿ ಸಂತಾನಂ ಹೇಳಿದ್ದಾರೆ.

ದಕ್ಷಿಣ ಕೊರಿಯಾ: ಲ್ಯಾಂಡಿಂಗ್ ವೇಳೆ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು 62 ಪ್ರಯಾಣಿಕರ ಸಾವು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನ ಬದಲಿಸಿ ಮನುಸ್ಮೃತಿ ತರಲು SIR ಷಡ್ಯಂತ್ರ: ನಟ ಕಿಶೋರ್

ದೇಶದ ಬಹುಕೋಟಿ ಉದ್ಯಮಿ ಗೌತಮ್ ಅದಾನಿಯದ್ದೇ ಇರಲಿ ಅಥವಾ ಒಬ್ಬ ಬಡ ರೈತನದ್ದೇ ಇರಲಿ, ಪ್ರಜಾಪ್ರಭುತ್ವದಲ್ಲಿ ಎಲ್ಲರ ಮತವೂ ಒಂದೇ ಸಮ. ಪ್ರಜೆಗಳನ್ನೆಲ್ಲ ಸಮಾನವಾಗಿ ಕಾಣುವ ಏಕೈಕ ಅಸ್ತ್ರ ಎಂದರೆ ಅದು ಮತದಾನದ...

Nepal: ಭೀಕರ ಪ್ರವಾಹಕ್ಕೆ ಸವಾಲೆಸೆದು ನಿಂತ ‘ಗ್ರೀನ್ ಹೌಸ್’ ಸ್ಟೋರಿ

'ನಮ್ಮ ಬದುಕು ಇಷ್ಟಕ್ಕೇ ಅಂತ್ಯವಾಯಿತು ಎನಿಸುವ ಕ್ಷಣಗಳು ಎದುರಾದಾಗ ಮನಸ್ಸಿನಲ್ಲಿ ಏನು ಓಡಬಹುದು? ಪ್ರವಾಹ ಬಂದಾಗ ನನಗೂ ಅದೇ ಅನಿಸಿತ್ತು' ಇದು ನೇಪಾಳದ ನುವಾಕೋಟ್ ಜಿಲ್ಲೆಯ ತ್ರಿಶೂಲಿ ನದಿಯಲ್ಲಿ ಹರಿದುಬಂದ ಭೀಕರ ಪ್ರವಾಹದಿಂದ...

NEET: ದೇಶಾದ್ಯಂತ ಪ್ರತಿಭಟನಾಕಾರರ ವಿರುದ್ದ ದಾಖಲಾಗಿದ್ದ ಎಲ್ಲಾ FIRಗಳನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಮರುಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ಯ (CJP) ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಎಲ್ಲಾ FIR ಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ. ಕೇಂದ್ರ ಸರ್ಕಾರವು ಈ...

ಚುನಾವಣಾ ಆಯೋಗ ಚಲೋ: ನಟ ಪ್ರಕಾಶ್ ರಾಜ್ ಸೇರಿದಂತೆ ನೂರಾರು SIR ಸಂತ್ರಸ್ತರು, ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು

ಕರ್ನಾಟಕ ರಾಜ್ಯದ ಅರ್ಹ ಮತದಾರರ ‘ಮತಹರಣ’ ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಮ್ಮಿಕೊಂಡಿದ್ದ ‘ಚುನಾವಣಾ ಆಯೋಗ ಚಲೋ’ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್, ಕಿಶೋರ್ ಹಾಗೂ ಪ್ರಮುಖ ನಾಯಕರು ಸೇರಿದಂತೆ...

‘ಚುನಾವಣಾ ಆಯೋಗ ಚಲೋ’: ‘ಮುಚ್ಚಿದ ಬಾಗಿಲಿನ ಮಾತುಕತೆ ಬೇಡ, ಎಲ್ಲವೂ ಸಾರ್ವಜನಿಕರ ಮುಂದೆಯೇ ಇತ್ಯರ್ಥವಾಗಬೇಕು’: ನೂರ್ ಶ್ರೀಧರ್ ಆಗ್ರಹ

ಬೆಂಗಳೂರು: ಕರ್ನಾಟಕದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ರಾಜ್ಯದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬೃಹತ್ ಕಳವಳವನ್ನು ಸೃಷ್ಟಿಸಿದೆ. ಕೇಂದ್ರ ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ನೂತನ ಕರಡು ಮತದಾರರ...

SIR ಎಂಬುದು ಪ್ರಜಾಪ್ರಭುತ್ವವನ್ನು ಹಾಳುಮಾಡುವ ದೊಡ್ಡ ಸಂಚು ಮತ್ತು ಮೋಸ: ಪ್ರಕಾಶ್ ರಾಜ್

"ನಾನು ಸಣ್ಣವನಿದ್ದಾಗ ಮುಕ್ಕೂಟಿ ಕನ್ನಡಿಗರು ಎನ್ನುತ್ತಿದ್ದರು. ದಶಕಗಳ ನಂತರ ಪಂಚಕೋಟಿ ಕನ್ನಡಿಗರಾಗಿ, ಈಗ ಶತಕೋಟಿ ಆಗಬೇಕಿತ್ತು. ಆದರೆ ಮತದಾರರ ಪಟ್ಟಿ ವಿಶೇಷ ಸಾಂದ್ರ ಪರಿಷ್ಕರಣೆ (SIR) ಹೆಸರಿನಲ್ಲಿ ಮತ್ತೆ ಮುಕ್ಕೂಟಿಗೆ ತಂದು ನಿಲ್ಲಿಸಲಾಗುತ್ತಿದೆ....

‘ಚುನಾವಣಾ ಆಯೋಗ ಚಲೋ’: ಎಸ್ಐಆರ್ ಅನ್ಯಾಯವನ್ನು ಪ್ರಶ್ನಿಸಲು ನಾವು ಚುನಾವಣಾ ಆಯೋಗಕ್ಕೆ ಮುತ್ತಿಗೆ ಹಾಕುತ್ತಿದ್ದೇವೆ: ಯೂಸುಫ್ ಕನ್ನಿ

ಬೆಂಗಳೂರು: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಅರ್ಹ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ವೇದಿಕೆಯು 2026 ಸೆಪ್ಟಂಬರ್ 01, ಮಂಗಳವಾರ ಹಮ್ಮಿಕೊಂಡಿದ್ದ...

SIR:‘ನಾವು ಕಳ್ಳರಲ್ಲ, ಈ ದೇಶದ ಮೂಲ ನಿವಾಸಿಗಳು’ SIR ಸಂತ್ರಸ್ತರ ಜೊತೆ ಪ್ರಕಾಶ್ ರಾಜ್ ಸಂವಾದ

"ನಾವು ಈ ದೇಶದ ನಾಗರಿಕರು, ಕಳ್ಳರಲ್ಲ. ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರಲಾಗುತ್ತಿದೆ. ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ನಾವು ಹೋರಾಟ ನಡೆಸುತ್ತಿದ್ದೇವೆ," ಎಂದು ಬಹುಭಾಷಾ ನಟ ಹಾಗೂ...

‘ವಿದೇಶದಲ್ಲಿ ಚಿನ್ನ ಖರೀದಿಸಬೇಡಿ, ವಿವಾಹವಾಗಬೇಡಿ’: ಭಾರತೀಯರಿಗೆ ಮೋದಿ ಮನವಿ

ಭಾರತೀಯರು ಅನಗತ್ಯವಾಗಿ ವಿದೇಶಿ ಪ್ರವಾಸ ಕೈಗೊಳ್ಳುವುದನ್ನು, ವಿದೇಶಗಳಲ್ಲಿ ವಿವಾಹವಾಗುವುದನ್ನು ಹಾಗೂ ಅಗತ್ಯವಿಲ್ಲದಿದ್ದರೆ ವಿದೇಶದಿಂದ ಚಿನ್ನ ಖರೀದಿಸುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಸ್ವಾವಲಂಬನೆಗೆ ಉತ್ತೇಜನ ನೀಡುವುದರ...

ಧಾರವಾಡ | ಪ್ರಕಾಶ್ ರಾಜ್ ಭಾಗವಹಿಸಿದ್ದ ಸಮುದಾಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನ : ದೂರು ದಾಖಲು

ಭಾನುವಾರ (ಆ.30) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಆಯೋಜಿಸಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿ ಗಲಾಟೆ ಎಬ್ಬಿಸಿದ ಬಿಜೆಪಿ-ಸಂಘಪರಿವಾರದ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ. ಸಮುದಾಯ ಸಂಘಟನೆಯ ಧಾರವಾಡದ...