Homeಅಂತರಾಷ್ಟ್ರೀಯಟರ್ಕಿಯಿಂದ ಸಿರಿಯಾಕ್ಕೆ ಮರಳಿದ 3 ಮಿಲಿಯನ್ ನಿರಾಶ್ರಿತರಲ್ಲಿ 31,000 ನಿರಾಶ್ರಿತರು

ಟರ್ಕಿಯಿಂದ ಸಿರಿಯಾಕ್ಕೆ ಮರಳಿದ 3 ಮಿಲಿಯನ್ ನಿರಾಶ್ರಿತರಲ್ಲಿ 31,000 ನಿರಾಶ್ರಿತರು

- Advertisement -
- Advertisement -

ಟರ್ಕಿಯಲ್ಲಿ ಆಶ್ರಯ ಪಡೆದಿದ್ದ 3 ಮಿಲಿಯನ್ ನಷ್ಟು ಸಿರಿಯನ್ ರಲ್ಲಿ ಸುಮಾರು 31,000 ಸಿರಿಯನ್ನರು  ಬಶರ್ ಅಲ್-ಅಸ್ಸಾದ್ ಅವರ ಆಡಳಿತ ಪತನದ ನಂತರ ತಮ್ಮ ತವರಿಗೆ ಮರಳಿದ್ದಾರೆ ಎಂದು  ಟರ್ಕಿಯ ಆಂತರಿಕ ಮಂತ್ರಿ  ಹೇಳಿದ್ದಾರೆ.

ಏತನ್ಮಧ್ಯೆ ಸಿರಿಯಾದ ಅಲ್-ಅಸ್ಸಾದ್ ಆಡಳಿತದಲ್ಲಿ ಮತ್ತು 13 ವರ್ಷಗಳ ಅಂತರ್ಯುದ್ಧದ ಬಲಿಪಶುಗಳ ಗೌರವಾರ್ಥವಾಗಿ ಸಿರಿಯನ್ನರು ಸ್ಮರಣಾರ್ಥ ದಿನವಾಗಿ ರ್ಯಾಲಿ ನಡೆಸಿದರು. 2011ರಲ್ಲಿ ಯುದ್ಧದ ನಂತರ ಲಕ್ಷಾಂತರ ಜನ ಸಿರಿಯಾದಿಂದ ಟರ್ಕಿಗೆ ಪಲಾಯನ ಮಾಡಿದ್ದರು. ಡಿಸೆಂಬರ್ 8 ರಂದು ಅಲ್-ಅಸ್ಸಾದ್ ಆಡಳಿತ ಪತನದ ನಂತರ ಅನೇಕರು ಹಿಂತಿರುಗುವ ಎಂಬ ಭರವಸೆ ಹೊಂದಿದ್ದಾರೆ.

ಈಗ ಟರ್ಕಿಯಿಂದ ಸಿರಿಯಾಕ್ಕೆ ಹಿಂತಿರುಗಿದ ಜನರ ಸಂಖ್ಯೆ 30,663 ಆಗಿದೆ. ಅವರಲ್ಲಿ ಶೇ.30ರಷ್ಟು ಟರ್ಕಿಯಲ್ಲಿ ಜನಿಸಿದವರಾಗಿದ್ದಾರೆ ಎಂದು ಟರ್ಕಿಯ ಆಂತರಿಕ ಸಚಿವ ಅಲಿ ಯೆರ್ಲಿಕಾಯಾ ಶುಕ್ರವಾರ ಸ್ಥಳೀಯ ಟಿಜಿಆರ್‌ಟಿ ಸುದ್ದಿ ವಾಹಿನಿಗೆ ತಿಳಿಸಿದ್ದಾರೆ.

25,000ಕ್ಕೂ ಹೆಚ್ಚು ಸಿರಿಯನ್ನರು ಮರಳಿದ್ದಾರೆ. ಅವರಿಗೆ 2025ರ ಮೊದಲಾರ್ಧದಲ್ಲಿ ಮೂರು ಬಾರಿ ಟರ್ಕಿಯನ್ನು ತೊರೆಯಲು ಮತ್ತು ಮರು-ಪ್ರವೇಶಿಸಲು ಅನುಮತಿಸಲಾಗುವುದು ಎಂದು ರಾಜ್ಯ ಸುದ್ದಿ ಸಂಸ್ಥೆ ಅನಾಡೋಲುಗೆ ಮಂಗಳವಾರ ಯೆರ್ಲಿಕಾಯಾ ಹೇಳಿದ್ದಾರೆ.

ಟರ್ಕಿಯಲ್ಲಿ ವಾಸಿಸುವ ಹೆಚ್ಚಿನ ನಿರಾಶ್ರಿತರು ಸಿರಿಯಾದ ಎರಡನೇ ನಗರವಾದ ಅಲೆಪ್ಪೊದವರಾಗಿದ್ದಾರೆ. ಈ ಅಲೆಪ್ಪೊದಲ್ಲಿ  “ವಲಸೆ ನಿರ್ವಹಣಾ ಕಚೇರಿ” ಯನ್ನು ತೆರೆಯಲಿದೆ ಎಂದು ಅವರು ಹೆಚ್ಚಿನ ವಿವರಗಳನ್ನು ನೀಡದೆ ಹೇಳಿದ ಅವರು, ಟರ್ಕಿಯು ಅಲೆಪ್ಪೊದಲ್ಲಿ ತನ್ನ ರಾಯಭಾರ ಕಚೇರಿಯನ್ನು ಕೆಲವೇ ದಿನಗಳಲ್ಲಿ ಮತ್ತೆ ತೆರೆಯುತ್ತದೆ ಎಂದು ಈ ವಾರದ ಆರಂಭದಲ್ಲಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರ ಹೇಳಿಕೆಗಳನ್ನು ಪುನರುಚ್ಚರಿಸಿದ್ದಾರೆ.

ಹಯಾತ್ ತಹ್ರೀರ್ ಅಲ್-ಶಾಮ್ (HTS) ಬಂಡುಕೋರರಿಂದ ಅಲ್-ಅಸ್ಸಾದ್ ಆಡಳಿತವನ್ನು ಪತನಗೊಳಿಸಿದ ಆರು ದಿನಗಳ ನಂತರ, ಡಿಸೆಂಬರ್ 14ರಂದು ಟರ್ಕಿಯಲ್ಲಿ ಡಮಾಸ್ಕಸ್ ರಾಯಭಾರ ಕಚೇರಿಯನ್ನು ಪುನಃ ತೆರೆಯಲಾಯಿತು. ಏತನ್ಮಧ್ಯೆ, ರಾಜಧಾನಿ ಡಮಾಸ್ಕಸ್ ಮತ್ತು ಇತರೆಡೆಗಳಲ್ಲಿ, ಅಲ್-ಅಸ್ಸಾದ್‌ನ ಸುಮಾರು 25 ವರ್ಷಗಳ ಆಳ್ವಿಕೆಯಲ್ಲಿ ಕೊಲ್ಲಲ್ಪಟ್ಟ ಮತ್ತು ಜೈಲಿನಲ್ಲಿದ್ದವರಿಗಾಗಿ ಸಿರಿಯನ್ನರು ಸ್ಮರಣಾರ್ಥ ದಿನವನ್ನು ನಡೆಸಿದರು.

ಅಲ್-ಅಸ್ಸಾದ್ ಅಧಿಕಾರಾವಧಿಯಲ್ಲಿ ಕಾಣೆಯಾದ ಸಂಬಂಧಿಕರ ಭವಿಷ್ಯದ ಕುರಿತು ಹೊಸ ಅಧಿಕಾರಿಗಳನ್ನು ಒತ್ತಾಯಿಸಲು ಡಮಾಸ್ಕಸ್‌ನ ಮಧ್ಯಭಾಗದ ಹಿಜಾಜ್ ಸ್ಕ್ವೇರ್‌ನಲ್ಲಿ ಪ್ರತಿಭಟನಾಕಾರರು ಕಣ್ಮರೆಯಾದವರ ಚಿತ್ರಗಳನ್ನು ಹಿಡಿದುಕೊಂಡು ರ್ಯಾಲಿ ನಡೆಸಿದರೆಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ನಿರಂಕುಶಾಧಿಕಾರಿಗಳು ಜವಾಬ್ದಾರಿ ಹೊಂದಲು ಇದು ಸಮಯ ಎಂಬ ಸೊಗಸಾದ ಕಪ್ಪು ಬ್ಯಾನರ್ ಅನ್ನು ಒಟ್ಟೋಮನ್ ರೈಲು ನಿಲ್ದಾಣದ ಬಾಲ್ಕನಿಯಿಂದ ಪ್ರದರ್ಶಿಸಲಾಯಿತು. ಹಾಗೆಯೇ ಇತರ ಫಲಕಗಳಲ್ಲಿ “ಕಾಣೆಯಾದವರ ಗುರುತು ಬಹಿರಂಗಪಡಿಸುವ ಹಕ್ಕು” ಮತ್ತು “ನನ್ನ ಮಗನಿಗೆ ಗುರುತು ಇಲ್ಲದ ಸಮಾಧಿ ನನಗೆ ಬೇಕಾಗಿಲ್ಲ, ನನಗೆ ಸತ್ಯ ಬೇಕು” ಎಂದು ಬರೆಯಲಾಗಿತ್ತು ಎಂದು ಡಮಾಸ್ಕಸ್‌ನಿಂದ ವರದಿ ಮಾಡುತ್ತಿರುವ ಅಲ್ ಜಜೀರಾದ ಹಶೆಮ್ ಅಹೆಲ್ಬರ್ರಾ ವರದಿ ಮಾಡಿದ್ದಾರೆ.

ಬಶರ್ ಅಲ್-ಅಸ್ಸಾದ್ ಅಥವಾ ಅವರ ತಂದೆ ಹಫೀಜ್ ಅಲ್-ಅಸ್ಸಾದ್ ಸಮಯದಲ್ಲಿ ಜೈಲುಗಳಲ್ಲಿ ಕೊಲ್ಲಲ್ಪಟ್ಟ ಅಥವಾ ಕಣ್ಮರೆಯಾದ ಅವರ ಪ್ರೀತಿಪಾತ್ರರ ಬ್ಯಾನರ್ ಗಳು ಮತ್ತು ಪೋಸ್ಟರ್ ಗಳು ಮತ್ತು ಚಿತ್ರಗಳನ್ನು ಹಿಡಿದಿದ್ದ ಅನೇಕ ಜನರನ್ನು ನಾನು ನೋಡಿದೆ ಎಂದು ಅವರು ವರದಿ ಮಾಡಿದ್ದಾರೆ.

ಒಂದು ಹಂತದಲ್ಲಿ ಅಹೆಲ್ಬರ್ರಾ ಬೀದಿಗಳಲ್ಲಿನ ದೃಶಗಳು “ಅಸ್ತವ್ಯಸ್ತ”ವಾಗಿದ್ದವು. ಏಕೆಂದರೆ ಜನರು   ಗಾಳಿಯಲ್ಲಿ ತಮ್ಮ ಬಂದೂಕುಗಳಿಂದ ಗುಂಡು ಹಾರಿಸಿ  ಸ್ಮರಣಾರ್ಥ ರ್ಯಾಲಿ ನಡೆಸುತ್ತಿದ್ದರು ಎಂದು ಹಶೆಮ್ ಅಹೆಲ್ಬರ್ರಾ ಹೇಳಿದ್ದಾರೆ.

ಅಲ್-ಅಸ್ಸಾದ್ ಆಡಳಿತಕ್ಕೆ ಸಿರಿಯಾದ ಜೈಲುಗಳು ವಿರೋಧಿಗಳನ್ನು ಮಟ್ಟಹಾಕಲು ಪ್ರಮುಖ ಆಧಾರಸ್ತಂಭವಾಗಿದ್ದವು. 2013ರಲ್ಲಿ ಸಿರಿಯಾದಿಂದ ಕಳ್ಳಸಾಗಣೆಯಾದವರ ಚಿತ್ರಗಳು, ಬಂಧನದಲ್ಲಿ ವ್ಯಾಪಕವಾದ ಚಿತ್ರಹಿಂಸೆ, ಹಸಿವು, ಹೊಡೆತಗಳು ಮಾನವೀಯತೆಯ ವಿರುದ್ಧದ ಅಪರಾಧವಾಗಿದೆ ಎಂದು ಮಾನವ ಹಕ್ಕುಗಳ ಗುಂಪು ಹೇಳಿದೆ.

ಇರಾನ್‌ನ ಉನ್ನತ ರಾಜತಾಂತ್ರಿಕರು ಸಿರಿಯಾದ ಭವಿಷ್ಯದಲ್ಲಿ “ವಿನಾಶಕಾರಿ ಹಸ್ತಕ್ಷೇಪ” ದ ವಿರುದ್ಧ ಎಚ್ಚರಿಕೆ ನೀಡಿದ್ದಾರೆ. ಸಿರಿಯಾದ ಯಾವುದೇ ನಿರ್ಧಾರಗಳು ದೇಶದ ಜನರೊಂದಿಗೆ ಮಾತ್ರ ಇರಬೇಕು ಎಂದು ಹೇಳಿದ್ದಾರೆ.

ಸಿರಿಯಾದಲ್ಲಿ ವಿನಾಶಕಾರಿ ಹಸ್ತಕ್ಷೇಪ ಅಥವಾ ವಿದೇಶಿ ಹೇರಿಕೆ ಇಲ್ಲದ, ಅಲ್ಲಿಯ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಜನರ ಸಂಪೂರ್ಣ ಜವಾಬ್ದಾರಿ ಎಂದು ಪರಿಗಣಿಸುತ್ತೇವೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಬೀಜಿಂಗ್‌ಗೆ ಭೇಟಿ ನೀಡಿದಾಗ ಚೀನಾದ ರಾಜ್ಯ ಮಾಧ್ಯಮ ಪೀಪಲ್ಸ್ ಡೈಲಿಯಲ್ಲಿ ಬರೆದಿದ್ದಾರೆ. ಅವರು ಸಿರಿಯಾದ ಏಕತೆ, ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗಾಗಿ ಇರಾನ್‌ನ ಗೌರವವನ್ನು ಒತ್ತಿ ಹೇಳಿದ್ದಾರೆ.

ವಿದೇಶಾಂಗ ಸಚಿವರಾಗಿ ನೇಮಕಗೊಂಡ ನಂತರ ತನ್ನ ಮೊದಲ ಅಧಿಕೃತ ಭೇಟಿಯನ್ನು ಪ್ರಾರಂಭಿಸಲು ಅಬ್ಬಾಸ್ ಅರಾಘ್ಚಿ ಶುಕ್ರವಾರ ಮಧ್ಯಾಹ್ನ ಚೀನಾದ ರಾಜಧಾನಿಯನ್ನು ತಲುಪಿದರು ಎಂದು ಇರಾನ್ ರಾಜ್ಯ ಮಾಧ್ಯಮ ವರದಿ ಮಾಡಿದೆ. ಚೀನಾ ಮತ್ತು ಇರಾನ್ ಎರಡೂ ಮಾಜಿ ಅಧ್ಯಕ್ಷ ಅಲ್-ಅಸ್ಸಾದ್ ಬೆಂಬಲಿಗರಾಗಿದ್ದರು.

ಮಾನವೀಯ ನೆಲೆಯಲ್ಲಿ  ಸುಮಾರು 50 ಟನ್‌ಗಳಷ್ಟು ಯುರೋಪಿಯನ್ ಯೂನಿಯನ್ ನಿಧಿಯ ವೈದ್ಯಕೀಯ ಸೌಲಭ್ಯಗಳು ಈ ವರ್ಷದ ಅಂತ್ಯದ ವೇಳೆಗೆ ಸಿರಿಯಾವನ್ನು ಪ್ರವೇಶಿಸುವ ನಿರೀಕ್ಷೆಯಿದೆ ಎಂದು ವಿಶ್ವಸಂಸ್ಥೆಯ ಆರೋಗ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹಾಗೆಯೇ ದುಬೈನಲ್ಲಿರುವ ಇಯು ದಾಸ್ತಾನುಗಳಿಂದ ಕಳುಹಿಸಲಾದ ವೈದ್ಯಕೀಯ ಸೌಲಭ್ಯಗಳು ಗುರುವಾರ ಇಸ್ತಾನ್‌ಬುಲ್‌ಗೆ ಬಂದಿಳಿದಿವೆ ಮತ್ತು ಮುಂದಿನ ದಿನಗಳಲ್ಲಿ ಗಡಿಗೆ ತಲುಪಿಸಲಾಗುವುದು ಎಂದು ದಕ್ಷಿಣ ಟರ್ಕಿಯ ವಿಶ್ವ ಆರೋಗ್ಯ ಸಂಸ್ಥೆಯ ಗಾಜಿಯಾಂಟೆಪ್ ಕಚೇರಿಯಿಂದ ಮೃಣಾಲಿನಿ ಸಂತಾನಂ ಅವರು ಎಎಫ್‌ಪಿಗೆ ತಿಳಿಸಿದ್ದಾರೆ.

ಇವುಗಳು 8,000 ತುರ್ತು ಶಸ್ತ್ರಚಿಕಿತ್ಸಾ ಕಿಟ್‌ಗಳು, ಅರಿವಳಿಕೆ ಸರಬರಾಜುಗಳು, IV ದ್ರವಗಳು, ಕ್ರಿಮಿನಾಶಕ ವಸ್ತುಗಳು ಮತ್ತು ರೋಗ ಹರಡುವುದನ್ನು ತಡೆಗಟ್ಟುವ ಔಷಧಿಗಳನ್ನು ಒಳಗೊಂಡಿವೆ. ಇಡ್ಲಿಬ್ ಮತ್ತು ಉತ್ತರ ಅಲೆಪ್ಪೊದಲ್ಲಿನ ಆರೋಗ್ಯ ವ್ಯವಸ್ಥೆಯನ್ನು ಬೆಂಬಲಿಸಲು ಇವುಗಳನ್ನು ಕಳುಹಿಸಲಾಗುವುದು ಎಂದು EU (ಯುರೋಪಿಯನ್ ಯೂನಿಯನ್) ಹೇಳಿದೆ.

2011ರಲ್ಲಿ ಪ್ರಾರಂಭವಾದ ಅಂತರ್ಯುದ್ಧವು  ಸಿರಿಯಾ ದೇಶ ಮತ್ತು ಆರೋಗ್ಯ ವ್ಯವಸ್ಥೆಯನ್ನು ಧ್ವಂಸಗೊಳಿಸಿತು. ಇಲ್ಲಿ ಅರ್ಧದಷ್ಟು ಆಸ್ಪತ್ರೆಗಳು ಈಗ ಕಾರ್ಯನಿರ್ವಹಿಸುತ್ತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮೃಣಾಲಿನಿ ಸಂತಾನಂ ಹೇಳಿದ್ದಾರೆ.

ದಕ್ಷಿಣ ಕೊರಿಯಾ: ಲ್ಯಾಂಡಿಂಗ್ ವೇಳೆ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು 62 ಪ್ರಯಾಣಿಕರ ಸಾವು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಂತರ್ ಮಂತರ್ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಕೇಜ್ರಿವಾಲ್ ಭೇಟಿ

ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಖ್ಯಾತ ಶಿಕ್ಷಣ ತಜ್ಞ ಹಾಗೂ ಪರಿಸರ...

E20 ಪೆಟ್ರೋಲ್ ಪ್ರಕರಣ : ‘ಗ್ರ್ಯಾಂಡ್ ವಿಟಾರಾ’ ಕಾರು ಬದಲಾಯಿಸಿ ಕೊಡಲು ಮಾರುತಿ ಸುಝುಕಿಗೆ ಗ್ರಾಹಕ ನ್ಯಾಯಾಲಯ ಆದೇಶ

ಛತ್ತೀಸ್‌ಗಢದ ರಾಯ್‌ಪುರದ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು (ಡಿಸಿಡಿಆರ್‌ಸಿ), E20 ಇಂಧನ (ಪೆಟ್ರೋಲ್) ಬಳಕೆಯಿಂದಾಗಿ ಕಾರು ಕೆಟ್ಟುಹೋಗಿದೆ ಎಂದು ಆರೋಪಿಸಿದ ವ್ಯಕ್ತಿಗೆ ಹೊಸ 'ಗ್ರಾಂಡ್ ವಿಟಾರಾ' ಕಾರನ್ನು ನೀಡುವಂತೆ ಕಾರು ತಯಾರಿಕಾ...

ಸಿಜೆಪಿ ಶಾಂತಿಯುತ ಪ್ರತಿಭಟನೆಗೆ ನಿರಂತರ ಪೊಲೀಸ್ ಕಣ್ಗಾವಲು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ಜಿರಳೆ ಜನತಾ ಪಕ್ಷ (ಸಿಜೆಪಿ) ಆಯೋಜಿಸಿರುವ ಶಾಂತಿಯುತ ಧರಣಿ ಮತ್ತು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವ ನಾಗರಿಕರ ಮೇಲೆ ದೆಹಲಿ ಪೊಲೀಸರು ನಿರಂತರ ಮತ್ತು ವ್ಯಾಪಕ ಕಣ್ಗಾವಲು...

IAS ಆಗುವ ಮುನ್ನ ‘ಪರಿಪೂರ್ಣ ತಾಯಿ’ಯಾಗಿ ಎಂದ ರಾಜ್ಯಪಾಲರ ಸಲಹೆ ಪುರುಷ ಪ್ರಾಧ್ಯಾನ್ಯತೆಯ ಮುಂದುವರೆದ ಆಚರಣೆ ಅಲ್ಲವೆ?

ಇತ್ತೀಚೆಗೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು, "ಮಹಿಳೆಯರು IAS ಅಧಿಕಾರಿ ಅಥವಾ ಶಿಕ್ಷಕಿಯಾಗುವ ಕನಸು ಕಾಣುವ ಮೊದಲು 'ಪರಿಣಿತ ತಾಯಿ' ಆಗುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದ್ದರು. ಕಾನ್ಪುರದ ಛತ್ರಪತಿ...

ಹಿಂದಿನ ಮದುವೆ, ಮಗು ವಿಚಾರ ಮುಚ್ಚಿಟ್ಟಿದ್ದಕ್ಕೆ ಸಹೋದರನೊಂದಿಗಿನ ಸಂಬಂಧ ಮುರಿದುಕೊಂಡಿದ್ದ ಕಾನೂನು ವಿದ್ಯಾರ್ಥಿನಿಯನ್ನು ಇರಿದು ಕೊಂದ ತಮ್ಮ

ಬೆಂಗಳೂರು: ಮೊದಲ ಮದುವೆ ಹಾಗೂ ಮಗುವಿದ್ದ ವಿಷಯವನ್ನು ಮುಚ್ಚಿಟ್ಟು ವಂಚಿಸಿದ್ದ ಪ್ರಿಯಕರನೊಂದಿಗಿನ ಸಂಬಂಧವನ್ನು ಮುರಿದುಕೊಂಡ ಕಾರಣಕ್ಕೆ, ಆತನ ಸಹೋದರನಿಂದಲೇ ಚಾಕು ಇರಿತಕ್ಕೊಳಗಾಗಿದ್ದ ಕಾನೂನು ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ...

ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ಅಮೆರಿಕ ದಾಳಿಗೆ ಇರಾನ್‌ನಿಂದ ಪ್ರತೀಕಾರ

ಕಳೆದ ಗುರುವಾರ (ಜು.16) ಖುಜೆಸ್ತಾನ್ ಪ್ರಾಂತ್ಯದಲ್ಲಿರುವ ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ, ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ವಾಯು ನೆಲೆಗಳ ಮೇಲೆ ಇರಾನ್ ಪ್ರತಿದಾಳಿ...

Lazarus To World Leaks : ಆತಂಕ ಸೃಷ್ಟಿಸಿದ ಕೂಡಂಕುಳಂ ಸೈಬರ್ ದಾಳಿಗಳು

ಭಾರತದ ಅತಿ ದೊಡ್ಡ ಪರಮಾಣು ವಿದ್ಯುತ್ ಕೇಂದ್ರವಾದ ತಮಿಳುನಾಡಿನ  ತಿರುನೆಲ್ವೇಲಿಯ ಕೂಡಂಕುಳಂ, ಕಳೆದ ಏಳು ವರ್ಷಗಳ ಅವಧಿಯಲ್ಲಿ ಎರಡು ಬಾರಿ ಪ್ರಮುಖ ಸೈಬರ್ ಭದ್ರತಾ ಆತಂಕಗಳಿಗೆ ಕೇಂದ್ರ ಬಿಂದುವಾಗಿದೆ. 2019ರ ಮೊದಲ ಘಟನೆಯು...

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ಪ್ರಶ್ನೆಗಳನ್ನು ಖರೀದಿಸಲು 5 ಲಕ್ಷ ರೂ. ಪಾವತಿಸಿದ್ದ ಲಾತೂರ್ ಕೋಚಿಂಗ್ ಮಾಲೀಕ: ನ್ಯಾಯಾಲಯಕ್ಕೆ ಸಿಬಿಐ ಮಾಹಿತಿ

ದೇಶಾದ್ಯಂತ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲಿಗೆ ತಳ್ಳಿದ ನೀಟ್ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ದಿನಕ್ಕೊಂದು ಆಘಾತಕಾರಿ ಸತ್ಯಗಳು ಹೊರಬರುತ್ತಿದ್ದು, ಇಡೀ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಈ ದಂಧೆಯ ಆಳ ಎಷ್ಟು...

ನಾನು ಸತ್ತರೂ ಪರ್ವಾಗಿಲ್ಲ, ಉಪವಾಸ ಹಿಂಪಡೆಯಲ್ಲ: ಜುಲೈ 20ರ ಸಂಸತ್ ಚಲೋಗೆ ವಾಂಗ್‌ಚುಕ್ ಕರೆ

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿನ ಸರಣಿ ಪರೀಕ್ಷಾ ಅಕ್ರಮ ಹಾಗೂ ನೀಟ್ (NEET) ಹಗರಣದ ವಿರುದ್ಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ತಕ್ಷಣವೇ...

ಉತ್ತರ ಪ್ರದೇಶ : ಮೊಹಮ್ಮದ್ ಅಲಿ ಜೌಹರ್ ವಿವಿಯ 38 ಕಟ್ಟಡಗಳನ್ನು ಕೆಡವಲು ಮುಂದಾದ ಸರ್ಕಾರ!

ಸಮಾಜವಾದಿ ಪಕ್ಷದ (ಎಸ್‌ಪಿ) ಮುಖಂಡ ಆಝಂ ಖಾನ್ ಅವರಿಗೆ ಸೇರಿದ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದ 38 ಕಟ್ಟಡಗಳನ್ನು ಕೆಡವಲು ಉತ್ತರ ಪ್ರದೇಶದ ರಾಂಪುರ ನಗರಾಭಿವೃದ್ಧಿ ಪ್ರಾಧಿಕಾರ (ಆರ್‌ಡಿಎ) ಆದೇಶಿಸಿದೆ ಎಂದು ಬುಧವಾರ...