Homeರಾಜಕೀಯಮೇರೆ ಪ್ಯಾರೇ ದೇಶ್‍ವಾಸಿಯೋಂ, ಭಾಯಿಯೋ ಔರ್ ಬೆಹನೋ,

ಮೇರೆ ಪ್ಯಾರೇ ದೇಶ್‍ವಾಸಿಯೋಂ, ಭಾಯಿಯೋ ಔರ್ ಬೆಹನೋ,

- Advertisement -
- Advertisement -

ಮೇರೆ ಪ್ಯಾರೇ ದೇಶ್‍ವಾಸಿಯೋಂ, ಭಾಯಿಯೋ ಔರ್ ಬೆಹನೋ, ಇವತ್ತು ನಂ ದೇಸುದಾಗೆ ಏನೇನ್ ಅನಾನುಕೂಲ ಆಗ್ಯದೆ ಅನ್ನೋದುನ್ನ ಮರತುಬಿಡಿ. ಅಜಮಾಸು ನಲುವತ್ತು ವರ್ಸುದ ಹಿಂದಿನ ಇತಿಹಾಸುವ ಒಸಿ ನ್ಯೆಪ್ತಿ ಮಾಡ್ಕಳಿ. ಅದುಕ್ಕೆ ಸಮಂಧಪಟ್ಟಂಗೆ ಜಾಗೃತ್ರಾಗಿ. ಅವುತ್ತು ಈ ದ್ಯೇಸುದ ಮ್ಯಾಕೆ ಎಮುರ್ಜೆನ್ಸಿ ಹ್ಯೇರಿದ್ದವುರು, ಅದುನ್ನು ವಿರೋಧಿಸಿದ್ದವುರು, ಇವತ್ತು ಕೇವುಲ ಅಧಿಕಾರುಕ್ಕಾಗಿ ಒಬ್ಬರ ಕೈಯೊಳಿಕ್ಕೆ ಮತ್ತೊಬ್ಬರು ಕೈ ಜ್ಯೋಡಿಸ್ಕ್ಯಂಡ ಕುಂತವುರೆ. ಅವುರಿಗೆ ತಕ್ಕುನ ಪಾಟ ಕಲುಸಿ. ಈಗ ನಾನು ಮೂರು ಸಲ ಎಮುರ್ಜನ್ಸಿ ಅಂತೀನಿ, ನೀವೆಲ್ಲ ಕೈಯೆತ್ತಿ ಅಂಗೇ ಆಕ್ಷುನ್ ಮಾಡ್ಕ್ಯಂತ ರಿಪೀಟ್ ಮಾಡಿ…..’
– ನರೇಂದ್ರ ಮೋದಿ, ಮಾತಿಗೆ ಮರುಳಾದ ದೇಶಕ್ಕೆ ಸಿಕ್ಕಿರೋ ದುಬಾರಿ ದೊರೆ

*****

ಅನಂತ್ಕುಮಾರ್ ಹೆಗುಡೆ ಒಬ್ಬ ಲೋಪರ್ರು ಕಣ್ರೀ… ನೀಚ ಕಣ್ರೀ… ಹುಬ್ಳಿಯಾಗೆ ಯಾರೋ ಹಾರುಸಿದ್ದ ಧ್ವಜುವಾ ನಾನೇ ಹಾರುಸಿದ್ದು ಅಂತ ಆರೆಸ್ಸೆಸ್ನೋರ ಸಭೆಗಳುಲ್ಲಿ ಹ್ಯೇಳ್ಕಂಡ ತಿರುಗ್ಯಾಡ್ತಾ ಅವುನೆ. ಅವುನು ಎಲ್ಲರಿಗೂ ಹೊಡುದವುನೆ. ಬೀಜೇಪಿ ಪಾಲ್ಟಿ ಆಪಿಸ್ನಾಗೇ ಆ ಇಸ್ವೇಸ್ವರ ಹೆಗುಡೆ ಕಾಗೇರಿಗೆ ಯಕ್ಕಡಾ ತಕೊಂಡು ಹೊಡುದಿದ್ದ. ಅವುನಂಥಾ ನೀಚ ಇಡಿ ದೇಸುದಾಗೇ ಯಾರು ಇಲ್ಲ ಬಿಡಿ. ಅವುನು ನಂ ಜಿಲ್ಲೆಗೆ ಸಂಸುದ ಆಗ್ಯಿರೋದೆ ದುರಂತ’
– ಆನಂದ್ ಆಸ್ನೋಟಿಕರ್, ಕರಾವಳಿ ಭಾಗದ ಜೆಡಿಎಸ್ ಪಳೆಯುಳಿಕೆ

*****

ಈ ತಾಜಮಹಲು ಏನ್ ಇದ್ಯೆಲಾ, ಅದು ಅಕ್ಚುಲೀ ಸಿವುನ ದ್ಯೇವುಸ್ತಾನುವಂತೆ. ಅಂಥಾ ದ್ಯೇವುಸ್ತಾನ ಕಂ ಮಹಲುನ್ನ ಹೊಡೆಯೋಕ್ಕೆ ಅಂತ ನಂ ಯೂಪಿ ಸೀಎಂ ಸ್ವಾಮಿಗೊಳಾದ ಆದಿತ್ಯನಾಥುರು ಹೊಂಟವುರೆ. ಅವುರೇನಾದ್ರು ದಿಟವಾಗ್ಲೂ ಆ ಕ್ಯೆಲುಸಕ್ಕೆ ಕೈ ಹಾಕುದ್ರೆ, ಅದುಕ್ಕೆ ಹ್ಯೆಗಲು ಕ್ವೊಡಕ್ಕೆ ನಾನೂ ಸಿದ್ದ. ಬೇಕಾರೆ ಬೀಜೇಪಿಗೂ ಸೇರ್ಕಂಬುಡ್ತೀನಿ. ಜ್ವತೀಗೆ ಇಪ್ಪತ್ತು ಸಾವುರ ಜನಾನು ಕರ್ಕಂಬತ್ತೀನಿ. ಈ ಆಪರ್ರು ಒಪ್ಕಂಡಾರಾ ನಂ ಯೂಪಿ ಸೀಎಂ…
– ಆಜಂ ಖಾನ್, ಸಮಾಜವಾದಿ ಪಾರ್ಟಿಯ ಕಾಂಟ್ರವರ್ಸಿಯಲ್ ಕಿಲಾಡಿ

*****

ನಂ ಕರ್ನಾಟುಕದಲ್ಲಿರೋ ಪರಬಾಸಿಕರನ್ನ ನಡು ರಸ್ತೇನಾಗೇ ಸುಟ್ಟು ಹಾಕ್ಬೇಕು ಕಣ್ರೀ. ಅವುರೆಲ್ಲ ಇಲ್ಲಿಗೆ ಬಂದು ವಕ್ಕರಿಸಿಕ್ಯಂಡಿದ್ದುರಿಂದ್ಲೇ ಬೆಂಗ್ಳೂರು ನಂ ಕೈತ್ಯೆಪ್ಪಿ ಹೋಗೈತಿ. ಅವುರನ್ನು ಇಲ್ಲಿಂದ ಹೊರಕ್ಕೆ ದೂಡಕ್ಕೆ ನಾವೆಲ್ಲ ಮತ್ತೆ ಚಳುವಳಿ ಸುರು ಮಾಡ್ಬೇಕಾಗೈತಿ. ಜೈ ಕನ್ನುಡಾಂಬೆ…                                                                                  – ವಾಟಾಳ್ ನಾಗರಾಜ್, ವಿಚಿತ್ರ ಚಳುವಳಿಗಳ ಸಚಿತ್ರ ಕಾರ್ಟೂನ್

*****

ನಾ ಹ್ಯೇಳ್ತೀನಿ ಕ್ಯೇಳಿ, ಈ ಸಮ್ಮಿಸ್ರು ಸರ್ಕಾರ ಬಾಳ ದಿನ ಉಳಿಯಂಗಿಲ್ಲ. ಯಾಕಂದ್ರೆ ನಂ ಬಳ್ಳಾರಿ ರಾಜ್ಯುದ ಇತಿಹಾಸುದಾಗೆ ಯಾವ ಕೊಲೀಷನ್ ಗೋರ್ಮೆಂಟೂ ಪುಲ್‍ಟೇಮು ಅಧಿಕಾರುವ ಮಾಡಿದ ಎಜ್ಜಾಂಪಲ್ಲೇ ಇಲ್ಲ. ಅಂತದ್ರಾಗೆ ಇವುರು ಮಾಡ್ಯಾರಾ? ನೋ ಚಾನ್ಸ್. ಬಿದ್ದೋಯ್ತರೆ ನೋಡ್ತಾ ಇರಿ…
– ಬೀ ಶ್ರೀರಾಮುಲು, ಬಿಜೆಪಿಯ ಗಡ್ಡಧಾರಿ ಅವತಾರ ಪುರುಷ

*****

ಈ ಮಠಾಧೀಸರು ಏನವುರಲ್ಲ, ಅವುರು ಅಧಿಕಾರ ಇದ್ದಕಡೀಕೆ ವಾಲಿಕ್ಯಂತಾರೆ. ಜನುರ ಕಷ್ಟ ಸುಖದ ಬಗ್ಗೆ ಮಾತಾಡೋದು ಬುಟ್ಟು, ರಾಜಕಾರಣುದಾಗೆ ಮೂಗು ತ್ವೂರ್ಸಕ್ಕೆ ಬತ್ತಾರಲ್ಲ, ಇವ್ರಿಗೆ ಏನನ್ನಬೇಕು? ಇವತ್ತು ಸಿದ್ರಾಮಯ್ಯುನ ಪರುವಾಗಿ ಮಾತಾಡೊ ಕುರುಬರ ಸ್ವಾಮಿ, ಅವತ್ತು ಇದೇ ಸಿದ್ರಾಮಯ್ಯ ನನಿಗೆ ಅನ್ಯಾಯ ಮಾಡುವಾಗ ಎತ್ತಗೋಗಿದ್ರು. ಯಾಕೆ, ನಾನು ಕುರುಬನಲ್ಲುವಾ…?
– ಎಚ್ಚ್ ವಿಶ್ವನಾಥ್, ಗೌಡರ ಹಟ್ಟಿಯ ನಿರಾಶ್ರಿತ ಶಿಬಿರದ ಫಲಾನುಭವಿ

*****

ಸ್ವಿಸ್ ಬ್ಯಾಂಕಿನಾಗೆ ಇಟ್ಟಿರೋ ಭಾರತೀಯರ ಹಣ ಕಳುದ ವರ್ಸ ಡಬಲ್ ಆಗ್ಯದೆ ಅನ್ನೋ ಸುದ್ದಿ ನನಿಗೂ ಬಂದದೆ. ಹಾಗಂತ ಅದು ಬ್ಲ್ಯಾಕ್ ಮನಿ ಅಲ್ಲಾ ಕಣ್ರೀ. ನಂ ಎನ್ನಾರೈಗಳು ಶ್ಯಾನೆ ಕಸ್ಟಪಟ್ಟು ದುಡುದು ಕೂಡಿಟ್ಟ ನ್ಯಾಯಬದ್ಧ ಹಣ ಆಗಿರ್ಬೈದಲ್ವಾ. ಯಾಕ್ರೀ ನಂ ಜನುಕ್ಕೆ ಕನ್‍ಫ್ಯೂಜ್ ಮಾಡ್ತೀರಾ?
– ಪಿಯೂಷ್ ಗೋಯೆಲ್, ಬ್ಲ್ಯಾಕ್‍ಮನಿ ಸ್ಪೆಷಲಿಸ್ಟ್
ಮೋದಿ ಸಂಪುಟದ ಮನಿ ಮಂತ್ರಿ

*****

ಲುಕ್ ಮೈ ಡಿಯರ್ ಫ್ರೆಂಡ್ಸ್, ಒಂದು ಸತ್ಯುವ ಹ್ಯೇಳ್ತೀನಿ ಅರುಗಿಸಿಕೊಳ್ಳಿ. ನಾವು ಇವತ್ತು ಪ್ಲ್ಯಾಸ್ಟಿಕ್ ಕುರ್ಚಿನಾಗೆ ಕೂತ್ಕಂಡಿರೋದ್ಕೆ ಆ ಕಾಂಗ್ರೆಸ್ ಪಾಲ್ಟಿಯೇ ಕಾರುಣ. ಅಕಸುಮಾತ್ ಎಪ್ಪತ್ತು ವರ್ಸುದ ಹಿಂದೆಯೇ ದೇಸುದಾಗೆ ಬೀಜೇಪಿ ಅಧಿಕಾರುಕ್ಕೆ ಬಂದಿದ್ದ್ರೆ ಎಲ್ರೂ ಬ್ಯೆಳ್ಳಿ ಕುರ್ಚಿನಾಗೆ ಕುಂತ್ಕಂಡಿರ್ತಿದ್ವಿ. ಎಲ್ಡು ಸಾವುರದ ಹತ್ರೊಂಬ್ವತ್ತರ ಎಲೆಕ್ಸೆನ್ನಾಗೆ ಒಂದು ಹ್ವುಲೀನ ಸೋಲುಸಕ್ಕೆ ಕಾಗ್ಯಣ್ಣ, ನರಿಯಣ್ಣ, ತ್ವಾಳಣ್ಣ, ಕರಿಡ್ಯಣ್ಣಗಳು ಒಂದಾಗ್ಯವೆ. ಈ ಕತ್ತೆಕ್ಯಿರುಬಗಳು ಗ್ಯೆಲ್ಲಬೇಕೊ, ಅಥುವಾ ನಂ ಹ್ವುಲಿ ಗ್ಯೆಲ್ಲಬೇಕೊ ನೀವೇ ಡಿಸೈಡ್ ಮಾಡಿ…
– ಅನಂತ್‍ಕುಮಾರ್ ಹೆಗಡೆ, ನಾಲಿಗೆ ನರದ ಸ್ವಾಧೀನ ಕಳೆದುಕೊಂಡಿರುವ ಕೇಂದ್ರ ಮಂತ್ರಿ

*****

ಒಬ್ಬೊಬ್ರ ಅಕೋಂಟಿಗೂ ಹದುನೈದು ಲಕ್ಸುವ ರೊಕ್ಕ ಹಾಕ್ತೀನಿ ಅಂತ ಎಲೆಕ್ಸನ್ ಟೇಮಿನಾಗೆ ಹ್ಯೇಳಿ, ಕಡೀಕೆ ಹದುನೈದ್ರುಪಾಯುನೂ ಹಾಕದ ಮ್ವೋದಿಯವುರಿಗೆ ನಂ ಸೀಎಂ ಕುಮಾರ್ಸೋಮಿ ಬಗ್ಗೆ ಮಾತಾಡಕ್ಕೆ ಅದೆಂತದೋ ಅಂತಾರಲ್ಲ, ಅದು ಇಲ್ಲ ಕಣ್ರೀ. ಸೋನ್ಯಾ ಗಾಂದಿ, ರಾಹುಲ್ ಗಾಂದಿ ಇಬ್ರೂನುವೆ, ಬೇಸರತ್ ಬೆಂಬುಲವ ಕೊಡ್ತೀವಿ ನೀವು ಜೇಡಿಯೆಸ್ ಗೋರ್ಮೆಂಟ್ ಮಾಡ್ಕಳಿ ಅಂತ ಹ್ಯೇಳಿದ್ದ್ರು. ಆದ್ರೆ ನಂ ದ್ವೊಡ್ಡಗೌಡ್ರು ಬ್ಯಾಡ, ಬ್ಯಾಡ ಇಬ್ರೂ ಕೂಡೇ ಸರ್ಕಾರುವ ಮಾಡನ ಅಂತೇಳಿದ್ದುಕ್ಕೆ ಇವತ್ತು ಸಮ್ಮಿಸ್ರು ಸರ್ಕಾರ ಆಗ್ಯದೆ. ಅದು ಐದು ವರ್ಸ ಅಲ್ಲಾಡಕಿಲ್ಲ ನೋಡ್ತಾ ಇರಿ…
– ಸಾರಾ ಮಹೇಶ್, ಮೇಡಂ ಭವಾನಿಯವರ ಕೃಪಾಶೀರ್ವಾದ ಇರುವ ಜೆಡಿಎಸ್ ಮಂತ್ರಿ

*****

ನಂ ಮ್ವೋದಿ ಸಾಹೇಬ್ರು ಪರ್ದಾನಿಯಾದ ಮ್ಯಾಕೆ ದ್ಯೇಸ ಶ್ಯಾನೆ ಅಭಿರುದ್ದಿ ಆಗ್ಯದೆ. ಕಳುದ ಎಂಟೇ ತಿಂಗ್ಳಾಗೆ ನಲ್ವತ್ತ್ವೊಂದು ಲಕ್ಸ ಉದ್ಯೋಗ ಹುಟ್ಕ್ಯಂಡವೆ ಮಹಾಸಯುರೆ. ಯಪ್ಪತ್ತು ವರ್ಸುದಿಂದ ಉದ್ದಾರುವೇ ಆಗುದೇ ಹಾಳು ಕ್ವೊಂಪ್ಯೆಯಾಗಿದ್ದ ಈಶಾನ್ಯುದ ರಾಜ್ಯಗಳು ಮ್ವೋದಿಯವುರ ಆಡಳಿತುದಾಗೆ ಯಾಪಾಟಿ ಉದ್ದಾರ ಆಗ್ಯವೆ ಅಂದ್ರೆ, ನಂಗೆ ಯೋಳಕ್ಕೆ ಮಾತ್ವುಗಳೇ ಬತ್ತಿಲ್ಲ ಕಣ್ರೀ, ಆಹ್ಞಾ…ಹಾ.. ಹಾ.. ಇಲ್ನೋಡಿ ಥೇಟು ನನ್ ಹಲ್ಲುಗುಳ ಥರಾ ಹೊಳೀತಾ ಕುಂತವೆ. ಇನ್ನು ಸಿಟಿಗುಳಂಗೆ ನಂ ಹಳ್ಳ್ಯಿಗುಳೂ ಸಿಕ್ಕಾಪಟ್ಟೆ ಇಂಪ್ರೂವ್ ಆಗ್ಯವೆ..
– ಡಿ.ವಿ.ಸದಾನಂದ ಗೌಡ, ಅಳುವಾಗ್ಲೂ ನಗುತ್ತಿರುವಷ್ಟೇ ಕಳೆಯಿಂದ
ಕಾಣುವ ಬಿಜೆಪಿಯ ವಜ್ರದಂತಿ ಸಚಿವ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...