Homeಸಿನಿಮಾಅಮ್ಮನ ಪ್ರೀತಿಯಲ್ಲಿ ಬದುಕಿನ ಬಿಚ್ಚುನೋಟ....

ಅಮ್ಮನ ಪ್ರೀತಿಯಲ್ಲಿ ಬದುಕಿನ ಬಿಚ್ಚುನೋಟ….

- Advertisement -
- Advertisement -
ಕನ್ನಡಿಗರು ಭಾವನಾ ಜೀವಿಗಳು, ಕರ್ನಾಟಕದಲ್ಲಿ ಭಾವನೆಗಳಿಗೆ ಬೆಲೆ ಜಾಸ್ತಿ ಎಂಬ ಮಾತುಗಳು ಚಿತ್ರರಂಗದಲ್ಲಿ ಬಹಳ ಕಾಲದಿಂದಲೂ ಕೇಳಿಬರುತ್ತಿದೆ. ಅಂತೆಯೇ ಕೆಲವು ಸಿನಿಮಾಗಳಲ್ಲಿ ಕನ್ನಡಿಗರು ಸೆಂಟಿಮೆಂಟಲ್ ಫೂಲ್ಸ್ ಎಂದೂ ಸಹ ನಯವಾಗಿ ಬೈಸಿಕೊಂಡಿರುವುದೂ ಇದೆ. ಕನ್ನಡ ಚಿತ್ರರಂಗವು ಸೆಂಟಿಮೆಂಟ್‍ಗೆ ಹೆಚ್ಚು ಹೊತ್ತು ಕೊಡುತ್ತಾ ಬಂದಿದೆ, ಸಂಬಂಧಗಳ ಭಾವನೆಗಳನ್ನಿಟ್ಟುಕೊಂಡು ಮಾಡಿದ ಸಿನಿಮಾಗಳು ಫೈಲ್ ಆಗಿದ್ದೇ ಇಲ್ಲ.
ಅದರಲ್ಲೂ ತಾಯಿಯ ಪ್ರೀತಿ ವಾತ್ಸಲ್ಯಕ್ಕೆ ಬೆಲೆ ಕಟ್ಟಲಾಗದಷ್ಟು ಅನುಕಂಪ. ಅಮ್ಮ ಎಂದರೆ ಸ್ಥೈರ್ಯ, ಅಮ್ಮಾ ಎಂದರೆ ಅನುಕಂಪ, ತಾಯಿಯೇ ಸ್ಫೂರ್ತಿ ಎಂಬ ಹೆಗ್ಗಳಿಕೆ ಕನ್ನಡಿಗರದು. ಹೆತ್ತವಳು ಕಣ್ಣೆದುರೇ ಮರೆಯಾಗುತ್ತಾಳೆಂದಾಗ ಅವಳನ್ನು ಉಳಿಸಿಕೊಳ್ಳಲು ಮಗನ ಒದ್ದಾಟ ಹಾಗೂ ತಳಮಳವನ್ನು ಕಥೆಯನ್ನಾಗಿಟ್ಟುಕೊಂಡು ನಿರ್ದೇಶಕ ಕೆ.ಎಂ.ಚೈತನ್ಯ ‘ಅಮ್ಮ ಐ ಲವ್ ಯೂ’ ಸಿನಿಮಾ ಮಾಡಿದ್ದಾರೆ.
ಪ್ರೀತಿಯ ಪ್ರಜ್ಞೆಯನ್ನು ಕೇಂದ್ರವಾಗಿಟ್ಟುಕೊಂಡಿರುವ ಈ ಚಿತ್ರ ಅಮ್ಮ ಮಗನ ಸೆಂಟಿಮೆಂಟ್ ಅಷ್ಟೇ ಅಲ್ಲದೆ ಸಮಾಜದ ಹಲವು ಸಂಬಂಧಗಳನ್ನು ಬೆಸೆಯುವ ಮಾನವೀಯ ಮೌಲ್ಯಗಳನ್ನು ಒಳಗೊಂಡಿದೆ. ಭಿಕ್ಷುಕರ ಬದುಕಿನ ತೊಳಲಾಟದೊಂದಿಗೆ ಬದುಕಿನ ಅರ್ಥವನ್ನು ಕಟ್ಟಿಕೊಟ್ಟಿದೆ.
ಸಿದ್ದಾರ್ಥ್ ತನ್ನ ಹೆತ್ತ ತಾಯಿ ಸಾವು ಬದುಕಿನ ನಡುವೆ ಹೋರಾಟ ಮಾಡುವಾಗ ಅವಳನ್ನು ಉಳಿಸಿಕೊಳ್ಳಲು ಹಲವು ಆಸ್ಪತ್ರೆಗಳನ್ನು ಸುತ್ತಿದರು ತಾಯಿ ಗುಣಮುಖಳಾಗದಿದ್ದ ಚಿಂತೆಯಲ್ಲಿದ್ದವನು ಒಬ್ಬ ಸನ್ಯಾಸಿಯ ಮಾತು ಕೇಳಿ ತನ್ನ ವೈಚಾರಿಕತೆಯನ್ನು ಬದಿಗೊತ್ತಿ ಶ್ರೀಮಂತಿಯ ವೇಷ ಮರೆಸಿ ಭಿಕ್ಷುಕನ ವೇಷ ಧರಿಸಿ ಭಿಕ್ಷಾಟನೆಯ ಅಜ್ಞಾತವಾಸಕ್ಕೆ ತೆರಳುತ್ತಾನೆ, ಇಲ್ಲಿ ತಾಯಿಯ ಮೇಲಿನ ಮಮತೆ ಔಷಧಿಗಳಿಂದ ಸಾಧ್ಯವಾಗದ್ದು ಹರಕೆಯಿಂದ ಸಾಧ್ಯವೇ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಲಾರದು. ಇಂತಹ ಸಂದರ್ಭಗಳು ಜನರು ಮೌಢ್ಯದ ಮೊರೆಹೊಗುವ ಪರಿಸ್ಥಿತಿಗೆ ಕನ್ನಡಿ ಇಟ್ಟಂತೆ ತಿಳಿಸುತ್ತವೆ.
ಆ ದಿನಗಳಲ್ಲಿ ಭಿಕ್ಷುಕರ ನೋವು-ನಲಿವು, ಅವರು ಎದುರಿಸುವ ಮಾನಸಿಕ ದೈಹಿಕ ಹಿಂಸೆಗಳನ್ನು ಬಿಡಿಸಿಟ್ಟಿರುವ ಚಿತ್ರ, ಭಿಕ್ಷುಕರೆಂದರೆ ಅಸಹ್ಯ ಪಡುವ ಜನರು ಹಾಗೂ ಕೆಲವು ಸಿನಿಮಾಗಳನ್ನು ನೋಡಿ ಭಿಕ್ಷುಕರು ಭಾರಿ ಸಂಪಾದಿಸುತ್ತಾರೆಂದು ಅವರನ್ನು ದೂಷಿಸುವ ಜನರಿಗೆ ಭಿಕ್ಷುಕರನ್ನು ಕಾಮೆಡಿ ಸೀನ್‍ಗಳಾಗಿ ತೋರುವ ಬೇರೆಲ್ಲ ಸಿನಿಮಾಗಳಿಗಿಂತ ಭಿಕ್ಷುಕರ ಬದುಕಿನ ನೈಜತೆಯನ್ನು ಚಿತ್ರಿಸಿದೆ. ಭಿಕ್ಷುಕರೂ ಮನುಷ್ಯರೇ ಅವರಿಗೂ ಒಂದು ಬದುಕಿದೆ, ಉಳ್ಳವರ ಮಧ್ಯೆ ಅವರ ದೌರ್ಜನ್ಯಗಳಿಂದ ತೊಳಲಾಡುವ ಇಲ್ಲದವರ ಬದುಕಿನ ಪ್ರತಿಬಿಂಬವಾಗಿ ಭಿಕ್ಷುಕರ ಬದುಕು ಕಾಣದೆ ಇರಲಾರದು.
ಮಾಲೀಕನ ಕೈ ಕೆಳಗೆ ದುಡಿದು ಕಷ್ಟದ ದಿನಗಳಲ್ಲಿ ಎದುರಿಸಿ ಉದ್ಯಮಿಯಾಗಿ ಬೆಳೆದುಬಂದ ಸಿದ್ದಾರ್ಥನ ತಾಯಿ, ಕಂಪನಿಯ ಮಾಲಕಿಯಾಗಿ, ದುಡಿಯುವ ಜನರ ಸ್ನೇಹಿತೆಯಾಗಿದ್ದು, ನೌಕರರನ್ನು ರೋಬೋಟ್‍ಗಳಂತೆ ದುಡಿಸಿಕೊಳ್ಳುವ ವ್ಯವಸ್ಥೆಯೊಳಗೆ ಕಷ್ಟದ ಅರಿವಿರುವ ತಾಯಿ ತನ್ನ ಕಂಪನಿಯಲ್ಲಿ ದುಡಿಯುವ ಶ್ರಮಿಕರ ಹಿತವನ್ನೂ ಕಾಯುವ, ಅವರ ಬದುಕಿನಲ್ಲಿ ನೆರವಾಗುತ್ತಾ ಎಲ್ಲರನ್ನೂ ನಿಸ್ವಾರ್ಥವಾಗಿ ಒಳಗೊಳ್ಳುವಳು, ಈ ಒಳಗೊಳ್ಳುವಿಕೆ ಇಲ್ಲದವರ ಶ್ರಮದಿಂದ ಉಳ್ಳವರು ಕಟ್ಟಿಕೊಳ್ಳುವ ಮೊಹಲ್ಲಗಳ ಮಧ್ಯೆ ಸದೃಢ ಸಮಾಜದಲ್ಲಿ ದುಡಿಯುವ ಕೈಗಳಿಸಿ ತಮ್ಮ ಶ್ರಮಕ್ಕೆ ಸಿಗಬೇಕಾದ ಪಾಲಿನ ಸಂಕೇತವಾಗಿದೆ. ತಮ್ಮ ದುಡಿವ ಕೈಗಳಿಗೆ ಕೆಲಸಕೊಟ್ಟ ಅವಳ ಉಳಿವಿಗಾಗಿ ಪ್ರಾರ್ಥಿಸುವ ಸಿಬ್ಬಂದಿಗಳು, ಮಾಲಿಕ ಮತ್ತು ಶ್ರಮಿಕರ ಹೊಂದಾಣಿಕೆಗೆ ಸ್ಪೂರ್ತಿ ತುಂಬುತ್ತದೆ.
ಮತ್ತೊಂದೆಡೆ ಇಂದಿನ ಯುವಜನರು ಸಮಾಜದಲ್ಲಿ ಮಾಡಬೇಕಾದ ಸಹಾಯಾಸ್ತದ ಕನಿಷ್ಟ ಮೌಲ್ಯವನ್ನು ತೋರಿಸುವ ನಾಯಕಿಯ ಪಾತ್ರ, ತಾಯಿಗಾಗಿ ಭಿಕ್ಷೆ ಬೇಡುವ ಪ್ರೇಮಿಯ ಪ್ರೀತಿ ಬಯಸುವ ಪ್ರೇಯಸಿ. ಈ ಎಲ್ಲಾ ಪಾತ್ರಗಳೂ ಜೀವನ ಸಂಗ್ರಾಮದ ಹಲವು ದಿಕ್ಕುಗಳನ್ನು ತೋರುತ್ತವೆ.

ಪ್ರೀತಿ, ಮಮತೆಯ ಹುಡುಕಾಟದೊಂದಿಗೆ ಸಾಗುವ ಚಿತ್ರ ನೋಡುಗರ ಮನತಟ್ಟುವ ಕಥಾಹಂದರವನ್ನು ಒಳಗೊಂಡಿದೆ. ಆದರೆ ಇಂತಹ ಕತೆಯನ್ನು ತೆರೆಯ ಮೇಲೆ ನಿರೂಪಿಸುವಾಗ ಪ್ರೇಕ್ಷಕರ ಮನಸಲ್ಲಿ ಕ್ಯೂರಿಯಾಸಿಟಿಯನ್ನಾಗಲಿ ಅಥವಾ ನೋಡುಗರ ಗಮನ ಮತ್ತೊಂದೆಡೆಗೆ ಜಾರದಂತೆ ತನ್ನತ್ತ ಸೆಳೆದಿಟ್ಟುಕೊಳ್ಳುವಲ್ಲಿ ತಂಡ ಕೊಂಚ ಎಡವಿದೆಯಾದರೂ, ಭಿಕ್ಷುಕನ ಪಾತ್ರದಲ್ಲಿ ಚಿರು, ಹಾಗೂ ನಾಯಕಿಯಾಗಿ ಹೊಸ ನಟಿ ನಿಶ್ಚಿಕಾ ಸೌಂದರ್ಯ ಉತ್ತಮ ಅಭಿನಯ ನೀಡಿದ್ದಾರೆ.


ಕಳೆದುಹೋದ ಖಳನಾಯಕ

ವಿಷ್ಣುವರ್ಧನ್, ಅಂಬರೀಶ್, ಶಿವರಾಜ್‍ಕುಮಾರ್‍ರಂಥಹ ಕನ್ನಡ ಚಿತ್ರರಂಗದ ದಿಗ್ಗಜರೊಂದಿಗೆ ಖಳನಾಯಕನಾಗಿ ಅಭಿನಯಿಸುತ್ತಿದ್ದ ಧೀಮಂತ ಕಲಾವಿದ, ಖ್ಯಾತ ನಾಟಕಕಾರ ಸದಾಶಿವ ಸಾಲ್ಯನ್ ಇಹಲೋಕ ತ್ಯಜಿಸಿದ್ದಾರೆ. 1988ರಲ್ಲಿ ತುಳು ಭಾಷೆಯ ‘ಭಾಗ್ಯವಂತೆದಿ” ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಸಾಲ್ಯನ್ ಕನ್ನಡ, ತುಳು, ಹಿಂದಿ, ಮರಾಠಿ ಭಾಷೆಯಲ್ಲಿ ಸುಮಾರು 50 ಚಿತ್ರಗಳಲ್ಲಿ ಅಭಿನಯಿಸಿದ್ದರು, 500ಕ್ಕೂ ಹೆಚ್ಚು ರಂಗ ಪ್ರಯೋಗಗಳಲ್ಲ್ಲಿ ಅಭಿನಯಿಸಿದ ಮುಂಬೈ-ಕರ್ನಾಟಕದ ಏಕೈಕ ರಂಗಕಲಾವಿದನೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಮುಂಬೈನಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಉದ್ಯೋಗಿಯೂ ಆಗಿದ್ದ ಇವರು 2004ಅಲ್ಲಿ ಸಂಭವಿಸಿದ ಅಪಘಾತದಲ್ಲಿ ಕಾಲಿನ ಸ್ವಾಧಿನ ಕಳೆದುಕೊಂಡು ಕಷ್ಟದ ಜೀವನ ಸಾಗಿಸುತ್ತಿದ್ದವರು.


ಕುಂಬಳಕಾಯಿ ಕಳ್ಳ ಕೋಕಿಲ?
ಸಿನಿಮಾ ರಂಗದ ಸ್ಟಾರ್‍ಗಳು, ನಿರ್ದೇಶಕರು, ನಿರ್ಮಾಪಕರಿಗಾಗಲೀ ಭೂಗತ ಪಾತಕಿಗಳೊಂದಿಗಿನ ಒಡನಾಟ ಮಾಮೂಲಿಯಾದದ್ದು. ಎಷ್ಟೋ ನಿರ್ಮಾಪಕರೇ ರೌಡಿ ಶೀಟರ್ ಬ್ಯಾಗ್ರೌಂಡ್ ಹೊಂದಿರುತ್ತಾರೆ. ಇದಕ್ಕೆ ಕನ್ನಡ ಚಿತ್ರರಂಗವೂ ಹೊರತಲ್ಲ. ಅಂತೆಯೇ ಬೆಂಗಳೂರಿನ ಕುಖ್ಯಾತ ರೌಡಿ ಶೀಟರ್ ಸೈಕಲ್ ರವಿಯನ್ನು ಬಹಳ ದಿನಗಳಿಂದ ಹುಡುಕುತ್ತಿದ್ದ ಸಿಸಿಬಿ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆಯಲ್ಲಿ ರೌಡಿ ರವಿ ಜತೆ ಹಾಸ್ಯನಟ ಸಾಧುಕೋಕಿಲ ಒಡನಾಟ ಇಟ್ಟುಕೊಂಡಿದ್ದರೆಂದು ಯಾರೋ ಹಬ್ಬಿಸಿದ
ಗಾಳಿಸುದ್ದಿಯನ್ನು ಕೇಳಿ ಹೆದರಿದ ಸಾಧು ಸಿಸಿಬಿ ಕಚೇರಿಗೆ ದೌಡಾಯಿಸಿದ್ದಾರೆ. ನನಗೂ ರೌಡಿಗೂ ಯಾವ ಸಂಬಂಧವೂ ಇಲ್ಲ, ಈ ಪ್ರಕರಣದಲ್ಲಿ ನನ್ನ ಹೆಸರು ಬರುತ್ತಿದೆಯಂತೆ ಎಂದು ಅಧಿಕಾರಿಯ ಎದುರು ಕುಂಯ್ಯೋಮರ್ರೋ ಎಂದರಂತೆ. ಅದಕ್ಕೆ ಆ ಅಧಿಕಾರಿ ನಿನಗೆ ರೌಡಿಯ ಜತೆ ಒಡನಾಟವಿದೆ ಎಂದು ನಾವು ಎಲ್ಲಿಯೂ ಹೇಳಿಲ್ಲ, ಹೇಳೋಕೆ ಯಾವ ಪುರಾವೆಯೂ ಇಲ್ಲ, ‘ಕುಂಬಳಕಾಯಿ ಕಳ್ಳ ಅಂದ್ರೆ ನೀನ್ಯಾಕೆ ಹೆಗಲು ಮುಟ್ಟಿ ನೋಡ್ಕೋತೀಯಾ’, ಹಾಗೇನಾದರೂ ಇದ್ದರೆ ನಾವೆ ಕರೆಯುತ್ತಿದ್ದೆವು ಎಂದು ಮಂಗಳಾರತಿ ಮಾಡಿ ಕಳಿಸಿದ್ದಾರೆ. ಸಾಧುವಿನ ಈ ಅತಿಗಾಬರಿಯ ವರ್ತನೆ ಅದ್ಯಾವುದೋ ಕೆಟ್ಟ ಕ್ಷಣಗಳ ಮುನ್ಸೂಚನೆಯಂತೆ ಕಾಣುತ್ತಿದೆ. ಹಾಗೇನಾದರೂ ಸಾಧು ಇಂತಹ ಕ್ರಿಮಿನಲ್‍ಗಳ ಒಡನಾಟ ಇಟ್ಟುಕೊಂಡಿದ್ದರೆ, ಅಂತಹವುಗಳನ್ನು ಕತ್ತರಿಸಿಕೊಂಡು ಹೊರಬರಲಿ. ಯಾಕೆಂದರೆ, ಅವರ ಪ್ರತಿಭೆಗೆ ಈ ಬಗೆಯ ಮಸಿ ಹತ್ತಿಕೊಂಡು ಮಂಕಾಗುವುದು ಯಾರಿಗೂ ಇಷ್ಟವಿಲ್ಲ.
– ಸೋಮಶೇಖರ್ ಚಲ್ಯ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...