Homeಮುಖಪುಟಪ್ರೀತಿಸುವ ಕಲೆ - ಎರಿಕ್ ಫ್ರಾಂ : ಯೋಗೇಶ್ ಮಾಸ್ಟರ್

ಪ್ರೀತಿಸುವ ಕಲೆ – ಎರಿಕ್ ಫ್ರಾಂ : ಯೋಗೇಶ್ ಮಾಸ್ಟರ್

- Advertisement -
- Advertisement -

ಜಗತ್ತಿನಲ್ಲಿ ಅಗತ್ಯದ ಅಥವಾ ಸಾಂತ್ವನ ನೀಡುವಂತಹ ಅನೇಕ ಪರಿಕಲ್ಪನೆಗಳು ಅಪವ್ಯಾಖ್ಯಾನಕ್ಕೆ ಒಳಗಾಗಿವೆ. ದೇವರು, ಧರ್ಮ, ಸಂಬಂಧಗಳ ಮೌಲ್ಯ, ರಾಜಕೀಯ, ಸಂಸ್ಕೃತಿ ಇತ್ಯಾದಿಗಳಂತೆ ಪ್ರೀತಿಯೂ ಕೂಡಾ.

ಮೋಹ, ಕಾಮ, ವ್ಯಾಮೋಹ, ಇಷ್ಟ ಇತ್ಯಾದಿಗಳನ್ನೆಲ್ಲಾ ಪ್ರೀತಿ ಎಂದುಕೊಂಡುಬಿಡುವ ಉದಾಹರಣೆಗಳಿವೆ. ಹಾಗೆಯೇ ಪ್ರೀತಿಯೆಂದುಕೊಂಡು ವ್ಯಕ್ತಿಗೋ, ಸಿದ್ಧಾಂತಕ್ಕೋ ಅಥವಾ ಇನ್ನಾವುದಕ್ಕೋ ಅಂಟಿಕೊಂಡು ಅದು ಗೀಳಾಗಿ ಮನೋರೋಗವಾಗಿವೆ. ನಾನು ಪ್ರೀತಿಸುತ್ತೇನೆ ಎಂದು ವ್ಯಕ್ತಿಯನ್ನು ಬಂಧನದಲ್ಲಿಟ್ಟುಕೊಂಡು ಪೆÇಸೆಸ್ಸಿವ್ ಆಗಿರುವುದನ್ನು ಕಂಡಿದ್ದೇವೆ.

ಹಾಗಾದರೆ ಪ್ರೇಮವೆಂದರೆ ಏನು? ವ್ಯಾಖ್ಯಾನಕ್ಕೆ ಮೀರಿದ್ದು ಅಂತ ಉನ್ನತೀಕರಿಸಿ, ಅರಿಯುವ ಬದಲು ಅಪಾರ್ಥದಲ್ಲೇ ಬೆಚ್ಚಗಿಟ್ಟುಕೊಳ್ಳುವ ಧೋರಣೆಯಿಂದ ಪ್ರೀತಿ ಉನ್ನತ ಕ್ಲೀಷೆಯಾಗಿ ಪರಿಣಮಿಸಿದೆ. ಅದಕ್ಕಾಗಿಯೇ ಪ್ರೀತಿಯ ಬಗ್ಗೆ ಎರಿಕ್ ಫ್ರಾಂ ಅಚ್ಚುಕಟ್ಟಾಗಿ ಅರಿವಿನ ಒಳನೋಟವನ್ನು ಕೊಡಲು ತನ್ನ ಆರ್ಟ್ ಆಫ್ ಲವ್ಹಿಂಗ್ (1956) ಪುಸ್ತಕದಲ್ಲಿ ಪ್ರಯತ್ನಿಸಿದ್ದಾರೆ.

ಪ್ರೀತಿ ಎಂಬ ಪರಿಕಲ್ಪನೆಯನ್ನು ಬರೀ ಗಂಡುಹೆಣ್ಣುಗಳ ನಡುವಿನ ಆಕರ್ಷಣೆಯಿಂದ ಬಿಡುಗಡೆಗೊಳಿಸಿ ಉದಾತ್ತಗೊಳಿಸಿದ ಕೀರ್ತಿ ಯೇಸುಕ್ರಿಸ್ತನಿಗೇ ಸಲ್ಲುತ್ತದೆ. ಅವನಿಗೂ ಮುನ್ನ ಭಾರತೀಯ ಮತ್ತು ಇತರ ತತ್ವಶಾಸ್ತ್ರ ಮತ್ತು ಪುರಾಣಗಳಲ್ಲಿ ಕಾಮ ಮತ್ತು ನಿಷ್ಕಾಮವನ್ನು, ಪ್ರೇಮಿಗಳ ಪ್ರೇಮ, ಇತರ ಸಂಬಂಧಗಳೊಡನೆ ವಾತ್ಸಲ್ಯ ಅಥವಾ ವ್ಯಾಮೋಹ ನೋಡಬಹುದಿತ್ತು. ವಾತ್ಸಾಯನನ ಕಾಮಶಾಸ್ತ್ರದಲ್ಲಿ ಕಾಮದಾನಂದ ಪಡೆಯಬೇಕಾದರೆ ಸಂಗಾತಿಗಳು ಪರಸ್ಪರ ಇರಬೇಕಾಗಿರುವ ಧೋರಣೆಯನ್ನು ವಿವರಿಸುತ್ತಾನೆ. ಆದರೆ ಅನಿರ್ಬಂಧಿತ ಅಥವಾ ಕಟ್ಟಳೆಗಳಿಲ್ಲದ ಪ್ರೇಮದ ಪಾಠ ಆಗಿದ್ದು ಕ್ರಿಸ್ತನಿಂದ. ಅದನ್ನೇ ಮುಂದುವರಿಸಿ ಮನಶಾಸ್ತ್ರಜ್ಞನೂ ಮತ್ತು ಸಮಾಜ ತತ್ವಜ್ಞಾನಿಯೂ ಆದ ಎರಿಕ್ ಫ್ರಾಂ ಮನೋವೈಜ್ಞಾನಿಕವಾಗಿ ಸಾಮಾಜಿಕ ವರ್ತನಾ ಶಾಸ್ತ್ರದಲ್ಲಿ ಹೇಳುತ್ತಾರೆ.

ಎರಿಕ್ ಪ್ರೀತಿಸುವ ಕಲೆಯನ್ನು ಹೇಳಿಕೊಡುವ ಮುನ್ನ ಪ್ರೀತಿಸುವುದರಲ್ಲಿರುವ ಸಮಸ್ಯೆಗಳನ್ನು ಮೊದಲು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಹೌದು, ಪ್ರೀತಿಸಲ್ಪಡುವ ಆನಂದಕ್ಕೆ ಆಸೆಪಟ್ಟು ಪ್ರೀತಿಸುವ ಕಲೆಯನ್ನು ಉಪೇಕ್ಷಿಸಿಬಿಡುತ್ತಾರೆ. ಬೇರೆ ಜೀವನಕ್ಕೆ ಅಗತ್ಯವಿರುವ ಎಷ್ಟೋ ವಿದ್ಯೆಗಳನ್ನು ಕಲಿಯುತ್ತಾ ಪ್ರೀತಿಸುವ ಕಲೆಯನ್ನು ಕಲಿಯಲು ಸಮಯ ಕೊಡುವುದಿಲ್ಲ. ಪ್ರೀತಿಸುವುದು (ಸಿನಿಮಾಗಳಲ್ಲಿ ತೋರಿಸುವಂತೆ) ಬಹಳ ಕಷ್ಟ, ತುಂಬಾ ಒದ್ದಾಡಿ ಹೋರಾಡಿದ ಮೇಲೆ ಕೊನೆಗೆ ಪ್ರೇಮಿಗಳು ಒಂದಾಗುತ್ತಾರೆ ಎಂಬ ಮನಸ್ಥಿತಿ.

ನಿಜವಾದ ಪ್ರೇಮದಲ್ಲಿ ಬೀಳುವುದಲ್ಲ, (ಫಾಲಿಂಗ್ ಇನ್ ಲವ್ಹ್) ಬದಲಾಗಿ ಹೇಗೆ ಪ್ರೇಮದಲ್ಲಿ ತೊಡಗಿಸಿಕೊಳ್ಳುವುದು ಎಂಬುದನ್ನು ನೋಡಬೇಕೆನ್ನುತ್ತಾರೆ. ಇದು ಸುಲಭವಲ್ಲ ನಿಜ. ಆದರೆ, ಇದು ಅಸ್ತಿತ್ವದ ಅರ್ಥವನ್ನು ಅನಾವರಣ ಮಾಡುತ್ತಾ ಮಾನವ ಬದುಕಿನ ಸಮಸ್ಯೆಗಳನ್ನು ಬಗೆಹರಿಸುತ್ತಾ ತೃಪ್ತ ಮತ್ತು ಸ್ವಾಸ್ಥ ಮನಸ್ಸನ್ನು ದೃಢಗೊಳಿಸುತ್ತದೆ. ಇನ್ನೇನು ಬೇಕು?

ಪ್ರೇಮ ಜೀವನಪೂರ್ತಿ ತೊಡಗಿಸಿಕೊಳ್ಳಬೇಕಾಗಿರುವ ಸೃಜನಶೀಲ ಯೋಜನೆ ಎನ್ನುವ ಎರಿಕ್ ಫ್ರಾಂ ‘ಪ್ರೀತಿಸುವುದ ತಿಳಿಯದೇ ಪ್ರೀತಿಗೊಳಗಾಗುವ ಆತುರ ನಮ್ಮ ಪ್ರೀತಿಪಾತ್ರರನ್ನು ಹೇಗೆ ನೋಯಿಸುತ್ತದೆ’ ಎಂದು ವಿವರಿಸುತ್ತಾರೆ. ಸೋದರ ಪ್ರೇಮ, ಕುಟುಂಬ ಪ್ರೇಮ, ಸತಿ ಪತಿ ಪ್ರೇಮ ಇತ್ಯಾದಿಗಳೆಲ್ಲವೂ ಒಂದೇ ಪ್ರೇಮದ ಒಂದೇ ಮೂಲವನ್ನು ಹೊಂದಿದ್ದು ವಿವಿಧ ಹೊಣೆಗಾರಿಕೆ ಮತ್ತು ಅಭಿವ್ಯಕ್ತತೆಗಳಿಂದ ಬೇರೆಯಾಗಿ ತೋರುತ್ತದೆ ಎಂದು ವಿವರಿಸುತ್ತಾರೆ.

ಅಪ್ರಬುದ್ಧ ಪ್ರೇಮ ಹೇಳುವುದೇನೆಂದರೆ, ಗಿವ್ ರೆಸ್ಪೆಕ್ಟ್ ಟೇಕ್ ರೆಸ್ಪೆಕ್ಟ್ ತರ, ನನ್ನ ಪ್ರೀತಿಸಿದರೆ ನಾನು ಪ್ರೀತಿಸುತ್ತೇನೆ ಎಂದು. ಆದರೆ ಪಕ್ವವಾದ ಪ್ರೇಮವು ತನಗೆ ಪ್ರೀತಿಸಲು ಸಾಧ್ಯ, ಪ್ರೀತಿಸುತ್ತೇನೆ’ ಎಂಬುದು.

ಪ್ರೇಮವೆಂಬುದು ಇದ್ದಕ್ಕಿದ್ದಂತೆ ಆಗಿಬಿಡುವುದಲ್ಲ. ಅದೊಂದು ಗ್ರಹಿಕೆ, ತಿಳಿವಳಿಕೆ ಮತ್ತು ತರಬೇತಿಗಳ ಪ್ರಕ್ರಿಯೆಯ ಮನೋಭಾವದ ರೂಪ. ಆದ್ದರಿಂದಲೇ ಸಂಗೀತ, ನೃತ್ಯ, ವಿಜ್ಞಾನಗಳನ್ನೆಲ್ಲಾ ಕಲಿಯುವಂತೆ ಪ್ರೀತಿಸುವುದನ್ನೂ ಪ್ರಜ್ಞಾಪೂರ್ವಕವಾಗಿ ಕಲಿಯಬೇಕು ಎನ್ನುತ್ತಾರೆ.

ಪ್ರೇಮವೆಂಬುದು ನಿರ್ದಿಷ್ಟ ವ್ಯಕ್ತಿಯೊಂದಿಗೆ ನಾವು ಹೊಂದುವ ಸಂಬಂಧದ ತೀವ್ರ ಪ್ರಭಾವವೋ, ಭಾವ ತೀವ್ರತೆಯೋ ಖಂಡಿತ ಅಲ್ಲ. ಬದಲಾಗಿ ಅದೊಂದು ಧೋರಣೆ ಅಥವಾ ದೃಷ್ಟಿ.

ಒಟ್ಟಾರೆ ಪ್ರೀತಿಯೆಂಬುದು ವ್ಯವಹಾರವಲ್ಲ, ವ್ಯಸನವಲ್ಲ. ಜೀವನಶಕ್ತಿ.
ಒಟ್ಟಾರೆ ಒಲವೇಜೀವನ ಸಾಕ್ಷಾತ್ಕಾರ. ಹೇಗೆ? ಓದಿ, ಪ್ರೀತಿಸುವ ಕಲೆ. ಕನ್ನಡದಲ್ಲಿಯೂ ಅನುವಾದವಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...