Homeರಾಜಕೀಯಚನ್ನಗಿರಿ ಯುವಕನ ಸಾವು ಕಡೇಪಕ್ಷ ಒಂದು ಚರ್ಚೆಯಾದರೂ ಆಗಲಿ....

ಚನ್ನಗಿರಿ ಯುವಕನ ಸಾವು ಕಡೇಪಕ್ಷ ಒಂದು ಚರ್ಚೆಯಾದರೂ ಆಗಲಿ….

- Advertisement -
- Advertisement -

ಕರ್ನಾಟಕವಷ್ಟೇ ಯಾಕೆ ಇಡೀ ದೇಶವೇ ಬೆಚ್ಚಿ ಬೀಳಬೇಕಾಗಿದ್ದ ಪ್ರಕರಣವಿದು. ಆದರೆ ಬೆಚ್ಚಿ ಬೀಳಲಿಲ್ಲ ಎನ್ನುವುದು ದುರಂತ! ಬಜೆಟ್ ರಾಜಕಾರಣದ ಬಿಸಿಬಿಸಿ ಗದ್ದಲಗಳ ನಡುವೆ ನಮ್ಮ ಮೀಡಿಯಾಗಳೂ ನಿರ್ಲಕ್ಷಿಸಿದ ಚೆನ್ನಗಿರಿ ಯುವಕನ ಆತ್ಮಹತ್ಯೆ, ಕೇವಲ ಅವನೊಬ್ಬನ ಸಾವಾಗಿರಲಿಲ್ಲ. ಸಮಸ್ತ ಯುವಸಮೂಹದ ಆತ್ಮಸ್ಥೈರ್ಯವೇ ಸಾವಿನ ಹಾದಿಹಿಡಿಯುತ್ತಿರುವುದರ ಸೂತಕದ ಸೂಚನೆಯಾಗಿತ್ತು. ಆದರೆ ನಮ್ಮ ಸಮಾಜ, ಸರ್ಕಾರ, ಮಾಧ್ಯಮಗಳು ಸ್ಪಂದಿಸಬೇಕಾದ ರೀತಿಯಲ್ಲಿ ಸ್ಪಂದಿಸಲೇ ಇಲ್ಲ.
ದಾವಣಗೆರೆಯ ಚೆನ್ನಗಿರಿ ತಾಲ್ಲೂಕಿನಲ್ಲಿರುವ ಹೊಸನಗರ ಎಂಬ ಪುಟ್ಟ ಹಳ್ಳಿಯ ಅನಿಲ್ ರಾಥೋಡ್‍ನದ್ದು ಸಾಯುವ ವಯಸ್ಸಲ್ಲ. ಆದರೆ ನನಗಿನ್ನು ಬದುಕುವ ಅವಕಾಶವಿಲ್ಲ ಎಂಬ ಆತಂಕವನ್ನು ಈ ನಮ್ಮ ಸಮಾಜ ತುಂಬಿದ್ದರಿಂದ ಆತ ಆತ್ಮಹತ್ಯೆ ಮಾಡಿಕೊಳ್ಳಬೇಕಾಗಿ ಬಂದಿದೆ.
ಕೂಲಿ ಮಾಡಿ ಜೀವನ ಸಾಗಿಸುವ ಒಂದು ಬಡ ಕುಟುಂಬದ ಮೂವರು ಮಕ್ಕಳಲ್ಲಿ ಅನಿಲ್ ಕೂಡಾ ಒಬ್ಬನಾಗಿದ್ದ. ಬಿಎ ಪದವೀಧರ. ತಂದೆಯ ಸಾವಿನ ನಂತರ ಮುಂದಕ್ಕೆ ಓದಲಾಗದೆ ತಾಯಿಗೆ ನೆರವಾಗುತ್ತಾ ಸ್ಪರ್ಧಾತ್ಮಕ ಪರೀಕ್ಷಗಳನ್ನು ಬರೆಯುತ್ತಾ ಅದೃಷ್ಟಪರೀಕ್ಷೆಯಲ್ಲಿದ್ದ. ಆತನ ಅಣ್ಣ ಚಕ್ರವರ್ತಿ ದಾವಣಗೆರೆ ವಿವಿಯಲ್ಲಿ ಎಂಎ ಮಾಡುತ್ತಿದ್ದು ಕೊನೆಯ ತಮ್ಮ ರಾಜ್‍ಕುಮಾರ್ ಮನೆಯ ಜವಾಬ್ದಾರಿ ನಿಭಾಯಿಸಲು ಓದು ಬಿಟ್ಟು ಕೂಲಿ ಕೆಲಸ ಮಾಡುತ್ತಿದ್ದಾನೆ.
ಅನಿಲ್ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಪತ್ರ ಬರೆದಿರುವುದಲ್ಲದೆ ಅವರನ್ನು ಉದ್ದೇಶಿಸಿ ಎರಡೂವರೆ ನಿಮಿಷದ ವಿಡಿಯೋವನ್ನೂ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದ. ಅದರಲ್ಲಿ “ಹಳ್ಳಿಗಾಡಿನ ಪದವೀಧರರಿಗೆ ಅನ್ಯಾಯವಾಗುತ್ತಿದೆ, ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಇಂತಹ ಪದವೀಧರರಿಗೆ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಸಿ ನಿರುದ್ಯೋಗ ಮತ್ತು ಬಡತನ ಕಡಿಮೆ ಮಾಡಬೇಕು, ನನ್ನ ಸಾವು ನಿರುದ್ಯೋಗಿಗಳಿಗೆ ಮಾತ್ರ ಅರ್ಥವಾಗುತ್ತದೆ. ನನ್ನ ಸಾವಿನಿಂದಲಾದರು ಸರ್ಕಾರ ಎಚ್ಚೆತ್ತುಕೊಳ್ಳಲಿ. ನಿರುದ್ಯೋಗಿಗಳಿಗೆ ನನ್ನ ಸಾವಿನಿಂದಲಾದರೂ ಉದ್ಯೋಗ ಸಿಗುವಂತಾಗಲಿ” ಎಂದು ಹೇಳಿಕೊಂಡಿದ್ದಾನೆ.
ಅಧ್ಯಯನ ತಂಡವಾಗಿ ಭೇಟಿ ನೀಡಿದ್ದ ನಮಗೆ ಅನಿಲ್ ಮನೆಯಲ್ಲಿ ಕಿತ್ತು ತಿನ್ನುವ ಬಡತನವಾಗಲಿ, ಆತ ಇಷ್ಟು ತುರ್ತಾಗಿ ಆತ್ಮಹತ್ಯೆ ಮಾಡಿಕೊಳ್ಳಲೇಬೇಕಿದ್ದ ಅನಿವಾರ್ಯತೆಯಾಗಲಿ ಕಂಡು ಬರಲಿಲ್ಲ. ಆದರೆ ಕೆಲಸಕ್ಕಾಗಿ ಅಲೆದಾಡಿದ್ದ ನೋವು, ಯಾವ ಭರವಸೆಗೂ ಆಸ್ಪದವಿಲ್ಲದಂತೆ ಸುತ್ತಿಕೊಂಡಿದ್ದ ನಿರುದ್ಯೋಗ, ಬಿಎ ಪದವಿಯಿಂದ ಈ ಸಮಾಜದಲ್ಲಿ ಕೆಲಸ ಸಿಗುವುದಿಲ್ಲ ಎಂದು ಈ ಸಮಾಜ ಹುಟ್ಟುಹಾಕಿರುವ ಭ್ರಮೆ, ಕೊನೆಗೆ ತನ್ನ ಸಾವಿನಿಂದಾದರು ಈ ಸಮಸ್ಯೆಗಳು ಬಗೆಹರಿಯಬಹುದೆನ್ನುವ ಆಶಾವಾದ ಆತನನ್ನು ಸಾವಿನ ಕುಣಿಕೆಗೆ ತಳ್ಳಿವೆ. ಆತನ ಆಲೋಚನೆ, ಉದ್ದೇಶ ಸರಿಯಿರಬಹುದು, ಆದರೆ ಆಯ್ಕೆ ಮಾಡಿಕೊಂಡು ಹಾದಿಯ ಬಗ್ಗೆ ನಮಗೆಲ್ಲ ಬೇಸರವಿದೆ. ಆದರೆ ಆತನನ್ನು ಮುಂದಿಟ್ಟುಕೊಂಡು ನಾವು ಒಂದಷ್ಟು ಗಂಭೀರ ಚರ್ಚೆಯನ್ನಾದರು ಮಾಡದಿದ್ದರೆ, ರಾಥೋಡನ ಆ ಸಾವಿಗೆ ಅರ್ಥವೇ ಇಲ್ಲದಂತಾಗುತ್ತೆ. ಸಣ್ಣಪುಟ್ಟದಕ್ಕೆಲ್ಲ ದಿನಗಟ್ಟಲೆ ಪ್ಯಾನೆಲ್ ಡಿಸ್ಕಷನ್ ನಡೆಸುವ ನಮ್ಮ ಮೀಡಿಯಾಗಳು ಅದಾಗಲೇ ಅಂತಹ ತಪ್ಪು ಮಾಡಿವೆ…
“ನಮ್ಮ ದೇಶ ನಿರುದ್ಯೋಗದ ಟೈಮ್‍ಬಾಂಬ್ ಮೇಲೆ ಕೂತಿದೆ” ಈ ಮಾತು ಹೇಳಿದ್ದು ಆರ್‍ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್. ರಾಥೋಡ್‍ನ ಆತ್ಮಹತ್ಯೆಯನ್ನು ರೆಫೆರೆನ್ಸ್ ಆಗಿಟ್ಟುಕೊಂಡು ಇಂದಿನ ಯುವಜನರ ಪರಿಸ್ಥಿತಿ ಗಮನಿಸಿದರೆ ಆ ಟೈಂ ಬಾಂಬ್‍ನ ಕೌಂಟ್‍ಡೌನ್ ಶುರುವಾಗಿ ಸ್ಫೋಟಗೊಳ್ಳಲು ಅಣಿಯಾಗಿದೆಯೇನೋ ಎಂಬ ಭಯ ಭಾಸವಾಗುತ್ತದೆ. ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಮಂಡಳಿಯ (ಎನ್.ಎಸ್.ಡಿ.ಸಿ) ವರದಿ ಪ್ರಕಾರ ನಮ್ಮ ರಾಜ್ಯವೊಂದರಲ್ಲೆ 95 ಲಕ್ಷದಷ್ಟು ಯುವಜನರು ನಿರುದ್ಯೋಗಿಗಳು ಮತ್ತು ಅರೆ ಉದ್ಯೋಗಿಗಳಾಗಿದ್ದಾರೆ. ಇನ್ನು ದೇಶದಲ್ಲಿ ಪ್ರತಿವರ್ಷ 1.2 ಕೋಟಿ ಯುವಜನರು ತಮ್ಮ ಪದವಿ ಮುಗಿಸಿ ಉದ್ಯೋಗದ ನಿರೀಕ್ಷೆಯಲ್ಲಿ ಹೊರಬರುತ್ತಿದ್ದಾರೆ! ಇಂತಹ ಕೋಟ್ಯಾಂತರ ಯುವಜನರಿಗೆ ಸರ್ಕಾರದ ಬಳಿ ಉದ್ಯೋಗಕ್ಕಾಗಿ ಸಮಗ್ರವಾದ ಯೋಜನೆಯಿದೆಯೇ ಎಂದು ನೋಡಿದರೆ ನಿರಾಶೆಯ ಉತ್ತರ ಸಿಗುತ್ತದೆ. ಬಹುತೇಕ ನಿರುದ್ಯೋಗ ಯುವಕರೇ ಅಪರಾಧ, ಕೋಮುಗಲಭೆ ಮತ್ತು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ.
ಇಂತಹ ಅನಾಹುತಗಳನ್ನು ತಪ್ಪಿಸಿ, ದುಡಿಯುವ ಶಕ್ತಿಯುಳ್ಳ ಯುವಜನರಿಗೆ ಉದ್ಯೋಗ ಸೃಷ್ಟಿಯಾಗಬೇಕು ಮತ್ತು ಅಭದ್ರ ಸ್ಥಿತಿಯಲ್ಲಿರುವ ಗುತ್ತಿಗೆ ನೌಕರರಿಗೆ ಸುಭದ್ರ ಉದ್ಯೋಗ ಕಲ್ಪಿಸುವಂತೆ ಸರ್ಕಾರಗಳ ಮೇಲೆ ಒತ್ತಡ ಹೇರುವ ಸಲುವಾಗಿ ಕರ್ನಾಟಕದಲ್ಲಿ ‘ಉದ್ಯೋಗಕ್ಕಾಗಿ ಯುವಜನರು’ ವೇದಿಕೆಯು ಕಳೆದ ಒಂದು ವರ್ಷದಿಂದ ಆಂದೋಲನ ನಡೆಸಿಕೊಂಡು ಬರುತ್ತಿದೆ. ಆದರೆ ಸರ್ಕಾರಗಳು ಇದರ ಗಂಭೀರತೆಯನ್ನು ಮನಗಾಣದೆ ಜಾಣ ಕಿವುಡರಂತೆ ವರ್ತಿಸುತ್ತಿವೆ. ಸರ್ಕಾರಗಳ ಈ ಧೋರಣೆಯಿಂದಾಗಿಯೇ ಹತಾಶ ಯುವಕರು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ ಅಂದರೆ ತಪ್ಪಾಗಲಿಕ್ಕಿಲ್ಲ.
ರಾಥೋಡ್‍ನ ವಿಚಾರಕ್ಕೇ ಮರಳುವುದಾದರೆ, ಉದ್ಯೋಗಕ್ಕಾಗಿ ಯುವಜನರು ಆಂದೋಲನ ಬಿಡುಗಡೆ ಮಾಡಿದ್ದ ‘ಯುವಜನ ಪ್ರಣಾಳಿಕೆ’ಯನ್ನು ಮೂರು ಪಕ್ಷದವರ ಮುಂದಿಟ್ಟು, ತಮ್ಮ ಪ್ರಣಾಳಿಕೆಯಾಗಿಸಿಕೊಳ್ಳಲು ಒತ್ತಾಯಿಸಿತ್ತು. ಜೆಡಿಎಸ್‍ನ ಕುಮಾರಸ್ವಾಮಿಯವರು ಆಂದೋಲನದ ಪ್ರಣಾಳಿಕೆಯ ಅಂಶಗಳ ಸಾಲುಗಳನ್ನಿಟ್ಟುಕೊಂಡು ಉದ್ಯೋಗ ಸೃಷ್ಟಿಯ ಕುರಿತು ಪತ್ರಿಕೆ ಮತ್ತು ಟಿವಿಗಳಲ್ಲಿ ಪ್ರಚಾರ ಮಾಡಿದ್ದರು. ಇದನ್ನು ಅಪಾರವಾಗಿ ನಂಬಿದ್ದ ಅನಿಲ್ ಚುನಾವಣೆ ಸಮಯದಲ್ಲಿ ಜೆಡಿಎಸ್ ಪರ ಪ್ರಚಾರ ಮಾಡಿದ್ದಲ್ಲದೇ ತನ್ನ ಗೆಳೆಯರ ಬಳಿ, “ಜೆಡಿಎಸ್ ಗೆಲ್ಲಬೇಕು, ಕುಮಾರಸ್ವಾಮಿ ಅಧಿಕಾರಕ್ಕೆ ಬಂದರೆ ಉದ್ಯೋಗ ಸೃಷ್ಟಿಯಾಗುತ್ತದೆ” ಎಂದು ಹೇಳಿಕೊಂಡಿದ್ದ. ತಾನು ಮಾಡಿದ ವಿಡಿಯೋದಲ್ಲಿಯೂ ಕುಮಾರಸ್ವಾಮಿ ಅವರನ್ನು “ಅನುಭವಿಗಳು, ಮೋಸ್ಟ್ ಇಂಟಲಿಜೆಂಟ್ ಚೀಫ್ ಮಿನಿಸ್ಟರ್ ಆಫ್ ಕರ್ನಾಟಕ” ಎಂದು ಬಣ್ಣಿಸಿರುವುದು ಸಿಎಂ ಮೇಲೆ ಆತನಿಟ್ಟಿರುವ ಭರವಸೆಯನ್ನು ತೋರಿಸುತ್ತದೆ.
ಇದೀಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ, ಅನಿಲ್ ಆತ್ಮಹತ್ಯೆ ಮಾಡಿಕೊಂಡು ವಾರಗಳೆ ಕಳೆದರು ಸಾಂತ್ವನಕ್ಕಾದರು ಸಿಎಂ ಆತನ ಮನೆಕಡೆ ತಲೆ ಹಾಕದಿರುವುದು ನಿರುದ್ಯೋಗಿಗಳ ವಿಚಾರದಲ್ಲಿ ಅವರೆಷ್ಟು ಗಂಭೀರವಾಗಿದ್ದಾರೆ ಮತ್ತು ಚುನಾವಣಾ ಪೂರ್ವ ಅವರು ಕೊಟ್ಟಿದ್ದ ಆಶ್ವಾಸನೆಗಳ ಗಟ್ಟಿತನವೆಷ್ಟು ಎಂಬುದು ಅರ್ಥವಾಗುತ್ತದೆ.
ನಿರುದ್ಯೋಗದ ವಿಚಾರ 70-80ರ ದಶಕದ ನಂತರ ಇದೀಗ ಮತ್ತೆ ಮುನ್ನಲೆಗೆ ಬಂದಿದೆ. ರಾಜಕೀಯ ಪಕ್ಷಗಳೂ ಚುನಾವಣೆ ಆಶ್ವಾಸನೆಯಲ್ಲಿ ಉದ್ಯೋಗ ಸೃಷ್ಟಿಯ ಭರವಸೆ ನೀಡುವ ಅನಿವಾರ್ಯಕ್ಕೆ ತುತ್ತಾಗಿವೆ. ಆದರೆ ಇವೆಲ್ಲ ಕೇವಲ ಎಲೆಕ್ಷನ್‍ಗೆ ಮಾತ್ರವೇ ಸೀಮಿತವಾಗುಳಿಯುತ್ತಿವೆ. ನಮ್ಮ ಪ್ರಧಾನಮಂತ್ರಿಗಳು ಮತ್ತು ಇತರೆ ರಾಜಕಾರಣಿಗಳ ಹೇಳಿಕೆಗಳು ಇದನ್ನು ಪುಷ್ಠೀಕರಿಸುತ್ತಿವೆ. ಉದ್ಯೋಗ ಸೃಷ್ಟಿಯ ಪ್ರಶ್ನೆ ಬಂದಾಗ ‘ಪಕೋಡ ಮಾರುವುದು ಉದ್ಯೋಗವಲ್ಲವೇ’ ಎಂಬ ಉಡಾಫೆಯ ಉತ್ತರ ಪ್ರಧಾನಿಗಳಿಂದ ಬಂದರೆ, ಆರ್.ವಿ. ದೇಶಪಾಂಡೆಯಂತಹ ರಾಜ್ಯದ ಕಂದಾಯ ಮಂತ್ರಿಗಳೂ ಇದನ್ನು ಸಮರ್ಥಿಸಿಕೊಳ್ಳುತ್ತಾರೆ. ಇದರಿಂದ, ಯುವಜನರನ್ನು ವಂಚಿಸುವಲ್ಲಿ ರಾಜಕಾರಣಿಗಳ ನಡುವೆ ಯಾವ ಪಕ್ಷಬೇಧವೂ ಇಲ್ಲ ಅನ್ನೋದು ಸಾಬೀತಾಗುತ್ತೆ. ಭಾರತದ ಸಮಸ್ತ ಜನರಿಗೆ ಸರ್ಕಾರವೇ ಉದ್ಯೋಗ ಸೃಷ್ಟಿ ಮಾಡಲು ಸಾಧ್ಯವಿಲ್ಲ ನಿಜ. ಆದರೆ, ಉದ್ಯೋಗ ಸೃಷ್ಟಿಯಾಗುವಂತ ವಾತಾವರಣ ನಿರ್ಮಿಸಿಲು ಸಾಧ್ಯವಿದೆ. ಅದು ಈ ಸರ್ಕಾರಗಳ ಜವಾಬ್ದಾರಿಯೂ ಹೌದು.
ತಮ್ಮ ಹೆತ್ತವರಿಗೆ ಹೊರೆಯಾಗಿದ್ದೇವೆ ಪಾಪಪ್ರಜ್ಞೆಯಿಂದ ಹೊರಬರಲು ಹಲವು ಯುವಜನರು ತಮ್ಮ ಓದಿಗೆ ಸಂಬಂಧವೇ ಇಲ್ಲದಂತ ತಾತ್ಕಾಲಿಕ ಉದ್ಯೋಗಗಳ ಬೆನ್ನುಹತ್ತಿ ಅಭದ್ರತೆಯಲ್ಲೇ ಬದುಕು ಸಾಗಿಸುತ್ತಾರೆ. ಇನ್ನು ಕೆಲವರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯ ದಾರಿಯನ್ನು ಹಿಡಿದಿದ್ದಾರೆ!!
ಸಂಪನ್ಮೂಲಗಳ ಶ್ರೀಮಂತಿಕೆಯನ್ನು ಹೊಂದಿರುವ ಭಾರತದಂತ ದೇಶದಲ್ಲಿಯೂ ನಿರುದ್ಯೋಗ ಸಮಸ್ಯೆಯಿಂದ ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದರೆ ಇದು ಪ್ರಜಾಪ್ರಭುತ್ವದ ದೊಡ್ಡ ವ್ಯಂಗ್ಯವೇ ಸರಿ!

– ಸರೋವರ್ ಬೆಂಕಿಕೆರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...