Homeರಾಜಕೀಯಚನ್ನಗಿರಿ ಯುವಕನ ಸಾವು ಕಡೇಪಕ್ಷ ಒಂದು ಚರ್ಚೆಯಾದರೂ ಆಗಲಿ....

ಚನ್ನಗಿರಿ ಯುವಕನ ಸಾವು ಕಡೇಪಕ್ಷ ಒಂದು ಚರ್ಚೆಯಾದರೂ ಆಗಲಿ….

- Advertisement -
- Advertisement -

ಕರ್ನಾಟಕವಷ್ಟೇ ಯಾಕೆ ಇಡೀ ದೇಶವೇ ಬೆಚ್ಚಿ ಬೀಳಬೇಕಾಗಿದ್ದ ಪ್ರಕರಣವಿದು. ಆದರೆ ಬೆಚ್ಚಿ ಬೀಳಲಿಲ್ಲ ಎನ್ನುವುದು ದುರಂತ! ಬಜೆಟ್ ರಾಜಕಾರಣದ ಬಿಸಿಬಿಸಿ ಗದ್ದಲಗಳ ನಡುವೆ ನಮ್ಮ ಮೀಡಿಯಾಗಳೂ ನಿರ್ಲಕ್ಷಿಸಿದ ಚೆನ್ನಗಿರಿ ಯುವಕನ ಆತ್ಮಹತ್ಯೆ, ಕೇವಲ ಅವನೊಬ್ಬನ ಸಾವಾಗಿರಲಿಲ್ಲ. ಸಮಸ್ತ ಯುವಸಮೂಹದ ಆತ್ಮಸ್ಥೈರ್ಯವೇ ಸಾವಿನ ಹಾದಿಹಿಡಿಯುತ್ತಿರುವುದರ ಸೂತಕದ ಸೂಚನೆಯಾಗಿತ್ತು. ಆದರೆ ನಮ್ಮ ಸಮಾಜ, ಸರ್ಕಾರ, ಮಾಧ್ಯಮಗಳು ಸ್ಪಂದಿಸಬೇಕಾದ ರೀತಿಯಲ್ಲಿ ಸ್ಪಂದಿಸಲೇ ಇಲ್ಲ.
ದಾವಣಗೆರೆಯ ಚೆನ್ನಗಿರಿ ತಾಲ್ಲೂಕಿನಲ್ಲಿರುವ ಹೊಸನಗರ ಎಂಬ ಪುಟ್ಟ ಹಳ್ಳಿಯ ಅನಿಲ್ ರಾಥೋಡ್‍ನದ್ದು ಸಾಯುವ ವಯಸ್ಸಲ್ಲ. ಆದರೆ ನನಗಿನ್ನು ಬದುಕುವ ಅವಕಾಶವಿಲ್ಲ ಎಂಬ ಆತಂಕವನ್ನು ಈ ನಮ್ಮ ಸಮಾಜ ತುಂಬಿದ್ದರಿಂದ ಆತ ಆತ್ಮಹತ್ಯೆ ಮಾಡಿಕೊಳ್ಳಬೇಕಾಗಿ ಬಂದಿದೆ.
ಕೂಲಿ ಮಾಡಿ ಜೀವನ ಸಾಗಿಸುವ ಒಂದು ಬಡ ಕುಟುಂಬದ ಮೂವರು ಮಕ್ಕಳಲ್ಲಿ ಅನಿಲ್ ಕೂಡಾ ಒಬ್ಬನಾಗಿದ್ದ. ಬಿಎ ಪದವೀಧರ. ತಂದೆಯ ಸಾವಿನ ನಂತರ ಮುಂದಕ್ಕೆ ಓದಲಾಗದೆ ತಾಯಿಗೆ ನೆರವಾಗುತ್ತಾ ಸ್ಪರ್ಧಾತ್ಮಕ ಪರೀಕ್ಷಗಳನ್ನು ಬರೆಯುತ್ತಾ ಅದೃಷ್ಟಪರೀಕ್ಷೆಯಲ್ಲಿದ್ದ. ಆತನ ಅಣ್ಣ ಚಕ್ರವರ್ತಿ ದಾವಣಗೆರೆ ವಿವಿಯಲ್ಲಿ ಎಂಎ ಮಾಡುತ್ತಿದ್ದು ಕೊನೆಯ ತಮ್ಮ ರಾಜ್‍ಕುಮಾರ್ ಮನೆಯ ಜವಾಬ್ದಾರಿ ನಿಭಾಯಿಸಲು ಓದು ಬಿಟ್ಟು ಕೂಲಿ ಕೆಲಸ ಮಾಡುತ್ತಿದ್ದಾನೆ.
ಅನಿಲ್ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಪತ್ರ ಬರೆದಿರುವುದಲ್ಲದೆ ಅವರನ್ನು ಉದ್ದೇಶಿಸಿ ಎರಡೂವರೆ ನಿಮಿಷದ ವಿಡಿಯೋವನ್ನೂ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದ. ಅದರಲ್ಲಿ “ಹಳ್ಳಿಗಾಡಿನ ಪದವೀಧರರಿಗೆ ಅನ್ಯಾಯವಾಗುತ್ತಿದೆ, ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಇಂತಹ ಪದವೀಧರರಿಗೆ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಸಿ ನಿರುದ್ಯೋಗ ಮತ್ತು ಬಡತನ ಕಡಿಮೆ ಮಾಡಬೇಕು, ನನ್ನ ಸಾವು ನಿರುದ್ಯೋಗಿಗಳಿಗೆ ಮಾತ್ರ ಅರ್ಥವಾಗುತ್ತದೆ. ನನ್ನ ಸಾವಿನಿಂದಲಾದರು ಸರ್ಕಾರ ಎಚ್ಚೆತ್ತುಕೊಳ್ಳಲಿ. ನಿರುದ್ಯೋಗಿಗಳಿಗೆ ನನ್ನ ಸಾವಿನಿಂದಲಾದರೂ ಉದ್ಯೋಗ ಸಿಗುವಂತಾಗಲಿ” ಎಂದು ಹೇಳಿಕೊಂಡಿದ್ದಾನೆ.
ಅಧ್ಯಯನ ತಂಡವಾಗಿ ಭೇಟಿ ನೀಡಿದ್ದ ನಮಗೆ ಅನಿಲ್ ಮನೆಯಲ್ಲಿ ಕಿತ್ತು ತಿನ್ನುವ ಬಡತನವಾಗಲಿ, ಆತ ಇಷ್ಟು ತುರ್ತಾಗಿ ಆತ್ಮಹತ್ಯೆ ಮಾಡಿಕೊಳ್ಳಲೇಬೇಕಿದ್ದ ಅನಿವಾರ್ಯತೆಯಾಗಲಿ ಕಂಡು ಬರಲಿಲ್ಲ. ಆದರೆ ಕೆಲಸಕ್ಕಾಗಿ ಅಲೆದಾಡಿದ್ದ ನೋವು, ಯಾವ ಭರವಸೆಗೂ ಆಸ್ಪದವಿಲ್ಲದಂತೆ ಸುತ್ತಿಕೊಂಡಿದ್ದ ನಿರುದ್ಯೋಗ, ಬಿಎ ಪದವಿಯಿಂದ ಈ ಸಮಾಜದಲ್ಲಿ ಕೆಲಸ ಸಿಗುವುದಿಲ್ಲ ಎಂದು ಈ ಸಮಾಜ ಹುಟ್ಟುಹಾಕಿರುವ ಭ್ರಮೆ, ಕೊನೆಗೆ ತನ್ನ ಸಾವಿನಿಂದಾದರು ಈ ಸಮಸ್ಯೆಗಳು ಬಗೆಹರಿಯಬಹುದೆನ್ನುವ ಆಶಾವಾದ ಆತನನ್ನು ಸಾವಿನ ಕುಣಿಕೆಗೆ ತಳ್ಳಿವೆ. ಆತನ ಆಲೋಚನೆ, ಉದ್ದೇಶ ಸರಿಯಿರಬಹುದು, ಆದರೆ ಆಯ್ಕೆ ಮಾಡಿಕೊಂಡು ಹಾದಿಯ ಬಗ್ಗೆ ನಮಗೆಲ್ಲ ಬೇಸರವಿದೆ. ಆದರೆ ಆತನನ್ನು ಮುಂದಿಟ್ಟುಕೊಂಡು ನಾವು ಒಂದಷ್ಟು ಗಂಭೀರ ಚರ್ಚೆಯನ್ನಾದರು ಮಾಡದಿದ್ದರೆ, ರಾಥೋಡನ ಆ ಸಾವಿಗೆ ಅರ್ಥವೇ ಇಲ್ಲದಂತಾಗುತ್ತೆ. ಸಣ್ಣಪುಟ್ಟದಕ್ಕೆಲ್ಲ ದಿನಗಟ್ಟಲೆ ಪ್ಯಾನೆಲ್ ಡಿಸ್ಕಷನ್ ನಡೆಸುವ ನಮ್ಮ ಮೀಡಿಯಾಗಳು ಅದಾಗಲೇ ಅಂತಹ ತಪ್ಪು ಮಾಡಿವೆ…
“ನಮ್ಮ ದೇಶ ನಿರುದ್ಯೋಗದ ಟೈಮ್‍ಬಾಂಬ್ ಮೇಲೆ ಕೂತಿದೆ” ಈ ಮಾತು ಹೇಳಿದ್ದು ಆರ್‍ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್. ರಾಥೋಡ್‍ನ ಆತ್ಮಹತ್ಯೆಯನ್ನು ರೆಫೆರೆನ್ಸ್ ಆಗಿಟ್ಟುಕೊಂಡು ಇಂದಿನ ಯುವಜನರ ಪರಿಸ್ಥಿತಿ ಗಮನಿಸಿದರೆ ಆ ಟೈಂ ಬಾಂಬ್‍ನ ಕೌಂಟ್‍ಡೌನ್ ಶುರುವಾಗಿ ಸ್ಫೋಟಗೊಳ್ಳಲು ಅಣಿಯಾಗಿದೆಯೇನೋ ಎಂಬ ಭಯ ಭಾಸವಾಗುತ್ತದೆ. ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಮಂಡಳಿಯ (ಎನ್.ಎಸ್.ಡಿ.ಸಿ) ವರದಿ ಪ್ರಕಾರ ನಮ್ಮ ರಾಜ್ಯವೊಂದರಲ್ಲೆ 95 ಲಕ್ಷದಷ್ಟು ಯುವಜನರು ನಿರುದ್ಯೋಗಿಗಳು ಮತ್ತು ಅರೆ ಉದ್ಯೋಗಿಗಳಾಗಿದ್ದಾರೆ. ಇನ್ನು ದೇಶದಲ್ಲಿ ಪ್ರತಿವರ್ಷ 1.2 ಕೋಟಿ ಯುವಜನರು ತಮ್ಮ ಪದವಿ ಮುಗಿಸಿ ಉದ್ಯೋಗದ ನಿರೀಕ್ಷೆಯಲ್ಲಿ ಹೊರಬರುತ್ತಿದ್ದಾರೆ! ಇಂತಹ ಕೋಟ್ಯಾಂತರ ಯುವಜನರಿಗೆ ಸರ್ಕಾರದ ಬಳಿ ಉದ್ಯೋಗಕ್ಕಾಗಿ ಸಮಗ್ರವಾದ ಯೋಜನೆಯಿದೆಯೇ ಎಂದು ನೋಡಿದರೆ ನಿರಾಶೆಯ ಉತ್ತರ ಸಿಗುತ್ತದೆ. ಬಹುತೇಕ ನಿರುದ್ಯೋಗ ಯುವಕರೇ ಅಪರಾಧ, ಕೋಮುಗಲಭೆ ಮತ್ತು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ.
ಇಂತಹ ಅನಾಹುತಗಳನ್ನು ತಪ್ಪಿಸಿ, ದುಡಿಯುವ ಶಕ್ತಿಯುಳ್ಳ ಯುವಜನರಿಗೆ ಉದ್ಯೋಗ ಸೃಷ್ಟಿಯಾಗಬೇಕು ಮತ್ತು ಅಭದ್ರ ಸ್ಥಿತಿಯಲ್ಲಿರುವ ಗುತ್ತಿಗೆ ನೌಕರರಿಗೆ ಸುಭದ್ರ ಉದ್ಯೋಗ ಕಲ್ಪಿಸುವಂತೆ ಸರ್ಕಾರಗಳ ಮೇಲೆ ಒತ್ತಡ ಹೇರುವ ಸಲುವಾಗಿ ಕರ್ನಾಟಕದಲ್ಲಿ ‘ಉದ್ಯೋಗಕ್ಕಾಗಿ ಯುವಜನರು’ ವೇದಿಕೆಯು ಕಳೆದ ಒಂದು ವರ್ಷದಿಂದ ಆಂದೋಲನ ನಡೆಸಿಕೊಂಡು ಬರುತ್ತಿದೆ. ಆದರೆ ಸರ್ಕಾರಗಳು ಇದರ ಗಂಭೀರತೆಯನ್ನು ಮನಗಾಣದೆ ಜಾಣ ಕಿವುಡರಂತೆ ವರ್ತಿಸುತ್ತಿವೆ. ಸರ್ಕಾರಗಳ ಈ ಧೋರಣೆಯಿಂದಾಗಿಯೇ ಹತಾಶ ಯುವಕರು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ ಅಂದರೆ ತಪ್ಪಾಗಲಿಕ್ಕಿಲ್ಲ.
ರಾಥೋಡ್‍ನ ವಿಚಾರಕ್ಕೇ ಮರಳುವುದಾದರೆ, ಉದ್ಯೋಗಕ್ಕಾಗಿ ಯುವಜನರು ಆಂದೋಲನ ಬಿಡುಗಡೆ ಮಾಡಿದ್ದ ‘ಯುವಜನ ಪ್ರಣಾಳಿಕೆ’ಯನ್ನು ಮೂರು ಪಕ್ಷದವರ ಮುಂದಿಟ್ಟು, ತಮ್ಮ ಪ್ರಣಾಳಿಕೆಯಾಗಿಸಿಕೊಳ್ಳಲು ಒತ್ತಾಯಿಸಿತ್ತು. ಜೆಡಿಎಸ್‍ನ ಕುಮಾರಸ್ವಾಮಿಯವರು ಆಂದೋಲನದ ಪ್ರಣಾಳಿಕೆಯ ಅಂಶಗಳ ಸಾಲುಗಳನ್ನಿಟ್ಟುಕೊಂಡು ಉದ್ಯೋಗ ಸೃಷ್ಟಿಯ ಕುರಿತು ಪತ್ರಿಕೆ ಮತ್ತು ಟಿವಿಗಳಲ್ಲಿ ಪ್ರಚಾರ ಮಾಡಿದ್ದರು. ಇದನ್ನು ಅಪಾರವಾಗಿ ನಂಬಿದ್ದ ಅನಿಲ್ ಚುನಾವಣೆ ಸಮಯದಲ್ಲಿ ಜೆಡಿಎಸ್ ಪರ ಪ್ರಚಾರ ಮಾಡಿದ್ದಲ್ಲದೇ ತನ್ನ ಗೆಳೆಯರ ಬಳಿ, “ಜೆಡಿಎಸ್ ಗೆಲ್ಲಬೇಕು, ಕುಮಾರಸ್ವಾಮಿ ಅಧಿಕಾರಕ್ಕೆ ಬಂದರೆ ಉದ್ಯೋಗ ಸೃಷ್ಟಿಯಾಗುತ್ತದೆ” ಎಂದು ಹೇಳಿಕೊಂಡಿದ್ದ. ತಾನು ಮಾಡಿದ ವಿಡಿಯೋದಲ್ಲಿಯೂ ಕುಮಾರಸ್ವಾಮಿ ಅವರನ್ನು “ಅನುಭವಿಗಳು, ಮೋಸ್ಟ್ ಇಂಟಲಿಜೆಂಟ್ ಚೀಫ್ ಮಿನಿಸ್ಟರ್ ಆಫ್ ಕರ್ನಾಟಕ” ಎಂದು ಬಣ್ಣಿಸಿರುವುದು ಸಿಎಂ ಮೇಲೆ ಆತನಿಟ್ಟಿರುವ ಭರವಸೆಯನ್ನು ತೋರಿಸುತ್ತದೆ.
ಇದೀಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ, ಅನಿಲ್ ಆತ್ಮಹತ್ಯೆ ಮಾಡಿಕೊಂಡು ವಾರಗಳೆ ಕಳೆದರು ಸಾಂತ್ವನಕ್ಕಾದರು ಸಿಎಂ ಆತನ ಮನೆಕಡೆ ತಲೆ ಹಾಕದಿರುವುದು ನಿರುದ್ಯೋಗಿಗಳ ವಿಚಾರದಲ್ಲಿ ಅವರೆಷ್ಟು ಗಂಭೀರವಾಗಿದ್ದಾರೆ ಮತ್ತು ಚುನಾವಣಾ ಪೂರ್ವ ಅವರು ಕೊಟ್ಟಿದ್ದ ಆಶ್ವಾಸನೆಗಳ ಗಟ್ಟಿತನವೆಷ್ಟು ಎಂಬುದು ಅರ್ಥವಾಗುತ್ತದೆ.
ನಿರುದ್ಯೋಗದ ವಿಚಾರ 70-80ರ ದಶಕದ ನಂತರ ಇದೀಗ ಮತ್ತೆ ಮುನ್ನಲೆಗೆ ಬಂದಿದೆ. ರಾಜಕೀಯ ಪಕ್ಷಗಳೂ ಚುನಾವಣೆ ಆಶ್ವಾಸನೆಯಲ್ಲಿ ಉದ್ಯೋಗ ಸೃಷ್ಟಿಯ ಭರವಸೆ ನೀಡುವ ಅನಿವಾರ್ಯಕ್ಕೆ ತುತ್ತಾಗಿವೆ. ಆದರೆ ಇವೆಲ್ಲ ಕೇವಲ ಎಲೆಕ್ಷನ್‍ಗೆ ಮಾತ್ರವೇ ಸೀಮಿತವಾಗುಳಿಯುತ್ತಿವೆ. ನಮ್ಮ ಪ್ರಧಾನಮಂತ್ರಿಗಳು ಮತ್ತು ಇತರೆ ರಾಜಕಾರಣಿಗಳ ಹೇಳಿಕೆಗಳು ಇದನ್ನು ಪುಷ್ಠೀಕರಿಸುತ್ತಿವೆ. ಉದ್ಯೋಗ ಸೃಷ್ಟಿಯ ಪ್ರಶ್ನೆ ಬಂದಾಗ ‘ಪಕೋಡ ಮಾರುವುದು ಉದ್ಯೋಗವಲ್ಲವೇ’ ಎಂಬ ಉಡಾಫೆಯ ಉತ್ತರ ಪ್ರಧಾನಿಗಳಿಂದ ಬಂದರೆ, ಆರ್.ವಿ. ದೇಶಪಾಂಡೆಯಂತಹ ರಾಜ್ಯದ ಕಂದಾಯ ಮಂತ್ರಿಗಳೂ ಇದನ್ನು ಸಮರ್ಥಿಸಿಕೊಳ್ಳುತ್ತಾರೆ. ಇದರಿಂದ, ಯುವಜನರನ್ನು ವಂಚಿಸುವಲ್ಲಿ ರಾಜಕಾರಣಿಗಳ ನಡುವೆ ಯಾವ ಪಕ್ಷಬೇಧವೂ ಇಲ್ಲ ಅನ್ನೋದು ಸಾಬೀತಾಗುತ್ತೆ. ಭಾರತದ ಸಮಸ್ತ ಜನರಿಗೆ ಸರ್ಕಾರವೇ ಉದ್ಯೋಗ ಸೃಷ್ಟಿ ಮಾಡಲು ಸಾಧ್ಯವಿಲ್ಲ ನಿಜ. ಆದರೆ, ಉದ್ಯೋಗ ಸೃಷ್ಟಿಯಾಗುವಂತ ವಾತಾವರಣ ನಿರ್ಮಿಸಿಲು ಸಾಧ್ಯವಿದೆ. ಅದು ಈ ಸರ್ಕಾರಗಳ ಜವಾಬ್ದಾರಿಯೂ ಹೌದು.
ತಮ್ಮ ಹೆತ್ತವರಿಗೆ ಹೊರೆಯಾಗಿದ್ದೇವೆ ಪಾಪಪ್ರಜ್ಞೆಯಿಂದ ಹೊರಬರಲು ಹಲವು ಯುವಜನರು ತಮ್ಮ ಓದಿಗೆ ಸಂಬಂಧವೇ ಇಲ್ಲದಂತ ತಾತ್ಕಾಲಿಕ ಉದ್ಯೋಗಗಳ ಬೆನ್ನುಹತ್ತಿ ಅಭದ್ರತೆಯಲ್ಲೇ ಬದುಕು ಸಾಗಿಸುತ್ತಾರೆ. ಇನ್ನು ಕೆಲವರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯ ದಾರಿಯನ್ನು ಹಿಡಿದಿದ್ದಾರೆ!!
ಸಂಪನ್ಮೂಲಗಳ ಶ್ರೀಮಂತಿಕೆಯನ್ನು ಹೊಂದಿರುವ ಭಾರತದಂತ ದೇಶದಲ್ಲಿಯೂ ನಿರುದ್ಯೋಗ ಸಮಸ್ಯೆಯಿಂದ ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದರೆ ಇದು ಪ್ರಜಾಪ್ರಭುತ್ವದ ದೊಡ್ಡ ವ್ಯಂಗ್ಯವೇ ಸರಿ!

– ಸರೋವರ್ ಬೆಂಕಿಕೆರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...