Homeಕರ್ನಾಟಕಮಾಜಿ ‘ಅನರ್ಹ’ರ ಮಂತ್ರಿಗಿರಿ ವಿಳಂಬಕ್ಕೆ ಕಾರಣವಾಗಿರೋದು ‘ಧನುರ್ಮಾಸ’ವೋ? ಶಾ ಲೆಕ್ಕಾಚಾರವೋ?

ಮಾಜಿ ‘ಅನರ್ಹ’ರ ಮಂತ್ರಿಗಿರಿ ವಿಳಂಬಕ್ಕೆ ಕಾರಣವಾಗಿರೋದು ‘ಧನುರ್ಮಾಸ’ವೋ? ಶಾ ಲೆಕ್ಕಾಚಾರವೋ?

- Advertisement -
- Advertisement -

ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ತುದಿಗಾಲ ಮೇಲೆ ನಿಂತಿರುವ ಮಾಜಿ ಅನರ್ಹ ಕಂ ಹಾಲಿ ಅರ್ಹ ಶಾಸಕರಿಗೆ ಇನ್ನೂ ಒಂದು ತಿಂಗಳು ವಿರಹ ವೇದನೆ ತಪ್ಪಿದ್ದಲ್ಲ ಎಂಬ ಮಾತುಗಳು ಶಕ್ತಿಸೌಧದ ಪಡಸಾಲೆಯಲ್ಲಿ ಕೇಳಿಬರುತ್ತಿವೆ. ಫಲಿತಾಂಶ ಬಂದು ಮೂರು ದಿನವಾದರು ಇದುವರೆಗೆ ಹೈಕಮಾಂಡ್‌ನಿಂದ ಯಡ್ಯೂರಪ್ಪನವರಿಗೆ ಬುಲಾವ್ ಬಂದಿಲ್ಲ. ದಿಲ್ಲಿ ನಾಯಕರಿಂದ ಗ್ರೀನ್ ಸಿಗ್ನಲ್ ಸಿಗದ ಹೊರತು ಸಂಪುಟ ವಿಸ್ತರಣೆಯಾಗದು. ಮಾಧ್ಯಮದವರ ಜೊತೆ ಮಾತನಾಡುತ್ತ ತಾನು ಇನ್ನೂ ಒಂದು ವಾರ ದಿಲ್ಲಿಗೆ ಹೋಗಲ್ಲ ಎಂಬ ಮಾತನ್ನು ಯಡ್ಯೂರಪ್ಪನವರು ಹೇಳಿದ್ದಾರೆ. ಮುಂದಿನ ವಾರದಿಂದ ಧನುರ್ಮಾಸ ಶುರುವಾಗಲಿರುವುದರಿಂದ, ಅಲ್ಲಿಂದ ಒಂದು ತಿಂಗಳು, ಅಂದರೆ ಜನವರಿ ಮೂರನೇ ವಾರದವರೆಗೆ ಯಾವ ಶುಭಕಾರ್ಯಗಳೂ ನಡೆಯುವುದು ಕ್ಷೇಮವಲ್ಲ ಎಂಬ ಮೂಢನಂಬಿಕೆ ಪಂಚಾಂಗದಲ್ಲಿದೆ. ಅದನ್ನು ಅಪಾರವಾಗಿ ನಂಬುವ ಯಡ್ಯೂರಪ್ಪ ಧನುರ್ಮಾಸದಲ್ಲಿ ಸಂಪುಟ ವಿಸ್ತರಣೆಗೆ ಕೈಹಾಕಲಾರರು ಎನ್ನುತ್ತಿವೆ ರಾಜಕೀಯ ವಿಶ್ಲೇಷಣೆಗಳು. ಹಾಗಾಗಿ ಉಪಚುನಾವಣೆಯಲ್ಲಿ ಗೆದ್ದು ಬಂದರು ಮಾಜಿ ಅನರ್ಹರು ಮಂತ್ರಿಗಳಾಗಲು ಇನ್ನು ಒಂದು ತಿಂಗಳು ಕಾಯಬೇಕಾಗಬಹುದು.

ಮೇಲ್ನೋಟಕ್ಕೆ ಧನುರ್ಮಾಸವನ್ನು ಈ ವಿಳಂಬಕ್ಕೆ ಕಾರಣವಾಗಿ ತೋರಿಸಲಾಗುತ್ತಿದೆಯಾದರು, ಇದರ ಹಿಂದೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಲೆಕ್ಕಾಚಾರಗಳೂ ಇವೆ  ಎನ್ನಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ರಾತ್ರೋರಾತ್ರಿ ರಾಷ್ಟ್ರಪತಿ ಆಳ್ವಿಕೆಯನ್ನು ತೆರವುಗೊಳಿಸಿ, ಬೆಳ್ಳಂಬೆಳಗಿನ ಚುಮುಚುಮು ಛಳಿಯಲ್ಲೇ ಫಡ್ನವೀಸ್‌ಗೆ ಪ್ರಮಾಣವಚನ ಸ್ವೀಕರಿಸಲು ಗ್ರೀನ್‌ಸಿಗ್ನಲ್ ಕೊಡುವಷ್ಟ ಆತುರ ತೋರಿದ ಬಿಜೆಪಿಗೆ ಕರ್ನಾಟಕದ ಸಂಪುಟ ವಿಸ್ತರಣೆಗೆ ಅನುಮತಿ ಕೊಡಲು ಒಂದು ವಾರ ಕಾಯಿಸುವ ಯಾವ ಘನ ಕಾರಣಗಳೂ ಕಾಣುತ್ತಿಲ್ಲ. ಈಗಾಗಲೇ ಸಿಎಂ ಯಡ್ಯೂರಪ್ಪನವರು ಕೊಟ್ಟ ಮಾತಿನಂತೆ ಉಪಚುನಾವಣೆಯಲ್ಲಿ ಗೆದ್ದ ಎಲ್ಲರಿಗೂ ಮಂತ್ರಿ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ಹೈಕಮಾಂಡ್‌ನ ಆಶ್ವಾಸನೆಯಿಂದಲೇ ಅವರು ಇಷ್ಟು ಘಂಟಾಘೋಷವಾಗಿ ಹೇಳುತ್ತಿದ್ದಾರೆ. ಮಂತ್ರಿ ಮಾಡುವುದೇ ದಿಟವೆಂದ ಮೇಲೆ ಕಾಯಿಸುವುದರಿಂದ ಏನು ಪ್ರಯೋಜನ? ಯಾವ ಲೆಕ್ಕಾಚಾರವನ್ನು ಶಾ ಈಡೇರಿಸಿಕೊಳ್ಳಬಹುದು? ಎಂಬ ಪ್ರಶ್ನೆಗಳು ಸಹಜವಾಗಿಯೇ ಹುಟ್ಟಿಕೊಳ್ಳುತ್ತವೆ.

ಈ ಪ್ರಶ್ನೆಗಳಿಗೆ ಉತ್ತರವಾಗಿ ಹೀಗೊಂದು ವಿಶ್ಲೇಷಣೆ ಹರಿದಾಡುತ್ತಿದೆ. ಯಡ್ಯೂರಪ್ಪನವರು ಮುಖ್ಯಮಂತ್ರಿಯಾಗುವುದು ಬಿಜೆಪಿ ಹೈಕಮಾಂಡ್‌ಗೆ ಮೊದಲಿನಿಂದಲೂ ಇಷ್ಟವಿರಲಿಲ್ಲ. ಅವರು ತೋರಿದ ಅಸಹಕಾರ, ನಿರ್ಲಕ್ಷ್ಯಗಳೇ ಇದನ್ನು ಸಾಬೀತು ಮಾಡುತ್ತವೆ. ಇಂಥಾ ಸಮಯದಲ್ಲಿ ಎದುರಾದ ಉಪಚುನಾವಣೆಯ ಬಗ್ಗೆಯೂ ಹೈಕಮಾಂಡ್ ಹೆಚ್ಚಿನ ಆಸಕ್ತಿಯನ್ನೇನೂ ತೋರಲಿಲ್ಲ. ನೀವು ಮುಖ್ಯಮಂತ್ರಿಯಾಗಿ ನಿಮ್ಮ ಸರ್ಕಾರ ಉಳಿಯಬೇಕೆಂದರೆ ಅನರ್ಹರನ್ನು ನೀವೇ ಗೆಲ್ಲಿಸಿಕೊಳ್ಳಿ ಎಂಬ ವರ್ತನೆಯಷ್ಟೆ ಹೈಕಮಾಂಡ್‌ನಿಂದ ಯಡ್ಯೂರಪ್ಪಗೆ ಸಿಕ್ಕಿದ್ದು.

ಆ ಸವಾಲಿನಲ್ಲಿ ಯಡ್ಯೂರಪ್ಪ ಭರ್ಜರಿಯಾಗೇ ಗೆದ್ದು ತೋರಿಸಿದ್ದಾರೆ. ನಾಯಕರ ಅಸಹಕಾರ, ಟಿಕೇಟ್ ತಪ್ಪಿದವರ ಬಂಡಾಯದ ನಡುವೆಯೂ ಏಕಾಂಗಿಯಾಗಿ ‘ತಂತ್ರ’ಗಾರಿಕೆ ನಡೆಸಿ, ಹದಿನೈದು ಕ್ಷೇತ್ರಗಳ ಪೈಕಿ ಹನ್ನೆರಡರಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಸಂಖ್ಯಾಬಲವನ್ನು 117ಕ್ಕೆ ಏರಿಸಿಕೊಂಡಿದ್ದಾರೆ. ಈ ಮೂಲಕ ರಾಜ್ಯ ಬಿಜೆಪಿಗೆ ಈಗಲೂ ನಾನೇ ವರ್ಚಸ್ವಿ ನಾಯಕ ಎಂಬುದನ್ನಷ್ಟೇ ಅಲ್ಲ, ಲಿಂಗಾಯತ ಓಟ್ ಬ್ಯಾಂಕ್‌ಗೆ ಈಗಲೂ ನಾನೇ ಅಧಿನಾಯಕ ಅನ್ನೋದನ್ನು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಒಟ್ಟಿನಲ್ಲಿ ಈ ಉಪಚುನಾವಣೆಯ ಫಲಿತಾಂಶ ಯಡ್ಯೂರಪ್ಪನವರನ್ನು ಪಕ್ಷದೊಳಗೆ ಮತ್ತಷ್ಟು ಬಲಿಷ್ಠಗೊಳಿಸಿದೆ. ಅವರನ್ನು ಮೂಲೆಗುಂಪು ಮಾಡುವ ಹಾದಿಯಲ್ಲಿದ್ದ ಹೈಕಮಾಂಡ್ ಕೊಂಚ ಯೋಚಿಸುವಂತೆ ಮಾಡಿದೆ.

ಯಡ್ಯೂರಪ್ಪ ಎಂಥಾ ಡಾಮಿನೇಟ್ ವ್ಯಕ್ತಿತ್ವದವರು ಅನ್ನೋದು ಅಮಿತ್ ಶಾಗೆ ಗೊತ್ತಿಲ್ಲದ ಸಂಗತಿಯೇನಲ್ಲ. ಕೊಂಚ ಅವಕಾಶ ಸಿಕ್ಕರೂ ಹೈಕಮಾಂಡ್‌ನ ಅಳತೆಮೀರಿ ಬೆಳೆದುಬಿಡುವ ಸಾಧ್ಯತೆಯೂ ಗೊತ್ತಿದೆ.

ಈ ಫಲಿತಾಂಶದಿಂದ ಯಡ್ಯೂರಪ್ಪ ಮೇಲುಗೈ ಸಾಧಿಸಿರೋದ್ರಿಂದ ಪಕ್ಷದೊಳಗೇ ಅವರತ್ತ ಸರಿದುಕೊಳ್ಳುವ ಬೆಂಬಲಿಗರ ಸಂಖ್ಯೆ ಹಿಗ್ಗಲಿದೆ. ಇನ್ನು ತಮ್ಮತಮ್ಮ ಮಾತೃಪಕ್ಷಗಳಿಗೆ ರಾಜೀನಾಮೆ ಕೊಟ್ಟು ಬಂದಿರುವ ಹದಿನೇಳು ಮಂದಿಯೂ ಯಡ್ಯೂರಪ್ಪನವರನ್ನು ನಂಬಿ, ಅವರ ಮೇಲೆ ವಿಶ್ವಾಸವಿಟ್ಟು ಬಂದಿದ್ದಾರೆಯೇ ವಿನಾಃ ಬಿಜೆಪಿ ಪಕ್ಷವನ್ನು ಇಡಿಯಾಗಿ ನಂಬಿಯಾಗಲಿ ಅಥವಾ ಮೋದಿ-ಶಾ ಜೋಡಿಯ ನೇರ ಮಧ್ಯಸ್ಥಿಕೆಯಿಂದಾಗಲಿ ಅಲ್ಲ. ಅವರಿಗೆ ಯಾವ ತ್ರಾಸೂ ಇಲ್ಲದೆ, ಏಕಾಏಕಿ ಮಂತ್ರಿಭಾಗ್ಯ ಕರುಣಿಸಿಬಿಟ್ಟರೆ ಅವರು ತಮ್ಮನ್ನು ಮಂತ್ರಿ ಮಾಡಿದ್ದೇ ಯಡ್ಯೂರಪ್ಪನವರು ಅಂತ ಅವರ ಪಾಳೆಯವನ್ನೇ ಸೇರಿಬಿಡುವ ಸಾಧ್ಯತೆ ಹೆಚ್ಚು. ಯಾಕೆಂದರೆ ತಮ್ಮ ಗೆಲುವಿನಲ್ಲಿ ಯಡ್ಯೂರಪ್ಪನವರ ಮುತುವರ್ಜಿಯನ್ನು ಅವರು ಹತ್ತಿರದಿಂದ ಕಂಡಿದ್ದಾರೆ. ಹುಣಸೂರಿನಲ್ಲಿ ಸೋತಿರುವ ಅನರ್ಹ ಶಾಸಕ ಎಚ್.ವಿಶ್ವನಾಥ್ ’ನಾನು ಚುನಾವಣೆಯಲ್ಲಿ ಸೋತಿರಬಹುದು. ಆದರೆ ನಮಗೆ ಯಡ್ಯೂರಪ್ಪನವರೇ ಹೈಕಮಾಂಡ್’ ಎಂದು ಹೇಳಿರೋದು ಈ ಸಾಧ್ಯತೆಯನ್ನು ರುಜುವಾತು ಮಾಡುತ್ತೆ.

ಹಾಗೇನಾದರು ಆದಲ್ಲಿ, ಸಂಪುಟದ ಮುಕ್ಕಾಲು ಭಾಗ ಯಡ್ಯೂರಪ್ಪನವರ ಬೆಂಬಲಿಗರೇ ತುಂಬಿಕೊಂಡಂತಾಗುತ್ತೆ. ಸರ್ಕಾರದ ಮೇಲಷ್ಟೆ ಅಲ್ಲ, ಪಕ್ಷದ ಮೇಲೂ ಯಡ್ಯೂರಪ್ಪನವರ ಹಿಡಿತ ಬಿಗಿಗೊಳ್ಳುತ್ತದೆ. ಆಗ ಮೂವರು  ಡಿಸಿಎಂಗಳನ್ನು ನೇಮಿಸಿ, ನಳಿನ್ ಕುಮಾರ್ ಕಟೀಲ್ ಥರದ ಅಧ್ಯಕ್ಷರನ್ನು ಆಯ್ಕೆ ಮಾಡಿ ಯಡ್ಯೂರಪ್ಪರನ್ನು ಕಟ್ಟಿಹಾಕಲು ತಾವು ಮಾಡಿದ ಪ್ರಯತ್ನಗಳೆಲ್ಲ ವ್ಯರ್ಥವಾಗಿಬಿಡುತ್ತವೆ ಎಂಬುದು ಹೈಕಮಾಂಡ್‌ಗೆ ಚೆನ್ನಾಗಿಯೇ ಗೊತ್ತು.

ಅದಕ್ಕೋಸ್ಕರವೇ ಈ ವಿಳಂಬ ನೀತಿ ಎನ್ನಲಾಗುತ್ತಿದೆ. ಹೊಸದಾಗಿ ಮಂತ್ರಿಯಾಗುವವರಿಗೆ ‘ಯಡ್ಯೂರಪ್ಪನವರಿಗಿಂತಲೂ ಹೈಕಮಾಂಡ್ ಕೃಪಾಕಟಾಕ್ಷವೇ ತುಂಬಾ ಮುಖ್ಯ’ ಎಂಬ ಬಿಜೆಪಿ ಸಂಸ್ಕೃತಿಯನ್ನು ಮನದಟ್ಟು ಮಾಡಿಸಿ ಅವರು ಸಾರಾಸಗಟು ಯಡ್ಯೂರಪ್ಪನವರ ಹಿಂಬಾಲಕರಾಗದಂತೆ ಸತಾಯಿಸಲು ನಿರ್ಧರಿಸಲಾಗಿದೆ ಎನ್ನುತ್ತಿವೆ ಮೂಲಗಳು.

ಇಲ್ಲಿ ಇನ್ನೂ ಒಂದು ಲೆಕ್ಕಾಚಾರವಿದ್ದಿರಬಹುದು. ಗೆದ್ದ ಕೂಡಲೇ ಅವರನ್ನು ಅನಾಯಾಸವಾಗಿ ಮಂತ್ರಿಮಾಡಿಬಿಟ್ಟರೆ ಪೊಗದಸ್ತಾದ ಖಾತೆಗೇ ಬೇಡಿಕೆ ಇಟ್ಟುಬಿಡುತ್ತಾರೆ. ಈ ಸಂದರ್ಭದಲ್ಲಿ ಇಲ್ಲ ಎನ್ನುವುದೂ ಕಷ್ಟ. ತುಸು ಸತಾಯಿಸಿ, ‘ಮಂತ್ರಿ ಮಾಡಿದರೆ ಸಾಕು, ಖಾತೆ ಯಾವುದಾದರೇನು’ ಎನ್ನುವಲ್ಲಿಗೆ ಬಗ್ಗಿಸಿ ಮಂತ್ರಿಗಿರಿ ಕರುಣಿಸುವ ಆಲೋಚನೆಯೂ ಇರಬಹುದು. ಉಪಚುನಾವಣೆಯಲ್ಲಿ ಗೆದ್ದ ವಲಸಿಗರೆಲ್ಲ ಭರಪೂರ ಖಾತೆಗಳ ಮೇಲೆ ಕಣ್ಣಿಟ್ಟು ಕೂತಿದ್ದಾರೆ. ಅವರಿಗೆ ಅವುಗಳನ್ನು ಬಿಟ್ಟುಕೊಟ್ಟರೆ, ಮೂಲ ಬಿಜೆಪಿಗರಲ್ಲಿ ಬಂಡಾಯ ಶುರುವಾಗುತ್ತೆ. ಅದನ್ನು ತಡೆಯಬೇಕೆಂದರೆ, ಹೀಗೆ ಒಂದಷ್ಟು ಸತಾಯಿಸಿ ಮಂತ್ರಿ ಮಾಡುವುದು ಒಳಿತು ಎಂಬ ತಂತ್ರವೂ ಇದ್ದಿರಬಹುದು. ಬಹುಶಃ ಈ ತಂತ್ರೋಪದೇಶ ಮಾಡಿಯೇ ಯಡ್ಯೂರಪ್ಪನವರನ್ನೂ ಬಿಜೆಪಿ ಹೈಕಮಾಂಡ್ ವಿಳಂಬ ನೀತಿಗೆ ಒಪ್ಪಿಸಿರಲೂಬಹುದು. ಇದು ದಿಟವೇ ಆಗಿದ್ದರೆ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಉರುಳಿಸುವ ಹುನ್ನಾರ ಹೈಕಮಾಂಡ್‌ನದ್ದು. ಯಾವುದನ್ನೂ ತಳ್ಳಿಹಾಕಲಿಕ್ಕಾಗುವುದಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...