Homeಕರ್ನಾಟಕಕೊಂದವರು ಯಾರು: ಧರ್ಮಸ್ಥಳದಲ್ಲಿ ನಡೆದಿರುವ ಎಲ್ಲಾ ಹತ್ಯೆಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು: ಮಲ್ಲಿಗೆ ಸಿರಿಮನೆ

ಕೊಂದವರು ಯಾರು: ಧರ್ಮಸ್ಥಳದಲ್ಲಿ ನಡೆದಿರುವ ಎಲ್ಲಾ ಹತ್ಯೆಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು: ಮಲ್ಲಿಗೆ ಸಿರಿಮನೆ

- Advertisement -
- Advertisement -

“ನಾವು ಕೊಂದವರು ಯಾರು’ ಆಂದೋಲನದಿಂದ ‘ಮಹಿಳಾ ನ್ಯಾಯ ಸಮಾವೇಶ’ವನ್ನು ಬೆಳ್ತಂಗಡಿಯಲ್ಲಿ ಹಮ್ಮಿಕೊಳ್ಳಬೇಕು ಎಂದುಕೊಂಡಾಗ ನೂರಾರು ಪ್ರಶ್ನೆಗಳು, ನೂರಾರು ಆಪಾದನೆಗಳು, ಆರೋಪಗಳು ಬಂದವು. ಯಾಕೆ ಇಲ್ಲಿಗೆ ಬರುತ್ತಿದ್ದಾರೆ, ಇಲ್ಲಿಗೇ ಬಂದು ಏನು ಮಾಡುತ್ತಾರೆ ಅನ್ನುವ ಹಲವು ಬಗೆಯ ಪ್ರಶ್ನೆಗಳು ಬಂದವು. ಇವತ್ತು ನಮ್ಮ ಹಕ್ಕೋತ್ತಾಯಗಳು, ಆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಟ್ಟಿರುತ್ತವೆ” ಎಂದು ಸಾಮಾಜಿಕ ಹೋರಾಟಗಾರ್ತಿ ಮಲ್ಲಿಗೆ ಸಿರಿಮನೆ ಹೇಳಿದರು.

ಡಿಸೆಂಬರ್ 16ರಂದು ಬೆಳ್ತಂಗಡಿಯಲ್ಲಿ ಹಮ್ಮಿಕೊಂಡಿದ್ದ ‘ಕೊಂದವರು ಯಾರು ಆಂದೋಲನ’ದ ‘ಮಹಿಳಾ ನ್ಯಾಯ ಸಮಾವೇಶದ’ಲ್ಲಿ ಪ್ರಸ್ತಾವಿಕ ಮಾತುಗಳನ್ನಾಡಿದ ಅವರು ‘ಇಲ್ಲಿ ನೆರೆದಿರುವ ಎಲ್ಲರೂ ಸಹ ಕಾರ್ಯಕ್ರಮವನ್ನ ವೀಕ್ಷಣೆ ಮಾಡಲು ಬಂದವರಲ್ಲ, ಬದಲಿಗೆ ತಮ್ಮ ತಮ್ಮ ಊರುಗಳಿಂದ, ತಮ್ಮ ತಮ್ಮ ಬದುಕುಗಳಿಂದ, ತಮ್ಮ ತಮ್ಮ ಜೀವನದ ನೋವಿನ ಕಥೆಗಳಿಂದ ಒಂದೊಂದು ಕಿಡಿಯನ್ನು ಹೊತ್ತಿಸಿಕೊಂಡು ಬಂದು, ಈ ಧರ್ಮಸ್ಥಳದ ನೆಲದಲ್ಲಿ ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಲಿ ಅಂತಾ ಆಗ್ರಹಿಸುತ್ತಿರುವವರು. ಇಲ್ಲಿ ಬಂದಂತಹ ಹೆಣ್ತನದ, ಹೆಂಗರುಳಿನ ಎಲ್ಲರೂ ಕೂಡಾ ನ್ಯಾಯಕ್ಕಾಗಿ ಆಗ್ರಹಿಸುವ ದೀಪಗಳು ಎಂದರು. 

‘ಇಲ್ಲಿ ಬಂದವರಲ್ಲಿ ದೂರದ ಬೀದರ್ ನ ಭಾಲ್ಕಿಯಿಂದ, ಇದೇ ಬೆಳ್ತಂಗಡಿಯ ತನಕ, ಪಕ್ಕದ ಜಿಲ್ಲೆ ಚಿಕ್ಕಮಂಗಳೂರಿನಿಂದ, ದೂರದ ಚಿತ್ರದುರ್ಗದ ತನಕ, ಎಲ್ಲಾ ಜಿಲ್ಲೆಗಳಿಂದ, ಎಲ್ಲಾ ಜೀವನದ ಹಂತಗಳಿಂದ, ಬೇರೆ ಬೇರೆ ಹಿನ್ನೆಲೆಗಳಿಂದ ಬಂದವರಾಗಿದ್ದಾರೆ. ಆದರೆ ನಮ್ಮೆಲ್ಲರ ಕೂಗು ಒಂದೇ ಆಗಿದೆ, ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಬೇಕು, ಹೆಣ್ಣು ಮಕ್ಕಳಿಗೆ ಘನತೆಯಿಂದ ಬದುಕುವ ಹಕ್ಕು ಸಿಗಬೇಕು. ಸಂವಿಧಾನ ನಮಗೆ ಸಮಾನತೆಯನ್ನು ಕೊಟ್ಟಿದೆ. ಆ ಸಮಾನತೆ ನಿಜ ಜೀವನದಲ್ಲೂ ಕೂಡಾ ಜಾರಿಯಾಗಬೇಕು’ ಎಂದು ಆಗ್ರಹಿಸಿದರು. 

ಇದೇ ವೇಳೆ ಸಮಾನತೆ ನಮ್ಮ ಹಕ್ಕು, ಭಿಕ್ಷೆ ಅಲ್ಲ ಅನ್ನುವ ಘೋಷಣೆಯ ಮೂಲಕ ಪ್ರಸ್ತಾವಿಕ ಮಾತುಗಳನ್ನು ಮುಂದುವರಿಸಿದರು.

‘ನಮ್ಮ ಹಕ್ಕೋತ್ತಾಯಗಳನ್ನು ಓದಿದ್ದನ್ನು ಕೇಳಿದ ಮೇಲೆ ಇದು ಯಾವುದೋ ಒಂದು ಊರಿಗೆ ಸಂಬಂಧಿಸಿದ, ಒಂದು ಪ್ರಕರಣಕ್ಕೆ ಸಂಬಂಧಿಸಿದ ಹೋರಾಟ ಅಲ್ಲ ಅನ್ನುವುದು ನಿಮಗೆ ಅರ್ಥವಾಗಿರುತ್ತದೆ. ‘ನಾವು ಕೊಂದವರು ಯಾರು’ ಆಂದೋಲನದಿಂದ ‘ಮಹಿಳಾ ನ್ಯಾಯ ಸಮಾವೇಶ’ವನ್ನು ಬೆಳ್ತಂಗಡಿಯಲ್ಲಿ ಹಮ್ಮಿಕೊಳ್ಳಬೇಕು ಎಂದು ಯೋಚಿಸುತ್ತಿದ್ದಾಗ, ನೂರಾರು ಪ್ರಶ್ನೆಗಳು, ನೂರಾರು ಆಪಾದನೆಗಳು, ಆರೋಪಗಳು ಬಂದವು. ಯಾಕೆ ಇಲ್ಲಿಗೆ ಬರುತ್ತಿದ್ದಾರೆ, ಇಲ್ಲಿಗೇ ಬಂದು ಏನು ಮಾಡುತ್ತಾರೆ, ಅನ್ನುವ ನೂರಾರು ಬಗೆಯ ಪ್ರಶ್ನೆಗಳು ಬಂದವು. ಇವತ್ತು ನಮ್ಮ ಹಕ್ಕೋತ್ತಾಯಗಳು, ಆ ಪ್ರಶ್ನೆಗಳಿಗೆ ಉತ್ತರ ಕೊಟ್ಟಿರುತ್ತವೆ ಎಂದುಕೊಳ್ಳುತ್ತೇನೆ. ನಾವು ಕೇವಲ ಬೆಳ್ತಂಗಡಿಗೆ ಬಂದವರಲ್ಲ, ಅಥವಾ ಇಲ್ಲಿಗೆ ಬಂದು ನಮ್ಮ ಪ್ರಯಾಣವನ್ನು ಮುಗಿಸುವವರು ಅಲ್ಲ, ಮಹಿಳಾ ಚಳವಳಿಯ ಈ ಪ್ರಯಾಣ ಶುರುವಾಗಿದ್ದು ಬಹಳಷ್ಟು ವರ್ಷಗಳ ಹಿಂದೆ. ನೂರಾರು ವರ್ಷಗಳಿಂದ ಮಹಿಳೆಯರು ನಡೆಸಿಕೊಂಡು ಬಂದಿರುವಂತ ಆಂದೋಲನದ ಕೆಲವು ಪ್ರತಿನಿಧಿಗಳು ಇಲ್ಲಿದ್ದೇವೆ. ಮುಂದೆಯು ಕೂಡಾ ಎಷ್ಟೋ ಜನ ಮಹಿಳೆಯರು, ಎಷ್ಟೋ ಜನ ನಮ್ಮ ಕಿರಿಯ ಸಹೋದರಿಯರು ಈ ಹೋರಾಟದ ಪಂಜನ್ನು ಹಿಡಿದು ಮುನ್ನೆಡೆಯುತ್ತಾರೆ’ ಎಂದು ಭರವಸೆ ವ್ಯಕ್ತ ಪಡಿಸಿದರು.  

‘ಇಂದಲ್ಲಾ-ನಾಳೆ ಈ ದೇಶದಲ್ಲಿ, ಈ ರಾಜ್ಯದಲ್ಲಿ, ಈ ನೆಲದಲ್ಲಿ ಕೂಡಾ ಹೆಣ್ಣು ಮಕ್ಕಳಿಗೆ ನ್ಯಾಯ ಖಾತ್ರಿಯಾಗುತ್ತದೆ. ಹೆಣ್ಣು ಮಕ್ಕಳಿಗೆ ಸಂವಿಧಾನ ಕೊಟ್ಟಿರುವಂತಹ ಸಮಾನತೆ ಖಾತ್ರಿಯಾಗುತ್ತೆ. ಈ ಭರವಸೆಯ ಜೊತೆಗೆ ಇಲ್ಲಿ ಬಂದು ಸೇರಿರುವವರು ನಾವು’ ಎಂದು ಹೇಳಿದರು. 

‘ಇಲ್ಲಿಗೆ ಯಾಕೆ ಬರ್ತಿದ್ದೀರೀ..ಇಲ್ಲಿ ಬಂದು ಏನ್ ಮಾಡ್ತೀರಿ ಅಂದ್ರೆ. ಹಾಗೇ ಕೇಳುವವರಿಗೆ ನಾವಿವತ್ತು ಇಲ್ಲಿಂದ ಈ ಎಲ್ಲಾ ಸಹೋದರಿಯರ ಪರವಾಗಿ ಹೇಳೋದಕ್ಕೆ ಬಯಸುತ್ತೀವಿ. ನಾವು ಇಲ್ಲಿಗೆ ಮಾತ್ರ ಬಂದವರಲ್ಲ, ಬಿಜಾಪುರದಲ್ಲಿ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಆಯ್ತು. ಅತ್ಯಾಚಾರ ಆಗಿ ಆಕೆಯನ್ನ ಅತ್ಯಂತ ಬರ್ಬರವಾಗಿ ಕೊಂದು ಹಾಕಿದ್ದರು, ಸಾಲದ್ದಕ್ಕೆ ಆ ಸಣ್ಣ ಹುಡುಗಿಯ ನಡೆತೆಯೇ ಸರಿ ಇರಲಿಲ್ಲ ಅನ್ನುವ ಆರೋಪಗಳನ್ನು ಮಾಡಲಾಯಿತು. ಆ ದಿನ ಜನಪರ ಕಾಳಜಿ ಇರುವಂತಹವರು, ಮಹಿಳಾ ಸಂಘಟನೆಗಳು ಸೇರಿದಂತೆ ಎಲ್ಲರೂ ದೊಡ್ಡ ಸಂಖ್ಯೆಯಲ್ಲಿ ಬಿಜಾಪುರಕ್ಕೆ ಹೋಗಿದ್ದೇವೆ. ಆ ದಲಿತ ಹೆಣ್ಣು ಮಗುವಿನ ಪ್ರಾಣ ಕಸಿದವರ ವಿರುದ್ಧ ಪ್ರತಿಭಟನೆ ಮಾಡಿದ್ದೇವೆ. ಆ ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದ ಹಲವಾರು ಜನ, ಈ ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದಾರೆ’ ಎಂದು ತಿಳಿಸಿದರು. 

ಅಲ್ಲದೇ ‘ನೂರಾರು ಹೆಣ್ಣು ಮಕ್ಕಳನ್ನ ಅತ್ಯಂತ ಅಸಹ್ಯಕರವಾಗಿ ಲೈಂಗಿಕ ಶೋಷಣೆಗೆ ಒಳಪಡಿಸಿದ ಪ್ರಕರಣ ಹಾಸನದಲ್ಲಿ ನಡೆದರೆ, ನಾವು ಹಾಸನಕ್ಕೂ ಹೋಗಿ, ಹಾಸನದ ನೆಲದಲ್ಲಿ ಪಾದಯಾತ್ರೆ ಮಾಡಿದ್ದೆವು, ನ್ಯಾಯಕ್ಕಾಗಿ ಘೋಷಣೆಗಳನ್ನ ಕೂಗಿದ್ದೆವು, ನಮಗೆ ನ್ಯಾಯ ಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಅಂತಾ ಕೇಳಿದ್ದೆವು. ನಮ್ಮ ಒಡಲ ಸಂಕಟದ ಧ್ವನಿ ಒಂದಲ್ಲಾ ಒಂದು ದಿನ ನ್ಯಾಯಾಲಯದ ಬಾಗಿಲನ್ನು ಮುಟ್ಟುತ್ತದೆ, ತಪ್ಪಿತಸ್ತರಿಗೆ ಶಿಕ್ಷೆ ಆಗುತ್ತದೆ. ನಮಗೆ ನ್ಯಾಯ ಸಿಗುತ್ತದೆ ಅನ್ನುವುದನ್ನು ಹಾಸನದ ಪ್ರಕರಣ ತೋರಿಸುತ್ತಿದೆ’ ಎಂದು ಹೇಳಿದರು. 

‘ಒಂದಲ್ಲಾ, ಎರಡರಲ್ಲ, ಎಲ್ಲವನ್ನು ಹೇಳಿಕೊಳ್ಳಲು ಸಮಯವಿಲ್ಲ, 70ರ ದಶಕದ ಮಥುರಾ ಪ್ರಕರಣದಿಂದ ಹಿಡಿದು, 90ರ ದಶಕದಲ್ಲಿ ಭನ್ವರಿ ದೇವಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿರುದ್ಧದ ಹೋರಾಟದಿಂದ, ಅಥವಾ ಮಹಾರಾಷ್ಟ್ರದ ಖೈರ್ಜಾಂಜಿಯಲ್ಲಿ ನಡೆದ ದಲಿತ ತಾಯಿ-ಮಗಳು ಹೋರಾಡಿದಂತಹ ಪ್ರಕರಣದಲ್ಲಿ ಅವರ ಮೇಲೆ ನಡೆದ ದೌರ್ಜನ್ಯದ ವಿರುದ್ಧದ ಹೋರಾಟದಿಂದ, ಎಲ್ಲೇ ಅನ್ಯಾಯ, ಅತ್ಯಾಚಾರ ನಡೆದರು ನಾವಲ್ಲಿ ಹೋಗಿ ಪ್ರತಿಭಟನೆ ಮಾಡಿದ್ದೇವೆ. ಇವತ್ತು ನಾವು ಯಾಕೆ ಬರಬಾರದು ಇಲ್ಲಿಗೆ, ಯಾಕೆ ಬರಬಾರದು ಬೆಳ್ತಂಗಡಿಗೆ, ಯಾಕೆ ನಾವು ಪ್ರಶ್ನೆ ಮಾಡಬಾರದು, ಇಲ್ಲಿ ಮಹಿಳೆಯರನ್ನ ಕೊಂದವರು ಯಾರು ಅನ್ನುವುದನ್ನು ನಾವು ಯಾಕೆ ಕೇಳಬಾರದು. ಯಾರು ನಮ್ಮನ್ನ ತಡೆಯುವುದು, ಯಾರು ನಮ್ಮ ಮೇಲೆ ಆಪಾದನೆ ಹೊರಿಸುತ್ತಿರುವವರು, ಅಂತವರಿಗೆ ನಿಮ್ಮ ಆತ್ಮಸಾಕ್ಷಿಯಲ್ಲಿಯೇ ಉಳುಕಿರಬೇಕು. ನಿಮ್ಮ ಎದೆಗಳನ್ನ ಮುಟ್ಟಿ ನೋಡಿಕೊಳ್ಳಿ, ನೀವೇ ಅಲ್ಲವೇ ಕೊಂದವರು, ನೀವೇ ಅಲ್ಲವೇ ಕೊಂದವರ ಪರ ನಿಂತವರು..ನಿಮ್ಮ ಆತ್ಮಸಾಕ್ಷಿಗಳನ್ನ ಮುಟ್ಟಿ ನೋಡಿಕೊಳ್ಳಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಈ ವೇಳೆ ಸರ್ಕಾರದ ಗಮನ ಸೆಳೆದ ಮಲ್ಲಿಗೆ, ‘ಸರ್ಕಾರದಲ್ಲಿ ಮೇಲೆ ಕೂತಿರುವಂತವರು, ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ಉಪಮುಖ್ಯಮಂತ್ರಿಗಳು, ಗೃಹ ಸಚಿವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ನೀವು ನಿಮ್ಮ ಮನಸಾಕ್ಷಿಯನ್ನು ಮುಟ್ಟಿ ನೋಡಿಕೊಳ್ಳಿ, ಯಾರನ್ನ ಬೆಂಬಲಿಸಬೇಕಿತ್ತು, ನೀವು ಯಾರನ್ನು ಬೆಂಬಲಿಸುತ್ತಿದ್ದೀರಿ ಎಂದು ಪ್ರಶ್ನಿಸಿದರು. ಅಲ್ಲದೇ ನಾವು ನೊಂದಂತಹ ಹೆಣ್ಣು ಮಕ್ಕಳು ಇಲ್ಲೇ ಇದ್ದೇವೆ. ತಮ್ಮ ಕುಟುಂಬದ ಕರುಳ ಕುಡಿಗಳನ್ನ ಕಳೆದುಕೊಂಡ ತಾಯಂದಿರು ಇಲ್ಲಿದ್ದಾರೆ..ನಮಗೆ ನ್ಯಾಯ ಖಾತರಿ ಪಡಿಸುವಂತವರು ಯಾರು. ನಿಮಗೆ ಜವಾಬ್ದಾರಿ ಇಲ್ಲವಾ ನಮಗೆ ನ್ಯಾಯ ಕೊಡುವಂತಾದ್ದು, ಈ ನೆಲದ ಹೆಣ್ಣು ಮಕ್ಕಳಿಗೆ ನೀವು ಉತ್ತರದಾಯಿಗಳು ಅಲ್ಲವಾ, ನೀವು ಹೊಣೆಗಾರರು ಅಲ್ಲವಾ ಎಂದು ಪ್ರಶ್ನಿಸಿದ ಅವರು ಈ ವೇಳೆ ಎಸ್.ಐ.ಟಿ ಲೋಪದೋಷಗಳ ಬಗ್ಗೆಯೂ ಮಾತನಾಡಿದರು. 

‘ಧರ್ಮಸ್ಥಳ ಪ್ರಕರಣದಲ್ಲಿ ಒಂದು ಎಸ್ಐಟಿ ರಚನೆಯಾಯಿತು. ಇಂದಲ್ಲಾ ನಾಳೆ ನಮಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆಯಲ್ಲಿ ನಾವು ಅದನ್ನು ಸ್ವಾಗತಿಸಿದೆವು, ತನಿಖೆಯಲ್ಲಿ ನೀವು ಮಾಡಿದ್ದೇನು, ಎಲ್ಲಿ ಹೋಯಿತು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ವಿಚಾರ’ ಎಂದು ಗುಡುಗಿದರು. 

‘ಇಂದು ನಾವು ಇಲ್ಲಿಗೆ ಯಾಕೆ ಬಂದಿದ್ದೇವೆ ಎಂದರೆ ನಮಗೆ ಗೊತ್ತಿರುವ ವೇದವಲ್ಲಿ, ಪದ್ಮಲತಾ, ಸೌಜನ್ಯ, ಯಮುನಾ, ಹೇಮಾವತಿ ಇಂಥ ಹತ್ತಾರು ಹೆಣ್ಣು ಮಕ್ಕಳು ಮಾತ್ರವಲ್ಲ, ಆರ್.ಟಿ.ಐ ಅರ್ಜಿಗಳ ಅಂಕಿಅಂಶಗಳಲ್ಲಿ ಬಂದತಹ ಮಾಹಿತಿಯಲ್ಲಿ 2001 ರಿಂದ 2012ರ ತನಕ, ಕೇವಲ 12ವರ್ಷಗಳಲ್ಲಿ 452 ಅಸಹಜ ಸಾವುಗಳು ನಡೆದಿವೆ. ಆತ್ಮಹತ್ಯೆ ಪ್ರಕರಣಗಳು ನಡೆದಿವೆ. ಅದರಲ್ಲಿ ಮಹಿಳೆಯರ ಸಾವುಗಳು 96, ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಒಂದು ವರ್ಷದಲ್ಲಿ ಮಹಿಳೆಯರ ಅಸಹಜ ಸಾವುಗಳು ಸಂಭವಿಸುವ ಸರಾಸರಿ ಮೊತ್ತ 37, ಆದರೆ ಇಲ್ಲಿ ಇದಕ್ಕೆ ಮೂರು ಪಟ್ಟು ಹೆಚ್ಚು ಹೆಣ್ಣು ಮಕ್ಕಳ ಅಸಹಜ ಸಾವು ಸಂಭವಿಸುತ್ತವೆ. ಇದಕ್ಕೆ ನ್ಯಾಯ ಕೇಳುವುದು ಈ ಹೋರಾಟ ಮುಖ್ಯ ಅಂಶ. ಇಷ್ಟು ಮಾತ್ರವಲ್ಲ ಈ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಸ್.ಐ.ಟಿ ಸಮಗ್ರ ತನಿಖೆ ನಡೆಸಬೇಕು.

‘ಅದಕ್ಕಿಂತಲೂ ಮುಖ್ಯವಾದ ಪ್ರಶ್ನೆ ಇಷ್ಟೆಲ್ಲಾ ದೌರ್ಜನ್ಯ ನಡೆಯುತ್ತಿರುವಾಗ ವ್ಯವಸ್ಥೆ ಏನು ಮಾಡುತ್ತಿತ್ತು. ಈ ವ್ಯವಸ್ಥೆ ಇಂಥಹ ದೌರ್ಜನ್ಯ ನಡೆಯಲು ಹೇಗೆ ಅವಕಾಶ ಮಾಡಿಕೊಟ್ಟಿತು. ಇಂತಹ ಸರಣಿ ಹತ್ಯೆಗಳು ನಡೆದವು, ಅಪರಾಧಿಗಳು ಅಂತಾ ಬಂಧಿಸಿದ ಎಲ್ಲರನ್ನ ನಿರಪರಾಧಿಗಳು ಅಂತಾ ಸರ್ಕಾರವೇ ಬಿಡುಗಡೆ ಮಾಡಿತ್ತು. ಆದರೆ ಇಲ್ಲಿ ನಡೆದ ಹತ್ಯೆ, ಅತ್ಯಾಚಾರ, ಭೀಕರ ಹತ್ಯೆ ಪ್ರಕರಣಗಳಲ್ಲಿ ನಿಜವಾಗಲೂ ಕೊಂದವರು ಯಾರು ಅನ್ನುವುದಕ್ಕೆ ಉತ್ತರ ಕೊಡಬೇಕು’ ಎಂದು ಹೇಳಿದರು. 

ಸಮಾವೇಶದ ಸಂಪೂರ್ಣ ವಿಡಿಯೋ ಇಲ್ಲಿದೆ:

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜನಾಕ್ರೋಶದ ನಡುವೆಯೇ ಎಸ್ಐಆರ್ ಸಮರ್ಥಿಸಿಕೊಂಡ ಮುಖ್ಯ ಚುನಾವಣಾ ಆಯುಕ್ತ: ‘ರಾಜಕೀಯ ದಾಳಿಗಳಿಂದ ಆಯೋಗ ವಿಚಲಿತವಾಗದು’ ಎಂದ ಜ್ಞಾನೇಶ್ ಕುಮಾರ್

ಅಹಮದಾಬಾದ್: ದೇಶದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ರಾಜಕೀಯ ಪಕ್ಷಗಳು, ನಾಗರಿಕ ಸಂಘಟನೆಗಳು ಹಾಗೂ ವಿವಿಧ ವಲಯಗಳಿಂದ ತೀವ್ರ ಟೀಕೆಗಳು ವ್ಯಕ್ತವಾಗುತ್ತಿರುವ ನಡುವೆಯೇ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...

ಕರ್ನಾಟಕ ಎಸ್ಐಆರ್: ಹೆಸರಿನ ಸಣ್ಣ ವ್ಯತ್ಯಾಸಕ್ಕಾಗಿ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರಿಗೆ ನೋಟಿಸ್; ‘ಸುಳ್ಳು ಮಾಹಿತಿ ನೀಡಿದರೆ ಜೈಲು’ ಎಂಬ ಬೆದರಿಕೆ

ಮೈಸೂರು: ಸುಮಾರು ಮೂರೂವರೆ ದಶಕಗಳ ಕಾಲ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸಿ, ಸ್ವತಃ ಚುನಾವಣಾ ಪ್ರಕ್ರಿಯೆಯ ಜವಾಬ್ದಾರಿಯುತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರೇ ಇದೀಗ ತಮ್ಮ...

SIR : ತಾಯಿಯೊಂದಿಗೆ ಮ್ಯಾಪಿಂಗ್ ಮಾಡಿದರೂ ಅಜ್ಜನ ವಯಸ್ಸಿನ ವ್ಯತ್ಯಾಸದ ನೆಪ ಹೇಳಿ ನೋಟಿಸ್ ನೀಡಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ದಿನಕ್ಕೊಂದು ವಿಲಕ್ಷಣ ಹಾಗೂ ಯಾಂತ್ರಿಕ ದೋಷಗಳನ್ನು ಹೊರಹಾಕುತ್ತಿದ್ದು, ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಲು ಬಯಸುವ ನೈಜ ಮತದಾರರನ್ನು ಆತಂಕಕ್ಕೆ ತಳ್ಳುತ್ತಿದೆ. ಬ್ಯಾಟರಾಯನಪುರ...

ಬ್ಯಾಂಕ್ ಮುಷ್ಕರ: ದೇಶಾದ್ಯಂತ ಶಾಖಾ ಸೇವೆಗಳಿಗೆ ಅಡಚಣೆ; ವಾರಾಂತ್ಯ, ಗಣೇಶ ಚತುರ್ಥಿಯಿಂದ ಹಲವು ದಿನ ಸೇವೆ ವ್ಯತ್ಯಯ 

ನವದೆಹಲಿ: ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಕರೆ ನೀಡಿರುವ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಸೆಪ್ಟೆಂಬರ್ 11ರಂದು (ಇಂದು) ನಡೆಯುತ್ತಿದ್ದು, ದೇಶದಾದ್ಯಂತ ಬ್ಯಾಂಕ್ ಗ್ರಾಹಕರ ಸಾಮಾನ್ಯ ಸೇವೆಗಳ ಮೇಲೆ ಪರಿಣಾಮ ಬೀರುವ...

ಹನೂರು ಶೂಟೌಟ್ ಪ್ರಕರಣ: ಮೂವರು ಅರಣ್ಯ ಸಿಬ್ಬಂದಿಗೆ ನಿರೀಕ್ಷಣಾ ಜಾಮೀನು.!

ಕಾವೇರಿ ವನ್ಯಜೀವಿ ಅಭಯಾರಣ್ಯದ ಹನೂರು ವ್ಯಾಪ್ತಿಯಲ್ಲಿ ಮೂವರು ಮೃತಪಟ್ಟಿದ್ದ ವಿವಾದಾತ್ಮಕ ಗುಂಡಿನ ದಾಳಿ ಪ್ರಕರಣಕ್ಕೆ ಇದೀಗ ಕಾನೂನು ತಿರುವು ಸಿಕ್ಕಿದೆ. ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಮೂವರು ಅರಣ್ಯ ಸಿಬ್ಬಂದಿಗೆ ಕೊಳ್ಳೇಗಾಲದ ಮೊದಲ ಹೆಚ್ಚುವರಿ...

ವಂದೇ ಮಾತರಂ ಗೀತೆಯ 6 ಚರಣಕ್ಕೆ ಕರ್ನಾಟಕ ಸರ್ಕಾರದ ಬ್ರೇಕ್

ವಂದೇ ಮಾತರಂ ಗೀತೆಯ ಗಾಯನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿರ್ಧಾರ ಮತ್ತು ಕಡ್ಡಾಯ ನೀತಿಗೆ ಕರ್ನಾಟಕ ಸರ್ಕಾರ ನೇರವಾಗಿ ಸೆಡ್ಡು ಹೊಡೆದಿದೆ. ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಸಂಪೂರ್ಣ...

ಸಿಜೆಪಿ ಪ್ರತಿಭಟನೆಯಲ್ಲಿ ಬಾಲಕಿ ನಿಶು ಆಜಾದ್‌ಗೆ ಬೆದರಿಕೆ; ಕ್ರಮಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 14 ವರ್ಷದ ನಿಶು ಆಜಾದ್‌ಗೆ ಕಿಡಿಗೇಡಿಗಳು ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ ಹಾಗೂ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂಬ...

ಜಾದವ್‌ಪುರ ವಿವಿ ವಿರುದ್ಧ ಸುವೇಂದು ಅಧಿಕಾರಿಯ ‘ಕೇಸರಿ ಯಾತ್ರೆ’: ‘ಆಜಾದಿ’, ‘ಲಾಲ್ ಸಲಾಂ’ ಕೂಗುವವರನ್ನು ಬೇರುಸಹಿತ ಕಿತ್ತುಹಾಕುತ್ತೇನೆ ಎಂದು ಬೆದರಿಕೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಹಾಗೂ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾಲಯದತ್ತ ನಡೆದ ‘ಗೆರುವಾ ಸಮ್ಮಾನ್ ಯಾತ್ರೆ’ (ಕೇಸರಿ ಗೌರವ ಮೆರವಣಿಗೆ) ಇದೀಗ ರಾಜ್ಯದ ರಾಜಕೀಯ ವಲಯದಲ್ಲಿ...

SIR : ಒಂದೇ ಮತಗಟ್ಟೆಯ 729 ಮತದಾರರಲ್ಲಿ 728 ಮಂದಿಯ ಹೆಸರು ಡಿಲೀಟ್!

ದೆಹಲಿಯ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌) ಮುನ್ನ, ಯಮುನಾ ನದಿ ಪಾತ್ರದ ಕೊಳಗೇರಿ ಪ್ರದೇಶವಾದ ಬೇಲಾ ಎಸ್ಟೇಟ್‌ನ ಭಾಗವೊಂದನ್ನು ಒಳಗೊಂಡಿರುವ ಮತಗಟ್ಟೆಯಲ್ಲಿ 729 ನೋಂದಾಯಿತ ಮತದಾರರಿದ್ದರು. ಆದರೆ, ಆಗಸ್ಟ್‌ನಲ್ಲಿ ಕರಡು...

ಬಂಗಾಳದ ನಾನ್‌ವೆಜ್ ವಿವಾದ: ಬಾಗೇಶ್ವರ್ ಬಾಬಾ ಹೇಳಿಕೆಗೆ ಹಿಂದೂ ವಲಯದಲ್ಲೇ ವಿರೋಧ; ‘ಹಿಂದೂ ಧರ್ಮ ಆಹಾರದ ಕೋಡ್ ಅಲ್ಲ!

ದುರ್ಗಾ ಪೂಜೆಯ ಸಂದರ್ಭದಲ್ಲಿ ಮೀನು, ಮಾಂಸ ಸೇವನೆ ಹಾಗೂ ಮಾರಾಟದ ವಿರುದ್ಧ ಬಾಗೇಶ್ವರ್ ಧಾಮದ ಮುಖ್ಯಸ್ಥ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿದ್ದ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ವಿವಾದ ಹುಟ್ಟುಹಾಕಿದ ಬೆನ್ನಲ್ಲೇ, ಇದೀಗ...