Homeಅಂಕಣಗಳುಆಘಾತವಾಣಿ | ಅಟ್ಯಾಕ್ ಹನ್ಮಂತರಾಜ್ಯ ಎಲ್ಡು ಭಾಗ ಆಗ್ಲಿ, ಒಂದು ಭಾಗದ ಖಾತೆಪಾಣಿ ನನ್ನಪ್ಪನ ಹೆಸರಿನ್ಯಾಗೆ ಐತೆ....

ರಾಜ್ಯ ಎಲ್ಡು ಭಾಗ ಆಗ್ಲಿ, ಒಂದು ಭಾಗದ ಖಾತೆಪಾಣಿ ನನ್ನಪ್ಪನ ಹೆಸರಿನ್ಯಾಗೆ ಐತೆ….

- Advertisement -
- Advertisement -

ಕೇಳುಗರಿಗೆಲ್ಲ ಸ್ವಾಗತ, ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ. ಈಗ ವಾರ್ತೆಗಳ ವಿವರ..
ಕಟ್ಟುಮಸ್ತಾದ ದೇಹದವರು ಕಂಡರೆ ಕಿಯ್ಯೋ ಕಿಯ್ಯೋ ಎಂದು ಕಿರುಚಾಡಿಕೊಂಡು ಓಡಿಹೋಗುವ ಬ್ಲೂಜೆಪಿ ಪಕ್ಷದ ಕಾರ್ಯಕರ್ತರು ಮತ್ತು ಅಖಿಲಭಾರತ ಉಂಡಾಡಿಗುಂಡರ ಪರಿಷತ್ತಿನ ಪುಕ್ಕಲರ ರಣಹೇಡಿ ಕೃತ್ಯವೊಂದು ಬಯಲಾಗಿದೆ. ಜಾರ್ಖಂಡ್‍ನಲ್ಲಿ ಭಾಷಣವೊಂದನ್ನು ಮುಗಿಸಿ ಬರುತ್ತಿದ್ದ ಸ್ವಾಮಿ ಅಗ್ನಿವೇಶ್ ಎಂಬ 80 ವರ್ಷದ ಇಳಿವೃದ್ಧ ಹೋರಾಟಗಾರರ ಮೇಲೆ ಬ್ಲೂಜೆಪಿಯ ಸಣಕಲುತೊಡೆಯ ಕೋಡಂಗಿಗಳು ಮುಗಿಬಿದ್ದು ಹಲ್ಲೆ ನಡೆಸಿವೆ. ವೃದ್ಧರು, ಮಹಿಳೆಯರನ್ನು ಕಂಡರೆ ಇದ್ದಕ್ಕಿದ್ದಂತೆ ಗಂಡಸರಾಗುವ ಈ ಕ್ರಿಮಿಗಳು ಮತ್ತು ಹುಳಹುಪ್ಪಟೆಗಳ ಪಡೆಯು ಹೊಡೆಯುವುದು ಬಡಿಯುವುದು ಮಾಡುವುದು ಈ ದೇಶದಲ್ಲಿ ಸಾಮಾನ್ಯವಾಗಿ ಹೋಗಿದೆ. ಈ ಲಂಪಟಕ್ರಿಮಿಗಳ ಅನಧಿಕೃತ ಪಿತಾಶ್ರೀ ಬ್ಲೂಜೆಪಿಯ ಪಿಶಾಚಿ ನಾಯಕರು ಮತ್ತವರ ಪುಕ್ಕಲು ಮುದುಕ ಮಾತ್ರ ಈ ಬಗ್ಗೆ ಕ್ಯಾರೆ ಕೆತ್ತ ಎನ್ನದೆ ಗಂಟಲಿಗೆ ಸೋರೆಕಾಯಿ ಸಿಗಿಸಿಕೊಂಡು ನಸುಗುನ್ನಿಗಳಂತೆ ಸುಮ್ಮನಿರುವುದು ಮೂರೂಬಿಟ್ಟವರಿಗಿಂತ ಕಡೆಯಾಗಿ ಕಾಣುತ್ತಿರುವುದು ಈ ದೇಶದ ವಾಸ್ತವ.
*****
ಬಾಯಿ ಬಿಟ್ಟರೆ ಸುಳ್ಳುಗಳ ಚರಂಡಿಯನ್ನೇ ಹರಿಸುವ ಅರಳುಮರುಳು ಲೂಸು ಗಿರಾಕಿ ಫಕೀರಪ್ಪನ ಸುಳ್ಳಿನ ಹೊಡೆತ ತಾಳಲಾಗದೆ ಅವನು ಭಾಷಣ ಮಾಡುತ್ತಿದ್ದ ಪೆಂಡಾಲೇ ಸಭಿಕರ ತಲೆಯ ಮೇಲೆ ಧುಡುಮ್ಮನೆ ಕುಸಿದು ಬಿದ್ದಿರುವ ಘಟನೆ ವರದಿಯಾಗಿದೆ. ಪೆಂಡಾಲ್ ಕುಸಿದ ಮೇಲೂ ತನ್ನ ಕೊಳಕುಬಾಯಿಯ ದರಿದ್ರ ಭಾಷಣವನ್ನು ನಿಲ್ಲಿಸದ ಲೂಸ್ ಗಿರಾಕಿ ಫಕೀರಪ್ಪನು ಯಾರ್ ಸತ್ರೆ ನಂಗೇನು ಎಂದು ಕಯೋ ಕಯೋ ಕಯ್ಯಯ್ಯೋ ಅಂತ ಸುಳ್ಳು ಬೊಗಳುತ್ತಲೇ ಇದ್ದನೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
*****
ಇದೀಗ ಬಂದ ಸುದ್ದಿ, ತಲೆಕೆಟ್ಟ ಬೀದಿ ಭಿಕಾರಿಯಂತೆ ಐದೂವರೆ ಅಡಿ ಗಡ್ಡ ಬೆಳೆಸಿಕೊಂಡು ಪೋಲಿ ತಿರುಗುವ ‘ಅಂದ್ರುಗಿನ ಸ್ತ್ರೀ ರಾಮುಲು’ ಈಗ ಹೊಸದಾಗಿ ಇನ್ನೊಂದು ಕಲ್ ಚಪ್ಪಡಿ ತಗೊಂಡು ಹೊಟ್ಟೆ ಮೇಲೆ ಎತ್ತಾಕಿಕೊಂಡಿದ್ದಾನೆ. ಕರ್ನಾಟಕ ನಮ್ಮಪ್ಪನ ಮನೆ ಆಸ್ತಿ, ಅದರ ಮೇಲೆ ನಾನು ಖಾತೆಪಾಣಿ ಮಾಡಿಸ್ಕೊಂಡಿದೀನಿ, ಆದ್ರಿಂದ ರಾಜ್ಯ ಎರಡು ಭಾಗ ಆಗಬೇಕು, ಒಂದು ಭಾಗದಲ್ಲಿ ಯಾರಾದ್ರೂ ಇದ್ಕೊಳ್ಳಿ, ಇನ್ನೊಂದು ಭಾಗವನ್ನ ನಾನು ‘ಟೋಫನ್ ತಲೆ ರೆಡ್ಡಿ’ ಇಬ್ರೂ ಹಂಚಿಕೊಂಡು ಉಪ್ಪಿನಕಾಯ್ ಹಾಕ್ಕೊಂಡು ನೆಕ್ಕೋತೀವಿ ಅಂತ ‘ಸ್ತ್ರೀ ರಾಮುಲು’ ಬೊಗಳಿದೆ. ಮಾತೆತ್ತಿದರೆ ನಮ್ದು ಅಖಂಡ ಭಾರತ, ಜಗತ್ತಲ್ಲಿರೋ ಎಲ್ಲ ದೇಶಗಳೂ ಭಾರತಕ್ಕೇ ಸೇರಬೇಕು ಅಂತ ಗಂಟಲು ಹರಿದುಕೊಳ್ಳೋ ಬ್ಲೂಜೆಪಿ ಪಕ್ಷದಲ್ಲಿದ್ದು, ಇಂತಹ ರಾಜ್ಯ ಒಡೆಯುವ ನಮಕ್ ಹರಾಮ್ ಕೆಲಸಕ್ಕೆ ಸಪೋರ್ಟ್ ಮಾಡ್ತೀನಿ ಅಂದ ರಾಮುಲುಗೆ ಈಗ ಜೀವಭಯ ಎದುರಾಗಿ ಹಾರ್ಟು ‘ಚುಟು ಚುಟು, ಚುಮು ಚುಮು’ ಅಂತಾ ಇದೆಯಂತೆ. ಚಳ್ಳಕೆರೆ ಕಡೆಯ ಕನ್ನಡಪರ ಹೋರಾಟಗಾರರು “ರಾಮುಲು ಎಲ್ಲೇ ಕಂಡರೂ ಅವನ ಮುಖವೇ ಹೂತುಹೋಗಿರೋ ಗಡ್ಡಕ್ಕೆ ಸೀಮೆಣ್ಣೆ ಎರಚಿ ಬೆಂಕಿ ಹಚ್ಚಿ, ಸುಟ್ಟ ಗಡ್ಡದ ಬೂದಿಯನ್ನ ಅವನಿಗೇ ತಿನ್ನಿಸ್ತೀವಿ ಅಂತ “ ಇನ್ನೂ ಬೆದರಿಕೆ ಹಾಕಿಲ್ಲವೆಂದು ತಿಳಿದು ಬಂದಿದೆ.
*****
ಸಾವಿರಾರು ವರ್ಷಗಳಿಂದ ಮೈಬಗ್ಗಿಸಿ ದುಡಿದು ತಿಂದು ಗೊತ್ತೇ ಇರದ ಸನಾತನಿ ಶನಿಗಳು, ಕಳೆದ 30 ವರ್ಷಗಳಿಂದ ಶ್ರೀರಾಮನಿಗೆ ಗುಡಿ ಕಟ್ಟುವ ಟಪಾಸ್ ಅಡ್ವೆಂಚರ್ ಮಾಡುತ್ತ ತಿರುಗುತ್ತಿರುವುದು ನಿಮಗೆ ಗೊತ್ತೇ ಇದೆ. ಈ ಅಡ್ವೆಂಚರ್‍ನಲ್ಲಿ ಮಂಚೂಣಿಯಲ್ಲಿದ್ದ ಸಂಘಟನೆಗಳಲ್ಲಿ ಒಂದಾದ ‘ನಿರ್ಮೋಹಿ ಮಂಚ್’ ಸಂಘಟನೆಯು ರಾಮನಗುಡಿ ಕಟ್ತೇವೆಂದು ಸಾವಿರಾರು ಕೋಟಿ ಚಂದಾ ಎತ್ತಿದ ವಿ.ಹೆಚ್.ಪಿಯು ಆ ಹಣದಲ್ಲಿ ಒಂದು ಇಟ್ಟಿಗೆಯನ್ನೂ ಖರೀದಿಸದೆ ಇಡೀ ಚಂದಾಹಣವನ್ನು ಮುಂಡಾ ಮೋಚಿದೆಯೆಂದು ಆಕ್ರೋಶ ವ್ಯಕ್ತಪಡಿಸಿದೆ. ಇದು ಒಂದು ಕಡೆಯಿರುವಾಗ ಇನ್ನೊಂದು ಕಡೆಯಲ್ಲಿ 2019ರ ಎಲೆಕ್ಷನ್ನಿಗೆ ಮುಂಚೆ ರಾಮನಗುಡಿ ಕಟ್ತೀವಿ ಅಂತ ಹೇಳಿಕೆ ಕೊಟ್ಟ ಗುಜರಾತಿನ ಹಳೇ ಕ್ರಿಮಿನಲ್ ಪಂಟರ್ ‘ಹಮಿತ್ ಶಾ’ ಗಂಟಲಿಗೆ ಬ್ಲೂಜೆಪಿ ಪಕ್ಷ ತನ್ನ ಬಲಗಾಲನ್ನು ತುರುಕಿ ಬಾಯಿ ಮುಚ್ಚಿಸುವ ಪ್ರಯತ್ನ ನಡೆಸಿದೆ. ಈ ಬೋಡಗುಂಡನ ಮಾತು ನಂಬಬೇಡಿ, ರಾತ್ರಿ ಹೊಡೆದ ಬಿಟ್ಟಿ ಎಣ್ಣೆ ಏಟಲ್ಲಿ ಹಿಂಗೆಲ್ಲ ವದರವ್ನೆ, ಇವನ ಮಾನಸಿಕ ಸ್ಥಿತಿ ಡೋಲಾಯಮಾನವಾಗಿದೆಯೆಂದು ಸ್ಪಷ್ಟನೆ ಕೊಟ್ಟಿದೆ. ಅಂದಹಾಗೆ, ಇವರ ರಾಮನಗುಡಿ ಅಡ್ವೆಂಚರ್ ಮುಂದಿನ 500 ವರ್ಷಕ್ಕೂ ಮುಂದುವರೆಯಲಿದೆ ಎಂಬುದು ಜನತೆಗೆ ಸ್ಪಷ್ಟವಾಗಿದೆ.
*****
ದೇಶದ ರಕ್ಷಣಾ ಢಾಕಿಣಿ, ಅಲ್ಲಲ್ಲ ಮಂತ್ರಿಣಿಯಾದ ‘ನಿರ್ಮಲಾ ರಾಮಸೀತನ್’ ಎಂಬ ಮಧ್ಯವಯಸ್ಕ ಮಹಿಳೆಯು.. ಲೋಕಸಭೆ ಚುನಾವಣೆಗಿಂತ ಮುಂಚೆ ಕಾಂಗ್ರೆಸ್ ದೇಶದಲ್ಲಿ ಕೋಮು ಗಲಭೆಗಳನ್ನು ಹುಟ್ಟು ಹಾಕುವ ಸಂಚು ಮಾಡುತ್ತಿದೆಯೆಂದು ಹಾಸ್ಯಾಸ್ಪದ ಹೇಳಿಕೆಯೊಂದನ್ನು ಕೊಟ್ಟಿದೆ. ಕೋಮುಗಲಭೆಗಳನ್ನು ದೇಶದ ತುಂಬೆಲ್ಲ ಎರಚಾಡಿ, ಸತ್ತವರ ಹೆಣದ ಮೇಲೆ ತಟ್ಟೆಯಿಟ್ಟುಕೊಂಡು ಅಧಿಕಾರ ಸವಿಯುತ್ತಿರೋ ಪೆಕರು ಪಡಪೋಶಿಗಳ ಪಕ್ಷದಲ್ಲಿದ್ದು, ತನ್ನ ತಟ್ಟೆಯಲ್ಲಿ ಕುದುರೆ ಸತ್ತುಬಿದ್ದಿದ್ದರೂ ಕಂಡವರ ತಟ್ಟೆಯಲ್ಲಿ ಅಮೀಬಾ ಹುಡುಕುವ ಈ ಮತಿಗೇಡಿ ಮಹಿಳೆಗೆ ತಲೆ ಎಂಬುದು ಇದೆಯೇ ಇಲ್ಲವೇ ಎಂಬುದು ಈಗ ಚರ್ಚಾಸ್ಪದ ಸಂಗತಿಯಾಗಿದೆ. ಅತ್ತ ಚೀನಾದೇಶವು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ರಾಜಾರೋಷವಾಗಿ ಬಂಕರ್‍ಗಳನ್ನು ಕಟ್ಟಿಕೊಂಡು ಪಾಕ್ ಜೊತೆ ಜಂಟಿ ಸಮರಾಭ್ಯಾಸ ನಡೆಸುತ್ತಿದ್ದರೆ, ಆ ಅಪಾಯದ ಬಗ್ಗೆ ಕಿಂಚಿತ್ ಗ್ಯಾನವಿಲ್ಲದ ಈ ಮೂರ್ಖಮ್ಮನಿಗೆ ‘ಬಾಯಿಗೆ ಬಂದಂಗೆ ಮಾತಾಡಿಕೊಂಡು ಎಲ್ಲರಿಂದ ಉಗಿಸಿಕೊಳ್ಳುವುದೇ’ ಪ್ರಿಯವಾಗಿರುವುದು ದುರಂತ.

*****

ತರೀಕೆರೆಯ ರೈತರು ತಮ್ಮ ಹೊಲಗದ್ದೆಗಳಿಗೆ ಕಂಟಕಪ್ರಾಯವಾಗಿದ್ದ ಕಾಡುಪ್ರಾಣಿಗಳನ್ನು ಓಡಿಸಲು ಬ್ಲೂಜೆಪಿ ಪಕ್ಷದ ನ್ಯಾಷನಲ್ ಲೀಡರುಗಳ ಕಟೌಟ್‍ಗಳನ್ನು ಹೊಲದಲ್ಲಿ ನೆಟ್ಟು ಪ್ರಾಣಿಕಾಟದಿಂದ ಮುಕ್ತರಾಗಿದ್ದಾರೆ. ಸತ್ತು ಕೊಳೆತ ಘೇಂಡಾಮೃಗದಂತೆ ಕಾಣುವ ‘ಹಮಿತ್ ಶಾ’, ವಯಸ್ಸಾದ ಓತಿಕ್ಯಾತಕ್ಕೆ ಬಿಳಿ ಗಡ್ಡಮೀಸೆ ಬಂದಂತೆ ಕಾಣುವ ಪಕೋಡತಾತ, ಅಡುಗೂಲಜ್ಜಿ ಮುದುಕಿಗೆ ಬಿಳಿ ಪ್ಯಾಂಟು ಶರ್ಟು ಹಾಕಿದಂತೆ ಕಾಡುವ ‘ ಧಡಿಯೂರಪ್ಲ’ನ ಕಟೌಟುಗಳ ಮುಸುಡಿಗಳನ್ನು ಕಂಡು ಹೆದರಿದ ಹೊಲ ಮೇಯಲು ಬರುವ ಕಾಡುಹಂದಿ, ಸಿಂಗಳೀಕ, ಮುಸಿಯ, ಕಾಡೆಮ್ಮೆಗಳು ಉಚ್ಚೆ ಹೊಯ್ದುಕೊಂಡು ವಾಪಸ್ ಕಾಡೊಳಗೆ ಓಡಿ ಹೋಗುತ್ತಿರುವುದು ರೈತರ ಸಂತೋಷಕ್ಕೆ ಕಾರಣವಾಗಿದೆ. ಜನರಿಗಂತೂ ಈ ಕಟೌಟ್ ಮುಷಂಡಿಗಳಿಂದ ಮೂರುಕಾಸಿನ ಪ್ರಯೋಜನ ಇಲ್ಲ, ಕೊನೇಪಕ್ಷ ಕಾಡುಪ್ರಾಣಿಗಳಿಗೆ ಉಚ್ಚೆ ಹುಯ್ಯಿಸಲಾದರೂ ಈ ಕ್ರಿಮಿಗಳು ಬಳಕೆಯಾದವಲ್ಲ ಎಂದು ಗಬ್ಲಿಕ್ ಟಿವಿ ರಂಗಣ್ಣ ಗೊಳೋ ಎಂದು ಅಳುತ್ತ ಕುಳಿತಿದ್ದಾರಂತೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಬೇಟಿ ಮುಂದಿನವಾರ. ಅಲ್ಲೀತನಕ ನೀವೂ ನೆಮ್ದಿಯಾಗಿರಿ, ನಾವೂ ನೆಮ್ದಿಯಾಗಿರುತ್ತೇವೆ
ಅಂತ ಹೇಳುತ್ತ, ವಾರ್ತಾಪ್ರಸಾರಕ್ಕೆ ಮಂಗಳ ಹಾಡುತ್ತಿದ್ದೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...