Homeಮುಖಪುಟಆತ್ಮಕಥೆ ಜಟಾಪಟಿ : ಅಂದು ಪುಸ್ತಕ ಪ್ರಿ- ಆರ್ಡರ್ ಮಾಡಿ ಎಂದಿದ್ದ ನರವಾಣೆ, ಇಂದು ಪ್ರಕಟವೇ...

ಆತ್ಮಕಥೆ ಜಟಾಪಟಿ : ಅಂದು ಪುಸ್ತಕ ಪ್ರಿ- ಆರ್ಡರ್ ಮಾಡಿ ಎಂದಿದ್ದ ನರವಾಣೆ, ಇಂದು ಪ್ರಕಟವೇ ಆಗಿಲ್ಲ ಎನ್ನುತ್ತಿದ್ದಾರೆ

- Advertisement -
- Advertisement -

ಕಳೆದ ಹತ್ತು ದಿನಗಳಿಂದ ದೇಶದಾದ್ಯಂತ ಚರ್ಚೆಯಲ್ಲಿರುವ ತನ್ನ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಆತ್ಮಕಥೆಯ ಕುರಿತು ಮಾಜಿ ಭೂ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಮೌನ ಮುರಿದಿದ್ದಾರೆ.

“ಪುಸ್ತಕದ ಮುದ್ರಿತ ಅಥವಾ ಡಿಜಿಟಲ್ ರೂಪದ ಯಾವುದೇ ಪ್ರತಿಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿಲ್ಲ, ವಿತರಿಸಿಲ್ಲ, ಮಾರಾಟ ಮಾಡಿಲ್ಲ ಅಥವಾ ಲಭ್ಯವಾಗುವಂತೆ ಮಾಡಿಲ್ಲ” ಎಂಬ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾದ(ಪಿಆರ್‌ಹೆಚ್‌ಐ) ಹೇಳಿಕೆಯನ್ನು ಅವರು ಮಂಗಳವಾರ (ಫೆ.10,2026) ಪ್ರತಿಧ್ವನಿಸಿದ್ದಾರೆ.

ಪುಸ್ತಕದ ವಿಚಾರ ಸಂಸತ್ತಿನ ಒಳಗೆ ಮತ್ತು ಹೊರಗೆ ರಾಜಕೀಯ ಜಟಾಪಟಿಗೆ ಕಾರಣವಾಗಿರುವ ನಡುವೆ, ಅದರ ಪ್ರಕಾಶಕರಾದ ‘ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ’ ಸೋಮವಾರ (ಫೆ.9,2026) ಸ್ಪಷ್ಟನೆ ಕೊಟ್ಟಿದೆ.

“ಇತ್ತೀಚಿನ ಸಾರ್ವಜನಿಕ ಚರ್ಚೆಗಳು ಮತ್ತು ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ, ಭಾರತದ ಮಾಜಿ ಭೂಸೇನಾ ಮುಖ್ಯಸ್ಥರಾದ ಜನರಲ್ ಮನೋಜ್ ಮುಕುಂದ್ ನರವಾಣೆ ಅವರ ಆತ್ಮಕಥೆಯಾದ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಪುಸ್ತಕದ ಸಂಪೂರ್ಣ ಪ್ರಕಟಣಾ ಹಕ್ಕುಗಳನ್ನು ನಾವು ಹೊಂದಿದ್ದೇವೆ ಎಂದು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಸ್ಪಷ್ಟಪಡಿಸಲು ಬಯಸುತ್ತದೆ. ಈ ಪುಸ್ತಕವು ಇನ್ನೂ ಪ್ರಕಟಗೊಂಡಿಲ್ಲ ಎಂಬುದನ್ನು ನಾವು ಸ್ಪಷ್ಟಪಡಿಸುತ್ತೇವೆ. ಮುದ್ರಿತ ಅಥವಾ ಡಿಜಿಟಲ್ ರೂಪದ ಯಾವುದೇ ಪ್ರತಿಗಳನ್ನು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾದಿಂದ ಸಾರ್ವಜನಿಕವಾಗಿ ಪ್ರಕಟಿಸಿಲ್ಲ, ವಿತರಿಸಿಲ್ಲ, ಮಾರಾಟ ಮಾಡಿಲ್ಲ ಅಥವಾ ಲಭ್ಯವಾಗುವಂತೆ ಮಾಡಿಲ್ಲ” ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದೆ.

ಮುಂದುವರಿದು, “ಪ್ರಸ್ತುತ ಚಲಾವಣೆಯಲ್ಲಿರುವ ಈ ಪುಸ್ತಕದ ಯಾವುದೇ ಪ್ರತಿಗಳು, ಅವು ಪೂರ್ಣವಾಗಿರಲಿ ಅಥವಾ ಭಾಗಶಃವಾಗಿರಲಿ, ಮುದ್ರಿತ, ಡಿಜಿಟಲ್, ಪಿಡಿಎಫ್‌ ಅಥವಾ ಇನ್ನಾವುದೇ ರೂಪದಲ್ಲಿದ್ದರೂ ಮತ್ತು ಆನ್‌ಲೈನ್ ಅಥವಾ ಆಫ್‌ಲೈನ್ ಯಾವುದೇ ಪ್ಲಾಟ್‌ಫಾರ್ಮ್‌ನಲ್ಲಿದ್ದರೂ, ಅವು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾದ ಹಕ್ಕುಸ್ವಾಮ್ಯದ ಉಲ್ಲಂಘನೆಯಾಗುತ್ತವೆ ಮತ್ತು ಅದನ್ನು ತಕ್ಷಣವೇ ನಿಲ್ಲಿಸಬೇಕು” ಎಂದು ಹೇಳಿದೆ.

ಪೆಂಗ್ವಿನ್ ಹೌಸ್‌ನ ಸ್ಪಷ್ಟೀಕರಣದ ಈ ಪೋಸ್ಟ್ ಅನ್ನು ನರವಾಣೆ ಅವರು ಹಂಚಿಕೊಂಡಿದ್ದು, “ಇದು ಪುಸ್ತಕದ ಸ್ಥಿತಿ” ಎಂದು ಬರೆದುಕೊಂಡಿದ್ದಾರೆ.

ಅಂದು ಪ್ರಿ-ಆರ್ಡರ್ ಮಾಡಿ ಎಂದಿದ್ದರು ನರವಾಣೆ

ಪುಸ್ತಕ ಪ್ರಕಟಿಸಿಲ್ಲ ಎಂಬ ಪೆಂಗ್ವಿನ್ ಹೌಸ್‌ನ ಹೇಳಿಕೆಯನ್ನು ಪ್ರತಿಧ್ವನಿಸಿರುವ ನರವಾಣೆ ಅವರು, ಈ ಹಿಂದೆ 2023ರ ಡಿಸೆಂಬರ್ 15ರಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ “ನಮಸ್ಕಾರ ಸ್ನೇಹಿತರೇ. ನನ್ನ ಪುಸ್ತಕ ಈಗ ಲಭ್ಯವಿದೆ. ಲಿಂಕ್ ಫಾಲೋ ಮಾಡಿ, ಓದಿ ಸಂತೋಷವಾಗಿರಿ. ಜೈ ಹಿಂದ್” ಎಂದು ಪೋಸ್ಟ್ ಹಾಕಿದ್ದರು. ಈ ಪೋಸ್ಟ್‌ನಲ್ಲಿ ಅವರು ಪೆಂಗ್ವಿನ್ ಹೌಸ್ ತನ್ನ ಪುಸ್ತಕದ ಕುರಿತು ಹಾಕಿದ್ದ ಪೋಸ್ಟ್‌ನ ಸ್ಕ್ರೀನ್ ಶಾಟ್‌ ಅನ್ನು ಹಂಚಿಕೊಂಡಿದ್ದರು.

ಪೆಂಗ್ವಿನ್ ಹೌಸ್ ಈ ರೀತಿ ಪೋಸ್ಟ್ ಹಾಕಿತ್ತು : “ನಾವು #VijayDiwas (ವಿಜಯ್ ದಿವಸ್) ಆಚರಣೆಗೆ ಸಜ್ಜಾಗುತ್ತಿರುವ ಈ ಸಂದರ್ಭದಲ್ಲಿ, ದಶಕಗಳ ಕಾಲ ಭಾರತಕ್ಕಾಗಿ ಹೋರಾಡಿದ 28ನೇ ಭೂಸೇನಾ ಮುಖ್ಯಸ್ಥರಾದ ಜನರಲ್ ಮನೋಜ್ ನರವಾಣೆ ಅವರಿಂದ ಆರಂಭಿಸಿ, ನಮ್ಮ ದೇಶದ ವೀರ ನಾಯಕರನ್ನು ಗೌರವಿಸೋಣ. ಅವರ ಕಥೆಯನ್ನು ತಿಳಿಯಲು, #4StarsOfDestiny ಪುಸ್ತಕವನ್ನು ಈಗಲೇ ಮುಂಗಡವಾಗಿ ಕಾಯ್ದಿರಿಸಿ (Pre-order): amzn.eu/d/fM48WQP”

ರಾಹುಲ್ ಗಾಂಧಿಯ ಪ್ರಶ್ನೆ ಏನು?

ಪೆಂಗ್ವಿನ್ ಹೌಸ್ ಪುಸ್ತಕ ಪ್ರಕಟಗೊಂಡಿಲ್ಲ ಎಂದು ಸ್ಪಷ್ಟನೆ ಕೊಟ್ಟಿರುವುದನ್ನು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

“ಅಂದು ಸ್ವತಃ ನರವಾಣೆ ಅವರೇ ನನ್ನ ಪುಸ್ತಕ ಮುಂಗಡ ಆರ್ಡರ್ ಮಾಡಿ, ಓದಿ ಎಂದಿದ್ದರು. ಪೆಂಗ್ವಿನ್ ಹೌಸ್ ಕೂಡ ಇದನ್ನೇ ಹೇಳಿತ್ತು” ಆದರೆ, ಈಗ ಪೆಂಗ್ವಿನ್ ಹೌಸ್ ಪುಸ್ತಕ ಪ್ರಕಟಗೊಂಡಿಲ್ಲ ಎಂದು ಹೇಳುತ್ತಿದೆ. ಹಾಗಾದರೆ, ಇಲ್ಲಿ ಸುಳ್ಳು ಹೇಳುತ್ತಿರುವುದು ಯಾರು?” ಎಂದು ರಾಹುಲ್ ಗಾಂಧಿ ಕೇಳಿದ್ದಾರೆ.

ಮಂಗಳವಾರ ಸಂಸತ್ ಭವನದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, “ನಮಸ್ಕಾರ ಸ್ನೇಹಿತರೇ.. ನನ್ನ ಪುಸ್ತಕ ಈಗ ಲಭ್ಯವಿದೆ. ಲಿಂಕ್ ಫಾಲೋ ಮಾಡಿ.. ಓದಿ ಸಂತೋಷವಾಗಿರಿ. ಜೈ ಹಿಂದ್” ಎಂದು ನರವಾಣೆ ಅವರು ಹಾಕಿದ್ದ ಹಳೆಯ ಸಾಮಾಜಿಕ ಮಾಧ್ಯಮ ಪೋಸ್ಟ್ ಓದಿ ಕೇಳಿಸಿದ್ದಾರೆ.

“ಇದು ಜನರಲ್ ನರವಾಣೆ ಅವರು ಮಾಡಿರುವ ಟ್ವೀಟ್. ನಾನು ಹೇಳಲು ಬಯಸುತ್ತಿರುವ ಅಂಶವೆಂದರೆ, ಇಲ್ಲಿ ಒಂದೋ ನರವಾಣೆ ಅವರು ಸುಳ್ಳು ಹೇಳುತ್ತಿರಬೇಕು ಅಥವಾ ಪೆಂಗ್ವಿನ್ ಪ್ರಕಾಶನ ಸಂಸ್ಥೆ ಸುಳ್ಳು ಹೇಳುತ್ತಿರಬೇಕು. ಇಬ್ಬರೂ ಏಕಕಾಲಕ್ಕೆ ಸತ್ಯ ಹೇಳಲು ಸಾಧ್ಯವಿಲ್ಲ. ಆದರೆ, ನಾನು ಮಾಜಿ ಸೇನಾ ಮುಖ್ಯಸ್ಥರ ಮಾತನ್ನು ನಂಬುತ್ತೇನೆ; ಅವರು ಸುಳ್ಳು ಹೇಳುತ್ತಾರೆ ಎಂದು ನಾನು ಭಾವಿಸುವುದಿಲ್ಲ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಮುಂದುವರಿದು, “ಪೆಂಗ್ವಿನ್ ಪ್ರಕಾಶನ ಸಂಸ್ಥೆಯು ಈ ಪುಸ್ತಕ ಪ್ರಕಟವಾಗಿಲ್ಲ ಎಂದು ಹೇಳುತ್ತಿದೆ. ಆದರೆ ಅದೇ ಪುಸ್ತಕವು ಅಮೆಜಾನ್‌ನಲ್ಲಿ ಲಭ್ಯವಿದೆ. ಜನರಲ್ ನರವಾಣೆ ಅವರು 2023ರಲ್ಲೇ ಟ್ವೀಟ್ ಮಾಡಿ, ‘ನನ್ನ ಪುಸ್ತಕವನ್ನು ದಯವಿಟ್ಟು ಖರೀದಿಸಿ’ ಎಂದು ಕೇಳಿಕೊಂಡಿದ್ದರು. ಇದನ್ನು ನಾನು ಆಗಲೇ ಓದಿ ತೋರಿಸಿದ್ದೇನೆ. ಈಗ ನೀವೇ ಹೇಳಿ, ನೀವು ನರವಾಣೆ ಅವರಿಗಿಂತ ಪೆಂಗ್ವಿನ್ ಸಂಸ್ಥೆಯನ್ನು ನಂಬುತ್ತೀರಾ? ನಾನಂತೂ ಜನರಲ್ ನರವಾಣೆ ಅವರನ್ನೇ ನಂಬುತ್ತೇನೆ” ಎಂದಿದ್ದಾರೆ.

ಅಮೆಜಾನ್‌ನಲ್ಲಿತ್ತು ಪುಸ್ತಕ

ಅಮೆಜಾನ್‌ನ ಅಮೆರಿಕದ ವೆಬ್‌ಸೈಟ್‌ನಲ್ಲಿ ನರವಾಣೆ ಅವರ ಪುಸ್ತಕವು ಮೇ 1, 2024 ರಂದೇ ಪ್ರಕಟವಾಗಿದೆ ಎಂದು ತೋರಿಸುತ್ತಿದೆ. ಆದರೆ, ಪ್ರಸ್ತುತ ಅದು “ಲಭ್ಯವಿಲ್ಲ” ಎಂದು ನಮೂದಿಸಲಾಗಿದೆ. ಇದೇ ವೇಳೆ, ಭಾರತದ ಅಮೆಜಾನ್ ವೆಬ್‌ಸೈಟ್‌ನಲ್ಲಿ ಹುಡುಕಿದಾಗ ಈ ಪುಟವು ಕಾರ್ಯನಿರ್ವಹಿಸುತ್ತಿಲ್ಲ ಎಂಬ ಸಂದೇಶ ಕಾಣಿಸುತ್ತಿದೆ. ಪ್ರಕಾಶಕರು ಪುಸ್ತಕ ಬಿಡುಗಡೆಯೇ ಆಗಿಲ್ಲ ಎನ್ನುತ್ತಿದ್ದರೂ, ಅಂತಾರಾಷ್ಟ್ರೀಯ ವೆಬ್‌ಸೈಟ್‌ಗಳಲ್ಲಿ ಪ್ರಕಟಣೆಯ ದಿನಾಂಕ ನಮೂದಾಗಿರುವುದು ರಾಹುಲ್ ಗಾಂಧಿಯವರ “ಪುಸ್ತಕ ಲಭ್ಯವಿತ್ತು” ಎಂಬ ವಾದಕ್ಕೆ ಆಧಾರ ನೀಡಿದಂತಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಉಲ್ಲೇಖಿಸಿದೆ.

ಕೊನೆಯದಾಗಿ…ಪೆಂಗ್ವಿನ್ ಹೌಸ್ ಪುಸ್ತಕ ಪ್ರಕಟಿಸುವ ಮುನ್ನವೇ ಮುಂಗಡ ಬುಕ್ಕಿಂಗ್ ಮಾಡಿ ಎಂದು ಪೋಸ್ಟ್ ಹಾಕಿತ್ತೇ..? ನರವಾಣೆ ಕೂಡ ಇದೇ ಅರ್ಥದಲ್ಲಿ ಪೋಸ್ಟ್ ಹಂಚಿಕೊಂಡಿದ್ದರೇ? ಎಂಬ ಪ್ರಶ್ನೆ ಈಗ ಮೂಡಿದೆ. ಒಂದು ವೇಳೆ ಪ್ರಕಟಗೊಳ್ಳುವ ಮುನ್ನವೇ ಮುಂಗಡ ಬುಕ್ಕಿಂಗ್ ಮಾಡಿ ಎಂದಿದ್ದರೆ, ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಬುಕ್ಕಿಂಗ್ ಮಾಡಿದ ಜನರಿಗೆ ತಕ್ಷಣ ಎಲ್ಲಿಂದ ಪುಸ್ತಕ ಕೊಡುತ್ತಿತ್ತು? ಇಲ್ಲ ನಾವು ತಡವಾಗಿ ಕೊಡುತ್ತಿದ್ದೆವು ಎನ್ನುವುದಾದರೆ ಸಂಸ್ಥೆಯ ಉತ್ತಮ ಹೆಸರಿಗೆ (Good Will) ಹಿನ್ನಡೆಯಾದಂತೆ ಅಲ್ಲವೇ?

ಇನ್ನು, 2026ರ ಫೆ.10ರವರೆಗೆ ಪುಸ್ತಕದ ಕುರಿತ ರಾಜಕೀಯ ಜಟಾಪಟಿಯ ಬಗ್ಗೆ ನರವಾಣೆ ಮೌನವಾಗಿದ್ದರು. ಫೆ.10ರಂದು ರಾಹುಲ್ ಗಾಂಧಿ ನರವಾಣೆ ಈ ಹಿಂದೆ ಹೀಗೆ ಹೇಳಿದ್ದಾರೆ, ಈಗ ಪೆಂಗ್ವಿನ್ ಹೌಸ್ ಈ ರೀತಿ ಹೇಳುತ್ತಿದೆ ಎಂದು ನರವಾಣೆ ಅವರ ಹಳೆಯ ಟ್ವೀಟ್ ಓದಿದ ಬಳಿಕ, ನರವಾಣೆ ಮೌನ ಮುರಿದಿದ್ದಾರೆ. ಪೆಂಗ್ವಿನ್ ಹೌಸ್ ಹೇಳಿಕೆಯನ್ನು ಪ್ರತಿಧ್ವನಿಸಿದ್ದಾರೆ. ಹಾಗಾಗಿ, ನರವಾಣೆ ತಾನು ಈ ಹಿಂದೆ ಹಾಕಿದ್ದ ಪೋಸ್ಟ್‌ಗೆ ತದ್ವಿರುದ್ದವಾದ ನಿಲುವು ವ್ಯಕ್ತಪಡಿಸಿದಂತೆ ಕಾಣುತ್ತಿದೆ. ನರವಾಣೆಯ ಇತ್ತೀಚಿನ ಪೋಸ್ಟ್‌ನಿಂದ “ನಾನು ಮಾಜಿ ಸೇನಾ ಮುಖ್ಯಸ್ಥರನ್ನು ನಂಬುತ್ತೇನೆ” ಎಂಬ ರಾಹುಲ್ ಗಾಂಧಿಯ ಫೆ.10ರ ಹೇಳಿಕೆ ಅರ್ಥ ಕಳೆದುಕೊಂಡಂತಾಗಿದೆ. ಯಾವುದು ಸತ್ಯ? ಏನನ್ನು ನಂಬಬೇಕು ಎಂಬ ಗೊಂದಲ ಮೂಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...