ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯಲ್ಲಿ ಬುಧವಾರ (ಏ.1) ನಡೆದಿದೆ ಎಂದು ಆರೋಪಿಸಲಾಗಿದೆ ಎಂದು ಸಿಯಾಸತ್.ಕಾಮ್ ವರದಿ ಮಾಡಿದೆ.
ಮೆಟ್ಪಲ್ಲಿ ಪಟ್ಟಣದ ಇಬ್ರಾಹಿಂಪಟ್ಟಣಂ ಪೊಲೀಸ್ ಠಾಣೆ ವ್ಯಾಪ್ತಿಯ ವರ್ಷಕೊಂಡ ಗ್ರಾಮದಲ್ಲಿ ಈ ದಾಳಿ ನಡೆದಿದೆ. ಮೊಹಮ್ಮದ್ ಖುರೇಷಿ ಮತ್ತು ಅವರ 16 ವರ್ಷದ ಮಗ ಮೊಹಮ್ಮದ್ ಅನಸ್, ಗೋಮಾಂಸ ಸೇರಿದಂತೆ ಮಾಂಸವನ್ನು ಗ್ರಾಮಕ್ಕೆ ಮಾರಾಟ ಮಾಡುತ್ತಾರೆ. “ಮಾಂಸವನ್ನು ನಿಜಾಮಾಬಾದ್ನಿಂದ ತರಲಾಗುತ್ತದೆ. ವಾಸ್ತವವಾಗಿ, ಘಟನೆಗೆ ಒಂದು ದಿನ ಮೊದಲು ಅವರು ಮಾರಾಟ ಮಾಡಿದರು. ಯಾರೂ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ” ಎಂದು ಪೊಲೀಸರು ತಿಳಿಸಿದ್ದಾರೆ.
ಕೇಸರಿ ಉಡುಪಿನಲ್ಲಿದ್ದ 15-20 ಜನರ ಗುಂಪು ಮೆಟ್ಪಲ್ಲಿ ಪಟ್ಟಣದ ಇಬ್ರಾಹಿಂಪಟ್ಟಣಂ ಪೊಲೀಸ್ ಠಾಣೆ ವ್ಯಾಪ್ತಿಯ ವರ್ಷಕೊಂಡ ಗ್ರಾಮದಲ್ಲಿ ತಂದೆ-ಮಗನ ಮೇಲೆ ದಾಳಿ ಮಾಡಿದೆ.
ಆನ್ಲೈನ್ನಲ್ಲಿ ಪ್ರಸಾರವಾಗುವ ವೀಡಿಯೊಗಳಲ್ಲಿ, ಕೇಸರಿ ಬಟ್ಟೆ ಧರಿಸಿದ್ದ 15-20 ಜನರ ಗುಂಪು ಅನಸ್ ಅವರನ್ನು ಎಳೆದೊಯ್ಯುತ್ತಿರುವುದನ್ನು ಕಾಣಬಹುದು. “ಅವನ ಬಟ್ಟೆಗಳನ್ನು ತೆಗೆದುಹಾಕಿ” ಎಂದು ಯುವಕರು ಕೂಗಿದ್ದಾರೆ. ಇಬ್ಬರನ್ನೂ ಪದೇ ಪದೇ ಥಳಿಸಿ ಒದೆಯಲಾಗುತ್ತದೆ.
ಇನ್ನೊಂದು ವೀಡಿಯೊದಲ್ಲಿ, ಬಲಿಪಶುಗಳಿಬ್ಬರ ಬಟ್ಟೆಗಳನ್ನು ಹರಿದು ಹಾಕಲಾಗುತ್ತದೆ, ಒಬ್ಬ ಸದಸ್ಯ ಅನಸ್ ಅವರ ಕೂದಲನ್ನು ಎಳೆದು, ಅವರು ಗೋಮಾಂಸವನ್ನು ಮಾರಾಟ ಮಾಡುತ್ತಿದ್ದಾರೆಂದು ಸಾಬೀತುಪಡಿಸಲು ಪ್ಯಾಕೇಜ್ ತೆರೆಯುವಂತೆ ಒತ್ತಾಯಿದ್ದಾರೆ.
“ನಾವು ನಿಮಗೆ ಏನನ್ನಾದರೂ ಮಾರಾಟ ಮಾಡಲು ಬಿಡುತ್ತೇವೆ ಎಂದು ನೀವು ಭಾವಿಸುತ್ತೀರಾ?” ಎಂದು ಆ ವ್ಯಕ್ತಿ ಅನಸ್ ಅವರನ್ನು ಪ್ರಶ್ನಿಸುತ್ತಾ ಗುದ್ದುತ್ತಾನೆ.
ಅನಸ್ ಮತ್ತು ಖುರೇಷಿ ಇಬ್ಬರೂ ಮಾಂಸವನ್ನು ತೋರಿಸುತ್ತಾ ಕುಳಿತಿರುವಾಗ, ಗುಂಪು ಉತ್ಸಾಹದಿಂದ “ಜೈ ಶ್ರೀ ರಾಮ್” ಮತ್ತು “ಜೈ ಶಿವಾಜಿ” ಎಂದು ಕೂಗಿದೆ.
“ತುಂಬಾ ಕಠಿಣವಾಗಿ ವರ್ತಿಸಬೇಡಿ, ಅವರು ಸಾಯಬಹುದು. ಯಾವುದೇ ಗುರುತುಗಳನ್ನು ಬಿಡಬೇಡಿ” ಎಂದು ಗುಂಪಿಮಲ್ಲಿದ್ದ ವ್ಯಕ್ತಿಯೊಬ್ಬ ಹೇಳುತ್ತಾನೆ.
ಮತ್ತೊಂದು ವೀಡಿಯೊದಲ್ಲಿ, ಅನಸ್ ಅವರನ್ನು ಕಂಬಕ್ಕೆ ಕಟ್ಟಿಹಾಕಲಾಗಿದ್ದು, ಗ್ರಾಮಸ್ಥರು ಸಾರ್ವಜನಿಕ ಹಲ್ಲೆಯನ್ನು ವೀಕ್ಷಿಸುತ್ತಿರುವಾಗ ಗಾಯಗೊಂಡ ತಂದೆ ಅವನ ಪಕ್ಕದಲ್ಲಿ ನಿಂತಿದ್ದಾರೆ. ಪೊಲೀಸರ ಮುಂದೆ, ಗುಂಪು “ನಾವು ಕೇಸರಿ ಧ್ವಜ ಹಾರಿಸುತ್ತೇವೆ! ಖಬರ್ದಾರ್, ಖಬರ್ದಾರ್ (ಎಚ್ಚರ, ಹುಷಾರು)” ಎಂದು ಕೂಗುತ್ತದೆ.
ಮೆಟ್ಪಲ್ಲಿ ಪಟ್ಟಣದ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ಪ್ರತಿಕ್ರಿಯಿಸಿ, ಹಲ್ಲೆಯನ್ನು ದೃಢಪಡಿಸಿದ್ದಾರೆ. ಪ್ರಕರಣದ ಸಂಪೂರ್ಣ ಸತ್ಯಗಳನ್ನು ನಿರ್ಧರಿಸಲು ತನಿಖೆ ನಡೆಯುತ್ತಿದೆ ಎಂದು ಹೇಳಿದರು.
“ಪ್ರಕರಣ ದಾಖಲಿಸಲಾಗಿದೆ. ನಾವು ವಿಚಾರಣೆ ನಡೆಸುತ್ತಿದ್ದೇವೆ. ಹನುಮಾನ್ ಜಯಂತಿಯಂದು ಗೋಮಾಂಸ ಮಾರಾಟದಿಂದಾಗಿ ವಾಗ್ವಾದ ಮತ್ತು ದಾಳಿ ನಡೆದಿದೆ” ಎಂದು ಅವರು ಹೇಳಿದರು.
ಬಲಿಪಶುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.
ಪ್ರತ್ಯೇಕವಾಗಿ, ಇಬ್ರಾಹಿಂಪಟ್ಟಣಂ ಸ್ಟೇಷನ್ ಹೌಸ್ ಅಧಿಕಾರಿ ನಾಲ್ಕರಿಂದ ಐದು ಜನರನ್ನು ಗುರುತಿಸಲಾಗಿದೆ ಎಂದು ಹೇಳಿದರು. “ಇತರರನ್ನು ಗುರುತಿಸಲು ಪೊಲೀಸರು ವೀಡಿಯೊವನ್ನು ಪರಿಶೀಲಿಸುತ್ತಿದ್ದಾರೆ. 15 ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದಾರೆ. ತನಿಖೆ ನಡೆಯುತ್ತಿದೆ” ಎಂದು ಅವರು ಹೇಳಿದರು.
ತೆಲಂಗಾಣವು ಕೋಮು ಘಟನೆಗಳಿಂದ ತುಲನಾತ್ಮಕವಾಗಿ ದೂರವಿದ್ದರೂ, 2026 ರ ಆರಂಭದಿಂದಲೂ ಮುಸ್ಲಿಮರ ವಿರುದ್ಧ ದ್ವೇಷ ಅಪರಾಧ ಘಟನೆಗಳಲ್ಲಿ ತೀವ್ರ ಏರಿಕೆ ಕಂಡುಬಂದಿದೆ.


