HomeಅಂಕಣಗಳುKarnataka against SIRಕರ್ನಾಟಕ SIR | 'ಲಾಜಿಕಲ್ ಡಿಸ್ಕ್ರಿಪೆನ್ಸಿ' ಬಗ್ಗೆ ತುಟಿ ಬಿಚ್ಚದ ಚುನಾವಣಾ ಆಯೋಗ

ಕರ್ನಾಟಕ SIR | ‘ಲಾಜಿಕಲ್ ಡಿಸ್ಕ್ರಿಪೆನ್ಸಿ’ ಬಗ್ಗೆ ತುಟಿ ಬಿಚ್ಚದ ಚುನಾವಣಾ ಆಯೋಗ

- Advertisement -
- Advertisement -

ಕರ್ನಾಟಕದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಭರದಿಂದ ಸಾಗುತ್ತಿದೆ.

ಆಗಸ್ಟ್ 7ರಂದು ಚುನಾವಣಾ ಆಯೋಗ ಹೊರಡಿಸಿದ ಪ್ರಕಟಣೆಯ ಪ್ರಕಾರ, ಗಣತಿ ನಮೂನೆ ಅಥವಾ ಎನ್ಯುಮರೇಶನ್ ಫಾರಂ ಸಲ್ಲಿಕೆ ದಿನಾಂಕ ಆಗಸ್ಟ್ 17ರವರೆಗೆ ವಿಸ್ತರಣೆಯಾಗಿದ್ದು, ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ. ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ.

ಇದಕ್ಕಿಂತ ಮುಂಚಿತವಾಗಿ ಗೈರು ಹಾಜರಾದವರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ಮರಣ ಹೊಂದಿದವರು, ಒಂದಕ್ಕಿಂತ ಹೆಚ್ಚು ಕಡೆ ನೋಂದಣಿಯಾದವರು (ಡೂಪ್ಲಿಕೇಟ್) ಮತ್ತು ಇತರೆ (Absent, Shifted, Death, Duplicate and Others-ASDDO) ಮತದಾರರ ಪಟ್ಟಿಯನ್ನು ಬೂತ್‌ವೈಸ್ ಚುನಾವಣಾ ಆಯೋಗ ಬಿಡುಗಡೆ ಮಾಡಿದೆ.

ಈ ಪಟ್ಟಿಯಲ್ಲಿ 1 ಕೋಟಿಗೂ ಹೆಚ್ಚು ಮತದಾರರ ಹೆಸರುಗಳಿದ್ದು, ಇಡೀ ದೇಶದಲ್ಲೇ ಹೆಚ್ಚು ಎನ್ನಲಾಗುತ್ತಿದೆ. ASDDO ಪಟ್ಟಿಯಲ್ಲಿ ಮೇಲ್ಗಡೆ ಉಲ್ಲೇಖಿಸಿದ ಯಾವುದೇ ವರ್ಗದಲ್ಲಿ ಒಳಪಡದ ಅನೇಕ ಮತದಾರರ ಹೆಸರುಗಳೂ ಸೇರ್ಪಡೆಯಾಗಿರುವ ಆರೋಪಗಳು ರಾಜ್ಯದಾದ್ಯಂತ ಕೇಳಿ ಬಂದಿವೆ.

ಆಗಸ್ಟ್ 11ರಂದು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ ವರದಿಯೊಂದರ ಪ್ರಕಾರ, ಆಗಸ್ಟ್ 3ರಿಂದ 9ರ ನಡುವೆ ಕರ್ನಾಟಕದ ASDDO ಸಂಖ್ಯೆ 2.9 ಲಕ್ಷ (3 ಲಕ್ಷ) ಇಳಿಕೆಯಾಗಿದೆ. ಈ ವರದಿ ಲಕ್ಷಾಂತರ ಮತದಾರರ ಹೆಸರು ತಪ್ಪಾಗಿ ASDDO ಪಟ್ಟಿಯಲ್ಲಿ ಸೇರ್ಪಡೆಯಾಗಿದೆ ಎಂಬುವುದನ್ನು ಪುಷ್ಠೀಕರಿಸುತ್ತದೆ.

ASDDO ಡಿಲೀಟ್ ಪಟ್ಟಿಯಲ್ಲಿ ತಮ್ಮ ಹೆಸರು ಬಂದಿರುವುದನ್ನು ಕಂಡು ಅನೇಕ ಮತದಾರರು ಬಿಎಲ್‌ಒಗಳತ್ತ ಧಾವಿಸಿ ತಮ್ಮ ಹೆಸರು ಮರು ಸೇರ್ಪಡೆಗೆ ಹರಸಾಹಸಪಡುತ್ತಿರುವುದು ರಾಜ್ಯದಾದ್ಯಂತ ವರದಿಯಾಗುತ್ತಿದೆ.

ASDDOಗೆ ಮುಗಿದಿಲ್ಲ..ಕಾದು ಕುಳಿತಿದೆ ಮತ್ತೊಂದು ಅಪಾಯ

ಈ ASDDO ಕಥೆ ಒಂದೆಡೆಯಾದರೆ ‘ಲಾಜಿಕಲ್ ಡಿಸ್ಕ್ರಿಪೆನ್ಸಿ’ (ತಾರ್ಕಿಕ ವೈರುದ್ಯ) ಎಂಬ ಮತ್ತೊಂದು ಅಪಾಯ ಮತದಾರರ ಮುಂದೆ ಬಂದು ನಿಂತಿದೆ. ಇದರ ಅಸಲಿ ಆಟ ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿ ಪ್ರಕಟಗೊಂಡ ಬಳಿಕ ಶುರುವಾಗಲಿದೆ.

ಲಾಜಿಕಲ್ ಡಿಸ್ಕ್ರಿಪೆನ್ಸಿ ಅಂದರೆ ಏನು?

ಮತದಾರರ ಪಟ್ಟಿಯಲ್ಲಿರುವ ಡೇಟಾ ಅಥವಾ ಮಾಹಿತಿಯ ನಡುವೆ ಕಂಡುಬರುವ ತಾರ್ಕಿಕ ಅಸಂಗತತೆ ಅಥವಾ ಹೊಂದಾಣಿಕೆಯಿಲ್ಲದಿರುವುದನ್ನು ಚುನಾವಣಾ ಆಯೋಗ ಲಾಜಿಕಲ್ ಡಿಸ್ಕ್ರಿಪೆನ್ಸಿ (Logical Discrepancy) ಎಂದು ಕರೆಯುತ್ತದೆ.

ಸರಳವಾಗಿ ಹೇಳುವುದಾದರೆ, ಒಬ್ಬ ಮತದಾರನ ವಿವರಗಳನ್ನು ಹಿಂದಿನ ಮತದಾರರ ಪಟ್ಟಿಗೆ (ಉದಾಹರಣೆಗೆ ಕರ್ನಾಟಕದಲ್ಲಿ 2002ರ ಪಟ್ಟಿ) ಹೋಲಿಸಿದಾಗ ಅಥವಾ ಅವರ ಕುಟುಂಬದ ಸದಸ್ಯರ ವಯಸ್ಸಿನ ವಿವರಗಳನ್ನು ಪರಿಶೀಲಿಸಿದಾಗ ಕಂಪ್ಯೂಟರ್ ವ್ಯವಸ್ಥೆಯು ಅಥವಾ ಎಐ ವ್ಯವಸ್ತೆ ಪತ್ತೆಹಚ್ಚುವ ತಾಂತ್ರಿಕ ಮತ್ತು ತಾರ್ಕಿಕ ತಪ್ಪುಗಳಾಗಿವೆ.

ಉದಾ : ಒಬ್ಬರು ವ್ಯಕ್ತಿಯ ಹೆಸರು 2002ರ ಮತದಾರರ ಪಟ್ಟಿಯಲ್ಲಿ ‘ರಮೇಶ್’ ಎಂದಿದ್ದು, 2025-26ರ ಪಟ್ಟಿಯಲ್ಲಿ ‘ರಮೇಶ್ ಕುಮಾರ್’ ಎಂದಿದ್ದರೆ, ಇದು ಲಾಜಿಕಲ್ ಡಿಸ್ಕ್ರಿಪೆನ್ಸಿ (ತಾರ್ಕಿಕ ವೈರುದ್ಯ) ವರ್ಗದಲ್ಲಿ ಬರುತ್ತದೆ.

ಪ್ರಮುಖ 11 ಲಾಜಿಕಲ್ ಡಿಸ್ಕ್ರಿಪೆನ್ಸಿ ವರ್ಗಗಳು

ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪ್ರಮುಖವಾಗಿ ಕೆಳಗಿನ ಲಾಜಿಕಲ್ ಡಿಸ್ಕ್ರಿಪೆನ್ಸಿಗಳನ್ನು ಗುರುತಿಸಲಾಗುತ್ತದೆ:

1. ಸಹೋದರರ ವಯಸ್ಸಿನ ವ್ಯತ್ಯಾಸ : ಒಂದೇ ಪೋಷಕರ ಇಬ್ಬರು ಮಕ್ಕಳ (ಸಹೋದರ/ಸಹೋದರಿ) ವಯಸ್ಸಿನ ನಡುವೆ 9 ತಿಂಗಳಿಗಿಂತ ಕಡಿಮೆ ಅವಧಿಯ ವ್ಯತ್ಯಾಸವಿರುವುದು.

2. ಪೋಷಕರು ಮತ್ತು ಮಕ್ಕಳ ವಯಸ್ಸಿನ ಅಂತರ : ತಂದೆ/ತಾಯಿ ಮತ್ತು ಮಗ/ಮಗಳ ನಡುವಿನ ವಯಸ್ಸಿನ ಅಂತರ 15 ವರ್ಷಕ್ಕಿಂತ ಕಡಿಮೆ ಇರುವುದು ಅಥವಾ 50 ವರ್ಷಕ್ಕಿಂತ ಹೆಚ್ಚಿರುವುದು.

3. ತಾತ/ಅಜ್ಜಿ ಮತ್ತು ಮೊಮ್ಮಕ್ಕಳ ವಯಸ್ಸಿನ ಅಂತರ : ಮತದಾರ ಮತ್ತು ಅವರ ತಾತ/ಅಜ್ಜಿಯ ನಡುವಿನ ವಯಸ್ಸಿನ ವ್ಯತ್ಯಾಸ 40 ವರ್ಷಕ್ಕಿಂತ ಕಡಿಮೆ ಇರುವುದು.

4. ಹೆಸರಿನಲ್ಲಿ ಬದಲಾವಣೆ : ಪ್ರಸ್ತುತ ಮತದಾರರ ಪಟ್ಟಿ ಮತ್ತು ಹಳೆಯ ಎಸ್‌ಐಆರ್ ಪಟ್ಟಿಯಲ್ಲಿ ಪೋಷಕರ ಹೆಸರಿನ ಕಾಗುಣಿತ (Spelling) ಬೇರೆಯಾಗಿರುವುದು.

5. ಸಂಬಂಧದ ವಿಧದಲ್ಲಿ ವ್ಯತ್ಯಾಸ : ಹಳೆಯ ಪಟ್ಟಿಯಲ್ಲಿ ತಂದೆಯ ಹೆಸರು ಇದ್ದು, ಪ್ರಸ್ತುತ ಪಟ್ಟಿಯಲ್ಲಿ ತಾಯಿಯ ಹೆಸರು ಅಥವಾ ಸಂಬಂಧ ಬದಲಾಗಿರುವುದು.

6. ವಿವಾಹಿತ ಮಹಿಳೆಯರ ಲಿಂಕ್ : ಹಳೆಯ ಪಟ್ಟಿಯಲ್ಲಿ ತಂದೆಯ ಹೆಸರಿದ್ದು, ಹೊಸ ಪಟ್ಟಿಯಲ್ಲಿ ಗಂಡನ ಹೆಸರಿದ್ದಾಗ ಸರಿಯಾಗಿ ಲಿಂಕ್ ಆಗದಿರುವುದು.

7. ಪೋಷಕರ ಗುರುತು ಗೊಂದಲ : ಪ್ರಸ್ತುತ ಪಟ್ಟಿ ಮತ್ತು ಹಳೆಯ ಪಟ್ಟಿಯಲ್ಲಿ ತಂದೆಯ ಹೆಸರೇ ಬೇರೆಯಾಗಿರುವುದು.

8. ವಯಸ್ಸಿನ ಅಸಹಜ ಬದಲಾವಣೆ : ಹಿಂದಿನ ಪರಿಷ್ಕರಣೆಗೆ ಹೋಲಿಸಿದರೆ ಮತದಾರನ ವಯಸ್ಸಿನಲ್ಲಿ ತಾರ್ಕಿಕವಾಗಿ ಒಪ್ಪಲಾಗದಷ್ಟು ವ್ಯತ್ಯಾಸವಾಗಿರುವುದು.

9. ದಾಖಲೆಗಳ ಕೊರತೆ : ಯಾವುದೇ ಸೂಕ್ತ ಪೂರಕ ದಾಖಲೆಗಳನ್ನು ಸಲ್ಲಿಕೆ ಮಾಡದಿರುವುದು.

10. ಆಧಾರ್ ಕಾರ್ಡ್ ಮಾತ್ರ ಇರುವುದು : ವಯಸ್ಸು ಅಥವಾ ವಿಳಾಸದ ಪುರಾವೆಗೆ ಬೇರೆ ದಾಖಲೆ ನೀಡದೆ, ಕೇವಲ ಆಧಾರ್ ಕಾರ್ಡ್ ಮಾತ್ರ ನೀಡಿರುವುದು (ಆಧಾರ್ ಅನ್ನು ಕೇವಲ ಗುರುತಿನ ಚೀಟಿಯನ್ನಾಗಿ ಮಾತ್ರ ಪರಿಗಣಿಸಲಾಗುತ್ತದೆ).

11. ಹೆಚ್ಚಿನ ಮಕ್ಕಳ ಲಿಂಕ್ : ಒಬ್ಬರೇ ವ್ಯಕ್ತಿಗೆ (ಪೋಷಕರಿಗೆ) 6 ಕ್ಕಿಂತ ಹೆಚ್ಚು ಮಕ್ಕಳ ವಿವರಗಳು ಲಿಂಕ್ ಆಗಿರುವುದು.

    ಈಗಾಗಲೇ ಅಪ್ಲೈ ಆಗಿದೆ ಲಾಜಿಕಲ್ ಡಿಸ್ಕ್ರಿಪೆನ್ಸಿ!

    ಹೆಚ್ಚಿನ ಮತದಾರರು 2002ರ ಪಟ್ಟಿಯಲ್ಲಿ ತಮ್ಮ ಅಥವಾ ತಮ್ಮ ಪೋಷಕರ ಮಾಹಿತಿ ಹುಡುಕಿ ಎನ್ಯುಮರೇಷನ್ ಫಾರಂ ಸರಿಯಾಗಿ ತುಂಬಿ ಬಿಎಲ್‌ಒಗೆ ಕೊಟ್ಟಿದ್ದಾರೆ. ನಮ್ಮ ಎಸ್‌ಐಆರ್ ಯಶಸ್ವಿಯಾಗಿ ಆಗಿದೆ, ASDDO ಪಟ್ಟಿಯಲ್ಲೂ ನಮ್ಮ ಹೆಸರು ಬಂದಿಲ್ಲ. ಇಲ್ಲಿಗೆ ಕೆಲಸ ಮುಗೀತು, ನಮಗೇನು ಅಪಾಯ ಇಲ್ಲ ಎಂಬ ನಿರಾಳ ಭಾವದಲ್ಲಿದ್ದಾರೆ.

    ASDDOಪಟ್ಟಿಯಲ್ಲಿ ನಿಮ್ಮ ಹೆಸರು ಬಾರದಿರುವುದು ಒಂದು ರೀತಿ ಸಮಾಧಾನದ ಸುದ್ದಿಯೆ. ಆದರೆ, ಲಾಜಿಕಲ್ ಡಿಸ್ಕ್ರಿಪೆನ್ಸಿಯಲ್ಲಿ ಎಂಬ ಭೂತ ನಿಮಗಾಗಿ ಹೊಂಚು ಹಾಕಿ ಕುಳಿತಿದೆ ಎಂಬುವುದನ್ನು ಮರೆಯಬೇಡಿ.

    ಮೇಲ್ಗಡೆ ಹೇಳಿದ 11 ಲಾಜಿಕಲ್ ಡಿಸ್ಕ್ರಿಪೆನ್ಸಿ ವರ್ಗಗಳ ಪೈಕಿ ಯಾವುದಾದರು ಒಂದರಲ್ಲಿ ನಿಮ್ಮ ಹೆಸರಿದ್ದರೂ ನಿಮಗೆ ನೋಟಿಸ್ ಬರುವುದು ಖಚಿತ. ಈ ವೇಳೆ ಹೆಚ್ಚಿನ ದಾಖಲೆ ಕೊಟ್ಟು ಮತ ಉಳಿಸಿಕೊಳ್ಳಬೇಕಿದೆ.

    ಲಾಜಿಕಲ್ ಡಿಸ್ಕ್ರಿಪೆನ್ಸಿ ಬಂದರೆ ಏನಾಗುತ್ತದೆ?

    ನಿಮ್ಮ ಮಾಹಿತಿಗಳು ಮೇಲಿನ 11 ‘ಲಾಜಿಕಲ್ ಡಿಸ್ಕ್ರಿಪೆನ್ಸಿ’ ಅಥವಾ ಅಸಂಗತತೆಗಳ ವರ್ಗಗಳಲ್ಲಿ ಕಂಡು ಬಂದರೆ ಚುನಾವಣಾ ನೋಂದಣಾಧಿಕಾರಿಗಳು (ERO) ನಿಮಗೆ ನೋಟಿಸ್ ನೀಡುತ್ತಾರೆ.

    ನೋಟಿಸ್ ಬಂದ ನಂತರ ಮತದಾರರು ತಮ್ಮ ವಯಸ್ಸು, ವಿಳಾಸ ಮತ್ತು ಸಂಬಂಧವನ್ನು ನಿರೂಪಿಸುವ ಸರಿಯಾದ ದಾಖಲೆಗಳನ್ನು (ಉದಾಹರಣೆಗೆ ಜನ್ಮ ಪ್ರಮಾಣಪತ್ರ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ) ನೀಡಿ ಈ ತಪ್ಪನ್ನು ಸರಿಪಡಿಸಿಕೊಳ್ಳಬೇಕಾಗುತ್ತದೆ. ದಾಖಲೆ ಕೊಡದಿದ್ದರೆ ಅಂತಿಮ ಮತದಾರರ ಪಟ್ಟಿ ಬರುವಾಗ ನಿಮ್ಮ ಹೆಸರು ಡಿಲೀಟ್ ಆಗಬಹುದು.

    ಲಾಜಿಕಲ್ ಡಿಸ್ಕ್ರಿಪೆನ್ಸಿ ಬಂದಿರುವುದನ್ನು ತಿಳಿದುಕೊಳ್ಳುವುದು ಹೇಗೆ?

    ಈಗಾಗಲೇ ಎನ್ಯುಮರೇಷನ್ ಫಾರಂ ನೀವು ಬಿಎಲ್‌ಒಗೆ ಕೊಟ್ಟಿದ್ದರೆ, ಅವರನ್ನು ಅದನ್ನು ಚುನಾವಣಾ ಆಯೋಗದ ಆಪ್‌ನಲ್ಲಿ ಅಪ್ಲೋಡ್ ಮಾಡಿರುತ್ತಾರೆ. ಈ ವೇಳೆ ನಿಮ್ಮ ಮಾಹಿತಿಗಳಲ್ಲಿ ವ್ಯತ್ಯಾಸಗಳಿದ್ದರೆ, ತಕ್ಷಣ ಅದು ಲಾಜಿಕಲ್ ಡಿಸ್ಕ್ರಿಪೆನ್ಸಿ ಕ್ಯಾಟಗರಿಯಲ್ಲಿ ಹೋಗಿ ಕೂತಿರುತ್ತದೆ. ಬಿಎಲ್‌ಒ ನಿಮ್ಮ ಹೆಸರು ಲಾಜಿಕಲ್ ಡಿಸ್ಕ್ರಿಪೆನ್ಸಿಯಲ್ಲಿ ಬಂದಿದೆಯಾ ಎಂಬ ಮಾಹಿತಿ ತಿಳಿಸುವುದಿಲ್ಲ.

    ಬಿಎಲ್‌ಒ ಆಪ್‌ನಲ್ಲಿರುವ ಲಾಜಿಕಲ್ ಡಿಸ್ಕ್ರಿಪೆನ್ಸಿ ಕ್ಯಾಟಗರಿ ಹೀಗಿರುತ್ತದೆ

    ಬಿಎಲ್‌ಒ ಲಾಜಿಕಲ್ ಡಿಸ್ಕ್ರಿಪೆನ್ಸಿ ಕ್ಯಾಟಗರಿ ಓಪನ್ ಮಾಡಿ ಅಲ್ಲಿರುವ ಹೆಸರುಗಳ ಮೇಲೆ ಕ್ಲಿಕ್ ಮಾಡಿದರೆ, ಆ ಹೆಸರಿಗೆ ಯಾವ ಲಾಜಿಕಲ್ ಡಿಸ್ಕ್ರಿಪೆನ್ಸಿ ಅಪ್ಲೈ ಆಗಿದೆ ಎಂಬುವುದು ಗೊತ್ತಾಗುತ್ತದೆ.

    ಲಾಜಿಕಲ್ ಡಿಸ್ಕ್ರಿಪೆನ್ಸಿ ಮಾಹಿತಿ ಹಂಚಿಕೊಳ್ಳದ ಚು. ಆಯೋಗ

    ಪ್ರಸ್ತುತ ASDDO ಮಾಹಿತಿಯನ್ನು ಚುನಾವಣಾ ಆಯೋಗ ಬೂತ್‌ವೈಸ್‌ ಹಂಚಿಕೊಂಡಿದೆ. ಆದರೆ, ಲಾಜಿಕಲ್ ಡಿಸ್ಕ್ರಿಪೆನ್ಸಿ ಬಗ್ಗೆ ಎಲ್ಲೂ ಮಾತನಾಡುತ್ತಿಲ್ಲ. ಆಯೋಗ ಮಾತನಾಡಿದರೂ, ಇಲ್ಲದಿದ್ದರೂ..ಜನರನ್ನು ಮತ ಪಟ್ಟಿಯಿಂದ ಹೊರಗಟ್ಟುವ ಲಾಜಿಕಲ್ ಡಿಸ್ಕ್ರಿಪೆನ್ಸಿ ಸದ್ದಿಲ್ಲದೆ ಅಪ್ಲೈ ಆಗೋಗಿದೆ.

    ಮತದಾರರಿಗೆ ನಿಮ್ಮ ಹೆಸರಿಗೆ ಲಾಜಿಕಲ್ ಡಿಸ್ಕ್ರಿಪೆನ್ಸಿ ಅಪ್ಲೈ ಆಗಿದೆ ಎಂದು ಈಗಲೇ ಹೇಳಿದರೆ ಅವರು ದಾಖಲೆಗಳನ್ನು ಸಿದ್ದಪಡಿಸಿಕೊಳ್ಳಬಹುದು. ಕರಡು ಪಟ್ಟಿ ಪ್ರಕಟಿಸಿದ ಬಳಿಕ ನೋಟಿಸ್ ಕೊಟ್ಟರೆ, ದಾಖಲೆ ಇಲ್ಲದವರು ದಾಖಲೆ ಹೊಂದಿಸುವಷ್ಟರಲ್ಲಿ ದಾಖಲೆ ಸಲ್ಲಿಸುವ ಅವಧಿ ಕೊನೆಗೊಂಡಿರುತ್ತದೆ. ಚುನಾವಣಾ ಆಯೋಗ ಲಾಜಿಕಲ್ ಡಿಸ್ಕ್ರಿಪೆನ್ಸಿಯ ಮಾಹಿತಿಯನ್ನು ಯಾಕೆ ಹಂಚಿಕೊಳ್ಳುತ್ತಿಲ್ಲ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

    ಮತದಾರರಿಗೆ ಅವರದ್ದೇ ಮಾಹಿತಿಯನ್ನು ಆಯೋಗ ಯಾಕೆ ಬಚ್ಚಿಡುತ್ತಿದೆ? ಈಗಲೇ ಮಾಹಿತಿ ಹಂಚಿಕೊಳ್ಳುವುದಿಲ್ಲ ಯಾಕೆ? ಜನರಿಗೆ ಈಗಲೇ ಗೊತ್ತಾದರೆ ಅವರು ದಾಖಲೆಗಳನ್ನು ಸಿದ್ದಪಡಿಸಿಕೊಳ್ಳಲು ಸಹಕಾರಿಯಾಗುವುದಿಲ್ಲವೇ? ಇತ್ಯಾದಿ ಪ್ರಶ್ನೆಗಳಿಗೆ ಆಯೋಗವೇ ಉತ್ತರಿಸಬೇಕಿದೆ.

    ಲಾಜಿಕಲ್ ಡಿಸ್ಕ್ರಿಪೆನ್ಸಿ ಬಂದರೆ ಕೊಡಬೇಕಾದ ದಾಖಲೆಗಳು ಯಾವುವು?

    ನಿಮಗೆ ಲಾಜಿಕಲ್ ಡಿಸ್ಕ್ರಿಪೆನ್ಸಿ ನೋಟಿಸ್ ಬಂದರೆ ಜನನ ಪ್ರಮಾಣಪತ್ರ, ಪಾಸ್‌ಪೋರ್ಟ್, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಸರ್ಕಾರಿ ಕೆಲಸದಲ್ಲಿದ್ದರೆ ಅದರ ಐಡಿ ಕಾರ್ಡ್, ಸರ್ಕಾರದಿಂದ ಜಮೀನು ದೊರೆತಿದ್ದರೆ ಅದರ ದಾಖಲೆ, ಅರಣ್ಯ ಹಕ್ಕು ದಾಖಲೆ, ಎನ್‌ಆರ್‌ಸಿ ಇರುವಲ್ಲಿ ಅದರ ದಾಖಲೆ, ಶಾಶ್ವತ ನಿವಾಸಿ ಪ್ರಮಾಣಪತ್ರ, ಎಸ್‌ಸಿ,ಎಸ್‌ಟಿ ಮತ್ತು ಒಬಿಸಿಯವರು ಜಾತಿ-ಆದಾಯ ಪ್ರಮಾಣಪತ್ರ ಇತ್ಯಾದಿಗಳಲ್ಲಿ ಯಾವುದಾದರು ಒಂದನ್ನು ಕೊಡಬೇಕು.

    ಆಯೋಗದ ಹೇಳಿದ ಮಾನ್ಯ ದಾಖಲೆಗಳಲ್ಲಿ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್‌, ಪ್ಯಾನ್ ಕಾರ್ಡ್ , ರೇಷನ್ ಕಾರ್ಡ್‌ ಇವುಗಳು ಯಾವುದೂ ಒಳಗೊಂಡಿಲ್ಲ. ಹಾಗಾಗಿ, ಆಯೋಗ ಹೇಳಿದ ದಾಖಲೆಗಳು ಇಲ್ಲದ ಲಕ್ಷಾಂತರ ಮತದಾರರು ಲಾಜಿಕಲ್ ಡಿಸ್ಕ್ರಿಪೆನ್ಸಿ ಕಾರಣಕ್ಕೆ ತಮ್ಮ ಹಕ್ಕು ಕಳೆದುಕೊಳ್ಳುವುದು ನಿಚ್ಚಲವಾಗಿದೆ.

    ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

    LEAVE A REPLY

    Please enter your comment!
    Please enter your name here

    - Advertisment -

    ಅಮೇರಿಕಾದಲ್ಲಿ ಅದಾನಿ ಮತ್ತು ಆಪ್ತರ ಮೇಲಿನ ಕ್ರಿಮಿನಲ್ ಕೇಸ್ ರದ್ದು: ‘ರಾಜಿ ಮಾಡಿಕೊಂಡ ಪ್ರಧಾನಿ ಭಾರತದ ಹಿತಾಸಕ್ತಿ ಮಾರಾಟ ಮಾಡಿದ್ದಾರೆ’ ಎಂದ ರಾಹುಲ್ ಗಾಂಧಿ 

    ನವದೆಹಲಿ: ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅದಾನಿ ವಿರುದ್ಧದ ಪ್ರಮುಖ ಕ್ರಿಮಿನಲ್ ಆರೋಪಗಳನ್ನು ಅಮೆರಿಕದ ಫೆಡರಲ್ ನ್ಯಾಯಾಧೀಶರು ಶಾಶ್ವತವಾಗಿ ವಜಾಗೊಳಿಸಿದ ಬೆನ್ನಲ್ಲೇ, ವಿಪಕ್ಷ ನಾಯಕ ರಾಹುಲ್...

    ‘ಆಹಾರ ಸುರಕ್ಷತೆ – ಔಷಧ ಆಡಳಿತ ಇಲಾಖೆ’ಯಿಂದ ಹೋಟೆಲ್‌ಗಳಿಗೆ ಕಟ್ಟುನಿಟ್ಟಿನ ನಿಯಮ ಜಾರಿ; ಹೊಸ ಮಾರ್ಗಸೂಚಿ ಪ್ರಕಟ

    ರಾಜ್ಯದ ಹೋಟೆಲ್‌ಗಳು, ಡಾಬಾಗಳು ಹಾಗೂ ಆಹಾರ ಸೇವಾ ಸಂಸ್ಥೆಗಳು ಪಾಲಿಸಬೇಕಾದ 'ಆಹಾರ ಸುರಕ್ಷತಾ ಮತ್ತು ನೈರ್ಮಲ್ಯ ನಿಯಮಗಳ'ನ್ನು 'ಆಹಾರ ಸುರಕ್ಷತೆ ಇಲಾಖೆ ಮತ್ತು ಔಷಧ ಆಡಳಿತ ಇಲಾಖೆ' ಆಯುಕ್ತರು ಪ್ರಕಟಿಸಿದ್ದಾರೆ. ಕಳೆದ ಮೂರ್ನಾಲ್ಕು...

    ಕರ್ನಾಟಕದಲ್ಲಿ ಗುಟ್ಕಾ, ಪಾನ್ ಮಸಾಲಾ ಉತ್ಪಾದನೆ ಮತ್ತು ಮಾರಾಟ 1 ವರ್ಷ ನಿಷೇಧ: ರಾಜ್ಯ ಸರ್ಕಾರದ ಮಹತ್ವದ ಆದೇಶ

    ಬೆಂಗಳೂರು: ಸಾರ್ವಜನಿಕ ಆರೋಗ್ಯ ಮತ್ತು ಸಮಾಜದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ತಂಬಾಕು ಹಾಗೂ ನಿಕೋಟಿನ್ ಅಂಶ ಹೊಂದಿರುವ ಗುಟ್ಕಾ, ಪಾನ್ ಮಸಾಲಾ ಸೇರಿದಂತೆ ಇತರ ಅಪಾಯಕಾರಿ ಉತ್ಪನ್ನಗಳ ಮೇಲೆ ಸಂಪೂರ್ಣ...

    ಲೋಕಸಭೆ ಬಲ 543 ರಲ್ಲೇ ಶಾಶ್ವತವಾಗಿ ಮುಂದುವರಿಸಲು ಕೇಂದ್ರಕ್ಕೆ ಆಗ್ರಹ: ತಮಿಳುನಾಡು ವಿಧಾನಸಭೆಯಲ್ಲಿ ಸಿಎಂ ಸಿ. ಜೋಸೆಫ್ ವಿಜಯ್ ನಿರ್ಣಯ ಮಂಡನೆ

    ಚೆನ್ನೈ: ಕೇಂದ್ರ ಸರ್ಕಾರವು ಲೋಕಸಭೆಯ ಒಟ್ಟು ಸ್ಥಾನಗಳ ಬಲವನ್ನು ಪ್ರಸ್ತುತ ಇರುವ 543 ರಲ್ಲೇ ಶಾಶ್ವತವಾಗಿ ಕಾಯ್ದುಕೊಳ್ಳಬೇಕು ಮತ್ತು ರಾಜ್ಯಗಳ ನಡುವಿನ ಪ್ರಾತಿನಿಧ್ಯದ ಅನುಪಾತವನ್ನು ಬದಲಾಯಿಸಬಾರದು ಎಂದು ಒತ್ತಾಯಿಸಿ ತಮಿಳುನಾಡು ಮುಖ್ಯಮಂತ್ರಿ ಸಿ....

    ಯುಪಿಯಲ್ಲಿ ಅಮಾನವೀಯ ಘಟನೆ: ಮೊಬೈಲ್ ಕದ್ದ ಆರೋಪ ಹೊರಿಸಿ ಒಬಿಸಿ ಯುವಕನ ತಲೆ ಬೋಳಿಸಿ ಮೆರವಣಿಗೆ; ಮೇಲ್ಜಾತಿಯ ತಂದೆ-ಮಗನ ಬಂಧನ

    ಉನ್ನಾವೋ: ಉತ್ತರ ಪ್ರದೇಶದಲ್ಲಿ ಇದುವರೆಗೆ ದಲಿತ ಸಮುದಾಯಗಳ ಮೇಲೆ ವ್ಯಾಪಕವಾಗಿ ನಡೆಯುತ್ತಿದ್ದ ಜಾತಿ ಆಧಾರಿತ ದೌರ್ಜನ್ಯ ಮತ್ತು ಸಾರ್ವಜನಿಕ ಅವಮಾನದಂತಹ ಅಮಾನವೀಯ ಕೃತ್ಯಗಳು, ಈಗ ಇತರ ಹಿಂದುಳಿದ ವರ್ಗಗಳ (ಒಬಿಸಿ) ಜನರ ಮೇಲೆಯೂ...

    SIR 3ನೇ ಹಂತ: 12 ರಾಜ್ಯಗಳು-ಕೇಂದ್ರಾಡಳಿತ ಪ್ರದೇಶಗಳ 1.58 ಕೋಟಿ ಮತದಾರರ ಹೆಸರು ಕರಡು ಪಟ್ಟಿಯಿಂದ ಡಿಲೀಟ್

    ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಮೂರನೇ ಹಂತದಲ್ಲಿ ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಿಂದ ಸುಮಾರು 1.58 ಕೋಟಿ ಹೆಸರುಗಳನ್ನು ಅಳಿಸಲಾಗಿದೆ. ಪ್ರಸ್ತುತ ನಡೆಯುತ್ತಿರುವ 3ನೇ ಹಂತದ ವ್ಯಾಪ್ತಿಗೆ ಒಳಪಡುವ 16 ರಾಜ್ಯಗಳಲ್ಲಿ...

    ಪ. ಬಂಗಾಳ ಎಸ್‌ಐಆರ್ | ಮೇಲ್ಮನವಿ ನ್ಯಾಯಮಂಡಳಿಗಳಿಗೆ ಕಾಲಮಿತಿ ನಿಗದಿಪಡಿಸಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

    ಪಶ್ಚಿಮ ಬಂಗಾಳದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಮೇಲ್ಮನವಿಗಳ ವಿಚಾರಣೆ ನಡೆಸುತ್ತಿರುವ ಮೇಲ್ಮನವಿ ನ್ಯಾಯಾಧಿಕರಣಗಳ ನಿರ್ಧಾರಗಳಿಗೆ ಯಾವುದೇ ನಿರ್ದಿಷ್ಟ ಸಮಯದ ಮಿತಿಯನ್ನು ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್...

    ‘ಎಸ್‌ಐಆರ್‌’ನಿಂದ ಹೆಸರು ಡಿಲೀಟ್‌ ಆದವರಿಗೆ ‘ಹೊಸ ಮತದಾರರ ನೋಂದಣಿ’ ಯಾಕೆ?

    ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಕಾಣೆಯಾಗಿದ್ದರೆ ನಮೂನೆ ಸಂಖ್ಯೆ 6 ಅನ್ನು (Form No. 6) ಸಲ್ಲಿಸಿ ಎಂದು ಜುಲೈ 22 ರಂದು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮುಖ್ಯ ಚುನಾವಣಾ...

    ನೀಟ್ ವಿರುದ್ಧ ನಿರ್ಣಯ ಅಂಗೀಕರಿಸಿದ ತಮಿಳುನಾಡು ವಿಧಾನಸಭೆ : ಸಭಾತ್ಯಾಗ ಮಾಡಿದ ಬಿಜೆಪಿಯ ಏಕೈಕ ಶಾಸಕ

    ತಮಿಳುನಾಡು ವಿಧಾನಸಭೆಯು ಮಂಗಳವಾರ (ಆ.11) ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್) ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಪರೀಕ್ಷೆಗಳನ್ನು ನಡೆಸುವಲ್ಲಿ ಪದೇ ಪದೇ...

    ‘ಬಹುಸಂಖ್ಯಾತ ಭಾವನೆಯು ಸಾಂವಿಧಾನಿಕ ಹಕ್ಕುಗಳನ್ನು ಮರೆಮಾಡಲು ಸಾಧ್ಯವಿಲ್ಲ’: ಇಸ್ಲಾಂ ಧರ್ಮ ಸ್ವೀಕರಿಸಿದ್ದ ಸಹೋದರಿಯರ ಅಕ್ರಮ ಬಂಧನಕ್ಕೆ ಅಲಹಾಬಾದ್ ಹೈಕೋರ್ಟ್ ತೀವ್ರ ತರಾಟೆ

    ಹಿಂದೂ ಧರ್ಮದಿಂದ ಸ್ವಯಂಪ್ರೇರಿತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ನಂತರ, ಸ್ವಂತ ತಂದೆ ಹಾಗೂ ಉತ್ತರ ಪ್ರದೇಶ ರಾಜ್ಯ ಸರ್ಕಾರದ ಅಕ್ರಮ ಹಸ್ತಕ್ಷೇಪದಿಂದಾಗಿ ವರ್ಷಗಳ ಕಾಲ ತಮ್ಮ ಮೂಲಭೂತ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದ ಇಬ್ಬರು ವಯಸ್ಕ...