Homeಚಳವಳಿ’ಬಾಯ್ಕಟ್‌ ಮತ್ತು ಟ್ರೋಲ್‌’ ಹೊರತಾಗಿಯೂ ಲಾಭ ಗಳಿಸಿದ ದೀಪಿಕಾರ ಚಪಾಕ್...

’ಬಾಯ್ಕಟ್‌ ಮತ್ತು ಟ್ರೋಲ್‌’ ಹೊರತಾಗಿಯೂ ಲಾಭ ಗಳಿಸಿದ ದೀಪಿಕಾರ ಚಪಾಕ್…

ಚಪಾಕ್‌ ಕಮರ್ಷಿಯಲ್‌ ಚಿತ್ರವಲ್ಲ. ಹಾಗಾಗಿ ಇದನ್ನು ಕೇವಲ 1700 ಪರದೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಆದರೂ ಅದು ಹೂಡಿದ ಬಂಡವಾಳದ ಡಬಲ್‌ ಗಳಿಸಿದೆ.

- Advertisement -
- Advertisement -

ಖ್ಯಾತ ಬಾಲಿವುಡ್‌ ತಾರೆ ದೀಪಿಕಾ ಪಡುಕೋಣೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯಕ್ಕೆ ಹೆಜ್ಜೆ ಹಾಕಿ ಹಲ್ಲೆಗೊಳಗಾದ ಜೆಎನ್‌ಯುಎಸ್‌ಯು ಅಧ್ಯಕ್ಷೆ ಆಯಿಶೆ ಘೋಷ್‌ ಪರ ದೃಢವಾಗಿ ನಿಂತರು. ಆ ಮೂಲಕ ಬಹಳಷ್ಟು ಜನ ಅವರ ದಿಟ್ಟತವನ್ನು ಮೆಚ್ಚಿಕೊಂಡರು.

ಆದರೆ ಅದನ್ನು ಸಹಿಸದ ಹಲವಾರು ಬಲಪಂಥೀಯರು ಅವರನ್ನು ಟ್ರೋಲ್‌ ಮಾಡಿದ್ದಲ್ಲದೇ ಅವರ ಚಪಾಕ್‌ ಸಿನಿಮಾವನ್ನು ವಿಕ್ಷಸಬೇಡಿ ಎಂದು ಕರೆನೀಡಿದರು. ಆ ಚಿತ್ರದ ಕುರಿತು ಸುಳ್ಳು ಸುದ್ದಿಗಳನ್ನು ಹರಡಿದರು. ಚಿತ್ರದಲ್ಲಿ ಆರೋಪಿಯ ಹೆಸರನ್ನು ಮುಸ್ಲಿಂ ಬದಲಿಗೆ ಹಿಂದೂವನ್ನಾಗಿ ತಿರುಚಿದ್ದಾರೆ ಎಂದು ಸುಳ್ಳು ಹರಡಿದರು. ಚಪಾಕ್‌ ಚಿತ್ರದ ವಿರುದ್ಧ ಕೆಟ್ಟ ಭಾವನೆ ಮೂಡುವಂತೆ ಏನೆಲ್ಲಾ ಮಾಡಬಹುದು ಎಲ್ಲಾ ಮಾಡಿದರು. ಇಷ್ಟೆಲ್ಲದರ ಹೊರತಾಗಿಯೂ ಟ್ರೋಲ್‌ ಮಾಡಿದವರಿಗೆ ಕಹಿ ಸುದ್ದಿಯೆಂದರೆ ಚಪಾಕ್‌ ಸಿನಿಮಾ ಲಾಭ ಗಳಿಸಿದ್ದು ಅದೇ ದಾರಿಯಲ್ಲಿ ಮುಂದುವರೆದಿದೆ.

ಮೇಘನಾ ಗುಲ್ಜಾರ್ ನಿದೇರ್ಶನ ಮಾಡಿರುವ ಈ ಚಿತ್ರಕ್ಕೆ ಫಾಕ್ಸ್ ಸ್ಟಾರ್ ಸ್ಟುಡಿಯೋಸ್, ದೀಪಿಕಾ ಪಡುಕೋಣೆ, ಗೋವಂದ್ ಸಿಂಗ್ ಸಂಧು ಮತ್ತು ಮೇಘನಾ ಗುಲ್ಜಾರ್ ಹಣ ಹೂಡಿಕೆ ಮಾಡಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ವಿಕ್ರಂತ್ ಮಾಸ್ಸಿ ನಟಿಸಿರುವ ಚಪಾಕ್‌ ಚಿತ್ರವು ಮಾಧ್ಯಮಗಳು ಹೇಳುವಂತೆ ನಷ್ಟ ಅನುಭವಿಸಿಲ್ಲ ಬದಲಿಗೆ ಲಾಭದ ಹಾದಿಯಲ್ಲಿದೆ. ಹೇಗೆ ಇಲ್ಲಿದೆ ನೋಡಿ ಡಿಟೈಲ್ಸ್…

ಚಪಾಕ್ ಮಧ್ಯಮ ಬಜೆಟ್ ಚಿತ್ರವಾಗಿದ್ದು, ಮುದ್ರಣಗಳ ವೆಚ್ಚ ಮತ್ತು ಪ್ರಚಾರ ಸೇರಿದಂತೆ ಒಟ್ಟು 35 ಕೋಟಿ ರೂಗಳಲ್ಲಿ ತಯಾರಾಗಿದೆ. ಜನವರಿ 10ರಂದು ಬಿಡುಗಡೆಯಾದ ಸಿನಿಮಾ ಸೋಮವಾರದವರೆಗೆ (11 ದಿನಗಳಲ್ಲಿ) ಭಾರತದಲ್ಲಿ ಕೇವಲ ಟಿಕೆಟ್ ಮಾರಾಟದಿಂದಲೇ 32.48 ಕೋಟಿ ರೂ ಗಳಿಸಿದೆ. ಇನ್ನು ಈ ಚಿತ್ರವು ತನ್ನ ಸಂಗೀತ ಹಕ್ಕುಗಳನ್ನು 3 ಕೋಟಿ ರೂ.ಗೆ ಮತ್ತು ಅದರ ಡಿಜಿಟಲ್ + ಸ್ಯಾಟಲೈಟ್‌ ರೈಟ್ಸ್‌ ಅನ್ನು 23 ಕೋಟಿ ರೂ.ಗೆ ಮಾರಾಟ ಮಾಡಿದೆ. ಹಾಗಾಗಿ, ಚಿತ್ರ ಈಗಾಗಲೇ 58.48 ಕೋಟಿ ರೂ. ಗಳಿಸಿದಂತಾಗಿದೆ.

ಅಷ್ಟೆ ಅಲ್ಲದೇ, ವಿದೇಶದಲ್ಲಿ ಟಿಕೆಟ್ ಮಾರಾಟದಿಂದ ಚಪಾಕ್ 13 ಕೋಟಿ ರೂಗಳನ್ನು ಗಳಿಸಿದ್ದು ಅದನ್ನು ಸೇರಿಸಿದರೆ ಚಿತ್ರದ ಒಟ್ಟು ಗಳಿಕೆ 70 ಕೋಟಿ  ದಾಟುತ್ತದೆ. ಅಂದರೆ ನಿರ್ಮಾಣಕ್ಕೆ ಹಾಕಿದ ಎರಡು ಪಟ್ಟು ದುಡ್ಡನ್ನು ಕೇವಲ 11ದಿನಗಳಲ್ಲಿ ಗಳಿಸಿದ್ದು ಇನ್ನು ನೂರಾರು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದು ಮತ್ತಷ್ಟು ಲಾಭ ಗಳಿಸುವ ನಿರೀಕ್ಷೆಯಿದೆ. ಆದರೆ ಕೇವಲ ಹಣಗಳಿಕೆಯ ಸಿನಿಮಾದ ಯಶಸ್ಸನ್ನು ಸಾರುವುದಿಲ್ಲ ಅಲ್ಲವೇ? ಚಪಾಕ್‌ ಬಗ್ಗೆ ಲಕ್ಷಾಂತರು ಜನರು ಮೆಚ್ಚುಗೆಯ ಮಾತುಗಳನ್ನಾಡಿ ದೀಪಿಕಾಳ ಪ್ರಯತ್ನಕ್ಕೆ ಶಹಬ್ಬಾಶ್‌ ಹೇಳಿದ್ದಾರೆ.

ಇದು ದೀಪಿಕಾ ಅವರ ಹಿಂದಿನ ಚಿತ್ರ ಪದ್ಮಾವತ್ ರೀತಿಯ ಭಾರೀ ಹಣವನ್ನು ಗಳಿಸಿಲ್ಲ. ಆದರೆ ರಣವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ಜೊತೆಯಾಗಿ ನಟಿಸಿದ ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಪದ್ಮಾವತ್‌ ಚಿತ್ರವನ್ನು ಬರೋಬ್ಬರಿ 200 ಕೋಟಿ ರೂ.ಗಳ ಬಜೆಟ್‌ನಲ್ಲಿ ನಿರ್ಮಿಸಲಾಗಿತ್ತು ಎಂಬುದನ್ನು ನಾವು ಮರೆಯಬಾರದು. ಆ ಚಿತ್ರ ಭಾರತವೊಂದರಲ್ಲಿಯೇ 3500 ಪರದೆಗಳಲ್ಲಿ ಬಿಡುಗಡೆಯಾಗಿತ್ತು. ಆದರೆ ಚಪಾಕ್‌ ಕಮರ್ಷಿಯಲ್‌ ಚಿತ್ರವಲ್ಲ. ಹಾಗಾಗಿ ಇದನ್ನು ಕೇವಲ 1700 ಪರದೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಆದರೂ ಅದು ಹೂಡಿದ ಬಂಡವಾಳದ ಡಬಲ್‌ ಗಳಿಸಿದೆ.

ಟ್ವಿಟ್ಟರ್‌ನಲ್ಲಿ ಬಾಯ್ಕಟ್‌ ಹೇಳಿ ಕೂಡಲೇ ಜನ ಅದನ್ನು ತಿರಸ್ಕರಿಸುತ್ತಾರೆ ಎಂಬುದು ಸುಳ್ಳು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ಹಿಂದೆ ಇದೇ ರೀತಿ ಬಾಯ್ಕಟ್‌ಗೆ ಗುರಿಯಾಗಿದ್ದ ಪದ್ಮಾವತ್ (₹ 580 ಕೋಟಿ),  ಪಿಕೆ (₹ 850 ಕೋಟಿ), ದಂಗಲ್ (Cr 2000 ಕೋಟಿ), ವೀರ್‌ ದಿ ವೆಡ್ಡಿಂಗ್ (₹ 140 ಕೋಟಿ) ಚಿತ್ರಗಳು ಭಾರೀ ಲಾಭ ಮಾಡಿದ್ದವು ಎಂಬುದನ್ನು ನಾವು ಮರೆಯಬಾರದು.

ಅಲ್ಲದೆ, ಕೇಳಬೇಕಾದ ಪ್ರಶ್ನೆಯೆಂದರೆ, ಚಪಾಕ್‌ ವಿಷಯದಲ್ಲಿ ಏಕೆ ಟ್ರೋಲ್‌‌ ಮಾಡಲಾಯಿತು? ಹಲ್ಲೆಗೊಳಗಾದ ವಿದ್ಯಾರ್ಥಿಗಳ ಪರ ನಿಂತಿದ್ದು ದೀಪಿಕಾರವರ ವಯಕ್ತಿಕ ಹಕ್ಕು. ಅದು ಬಿಟ್ಟು ಚಿತ್ರದ ಬಗ್ಗೆ ಆಲೋಚಿಸಿದರೆ ಅದು ಮಹಿಳೆಯರ ಮೇಲೆ ಆಸಿಡ್ ದಾಳಿಯನ್ನು ಎತ್ತಿ ತೋರಿಸುವ ಸಾಮಾಜಿಕ ವಿಷಯದ ಕುರಿತ ಚಲನಚಿತ್ರವಾಗಿದೆ. ಆಸಿಡ್‌ ದಾಳಿಯಂತಹ ಭೀಕರ ಅಪರಾಧ ಮತ್ತು ಅದರ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಚಿತ್ರವಾಗಿದೆ. ಆಸಿಡ್‌ ಮಾರಾಟದ ನಿಷೇಧವನ್ನು ಅಥವಾ ಸುಲಭವಾಗಿ ಲಭ್ಯವಾಗಬಾರದೆಂದು ಪ್ರತಿಪಾದಿಸುವ ಚಿತ್ರವನ್ನು ವಿರೋಧಿಸುವ ಮೂಲಕ ನೀವು ಯಾರ ಪರ ನಿಲ್ಲುತ್ತಿದ್ದೀರಿ? ಟ್ರೋಲ್‌ ಮಾಡಿದವರು ದಯವಿಟ್ಟು ಆಲೋಚಿಸಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...

ಸೌದಿಗೆ ಪ್ರಯಾಣಿಸುವ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದ ಅಮೆರಿಕ

ಸೌದಿ ಅರೇಬಿಯಾ ಬೆಂಬಲಿತ ಪಡೆಗಳು ಮತ್ತು ಯೆಮೆನ್‌ನ ಹೌದಿ ಬಂಡುಕೋರರ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಸೌದಿ ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಿರುವುದಾಗಿ ಹೌದಿ ಪಡೆಗಳು ಪ್ರತಿಪಾದಿಸಿವೆ. ಮತ್ತೊಂದೆಡೆ, ಪವಿತ್ರ ನಗರಿ ಮಕ್ಕಾದ ದಕ್ಷಿಣ ಭಾಗದಲ್ಲಿ...