Homeಅಂಕಣಗಳುಟ್ರಾನ್ಸ್‌ಜೆಂಡರ್ ಸಮುದಾಯದ ಅರಿವಿನ ಲೋಕ ವಿಸ್ತರಿಸುತ್ತಿರುವ ಉಮಾ

ಟ್ರಾನ್ಸ್‌ಜೆಂಡರ್ ಸಮುದಾಯದ ಅರಿವಿನ ಲೋಕ ವಿಸ್ತರಿಸುತ್ತಿರುವ ಉಮಾ

- Advertisement -
- Advertisement -

ಎಲೆಮರೆ – 16

ಇದೀಗ ಟ್ರಾನ್ಸ್‌ಜೆಂಡರ್ ಸಮುದಾಯ ಹಲವು ಕ್ಷೇತ್ರಗಳಲ್ಲಿ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಿದೆ. ಈ ಸಮುದಾಯಕ್ಕೆ ಶಾಪವಾಗಿದ್ದ ಕಾಯ್ದೆ ಕಾನೂನುಗಳ ವಿರುದ್ಧ ಹೋರಾಟಕ್ಕೆ ಗೆಲುವು ಸಿಗುತ್ತಿದೆ. ಇಂತಹ ಹೋರಾಟ ಚಳವಳಿಯಲ್ಲಿ ಟ್ರಾನ್ಸ್‌ಜೆಂಡರ್ ಕಮುನಿಟಿಯ ಅನೇಕರು ಶ್ರಮಿಸುತ್ತಿದ್ದಾರೆ. ಆರಂಭದಿಂದಲೂ ಕರ್ನಾಟಕದಲ್ಲಿ ಸಂಗಮ ಸಂಸ್ಥೆಯ ಮನೋಹರ್ ಇಂತಹ ವಾತಾವರಣ ರೂಪಿಸುತ್ತಿದ್ದಾರೆ. ಈ ಸಂಸ್ಥೆಯಲ್ಲಿ ಕೆಲಸ ಮಾಡಿ ಜಾಗೃತರಾದ ಟ್ರಾನ್ಸ್‍ಜೆಂಡರ್ ಸಮುದಾಯದ ಸದಸ್ಯರು ಇದೀಗ ಸ್ವತಂತ್ರವಾದ ಸಂಘಟನೆಗಳೊಂದಿಗೆ ಸಮುದಾಯಕ್ಕಾಗಿ ದುಡಿಯುತ್ತಿದ್ದಾರೆ.

ಇಂಥವರಲ್ಲಿ ಎದ್ದು ಕಾಣುವ ಹೆಸರು ಅಕ್ಕೈ ಪದ್ಮಶಾಲಿ, ಚಾಂದಿನಿ, ಮಲ್ಲಪ್ಪ ಮುಂತಾದವರನ್ನು ಒಳಗೊಂಡಂತೆ ಸಮರ, ಪಯಣ, ಒಂದೆಡೆ, ಕರ್ನಾಟಕ ಸೆಕ್ಷುವಲ್ ಮೈನಾರಿಟೀಸ್ ಫೋರಂ (ಕೆ.ಎಸ್.ಎಮ್.ಎಫ್) ಮುಂತಾದ ಸಂಘಟನೆಗಳನ್ನು ಹೆಸರಿಸಬಹುದು. ಈ ಸಂಘಟನೆಗಳ ಜತೆ ಜತೆ ಎಲೆಮರೆಯಂತೆ ಕೆಲಸ ಮಾಡುವ ಉಮಾ ಜನರಿಗೆ ಅಷ್ಟಾಗಿ ಗೊತ್ತಿಲ್ಲ. ಟ್ರಾನ್ಸ್ ಜೆಂಡರ್ ಕಮುನಿಟಿಯ ಹಕ್ಕೊತ್ತಾಯ ಮತ್ತು ಅವರ ಅಭಿವೃದ್ಧಿಯ ಬಗ್ಗೆ ದೂರದೃಷ್ಠಿಯ ವಿಷನ್ ಹೊಂದಿದ ಉಮಾ ಸಮುದಾಯದ ಜೊತೆಗಿದ್ದೂ, ತನ್ನದೇ ಆದ ಗುರುತು ಕಾಯ್ದುಕೊಂಡಿದ್ದಾರೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ಸಮೀಪದ ದೇವಿಪಾಳ್ಯ ಎಂಬ ಚಿಕ್ಕ ಹಳ್ಳಿ. ಈ ಹಳ್ಳಿಯಲ್ಲಿ ಇದ್ದ ಸ್ವಲ್ಪ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದ ಪುಟ್ಟ ಕುಟುಂಬ. ಈ ಕುಟುಂಬದಲ್ಲಿ ಮೂರು ಗಂಡು ಮಕ್ಕಳು. ಉಮೇಶ್ ಮೂರನೆಯವ. ತಾಯಿ ಬಾಲ್ಯದಲ್ಲಿ ಉದ್ದನೆ ಕೂದಲಿದ್ದ ಉಮೇಶನಿಗೆ ಜಡೆ ಹಾಕಿ ಹೂಮುಡಿಸಿ ಶಾಲೆಗೆ ಕಳಿಸುತ್ತಿದ್ದಳು. ಆದು ಮಗನಿಗೂ ಖುಷಿ ತಾಯಿಗೂ ಖುಷಿ. ಶಾಲೆಯಲ್ಲಿ ಉಮೇಶ್ ಹುಡುಗಿಯರೊಂದಿಗೆ ಇರತೊಡಗಿ ಗಂಡು ಹುಡುಗರು ಕಂಡರೆ ತುಸು ನಾಚುವ ಸ್ವಭಾನ ನಿಧಾನಕ್ಕೆ ಗರಿಗಟ್ಟಿತು. ಹೀಗೆ ಬಾಲಕನೊಳಗಿನ ಹೆಣ್ಣಿನ ಮೊಳಕೆ ಅಮ್ಮನನ್ನು ಹೊರತುಪಡಿಸಿ ಎಲ್ಲರಿಂದಲೂ ತಿರಸ್ಕಾರ, ಅವಮಾನಕ್ಕೆ ಕಾರಣವಾಯಿತು. `ನಾನೇಕೆ ಹೀಗೆ’ ಎನ್ನುವ ಪ್ರಶ್ನೆ ತೀವ್ರವಾಗಿ ಕಾಡಿ ಆತ್ಮಹತ್ಯೆಯ ತನಕ ಕರೆದೊಯ್ಯಿತು. ಈ ರೂಪಾಂತರವೊಂದು ನೋವಿನ ಕಥನ.

ಅಮ್ಮನ ಜತೆ ಬೆಂಗಳೂರಿನ ಸಂಬಂಧಿಕರ ಮನೆಗೆ ಬಂದಾಗ, ಬಸ್‍ಸ್ಟಾಂಡ್‍ನಲ್ಲಿ ತನ್ನಂಥಹದೇ ಭಾವನೆಗಳಿರುವವರನ್ನು ನೋಡಿ ಉಮೇಶ್ ಖುಷಿಯಾಗುತ್ತಾನೆ. ಅರೆ ನಾನು ಅವರ ಹಾಗೆ ಇರಬಹುದಲ್ಲವೇ? ಎನ್ನುವ ಯೋಚನೆ ಬದುಕುವ ಬರವಸೆ ಮೂಡಿಸುತ್ತದೆ. ಉಮೇಶ್ ಕೆಲವರನ್ನು ಮಾತಾಡಿಸಿ ಮನಸ್ಸನ್ನು ಹಗುರ ಮಾಡಿಕೊಳ್ಳುತ್ತಾನೆ. ಇದರಿಂದಾಗಿ ಅಮ್ಮನ ಜತೆ ಊರಿಗೆ ಹೋದರೂ, ಮರಳಿ ಬೆಂಗಳೂರಿಗೆ ಬರುತ್ತಾನೆ. ತನ್ನ ಸಂಬಂಧಿಕರ ಮನೆಯಲ್ಲಿದ್ದುಕೊಂಡೆ ತನ್ನ ಸಮುದಾಯದ ಪರಿಚಯ ಸಂಪಾದಿಸುತ್ತಾನೆ. ನಿಧಾನಕ್ಕೆ ಉಮೇಶ್ ಉಮಾಳಾಗಿ ಬದಲಾಗುತ್ತಾನೆ. ತನ್ನವರಂತೆ ಭಿಕ್ಷೆ ಉಮಾಗೆ ಹಿಂಸೆ ಅನ್ನಿಸಿ, ಸೆಕ್ಸ್ ವರ್ಕ್‍ನಲ್ಲಿ ಉಮಾ ಎರಡು ವರ್ಷ ಕಳೆಯುತ್ತಾಳೆ.

2004 ರಲ್ಲಿ ಸಂಗಮ ಸಂಸ್ಥೆಯಲ್ಲಿ ಸೇರಿಕೊಳ್ಳುತ್ತಾರೆ. ವಾಲಂಟರಿಯಾಗಿ ಒಂದು ವರ್ಷ ಆ ಸಂಸ್ಥೆಯಲ್ಲಿ ಕೆಲಸ ಮಾಡಿ ನಂತರ ಕಮ್ಯುನಿಟಿ ಮೊಬಿಲೈಜರ್ ಆಗಿ ದುಡಿಯುತ್ತಾರೆ. ಈ ಸಂಸ್ಥೆಯಲ್ಲಿ ನಡೆಯುವ ಸಭೆ, ಮೀಟಿಂಗ್, ಓದು ಭಾಷಣಗಳಿಂದ ತನ್ನ ಅರಿವನ್ನು ವಿಸ್ತರಿಸಿಕೊಳ್ಳುತ್ತಾರೆ. ಸಂಗಮದಲ್ಲಿದ್ದೇ ಇತರರ ಜೊತೆಗೆ 2005 ದಲ್ಲಿ ಸಮರ ಎನ್ನುವ ಸಂಸ್ಥೆ ರೂಪಿಸುತ್ತಾರೆ. ಈ ಸಂಘಟನೆ ಸರಕಾರದ ಹೆಚ್.ಐ.ವಿ ಜಾಗೃತಿ ಕಾರ್ಯಕ್ರಮವನ್ನು ಪಡೆದು ಕೆಲಸ ಮಾಡುವುದಕ್ಕೆ ಶುರುಮಾಡುತ್ತದೆ.

ಎನ್.ಜಿ.ಓಗಳು ಒಂದು ಇಶ್ಶು ಬಿಟ್ಟು ದಿಡೀರ್ ಮತ್ತೊಂದು ಇಶ್ಶು ಎತ್ತಿಕೊಳ್ಳುತ್ತವೆ. ಹಾಗಾಗಿ ಎನ್.ಜಿ.ಓಗಳಿಗಿಂತ ಸಮುದಾಯದ ಒಳಗೇ ಒಂದು ಸಂಘಟನೆ, ಸಮುದಾಯಿಕ ಚಟುವಟಿಕೆಗಳು ಪ್ರಾರಂಭವಾಗಬೇಕು. ಹಾಗಾದಲ್ಲಿ ಸಮುದಾಯದ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬಹುದು ಎಂದರಿತು, 2007 ರಲ್ಲಿ ಕರ್ನಾಟಕ ಸೆಕ್ಷುವಲ್ ಮೈನಾರಿಟೀಸ್ ಫೋರಂ (ಕೆ.ಎಸ್.ಎಮ್.ಎಫ್) ಕಟ್ಟುತ್ತಾರೆ. ಹೀಗೆ ಬೇರೆ ಬೇರೆ ಸಂಘಟನೆಗಳ ಕೆಲಸದ ಕಾರಣ 2009 ರಲ್ಲಿ ಭಿನ್ನಾಭಿಪ್ರಾಯ ಬಂದು ಚಾಂದಿನಿ ಮತ್ತು ಉಮಾ `ಸಂಗಮ’ ತೊರೆಯುತ್ತಾರೆ. ಆಗ ಪಯಣ ಎನ್ನುವ ಸಂಸ್ಥೆ ಸ್ಥಾಪಿಸಿ ಅದರ ಮೂಲಕವೂ ಕೆಲಸ ಮಾಡುತ್ತಾರೆ.

ಪ್ರೀವೀಲ್ಸ್ ಇಂಡಿಯಾ ಪ್ರವೇಟ್ ಲಿಮಿಟೆಡ್ ಎನ್ನುವ ಕಂಪನಿಯಲ್ಲಿ ಟ್ರಾನ್ಸ್ ಜೆಂಡರ್ ಐಡೆಂಟಿಟಿ ಗೊತ್ತಿದ್ದೂ ಕೆಲಸ ಮಾಡಲು ಅವಕಾಶ ಕೊಡುತ್ತಾರೆ. ಇದರಲ್ಲಿ ಉಮಾ ಚಾಂದಿನಿ ಕೆಲಸಕ್ಕೆ ಸೇರುತ್ತಾರೆ. ಮುಖ್ಯವಾಗಿ ಆಟೋ ಡ್ರೈವರುಗಳ ಬಗ್ಗೆ ಅಧ್ಯಯನ ಮಾಡುತ್ತಾರೆ. ಹೀಗೆ 2 ವರ್ಷ ಕೆಲಸ ಮಾಡಿದ ಮೇಲೆ, ಸಮುದಾಯದ ಸಂಘಟನೆ ಹಿನ್ನೆಡೆಯಾಗುತ್ತದೆ. ಹೀಗಾಗಿ ಉಮಾ ಮತ್ತು ಚಾಂದಿನಿ ಈ ಕೆಲಸದಿಂದಲೂ ಹೊರಬರುತ್ತಾರೆ.

ಈಗಾಗಲೆ ಇರುವ ಸಂಘಟನೆಗಳು ಅವುಗಳದ್ದೇ ಚೌಕಟ್ಟುಗಳಲ್ಲಿ ಕೆಲಸ ಮಾಡುತ್ತಿವೆ. ಇವುಗಳು ಮಾಡದ ಕ್ಷೇತ್ರವನ್ನು ಆಯ್ದುಕೊಂಡು ಕೆಲಸ ಮಾಡಬೇಕೆಂದು ಉಮಾ ಟ್ರಾನ್ಸ್ ಸಮುದಾಯದ ಮಾನಸಿಕ ಸಮಸ್ಯೆಗಳನ್ನು ಆಧರಿಸಿ ಒಂದು ಪ್ರತ್ಯೇಕ ಫೋರಂ ರಚಿಸುತ್ತಾರೆ. ಅದುವೆ `ಜೀವ’ ಎನ್ನುವ ಸಂಸ್ಥೆ, ಅದು 2012ರಲ್ಲಿ ರೂಪು ತಳೆಯುತ್ತದೆ.

`ಜೀವ’ ಉಮಾ ಅವರ ಕನಸಿನ ಕೂಸು. ಜೀವನವೇ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಪ್ರಯತ್ನಿಸುವುದು, ಅಲ್ಕೋಹಾಲ್ ಒಳಗೊಂಡಂತೆ ಚಟಗಳಿಗೆ ಅಡಿಕ್ಟ್ ಆಗೋರ ಮನ ಪರಿವರ್ತನೆ ಮಾಡೋದು, ಪರ್ಯಾಯ ಬದುಕು ಕಟ್ಟಿಕೊಳ್ಳಲು ನೆರವಾಗೋದು ಈ ಸಂಸ್ಥೆಯ ಮುಖ್ಯ ಗುರಿ. ಹಾಗಾಗಿ ಈ ಸಂಸ್ಥೆಯ ಭಾಗವಾಗಿ `ಅನನ್ಯ’ ಎನ್ನುವ ಟ್ರಾನ್ಸ್ ಕಮುನಿಟಿಗೇ ಪ್ರತ್ಯೇಕವಾದ ಪತ್ರಿಕೆ ಆರಂಭಿಸಿದ್ದಾರೆ. ಈ ಪತ್ರಿಕೆ ಟ್ರಾನ್ಸ್‍ಜೆಂಡರುಗಳ ಹೋರಾಟ, ಚಟುವಟಿಕೆ, ಆತ್ಮಕಥನದ ಭಾಗಗಳನ್ನು ಪ್ರಕಟಿಸುತ್ತಿದೆ. ಇಷ್ಟೇ ಅಲ್ಲದೆ, 2011 ರಿಂದ ಕರ್ನಾಟಕದ ಸರಕಾರ ಜಾರಿಗೊಳಿಸಿದ್ದ ಟ್ರಾನ್ಸ್ ಕಮುನಿಟಿಯನ್ನು ಕಂಟ್ರೋಲ್ ಮಾಡುವ ಕರ್ನಾಟಕ 36 ಕಾಯ್ದೆಯನ್ನು ರದ್ದುಗೊಳಿಸುವಲ್ಲಿಯೂ, 1861 ರಿಂದ ಜಾರಿಯಾಗಿದ್ದ 377 ಆಕ್ಟ್ ವಿರುದ್ಧದ ಹೋರಾಟದಲ್ಲಿ ಉಮಾ, ಅಕ್ಕೈ, ಮತ್ತು ಸ್ವಾತಿ ಕರ್ನಾಟಕದಿಂದ ಪಿಟಿಷನ್ ಪೈಲ್ ಮಾಡಿದ್ದರು. 2018 ನಲ್ಲಿ ಸುಪ್ರೀಂಕೋರ್ಟ್ 377 ಸೆಕ್ಷನ್ ಅಸಂವಿಧಾನಿಕ ಎಂದು ಕಾಯ್ದೆಯನ್ನು ರದ್ದುಗೊಳಿದ್ದರಲ್ಲಿ ಉಮಾ ಅವರ ಪಾಲೂ ಇದೆ.

ಈಚೆಗೆ ನಾಲ್ಕು ತಿಂಗಳ ಹಿಂದಷ್ಟೇ ತನ್ನ 17 ವರ್ಷ ಜೊತೆ ಬಾಳಿದ ಸಂಗಾತಿ ಲಿವರ್ ತೊಂದರೆಯಿಂದ ಉಮಾ ಅವರನ್ನು ಅಗಲಿದ್ದಾರೆ. ಈ ದುಃಖವಿನ್ನೂ ಉಮಾ ಅವರಿಂದ ದೂರವಾಗಿಲ್ಲ. ಸಮಾಜದಲ್ಲಿ ಗಂಡು ಹೆಣ್ಣಾಗಿ ಮಾತ್ರವೇ ಬದುಕಬೇಕೇ? ಎರಡೂ ಭಾವದಲ್ಲಿಯೂ ನಮಗೆ ತೋಚಿದಂತೆ ಬದುಕಲು ಸಾಧ್ಯವಿಲ್ಲವೇ ಎನ್ನುವ ಜಿಜ್ಞಾಸೆ ಉಮಾ ಅವರನ್ನು ಕಾಡಿದೆ. ಹಾಗಾಗಿ ನಿರ್ವಾಣಹೊಂದಿ ಪೂರ್ಣ ಹೆಣ್ಣಾಗಿಯೂ ಜೀವಿಸದೆಯೆ, ಗಂಡಿನಂತೆಯೂ ತೋರಿಸಿಕೊಳ್ಳದೆ ತನ್ನ ಭಾವನೆಗೆ ಪೂರವಾದ ನಡೆನುಡಿಯನ್ನು ರೂಢಿಸಿಕೊಂಡಿದ್ದಾರೆ. ನನಗೆ ನನ್ನದೇ ಬಗೆಯ ವ್ಯಕ್ತಿತ್ವವಿದೆ. ಸಮಾಜ ನನ್ನನ್ನು ಹೇಗಾದರೂ ನೋಡಲಿ ಎನ್ನುವ ಖಚಿತತೆಯಲ್ಲಿ ಬದುಕುತ್ತಾರೆ. ಉಮಾ ಅವರ ಹೋರಾಟ, ಕಾಳಜಿ, ಬದ್ಧತೆಗಳಿಗೆ ಜಯ ಸಿಗಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...