Homeಎಲೆಮರೆಅಲೆಮಾರಿ ಮೇಡಂ: ಶಾರದ

ಅಲೆಮಾರಿ ಮೇಡಂ: ಶಾರದ

- Advertisement -
- Advertisement -

ಬೀದರಿನ ವಾರ್ತಾಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಸಮಾಜಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಜಿಲ್ಲಾಧಿಕಾರಿಗಳ ಕಚೇರಿ ಮುಂತಾದ ಇಲಾಖೆಗಳ ಅಧಿಕಾರಿಗಳ ಬಳಿ ಮತ್ತು ಬೀದರ್ ಜಿಲ್ಲೆಯ ಯಾವುದೇ ಬುಡಕಟ್ಟು ಅಲೆಮಾರಿ ಜನರ ಬಳಿ `ಅಲೆಮಾರಿ ಮೇಡಂ’ ಯಾರು ಎಂದು ಕೇಳಿದರೆ ಅವರುಗಳು ಶಾರದ ಅವರ ಬಗ್ಗೆ ಹೇಳುತ್ತಾರೆ. ಕೆಲವು ಅಧಿಕಾರಿಗಳು ಮುಖ ಗಂಟಿಕ್ಕಿ ಚೂರು ಸಿಡುಕಿನಿಂದಲೆ ಹೇಳಿದರೆ, ಅಲೆಮಾರಿ ಬುಡಕಟ್ಟಿನ ಜನರು ಮುಖ ಅರಳಿಸಿ `ಓಹ್ ನಮ್ ಮೇಡಂ ಸರ್, ಗೊತ್ತವ್ರು, ಅವರ ನಂಬರ್.. ನಮ್ಮ ಆಧಾರ ಕಾರ್ಡ್ ಮೇಲಿದೆ’ ಎಂದು ನಿಮಗೆ ಶಾರದ ಅವರ ಫೋನ್ ನಂಬರ್ ಕೊಡುತ್ತಾರೆ.

ಹೀಗೆ ಬೀದರ್ ಜಿಲ್ಲೆಯಾದ್ಯಂತ ಅಲೆಮಾರಿ ಮೇಡಂ ಎಂದೇ ಗುರುತಿಸಲ್ಪಡುವ ಶಾರದ ಒಬ್ಬ ಸಾಮಾನ್ಯ ಪದವೀಧರ ಗೃಹಿಣಿ. ಅರೆ ಶಾರದ ಅವರನ್ನು ಯಾಕೆ ಅಲೆಮಾರಿ ಮೇಡಂ ಎಂದು ಕರೆಯುತ್ತಾರೆ..? ಏಕೆಂದರೆ 2013 ರಿಂದಲೂ ಬುಡಕಟ್ಟು ಅಲೆಮಾರಿ ಮಕ್ಕಳಿಗೆ ಅಕ್ಷರದ ಅರಿವು ಮೂಡಿಸಲು, ಅವರಿಗೊಂದು ಗುರುತು ಕೊಡಿಸಲು, ನೆಲೆ ಒದಗಿಸಲು, ಅವಿರತವಾಗಿ ಶ್ರಮಿಸುತ್ತಿದ್ದಾರೆ.

ಯಾವುದೇ ಅಧಿಕಾರವಿಲ್ಲದೆ, ಲಾಭನಷ್ಟದ ಲೆಕ್ಕಾಚಾರಗಳಿಲ್ಲದೆ, ಉತ್ತಮ ಆರ್ಥಿಕ ಸ್ಥಿತಿಯೂ ಇಲ್ಲದೆ, ಮೇಲ್ಜಾತಿಯೂ ಅಲ್ಲದ ಪರಿಶಿಷ್ಟ ಜಾತಿಯ ಛಲವಾದಿ ಸಮುದಾಯಕ್ಕೆ ಸೇರಿದ, ಎಂ.ಎಸ್.ಡಬ್ಲು ಬಿಇಡಿ ಮಾಡಿದ ಒಬ್ಬ ಸಾಮಾನ್ಯ ಮಹಿಳೆಗೆ ಬುಡಕಟ್ಟು ಅಲೆಮಾರಿಗಳ ಒಳಿತಿಗಾಗಿ ದುಡಿವ ಮನಸ್ಸು ಹದಗೊಂಡದ್ದು ಹೇಗೆ ಎಂದು ನೋಡಿದರೆ, ಅದೊಂದು ಕುತೂಹಲಕರ ಸಂಗತಿ.

ರಾಯಚೂರು ಜಿಲ್ಲೆ ಮಾನವಿ ತಾಲೂಕಿನ ಬಾಗಲವಾಡ ಹಳ್ಳಿಯ ಶಾರದ ಮನೆಯ ಬಡತನದ ಕಾರಣ ಹೈಸ್ಕೂಲಿನಿಂದಲೂ ಮಾನವಿ, ರಾಯಚೂರಿನ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲುಗಳಲ್ಲಿ ಓದುತ್ತಾರೆ. ಹೀಗೆ ಓದುವಾಗ ತಮ್ಮ ಹಾಸ್ಟೆಲುಗಳ ಹೊರವಲಯದಲ್ಲಿ ಆಗಾಗ ಅಲೆಮಾರಿಗಳು ಬಟ್ಟೆಯ ಟೆಂಟ್ ಹಾಕಿ ವಾಸಿಸುತ್ತಿದ್ದರು. ಹಿರಿಯರು ಚಿಕ್ಕಪುಟ್ಟ ವ್ಯಾಪಾರ, ಬೇಟೆ, ಭಿಕ್ಷೆ ಅಂತೆಲ್ಲಾ ನಗರ ಮತ್ತು ಕಾಡು ಪ್ರವೇಶಿಸಿದರೆ, ಇವರ ಮಕ್ಕಳು ಬಟ್ಟೆಯಿಲ್ಲದೆ ಸ್ನಾನವಿಲ್ಲದೆ ಕೆದರಿದ ಕೂದಲಿನಲ್ಲಿ ಟೆಂಟಿನ ಮುಂದೆ ಮಣ್ಣಲ್ಲಿ ಆಟವಾಡುತ್ತಿದ್ದರು. ಶಾರದ ಹಾಸ್ಟೆಲ್ ಕಿಟಕಿಗಳಿಂದ ಈ ಮಕ್ಕಳನ್ನು ನೋಡುತ್ತಿದ್ದಾಗ ಅರೆ ಇವರ್ಯಾಕೆ ಹೀಗೆ ? ಇವರಿಗೆ ನಮ್ಮಂತೆ ಮನೆಗಳೇಕಿಲ್ಲ? ಎನ್ನುವ ಪ್ರಶ್ನೆಯೊಂದು ಮಿಂಚಿ ಮರೆಯಾಗುತ್ತಿತ್ತು. ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಆ ಸ್ಥಳದಿಂದ ಮಾಯವಾಗಿ ಎಷ್ಟೋ ದಿನಗಳ ಕಾಲ ಅವರು ಇತ್ತ ತಲೆ ಹಾಕುತ್ತಲೂ ಇರಲಿಲ್ಲ. ಒಮ್ಮೊಮ್ಮೆ ದಿಢೀರ್ ಟೆಂಟ್‍ಗಳು ಪ್ರತ್ಯಕ್ಷವಾಗುತ್ತಿದ್ದವು. ಈ ಕಣ್ಣೋಟದ ಅಲೆಮಾರಿಗಳ ಚಿತ್ರ ಶಾರದ ಅವರಲ್ಲಿ ಸುಪ್ತವಾಗಿತ್ತು.

ಬಿ.ಎ. ಎರಡನೆ ವರ್ಷ ಕಲಿಯುವಾಗಲೆ ಶಾರದ 2011 ರಲ್ಲಿ ಮದುವೆಯಾಗಿ ಬೀದರಿಗೆ ಬರುತ್ತಾರೆ. ಗಂಡ ಮತ್ತು ಮನೆಯವರ ಬೆಂಬಲದಿಂದ ಅರ್ಧಕ್ಕೆ ನಿಂತ ಓದನ್ನು ಮುಂದುವರಿಸುತ್ತಾರೆ. ಬಿ.ಎ., ಎಮ್.ಎಸ್.ಡಬ್ಲು, ಬಿಎಡ್ ಮಾಡುತ್ತಾರೆ. ಎಮ್.ಎಸ್.ಡಬ್ಲು ಮಾಡುವಾಗ ಸಮಾಜಸೇವೆಯ ಬಗ್ಗೆ ಗಮನ ಹರಿಯುತ್ತದೆ. ಹೈಸ್ಕೂಲಲ್ಲಿ ಕಂಡ ಅಲೆಮಾರಿಗಳ ಚಿತ್ರಗಳು ತರಗತಿಗಳಲ್ಲಿ ಮರುಕಳಿಸತೊಡಗುತ್ತವೆ. ಹೀಗೆ ಬಿಎಡ್ ಮುಗಿಸಿ ಬೀದರಿನ ಸೆಂಟ್ ಜೋಸೆಫ್ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರುತ್ತಾರೆ. ಶಾಲೆಗೆ ಹೋಗಿ ಬಂದು ಮಾಡುವ ಮಾರ್ಗಮಧ್ಯದಲ್ಲಿ ಒಮ್ಮೆ ಅರ್ಧಮುಚ್ಚಿದ ಬಾವಿಯೊಂದರಲ್ಲಿ ಅಲೆಮಾರಿ ಮಗು ಆಯತಪ್ಪಿ ಬಿದ್ದು ಅಳುತ್ತಿರುತ್ತದೆ. ಇದನ್ನು ನೋಡಿ ಶಾರದ ಆ ಮಗುವನ್ನು ಮೇಲಕ್ಕೆತ್ತಿ ಅವರ ತಂದೆತಾಯಿಗೆ ತಲುಪಿಸುತ್ತಾರೆ. ಆಗ ಅಲೆಮಾರಿಗಳ ಪರಿಚಯವಾಗುತ್ತದೆ.

ಸೋಷಿಯಲ್ ವರ್ಕ್ ಎನ್ನುವ ಕೆಲಸದಲ್ಲಿ ಡಾನ್‍ಬಾಸ್ಕೋ ಸಂಸ್ಥೆಯಲ್ಲಿ ಕೆಲದಿನ ಕೆಲಸ ಮಾಡುತ್ತಾರೆ. ಆಗ ಮಗುವಿಗೆ ಹೆರಿಗೆಯಾದ ಕಾರಣ ಡಾನ್‍ಬಾಸ್ಕೋ ಸಂಸ್ಥೆಯ ಕೆಲಸವನ್ನು ಬಿಡುತ್ತಾರೆ. ತಾಯಿ, ಮಗುವಿನ ಜತೆ ಕಾಲ ಕಳೆಯುವಾಗ ತನ್ನ ಮನೆಗೆ ಹತ್ತಿರದಲ್ಲಿರುವ ಅಲೆಮಾರಿಗಳ ಜತೆ ಸಂಪರ್ಕ ಬೆಳೆಯುತ್ತದೆ. ಓದುಬರಹವಿಲ್ಲದ ಅವರ ಮಕ್ಕಳನ್ನು ನೋಡಿ, ನಿಮ್ಮ ಮಕ್ಕಳಿಗೆ ಅಕ್ಷರ ಕಲಿಸುವೆ ಎಂದಾಗ ಅಲೆಮಾರಿಗಳು ಒಪ್ಪುವುದಿಲ್ಲ. ದಿನಾಲು ಅಲೆಮಾರಿಗಳ ಗುಡಿಸಲುಗಳ ಎದುರು ಅವರ ಮನವೊಲಿಸಲು ಪ್ರಯತ್ನಿಸುತ್ತಾರೆ. ಆದರೂ ಅಲೆಮಾರಿಗಳು ಇವರನ್ನು ನಂಬುವುದಿಲ್ಲ. ನಾನಾಗೆ ಇವರ ಮಕ್ಕಳಿಗೆ ಅಕ್ಷರ ಕಲಿಸುವೆ ಎಂದರೂ ಇವರು ನನ್ನನ್ನು ನಂಬುತ್ತಿಲ್ಲವಲ್ಲ ಎಂದು ಎಷ್ಟೋ ಬಾರಿ ಶಾರದ ಅಳುತ್ತಾ ಮನೆಗೆ ಮರಳಿದ್ದರು. ಇಷ್ಟಾಗಿಯೂ ಅಲೆಮಾರಿಗಳನ್ನು ಬಗೆಬಗೆಯ ರೀತಿಯಲ್ಲಿ ಆಪ್ತವಾಗಿ ಒಪ್ಪಿಸಲು ಪ್ರಯತ್ನಿಸಿದರು. ಒಂದೆರಡು ವರ್ಷದ ನಂತರ ನಿಧಾನಕ್ಕೆ ಅಲೆಮಾರಿಗಳಿಗೆ ಶಾರದ ಅವರಲ್ಲಿ ವಿಶ್ವಾಸ ಮೂಡುತ್ತದೆ.

`ನಮಗೆ ಮನಿಯಿಲ್ಲ ಮಠವಿಲ್ಲ ನೀವು ಬಂದ್ ಶಾಲಿ ಕಲಿಸ್ತೀನಿ ಅಂತೀರಿ, ನಾವು ಇವತ್ ಇಲ್ಲಿದ್ರೆ ನಾಳೆ ಅಲ್ಲಿರ್ತೀವಿ, ನಮ್ಮನ್ನ ಸರಕಾರದವರು ಇಲ್ಲಿಂದ ಅಲ್ಲಿಗೆ ಅಲ್ಲಿಂದ ಇಲ್ಲಿಗೆ ಓಡಿಸ್ತಾನ ಇರ್ತಾರೆ. ನಮಗೆ ಉಳಿಯೋಕೆ ಒಂದು ನೆಲೆ ಅಂತ ಇಲ್ದಿರೋವಾಗ ನಮ್ಮ ಮಕ್ಕಳು ಶಾಲಿ ಕಲಿತು ಏನ್ ಮಾಡ್ತಾವೆ’ ಎನ್ನುತ್ತಾರೆ. ಆಗ ಶಾರದಾಗೆ ಹೊಳೆದ ಸಂಗತಿಯೆಂದರೆ, ಇವರಿಗೆ ಸರಕಾರದಿಂದ ಒಂದು ಮನೆ ಕಟ್ಟಿಸಿಕೊಟ್ಟರೆ ಒಂದೆಡೆ ಉಳಿಯುತ್ತಾರೆ ಎಂದು ಅನ್ನಿಸುತ್ತದೆ. ಅದಕ್ಕಾಗಿ `ನೀವು ನಿಮ್ಮ ಮಕ್ಕಳನ್ನು ಶಾಲೆಗೆ ಕಳಿಸಿ, ನಾನು ಹೇಗಾದರೂ ಮಾಡಿ ನಿಮಗೆ ಮನೆಗಳನ್ನು ಕೊಡಿಸ್ತೀನಿ’ ಎನ್ನುವ ಸುಳ್ಳು ಭರವಸೆ ಕೊಡುತ್ತಾರೆ. ಈ ಒಂದು ಭರವಸೆಯಿಂದ ಅಲೆಮಾರಿಗಳು ತಮ್ಮ ಮಕ್ಕಳನ್ನು ಶಾರದ ಬಳಿ ಅಕ್ಷರ ಕಲಿಯಲು ಕಳಿಸುತ್ತಾರೆ. ಆಗ ಶಾರದ ಅವರು ಅಲೆಮಾರಿಗಳ ಜಾಗವನ್ನೆ ಶಾಲೆಯ ಆವರಣವನ್ನಾಗಿಸಿಕೊಂಡು ಅವರಿಗೆ ಅಕ್ಷರ ಕಲಿಸತೊಡಗುತ್ತಾರೆ.

ಇದೇ ಹೊತ್ತಿಗೆ ಬೀದರ್ ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆಯು ಬೀದರಿನಲ್ಲಿ ಅಲೆಮಾರಿಗಳಿಲ್ಲ ಎಂದು ಸರಕಾರಕ್ಕೆ ವರದಿ ಸಲ್ಲಿಸುತ್ತದೆ. ಸ್ವತಃ ಅಲೆಮಾರಿಗಳ ಜತೆ ಬದುಕುತ್ತಿದ್ದ ಶಾರದ ಅವರಿಗೆ ಈ ವರದಿ ಅಚ್ಚರಿ ಹುಟ್ಟಿಸಿ ಇಲಾಖೆಯ ಗಮನಕ್ಕೆ ತರುತ್ತಾರೆ. ಆಗ ಇಲಾಖೆಯು ಅಲೆಮಾರಿಗಳು ಇದ್ದರೆ ಅವರನ್ನು ಗುರುತಿಸಲು ಶಾರದಾ ಅವರಿಗೆ ಸಹಕಾರ ನೀಡುತ್ತದೆ. ಈ ನಡುವೆ ತಾನು ಅಕ್ಷರ ಕಲಿಸುವ ಮಕ್ಕಳನ್ನು ಶಾಲೆಗೆ ಸೇರಿಸಬೇಕು. ಆದರೆ ಆ ಮಕ್ಕಳಿಗೆ ಯಾವುದೇ ಗುರುತಿಲ್ಲ. ಮೊದಲನೆಯದಾಗಿ ಆಧಾರ ಕಾರ್ಡ್ ಮಾಡಿಸಬೇಕಾದ ಅನಿವಾರ್ಯ ಬರುತ್ತದೆ. ಮಕ್ಕಳಿಗೆ ಆಧಾರ್ ಮಾಡಿಸಲು ತಂದೆತಾಯಿಯರ ಆಧಾರ್ ಬೇಕು.

ಆದರೆ ಈ ಯಾವ ಕುಟುಂಬಗಳಿಗೂ ಆಧಾರ ಕಾರ್ಡ್ ಕೊಟ್ಟಿರಲಿಲ್ಲ. ಈಗ ಮತ್ತೊಂದು ಸಮಸ್ಯೆ ಶುರುವಾಯಿತು. ಮಕ್ಕಳ ತಂದೆತಾಯಿಯರಿಗೆ ಆಧಾರ್ ಕಾರ್ಡ್ ಮಾಡಿಸುವುದು. ಯಾವುದೇ ದಾಖಲೆಗಳಿಲ್ಲದ ಈ ಅಲೆಮಾರಿಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಸೆಳೆದು, ಅಲೆದಲೆದು ಶಾರದ ಅವರೆ ಸ್ವತಃ ಎಲ್ಲರಿಗೂ ಸಾಕ್ಷಿಯಾಗಿದ್ದು ಆಧಾರ್ ಕಾರ್ಡ ಮಾಡಿಸುತ್ತಾರೆ. ಹೀಗೆ ನಿರಂತರವಾಗಿ ನಾಲ್ಕೈದು ವರ್ಷದಲ್ಲಿ ಅಲೆಮಾರಿ ಸಮುದಾಯದ 500ಕ್ಕೂ ಹೆಚ್ಚು ಜನರಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಓಟರ್ ಐಡಿ ಮಾಡಿಸಿದ್ದಾರೆ. ಇದೀಗ 63 ಅಲೆಮಾರಿ ಮಕ್ಕಳು ಶಾಲೆ ಕಲಿಯುತ್ತಿದ್ದಾರೆ. ಅಲೆಮಾರಿಗಳ ಮನೆ ಕಟ್ಟಿಸಲಿಕ್ಕಾಗಿ ನಾಲ್ಕು ಎಕರೆ ಜಮೀನು ಮಂಜೂರಾಗಿದೆ. ಇದೀಗ ಅಲೆಮಾರಿಗಳ ಸ್ವಂತ ಉದ್ಯೋಗಕ್ಕಾಗಿ ಸಣ್ಣಮಟ್ಟದಲ್ಲಿ ಸಾಲಸೌಲಭ್ಯಗಳು ಸಿಗತೊಡಗಿವೆ. ಇದೆಲ್ಲವೂ ಸುಲಭವಾಗಿ ದಕ್ಕಿರುವುದಲ್ಲ ಶಾರದ ಅವರು ನಾಲ್ಕೈದು ವರ್ಷಗಳ ಕಾಲ ಸರಕಾರಿ ಇಲಾಖೆಗಳ ಜತೆ, ಅಧಿಕಾರಿಗಳ ಜತೆ ನಿರಂತರ ಜಗಳ, ಹಕ್ಕೊತ್ತಾಯ, ಚರ್ಚೆ ಸಂವಾದಗಳ ಮೂಲಕ ಇದನ್ನೆಲ್ಲಾ ಆಗುಮಾಡಿದ್ದಾರೆ.

ಈ ಎಲ್ಲಾ ಹೋರಾಟ ಹಕ್ಕೊತ್ತಾಯಗಳ ಜೊತೆಜೊತೆಗೆ ಇದೀಗ ಗುತ್ತಿಗೆ ಆಧಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಮಹಿಳಾ ಶಕ್ತಿ ಕೇಂದ್ರ ಯೋಜನೆಯ ಜಿಲ್ಲಾ ಮಹಿಳಾ ಕಲ್ಯಾಣಾಧಿಕಾರಿಯಾಗಿ ಇದೇ ಜನವರಿ 13, 2020 ರಿಂದ ಕೆಲಸಕ್ಕೆ ಸೇರಿದ್ದಾರೆ. `ನಮ್ ಮನೆಯವ್ರ ಬೆಂಬಲ ಇರದಿದ್ರ ಇದನ್ನೆಲ್ಲ ಮಾಡೋಕೆ ಆಗ್ತಿರಲಿಲ್ಲ ಸರ್, ಈಗ ಸಿ.ಎ.ಎ ಎನ್.ಆರ್.ಸಿ ಬಂದದಲ್ಲ ಮತ್ತೆ ನನಗೆ ಭಯ ಶುರು ಆಗ್ಯಾತಿ. ಇವರಿಗೆ ಈಗಿರೋದನ್ನು ಬಿಟ್ಟರೆ ಇವರ ಹಿರೇರು ಎಲ್ಲಿದ್ರು ಅನ್ನೋಕೆ ಏನೂ ದಾಖಲೆ ಇಲ್ಲ. ಅದೇನು ಆಗ್ತಾತೋ ಅಂತ ಭಯ ಆಗೇತಿ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ. ಯಾವುದೇ ಆಕಾಡೆಮಿಕ್ ಸಂಶೋಧಕರಿಗಿಂತಲೂ ಸೂಕ್ಷ್ಮವಾಗಿ ಅಲೆಮಾರಿ ಬುಡಕಟ್ಟು ಸಮುದಾಯದ ನಾಡಿಮಿಡಿತ ಗುರುತಿಸುವ ಶಾರದ ಅವರು ನಿಜಕ್ಕೂ ಈ ಕಾಲಕ್ಕೆ ಮಾದರಿಯಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಶಾರದಾ ಅವರ ಸಮಾಜಸೇವೆ ಜೋತೆ… ವಿದ್ಯೆ ದಾನವನ್ನು ಮಾಡಿದ್ದಾರೆ. ಅವರಿಗಿ ಅಭಿನಂದನೆಗಳು

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...