Homeಕರ್ನಾಟಕಉದ್ಯೋಗಿಗಳ ಶೋಷಣೆ ಮಾಡುತ್ತಿದೆಯೇ ಮಂಗಳೂರಿನ "ಝೊಮೆಟೊ"?

ಉದ್ಯೋಗಿಗಳ ಶೋಷಣೆ ಮಾಡುತ್ತಿದೆಯೇ ಮಂಗಳೂರಿನ “ಝೊಮೆಟೊ”?

ಆರಂಭದಲ್ಲಿ ಉತ್ತಮ ಉದ್ಯೋಗದಾತನಾಗಿ ಕಂಡಿದ್ದ ಈ ಕಂಪನಿ ಈಗ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ವಿರೋಧಿಸಬೇಕು. ಖುಷಿಯಿಂದ ಹೊಟ್ಟೆ ತುಂಬಿಸಿಕೊಳ್ಳುವ ಗ್ರಾಹಕರೂ ಕೂಡ ನಮಗೆ ಆಹಾರ ತಲುಪಿಸುವ ಉದ್ಯೋಗಿಗಳ ಪರ ದನಿ ಎತ್ತಬೇಕಿದೆ.

- Advertisement -
- Advertisement -

ಮನೆ ಮನೆಗೆ ಆಹಾರ ಪೂರೈಕೆಯ ಕಂಪನಿಗಳಾದ ಸ್ವಿಗ್ಗಿ, ಝೊಮೆಟೊ ಮತ್ತು ಉಬರ್‌ ಈಟ್ಸ್‌ ದೇಶಾದ್ಯಂತ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಿವೆ. ಜೊತೆಗೆ ಕುಳಿತಲ್ಲಿಗೆ ಬಯಸಿದ ಆಹಾರ ಸಿಗುವುದರಿಂದ ಗ್ರಾಹಕರು ಸಹ ಖುಷಿಗೊಂಡಿದ್ದರು. ಆರಂಭದಲ್ಲಿ ಉತ್ತಮ ಸೇವೆ ನೀಡಿದ್ದರಿಂದ ಗ್ರಾಹಕರು ಮತ್ತು ಉದ್ಯೋಗಿಗಳು ಇಬ್ಬರೂ ಸಂಭ್ರಮಪಟ್ಟಿದ್ದು ಸುಳ್ಳಲ್ಲ. ಆದರೆ ಬರುಬರುತ್ತಾ ಈ ಕಂಪನಿಗಳು ಲಾಭದ ದಾಹಕ್ಕೆ ಬಿದ್ದು ಉದ್ಯೋಗಿಗಳನ್ನು ಕಡೆಗಣಿಸುತ್ತಿದ್ದಾರೆ, ಅವರ ಶೋಷಣೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ತಮ್ಮ ಮೇಲಿನ ಶೋಷಣೆಯ ವಿರುದ್ಧ ಪ್ರತಿಭಟಿಸಲು ಉದ್ಯೋಗಿಗಳು ಹಿಂದೇಟು ಹಾಕುತ್ತಾರೆ. ಅದಕ್ಕೆ ಮೊದಲ ಕಾರಣ ಅವರನ್ನು ನೇಮಿಸಿಕೊಳ್ಳುವಾಗಲೇ ಉದ್ಯೋಗಿಗಳು ಅಥವಾ ಕಾರ್ಮಿಕರು ಎಂದು ಕರೆಯದೇ ಪಾಲುದಾರರು (ಪಾರ್ಟನರ್‍ಸ್‌) ಎಂದು ನೇಮಿಸಿಕೊಳ್ಳಲಾಗುತ್ತದೆ. ಹಾಗಾಗಿ ಹೋರಾಟ ಮಾಡುವುದು ಅವರ ಹಕ್ಕಾಗಿರುವುದಿಲ್ಲ ಎಂದು ಬೆದರಿಸಲಾಗುತ್ತದೆ.

ದೊಡ್ಡ ದೊಡ್ಡ ಕಂಪೆನಿಗಳಿಗೆ ತನ್ನ ಉದ್ಯೋಗಿಗಳೆಂದರೆ ಯಾವತ್ತಿಗೂ ಅಷ್ಟಕ್ಕಷ್ಟೇ. ಉದ್ಯೋಗಿಗಳ ಅಳಲನ್ನು ಅವು ಕೇಳುವುದೇ ಇಲ್ಲ. ತನ್ನ ಉದ್ಯೋಗಿಗಳನ್ನು ಆದಷ್ಟು ದುಡಿಸಿ ತನ್ನ ಜೇಬನ್ನು ತುಂಬಿಕೊಳ್ಳುವ ಆಲೋಚನೆಯನ್ನೇ ಹೆಚ್ಚಿನ ಕಂಪೆನಿಗಳು ಹೊಂದಿವೆ. ದಿನವಿಡೀ ದುಡಿದರೂ ತನ್ನ ಕುಟುಂಬದ ಹೊಟ್ಟೆಗೆ ಆಹಾರ ನೀಡುವಷ್ಟು ಹಣ ಉಳಿಯುವುದಿಲ್ಲ ಎಂದರೆ ಅಂತಹ ಉದ್ಯೋಗಿಗಳ ಪಾಡನ್ನು ನೀವೇ ಆಲೋಚಿಸಿ. ಇಂತಹುದೇ ಆರೋಪದಲ್ಲಿ ಆಹಾರ ಪೂರೈಕೆಯ ದಿಗ್ಗಜ ಎನಿಸಿಕೊಂಡ “ಝೊಮೆಟೊ” ಸಿಲುಕಿಕೊಂಡಿದೆ. ಉದ್ಯೋಗಿಗಳು ರಕ್ತ ಬಸಿದು ದುಡಿದರೂ ಅವರಿಗೆ ನ್ಯಾಯಯುತ ಪಾಲನ್ನು ಕಂಪೆನಿ ನೀಡದೆ ಅನ್ಯಾಯ ಮಾಡುತ್ತಿದೆ ಎಂಬ ಆರೋಪ ದಟ್ಟವಾಗಿ ಕೇಳಿಬಂದಿದೆ.

ಮೋಸ ಎಲ್ಲಿ?

ಈ ಮೊದಲು ಒಂದು ಆರ್ಡರ್‌ಗೆ 35 ರೂಗಳು ಮತ್ತು ಉತ್ತಮ ರೇಟಿಂಗ್‌ಗೆ 10ರೂ ಕೊಡಲಾಗುತ್ತಿತ್ತು. ಆನಂತರ ಒಂದು ಆರ್ಡರ್‌ಗೆ 30 ರೂಗಳು ಮತ್ತು ಉತ್ತಮ ರೇಟಿಂಗ್‌ಗೆ 10ರೂ ಇತ್ತು. ಈಗ ಒಂದು ಆರ್ಡರ್‌ಗೆ 20 ರೂಗಳು ಮತ್ತು ಉತ್ತಮ ರೇಟಿಂಗ್‌ಗೆ 5 ರೂ ಇಳಿಸಲಾಗಿದೆ. ಮಾರ್ಚ್‌ನಿಂದ ಆರ್ಡರ್‌ವೊಂದಕ್ಕೆ 16ರೂಗಿಳಿಸಲು ಚಿಂತನೆ ನಡೆದಿದೆ ಎನ್ನಲಾಗುತ್ತಿದೆ.

ಮೊದಲು 10 ಆರ್ಡರ್‌ಗಳನ್ನು ಪೂರೈಸಿದರೆ 200-300ರೂ ಇನ್ಸೆಂಟೀವ್‌ ಸಿಗುತ್ತಿತ್ತು. ಈಗ ಅಷ್ಟು ಸಿಗಬೇಕಾದರೆ ದಿನಕ್ಕೆ 20 ಆರ್ಡರ್‌ಗಳನ್ನು ಪೂರೈಸಬೇಕು ಮತ್ತು ಕನಿಷ್ಠ ದಿನದಲ್ಲಿ 10:30 ಗಂಟೆಗಳ ಕಾಲ ಆನ್‌ಲೈನ್‌‌ನಲ್ಲಿ ಇರಬೇಕು ಎಂಬ ನಿಯಮ ಹೇರಲಾಗಿದೆ.

ಈ ಮೊದಲ 160 ಗಂಟೆಗಳು ಕೆಲಸ ನಿರ್ವಹಿಸಿದ್ದರೆ ಕೊಡುತ್ತಿದ್ದ ಇನ್ಸೆಂಟೀವ್‌ ಅನ್ನು ಈಗ 190 ಗಂಟೆಗಳಿಗೆ ಏರಿಸಲಾಗಿದೆ.

ಸ್ವಿಗ್ಗಿ ಕಂಪನಿ
ಝೊಮೆಟೊ

ಒಟ್ಟಾರೆ ದಿನೇ ದಿನೇ ಉದ್ಯೋಗಿಗಳಿಗೆ ಸಿಗುತ್ತಿದ್ದ ಹಣದಲ್ಲಿ ಕಡಿತವಾಗುತ್ತಿದೆ. ಮೊದಲು ಒಂದೇ ರೆಸ್ಟೋರೆಂಟ್‌ನಿಂದ ಆಹಾರ ತೆಗೆದುಕೊಂಡು ಹೋಗುತ್ತಿದ್ದವರು ಈಗ ಒಂದೇ ಆರ್ಡರ್‌ಗೆ ಎರಡು ರೆಸ್ಟೋರೆಂಟ್‌ಗಳಿಂದ ತೆಗೆದುಕೊಂಡುಹೋಗಬೇಕಾಗಿದೆ. ಪೆಟ್ರೊಲ್‌ ಖರ್ಚು ಕಳೆದು ದಿನಕ್ಕೆ 500 ರೂ ಉಳಿಸಿ ತಿಂಗಳಿಗೆ 15000 ರೂ ಸಂಪಾದಿಸುತ್ತಿದ್ದ ಉದ್ಯೋಗಿಗಳು ಈಗ ತಿಂಗಳಿಗೆ 10000 ಉಳಿಸುವುದೇ ಕಷ್ಟ ಎನ್ನುತ್ತಿದ್ದಾರೆ. ಮೊದಲು ಪಾರ್ಟ್ ಟೈಂ ಆಗಿ ಕೆಲಸ ಮಾಡುತ್ತಿದ್ದವರಿಗೆ ಈಗ ಹೊಸ ನಿಯಮಗಳ ಬಳಿಕ ಅವಕಾಶವೇ ಇಲ್ಲದಂತಾಗಿದೆ.

ಮಂಗಳೂರಿನ ಝೊಮೆಟೊ ಸಂಸ್ಥೆಯಲ್ಲಿನ ಡೆಲಿವರಿ ಬಾಯ್‌ಗಳು ಕಳೆದ ಮೂರು ದಿನದಿಂದ ಕೆಲಸಕ್ಕೆ  ಹೋಗದೆ ತನ್ನ ಕಂಪೆನಿಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಕಂಪೆನಿ ತಮ್ಮ ಬೆವರಿನ ಪಾಲನ್ನು ನೀಡುತ್ತಿಲ್ಲ ಎಂದು ಉದ್ಯೋಗಿಗಳು ಆರೋಪಿಸುತ್ತಿದ್ದಾರೆ‌. ಆದರೂ ಕಂಪೆನಿಯು ಅವರನ್ನು ಮಾತನಾಡಿಸದೇ ಕೆಲಸದಿಂದ ಕಿತ್ತೊಗೆಯುವ ಬೆದರಿಕೆಯ ಜೊತೆಗೆ, ತಮ್ಮ ವಿರುದ್ಧ ಮಾತನಾಡಿದ ಉದ್ಯೋಗಿಗಳಿಗೆ ಆರ್ಡರ್ ಸಿಗದಂತೆ ಅವರ ಮೊಬೈಲನ್ನು ಬ್ಲಾಕ್ ಮಾಡಿದೆ ಎಂಬ ಆರೋಪಗಳಿವೆ.

ವರ್ಷಗಳಿಂದಲೂ ಝೊಮೆಟೊ ಸಂಸ್ಥೆಯಲ್ಲಿ ದುಡಿಯುತ್ತಿರುವ ಹೆಸರು ಹೇಳಲು ಇಚ್ಚಿಸದ ಉದ್ಯೋಗಿಯೊಬ್ಬರ ಪ್ರಕಾರ “ನಾವು ಕಳೆದ ಮೂರು ದಿನದಿಂದ ಸುಮಾರು ಇನ್ನೂರರಷ್ಟು ಉದ್ಯೋಗಿಗಳು ಪ್ರತಿಭಟನೆ ಮಾಡುತ್ತಿದ್ದೇವೆ. ಆದರೆ ಕಂಪೆನಿಯು ಸೌಜನ್ಯಕ್ಕಾದರೂ ನಮ್ಮೊಂದಿಗೆ ಮಾತುಕತೆ ನಡೆಸುತ್ತಿಲ್ಲ. ಅವರ ವಿರುದ್ಧ ಮಾತಾನಾಡಿದ ಸುಮಾರು ಆರು ಜನರ ಮೊಬೈಲಿನ ಆರ್ಡರನ್ನು ಕಂಪೆನಿ ಬ್ಲಾಕ್ ಮಾಡಿದೆ. ಕಳೆದ ಒಂದು ವರ್ಷದಿಂದ ಈ ಕಂಪೆನಿಯಲ್ಲಿ ದುಡಿಯುತ್ತಾ ಇದ್ದೇವೆ. ಈಗ ಸತತವಾಗಿ ನಮ್ಮ ‌ದುಡಿಮೆಯ ಹಣವನ್ನು ಇಳಿಕೆ ಮಾಡುತ್ತಿದ್ದಾರೆ. ಈಗಲೇ ನೋಡಿ ಎಂಟು ಗಂಟೆಯಿಂದ ಕರ್ತವ್ಯದಲ್ಲಿ ಇದ್ದೇನೆ ಆದರೂ ನೂರೈವತ್ತು ರುಪಾಯಿಗಳ ದುಡಿಮೆಯೂ ಆಗಿಲ್ಲ” ಎಂದು ಅಳಲು ತೋಡಿಕೊಂಡರು.

ಅವರ ದುಡಿಮೆಯನ್ನು ತಿಳಿಸುವ ಸ್ಕ್ರೀನ್‌ ಶಾಟ್‌ ಹೀಗಿದೆ.

ಹೆಸರು ಹೇಳಲು ಇಚ್ಛಿಸದ ಮತ್ತೊಬ್ಬ ಉದ್ಯೋಗಿ “ಝೊಮೆಟೊ ಕಂಪೆನಿಯು ಸತತವಾಗಿ ರೇಟ್ ಕಾರ್ಡ್ ಇಳಿಸುತ್ತಿದೆ. ಹಿಂದೆಯೆಲ್ಲ ಒಂದು ಆರ್ಡರ್ ಸುಮಾರು ಇಪ್ಪತ್ತು ‌ನಿಮಿಷದಲ್ಲಿ ಮುಗಿಯುತ್ತಿತ್ತು. ಈಗ ಕಂಪನಿಯೂ ಎರೆಡೆರೆಡು ರೆಸ್ಟೊರೆಂಟಿನ ಆರ್ಡರ್ ನೀಡುತ್ತಿದೆ. ಇದರಿಂದ ಒಂದು ಆರ್ಡರ್‌ನ ಆಹಾರವನ್ನು ತಲುಪಿಸಲು ಸುಮಾರು ಒಂದರಿಂದ ಒಂದುವರೆ ಗಂಟೆಗಳು ತಗುಲುತ್ತದೆ. ಅಲ್ಲದೆ ಹಿಂದೆಯೆಲ್ಲ ನಮ್ಮ ಟಾರ್ಗೆಟ್‌ ಮುಗಿಸಿ ಯಾವಾಗ ಬೇಕಾದರೂ ನಾವು ಮನೆಗೆ ಹೋಗಬಹುದಾಗಿತ್ತು. ಆದರೆ ಈಗ ರಾತ್ರಿ ಹತ್ತರಿಂದ ಹನ್ನೊಂದು ಗಂಟೆಯವರೆಗೂ ಕೆಲಸ ನಿರ್ವಹಿಸಬೇಕು ಇಲ್ಲವೆಂದರೆ ನಮ್ಮ ಇನ್ಸೆಂಟಿವ್ ಕಡಿತಗೊಳಿಸುತ್ತಾರೆ” ಎಂದು ಹೇಳುತ್ತಾರೆ.

ಈ ಬಗ್ಗೆ ಪ್ರತಿಕ್ರಿಯೆಗಾಗಿ ಮಂಗಳೂರಿನ ಝೊಮೆಟೊ ಕಛೇರಿಯ ಮೇಲ್ವಿಚಾರಕರಾದ ಹರಿ ಪ್ರಸಾದ್ ಅವರನ್ನು ನಾನುಗೌರಿ.ಕಾಂ ವತಿಯಿಂದ ಸಂಪರ್ಕಿಸಿಲು ಪ್ರಯತ್ನಿಸಿತು. ಆದರೆ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಮತ್ತೊಬ್ಬ ಮೇಲ್ವಿಚಾರಕರಾದ ಸಿರಾಜ್ ಅವರನ್ನು ಸಂಪರ್ಕಿಸಿದಾಗ ಅವರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸುವುದರಲ್ಲಿ ತಳಮಟ್ಟದ ಉದ್ಯೋಗಿಗಳ ಕೊಡುಗೆ ಮಹತ್ತದ್ದೇ ಆಗಿದೆ. ಕಂಪೆನಿಯು ಏಕಾಏಕಿ ಸತತವಾಗಿ ತಮ್ಮ ರೇಟ್ ಕಾರ್ಡನ್ನು ಇಳಿಕೆ ಮಾಡಿದುದರ ಫಲವಾಗಿ ಉದ್ಯೋಗಿಗಳು ಕಂಗಾಲಾಗಿದ್ದಾರೆ. ರಾತ್ರಿ ಹತ್ತು ಗಂಟೆಯವರೆಗೂ ದುಡಿದರೂ ದುಡಿಮೆಗೆ ಸರಿಯಾದ ಪ್ರತಿಫಲ ಸಿಗುತ್ತಿಲ್ಲ. ಹೊಸ ಉದ್ಯೋಗಿಗಳನ್ನು ಇಟ್ಟು ಅವರನ್ನು ಬೆದರಿಸುತ್ತಾ ದುಡಿಸುತ್ತಿದ್ದಾರೆ ಹಾಗಾಗಿ ನಮ್ಮ ಧ್ವನಿ ಅವರಿಗೆ ಕೇಳುತ್ತಿಲ್ಲ ಎಂದು ಉದ್ಯೋಗಿಗಳು ಆರೋಪಿಸುತ್ತಿದ್ದಾರೆ. ಉದ್ಯೋಗಿಗಳ ಮನವಿಯನ್ನು ಕೇಳದ ಝೊಮೆಟೊ ಸಂಸ್ಥೆಯ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಸುವ ಬಗ್ಗೆ ಆಲೋಚಿಸುತ್ತಿರುವುದಾಗಿ ಉದ್ಯೋಗಿಗಳು ತಿಳಿಸಿದ್ದಾರೆ.

ಆದರೆ ಪ್ರತಿಭಟನೆಗೆ ಮುಂದಾದರೆ ಝೊಮೆಟೊ ಕಂಪನಿಯು ಪೊಲೀಸ್‌ ಕೇಸ್‌ ಹಾಕುವ ಬೆದರಿಕೆಯೊಡ್ಡಿದೆ. ಇದು ಕೇವಲ ಮಂಗಳೂರಿನ ಕಥೆ ಮಾತ್ರ ಅಲ್ಲ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಈ ಶೋಷಣೆ ಮುಂದುವರೆಯುತ್ತಿದೆ. ಆರಂಭದಲ್ಲಿ ಉತ್ತಮ ಉದ್ಯೋಗದಾತನಾಗಿ ಕಂಡಿದ್ದ ಈ ಕಂಪನಿ ಈಗ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ವಿರೋಧಿಸಬೇಕು. ಖುಷಿಯಿಂದ ಹೊಟ್ಟೆ ತುಂಬಿಸಿಕೊಳ್ಳುವ ಗ್ರಾಹಕರೂ ಕೂಡ ನಮಗೆ ಆಹಾರ ತಲುಪಿಸುವ ಉದ್ಯೋಗಿಗಳ ಪರ ದನಿ ಎತ್ತಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...