Homeಮುಖಪುಟಟೆಲಿಕಾಂನಿಂದ ಬಾಕಿ ಹಣ: ಸರ್ಕಾರದಿಂದ BSNLಗೆ ನಾಮ, ಏರ್‌ಟೆಲ್, ವೊಡಾ ಮೇಲೇಕೆ ಪ್ರೇಮ?

ಟೆಲಿಕಾಂನಿಂದ ಬಾಕಿ ಹಣ: ಸರ್ಕಾರದಿಂದ BSNLಗೆ ನಾಮ, ಏರ್‌ಟೆಲ್, ವೊಡಾ ಮೇಲೇಕೆ ಪ್ರೇಮ?

ಕೇಂದ್ರ ಸರ್ಕಾರ ಈ ಖಾಸಗಿ ಮೊಬೈಲ್ ಕಂಪನಿಗಳ ಪರ ಮೃದು ಧೋರಣೆ ತೋರಿಸುತ್ತಿದ್ದು, ಅವುಗಳ ನೆರವಿಗೆ ಬರಲು ಯತ್ನಿಸುತ್ತಿದೆ ಎಂದು ಕೆಲವು ತಜ್ಞರು ಸಂಶಯ ವ್ಯಕ್ತಪಡಿಸಿದ್ದಾರೆ. ಈಗಾಗಲೇ ವೊಡಾ-ಐಡಿಯಾದ ಪಾಲುದಾರ ಕುಮಾರ ಮಂಗಲಂ ಬಿರ್ಲಾ ಕಂಪನಿ ಸಂಕಷ್ಟದಲ್ಲಿದೆ, ಕೇಂದ್ರ ನೆರವಿಗೆ ಬರಲಿ ಎಂಬರ್ಥದ ಮಾತು ತೇಲಿಬಿಟ್ಟಿದ್ದಾರೆ.

- Advertisement -
- Advertisement -

ಕಳೆದ 14 ವರ್ಷಗಳಿಂದ ಕೇಂದ್ರ ದೂರ ಸಂಪರ್ಕ ಇಲಾಖೆ ಮತ್ತು ಖಾಸಗಿ ಮೊಬೈಲ್ ಸೇವಾ ಕಂಪನಿಗಳ ನಡುವೆ ನಡೆಯುತ್ತ ಬಂದಿದ್ದ ವ್ಯಾಜ್ಯವೊಂದನ್ನು ಸುಪ್ರೀಂಕೋರ್ಟ್ ತಾರ್ಕಿಕ ಅಂತ್ಯಕ್ಕೆ ಒಯ್ದಿದೆ.
ಕೇಂದ್ರ ಸರ್ಕಾರ, ದೂರ ಸಂಪರ್ಕ ಇಲಾಖೆ ಮತ್ತು ಖಾಸಗಿ ಮೊಬೈಲ್ ಕಂನಿಗಳಿಗೆ ಕಳೆದ ವಾರ ಎಚ್ಚರಿಕೆ ನೀಡಿದ ಸುಪ್ರೀಂಕೋರ್ಟ್, ಖಾಸಗಿ ಮೊಬೈಲ್ ಸೇವಾ ಕಂಪನಿಗಳು ಮುಂದಿನ ವಿಚಾರಣೆ (ಮಾರ್ಚ್17)ಗೆ ಮುನ್ನ ತಮ್ಮ ಬಾಕಿಯನ್ನು ಸರ್ಕಾರಕ್ಕೆ ಕಟ್ಟಬೇಕು ಮತ್ತು ದೂರ ಸಂಪರ್ಕ ಇಲಾಖೆ ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದೆ. ತಪ್ಪಿದಲ್ಲಿ ಕಂಪನಿಗಳ ಲೈಸೆನ್ಸ್ ಕೂಡ ರದ್ದಾಗಬಹುದು ಎಂದು ಎಚ್ಚರಿಸಿದೆ.

ಆದರೆ, ಕೇಂದ್ರ ಸರ್ಕಾರ ಈ ಖಾಸಗಿ ಮೊಬೈಲ್ ಕಂಪನಿಗಳ ಪರ ಮೃದು ಧೋರಣೆ ತೋರಿಸುತ್ತಿದ್ದು, ಅವುಗಳ ನೆರವಿಗೆ ಬರಲು ಯತ್ನಿಸುತ್ತಿದೆ ಎಂದು ಕೆಲವು ತಜ್ಞರು ಸಂಶಯ ವ್ಯಕ್ತಪಡಿಸಿದ್ದಾರೆ. ಈಗಾಗಲೇ ವೊಡಾ-ಐಡಿಯಾದ ಪಾಲುದಾರ ಕುಮಾರ ಮಂಗಲಂ ಬಿರ್ಲಾ ಕಂಪನಿ ಸಂಕಷ್ಟದಲ್ಲಿದೆ, ಕೇಂದ್ರ ನೆರವಿಗೆ ಬರಲಿ ಎಂಬರ್ಥದ ಮಾತು ತೇಲಿಬಿಟ್ಟಿದ್ದಾರೆ.

ಈ ಕಂಪನಿಗಳಿಗೆ ಬಾಕಿ ತೀರಿಸಲು ಹೆಚ್ಚಿನ ಕಾಲಾವಕಾಶ ಒದಗಿಸಲು ಕೇಂದ್ರ ಹೊಸ ಶಾಸನ ಅಥವಾ ಹೊಸ ಟೆಲಿಕಾಂ ನೀತಿಯೊಂದನ್ನು ಜಾರಿಗೆ ತರುವ ಹುನ್ನಾರ ನಡೆಸಿದೆ ಎನ್ನಲಾಗಿದೆ. ಕೋರ್ಟಿನ ಗಡುವಿನ ಕುರಿತಂತೆ, ದೂರ ಸಂಪರ್ಕ ಇಲಾಖೆಯ ಅಧಿಕಾರಿಯೊಬ್ಬರು, ಈ ಗಡುವಿನೊಳಗೆ ಬಾಕಿ ತೀರಿಸಿ ಎಂದು ನಾವು ಒತ್ತಾಯ ಮಾಡುವಂತಿಲ್ಲ ಎಂದಿದ್ದರು. ಇದರ ವಿರುದ್ಧ ಸಿಟ್ಟಿಗೆದ್ದ ಸುಪ್ರೀಂಕೋರ್ಟ್, ಅಧಿಕಾರಿಯೊಬ್ಬರಿಗೆ ಕೋರ್ಟ್ ಆದೇಶಕ್ಕಿಂತ ಕಂಪನಿಗಳ ಹಿತವೇ ಮುಖ್ಯವಾಗಿತೇ? ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಎಲ್ಲ ಖಾಸಗಿ ಮೊಬೈಲ್ ಕಂಪನಿಗಳ ಬಾಕಿ ಒಟ್ಟು 1,45,000 ಕೋಟಿ ರೂ. ಇದ್ದು, ಅದರಲ್ಲಿ ಭಾರ್ತಿ ಏರ್‌ಟೆಲ್ ಮತ್ತು ವೊಡಾ-ಐಡಿಯಾ (ವೊಡಾಫೋನ್ ಐಡಿಯಾ) ಈ ಎರಡು ಕಂಪನಿಗಳು ಒಟ್ಟು 88 ಸಾವಿರ ಕೋಟಿ ರೂ. ಬಾಕಿಯನ್ನು ದೂರಸಂಪರ್ಕ ಇಲಾಖೆಗೆ ಕಟ್ಟಬೇಕಿದೆ. ಈ ಮೊತ್ತದಲ್ಲಿ ಲೈಸೆನ್ಸ್ ಫೀ, ತರಂಗಾಂತರ (ಸ್ಪೆಕ್ಟ್ರಂ) ಬಳಕೆ ಮತ್ತು ಬಾಕಿ ಮೇಲಿನ ದಂಡ ಸೇರಿವೆ.

ಇಲ್ಲಿ ಕೇಳಬೇಕಾದ ಪ್ರಶ್ನೆ ಎಂದರೆ, 14 ವರ್ಷಗಳಿಂದ ದೂರಸಂಪರ್ಕ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿಲ್ಲವೇಕೆ? ಖಾಸಗಿ ಮೊಬೈಲ್ ಕಂಪನಿಯ ‘ಹೊಂದಿತ ನಿವ್ವಳ ಆದಾಯ’ (AGR-Adjusted Gross Revenue) ಆಧಾರದಲ್ಲಿ ಎಷ್ಟು ಮೊತ್ತ ಕಟ್ಟಬೇಕು ಎಂದು ನಿರ್ಧರಿಸುವ ಸೂತ್ರವಿದೆ. ಆದರೆ ದೂರಸಂಪರ್ಕ ಇಲಾಖೆ ಮಾಡಿದ ಲೆಕ್ಕಾಚಾರದಲ್ಲಿ ದೋಷವಿದೆ ಎಂದು ಈ ಖಾಸಗಿ ಮೊಬೈಲ್ ಕಂಪನಿಗಳು ಕೋರ್ಟುಗಳಲ್ಲಿ ವಾದಿಸುತ್ತ ಬಂದಿದ್ದವು. ದೂರ ಸಂಪರ್ಕ ಇಲಾಖೆಯ ಕೆಲವು ಅಧಿಕಾರಿಗಳು ಕೋರ್ಟಿನಲ್ಲಿ ಮೃದು ವಾದ ಮಂಡನೆಯಾಗುವಂತೆ ನೋಡಿಕೊಂಡರು ಎಂಬ ಅಪಾದನೆಯಿದೆ.

ಆದರೆ ಈಗ ಸುಪ್ರೀಂಕೋರ್ಟ್ ಖಡಕ್ ಆದೇಶ ನೀಡಿರುವುದರಿಂದ, ಕಂಪನಿಗಳು ಬಾಕಿ ಕಟ್ಟಬೇಕಾದ ಅನಿವಾರ್ಯತೆ ಎದುರಾಗಿದೆ. ವೋಡಾ-ಐಡಿಯಾ 53 ಸಾವಿರ ಕೋಟಿ ರೂ, ಏರ್‌ಟೆಲ್ 35 ಸಾವಿರ ಕೋಟಿ ರೂ. ಬಾಕಿಯನ್ನು ಮಾರ್ಚ್ 17ರೊಳಗಾಗಿ ಪಾವತಿಸಬೇಕಾಗಿದೆ. ವೋಡಾ-ಐಡಿಯಾ ತನ್ನದು ಕೇವಲ 23 ಸಾವಿರ ಕೋಟಿ ರೂ ಮತ್ತು ಏರ್‌ಟೆಲ್ ತನ್ನದು 15-18 ಸಾವಿರ ಕೋಟಿ ರೂ ಎಂದು ವಾದ ಮಾಡುತ್ತ ಬಂದಿದ್ದವು. ಸೋಮವಾರ ಏರ್‌ಟೆಲ್ 10 ಸಾವಿರ ಕೋಟಿ ರೂ. ಡಿಪಾಸಿಟ್ ಮಾಡಿ, ಸದ್ಯದಲ್ಲೇ ಎಲ್ಲವನ್ನೂ ಭರಿಸುವ ಭರವಸೆ ನೀಡಿದೆ. ಆದರೆ ಆರ್ಥಿಕವಾಗಿ ಕಷ್ಟದಲ್ಲಿರುವ ವೋಡಾ-ಐಡಿಯಾ ಕೇವಲ 3500ಕೋಟಿರೂ ಮಾತ್ರ ಕಟ್ಟಿದ್ದು ಪೂರ್ಣ ಹಣ 53 ಸಾವಿರ ಕೋಟಿ ರೂ. ಭರಿಸುವುದು ಕಷ್ಟ ಎನ್ನಲಾಗಿದೆ.

ಈ ನಡುವೆ ಕೇಂದ್ರವು ಒಂದು ಶಾಸನ ಅಥವಾ ಹೊಸ ನೀತಿ ಜಾರಿಗೆ ತಂದು ಈ ಕಂಪನಿಗಳಿಗೆ ಕೊಂಚ ಕಾಲಾವಕಾಶ ಸಿಗುವಂತೆ ಮಾಡಬೇಕು ಎಂಬ ವಾದವನ್ನು ಕೆಲವರು ತೇಲಿಬಿಟ್ಟಿದ್ದಾರೆ. ಸಾರ್ವಜನಿಕ ಕಂಪನಿಗಳಾದ ಬಿಎಸ್‌ಎನ್‌ಎಲ್, ಏರ್ ಇಂಡಿಯಾಗಳ ನೆರವಿಗೆ ಬಾರದ ಕೇಂದ್ರ ಸರ್ಕಾರವೇನಾದರೂ ಈ ಕಂಪನಿಗಳ ಪರ ನಿಂತರೆ, ಅದು ಜನದ್ರೋಹವಾಗಲಿದೆ.

ಅಂತಿಮದಲ್ಲಿ ವೊಡಾ-ಐಡಿಯಾ ಮುಚ್ಚುವ ಎಲ್ಲ ಲಕ್ಷಣಗಳಿವೆ. ಅದರ ಗ್ರಾಹಕರು ಮತ್ತು ನೌಕರರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...