Homeಅಂಕಣಗಳುನಿಮ್ಮಪ್ಪ ಅಮ್ಮ ನೋಡಿದವ್ರನ್ನ ಕಣ್ಮುಚ್ಕಂಡು ಮದ್ವೆ ಆಗ್ಬುಡಿ

ನಿಮ್ಮಪ್ಪ ಅಮ್ಮ ನೋಡಿದವ್ರನ್ನ ಕಣ್ಮುಚ್ಕಂಡು ಮದ್ವೆ ಆಗ್ಬುಡಿ

- Advertisement -
- Advertisement -

ಕೇಳುಗರಿಗೆಲ್ಲ ನಮಸ್ಕಾರ, ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ. ಈಗ ವಾರ್ತೆಗಳ ವಿವರ..

ರಾಜ್ಯದ ಹೈಯರ್ ಎಜುಕೇಷನ್ ಮಿನಿಸ್ಟರ್ ‘ಜಟ್ಟಿ ದೆವ್ವೇಗೌಡ’ರ ಕಡೆಯಿಂದ ಕಾಲೇಜು ಸ್ಟೂಡೆಂಟುಗಳಿಗೆ ಬಿಸಿಬಿಸಿ ಸುದ್ದಿಯೊಂದು ಲಭ್ಯವಾಗಿದ್ದು, ಶಿಕ್ಷಣ ಮಂತ್ರಿಯ ಹೊಸ ಹೇಳಿಕೆಗೆ ಹುಡುಗ ಹುಡುಗಿಯರು ಕೆಂಡಾಮಂಡಲರಾಗಿದ್ದಾರೆ. ಆದರೆ ಈ ಮಂತ್ರಿಯ ಹೇಳಿಕೆ ಬ್ಲೂಜೆಪಿ ವಯೋವೃದ್ಧರಿಗೆ ರೋಮಾಂಚನ ಉಂಟುಮಾಡಿದೆ. ‘ಕಾಲೇಜಲ್ಲಿ ಓದೋ ಹುಡುಗ ಹುಡುಗೀರು ಲವ್ವುಗಿವ್ವು ಮಾಡ್ಬೇಡಿ, ಪಾರ್ಕು ಥೇಟ್ರು ಸುತ್ತಬೇಡಿ, ನಿಮ್ಮಪ್ಪ ಅಮ್ಮ ನೋಡಿದವ್ರನ್ನ ಕಣ್ಮುಚ್ಕಂಡು ಮದ್ವೆ ಆಗ್ಬುಡಿ’ ಅಂತ ಜಟ್ಟಿ ದೆವ್ವೇಗೌಡರು ಫತ್ವಾ ಹೊರಡಿಸಿದ್ದಾರೆ. ಇದರಿಂದ ಕನಲಿ ಕೆಂಡವಾಗಿರೋ ಕಾಲೇಜು ಯುವಕ ಯುವತಿಯರು “ನಾವು ಲವ್ವಾದ್ರೂ ಮಾಡ್ಕೋತೀವಿ, ಡವ್ವಾದ್ರು ಮಾಡ್ಕೋತೀವಿ, ಮೊದಲು ತಾವು ವಯಸ್ಕರ ಶಿಕ್ಷಣ ಶಾಲೆಗೆ ಸೇರ್ಕೊಂಡು ಹೈಸ್ಕೂಲ್ ಪಾಸಾಗೋದು ನೋಡಿ, ಎಸೆಸೆಲ್ಸಿಯೂ ಪಾಸಾಗದ ಟಪಾಸ್ ಗಿರಾಕಿಗಳು ನಮಗೆ ಬುದ್ದಿವಾದ ಹೇಳೋ ಅವಶ್ಯಕತೆ ಇಲ್ಲ, ಇನ್ನೊಂದ್ಸಲ ಅದು ಮಾಡ್ಬೇಡಿ, ಇದು ಮಾಡ್ಬೇಡಿ ಅಂತ ನಮಗೆ ರೂಲ್ಸ್ ಮಾಡೋಕೆ ಬಂದ್ರೆ ಭಾಷಣ ಮಾಡ್ತಿರೋ ಸ್ಟೇಜಲ್ಲೇ ನಿಮ್ಮ ಪೈಜಾಮ ಎಳೆದು ಅರೆಬೆತ್ತಲೆ ನಿಲ್ಲಿಸ್ತೀವಿ“ ಎಂದು ಇನ್ನೂ ಹೇಳಿಲ್ಲವೆಂದು ವರದಿಯಾಗಿದೆ.

******

ABP ನ್ಯೂಸ್ ಚಾನೆಲ್ ಇತ್ತೀಚೆಗೊಂದು ಕುಟುಕು ಕಾರ್ಯಾಚರಣೆ ನಡೆಸಿ ಗೋರಕ್ಷಕರ ಹೆಸರಿನಲ್ಲಿ ಕೊಲೆ ದರೋಡೆ ಮಾಡುತ್ತ ಹಫ್ತಾ ವಸೂಲಿ ದಂಧೆ ನಡೆಸುತ್ತಿದ್ದ ಹೋಪ್ಲೆಸ್ ಹೇತ್ಲಾಂಡಿಗಳನ್ನು ಜನರ ಮುಂದೆ ಬೆತ್ತಲು ಮಾಡಿದೆ. ಮನೆಯಲ್ಲಿ ಹೆಂಡ್ತಿಮಕ್ಕಳಿಗೆ ಎರಡೊತ್ತಿನ ಅನ್ನ ಹಾಕಲು ಯೋಗ್ಯತೆಯಿಲ್ಲದ ಚಿಳ್ಳೆಪಿಳ್ಳೆಗಳೆಲ್ಲ ಗಂಟಲಿಗೊಂದು ಬಾವುಟ ಹೆಟ್ಟಿಕೊಂಡು “ಜೈ ಶ್ರೀ ಮಾಮ್” ಎನ್ನುತ್ತ ಹಸು ದನ ಸಾಕಿದವರ ಮೇಲೆ ಬಿದ್ದು ಸಾಯ ಹೊಡೆದು ಕೊಂದು ಜೈಲು ಸೇರುತ್ತಿವೆ. ಇಂಥದ್ದೇ ಹೀನಾಯ ಸಾಹಸದಲ್ಲಿ ಇಬ್ಬರನ್ನು ಕೊಂದು ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದ ಎರಡು ಹೇತ್ಲಾಂಡಿ ವೀರರನ್ನು ಓಆಖಿಗಿ ರಹಸ್ಯ ಕ್ಯಾಮೆರಾದೆದುರು ಬಾಯಿ ಬಿಡಿಸಿದೆ. ಇವರು ಕೋರ್ಟಿನಲ್ಲಿ ‘ನಮಗೇನೂ ಗೊತ್ತಿಲ್ಲ, ಆ ಕೊಲೆಗಳು ನಡೆದ ದಿನ ನಾವು “ಅಂತರರಾಷ್ಟ್ರೀಯ ಗೋಮೂತ್ರ ಸೇವಕರ ದಿನಾಚರಣೆ”ಯಲ್ಲಿ ಭಾಗವಹಿಸಿ ಬಕೇಟಿನಲ್ಲಿ ಗೋಮೂತ್ರ ಕುಡಿಯುತ್ತಿದ್ದೆವು, ಈ ಕೊಲೆಗೂ ನಮಗೂ ಸಂಬಂಧವಿಲ್ಲ’ ಎಂದಿದ್ದರು. ಜಾಮೀನು ಪಡೆದು ಹೊರಬಂದ ಕೂಡಲೆ ಇದ್ದಕ್ಕಿದ್ದಂತೆ ಗಂಡಸರಾದ ಈ ಕೊಲೆಗಡುಕರು ಓಆಖಿಗಿ ರಹಸ್ಯ ಕ್ಯಾಮೆರಾದೆದುರು ಆ ಕೊಲೆಗಳನ್ನು ಮಾಡಿದ್ದು ನಾವೇ, ನಮ್ ಸಪೋರ್ಟಿಗೆ ಪಿಳ್ಳಜುಟ್ಟು ಪಾರ್ಟಿಯವ್ರು ಇದ್ದಾರೆ, ಇನ್ನೊಂದೆರಡು ಕೊಲೆ ಮಾಡಿ ನೀವು ಸಾಯೋಮಟ ಜೈಲಿಗೆ ಹೋಗಿ, ನಿಮ್ಮ ಮನೆಮಂದಿ ಬಾಯಿಗೆ ಮಣ್ಣು ಹಾಕೋ ಜವಾಬ್ದಾರಿ ನಮ್ದು ಅಂತ ಪಿಳ್ಳಜುಟ್ಟು ಪಾರ್ಟಿಯ ಪುಟಗೋಸಿಗಳು ಒಪ್ಪಿಕೊಂಡಿದ್ದಾರೆಂದು ಹೇಳಿದ್ದಾರೆ. ತಮ್ಮ ಮನೆಮಕ್ಕಳನ್ನು ಹೈಯರ್ ಎಜುಕೇಷನ್ನಿಗೆ ಹೊರದೇಶಕ್ಕೆ ಕಳಿಸಿ ಅವರ ಬಾಳು ಬಂಗಾರ ಮಾಡುವ ಈ ಪಿಳ್ಳಜುಟ್ಟು ಪುಟಗೋಸಿಗಳು, ತಳ ಸಮುದಾಯದ ಜನರ ಬದುಕಿನ ಮೇಲೆ ಚಪ್ಪಡಿಕಲ್ಲು ಎಳೆದು ಅದರ ಮೇಲೆ ಬಾಳೆಎಲೆ ಹಾಸಿಕೊಂಡು ಪಾಯಸ ನೆಕ್ಕಿಕೊಂಡು ಕುಳಿತುಬಿಡುತ್ತಾರೆಂಬುದು ಬಡ ಸಮುದಾಯಗಳಿಗೆ ಇನ್ನೂ ಅರಿವಾಗಿಲ್ಲವೆಂಬ ವರದಿಗಳು ಬಂದಿವೆ. ಈ ಹಿನ್ನೆಲೆಯಲ್ಲಿ ‘ಗ್ಯಾಂಗ್ಸ್ ಆಫ್ ವಾಸ್ಸೆಪುರ್’ ಎಂಬ ಚಿತ್ರ ತೆಗೆದ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್, ಈ ಭಡವ ರಾಸ್ಕಲ್‍ಗಳ ಬಗ್ಗೆ “ ಗ್ಯಾಂಗ್ಸ್ ಆಫ್ ಗಂಜಳಾಪುರ್” ಎಂಬ ಚಿತ್ರ ತೆಗೆಯಲಿದ್ದಾರೆಂದು ನಂಬಲನರ್ಹ ಮೂಲಗಳು ತಿಳಿಸಿವೆ.

******

‘ಹಾಳೂರಿಗೆ ಉಳಿದೋನೆ ಐಲುಗಿರಾಕಿ’ ಎನ್ನೋ ಗಾದೆಗೆ ಕರೆಕ್ಟಾಗಿ ಫಿಟ್ ಆಗುವ ‘ಅನಂತ್ ಗಮಾಡ್ ಹೆಗಡೆ’ ಹೋದಲ್ಲಿ ಬಂದಲ್ಲೆಲ್ಲ ಕಯ್ಯಯ್ಯೋ ಕಯ್ಯಯ್ಯೋ ಅನ್ನುತ್ತ ಅತ್ತ ಪಕ್ಷದಿಂದಲೂ, ಇತ್ತ ಜನರಿಂದಲೂ ಸಮಪ್ರಮಾಣದಲ್ಲಿ ಉಗಿಸಿಕೊಂಡು ತಿರುಗುತ್ತಿರುವುದು ನಿಮಗೆಲ್ಲರಿಗೂ ತಿಳಿದಿದೆ. ಹೊಸಾ ವಿಷ್ಯ ಏನಪ್ಪ ಅಂತಂದ್ರೆ.. “ ಬ್ಲೂಜೆಪಿ”ಯವ್ರು ಹುಲಿ ಇದ್ದಂಗೆ ಮಿಕ್ಕಿದೋರೆಲ್ಲ ಜಿಂಕೆ ಪಂಕೆ ಇದ್ದಂಗೆ, ನಮ್ದು ಹಂಗೈತೆ-ಹಿಂಗೈತೆ, ಲೊಟ್ಟೆ-ಲೊಸಕು, ಮಣ್ಣು ಮಸಕು ಅಂತೆಲ್ಲ ಕಯ್ಯಯ್ಯೋ ಅಂದಿದೆ. ಇವೆಲ್ಲವನ್ನು ‘ಅನಿಮಲ್ ಪ್ಲಾನೆಟ್’ ಚಾನೆಲ್‍ನ ನೇರಪ್ರಸಾರದಲ್ಲಿ ನೋಡಿದದವರು ಈ ಟೈಗರ್ ಸ್ಟೋರಿಗೆ ಥರಾವರಿ ಟ್ವಿಸ್ಟುಗಳನ್ನು ಕೊಡುತ್ತಿದ್ದಾರೆ. ಬ್ಲೂಜೆಪಿಯವರು ಟೈಗರ್‍ಗಳಾದರೆ ಮೊದಲು ಬಟ್ಟೆ ಬಿಚ್ಚಿ ಬರೇಬೆತ್ತಲೆ ಓಡಾಡಬೇಕು, ಯಾಕಂದ್ರೆ ಟೈಗರ್‍ಗಳು ಬಟ್ಟೆ ಹಾಕ್ಕಳಲ್ಲ ಅಂತ ಒಬ್ರು ಅಂದಿದ್ದಾರೆ. ತೊಡೆ ಸಂದಿಯಿಂದ ಮೂರಡಿ ಬಾಲ ನೇತಾಡ್ತಿದ್ರೆ ಮಾತ್ರ ಅದು ಟೈಗರ್ ಅನಿಸಿಕೊಳ್ತದೆ, ಆದ್ರಿಂದ ಗಮಾಡ್ ಹೆಗಡೆಗೂ ಒಂದು ಬಾಲ ಸಿಗಿಸಿ ಅದನ್ನವನು ಲಳ ಲಳ ಅಲ್ಲಾಡಿಸಿಕೊಂಡು ಓಡಾಡಬೇಕು, ಅವಾಗಷ್ಟೇ ಟೈಗರ್ ಅಂತ ಕನ್ಸಿಡರ್ ಮಾಡಬಹುದೆಂದು ಮತ್ತೊಬ್ಬರು ಅಂದಿದ್ದಾರೆ. ಇಲ್ಲ, ಇಲ್ಲ, ಟೈಗರ್‍ಗಳು ಹಸಿವಾದರೆ ಪುದೀನ ಕೊತ್ತಂಬರಿ ಸೊಪ್ಪು ತಿನ್ನೋದಿಲ್ಲ, ಅವಕ್ಕೆ ಹಸೀಮಾಂಸವೇ ಆಗಬೇಕು, ಆದ್ದರಿಂದ ಅನಂತ್ ಗಮಾಡ್ ಹೆಗಡೆ ಪಕ್ಷದೋರು ಊರಲ್ಲಿರೋ ಕೋಳಿ ಅಂಗಡಿ, ಮಟನ್ ಅಂಗಡಿಗಳಿಗೆ ಹುಲಿಗಳಂತೆ ಮಂಡಿ ಕೈಗಳನ್ನು ನೆಲಕ್ಕೂರಿ ನಾಲಿಗೆ ಹೊರಚಾಚಿ ನಡೆದುಕೊಂಡು ಹೋಗಿ ಅಲ್ಲಿ ವೇಸ್ಟ್ ಎಂದು ಎಸೆಯುವ ತ್ಯಾಜ್ಯಮಾಂಸವನ್ನು ಕಸದಡಬ್ಬಿಗೆ ಬಾಯಿ ಹಾಕಿ ಕಚಪಚನೆ ತಿನ್ನಬೇಕು, ಆಗಷ್ಟೇ ಇವರೆಲ್ಲ ಹುಲಿಗಳಾಗಲು ಸಾಧ್ಯ ಎಂದು ಜನರು ತರಾವರಿ ಐಡಿಯಾಗಳನ್ನು ಅನಂತ್ ಗಮಾಡ್ ಹೆಗಡೆಗೆ ಕೊಡುತ್ತಿದ್ದಾರೆ. ಅಗಣಿ ಹಾಕೋಕೆ ಹೋಗಿ ಇನ್ನೇನೋ ಸಿಗಿಸಿಕೊಂಡಂತಾಯ್ತಲ್ಲ ಎಂದು ಗಾಬರಿಯಾಗಿರೋ ಗಮಾರ್ ಹೆಗಡೆ ತನ್ನ ರಷ್ಯನ್ ಹೇರ್ ಸ್ಟೈಲ್ ತಲೆಗೂದಲಿಗೆ ಕೇಸರಿ ಕಲರ್ ಹೊಡೆಸಿಕೊಳ್ಳಲು ಕಟಿಂಗ್ ಶಾಪ್‍ಗೆ ಹೋದವರು ಇನ್ನೂ ಮನೆಗೆ ವಾಪಸಾಗಿಲ್ಲ ಎಂದು ತಿಳಿದುಬಂದಿದೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಬೇಟಿ ಮುಂದಿನವಾರ. ಅಲ್ಲೀತನಕ ನೀವೂ ನೆಮ್ದಿಯಾಗಿರಿ, ನಾವೂ ನೆಮ್ದಿಯಾಗಿರುತ್ತೇವೆ ಅಂತ ಹೇಳುತ್ತ, ವಾರ್ತಾಪ್ರಸಾರಕ್ಕೆ ಮಂಗಳ ಹಾಡುತ್ತಿದ್ದೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...