HomeUncategorizedಈ ಜಡದುಬ್ಬರ ಅಥವಾ ಸ್ಟ್ಯಾಗಫ್ಲೇಷನ್ ಅಂದರೇನು?

ಈ ಜಡದುಬ್ಬರ ಅಥವಾ ಸ್ಟ್ಯಾಗಫ್ಲೇಷನ್ ಅಂದರೇನು?

- Advertisement -
- Advertisement -

ಹಣದುಬ್ಬರ ಅಥವಾ ಇನಫ್ಲೇಷನ್ ಅನ್ನೋದನ್ನ ಕೇಳಿಕೇಳಿ ಸಾಕಾಗಿಹೋಗೇದ. ಅದರ ಬಗ್ಗೆ ಸರಕಾರದವರು ಏನೂ ಮಾಡಲಾರದೇ ಇರೋದು ನೋಡಿ-ನೋಡಿ ಸಾಕಾಗಿಹೋಗೇದ. ಅದಕ್ಕ ಹೊಸಾದೊಂದು ಹುಡುಕೋಣ. ಅದರ ಹೆಸರು ಜಡದುಬ್ಬರ ಅಥವಾ ಸ್ಟ್ಯಾಗಫ್ಲೇಷನ್.

ಅದು ಸ್ಟ್ಯಾಗ್ನೇಷನ್ ಹಾಗೂ ಇನಫ್ಲೇಷನ್ ಸೇರಿದ ಆರ್ಥಿಕ ಮಾರಿ. ವಾರ್ಷಿಕ ಆರ್ಥಿಕ ಬೆಳವಣಿಗೆ 5 ಶೇಕಡಾ ಇದ್ದು ಹಣದುಬ್ಬರ ಶೇ. 8ರ ಆಸುಪಾಸಿಗೆ ಬಂದಿದ್ದಕ್ಕೆ ಭಾರತ ಜಡದುಬ್ಬರವನ್ನು ಎದುರು ನೋಡ್ತಾ ಇದೆ ಅಂತ ತಜ್ಞರ ಅಂಬೋಣ.

ಸರ್ವೇಸಾಮಾನ್ಯವಾಗಿ ಏನಾಗತದ ಅಂದರ ಹಣದುಬ್ಬರ ಇದ್ದಾಗ ಬೇಡಿಕೆ ಹೆಚ್ಚಿತ್ತು ಅಂದರ ಬೆಳವಣಿಗೆ ಇರತದ. ಜನರಿಗೆ ಹಣ ಖರ್ಚು ಆಗೋದು ಹೆಚ್ಚಾದರೂ ಸಹ ಅವರ ವರಮಾನ ಹೆಚ್ಚು ಆಗೋದಕ್ಕ ಜನರಿಗೆ ತೊಂದರೆ ಆಗಂಗಿಲ್ಲ. ಆದರ ಹಣದುಬ್ಬರ ಇದ್ದು, ಸರಕು-ಸೇವೆಗಳಿಗೆ ಬೇಡಿಕೆ ಕಡಿಮೆ ಆಗಿ ಆರ್ಥಿಕ ಹಿಂಜರಿತ ಉಂಟಾದರ, ಅದು ಆ ದೇಶದ ಜನರಿಗೆ ಭಾಳ ಕಿರಿಕಿರಿ ಆಗತದ. ಅವರ ದಿನ ನಿತ್ಯದ ಕೆಲಸನೂ ಆಗದಂಗ ತೊಂದರೆ ಆಗತದ.

ಹಿಂಗ 1973 ರಾಗ ಇಡಿ ಜಗತ್ತಿನೊಳಗ ಆಗಿತ್ತು. ಪೆಟ್ರೋಲು- ಡೀಸಲ್ ಬೆಲೆ ಹೆಚ್ಚಾಗಿ ಸಾಗಾಣಿಕೆ ವೆಚ್ಚ ಹೆಚ್ಚಾಗಿ, ಸರಕುಗಳ ಬೆಲೆ ಜಾಸ್ತಿ ಆತು. ಜನ ನೌಕರಿ ಕಳಕೊಂಡರು, ಸರಕು ಖರೀದಿ ಮಾಡೋದು ಕಡಿಮೆ ಮಾಡಿದರು, ಆದರ ಜನ ಖರೀದಿ ಕಮ್ಮಿ ಮಾಡಿದರು ಅಂತ ವೆಚ್ಚಕಮ್ಮಿ ಆಗಲಿಲ್ಲ. ಇಡೀ ವಿಶ್ವದ ಆರ್ಥಿಕ ವ್ಯವಸ್ಥೆ ಅಲುಗಾಡಿ ಹೋತು.

ಇನ್ನೊಮ್ಮೆ ಹಿಂಗಾಗಿದ್ದು ಯಾವಾಗ ಅಂದರ ಚಂದ್ರಶೇಖರ ಅವರ ಕಾಲದಾಗ. ಸರಕಾರದ ನೀತಿಗಳು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲಿಲ್ಲ. ಅದರ ಸರಕುಗಳ ಬೆಲೆ ಹೆಚ್ಚಾಗಿ ಕೂತವು. ಮಾರುವವರಿಗೂ ಅನುಕೂಲ ಆಗಲಿಲ್ಲ, ಖರೀದಿ ಮಾಡೋರಿಗೂ ಅನುಕೂಲ ಆಗಲಿಲ್ಲ.

ಇದನ್ನು ಕುಡಿಯಾಗಿದ್ದಾಗ ಚಿವುಟದಿದ್ದರೆ ಇದು ಅತ್ಯಂತ ದೊಡ್ಡ ಸಮಸ್ಯೆ ಆಗಬಹುದು. ಭಾಳ ದಿವಸ ಜಡದುಬ್ಬರ ಮುಂದುವರೆದರ ಅದು ಮಧ್ಯಮ ವರ್ಗದವರನ್ನೆಲ್ಲ ಬಡತನರೇಖೆಯ ಕೆಳಗೆ ದಬ್ಬಿ ಬಿಡತದ. ಆಡಳಿತ ಪಕ್ಷಕ್ಕೂ ಇದು ಒಳ್ಳೇದಲ್ಲ. ಸರಕಾರದ ಇಮೇಜು ಇದರಿಂದ ಕೆಡಬಹುದು. ಜನರನ್ನು ರೊಚ್ಚಿಗೆ ಎಬ್ಬಿಸಬಹುದು.

ಹಂಗಂತ ಅದನ್ನು ಸಂಭಾಳಿಸೋದು ಸರಳ ಇಲ್ಲ. ಸರಕಾರ ಅಥವಾ ರಿಸರ್ವ ಬ್ಯಾಂಕಿನಂಥ ಕೇಂದ್ರ ಬ್ಯಾಂಕು ಬಡ್ಡಿ ದರ ಹೆಚ್ಚು ಮಾಡಿದರ ಸಾಲಗಳು ದುಬಾರಿಯಾಗಿ ಯಾರೂ ತೊಗೊಳ್ಳಲಾರದಂತಾಗಿ, ಅಥವಾ ತೊಗೊಂಡವರು ವಾಪಸು ಕೊಡಲಿಕ್ಕೆ ಆಗಲಾರದಂತಾಗಿ ವ್ಯಾಪಾರ -ವ್ಯವಹಾರಕ್ಕೆ ತೊಂದರೆ ಆಗಬಹುದು. ಬಡ್ಡಿ ದರ ಕಮ್ಮಿ ಮಾಡಿದರ ಹಣದುಬ್ಬರ ಹೆಚ್ಚಾಗಿ ಜನ ಏನನ್ನೂ ಖರೀದಿ ಮಾಡದಂಗಾಗಬಹುದು, ಮಾಡಿದರ ಅವರ ಉಳಿತಾಯ ಕರಗಬಹುದು.

ಈ ವರ್ಷ ಏನಾಗೇದಪಾ ಅಂದರ ಪ್ರವಾಹ- ಬರಗಾಲದಿಂದ ಕೃಷಿ ಉತ್ಪನ್ನ ಕಮ್ಮಿ ಆಗೇದ. ಇದರಿಂದ ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗೇದ. ಇದು ಕೇಂದ್ರದ ಹೊಸ ಆಮದು ನೀತಿಯಿಂದ ಕಮ್ಮಿ ಆದರ, ಅಥವಾ ಆರ್ಥಿಕ ಬೆಳವಣಿಗೆ ಮುಂದಿನ ಎರಡು – ಮೂರು ತಿಂಗಳಲ್ಲಿ ಹೆಚ್ಚಿದರ ಜಡದುಬ್ಬರದ ಬರೋ ಸಾಧ್ಯತೆ ಕಮ್ಮಿ ಆಗಬಹುದು. ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರ ಮಂಡಳಿ ಅವರು ಈಗಿನ ಹಣದುಬ್ಬರ ಕಮ್ಮಿ ಆಗತದ ಅಂತ ಹೇಳ್ಯಾರ.

ದೇಶದ ವರಮಾನ ಅಷ್ಟೇ ಉಳದು ಅಥವಾ ಕಮ್ಮಿ ಆಗುವಾಗ ಖರ್ಚು ಜಾಸ್ತಿ ಆದಂಗನ, ಪ್ರತಿ ಗೃಹಸ್ಥನ ಪರಿಸ್ಥಿತಿನೂ ಆಗಬಹುದು. ಅವನ ನೌಕರಿಗೆ ಖತರಾ ಬಂದು, ಯಾವಾಗ ಕೆಲಸ ಕಳಕೋತೇನಿ ಅನ್ನುವ ಹೆದರಿಕೆಯೊಳಗ ಇರೋವಾಗ, ಅಥವಾ ಅವನಿಗ ವಾರ್ಷಿಕ ಬಡ್ತಿ ಸಿಗಲಾರದೇ, ಸಂಬಳ ಹೆಚ್ಚಾಗಲಾರದೇ ಇದ್ದು, ವಸ್ತುಗಳ ಬೆಲೆ ಜಾಸ್ತಿ ಆಗತಾ ಹೋದರ ಅವನು ಬರೇ ಊಟ, ಮನಿ ಬಾಡಗಿ, ಅರವಿ- ಅಂಚಡಿ, ಸಾಲಿ ಫೀಸು ಇಷ್ಟ ಖರ್ಚು ಮಾಡತಾ ಹೋದಾ ಅಂದರ ಅವನು ದೇಶದ ಆರ್ಥಿಕ ಪರಿಸ್ಥಿತಿಗೆ ಯಾವ ಕೊಡುಗೆ ಕೊಡಲಾರ.

ಹೊಸ ಬಂಡವಾಳ ದೇಶಕ್ಕೆ ಬರಲಾರದು, ಹೊಸ ಉದ್ಯೋಗ ಸೃಷ್ಟಿ ಆಗಲಾರವು. ಜನರ ಕೈಯೊಳಗ ದುಡ್ಡು ನಿಲ್ಲಂಗಿಲ್ಲ. ಜನ ಬ್ಯಾಂಕಿನೊಳಗ, ಷೇರು ಮಾರುಕಟ್ಟೆಯೊಳಗ ಉಳಿತಾಯ ಮಾಡಿದರ ಅದಕ್ಕ ಬೇಕಷ್ಟು ಬಡ್ಡಿ ಬರಂಗಿಲ್ಲ.

ಜಡದುಬ್ಬರವನ್ನ ಸರಕಾರಗಳು ಕಮ್ಮಿ ಮಾಡಲಿಕ್ಕೆ ಕ್ರಮ ಕೈಕೊಳ್ಳಬೇಕು. ಸರಿಯಾದ ನೀತಿ ಪಾಲಿಸಿ ಮತ್ತ ಬರಲಾರದ ಹಂಗ ನೋಡಿಕೊಳ್ಳಬೇಕು. ಇಲ್ಲದಿದ್ದರ ಅನೇಕ ವರ್ಷಗಳ ಬೆಳವಣಿಗಿ ಹೊಳಿಯೊಳಗ ಹುಣಸೀಹಣ್ಣು ತೊಳದಂಗ ಆಗಿ ಬಿಡತದ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...