Homeಮುಖಪುಟ‘ಆಧಾರ್ ಪೌರತ್ವದ ದಾಖಲೆಯಲ್ಲ,’ UIDAI - ಪೊಲೀಸರ ಗೊಂದಲ: ಈಗಲೇ ಹೀಗೆ, NRC ಬಂದರೆ ಇನ್ಹೇಗೆ?

‘ಆಧಾರ್ ಪೌರತ್ವದ ದಾಖಲೆಯಲ್ಲ,’ UIDAI – ಪೊಲೀಸರ ಗೊಂದಲ: ಈಗಲೇ ಹೀಗೆ, NRC ಬಂದರೆ ಇನ್ಹೇಗೆ?

- Advertisement -
- Advertisement -

ಬುಧವಾರ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ತರಾತುರಿಯಲ್ಲಿ ಒಂದು ಹೇಳಿಕೆ ಬಿಡುಗಡೆ ಮಾಡಿ, ಆಧಾರ್ ಪೌರತ್ವ ದಾಖಲೆಯಲ್ಲ ಮತ್ತು ಪೌರತ್ವದ ಕುರಿತಾಗಿ ತನಗೆ ಯಾವುದೇ ಅಧಿಕಾರವಿಲ್ಲ ಎಂದು ಸ್ಪಷ್ಟೀಕರಣ ನೀಡಿದೆ.

ತನ್ನ ಅಧಿಕಾರದ ವ್ಯಾಪ್ತಿ ಮೀರಿ ವರ್ತಿಸಲು ಹೋದ ಯುಐಡಿಎಐ, ಈ ಎಲ್ಲ ಗೊಂದಲಕ್ಕೆ ಕಾರಣವಾಗಿದೆ. ಹೈದರಾಬಾದಿನ ಪೊಲೀಸರು, 127 ಜನರನ್ನು (ಎಲ್ಲರೂ ಮುಸ್ಲಿಮರು) ಅಕ್ರಮ ವಲಸೆಗಾರರು ಎಂದು ಗುರುತಿಸಿ, ಇವರೆಲ್ಲರ ಆಧಾರ್ ಕಾರ್ಡ್‌ಗೆ ಕ್ರಮಬದ್ಧವಾದ ದಾಖಲೆ ಇವೆಯೇ? ಇಲ್ಲದಿದ್ದರೆ ಇವರ ಆಧಾರ್ ಕಾರ್ಡ್ ರದ್ದು ಮಾಡಿ ಎಂದು ಯುಐಡಿಎಐಗೆ ಪತ್ರ ಬರೆದಿದ್ದರು.

127 ಜನರು ಆಧಾರ್ ಪಡೆಯಲು ಸೂಕ್ತ ದಾಖಲೆ ನೀಡಿದ್ದಾರೋ ಇಲ್ಲವೋ, ಅದರಲ್ಲಿ ಫೋರ್ಜರಿ ಆಗಿದೆಯಾ ಅಥವಾ ಅನಧಿಕೃತ ಮೂಲಗಳಿಂದ ದಾಖಲೆ ಪಡೆದಿರುವರಾ ಎಂದು ಚೆಕ್ ಮಾಡಿ, ಅಲ್ಲಿ ಅಕ್ರಮ ಕಂಡು ಬಂದಿದ್ದರೆ ಅವರ ಆಧಾರ್ ಕಾರ್ಡ್ ಅನ್ನು ರದ್ದು ಮಾಡಬೇಕಾಗಿತ್ತು.

ಆದರೆ, ತನ್ನ ಅಧಿಕಾರ ವ್ಯಾಪ್ತಿ ಮೀರಿದ ಯುಐಡಿಎಐ, ನೀವು ಭಾರತೀಯ ಪೌರತ್ವ ಹೊಂದಿದ್ದೀರಾ? ಅಕ್ರಮ ವಲಸೆ ಬಂದಿದ್ದೀರಾ ಎಂದೆಲ್ಲ ನೋಟಿಸ್ ನೀಡುವ ಮೂಲಕ ಈಗಾಗಲೇ ಪೌರತ್ವದ ದಾಖಲೆಗಳ ಕುರಿತು ಎದ್ದಿರುವ ಗೊಂದಲವನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ. ಯುಐಡಿಎಐ ಮತ್ತು ಹೈದರಾಬಾದ್ ಪೊಲೀಸರ ನಡೆ 127 ಜನರ ಕುಟುಂಬಗಳಿಗೆ ಮಾರಕವಾಗಿ ಪರಿಣಮಿಸಿದೆ.

2016ರ ಆಧಾರ್‌ ಆ್ಯಕ್ಟ್ ಯುಐಡಿಎಐಗೆ ನೀಡಿರುವ ಅಧಿಕಾರ ಸಿಮೀತ ಸ್ವರೂಪದ್ದು ಅಷ್ಟೇ. ಈ ಆ್ಯಕ್ಟ್‌ನ 9ನೇ ಸೆಕ್ಷನ್ ಪ್ರಕಾರ, ಆಧಾರ್ ಯಾವುದೇ ಬಗೆಯ ಪೌರತ್ವ ಅಥವಾ ವಲಸೆಗೆ ಸಂಬಂಧಿಸಿದ ದಾಖಲೆಯಲ್ಲ. ಆಧಾರ್ ಪಡೆಯಲು ನೀಡಿದ ದಾಖಲೆಗಳು ಅಸಮರ್ಪಕ ಅಥವಾ ನಕಲಿಯಾಗಿದ್ದಾಗ ಮಾತ್ರ ಯುಐಡಿಎಐ ಅಂತಹ ಆಧಾರ್ ಸಂಖ್ಯೆಯನ್ನು ರದ್ದು ಮಾಡಬಹುದು ಅಷ್ಟೇ. ಸೆಕ್ಷನ್ 3ರ ಪ್ರಕಾರ, ವಾಸದ ವಿಳಾಸದ ದಾಖಲೆ ಇದ್ದರೆ ಸಾಕು, ಆಧಾರ್ ಪಡೆಯಬಹುದು. ವಿದೇಶದಿಂದ ಬಂದು ಇಲ್ಲಿ ಆರು ತಿಂಗಳು ನೆಲೆಸಿದವರಿಗೂ ಆಧಾರ್ ಸಿಗುತ್ತದೆ. ಹೀಗಿರುವಾಗ ಯುಐಡಿಐಎ ಅಕ್ಟ್‌ ವಲಸೆ ವಿಚಾರದಲ್ಲಿ ಮೂಗು ತೂರಿಸಿ, ಜನರ ಪೌರತ್ವವನ್ನು ಪ್ರಶ್ನಿಸಲು ಹೊರಟಿದೆ.

ಇಲ್ಲಿ ಒಂದಿಷ್ಟು ಪ್ರಶ್ನೆಗಳು ಏಳುತ್ತವೆ: 2018ರ ಜೂನ್‌ನಲ್ಲಿ ಯುಐಡಿಎಐ ಸ್ಪಷ್ಟಪಡಿಸಿದಂತೆ, ಒಟ್ಟು ಆಧಾರ್ ನೋಂದಣಿ ಪೈಕಿ ಶೇ.38ರಷ್ಟು ನೋಂದಣಿ ವಿವರಗಳು (ಗುರುತು ಮತ್ತು ವಿಳಾಸದ ದಾಖಲೆ) ತನಗೆ ಲಭ್ಯ (access) ಆಗುತ್ತಿಲ್ಲ ಎಂದಿತ್ತು. ಈ 127 ಜನರು ‘ಆ ಲಭ್ಯವಿಲ್ಲದ’ ನೋಂದಣಿಯಲ್ಲಿರಬಹುದೇ ಎಂದು ಹೇಗೆ ದೃಢೀಕರಿಸುತ್ತಾರೆ? ನಿಮ್ಮ ದಾಖಲೆಗಳನ್ನು ಸಲ್ಲಿಸಿ ಅವು ಅಸಲಿ ಎಂದು ರುಜುವಾತು ಮಾಡಿ ಎಂದಷ್ಟೇ 127 ಜನರಿಗೆ ಸೂಚಿಸಿದ್ದರೆ ಸಾಕಿತ್ತು. ಆದರೆ ಒಂದು ಹೆಜ್ಜೆ ಮುಂದೆ ಹೋದ ಯುಐಡಿಎಐ, ವಲಸೆ, ಪೌರತ್ವದ ಪ್ರಶ್ನೆ ಎತ್ತಿ ವಿವಾದಕ್ಕೆ ಈಡಾಗಿದೆ.

ಹೈದರಾಬಾದ್ ಪೊಲೀಸರಿಗೆ 127 ಜನ ಅಕ್ರಮ ವಲಸೆಗಾರರು ಎಂಬ ಸಂಶಯ ಬಂದಿದ್ದರೆ, ಅವರು ವಿವರಣೆ ಪಡೆಯಬೇಕಾದುದು ಆಧಾರ್ ಕುರಿತಲ್ಲ ಮತ್ತು ಯುಐಡಿಎಐನಿಂದಲ್ಲ. ಅವರು ವಲಸೆ ವಿಭಾಗವನ್ನು ಸಂಪರ್ಕಿಸಿ, ವಿದೇಶಿಗರ ಆ್ಯಕ್ಟ್ ಅಡಿ 127 ಜನ ಅಕ್ರಮ ವಲಸಿಗರೇ ಎಂಬುದನ್ನು ಪರೀಕ್ಷಿಸಿ ಎಂದು ಕೇಳಬೇಕಿತ್ತು. ಆಮೇಲೆ ಆಧಾರ್ ರದ್ದಿನ ವಿಷಯ ನೋಡಬೇಕಿತ್ತು.

ಈಗ ನೋಡಿ, ಸರಿಯಾದ ವಿಚಾರಣೆಯಿಲ್ಲದೇ ಅಥವಾ ವಿಚಾರಣೆ ಮುಗಿಯುವವರೆಗೆ ಕಾಯದೆ 127 ಜನರ ಆಧಾರ್ ಕಿತ್ತುಕೊಂಡು ಬಿಟ್ಟರೆ, 127 ಕುಟುಂಬಗಳು ರೇಷನ್‌ನಿಂದ ಹಿಡಿದು ಚಿಕಿತ್ಸೆವರೆಗೆ ಎಲ್ಲ ಸೌಲಭ್ಯ ಕಳೆದುಕೊಳ್ಳಲಿವೆ.

ಅಕ್ರಮ ವಲಸಿಗರಾ ಎಂದು ಕೇಳಲು ಈ ಯುಐಡಿಎಐ ಯಾರು? ಅಕ್ರಮ ವಲಸೆಗಾರರ ವಿಷಯವನ್ನು ವಲಸೆ ವಿಭಾಗಕ್ಕೆ ತಲುಪಿಸಬೇಕಿದ್ದ ಪೊಲೀಸರು, ಯುಐಡಿಎಐ ಮೊರೆ ಹೋದರೇಕೆ? ಈಗಲೇ ಹೀಗೆ, ಈ ಎನ್‌ಪಿಆರ್, ಸಿಎಎ ಮತ್ತು ಎನ್‌ಆರ್‌ಸಿ ಜಾರಿಗೆ ಬಂದರೆ ಪರಿಸ್ಥಿತಿ ಎಷ್ಟು ಭೀಕರವಾಗಿರಬಹುದು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...