HomeಮುಖಪುಟYes! ದೆ ಆರ್ ಅನ್‍ಬೀಟಬಲ್!! ಪ್ರಪಂಚವೇ ಬೆಚ್ಚಿಬೀಳುವಂತೆ ಡ್ಯಾನ್ಸ್‌ ಮಾಡಿದ ಸ್ಲಂ ಯುವಜನರ ತಂಡ..

Yes! ದೆ ಆರ್ ಅನ್‍ಬೀಟಬಲ್!! ಪ್ರಪಂಚವೇ ಬೆಚ್ಚಿಬೀಳುವಂತೆ ಡ್ಯಾನ್ಸ್‌ ಮಾಡಿದ ಸ್ಲಂ ಯುವಜನರ ತಂಡ..

- Advertisement -
- Advertisement -

ಅಮೆರಿಕಾ ಗಾಟ್ ಟ್ಯಾಲೆಂಟ್’ (AGT) ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಮುಂಬೈನ 28 ಬಾಲಕ ಬಾಲಕಿಯರು ತಮ್ಮ ಡ್ಯಾನ್ಸ್ ಪ್ರದರ್ಶನದಲ್ಲಿ ಟ್ರೋಫಿಯನ್ನು ಗೆದ್ದು ಅಮೆರಿಕನ್ನರನ್ನು ಮಾತ್ರವಲ್ಲ ಪ್ರಪಂಚವನ್ನೇ ಬೆಚ್ಚಿ ಬೀಳಿಸಿದ್ದಾರೆ.

ಇಡೀ ವಿಶ್ವವೇ ನಿಬ್ಬೆರಗಾಗುವಂತೆ ಮಾಡುವ ಅಮೆರಿಕಾ ಗಾಟ್ ಟ್ಯಾಲೆಂಟ್ ರಿಯಾಲಿಟಿ ಶೋ ಸ್ಪರ್ಧೆಯಲ್ಲಿ ಭಾಗವಹಿಸಿ ಹೃದಯವೇ ನಿಂತುಹೋಗುವಂತಹ ಡ್ಯಾನ್ಸ್ ಪ್ರದರ್ಶನ ನೀಡಿ ರಿಯಾಲಿಟಿ ಶೋ ಟ್ರೋಫಿ ಗೆದ್ದಿರುವ ಈ ಯುವಜನರು ಪ್ರಪಂಚದ ಗಮನ ಸೆಳೆದಿದ್ದಾರೆ.

ಯಾರು ಈ “ವಿ ಅನ್‍ಬೀಟಬಲ್”

ವಿ ಅನ್‍ಬೀಟಬಲ್ ತಂಡ ಮುಂಬೈನ ಹಲವಾರು ಸ್ಲಂಗಳಲ್ಲಿ ವಾಸಿಸುವ ಯುವಜನರ ತಂಡ. ಮುಂಬೈನ ಸ್ಲಂಗಳಲ್ಲಿ ದುಸ್ತರವಾದ ಬದುಕು. ಕುಡಿಯಲು ಶುದ್ಧ ನೀರು ಸಿಗದೆ, ಕಾಲು ಚಾಚಿ ಮಲಗುವಷ್ಟು ಜಾಗವೂ ಇಲ್ಲದೆ, ಚಿಕ್ಕ ಶೆಡ್ಡುಗಳಂತಹ ಮನೆಗಳಲ್ಲಿ ಬದುಕುವ ಜನರ ಅಲ್ಲಿನ ನೋವುಗಳನ್ನು ಅನುಭವಿಸುತ್ತಾ ಬೆಳೆಯುತ್ತಿದ್ದ ಈ 28 ಯುವಜನರ ತಂಡವೇ ವಿ ಅನ್ಬೀಟಬಲ್.

ಮುಂಬೈನ ಸ್ಲಂಗಳಲ್ಲಿ ವಾಸಿಸುತ್ತಿರುವ 12ರಿಂದ 27ವಯಸ್ಸಿನವರೆಗಿನ ಬಾಲಕಬಾಲಕಿಯರು ಅವರು. “ಸ್ಲಂಗಳು ಅತ್ಯಂತ ಜನನಿಬಿಡವಾಗಿವೆ, ಕೊಳಕಾಗಿರುತ್ತದೆ, ಸೂಕ್ತ ವಿದ್ಯುತ್ ಸೌಲಭ್ಯ ಅಲ್ಲಿಲ್ಲ, ಒಂದೊಂದು ಸಣ್ಣ ಕೋಣೆಯಲ್ಲಿ 10 ಜನ ಇರಬೇಕಾಗುತ್ತದೆ, ಅಲ್ಲಿ ಬದುಕು ಉಳಿಸಿಕೊಳ್ಳುವುದೇ ಸವಾಲಿನ ಕೆಲಸ. ಇಂತಹ ಕಷ್ಟದ ಬದುಕಿನಲ್ಲಿ ಅವರು ಪ್ರಾರ್ಥಿಸುತ್ತಿದ್ದದ್ದು ಉತ್ತಮವಾದ, ಸ್ವಾವಲಂಬಿ-ಸ್ವಾಭಿಮಾನದ ಘನತೆಯ ಬದುಕಿಗಾಗಿ. ಆದರೆ ಆ ಯುವಜನರಿಗೆ ಸ್ಲಂಗಳಲ್ಲಿ ಸಿಗುತ್ತಿದ್ದ ಅವಕಾಶವೇ ಕಡಿಮೆ.., ಆದರೂ, ಬೆಳಗ್ಗೆಯಿಂದ ಸಂಜೆಯವರೆಗೂ ಹೊಟ್ಟೆಪಾಡಿಗಾಗಿ ದುಡಿಯುತ್ತಿದ್ದ ಈ ಯುವಜನರು, ಸಂಜೆಯ ಸಮಯದಲ್ಲಿ ಒಟ್ಟಿಗೆ ಸೇರಿ ಡ್ಯಾನ್ಸ್ ಮಾಡುತ್ತಾ ತಮ್ಮೆಲ್ಲರ ಮನಸ್ಸಿನ ಮಾನಸಿಕ ದುಗುಡ, ತಳಮಳ, ಬದುಕಿನ ಮೇಲಿನ ಆಕ್ರೋಶವನ್ನು ಕಳೆದುಕೊಂಡು, ಮನಸ್ಸನ್ನು ಹಗುರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

ಈ 28 ಯುವಜನರ ತಂಡ ತಾವು ಒಟ್ಟುಗೂಡಿ ಡ್ಯಾನ್ಸ್ ಮಾಡುವ ಸಂದರ್ಭದಲ್ಲಿ ತಮ್ಮ ಡ್ಯಾನ್ಸಿನ ಸ್ಕಿಲ್ಲನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಯೂಟ್ಯೂಬ್‌ನಲ್ಲಿ ನಾನಾ ರೀತಿಯ ಶೋಗಳನ್ನು ನೋಡುತ್ತಿದ್ದರು. ಡ್ಯಾನ್ಸ್ ಬಗ್ಗೆ ತುಡಿತ ಹೊಂದಿದ್ದ ಈ ಯುವಜನರ ಕಣ್ಣಿಗೆ ಕಂಡದ್ದು ‘ಅಮೆರಿಕಾ ಗಾಟ್ ಟ್ಯಾಲೆಂಟ್’ ರಿಯಾಲಿಟಿ ಶೋ. ಆ ಕಾರ್ಯಕ್ರಮವನ್ನು ನೋಡುವಾಗ ಆ ಯುವ ಮನಸ್ಸುಗಳಲ್ಲಿ ಮೂಡಿದ್ದು ನಾವು ಒಂದು ದಿನ ಅಲ್ಲಿಗೆ ಹೋಗಬಹುದಾ ಎಂಬ ಕನಸು. ಆ ಕನಸಿನ್ನು ನನಸಾಗಿಸಿಕೊಳ್ಳುವತ್ತ ಹೆಜ್ಜೆ ಹಾಕಿದ್ದ ಆ ತಂಡ ’ವಿ ಅನ್‍ಬೀಟಬಲ್’ ಹೆಸರನ್ನಿಟ್ಟುಕೊಂಡು ‘ಅಮೆರಿಕಾ ಗಾಟ್ ಟ್ಯಾಲೆಂಟ್’ ವೇದಿಯ ಮೇಲೇರಿ ತಮ್ಮ ಕನಸನ್ನ ನನಸಾಗಿಸಿಕೊಂಡಿದ್ದಾರೆ.

ವಿ ಅನ್‍ಬೀಟಬಲ್ ಗೆಲುವಿನ ಹಾದಿ!

V Unbeatable ಎಂಬ ಡ್ಯಾನ್ಸ್ ತಂಡ ಕಟ್ಟಿಕೊಂಡು ವಾರಗಳ ಕಾಲ ತಾಲೀಮು ನಡೆಸಿಕೊಂಡು ಎನ್‍ಬಿಸಿ ರಿಯಾಲಿಟಿ ಟಿವಿ ನಡೆಸುವ ‘ಅಮೆರಿಕ ಗಾಟ್ ಟ್ಯಾಲೆಂಟ್’ (AGT) ಕಾರ್ಯಕ್ರಮದ ವೇದಿಕೆಯಲ್ಲಿ ಅವರು ಬಂದು ನಿಂತಾಗ ತಮ್ಮೆದುರು ತೀರ್ಪುಗಾರರಾಗಿ ಕುಳಿತ ಸೈಮನ್ ಕೌವೆಲ್, ಹೌವೀ ಮಂಡೆಲ್, ಗ್ಯಾಬ್ರಿಯೆಲ್ ಯೂನಿಯನ್ ಮತ್ತು ಜ್ಯೂಲಿಯನ್ ಹೌ ಅವರಿಗಾಗಲೀ, ಪ್ರೇಕ್ಷಕರಿಗಾಗಲೀ ಆ ಕಂದು ಬಣ್ಣದ ಹುಡುಗರು ಏನು ಮಾಡಲಿದ್ದಾರೆ ಎಂಬ ಊಹೆಯೂ ಇರಲಿಲ್ಲ.

ಶೋ ಆರಂಭದ ಮೊದಲ ದಿನ, ವಿಶಾಲ್ ದಾದ್ಲಾನಿಯ “ಮಲ್ಹಾರಿ” ಹಾಡಿಗೆ ಹುಡುಗರು ಮಾಡುವ ಡ್ಯಾನ್ಸ್ ಕೆಲ ನಿಮಿಷಗಳ ಕಾಲ ಎಲ್ಲರ ಎದೆಬಡಿತ ಹೆಚ್ಚಿಸುತ್ತದೆ. ಅದರಲ್ಲೂ ಸಣ್ಣ ಹುಡುಗರನ್ನು ಎತ್ತಿ ಹಾರಿಸುವ ಕೆಲವು ದೃಶ್ಯಗಳಂತೂ ಮೈ ಜುಮ್ ಎನಿಸಿದ್ದವು. ಬೊಂಬುಗಳನ್ನು ತಂದು ನಿಲ್ಲಿಸಿ ಅದರ ಮೇಲೆ ಕಾಲ್ಬೆರಳ ತುದಿಯಲ್ಲಿ ನಡೆದು, ನೆಗೆದು ತೋರಿಸುವ ದೃಶ್ಯಗಳಂತೂ ಚೇತೋಹಾರಿಯಾಗಿದ್ದವು.

ಆ ದೃಶ್ಯಗಳನ್ನು ನೋಡಿದರೆ, ಅಂತಹ ಪ್ರದರ್ಶನಗಳನ್ನು ಚೀನಾದ ತಂಡಗಳು ಮಾತ್ರ ನೀಡಲು ಸಾಧ್ಯ, ಮತ್ತಾರೂ ಮಾಡಲಾರರು ಎನ್ನುವಂತಿದ್ದವು. ಅಂತಹ ನೃತ್ಯವನ್ನು ಸೂಕ್ತ ತರಬೇತಿ ಸಿಕ್ಕಿದರೆ ಭಾರತದಲ್ಲಿ ವಾಸಿಸುವ ಸ್ಲಂ ಮಕ್ಕಳೂ ಸಹ ಅಸಾಧ್ಯವಾದುದನ್ನು ಸಾಧಿಸಿ ಜಗತ್ತೇ ನಿಬ್ಬೆರಗಾಗುವಂತೆ ಮಾಡಬಲ್ಲರು ಎಂಬುದನ್ನು ವಿ ಅನ್ ಬೀಟಬಲ್ ತಂಡ ತೋರಿಸಿದೆ.

ಅಂದು ರಿಯಾಲಿಟಿ ಶೋ ವೇದಿಕೆ ಮೇಲೆ ನಿಂತ ಈ ಯುವಜನರನ್ನು ಅಮೆರಿಕಾ ಗಾಟ್ ಟ್ಯಾಲೆಂಟ್ ವಿನ್ನರ್ಸ್ ಪಟ್ಟಿಯಲ್ಲಿ ಸೇರಿದರೆ ನಿಮ್ಮ ಭವಿಷ್ಯಕ್ಕೆ ಏನು ಲಾಭ ಎಂದು ಜಡ್ಜ್ ಗ್ಯಾಬ್ರಿಯೆಲ್ ಕೇಳಿದ್ದಕ್ಕೆ ಮುಂಬೈ ಹುಡುಗ, “ಗೆಲುವು ಸಾಧಿಸಿದ್ದು ವಿ ಅನ್ ಬೀಟಬಲ್” ಎಂದು ಇಡೀ ಜಗತ್ತಿಗೆ ತಿಳಿಯಬೇಕೆಂದು ನಾವು ಬಯಸುತ್ತೇವೆ. ಇಂದು ಇಲ್ಲಿ ಸಿಕ್ಕಿರುವ ಅವಕಾಶ ನಮ್ಮ ಬದುಕನ್ನು ಬದಲಿಸಬಹುದು ಎಂಬ ಕನಸು ಹೊತ್ತು ಎಲ್ಲರೂ ಇಲ್ಲಿದ್ದೇವೆ ಎಂದು ಹೇಳಿದ್ದ.

ತಮ್ಮೆಲ್ಲರ ಕನಸನ್ನು ನನಸಾಗಿಸಿಕೊಂಡು ಅಮೆರಿಕಾ ಗಾಟ್ ಟ್ಯಾಲೆಂಟ್ ವೇದಿಕೆ ಏರಿದ್ದಷ್ಟೇ ಅಲ್ಲದೆ, ಈ ಶೋನ ಟ್ರೋಫಿಯನ್ನೂ ಗೆದ್ದು, ತಾವು ಬಯಸಿದ್ದ ಸಾಧನೆಯನ್ನು ಮಾಡಿ ಇಂದು ತಾವು ಗೆದ್ದಿದ್ದೇವೆಂದು ಆ 28 ಜನರ ತಂಡ ಇಡೀ ಜಗತ್ತಿಗೆ ಸಾರಿದ್ದಾರೆ.

ಇದು ಕೇವಲ ಮುಂಬೈನ ಸ್ಲಂ ಯುವಜನರ ಕತೆ ಅಷ್ಟೇ ಅಲ್ಲ, ಇಂತಹ ಎಲೆ ಮರೆಯ ಪ್ರತಿಭೆಗಳು ಈ ದೇಶದ ಅಸಮಾನತೆ ಮತ್ತು ಅವಕಾಶ ವಂಚನೆಯಿಂದಾಗಿ ತೆರೆಮರೆಯಲ್ಲೇ ಹುದುಗಿ ಹೋಗುತ್ತಿವೆ. ಕೆಲವು ವರ್ಷಗಳ ಹಿಂದೆ ಮಂಡ್ಯ ನಗರದ ಸ್ಲಂ ಹುಡುಗರೂ ಸಹ ಇಂತಹುದೇ ಡ್ಯಾನ್ಸ್ ತಂಡ ಕಟ್ಟಿಕೊಂಡಿದ್ದರು, ಉತ್ತರ ಕರ್ನಾಟಕದ ಬೀದರ್ ನಗರದ ಸ್ಲಂಗಳಲ್ಲಿಯೂ ಅಲೆಮಾರಿ ಸಮುದಾಯಗಳ ಹುಡುಗರು ಅದ್ಭುತ ಡ್ಯಾನ್ಸ್ ತಂಡಗಳನ್ನು ಕಟ್ಟಿಕೊಂಡಿದ್ದರು. ದೇಶದ ಸ್ಲಂಗಳಲ್ಲಿ/ಹಳ್ಳಿಗಳಲ್ಲಿ ಅಡಗಿರುವ ಈ ಸುಪ್ತ ಪ್ರತಿಭೆಗಳಿಗೆ ಸರಿಯಾದ ವೇದಿಕೆ ಸಿಕ್ಕಿದ್ದೇ ಆದಲ್ಲಿ ಭಾರತೀಯ ಯುವಜನರ ಹೊಸ ಯಶೋಗಾಥೆಯನ್ನು ಬರೆಯುವುದರಲ್ಲಿ ಸಂಶಯವೇ ಇಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...

ಪೊಲೀಸರ ಅನುಮತಿ ಪಡೆದಿದ್ದರೂ ನೀಟ್ ಪ್ರತಿಭಟನೆಗೆ ವಾಟ್ಸಾಪ್ ಗ್ರೂಪ್ ರಚಿಸಿದ್ದಕ್ಕಾಗಿ ಅಸ್ಸಾಂನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿಗಳ ಬಂಧನ

ಅಸ್ಸಾಂನಲ್ಲಿ ಬಿಜೆಪಿ ಸರ್ಕಾರದ ಕೋಮುವಾದಿ ಧೋರಣೆ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ದಮನದ ದಾರುಣ ಚಿತ್ರಣವೊಂದು ಮತ್ತೆ ಮುನ್ನೆಲೆಗೆ ಬಂದಿದೆ. ದೇಶಾದ್ಯಂತ ಸದ್ದು ಮಾಡಿದ್ದ 'ನೀಟ್' (NEET) ಅಕ್ರಮಗಳ ವಿರುದ್ಧ ಧ್ವನಿ ಎತ್ತಲು ಮತ್ತು...

‘ವಿದ್ಯಾರ್ಥಿಗಳ ಮೇಲಿನ ವಿಕೃತ ದಾಳಿಗೆ ನಿಮ್ಮ ಸಮ್ಮತಿ ಇತ್ತೇ?’: ಪತ್ರದ ಮೂಲಕ ಅಮಿತ್ ಶಾಗೆ ರಾಹುಲ್ ಗಾಂಧಿ ಪ್ರಶ್ನೆ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ದೇಶವ್ಯಾಪಿ ವಿದ್ಯಾರ್ಥಿ ಆಂದೋಲನದ ವೇಳೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯ ಮತ್ತು ಮಿತಿಮೀರಿದ ಬಲಪ್ರಯೋಗದ ವಿರುದ್ಧ ಲೋಕಸಭೆಯ ವಿರೋಧ...

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...