HomeಮುಖಪುಟYes! ದೆ ಆರ್ ಅನ್‍ಬೀಟಬಲ್!! ಪ್ರಪಂಚವೇ ಬೆಚ್ಚಿಬೀಳುವಂತೆ ಡ್ಯಾನ್ಸ್‌ ಮಾಡಿದ ಸ್ಲಂ ಯುವಜನರ ತಂಡ..

Yes! ದೆ ಆರ್ ಅನ್‍ಬೀಟಬಲ್!! ಪ್ರಪಂಚವೇ ಬೆಚ್ಚಿಬೀಳುವಂತೆ ಡ್ಯಾನ್ಸ್‌ ಮಾಡಿದ ಸ್ಲಂ ಯುವಜನರ ತಂಡ..

- Advertisement -
- Advertisement -

ಅಮೆರಿಕಾ ಗಾಟ್ ಟ್ಯಾಲೆಂಟ್’ (AGT) ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಮುಂಬೈನ 28 ಬಾಲಕ ಬಾಲಕಿಯರು ತಮ್ಮ ಡ್ಯಾನ್ಸ್ ಪ್ರದರ್ಶನದಲ್ಲಿ ಟ್ರೋಫಿಯನ್ನು ಗೆದ್ದು ಅಮೆರಿಕನ್ನರನ್ನು ಮಾತ್ರವಲ್ಲ ಪ್ರಪಂಚವನ್ನೇ ಬೆಚ್ಚಿ ಬೀಳಿಸಿದ್ದಾರೆ.

ಇಡೀ ವಿಶ್ವವೇ ನಿಬ್ಬೆರಗಾಗುವಂತೆ ಮಾಡುವ ಅಮೆರಿಕಾ ಗಾಟ್ ಟ್ಯಾಲೆಂಟ್ ರಿಯಾಲಿಟಿ ಶೋ ಸ್ಪರ್ಧೆಯಲ್ಲಿ ಭಾಗವಹಿಸಿ ಹೃದಯವೇ ನಿಂತುಹೋಗುವಂತಹ ಡ್ಯಾನ್ಸ್ ಪ್ರದರ್ಶನ ನೀಡಿ ರಿಯಾಲಿಟಿ ಶೋ ಟ್ರೋಫಿ ಗೆದ್ದಿರುವ ಈ ಯುವಜನರು ಪ್ರಪಂಚದ ಗಮನ ಸೆಳೆದಿದ್ದಾರೆ.

ಯಾರು ಈ “ವಿ ಅನ್‍ಬೀಟಬಲ್”

ವಿ ಅನ್‍ಬೀಟಬಲ್ ತಂಡ ಮುಂಬೈನ ಹಲವಾರು ಸ್ಲಂಗಳಲ್ಲಿ ವಾಸಿಸುವ ಯುವಜನರ ತಂಡ. ಮುಂಬೈನ ಸ್ಲಂಗಳಲ್ಲಿ ದುಸ್ತರವಾದ ಬದುಕು. ಕುಡಿಯಲು ಶುದ್ಧ ನೀರು ಸಿಗದೆ, ಕಾಲು ಚಾಚಿ ಮಲಗುವಷ್ಟು ಜಾಗವೂ ಇಲ್ಲದೆ, ಚಿಕ್ಕ ಶೆಡ್ಡುಗಳಂತಹ ಮನೆಗಳಲ್ಲಿ ಬದುಕುವ ಜನರ ಅಲ್ಲಿನ ನೋವುಗಳನ್ನು ಅನುಭವಿಸುತ್ತಾ ಬೆಳೆಯುತ್ತಿದ್ದ ಈ 28 ಯುವಜನರ ತಂಡವೇ ವಿ ಅನ್ಬೀಟಬಲ್.

ಮುಂಬೈನ ಸ್ಲಂಗಳಲ್ಲಿ ವಾಸಿಸುತ್ತಿರುವ 12ರಿಂದ 27ವಯಸ್ಸಿನವರೆಗಿನ ಬಾಲಕಬಾಲಕಿಯರು ಅವರು. “ಸ್ಲಂಗಳು ಅತ್ಯಂತ ಜನನಿಬಿಡವಾಗಿವೆ, ಕೊಳಕಾಗಿರುತ್ತದೆ, ಸೂಕ್ತ ವಿದ್ಯುತ್ ಸೌಲಭ್ಯ ಅಲ್ಲಿಲ್ಲ, ಒಂದೊಂದು ಸಣ್ಣ ಕೋಣೆಯಲ್ಲಿ 10 ಜನ ಇರಬೇಕಾಗುತ್ತದೆ, ಅಲ್ಲಿ ಬದುಕು ಉಳಿಸಿಕೊಳ್ಳುವುದೇ ಸವಾಲಿನ ಕೆಲಸ. ಇಂತಹ ಕಷ್ಟದ ಬದುಕಿನಲ್ಲಿ ಅವರು ಪ್ರಾರ್ಥಿಸುತ್ತಿದ್ದದ್ದು ಉತ್ತಮವಾದ, ಸ್ವಾವಲಂಬಿ-ಸ್ವಾಭಿಮಾನದ ಘನತೆಯ ಬದುಕಿಗಾಗಿ. ಆದರೆ ಆ ಯುವಜನರಿಗೆ ಸ್ಲಂಗಳಲ್ಲಿ ಸಿಗುತ್ತಿದ್ದ ಅವಕಾಶವೇ ಕಡಿಮೆ.., ಆದರೂ, ಬೆಳಗ್ಗೆಯಿಂದ ಸಂಜೆಯವರೆಗೂ ಹೊಟ್ಟೆಪಾಡಿಗಾಗಿ ದುಡಿಯುತ್ತಿದ್ದ ಈ ಯುವಜನರು, ಸಂಜೆಯ ಸಮಯದಲ್ಲಿ ಒಟ್ಟಿಗೆ ಸೇರಿ ಡ್ಯಾನ್ಸ್ ಮಾಡುತ್ತಾ ತಮ್ಮೆಲ್ಲರ ಮನಸ್ಸಿನ ಮಾನಸಿಕ ದುಗುಡ, ತಳಮಳ, ಬದುಕಿನ ಮೇಲಿನ ಆಕ್ರೋಶವನ್ನು ಕಳೆದುಕೊಂಡು, ಮನಸ್ಸನ್ನು ಹಗುರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

ಈ 28 ಯುವಜನರ ತಂಡ ತಾವು ಒಟ್ಟುಗೂಡಿ ಡ್ಯಾನ್ಸ್ ಮಾಡುವ ಸಂದರ್ಭದಲ್ಲಿ ತಮ್ಮ ಡ್ಯಾನ್ಸಿನ ಸ್ಕಿಲ್ಲನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಯೂಟ್ಯೂಬ್‌ನಲ್ಲಿ ನಾನಾ ರೀತಿಯ ಶೋಗಳನ್ನು ನೋಡುತ್ತಿದ್ದರು. ಡ್ಯಾನ್ಸ್ ಬಗ್ಗೆ ತುಡಿತ ಹೊಂದಿದ್ದ ಈ ಯುವಜನರ ಕಣ್ಣಿಗೆ ಕಂಡದ್ದು ‘ಅಮೆರಿಕಾ ಗಾಟ್ ಟ್ಯಾಲೆಂಟ್’ ರಿಯಾಲಿಟಿ ಶೋ. ಆ ಕಾರ್ಯಕ್ರಮವನ್ನು ನೋಡುವಾಗ ಆ ಯುವ ಮನಸ್ಸುಗಳಲ್ಲಿ ಮೂಡಿದ್ದು ನಾವು ಒಂದು ದಿನ ಅಲ್ಲಿಗೆ ಹೋಗಬಹುದಾ ಎಂಬ ಕನಸು. ಆ ಕನಸಿನ್ನು ನನಸಾಗಿಸಿಕೊಳ್ಳುವತ್ತ ಹೆಜ್ಜೆ ಹಾಕಿದ್ದ ಆ ತಂಡ ’ವಿ ಅನ್‍ಬೀಟಬಲ್’ ಹೆಸರನ್ನಿಟ್ಟುಕೊಂಡು ‘ಅಮೆರಿಕಾ ಗಾಟ್ ಟ್ಯಾಲೆಂಟ್’ ವೇದಿಯ ಮೇಲೇರಿ ತಮ್ಮ ಕನಸನ್ನ ನನಸಾಗಿಸಿಕೊಂಡಿದ್ದಾರೆ.

ವಿ ಅನ್‍ಬೀಟಬಲ್ ಗೆಲುವಿನ ಹಾದಿ!

V Unbeatable ಎಂಬ ಡ್ಯಾನ್ಸ್ ತಂಡ ಕಟ್ಟಿಕೊಂಡು ವಾರಗಳ ಕಾಲ ತಾಲೀಮು ನಡೆಸಿಕೊಂಡು ಎನ್‍ಬಿಸಿ ರಿಯಾಲಿಟಿ ಟಿವಿ ನಡೆಸುವ ‘ಅಮೆರಿಕ ಗಾಟ್ ಟ್ಯಾಲೆಂಟ್’ (AGT) ಕಾರ್ಯಕ್ರಮದ ವೇದಿಕೆಯಲ್ಲಿ ಅವರು ಬಂದು ನಿಂತಾಗ ತಮ್ಮೆದುರು ತೀರ್ಪುಗಾರರಾಗಿ ಕುಳಿತ ಸೈಮನ್ ಕೌವೆಲ್, ಹೌವೀ ಮಂಡೆಲ್, ಗ್ಯಾಬ್ರಿಯೆಲ್ ಯೂನಿಯನ್ ಮತ್ತು ಜ್ಯೂಲಿಯನ್ ಹೌ ಅವರಿಗಾಗಲೀ, ಪ್ರೇಕ್ಷಕರಿಗಾಗಲೀ ಆ ಕಂದು ಬಣ್ಣದ ಹುಡುಗರು ಏನು ಮಾಡಲಿದ್ದಾರೆ ಎಂಬ ಊಹೆಯೂ ಇರಲಿಲ್ಲ.

ಶೋ ಆರಂಭದ ಮೊದಲ ದಿನ, ವಿಶಾಲ್ ದಾದ್ಲಾನಿಯ “ಮಲ್ಹಾರಿ” ಹಾಡಿಗೆ ಹುಡುಗರು ಮಾಡುವ ಡ್ಯಾನ್ಸ್ ಕೆಲ ನಿಮಿಷಗಳ ಕಾಲ ಎಲ್ಲರ ಎದೆಬಡಿತ ಹೆಚ್ಚಿಸುತ್ತದೆ. ಅದರಲ್ಲೂ ಸಣ್ಣ ಹುಡುಗರನ್ನು ಎತ್ತಿ ಹಾರಿಸುವ ಕೆಲವು ದೃಶ್ಯಗಳಂತೂ ಮೈ ಜುಮ್ ಎನಿಸಿದ್ದವು. ಬೊಂಬುಗಳನ್ನು ತಂದು ನಿಲ್ಲಿಸಿ ಅದರ ಮೇಲೆ ಕಾಲ್ಬೆರಳ ತುದಿಯಲ್ಲಿ ನಡೆದು, ನೆಗೆದು ತೋರಿಸುವ ದೃಶ್ಯಗಳಂತೂ ಚೇತೋಹಾರಿಯಾಗಿದ್ದವು.

ಆ ದೃಶ್ಯಗಳನ್ನು ನೋಡಿದರೆ, ಅಂತಹ ಪ್ರದರ್ಶನಗಳನ್ನು ಚೀನಾದ ತಂಡಗಳು ಮಾತ್ರ ನೀಡಲು ಸಾಧ್ಯ, ಮತ್ತಾರೂ ಮಾಡಲಾರರು ಎನ್ನುವಂತಿದ್ದವು. ಅಂತಹ ನೃತ್ಯವನ್ನು ಸೂಕ್ತ ತರಬೇತಿ ಸಿಕ್ಕಿದರೆ ಭಾರತದಲ್ಲಿ ವಾಸಿಸುವ ಸ್ಲಂ ಮಕ್ಕಳೂ ಸಹ ಅಸಾಧ್ಯವಾದುದನ್ನು ಸಾಧಿಸಿ ಜಗತ್ತೇ ನಿಬ್ಬೆರಗಾಗುವಂತೆ ಮಾಡಬಲ್ಲರು ಎಂಬುದನ್ನು ವಿ ಅನ್ ಬೀಟಬಲ್ ತಂಡ ತೋರಿಸಿದೆ.

ಅಂದು ರಿಯಾಲಿಟಿ ಶೋ ವೇದಿಕೆ ಮೇಲೆ ನಿಂತ ಈ ಯುವಜನರನ್ನು ಅಮೆರಿಕಾ ಗಾಟ್ ಟ್ಯಾಲೆಂಟ್ ವಿನ್ನರ್ಸ್ ಪಟ್ಟಿಯಲ್ಲಿ ಸೇರಿದರೆ ನಿಮ್ಮ ಭವಿಷ್ಯಕ್ಕೆ ಏನು ಲಾಭ ಎಂದು ಜಡ್ಜ್ ಗ್ಯಾಬ್ರಿಯೆಲ್ ಕೇಳಿದ್ದಕ್ಕೆ ಮುಂಬೈ ಹುಡುಗ, “ಗೆಲುವು ಸಾಧಿಸಿದ್ದು ವಿ ಅನ್ ಬೀಟಬಲ್” ಎಂದು ಇಡೀ ಜಗತ್ತಿಗೆ ತಿಳಿಯಬೇಕೆಂದು ನಾವು ಬಯಸುತ್ತೇವೆ. ಇಂದು ಇಲ್ಲಿ ಸಿಕ್ಕಿರುವ ಅವಕಾಶ ನಮ್ಮ ಬದುಕನ್ನು ಬದಲಿಸಬಹುದು ಎಂಬ ಕನಸು ಹೊತ್ತು ಎಲ್ಲರೂ ಇಲ್ಲಿದ್ದೇವೆ ಎಂದು ಹೇಳಿದ್ದ.

ತಮ್ಮೆಲ್ಲರ ಕನಸನ್ನು ನನಸಾಗಿಸಿಕೊಂಡು ಅಮೆರಿಕಾ ಗಾಟ್ ಟ್ಯಾಲೆಂಟ್ ವೇದಿಕೆ ಏರಿದ್ದಷ್ಟೇ ಅಲ್ಲದೆ, ಈ ಶೋನ ಟ್ರೋಫಿಯನ್ನೂ ಗೆದ್ದು, ತಾವು ಬಯಸಿದ್ದ ಸಾಧನೆಯನ್ನು ಮಾಡಿ ಇಂದು ತಾವು ಗೆದ್ದಿದ್ದೇವೆಂದು ಆ 28 ಜನರ ತಂಡ ಇಡೀ ಜಗತ್ತಿಗೆ ಸಾರಿದ್ದಾರೆ.

ಇದು ಕೇವಲ ಮುಂಬೈನ ಸ್ಲಂ ಯುವಜನರ ಕತೆ ಅಷ್ಟೇ ಅಲ್ಲ, ಇಂತಹ ಎಲೆ ಮರೆಯ ಪ್ರತಿಭೆಗಳು ಈ ದೇಶದ ಅಸಮಾನತೆ ಮತ್ತು ಅವಕಾಶ ವಂಚನೆಯಿಂದಾಗಿ ತೆರೆಮರೆಯಲ್ಲೇ ಹುದುಗಿ ಹೋಗುತ್ತಿವೆ. ಕೆಲವು ವರ್ಷಗಳ ಹಿಂದೆ ಮಂಡ್ಯ ನಗರದ ಸ್ಲಂ ಹುಡುಗರೂ ಸಹ ಇಂತಹುದೇ ಡ್ಯಾನ್ಸ್ ತಂಡ ಕಟ್ಟಿಕೊಂಡಿದ್ದರು, ಉತ್ತರ ಕರ್ನಾಟಕದ ಬೀದರ್ ನಗರದ ಸ್ಲಂಗಳಲ್ಲಿಯೂ ಅಲೆಮಾರಿ ಸಮುದಾಯಗಳ ಹುಡುಗರು ಅದ್ಭುತ ಡ್ಯಾನ್ಸ್ ತಂಡಗಳನ್ನು ಕಟ್ಟಿಕೊಂಡಿದ್ದರು. ದೇಶದ ಸ್ಲಂಗಳಲ್ಲಿ/ಹಳ್ಳಿಗಳಲ್ಲಿ ಅಡಗಿರುವ ಈ ಸುಪ್ತ ಪ್ರತಿಭೆಗಳಿಗೆ ಸರಿಯಾದ ವೇದಿಕೆ ಸಿಕ್ಕಿದ್ದೇ ಆದಲ್ಲಿ ಭಾರತೀಯ ಯುವಜನರ ಹೊಸ ಯಶೋಗಾಥೆಯನ್ನು ಬರೆಯುವುದರಲ್ಲಿ ಸಂಶಯವೇ ಇಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...