Homeಮುಖಪುಟದೊರೆಸ್ವಾಮಿ ಎಂಬ ರಾಕ್‍ಸ್ಟಾರ್ !! ಆರು ವರ್ಷದ ಹಿಂದೆ ಗೌರಿ ಲಂಕೇಶ್‌ ಬರೆದ ಲೇಖನ

ದೊರೆಸ್ವಾಮಿ ಎಂಬ ರಾಕ್‍ಸ್ಟಾರ್ !! ಆರು ವರ್ಷದ ಹಿಂದೆ ಗೌರಿ ಲಂಕೇಶ್‌ ಬರೆದ ಲೇಖನ

- Advertisement -
- Advertisement -

ಎಚ್.ಎಸ್ ದೊರೆಸ್ವಾಮಿಯವರಿಗೆ ಈಗ ವಯಸ್ಸು 97. ಆದರೆ ಅವರಿಗೆ ಅದೊಂದು ಮಿತಿಯೂ ಅಲ್ಲ ಅಡೆತಡೆಯೂ ಅಲ್ಲ! ಈಗಲೂ ಎಂತಹ ಸಾಹಸಕ್ಕೂ ಜೈ ಎನ್ನುವ ಜಾಯಮಾನ, ಯಾವ ಅಂಶವನ್ನೂ ಮರೆಯದ ಚುರುಕು ಬುದ್ಧಿ ಅವರದ್ದು. ಅವರಿಗಿರುವ ರಾಜಕೀಯ ಸಹೃದಯತೆ, ಪ್ರಾಮಾಣಿಕತೆ, ಚುರುಕುತನ, ಹಾಸ್ಯ ಮನೋವತ್ತಿ ಒಂದಿಷ್ಟೂ ಬೇಸರಪಟ್ಟುಕೊಳ್ಳದ, ಎಲ್ಲರನ್ನೂ ಆತ್ಮೀಯವಾಗಿ ಮಾತನಾಡಿಸುವ ಅವರ ಮನೋಭಾವವನ್ನು ಮೆಚ್ಚದೆ ಇರಲು ಸಾಧ್ಯವೇ ಇಲ್ಲ. ಈಗಲೂ ಓದಲು ಕನ್ನಡಕ ಬಳಸದೆ, ಕಾಫಿ ಜೊತೆ ಸಕ್ಕರೆ ಬೇಕೇಬೇಕೆನ್ನುವ, ರುಚಿಕರವಾದ ಆಹಾರವನ್ನು ಇಷ್ಟ ಪಡುವ, ಪುಟ್ಟ ಮಕ್ಕಳಂತೆ ಸ್ವೀಟ್ಸ್ ಮತ್ತು ಐಸ್‍ಕ್ರೀಮ್ ಇಷ್ಟ ಪಡುವ, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯಾದಂತ ಸುತ್ತಾಡುವ ಅವರ ಜೀವನೋತ್ಸಾಹ ಬೆರಗು ಮೂಡಿಸುವಂತಹವು.

ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರಲು ದೊರೆಸ್ವಾಮಿಯವರನ್ನು ಚಿಕ್ಕಮಗಳೂರಿಗೆ ಕರೆದುಕೊಂಡು ಹೋದರೆ ಅವರಿಗೆ ದಣಿವಾಗಬಹುದು ಎಂಬ ಕಾರಣಕ್ಕೇ ಮೊದಲು ನಾವು ಆ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದೆವು. ಆದರೆ ಅದಕ್ಕೆ ಹಲವು ತಾಂತ್ರಿಕ ಕಾರಣಗಳು ಅಡ್ಡಿಯಾದಾಗ ಚಿಕ್ಕಮಗಳೂರಿನಲ್ಲಿ ಅದನ್ನು ಏರ್ಪಸುವುದು ಅನಿವಾರ್ಯವಾಯಿತು. ಶಿವಸುಂದರ್ ಅವರು ಹಿಂಜರಿಕೆಯಿಂದಲೇ .

“ಸಾರ್ ಇದಕ್ಕೆ ಚಿಕ್ಕಮಗಳೂರಿಗೇ ಹೋಗಬೇಕಾಗುತ್ತದೆ” ಎಂದು ದೊರೆಸ್ವಾಮಿಯವರ ಮುಂದೆ ಪ್ರಸ್ತಾಪಿಸಿದಾಗ ಅವರು “ನಡೀರಿ ಹೋಗೋಣ” ಎಂದು ಎಲ್ಲರಿಗಿಂತ ಮೊದಲು ಸಜ್ಜಾದರು!

ದೊರೆಸ್ವಾಮಿಯವರನ್ನು ಆರಾಮಾಗಿ ಚಿಕ್ಕಮಗಳೂರಿಗೆ ಕರೆದುಕೊಂಡು ಹೋಗಲೆಂದು ನನ್ನ ಪುಟ್ಟ ಸ್ಯಾಂಟ್ರೊ ಕಾರ್ ಬದಲಾಗಿ ನನ್ನ ತಂಗಿಯ ಇನ್ನೋವಾ ಕಾರ್ ಪಡೆದೆ. ಅವತ್ತು ಭಾನುವಾರ ಬೆಳಗ್ಗೆ ದೊರೆಸ್ಟಾಮಿಯವರ ಸಂಬಂಧಿಕರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತಾದ್ದರಿಂದ ಅವರು ಬೆಳಗ್ಗೆಯೇ ಮನೆಯಿಂದ ತಮ್ಮ ಬ್ಯಾಗ್ ಹಿಡಿದು ಹೊರಟಿದ್ದರು. ಮಧ್ಯಾಹ್ನ ಬನಶಂಕರಿಯ ಸುಚಿತ್ರಾ ಫಿಲಂ ಸೊಸೈಟಿ ಆವರಣದಿಂದ ನಾನು ಮತ್ತು ಶಿವಸುಂದರ್ ದೊರೆಸ್ವಾಮಿಯವರನ್ನು ಕರೆದುಕೊಂಡು ಚಿಕ್ಕಮಗಳೂರಿಗೆ ಹೊರಟೆವು.

ನೆಲಮಂಗಲ ದಾಟುವ ಹೊತ್ತಿಗೆ ಊಟದ ಸಮಯವಾಗಿತ್ತು. ದುರದೃಷ್ಟವಶಾತ್ ಆ ಹೆದ್ದಾರಿಯಲ್ಲಿ ಅಚ್ಚುಕಟ್ಟಾದ ಸಸ್ಕಾಹಾರಿ ಹೋಟೆಲ್‍ಗಳಿಗಿಂತ ಹೆಚ್ಚಾಗಿ ಡಾಬಾಗಳೇ ಇವೆ. ಒಂದು ಡಾಬಾದ ಮುಂದೆ ಕಾರ್ ನಿಲ್ಲಿಸಿ ದೊರೆಸ್ವಾಮಿಯವರಿಗೆ ಅನ್ನ-ಸಾರು, ಮೊಸರನ್ನ ಇದೆಯೇ ಎಂದು ವಿಚಾರಿಸಿದೆವು. ಆಗ ದೊರೆಸ್ವಾಮಿಯವರು “ನನಗೆ ಪರೋಟ, ಮೊಸರನ್ನ ಮತ್ತು ಪುಟ್ಟ ಐಸ್‍ಕ್ರೀಮ್ ಬೇಕು” ಎಂದರು. ಡಾಬಾಗಳಲ್ಲಿ ‘ಗುಂಡು ಮತ್ತು ತುಂಡು’ ಸಾಮಾನ್ಯವಾದ್ದರಿಂದ ಅವರು ಕಾರಿನಲ್ಲೇ ಊಟ ಮಾಡುವುದಾಗಿ ಹೇಳಿದರು. ಒಳಗೆ ಹೋದ ನಾನು ವೈಟರ್ ಒಬ್ಬನಿಗೆ “ಹೊರಗೆ ಕಾರಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ಟಾಮಿಯವರಿದ್ದಾರೆ. ಅವರಿಗೆ ಬೇಕಿದ್ದನ್ನು ಕೊಡು” ಎಂದೆ. ಹೊರಕ್ಕೆ ದೌಡಾಯಿಸಿದ ಆತ ದೊರೆಸ್ವಾಮಿಯವರ ಪಾದಗಳಿಗೆ ನಮಸ್ಕರಿಸಿ, ನಿಮ್ಮನ್ನು ಟಿವಿಯಲ್ಲಿ ನೋಡಿದ್ದೆ. ಇವತ್ತು ನಿಮ್ಮ ದರ್ಶನದ ಜೊತೆಗೆ ನಿಮ್ಮ ಸೇವೆ ಮಾಡುವ ಅವಕಾಶ ನನಗೆ ಸಿಕ್ಕಿದೆ. ಏನು ಬೇಕು ಹೇಳಿ ಸಾರ್” ಎಂದು ಅವರ ನೆರವಿಗೆ ನಿಂತ.

ನಾವು ಊಟ ಮುಗಿಸಿ ಹೊರಗೆಬಂದಾಗ ಬಹಳಷ್ಟು ಜನ ದೊರೆಸ್ವಾಮಿಯವರನ್ನು ಮುತ್ತಿಕೊಂಡಿದ್ದರು. ಎಲ್ಲರೂ ಅಭಿಮಾನದಿಂದ, ಗೌರವದಿಂದ ದೊರೆಸ್ವಾಮಿಯವರನ್ನು ಮಾತನಾಡಿಸುತ್ತಿದ್ದರು. “ಬೀಡಾ ಬೇಕಾ ಸಾರ್?” ಎಂದು ಕೇಳಿದೆ. “ಸ್ವೀಟ್ ಬೀಡಾ ಬೇಕು ಆದರೆ ಅದರಲ್ಲಿ ತಂಬಾಕು ಇರಬಾರದು” ಎಂದರು. ಬೀಡಾ ಅಂಗಡಿ ಮುಂದೆ ಇಬ್ಬರು ಯುವಕರು ನಿಂತಿದ್ದರು. “ದೊರೆಸ್ವಾಮಿಯವರ ಬಗ್ಗೆ ಕೇಳಿದ್ದೀರಾ, ಅವರು ಕಾರ್‍ನಲ್ಲಿ ಕೂತಿದ್ದಾರೆ. ಅಂತಹವರನ್ನು ಭೇಟಿ ಆಗುವ ಅವಕಾಶ ನಿಮಗೆ ಮುಂದೆ ಸಿಗಲಾರದು, ಹೋಗಿ ಮಾತನಾಡಿಸಿ” ಎಂದೆ. ಇಬ್ಬರೂ ಮಾತನಾಡಿಸಿ ಬಂದಾಗ “ಇವರೇ ಅಲ್ವಾ ಮೇಡಂ ಡಿ.ಕೆ.ಶಿವಕುಮಾರ್ ವಿರುದ್ಧ ಹೋರಾಟ ಮಾಡುತ್ತಿರುವುದು, ಟಿವಿಯಲ್ಲಿ ನೋಡಿದ್ವಿ ಎಂದರು.

ಮಾರ್ಗಮಧ್ಯದಲ್ಲಿ ನಾನು ಒಂದಿಷ್ಟು ಹೊತ್ತು ತೂಕಡಿಸಿದರೂ, ದೊರೆಸ್ವಾಮಿಯವರು ಮಾತ್ರ ಎಚ್ಚರವಾಗಿಯೇ ಇದ್ದರು.

ಚಿಕ್ಕಮಗಳೂರಿನಲ್ಲಿ ನಮ್ಮೆಲ್ಲರಿಗೆ ಐಬಿಯಲ್ಲಿ ರೂಮುಗಳನ್ನು ಕಾದಿರಿಸಿದ್ದೆವು. ಆದರೂ ದೊರೆಸ್ವಾಮಿಯವರು ತಮ್ಮ ಅಣ್ಣನ ಅಳಿಯನ ಮನೆಯಲ್ಲಿ ತಂಗುವುದಾಗಿ ಹೇಳಿದರು. ಆ ಅಳಿಯನ ಮನೆ ಶಂಕರಮಠದ ಹತ್ತಿರವಿದೆ ಎಂಬುದು ಅವರಿಗೆ ಗೊತ್ತಿತ್ತೇ ಹೊರತು ಸರಿಯಾದ ಅಡೆಸ್ ಆಗಲಿ, ಫೋನ್ ನಂಬರ್ ಆಗಲಿ ಅವರಿಗೆ ಗೊತ್ತಿರಲಿಲ್ಲಿ ಕಾರ್ ನಿಲ್ಲಿಸಿ ಡೈರೆಕ್ಷನ್ ಕೇಳಿದ ಕಡೆಯೆಲ್ಲ ಜನ ದೊರೆಸ್ವಾಮಿಯವರನ್ನು ಗುರುತಿಸಿ ಮಾತನಾಡಿಸುತ್ತಿದ್ದರು.

ಕೊನೆಗೂ ಆ ಮನೆ ಸಿಕ್ಕಿತು. “ಬೆಳಗ್ಗೆ ಎಲ್ಲರೂ ಇಲ್ಲಿಗೆ ತಿಂಡಿಗೆ ಬನ್ನಿ” ಎಂದ ದೊರೆಸ್ವಾಮಿಯವರು ನಮ್ಮನ್ನು ಬೀಳ್ಕೊಟ್ಟರು: ಅವತ್ತು ಬೆಂಗಳೂರಿನಲ್ಲಿ ಕಾರ್ ಹತ್ತಿದ್ದ ಅವರು ಎಲ್ಲೂ ಇಳಿದಿರಲಿಲ್ಲ. ಆದರೂ ಅವರಿಗೆ ಒಂದಿಷ್ಟೂ ದಣಿವಾಗಿರಲಿಲ್ಲ!

ಮಾರನೆ ದಿನ ಬೆಳಗ್ಗೆ ಒಂಭತ್ತೂವರೆಗೆ ಅವರನ್ನು ಅಲ್ಲಿಂದ ಕರೆದುಕೊಂಡು ಡಿಸಿ ಆಫೀಸಿಗೆ ಹೋದೆವು. ಅಲ್ಲಿ ಡಿಸಿ ಮತ್ತು ಎಸ್‍ಪಿ ಅವರೊಂದಿಗೆ ಚರ್ಚಿಸಿದ ನಂತರ ಐಬಿಗೆ ಬಂದೆವು.

ನೂರ್ ಮತ್ತು ಸಿರಿಮನೆ ಅವರು ಬರುತಿದ್ದಂತೆ ನೂಕುನುಗ್ಗಲು ಶುರುವಾಯಿತು. ಒಂದೆಡೆ ಎಲ್ಲರಿಗೂ ಅವರನ್ನು ಸ್ವಾಗತಿಸುವ ಆಸೆ, ಇನ್ನೊಂದೆಡೆ ಮಾಧ್ಯಮದವರಿಗೆ ಹತ್ತಿರದಿಂದ ಫೋಟೋ ಮತ್ತು ವೀಡಿಯೋ ಹಿಡಿಯುವ ತವಕ. ಆ ನೂಕಾಟದಲ್ಲಿ ಮಾಧ್ಯಮದವರೇ ಪರಸ್ಪರ ಜಗಳ ಪ್ರಾರಂಭಿಸಿದರು. ಎಷ್ಟೇ ಪ್ರಯತ್ನಪಟ್ಟರೂ ಮಾಧ್ಯಮದವರನ್ನು ನಿಯಂತ್ರಿಸಲಾಗಲಿಲ್ಲ. ಇದೆಲ್ಲ ನಡೆಯುತ್ತಿದ್ದಾಗ ಒಬ್ಬರು ಬಂದು “ದತ್ತಣ್ಣ (ವೈ.ಎಸ್.ವಿ.ದತ್ತ) ನಿಮಗೆ ಅಭಿನಂದನೆಗಳನ್ನು ಕಳುಹಿಸಿದ್ದಾರೆ” ಎಂದು ನನ್ನ ಕೈಗೆ ಒಂದು ಹೂವಿನಹಾರವನ್ನು ಕೊಟ್ಟರು. ಅದನ್ನು ನೂರ್ ಝುಲ್ಫಿಕರ್ ಅವರಿಗೆ ಕೊಟ್ಟು “ದೊರೆಸ್ವಾಮಿಯವರಿಗೆ ಥ್ಯಾಂಕ್ಸ್ ಹೇಳಿ” ಎಂದೆ. ಅವರು ಹಾರವನ್ನು ದೊರೆಸ್ಟಾಮಿಯವರಿಗೆ ಹಾಕಿ ಥ್ಯಾಂಕ್ಸ್ ಹೇಳಿದರು.

ಆಮೇಲೆ ಎಲ್ಲರೂ ಡಿಸಿ ಕಚೇರಿಗೆ ಹೋಗಿ ನಿಯಮದ ಪ್ರಕಾರ ನೂರ್ ಹಾಗು ಸಿರಿಮನೆಯವರನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಿದೆವು. ನೂರ್ ಮತ್ತು ಸಿರಿಮನೆಯವರ ಪತ್ರಿಕಾಹೇಳಿಕೆ ಪ್ರಕ್ರಿಯೆಗಳು ಮುಗಿದನಂತರ ನಾನು “ಸರ್, ಒಂದು ಚರ್ಚಾಸಭೆಯನ್ನು ಏರ್ಪಡಿಸಿದ್ದಾರೆ. ಅದನ್ನು ಮುಗಿಸಿದಕೂಡಲೇ ಬೆಂಗಳೂರಿಗೆ ಹೊರಡೋಣ” ಎಂದೆ. ಆಗ ದೊರೆಸ್ವಾಮಿಯವರು ’ಇಲ್ಲ ನಾನು ಬಳ್ಳಾರಿಗೆ ಹೋಗುತ್ತೇನೆ ಎಂದು ಬಾಂಬ್’ ಸಿಡಿಸಿದರು. “ಅಲ್ಲಾ ಸಾರ್, ನೀವು ಹೇಗೆ ಬಳ್ಳಾರಿಗೆ ಹೋಗುತ್ತೀರಿ?” ಎಂದು ಅಚ್ಚರಿಯಿಂದ ಕೇಳಿದೆ. “ನನ್ನನ್ನ ಕರೆದುಕೊಂಡು ಹೋಗಲು ಬಂದಿದ್ದಾರೆ” ಎಂದರು. “ಅವರು ಯಾರು? ಯಾವುದರಲ್ಲಿ ನಿಮ್ಮನ್ನು ಕರೆದುಕೊಂಡು ಹೋಗುತ್ತಾರೆ ಎಂದೆಲ್ಲ ಗೊತ್ತಾದ ಮೇಲೇ ನಾನು ನಿಮ್ಮನ್ನು ಅವರ ಜೊತೆ ಕಳಿಸೋದು” ಎಂದೆ. ಅದಕ್ಕೆ ದೊರೆಸ್ವಾಮಿಯವರು “ಓಹೋ, ಇವರಿಬ್ಬರನ್ನು ಹಸ್ತಾಂತರಿಸಿದ್ದು ಆಯಿತು. ಈಗ ನನ್ನನ್ನೂ ಹಸ್ತಾಂತರಿಸುತ್ತೀಯಾ!” ಎಂದು ಜೋಕ್ ಮಾಡಿದರು. “ಸರ್, ನೀವು ಇವತ್ತು ನಮ್ಮೊಂದಿಗೆ ಬೆಂಗಳೂರಿಗೆ ವಾಪಾಸ್ ಹೋಗಬೇಕಿತ್ತು ಆದರೆ ನೀವೀಗ ಬೇರೆಲ್ಲಿಗೋ ಹೊರಟಿದ್ದೀರಿ. ಮನೆಯವರು ಏನಂತಾರೆ?” ಅಂದೆ. “ಅವಳು ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಟ್ಟಿದ್ದಾಳೆ” ಎಂದ ಅವರು ಜೋರಾಗಿ ನಕ್ಕರು.

ಐಬಿಗೆ ಹಿಂದಿರುಗಿದಾಗ ದೊರೆಸ್ವಾಮಿಯವರು ಮಂಚದ ಮೇಲೆ ಕಾಲು ಚಾಚಿಕೊಂಡು ಕೂತಿದ್ದಾಗ, ಸುತ್ತುವರಿದಿದ್ದ ಜನರೊಂದಿಗೆ ಮತ್ತೆ ಹರಟಲಾರಂಭಿಸಿದರು. ಆಗ ಶಿವಸುಂದರ್‍ಗೆ ದೊರೆಸ್ವಾಮಿಯವರು ಬಳ್ಳಾರಿಗೆ ಹೊರಟಿದ್ದ ವಿಚಾರ ತಿಳಿಸಿದೆ. “ನನ್ನ ಮನೆಯವರಿಗೆ ಫೋನ್ ಮಾಡಿ ನಾನು ಬಳ್ಳಾರಿಗೆ ಹೋಗಿದ್ದೀನಿ ಅಂತ ತಿಳಿಸಿ ಎಂದರು. ಶಿವಸುಂದರ್ ಅವರು “ಸಾರ್ ಅವರು ಬೈಯಲ್ಲವಾ?” ಎಂದು ಕೇಳಿದರೆ “ಬೈದರೆ ನೀವು ತಾನೆ ಬೈಸಿಕೊಳ್ಳುವುದು, ಬೈಯಿಸಿಕೊಳ್ಳಿ” ಎಂದು ಗಹಗಹಿಸಿ ನಕ್ಕರು.

ದೊರೆಸ್ವಾಮಿಯವರು ಹೊರಡಲು ಸಿದ್ಧರಾಗಿ ನಿಂತಿದರೂ ಸುತ್ತುವರಿದಿದ್ದ ಹಲವಾರು ಅಭಿಮಾನಿಗಳು ಮತ್ತು ಮಾಧ್ಯಮದವರು ಅವರನ್ನು ಮಾತನಾಡಿಸುತ್ತಲೇ ಇದ್ದರು. “ನೀವು ಒಬ್ಬ ರಾಕ್‍ಸ್ಟಾರ್. ನಿಮ್ಮನ್ನ ಜನ ಸುತ್ತುವರಿದೇ ಇರುತ್ತಾರೆ” ಎಂದು ತಮಾಷೆ ಮಾಡುತ್ತಾ ಅವರನ್ನು ಐಬಿಯಿಂದ ಕರೆದುಕೊಂಡು ಹೊರಟೆ.

ಬಳ್ಳಾರಿಯಿಂದ ಬಂದಿದ್ದವರ ಕಾರ್ ಹತ್ತುತ್ತಾ “ನನ್ನ ಜೊತೆ ನನ್ನ ಬ್ಯಾಗನ್ನೂ ಹಸ್ತಾಂತರಿಸಿದ್ದೀ ಏನಮ್ಮ?” ಎಂದು ನಗುನಗುತ್ತಾ ಕೇಳಿದರು. ದೊರೆಸ್ವಾಮಿ ನಿಜಕ್ಕೂ ಅಪರಂಜಿಯಂತಹ ಮನುಷ್ಯ.

ಡಿಸೆಂಬರ್ 24, 2014.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...