Homeಕರ್ನಾಟಕದೊರೆಸ್ವಾಮಿಯವರು ದಾಖಲೆ ಕೊಡಬೇಕಾದ ದುಸ್ಥಿತಿ ಈ ದೇಶಕ್ಕೆ ಬರಬಾರದಿತ್ತು

ದೊರೆಸ್ವಾಮಿಯವರು ದಾಖಲೆ ಕೊಡಬೇಕಾದ ದುಸ್ಥಿತಿ ಈ ದೇಶಕ್ಕೆ ಬರಬಾರದಿತ್ತು

- Advertisement -
- Advertisement -

ಸಂಪಾದಕೀಯ..

ಈ ವಾರ ನಾವು ಮಹಾದಾಯಿ ವಿಚಾರದ ಕುರಿತು ಆಗಿರುವ ಹೊಸ ಬೆಳವಣಿಗೆಗಳ ಕುರಿತು ಬರೆಯಬೇಕಿತ್ತು. ನೀರಿಗಾಗಿ ಬಾಯಾರಿ ಕೂತಿರುವ ಮುಂಬೈ ಕರ್ನಾಟಕದ ಕೆಲವು ಭಾಗಗಳ ರೈತರಿಗೆ ಅನುಕೂಲವೆಷ್ಟು? ವೋಟಿಗಾಗಿ ಬಾಯ್ದೆರೆದು ಕೂತಿರುವ ರಾಜಕಾರಣಿಗಳಿಗೆ ಲಾಭವೆಷ್ಟು ಎನ್ನುವುದನ್ನು ಬಿಡಿಸಿಡುವ ಕರ್ತವ್ಯ ನಮ್ಮ ಮೇಲಿತ್ತು. ಹಾಗೆಯೇ ಕೆಲವು ವಿವಾದಾಸ್ಪದ ತೀರ್ಮಾನಗಳನ್ನು ನೀಡುತ್ತಿರುವ ಸುಪ್ರೀಂಕೋರ್ಟು ಮಹಿಳೆಯರಿಗೆ ಸೇನಾ ಕಮ್ಯಾಂಡ್‌ಅನ್ನು ತೆರೆದಿಡುವ ಮಹತ್ವದ ಸಕಾರಾತ್ಮಕ ತೀರ್ಪು ನೀಡಿದೆ. ಇದರ ಕುರಿತು ಒಂದು ವರದಿ ನಮ್ಮಲ್ಲಿ ಬರಬೇಕಿತ್ತು. ಹಾಗೆಯೇ ಮೊನ್ನೆ ಮೊನ್ನೆ ತಾನೇ ದೆಹಲಿಯಲ್ಲಿ ಜನರ ಬಹುಮತದ ತೀರ್ಪಿನಿಂದ ಮತ್ತೆ ಗದ್ದುಗೆಗೇರಿದ ಕೇಜ್ರಿವಾಲ್, ಕೋಮುಗಲಭೆಯ ಸಂದರ್ಭದಲ್ಲಿ ನಿಷ್ಕಿçಯವಾಗಿದ್ದ ಕುರಿತು ಬರೆಯಬೇಕಿತ್ತು. ಯಾವ ಕಡೆಯೂ ‘ಪಕ್ಷಪಾತ’ (ಸತ್ಯದ ಕಡೆಯೂ!) ಮಾಡದೇ, ರಾಜ್‌ಘಾಟ್‌ನಲ್ಲಿ ಉಪವಾಸ ಕುಳಿತು ತಮ್ಮೆಲ್ಲಾ ಕಾರ್ಯಕರ್ತರು ಹೊಸ ಎಂಎಲ್‌ಎಗಳ ನೇತೃತ್ವದಲ್ಲಿ ಕೋಮು ಹಿಂಸೆ ತಡೆಯಲು ಮುಂದಾಗಬೇಕು ಎಂದೂ ಹೇಳಲಾಗದ ನಿಲುವಿನ ಕುರಿತು ಟಿಪ್ಪಣಿ ಬರೆಯುವ ಅಗತ್ಯವಿತ್ತು.

ಹಾಗೆಯೇ ದೆಹಲಿ ಹೈಕೋರ್ಟ್ನಲ್ಲಿ ಸಂವಿಧಾನ ಪಾಲಿಸಲು ಕಟಿಬದ್ಧರಾಗಿ ಕೂತಿರುವ ಮುರಳೀಧರ್ ‘ಹಿಂಸೆಯಲ್ಲಿ ಗಾಯಗೊಂಡ ವ್ಯಕ್ತಿಗಳನ್ನು ಕೊಂಡೊಯ್ಯುವ ಆಂಬುಲೆನ್ಸ್ಗಳಿಗೆ ರಕ್ಷಣೆ ನೀಡಿ’ ಎಂದು ದೆಹಲಿ ಪೊಲೀಸರಿಗೆ ತಾಕೀತು ಮಾಡಿದ್ದರು; ಅದರ ಮರುದಿನವೇ ಅವರನ್ನು ಪಂಜಾಬಿಗೆ ವರ್ಗಾವಣೆ ಮಾಡಿದ್ದುದರ ಕುರಿತು ವಿವರವಾಗಿ ದಾಖಲಿಸಬೇಕಿತ್ತು.

ಅದ್ಯಾವುದನ್ನೂ ಬರೆಯಲಾಗಿಲ್ಲ. ಏಕೆಂದರೆ ಈ ವಾರ ನಾಡಿನ ಸಾಕ್ಷಿಪ್ರಜ್ಞೆ, ಧೀಮಂತ ವ್ಯಕ್ತಿತ್ವದ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿಯವರನ್ನು ಕೀಳುಮಟ್ಟದಲ್ಲಿ ನಿಂದಿಸಲು ಒಬ್ಬ ಶಾಸಕನಿಂದ ಹಿಡಿದು ಒಂದಿಡೀ ಪರಿವಾರ ತೊಡೆ ತಟ್ಟಿ ನಿಂತಿತು. ಸ್ವತಃ ದೊರೆಸ್ವಾಮಿಯವರೇ ‘ನನ್ನ ವಿಚಾರ ಬಿಡಿ, ಜನರ ಸಮಸ್ಯೆಗಳನ್ನಿಟ್ಟುಕೊಂಡು ಬೀದಿಯಲ್ಲಿ ಹೋರಾಟ ಮಾಡಿ’ ಎಂದು ಕರೆ ನೀಡುವ ಔನ್ನತ್ಯ ಇರುವವರು. ಆದರೆ, ಈ ನೆಲದಲ್ಲಿ ಸ್ವತಂತ್ರ ನಾಗರಿಕರಾಗಿ ಬದುಕುತ್ತಿರುವ ಎಲ್ಲರೂ ಅವರ ಋಣದಲ್ಲಿದ್ದೇವೆ ಎಂಬುದನ್ನು ಮರೆಯಲಾದೀತೇ? ಸ್ವತಃ ಪತ್ರಕರ್ತರೂ ಆಗಿ ಬ್ರಿಟಿಷರಿಗೂ ಸೆಡ್ಡು ಹೊಡೆದಿದ್ದಲ್ಲದೇ, ತುರ್ತು ಪರಿಸ್ಥಿತಿಯಲ್ಲಿ ಸರ್ವಾಧಿಕಾರ ತೋರಿದ ಇಂದಿರಾಗಾಂಧಿಯವರಿಗೆ ನೇರ ಪತ್ರ ಬರೆದು ಕಾರ್ಯಕ್ರಮ ಸಂಘಟಿಸಿದವರು. ಅದಕ್ಕಾಗಿ ಜೈಲಿಗೆ ಹೋದವರು.

ಹಲವು ಪ್ರಶಸ್ತಿಗಳು ಅವರನ್ನು ಹುಡುಕಿ ಬಂದವು; ಲಕ್ಷಾಂತರ ಅಭಿಮಾನಿಗಳು ಇದ್ದಾರೆ; ಸರ್ಕಾರ ನಡೆಸುವವರೂ ಇವರಿಗೆ ಸಹಾಯ ಮಾಡಲು ಹಾತೊರೆಯುತ್ತಾರೆ. ಆದರೆ ಇಂದಿಗೂ ಬಾಡಿಗೆ ಮನೆಯಲ್ಲಿರುವ, ತನ್ನ ಕನಿಷ್ಠ ಅಗತ್ಯಕ್ಕಿಂತ ಹೆಚ್ಚಿನ ಹಣ ಯಾವುದಾದರೂ ಪ್ರಶಸ್ತಿಯಿಂದ ಬಂದರೆ ಅದನ್ನು ಸಾಮಾನ್ಯ ಜನರ ಹೋರಾಟಕ್ಕೆ ನೀಡಿಬಿಡುವ ದೊರೆಸ್ವಾಮಿಯವರ ಮೇಲೆ ನೀಚ ಆರೋಪಗಳನ್ನು ಮಾಡಲಾಗುತ್ತಿದೆ. ಬಹುಶಃ ಇದು ಈ ಕಾಲಧರ್ಮವೇ ಇರಬಹುದು. ಸಾರ್ವಜನಿಕ ಜೀವನದಲ್ಲಿ ಘನತೆಯನ್ನು ಇಟ್ಟುಕೊಂಡಿದ್ದಾರೆ ಎಂದು ಭಾವಿಸಲಾದ ಸುರೇಶ್ ಕುಮಾರ್ ಅವರು ಸಜ್ಜನಿಕೆಯ ಸೋಗನ್ನು ಇಲ್ಲೂ ಪ್ರದರ್ಶಿಸಿ ಬೆತ್ತಲಾಗಿದ್ದಾರೆ. ಹಿಂಸೆ, ದ್ವೇಷ, ಅಧರ್ಮ ಮತ್ತು ಸುಳ್ಳಿನ ಬುನಾದಿಯ ಮೇಲೆ ನಿಂತಿರುವ ಸೌಧದ ನಿವಾಸಿಗಳೆಲ್ಲರೂ ಒಟ್ಟಾಗಿದ್ದಾರೆ.

ಇಂತಹವರು ಹರಿಬಿಡುವ ಸುಳ್ಳಿನ ಸರಮಾಲೆಗೆ ಉತ್ತರವಾಗಿ ದೊರೆಸ್ವಾಮಿಯವರ ಬಳಿ ‘ಜೈಲಿನಲ್ಲಿದ್ದಕ್ಕೆ ಪುರಾವೆ ಕೇಳಿ’ ಅದನ್ನು ಪ್ರಕಟಿಸುವ ಸ್ಥಿತಿಗೆ ಇಂದಿನ ಪತ್ರಿಕೋದ್ಯಮ ಇಳಿದಿದೆ. ಎರಡು ಟಿವಿ ಚಾನೆಲ್‌ಗಳು ಯತ್ನಾಳ್‌ಗಿಂತಲೂ ನೀಚ ಮಟ್ಟಕ್ಕೆ ಇಳಿದುಬಿಟ್ಟವು. ಯಾವುದಕ್ಕೂ ದಾಖಲೆಯಿಲ್ಲದ, ದಾಖಲೆ ಮಟ್ಟದ ಹಿಂಸೆ ಮತ್ತು ಸುಳ್ಳಿನ ಖ್ಯಾತಿ ಹೊಂದಿರುವ ಪ್ರಧಾನಿಯ ಆಡಳಿತದಲ್ಲಿ ದೊರೆಸ್ವಾಮಿಯವರೂ ದಾಖಲೆ ತೋರಿಸಬೇಕಾದ ಪರಿಸ್ಥಿತಿ ಬಂದಿದೆಯೆಂದರೆ ಅಲ್ಲಿಗೆ ಸಮಾಜ ಎಷ್ಟು ಕೊಳೆದಿದೆ ಎಂಬುದನ್ನು ಊಹಿಸಬಹುದು.

ಇಂತಹ ದುಸ್ಥಿತಿಯಲ್ಲೂ ನಮಗೆ ಆಶಾವಾದ ಹುಟ್ಟಿಸುವುದು ದೊರೆಸ್ವಾಮಿಯವರೇ. ಈ ಬೆಳವಣಿಗೆ ಸಂಭವಿಸಿದ ಹೊತ್ತಿನಲ್ಲೂ ತಮ್ಮ ವ್ಯಕ್ತಿತ್ವದ ಘನತೆಯನ್ನು ಉಳಿಸಿಕೊಂಡು ನಾಡಿನ ಬಗ್ಗೆ, ಜನಸಾಮಾನ್ಯರ ಬಗ್ಗೆ ಚಿಂತಿಸುವ ಅವರು ನಮಗೆ ಮಾದರಿ; ನಮ್ಮ ಪತ್ರಿಕೆಯಲ್ಲಿ ಅವರ ಅಂಕಣ ಪ್ರಕಟವಾಗುವುದು ನಮಗೆ ಹೆಮ್ಮೆಯ ಸಂಗತಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...