Homeಕರ್ನಾಟಕದೊರೆಸ್ವಾಮಿಯವರು ದಾಖಲೆ ಕೊಡಬೇಕಾದ ದುಸ್ಥಿತಿ ಈ ದೇಶಕ್ಕೆ ಬರಬಾರದಿತ್ತು

ದೊರೆಸ್ವಾಮಿಯವರು ದಾಖಲೆ ಕೊಡಬೇಕಾದ ದುಸ್ಥಿತಿ ಈ ದೇಶಕ್ಕೆ ಬರಬಾರದಿತ್ತು

- Advertisement -
- Advertisement -

ಸಂಪಾದಕೀಯ..

ಈ ವಾರ ನಾವು ಮಹಾದಾಯಿ ವಿಚಾರದ ಕುರಿತು ಆಗಿರುವ ಹೊಸ ಬೆಳವಣಿಗೆಗಳ ಕುರಿತು ಬರೆಯಬೇಕಿತ್ತು. ನೀರಿಗಾಗಿ ಬಾಯಾರಿ ಕೂತಿರುವ ಮುಂಬೈ ಕರ್ನಾಟಕದ ಕೆಲವು ಭಾಗಗಳ ರೈತರಿಗೆ ಅನುಕೂಲವೆಷ್ಟು? ವೋಟಿಗಾಗಿ ಬಾಯ್ದೆರೆದು ಕೂತಿರುವ ರಾಜಕಾರಣಿಗಳಿಗೆ ಲಾಭವೆಷ್ಟು ಎನ್ನುವುದನ್ನು ಬಿಡಿಸಿಡುವ ಕರ್ತವ್ಯ ನಮ್ಮ ಮೇಲಿತ್ತು. ಹಾಗೆಯೇ ಕೆಲವು ವಿವಾದಾಸ್ಪದ ತೀರ್ಮಾನಗಳನ್ನು ನೀಡುತ್ತಿರುವ ಸುಪ್ರೀಂಕೋರ್ಟು ಮಹಿಳೆಯರಿಗೆ ಸೇನಾ ಕಮ್ಯಾಂಡ್‌ಅನ್ನು ತೆರೆದಿಡುವ ಮಹತ್ವದ ಸಕಾರಾತ್ಮಕ ತೀರ್ಪು ನೀಡಿದೆ. ಇದರ ಕುರಿತು ಒಂದು ವರದಿ ನಮ್ಮಲ್ಲಿ ಬರಬೇಕಿತ್ತು. ಹಾಗೆಯೇ ಮೊನ್ನೆ ಮೊನ್ನೆ ತಾನೇ ದೆಹಲಿಯಲ್ಲಿ ಜನರ ಬಹುಮತದ ತೀರ್ಪಿನಿಂದ ಮತ್ತೆ ಗದ್ದುಗೆಗೇರಿದ ಕೇಜ್ರಿವಾಲ್, ಕೋಮುಗಲಭೆಯ ಸಂದರ್ಭದಲ್ಲಿ ನಿಷ್ಕಿçಯವಾಗಿದ್ದ ಕುರಿತು ಬರೆಯಬೇಕಿತ್ತು. ಯಾವ ಕಡೆಯೂ ‘ಪಕ್ಷಪಾತ’ (ಸತ್ಯದ ಕಡೆಯೂ!) ಮಾಡದೇ, ರಾಜ್‌ಘಾಟ್‌ನಲ್ಲಿ ಉಪವಾಸ ಕುಳಿತು ತಮ್ಮೆಲ್ಲಾ ಕಾರ್ಯಕರ್ತರು ಹೊಸ ಎಂಎಲ್‌ಎಗಳ ನೇತೃತ್ವದಲ್ಲಿ ಕೋಮು ಹಿಂಸೆ ತಡೆಯಲು ಮುಂದಾಗಬೇಕು ಎಂದೂ ಹೇಳಲಾಗದ ನಿಲುವಿನ ಕುರಿತು ಟಿಪ್ಪಣಿ ಬರೆಯುವ ಅಗತ್ಯವಿತ್ತು.

ಹಾಗೆಯೇ ದೆಹಲಿ ಹೈಕೋರ್ಟ್ನಲ್ಲಿ ಸಂವಿಧಾನ ಪಾಲಿಸಲು ಕಟಿಬದ್ಧರಾಗಿ ಕೂತಿರುವ ಮುರಳೀಧರ್ ‘ಹಿಂಸೆಯಲ್ಲಿ ಗಾಯಗೊಂಡ ವ್ಯಕ್ತಿಗಳನ್ನು ಕೊಂಡೊಯ್ಯುವ ಆಂಬುಲೆನ್ಸ್ಗಳಿಗೆ ರಕ್ಷಣೆ ನೀಡಿ’ ಎಂದು ದೆಹಲಿ ಪೊಲೀಸರಿಗೆ ತಾಕೀತು ಮಾಡಿದ್ದರು; ಅದರ ಮರುದಿನವೇ ಅವರನ್ನು ಪಂಜಾಬಿಗೆ ವರ್ಗಾವಣೆ ಮಾಡಿದ್ದುದರ ಕುರಿತು ವಿವರವಾಗಿ ದಾಖಲಿಸಬೇಕಿತ್ತು.

ಅದ್ಯಾವುದನ್ನೂ ಬರೆಯಲಾಗಿಲ್ಲ. ಏಕೆಂದರೆ ಈ ವಾರ ನಾಡಿನ ಸಾಕ್ಷಿಪ್ರಜ್ಞೆ, ಧೀಮಂತ ವ್ಯಕ್ತಿತ್ವದ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿಯವರನ್ನು ಕೀಳುಮಟ್ಟದಲ್ಲಿ ನಿಂದಿಸಲು ಒಬ್ಬ ಶಾಸಕನಿಂದ ಹಿಡಿದು ಒಂದಿಡೀ ಪರಿವಾರ ತೊಡೆ ತಟ್ಟಿ ನಿಂತಿತು. ಸ್ವತಃ ದೊರೆಸ್ವಾಮಿಯವರೇ ‘ನನ್ನ ವಿಚಾರ ಬಿಡಿ, ಜನರ ಸಮಸ್ಯೆಗಳನ್ನಿಟ್ಟುಕೊಂಡು ಬೀದಿಯಲ್ಲಿ ಹೋರಾಟ ಮಾಡಿ’ ಎಂದು ಕರೆ ನೀಡುವ ಔನ್ನತ್ಯ ಇರುವವರು. ಆದರೆ, ಈ ನೆಲದಲ್ಲಿ ಸ್ವತಂತ್ರ ನಾಗರಿಕರಾಗಿ ಬದುಕುತ್ತಿರುವ ಎಲ್ಲರೂ ಅವರ ಋಣದಲ್ಲಿದ್ದೇವೆ ಎಂಬುದನ್ನು ಮರೆಯಲಾದೀತೇ? ಸ್ವತಃ ಪತ್ರಕರ್ತರೂ ಆಗಿ ಬ್ರಿಟಿಷರಿಗೂ ಸೆಡ್ಡು ಹೊಡೆದಿದ್ದಲ್ಲದೇ, ತುರ್ತು ಪರಿಸ್ಥಿತಿಯಲ್ಲಿ ಸರ್ವಾಧಿಕಾರ ತೋರಿದ ಇಂದಿರಾಗಾಂಧಿಯವರಿಗೆ ನೇರ ಪತ್ರ ಬರೆದು ಕಾರ್ಯಕ್ರಮ ಸಂಘಟಿಸಿದವರು. ಅದಕ್ಕಾಗಿ ಜೈಲಿಗೆ ಹೋದವರು.

ಹಲವು ಪ್ರಶಸ್ತಿಗಳು ಅವರನ್ನು ಹುಡುಕಿ ಬಂದವು; ಲಕ್ಷಾಂತರ ಅಭಿಮಾನಿಗಳು ಇದ್ದಾರೆ; ಸರ್ಕಾರ ನಡೆಸುವವರೂ ಇವರಿಗೆ ಸಹಾಯ ಮಾಡಲು ಹಾತೊರೆಯುತ್ತಾರೆ. ಆದರೆ ಇಂದಿಗೂ ಬಾಡಿಗೆ ಮನೆಯಲ್ಲಿರುವ, ತನ್ನ ಕನಿಷ್ಠ ಅಗತ್ಯಕ್ಕಿಂತ ಹೆಚ್ಚಿನ ಹಣ ಯಾವುದಾದರೂ ಪ್ರಶಸ್ತಿಯಿಂದ ಬಂದರೆ ಅದನ್ನು ಸಾಮಾನ್ಯ ಜನರ ಹೋರಾಟಕ್ಕೆ ನೀಡಿಬಿಡುವ ದೊರೆಸ್ವಾಮಿಯವರ ಮೇಲೆ ನೀಚ ಆರೋಪಗಳನ್ನು ಮಾಡಲಾಗುತ್ತಿದೆ. ಬಹುಶಃ ಇದು ಈ ಕಾಲಧರ್ಮವೇ ಇರಬಹುದು. ಸಾರ್ವಜನಿಕ ಜೀವನದಲ್ಲಿ ಘನತೆಯನ್ನು ಇಟ್ಟುಕೊಂಡಿದ್ದಾರೆ ಎಂದು ಭಾವಿಸಲಾದ ಸುರೇಶ್ ಕುಮಾರ್ ಅವರು ಸಜ್ಜನಿಕೆಯ ಸೋಗನ್ನು ಇಲ್ಲೂ ಪ್ರದರ್ಶಿಸಿ ಬೆತ್ತಲಾಗಿದ್ದಾರೆ. ಹಿಂಸೆ, ದ್ವೇಷ, ಅಧರ್ಮ ಮತ್ತು ಸುಳ್ಳಿನ ಬುನಾದಿಯ ಮೇಲೆ ನಿಂತಿರುವ ಸೌಧದ ನಿವಾಸಿಗಳೆಲ್ಲರೂ ಒಟ್ಟಾಗಿದ್ದಾರೆ.

ಇಂತಹವರು ಹರಿಬಿಡುವ ಸುಳ್ಳಿನ ಸರಮಾಲೆಗೆ ಉತ್ತರವಾಗಿ ದೊರೆಸ್ವಾಮಿಯವರ ಬಳಿ ‘ಜೈಲಿನಲ್ಲಿದ್ದಕ್ಕೆ ಪುರಾವೆ ಕೇಳಿ’ ಅದನ್ನು ಪ್ರಕಟಿಸುವ ಸ್ಥಿತಿಗೆ ಇಂದಿನ ಪತ್ರಿಕೋದ್ಯಮ ಇಳಿದಿದೆ. ಎರಡು ಟಿವಿ ಚಾನೆಲ್‌ಗಳು ಯತ್ನಾಳ್‌ಗಿಂತಲೂ ನೀಚ ಮಟ್ಟಕ್ಕೆ ಇಳಿದುಬಿಟ್ಟವು. ಯಾವುದಕ್ಕೂ ದಾಖಲೆಯಿಲ್ಲದ, ದಾಖಲೆ ಮಟ್ಟದ ಹಿಂಸೆ ಮತ್ತು ಸುಳ್ಳಿನ ಖ್ಯಾತಿ ಹೊಂದಿರುವ ಪ್ರಧಾನಿಯ ಆಡಳಿತದಲ್ಲಿ ದೊರೆಸ್ವಾಮಿಯವರೂ ದಾಖಲೆ ತೋರಿಸಬೇಕಾದ ಪರಿಸ್ಥಿತಿ ಬಂದಿದೆಯೆಂದರೆ ಅಲ್ಲಿಗೆ ಸಮಾಜ ಎಷ್ಟು ಕೊಳೆದಿದೆ ಎಂಬುದನ್ನು ಊಹಿಸಬಹುದು.

ಇಂತಹ ದುಸ್ಥಿತಿಯಲ್ಲೂ ನಮಗೆ ಆಶಾವಾದ ಹುಟ್ಟಿಸುವುದು ದೊರೆಸ್ವಾಮಿಯವರೇ. ಈ ಬೆಳವಣಿಗೆ ಸಂಭವಿಸಿದ ಹೊತ್ತಿನಲ್ಲೂ ತಮ್ಮ ವ್ಯಕ್ತಿತ್ವದ ಘನತೆಯನ್ನು ಉಳಿಸಿಕೊಂಡು ನಾಡಿನ ಬಗ್ಗೆ, ಜನಸಾಮಾನ್ಯರ ಬಗ್ಗೆ ಚಿಂತಿಸುವ ಅವರು ನಮಗೆ ಮಾದರಿ; ನಮ್ಮ ಪತ್ರಿಕೆಯಲ್ಲಿ ಅವರ ಅಂಕಣ ಪ್ರಕಟವಾಗುವುದು ನಮಗೆ ಹೆಮ್ಮೆಯ ಸಂಗತಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...

ಕರೂರ್ ಕಾಲ್ತುಳಿತ ಮೃತರ ಕುಟುಂಬಸ್ಥರಿಗೆ ನೀಡಿದ್ದ ಸರ್ಕಾರಿ ಉದ್ಯೋಗವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಈ ನೇಮಕಾತಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆ...

ವಿದ್ಯಾರ್ಥಿಗಳ ಬಂಧನ: ಮತ್ತೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ‘ಕಾಕ್ರೋಚ್ ಜನತಾ ಪಾರ್ಟಿ’

ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೋಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಎಕ್ಸ್ (X) ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ...

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ 'ಜೆನ್ ಝೀ' (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು...

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...