Homeಮುಖಪುಟಇದು ಹಿಂದೂ ಧರ್ಮದ ಮೇಲಿನ ದಾಳಿ ಎಂದು ಅವರಿಗೆ ಅರ್ಥವಾಗುತ್ತಿಲ್ಲ..

ಇದು ಹಿಂದೂ ಧರ್ಮದ ಮೇಲಿನ ದಾಳಿ ಎಂದು ಅವರಿಗೆ ಅರ್ಥವಾಗುತ್ತಿಲ್ಲ..

ಒಬ್ಬ ನಿಜವಾದ ಹಿಂದು ಏಕಕಾಲದಲ್ಲಿ ನಿಜವಾದ ಮುಸ್ಲಿಮನೂ, ಕ್ರಿಶ್ಚಿಯನೂ, ಸಿಖ್ಖನೂ ಆಗಿರುತ್ತಾನೆ. ಅಂದರೆ ಒಬ್ಬ ನಿಜವಾದ ಧರ್ಮಿಯನು ಏಕಕಾಲದಲ್ಲಿ ಬೇರೆ ಧರ್ಮಿಯನೂ ಆಗಿರುತ್ತಾನೆ.

- Advertisement -
- Advertisement -

ಗಾಂಧಿ ಮತ್ತು ಗಾಂಧಿ ವಿಚಾರದ ಮೇಲೆ ಇಂದು ಕಂಡು ಕೇಳರಿಯದಷ್ಟು ದಾಳಿ ನಡೆಯುತ್ತಿದೆ. ಗಾಂಧಿಯ ಮೇಲೆ ಮತ್ತು ಅವರ ಚಿಂತನೆಯ ಮೇಲೆ ದಾಳಿ ಪ್ರಾರಂಭವಾಗಿ ಸುಮಾರು 100 ವರ್ಷಗಳೇ ಕಳೆದಿವೆ. ಆದರೂ ಈ ಮಟ್ಟದ ದಾಳಿಯನ್ನು ಹಿಂದೆ ನೋಡಿಲ್ಲ. ಗಾಂಧಿಯ ಮೇಲೆ ದಾಳಿ ಎಂದರೆ ಈ ದೇಶದ ಆತ್ಮದ ಮೇಲೆ ದಾಳಿ ಎಂಬುದು ದಾಳಿಕೋರರಿಗೆ ಅರ್ಥವಾಗುತ್ತಿಲ್ಲ. ಗಾಂಧಿಯ ಮೇಲೆ ದಾಳಿಗೆ ನಿಜವಾದ ಕಾರಣವೆಂದರೆ ಗಾಂಧಿ ಅಸಲಿ ಹಿಂದೂ ಆಗಿರುವುದೇ ಆಗಿದೆ. ಹಿಂದೂ ಧರ್ಮದ ವಿಶಾಲ ಮನೋಭಾವದ ವಿಚಾರವನ್ನು ತಾನು ಅಳವಡಿಸಿಕೊಂಡು ಆ ವಿಚಾರದ ಹಿನ್ನೆಲೆಯಲ್ಲಿ ಭಾರತೀಯರು ಯೋಚನೆ ಮಾಡಬೇಕು ಎಂದು ಅವರು ಪ್ರತಿಪಾದಿಸತೊಡಗಿದ್ದೇ ಅವರ ಮೇಲೆ ದಾಳಿಗೆ ನಿಜವಾದ ಕಾರಣ. ಹಿಂದೂ ಧರ್ಮವನ್ನು ಕೇವಲ ಭೌತಿಕ ಆಚರಣೆಗಷ್ಟೇ ಸೀಮಿತಗೊಳಿಸಿಕೊಂಡಿದ್ದ ಜನಕ್ಕೆ ಗಾಂಧಿಯವರ ವಿಚಾರ ಸಹಿಸಿಕೊಳ್ಳಲಾಗದ್ದು. ದುರಂತವೆಂದರೆ ಒಂದು ಧರ್ಮದ ಅನುಯಾಯಿ ನಾನು ಎಂದುಕೊಳ್ಳುವವರು ಧರ್ಮದ ಆತ್ಮವನ್ನು ಬಿಟ್ಟು ಅದರ ದೇಹಕ್ಕೆ ತಗುಲಿಕೊಂಡಿರುತ್ತಾರೆ. ಹಿಂದೂ ಧರ್ಮದಲ್ಲೂ ಹಾಗೆಯೇ ಆಗಿದೆ. ಹಾಗಾಗಿ ದೇಹದ ಮೇಲಿರುವ ಗಾಯವನ್ನು ಯಾರಾದರೂ ಒರೆಸಲು ನೋಡಿದರೆ ಆ ನೋವನ್ನು ತಡೆದುಕೊಳ್ಳಲಾಗದೆ ಅವರು ಸೆಟೆದು ನಿಲ್ಲುತ್ತಾರೆ. ಇದು ಗಾಂಧಿ ಒಬ್ಬರಿಗೆ ಮಾತ್ರವಲ್ಲ ಜಡಹಿಡಿದ ಧರ್ಮದ ಆಚರಣೆಯನ್ನು ಪ್ರಶ್ನಿಸಿದವರೆಲ್ಲಾ ಈ ದಾಳಿಯನ್ನು ಎದುರಿಸಿದ್ದಾರೆ. ಮುಂದೆಯೂ ಎದುರಿಸಬೇಕಾಗುತ್ತದೆ.

ಇದು ಕೇವಲ ಹಿಂದೂ ಧರ್ಮಕ್ಕೆ ಮಾತ್ರವಲ್ಲ ಎಲ್ಲಾ ಧರ್ಮಗಳಿಗೂ ಅನ್ವಯಿಸುತ್ತದೆ. ಬೇರೆ ಧರ್ಮಗಳಿಗೆ ಹೋಲಿಸಿದರೆ ಹಿಂದೂ ಧರ್ಮ ತನ್ನ ವಿಮರ್ಶಕರನ್ನೂ, ಸುಧಾರಕರನ್ನೂ ಹೆಚ್ಚು ಸಹನೆಯಿಂದಲೇ ನೋಡುತ್ತಾ ಬಂದಿದೆ ಎನ್ನಬಹುದು. ಏಕೆಂದರೆ ಹೆಚ್ಚಿನ ಹಿಂದೂ ಧರ್ಮಿಯರು ಉದಾರ ಮನೋಭಾವದವರು. ಹಿಂದೂ ಧರ್ಮ ಸ್ವಭಾವತಃ ಉದಾರಿ ಧೋರಣೆಯುಳ್ಳದ್ದು. ಹಿಂದೂ ಧರ್ಮೀಯರ ಈ ಸ್ವಭಾವವೇ ಧರ್ಮವನ್ನು ತಮ್ಮ ಇಚ್ಛೆಯಂತೆ ಮುನ್ನಡೆಸಬೇಕೆನ್ನುವ ಹಠಮಾರಿ ಜನರಿಗೆ ತೊಂದರೆಯಾಗಿದೆ. ಹೆಚ್ಚಿನ ಹಿಂದೂಗಳಿಗೆ ತಮ್ಮ ಧರ್ಮ ಅಪಾಯಕ್ಕೆ ಸಿಲುಕಿದೆ ಎನಿಸಿಲ್ಲ. ಅವರಲ್ಲಿ ಧರ್ಮ ಸಹಿಷ್ಣುತೆಯ ಭಾವ ಸಹಜವಾಗಿ ಇದೆ. ಅವರಂತೆಯೇ ಬೇರೆ ಧರ್ಮಿಯರೂ ನೂರಾರು ವರ್ಷಗಳಿಂದ ಈ ಮಣ್ಣಿನ ನಿಯಮಕ್ಕೆ ಹೊಂದಿಕೊಂಡು ಬದುಕುವುದನ್ನು ಸಾಮಾನ್ಯವಾಗಿ ಕಲಿತಿದ್ದಾರೆ.

ಗಾಂಧಿಯವರು ಹೇಳುವಂತೆ ಒಬ್ಬ ನಿಜವಾದ ಹಿಂದು ಏಕಕಾಲದಲ್ಲಿ ನಿಜವಾದ ಮುಸ್ಲಿಮನೂ, ಕ್ರಿಶ್ಚಿಯನೂ, ಸಿಖ್ಖನೂ ಆಗಿರುತ್ತಾನೆ. ಅಂದರೆ ಒಬ್ಬ ನಿಜವಾದ ಧರ್ಮಿಯನು ಏಕಕಾಲದಲ್ಲಿ ಬೇರೆ ಧರ್ಮಿಯನೂ ಆಗಿರುತ್ತಾನೆ. ಅವನಿಗೆ ಬೇರೆ ಧರ್ಮಗಳು ಶತ್ರುಗಳಾಗಿ ಕಾಣುವುದಿಲ್ಲ. ಆದರೆ ಮತಾಂಧರು ನಿಜವಾದ ಧರ್ಮಿಯರಾಗಿಲ್ಲದಿರುವುದರಿಂದ ಅವರಿಗೆ ಮಿಕ್ಕವರೆಲ್ಲರೂ ಶತ್ರುಗಳಂತೆ ಕಾಣುತ್ತಾರೆ, ತಮ್ಮ ಧರ್ಮವೇ ಶ್ರೇಷ್ಠವಾದ ಧರ್ಮವೆಂದು ಭಾವಿಸಿ ಸದಾ ಧರ್ಮದ ಅಮಲಿನಲ್ಲಿ ತಮ್ಮ ಧರ್ಮಿಯರೂ ಇರುವಂತೆ ನೋಡಿಕೊಳ್ಳುತ್ತಾರೆ. ಗಾಂಧಿ ಎಲ್ಲ ಹಿಂದುಗಳೂ ಉತ್ತಮ ಹಿಂದೂಗಳು ಆಗಬೇಕೆಂದು ಬಯಸಿದರು. ಬಹಿರಂಗ ಹಿಂದುಗಳು ನೀಡುವ ಧರ್ಮದ ವ್ಯಾಖ್ಯೆಗೂ, ಗಾಂಧಿ ನೀಡುವ ಧರ್ಮದ ವ್ಯಾಖ್ಯೆಗೂ ಅಜಗಜಾಂತರ ವ್ಯತ್ಯಾಸ. ಗಾಂಧಿಯ ಧರ್ಮ ಚಿಂತನೆ ಮತ್ತು ಅವರ ನಂಬಿಕೆ ಸೂರ್ಯನಷ್ಟೇ ಪ್ರಖರ. ಇದನ್ನು ಬಹಿರಂಗಿಗಳು ಸಹಿಸರು. ಹಾಗಾಗಿ ಅವರು ಗಾಂಧಿಯ ಮೇಲೆ ಹಲ್ಲೆ ಮಾಡತೊಡಗಿದರು. ಆದ್ದರಿಂದ ಇದು ಅಂತರಂಗಿ ಮತ್ತು ಬಹಿರಂಗಿ ಹಿಂದುಗಳ ನಡುವಿನ ಸಂಘರ್ಷ.

ಇದು ಗಾಂಧಿಗಿಂತ ಮೊದಲು ಧರ್ಮದಲ್ಲಿ ಸುಧಾರಣೆ ತರಲು ಬಯಸಿದ ಎಲ್ಲ ನಾಯಕರು ಅನುಭವಿಸಿದ್ದೇ ಆಗಿದೆ. ಭಾರತವು ಸರ್ವ ಜನಾಂಗದ ಶಾಂತಿಯ ತೋಟವಾಗಿ ಪ್ರಪಂಚದ ಇತರ ರಾಷ್ಟ್ರಗಳಿಗೆ ಮಾದರಿಯಾಗಬೇಕು ಎಂಬದು ಅಂತರಂಗದ ಹಿಂದೂಗಳ ಕನಸು. ಆದರೆ ಬಹಿರಂಗಿಗಳಿಗೆ ರಾಷ್ಟ್ರವೆಂದರೆ ದೇಶದ ಗಡಿ. ಅಂತರಂಗದ ಹಿಂದುಗಳಿಗೆ ರಾಷ್ಟ್ರವೆಂದರೆ ಜನ. ಗಾಂಧಿಗೆ ರಾಷ್ಟ್ರವೆಂದರೆ ನಾವು ನಿರ್ಮಿಸಬೇಕಾದ ಒಂದು ಸಭ್ಯತೆ. ಹೀಗಾಗಿ ಬಹಿರಂಗಿಗಳಿಗೆ ಗಾಂಧಿ ಮತ್ತು ಗಾಂಧಿ ವಿಚಾರ ಅಡಚಣೆಯಾಗಿ ತೋರಿದೆ. ಗಾಂಧಿಯ ಹತ್ಯೆಯನ್ನು ಮಾಡಿದ ತಪ್ಪಿಗಾಗಿ ಅವರು ಸುಮಾರು 60 ವರ್ಷ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿದ್ದರು. ಕಳೆದೆರಡು ಚುನಾವಣೆಗಳಲ್ಲಿ ಬಹಿರಂಗಿಗಳಿಗೆ ಜನತೆ ತೋರಿದ ಬೆಂಬಲವನ್ನು ಅವರು ತಮಗೆ ಅಡ್ಡಗಾಲಾಗಿರುವ ಗಾಂಧಿಯನ್ನೂ ಅವರ ವಿಚಾರವನ್ನೂ ನಾಶ ಮಾಡಲು ನೀಡಿರುವ ಬೆಂಬಲ ಎಂದು ಭಾವಿಸಿದಂತಿದೆ. ಅವರ ಮಾಡಿರುವ ಪಾಪಕ್ಕೆ ಅವರನ್ನು ಸತತವಾಗಿ ಕಾಡುತ್ತಿರುವುದು ಗಾಂಧಿ. ಹಾಗಾಗಿ ಗಾಂಧಿಯನ್ನು ಸಂಪೂರ್ಣವಾಗಿ ಜನಮಾನಸದಿಂದ ದೂರಮಾಡಿಬಿಟ್ಟರೆ ತಮಗೆ ಇನ್ನು ಈ ದೇಶದಲ್ಲಿ ಶತ್ರುವೇ ಇಲ್ಲ ಎಂದು ಅವರು ಭಾವಿಸಿದ್ದಾರೆ.

ಅದಕ್ಕಾಗಿ ಅವರು ತಮಗೆ ದೊರೆತಿರುವ ಅಧಿಕಾರವನ್ನು ಬಳಸಿ ಶತಾಯ ಗತಾಯ ಪ್ರಪಂಚಕ್ಕೆ ಈ ದೇಶ ನೀಡಿದ ದೊಡ್ಡ ಕೊಡುಗೆಯನ್ನು ನಿರ್ನಾಮ ಮಾಡಬೇಕು ಎಂದು ತೀರ್ಮಾನಿಸಿದಂತಿದೆ. ಅವರ ಬೆಂಬಲಕ್ಕೆ ಅಧಿಕಾರದೊಂದಿಗೆ ಆಧುನಿಕ ತಂತ್ರಜ್ಙಾನ ಅವರ ಕೈಗೆ ಸಿಕ್ಕಿರುವುದು ತಮ್ಮ ಅಧರ್ಮಿಯ ವಿಚಾರಗಳನ್ನು ಹರಡಲು ನೆರವಿಗೆ ಬಂದಿದೆ. ಅವರೊಂದಿಗಿರುವ ಅಲ್ಪ ಸಂಖ್ಯೆಯ ಜನರಿಗೆ ಇಷ್ಟು ವರ್ಷ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸಾಧ್ಯವಿರಲಿಲ್ಲ. ಏಕೆಂದರೆ ಅಭಿವ್ಯಕ್ತಿಗೆ ಬೇಕಾದ ಮಾಧ್ಯಮವೇ ಅವರಲ್ಲಿ ಇರಲಿಲ್ಲ. ಈಗ ಈ ಸಾಮಾಜಿಕ ಮಾಧ್ಯಮಗಳ ಮೂಲಕ ವಾಟ್ಸಾಪ್ ವಿಶ್ವವಿದ್ಯಾಲಯಗಳು ಹರಡುವ ಸುಳ್ಳು ವಿಚಾರಗಳು ಮತ್ತು ಅಭಿಪ್ರಾಯಗಳನ್ನು ಅವರು ತಮ್ಮದೇ ಎನ್ನುವ ರೀತಿ ಹಂಚತೊಡಗಿದ್ದಾರೆ. ಆಳವಾದ ತಿಳಿವಳಿಕೆಯಿಲ್ಲದ ಹೊರಗೆ ಕಾಣುವ ಕೆಲ ವಿಚಾರಗಳೇ ದೇಶದ ದೊಡ್ಡ ಸಮಸ್ಯೆ ಎಂದು ಅವರು ಭಾವಿಸುವಂತೆ ಮಾಡಲಾಗಿದೆ. ನಿಜವಾದ ಧರ್ಮಿಯನಿಗೆ ಇರಬೇಕಾದ ಸತ್ಯದ ಹುಡುಕಾಟದ ಮನೋಭಾವವೇ ಇಲ್ಲದ ಈ ಜನತೆಯನ್ನು ನೋಡಿದಾಗ ಜನರು ನಿಜವಾಗಿ ಧರ್ಮ ನಿಷ್ಠರಾಗಿರಲಿಲ್ಲ ಎಂಬುದನ್ನು ಪ್ರಚಲಿತ ವಿದ್ಯಮಾನ ಸಾಬೀತುಮಾಡಿದೆ. ಜನರಿಗೆ ಧರ್ಮದ ಅಫೀಮು ಮಾಡುವಷ್ಟು ದುಷ್ಟ ಪರಿಣಾಮವನ್ನು ಯಾವುದೇ ವಿಚಾರ ಮಾಡದು.

ಗಾಂಧಿ ಧರ್ಮವನ್ನು ರಚನಾತ್ಮಕವಾಗಿ ಸಮಾಜವನ್ನು ನಿರ್ಮಿಸಲು ಬಳಸುವ ಪ್ರಯತ್ನ ಮಾಡಿದರೆ ಈ ಬಹಿರಂಗಿಗಳು ಸಮಾಜವನ್ನು ಒಡೆಯಲು, ಧರ್ಮ ಧರ್ಮಗಳ ಮಧ್ಯೆ ಗೋಡೆ ನಿರ್ಮಿಸಲು ಬಳಸತೊಡಗಿದ್ದಾರೆ. ಎಲ್ಲದಕ್ಕೂ ಚರಿತ್ರೆಯನ್ನು ಉಲ್ಲೇಖಿಸಿ ಮಾತನಾಡುವ ಅವರು ಚರಿತ್ರೆಯಿಂದ ಯಾವ ಪಾಠವನ್ನೂ ಕಲಿತಂತೆ ಕಾಣುತ್ತಿಲ್ಲ. ಈ ದೇಶದ ಜನಕ್ಕೆ ಧರ್ಮ ಬಹುದೊಡ್ಡ ನಂಬಿಕೆಯಾಗಿದೆ. ಅವರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಸರ್ವ ಜನಾಂಗದ ಶಾಂತಿಯ ತೋಟವನ್ನು ನಿರ್ಮಿಸಬಯಸುವವರು ಗಾಂಧೀ ಪ್ರತಿಪಾದಿಸಿದ ಹಿಂದೂ ಧರ್ಮವನ್ನು ಮುಂದಿಟ್ಟುಕೊಂಡು ಮುಂದುವರೆಯುವುದು ಈ ನಿಮಿಷದ ಅಗತ್ಯವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿದ್ಯುತ್ ಖಾಸಗೀಕರಣ ವಿರುದ್ದದ ಹೋರಾಟಕ್ಕೆ ಗೆಲುವು: ಅರ್ಜಿ ಹಿಂಪಡೆದ ಟಾಟಾ ಪವರ್ ಕಂಪನಿ

ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣದ ಹೆಜ್ಜೆ ಇಡಲು ಮುಂದಾಗಿದ್ದ ಟಾಟಾ ಪವರ್ ಕಂಪನಿಗೆ ಭಾರಿ ಹಿನ್ನಡೆಯಾಗಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (KERC) ಮುಂದೆ ರಾಜ್ಯದ 19 ಕಂದಾಯ ಜಿಲ್ಲೆಗಳಿಗೆ ಸಂಬಂಧಿಸಿದಂತೆ ತಾನು...

SIR: ಮತದಾರರ ಮನೆಗೆ ಹೋಗದೆ ಕಚೇರಿಯಲ್ಲೇ ಕುಳಿತು ಫಾರ್ಮ್ ವಿತರಣೆ ಆರೋಪ, BLO ಗಳಿಗೆ ಎಚ್ಚರಿಕೆ ನೀಡಿದ ಆಯೋಗ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದ ಬೆನ್ನಲ್ಲೇ, ರಾಜ್ಯ ಚುನಾವಣಾ ಆಯೋಗವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮತದಾರರ ಮನೆ-ಮನೆಗೆ ಭೇಟಿ...

ಅಳುವ ಕಂದಮ್ಮಗಳನ್ನು ವಾಷಿಂಗ್ ಮೆಷಿನ್‌ನಲ್ಲಿ ಕೂಡಿಹಾಕ್ತಿದ್ದ ಇಬ್ಬರು ಕೇರ್‌ಟೇಕರ್ ಅರೆಸ್ಟ್

ಸಿಲಿಕಾನ್ ಸಿಟಿಯ ಬ್ರೂಕ್‌ಫೀಲ್ಡ್‌ನಲ್ಲಿರುವ ಪ್ರಮುಖ ಐಟಿ ಸಂಸ್ಥೆ 'ಕ್ಯಾಪ್‌ಜೆಮಿನಿ' ಕ್ಯಾಂಪಸ್‌ನ ಡೇ-ಕೇರ್ ಸೆಂಟರ್‌ನಲ್ಲಿ ಪುಟ್ಟ ಕಂದಮ್ಮಗಳನ್ನು ಬಾತ್‌ರೂಮ್ ಹಾಗೂ ವಾಷಿಂಗ್ ಮೆಷಿನ್‌ಗಳಲ್ಲಿ ಕೂಡಿಹಾಕಿ ವಿಕೃತಿ ಮೆರೆದಿದ್ದ ಪ್ರಕರಣದಲ್ಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಪ್ರಕರಣದ...

“ನಾಗರಿಕರು ಸರ್ಕಾರದ ಗುಲಾಮರಲ್ಲ”: ಸಿಎಎ, ಜ್ಞಾನವಾಪಿ ವಿರೋಧಿ ಪ್ರತಿಭಟನೆ ಸಂಬಂಧ ಎಸ್‌ಡಿಪಿಐ ನಾಯಕನ ಗಡಿಪಾರು ಪ್ರಶ್ನಿಸಿದ ಬಾಂಬೆ ಹೈಕೋರ್ಟ್

“ದೇಶದ ನಾಗರಿಕರು ಸರ್ಕಾರದ ಗುಲಾಮರಲ್ಲ. ಕೇವಲ ಸರ್ಕಾರದ ನಿರ್ಧಾರಗಳನ್ನು ವಿರೋಧಿಸುವುದು ಅಥವಾ ಆಡಳಿತ ವ್ಯವಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗುವುದು ಒಬ್ಬ ನಾಗರಿಕನನ್ನು ಗಡಿಪಾರು ಮಾಡಲು ಕಾನೂನಾತ್ಮಕ ಕಾರಣವಾಗಲಾರದು,” ಎಂದು ಬಾಂಬೆ ಹೈಕೋರ್ಟ್‌ ಐತಿಹಾಸಿಕ...

ಗೌರಿಯಕ್ಕ, ಸುರೇಶ್ ಭಟ್ರ ಬಗ್ಗೆ ತಿಳಿಯಲು ಎಕ್ಸ್ ಆರೆಸ್ಸೆಸ್‌ನವರ ಪ್ರಮಾಣ ಪತ್ರ ಬೇಕಿಲ್ಲ

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯಲ್ಲಿ ನಮ್ಮ ಒಡನಾಡಿಯಾಗಿದ್ದ ಎ‌ಐಸಿಸಿ ಕಾರ್ಯದರ್ಶಿಯೂ ಆಗಿರುವ ಪಿ.ವಿ.ಮೋಹನ್‌ರಿಗೆ ವಿಧಾನ ಪರಿಷತ್ ಸದಸ್ಯತ್ವ ಸಿಕ್ಕಿದ್ದು ಸಹಜವಾಗಿಯೇ ನಮಗೆ ಖುಷಿಯಾಗಿತ್ತು. ಈ ನಿಟ್ಟಿನಲ್ಲಿ ಮಂಗಳೂರಿನ ವುಡ್‌ಲ್ಯಾಂಡ್ಸ್ ಹೋಟೆಲಲ್ಲಿ ಕೋಮು ಸೌಹಾರ್ದ...

ಡ್ರಗ್ಸ್ ಮುಕ್ತ ಕರ್ನಾಟಕ ನಮ್ಮ ಗುರಿ: ‘ಆಪರೇಷನ್ RISE’ ಮತ್ತು ‘ಬೇಡ BRO’ ಅಭಿಯಾನಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಕರೆ

ಬೆಂಗಳೂರು: ಮಾದಕ ದ್ರವ್ಯ ಮುಕ್ತ ಕರ್ನಾಟಕವನ್ನು ನಿರ್ಮಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಮಾದಕ ವ್ಯಸನದ ವಿರುದ್ಧ ಯುವಜನತೆ ಮತ್ತು ಸಾರ್ವಜನಿಕರು ಕೈಜೋಡಿಸಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ...

ಬೆಂಗಳೂರಿನ 3 ಪ್ರಮುಖ ಮಾರ್ಗಗಳಲ್ಲಿ ಟೋಲ್ ದರ ಭಾರಿ ಹೆಚ್ಚಳ: ಇಂದಿನಿಂದಲೇ ಜಾರಿ 

ಬೆಂಗಳೂರು: ಸಿಲಿಕಾನ್ ಸಿಟಿಯ ವಾಹನ ಸವಾರರಿಗೆ ಜುಲೈ ಒಂದರಿಂದಲೇ ಅನ್ವಯವಾಗುವಂತೆ ಬೆಲೆ ಏರಿಕೆಯ ಭಾರಿ ಬಿಸಿ ತಟ್ಟಿದೆ. ಬೆಂಗಳೂರಿನ ಪ್ರಮುಖ ಸಂಪರ್ಕ ರಸ್ತೆಗಳಾದ ನೈಸ್ ರಸ್ತೆ (NICE Road), ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್...

ಕೊಪ್ಪಳದ ಬೋಚನಹಳ್ಳಿಯಲ್ಲಿ ದಲಿತರ ಮೇಲೆ ಹಲ್ಲೆ: ದೂರು-ಪ್ರತಿದೂರು; ಹೋರಾಟಕ್ಕೆ ಸಂಘಟನೆಗಳ ನಿರ್ಧಾರ

ಮೊಹರಂ ಮೆರವಣಿಗೆ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ದಲಿತರ ಮನೆಗಳಿಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕೊಪ್ಪಳ ತಾಲೂಕಿನ ಅಳವಂಡಿ ಬಳಿಯ ಬೋಚನಹಳ್ಳಿ ಗ್ರಾಮದಲ್ಲಿ ನಡೆದಿದೆ. ಜೂನ್ 25ರಂದು ಗ್ರಾಮದಲ್ಲಿ ಮೊಹರಂ ಮೆರವಣಿಗೆ...

ಎನ್ಯೂಮರೇಷನ್ ಫಾರಂ ಭರ್ತಿ ಮಾಡುವ ಮೂಲಕ SIR ಗೆ ಚಾಲನೆ ನೀಡಿದ ಸಿಎಂ ಡಿ.ಕೆ ಶಿವಕುಮಾರ್

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು (ಜೂನ್ 30) ಮಂಗಳವಾರ ತಮ್ಮ ಸದಾಶಿವನಗರ ನಿವಾಸದಲ್ಲಿ ದಾಖಲಾತಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸುವ ಮೂಲಕ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಅಭಿಯಾನಕ್ಕೆ ಅಧಿಕೃತವಾಗಿ...

‘ಆಪರೇಷನ್ ಸಿಂಧೂರ್‌’ ಕುರಿತು ಸಂಸತ್ತಿಗೆ ಸುಳ್ಳು ಮಾಹಿತಿ: ರಾಜನಾಥ್ ಸಿಂಗ್ ವಿರುದ್ಧ ಕಾಂಗ್ರೆಸ್‌ನಿಂದ ಹಕ್ಕುಚ್ಯುತಿ ನೋಟಿಸ್

ಕೇಂದ್ರ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ವಿರುದ್ಧ ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ ಹಕ್ಕುಚ್ಯುತಿ ನೋಟಿಸ್ ನೀಡಿದೆ. ಕಾಂಗ್ರೆಸ್ ಸಂಸದ ಕೆ. ಸಿ. ವೇಣುಗೋಪಾಲ್ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಈ ಕುರಿತು ಪತ್ರ ಬರೆದಿದ್ದು,...