Homeಮುಖಪುಟಕೊಡಗು ದುರಂತದ ಹೊಣೆ ಮತ್ತು ಪುನರ್ ನಿರ್ಮಾಣದ ಸವಾಲುಗಳು

ಕೊಡಗು ದುರಂತದ ಹೊಣೆ ಮತ್ತು ಪುನರ್ ನಿರ್ಮಾಣದ ಸವಾಲುಗಳು

- Advertisement -
- Advertisement -

ಕೊಡಗಿನ ದುರಂತಕ್ಕೆ ಎಲ್ಲರೂ ಸ್ಪಂದಿಸಿದ್ದಾರೆ. ಕೇರಳದ ದುರಂತದ ಮುಂದುವರಿಕೆಯೋ ಎಂಬಂತೆ ಕೊಡಗಿನ ಭೂಕುಸಿತ ಘಟಿಸಿದೆ. ನೂರಾರು ಜನ ಮನೆ ತೋಟ ಕಳೆದುಕೊಂಡಿದ್ದರೆ, ಸಾವಿರಾರು ಜನ ಪ್ರಕೃತಿಯ ಮುನಿಸಿಗೆ ಹೆದರಿ ಊರು ಬಿಟ್ಟಿದ್ದಾರೆ. ಸಂಪರ್ಕ ರಸ್ತೆಗಳೆನ್ನುವ ರಸ್ತೆಗಳೆಲ್ಲವೂ ಕುಸಿದು ಹೋಗಿವೆ. ಮುಖ್ಯತಃ ಬಯಲು ಸೀಮೆ ಮತ್ತು ಕರಾವಳಿಯನ್ನು ಸಂಪರ್ಕಿಸುವ ಜೀವ ನಾಡಿಯಂತಿರುವ ಮುಖ್ಯ ಹೆದ್ದಾರಿಗಳು ಸಂಪೂರ್ಣ ನಾಶವಾಗಿವೆ. ಒಟ್ಟಾರೆ ನಷ್ಟವನ್ನು ಅಂದಾಜು ಮಾಡಲು ಇನ್ನಷ್ಟು ಸಮಯ ಬೇಕು. ಕೊಡಗಿನ ದುರಂತದ ತುರ್ತು ಪರಿಹಾರಗಳಿಗೆ ಎಲ್ಲರೂ ಸ್ಪಂದಿಸುತ್ತಿರುವುದು ಶ್ಲಾಘನೀಯ. ಅದರಿಂದಾಚೆ, ಈ ವರ್ಷಾಂತ್ಯದ ವರೆಗೆ ಮತ್ತು ದೀರ್ಘಕಾಲೀನ ಪರಿಹಾರಗಳ ಬಗ್ಗೆಯೂ ಯೋಚಿಸಬೇಕಾಗಿದೆ.
ಈ ಭೂಕುಸಿತ ಅರ್ಧಕ್ಕರ್ಧ ಮನುಷ್ಯ ಹಸ್ತಕ್ಷೇಪದಿಂದ ಎಂಬುದು ನಿರ್ವಿವಾದ. ಕೊಡಗಿನ ಸ್ಥಳೀಯ ಸಂಸ್ಕøತಿ ಉಳಿದ ಮಲೆನಾಡಿನ ಹಾಗೆ ಬಯಲು ಸೀಮೆಗಿಂತ ಭಿನ್ನ. ಎಲ್ಲರೂ ತಮ್ಮ ಜಮೀನಿನಲ್ಲಿ ಮನೆ ಕಟ್ಟಿಕೊಳ್ಳುತ್ತಾರೆ. ಅದಕ್ಕೆ ರಸ್ತೆಯನ್ನೂ ಮಾಡಿಕೊಳ್ಳುತ್ತಾರೆ. ಇವೆರಡಕ್ಕೂ ಮನೆ ಹಿಂದಿನ ಗುಡ್ಡವನ್ನು ಬಗೆಯಬೇಕು! ಹಾಗೇ ಸರ್ಕಾರೀ ರಸ್ತೆಗಳು ಅಗಲೀಕರಣಗೊಂಡು ನಿರ್ಮಾಣಗೊಂಡಲ್ಲೆಲ್ಲಾ ರಸ್ತೆಗಳನ್ನು ಭೂಮಿ ನುಂಗಿ ಹಾಕಿದೆ. ಜೆಸಿಬಿಯಂಥಾ ಯಂತ್ರಗಳನ್ನು ಬಳಸಿದ ಕಾರಣ ಭೂಮಿ ಒತ್ತಡಕ್ಕೊಳಗಾಗಿದೆ ಎಂಬ ಅಂಶ ಚರ್ಚಿಸಬೇಕಾದ ಸಂಗತಿ.
ಕಾಫಿ ತೋಟಗಳ ಎಗ್ಗಿಲ್ಲದ ವಿಸ್ತರಣೆ ಇನ್ನೊಂದು ಕಾರಣ. ಈ ವಿಸ್ತರಣೆಯಲ್ಲಿ ಜಮೀನಿನಲ್ಲಿದ್ದ ಕಾಡುಮರಗಳನ್ನು ಬಹುತೇಕ ಟಿಂಬರ್ ಅಂತ ಮಾರಿಯಾಗಿದೆ. ಅಲ್ಲಿ ಉಳಿದಿರುವುದು ಸಿಲ್ವರ್‍ನಂಥಾ ಮೃದು ಮರಗಳು ಮಾತ್ರಾ. ಕೊಡಗಿನ ಮಣ್ಣು ಕೊಂಚ ಮರಳು ಮಿಶ್ರಿತ. ಅದು ಲ್ಯಾಟರೈಟ್ ಕುಲಕ್ಕೆ ಸೇರಿದ್ದಲ್ಲ. ಕೊಡಗಿನ ಅಂಚಿನ ಭಾಗಗಳು ತಾಂತ್ರಿಕವಾಗಿ ಲ್ಯಾಟರೈಟ್ ಆದರೂ ಅದರಲ್ಲಿ ಕ್ಲೇ ಅಂಶ ಯಥೇಚ್ಛ ಇದೆಯಂತೆ. ಈ ಕಾರಣಕ್ಕೇ ಅದು ಬೇಗ ಸಡಿಲವಾಗುತ್ತದೆ. ಮರಗಳು ದೈತ್ಯಾಕಾರವಾಗಿ ಬೆಳೆಯಲೂ ಇದೇ ಕಾರಣ. ಬೇರು ಇಳಿಸುವುದು ಸುಲಭ. ಇವು ಗ್ರಾಮೀಣ ಪರಿಸರದ ಭೂಕುಸಿತದ ಬಗ್ಗೆ.
ಇನ್ನು ಮಡಿಕೇರಿಯಂಥಾ ಪಟ್ಟಣದಲ್ಲಿ ಹೊಸ ಬಡಾವಣೆಗಳ ಮನೆಗಳನ್ನು ಕಟ್ಟುವಾಗ ಜಲ್ಲಿ ಸಿಮೆಂಟ್ ಕಬ್ಬಿಣದ ಮೇಲೆ ವಿಶ್ವಾಸವಿಟ್ಟೇ ಕಟ್ಟಿದ್ದು ಹೊರತು, ಮಣ್ಣಿನ ಗುಣ ಸ್ವಭಾವದ ಬಗ್ಗೆ ಯಾವ ಎಂಜಿನಿಯರೂ ತಲೆ ಕೆಡಿಸಿಕೊಂಡಿಲ್ಲ. ಬೆಂಕಿ ಪೊಟ್ಟಣ ಇಟ್ಟ ಹಾಗೆ ಗುಡ್ಡದ ಇಳಿಜಾರು ಪೂರ್ತಿ ಮನೆಗಳು ಕಟ್ಟಿದ ರೀತಿ ಅಪಾಯವನ್ನು ಮೈಮೇಲೆ ಎಳೆದುಕೊಂಡ ಪರಿಯನ್ನು ಅನಾವರಣಗೊಳಿಸಿದೆ.
ಕುಶಾಲನಗರದಂಥಾ ಊರುಗಳಲ್ಲಿ ನದೀ ಪಾತ್ರದ ಗದ್ದೆಗಳಲ್ಲಿ ಲೇ ಔಟ್ ಮಾಡುವ ಖಯಾಲಿ ಶುರುವಾಗಿದ್ದೇ, ಈ ಬಾರಿ ಅಲ್ಲೆಲ್ಲಾ ನೀರು ನುಗ್ಗಲು ಕಾರಣವಾಗಿದೆ.
ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮಟ್ಟದ ರಸ್ತೆಗಳನ್ನು ನಿರ್ಮಿಸಿದ ರೀತಿ ಎಷ್ಟು ಅವೈಜ್ಞಾನಿಕ ಎಂಬುದಕ್ಕೆ ಈ ರಸ್ತೆಗಳೆಲ್ಲಾ ಸರ್ವ ನಾಶವಾಗಿರುವುದೇ ಪುರಾವೆ. ಇವನ್ನು ಪೋಸ್ಟ್‍ಮಾರ್ಟಮ್ ಎಂದು ಭಾವಿಸೋಣ.
ಮುಂದಿನ ಸರಣಿ ಸಮಸ್ಯೆಗಳೇನು ಎಂಬುದನ್ನು ಗಮನಿಸೋಣ. ಈ ಬಾರಿಯ ಮಳೆಯಿಂದಾಗಿ ಕಾಫಿ ಬೆಳೆ ಕೊಳೆ ರೋಗಕ್ಕೆ ತುತ್ತಾಗಿ ನೆಲ ಕಚ್ಚುವ ಸಾಧ್ಯತೆ ನಿಚ್ಚಳವಾಗಿದೆ. ತೋಟಗಳೆಲ್ಲಾ ಅಸ್ತವ್ಯಸ್ತ ಆಗಿರುವ ಕಾರಣ ಇದನ್ನೇ ನಂಬಿರುವ ಸಾವಿರಾರು ಕೂಲಿಕಾರ ಕುಟುಂಬಗಳು ಬೀದಿಗೆ ಬೀಳುತ್ತಾರೆ, ಮುಂದಿನ ಮೂರು ನಾಲ್ಕು ತಿಂಗಳು ಕೂಲಿ ಸೃಷ್ಟಿಯಾಗುವ ಸಾಧ್ಯತೆಗಳೇ ಇಲ್ಲ. ಇದರೊಂದಿಗೆ ಆದಿವಾಸಿಗಳು, ದಲಿತ ಕಾರ್ಮಿಕರ ಗುಡಿಸಲುಗಳೆಲ್ಲಾ ಮೂರಾಬಟ್ಟೆ ಆಗಿರುವ ವರದಿಗಳಿವೆ. ಇವೆಲ್ಲಾ ಫೋಟೋಜೆನಿಕ್ ಅಲ್ಲದ ಕಾರಣ ಟಿವಿ ಚಾನೆಲುಗಳ ಕಣ್ಣಿಗೆ ಬಿದ್ದಿಲ್ಲ.
ಊರಿನ ಸಂಪರ್ಕ ರಸ್ತೆಗಳೆಲ್ಲಾ ನಾಶವಾಗಿರುವ ಕಾರಣ ಹೊರಹೋಗಲೂ ವ್ಯವಸ್ಥೆ ಇಲ್ಲ. ಸ್ಥಳೀಯವಾಗಿ ಸಂಪನ್ಮೂಲಗಳೂ ಇಲ್ಲ. ನೆನಪಿಡಿ, ಮಳೆಗಾಲದ ಅರ್ಧ ಮಾತ್ರಾ ಮುಗಿದಿದೆ. ಸುಮಾರಾಗಿ ಕಾವೇರಿ ಸಂಕ್ರಮಣದವರೆಗೂ ಕೊಡಗಲ್ಲಿ ಮಳೆ ಬರುತ್ತಿರುತ್ತದೆ. ಈ ಒಂದೊಂದು ಮಳೆಯೂ ಹಸಿ ಮಣ್ಣನ್ನು ಇನ್ನಷ್ಟು ತೇವಗೊಳಿಸುವ ಶಕ್ತಿ ಹೊಂದಿದೆ.
ಅರ್ಥಾತ್ ಈ ಕುಟುಂಬಗಳಿಗೆ ಮುಂದಿನ ಕನಿಷ್ಠ ಆರು ತಿಂಗಳು ಸಹಾಯ ಹಸ್ತ ಬೇಕು. ಅಷ್ಟೇ ಅಲ್ಲ, ಮನೆ, ರಸ್ತೆ ನಿರ್ಮಿಸುವುದೆಂದರೆ ಏನಿದ್ದರೂ ಸಂಕ್ರಾಂತಿ ಕಳೆಯಬೇಕು. ಅಂದರೆ ಈ ಬೇಸಿಗೆಯಲ್ಲಿ ದೊಡ್ಡ ಪ್ರಮಾಣದ ಆರ್ಥಿಕ ಸಹಾಯ ಬೇಕು. ಮಲೆನಾಡಿನಲ್ಲಿ ಮನೆ ಕಟ್ಟಿಸುವುದೆಂದರೆ ಮನೆಯೊಂದಕ್ಕೆ ಕನಿಷ್ಠ ಐದು ಲಕ್ಷ ಬೇಕು. ಇನ್ನು ಭೂಕುಸಿತ ನಿರೋಧಕ ರೀತಿಯಲ್ಲಿ ರಸ್ತೆ ನಿರ್ಮಾಣದ ಬಗ್ಗೆ ಮರುಚಿಂತನೆ ನಡೆಯಬೇಕಾಗಿದೆ. ಇದು ಗ್ರಾಮೀಣ ಪರಿಸರದ ಬಡವರ ಬದುಕು ಕಟ್ಟುವ ಬಗ್ಗೆ. ನಾಶವಾದ ತೋಟಗಳ ಮರು ಸೃಷ್ಟಿಗೆ ರ್ದೀಕಾಲೀನ ಹಣಕಾಸಿನ ನೆರವು ಬೇಕು.
ಇನ್ನೊಂದೆಡೆ ಸಂಪರ್ಕ ರಸ್ತೆಗಳನ್ನು ಸರ್ಕಾರ ಮರು ನಿರ್ಮಿಸಲು ಸಮರೋಪಾದಿಯಲ್ಲಿ ತಯಾರಾಗಬೇಕು. ಮಡಿಕೇರಿ-ಸುಳ್ಯ, ಮಡಿಕೇರಿ-ಸೋಮವಾರಪೇಟೆ-ಸಕಲೇಶಪುರ ; ಬಿಸಿಲೆ- ಸುಬ್ರಮಣ್ಯ ರಸ್ತೆಗಳು ಸಂಪೂರ್ಣ ಪಾತಾಳಕ್ಕಿಳಿದಿವೆ. ಇವನ್ನು ನಿರ್ಮಿಸಲು ವೆಚ್ಚ ಮಾಡಿದ್ದಕ್ಕಿಂತ ಹೆಚ್ಚು ರಿಪೇರಿ ಮಾಡಲು ವೆಚ್ಚ ಮಾಡಬೇಕಿದೆ. ಮತ್ತೆ ಅದೇ ಅವೈಜ್ಞಾನಿಕ ರೀತಿಯಲ್ಲಿ ರಸ್ತೆ ನಿರ್ಮಿಸಿದರೆ ಘೋರ ಭವಿಷ್ಯದ ಅಪಾಯಕ್ಕೆ ಮುನ್ನುಡಿ ಬರೆದ ಹಾಗೆಯೇ ಸೈ. ಅಂದರೆ ಇಡೀ ಪುನರ್ನಿರ್ಮಾಣ ಪರಿಸರ ಸಂವೇದೀ ಸೂಕ್ಷ್ಮಗಳನ್ನು ಒಳಗೊಳ್ಳಬೇಕಾಗಿದೆ.
ಪರಿಹಾರ ಕಾಮಗಾರಿಗಳ ಜವಾಬ್ದಾರಿ ಗಮನಿಸಿದರೆ, ಲೋಕೋಪಯೋಗಿ ಇಲಾಖೆ, ಸಮಾಜಕಲ್ಯಾಣ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳ ಜವಾಬ್ದಾರಿ ಹೆಚ್ಚು. ಅನುದಾನವೂ ಇದೇ ರಿತಿಯಲ್ಲಿ ಹರಿದು ಬರಲಿದೆ. ಈ ಇಲಾಖೆಗಳಿಗೆ ಅನುಕಂಪ ಬಿಡಿ, ದಕ್ಷತೆ ಇರುವ ಪುರಾವೆಯೂ ಇಲ್ಲ. ಇದರೊಂದಿಗೇ ಕೊಕ್ಕೆ ಹಾಕುವ ಮೂಲಕ ಕಾಮಗಾರಿಗಳನ್ನು ತ್ರಿಶಂಕು ಸ್ಥಿತಿಯಲ್ಲಿಡುವ ಸಾಮಥ್ರ್ಯ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಗಳಿಗಿವೆ. ಇವೆರಡೂ ಇಲಾಖೆಗಳ ಆದಾಯ ಮೂಲವೇ ಇದು. ಈ ಇಲಾಖೆಗಳಿಗೆ ಇಡೀ ಕೊಡಗು ಜಿಲ್ಲೆಯೇ ಒಂದು ಊಟದ ತಟ್ಟೆಯ ಹಾಗೆ ಕಂಡರೆ ಅಚ್ಚರಿ ಇಲ್ಲ!
ರೈತರ ಸಾಲಮನ್ನಾ ಮಾಡಿ ಈಗಾಗಲೇ ನಿರ್ಧನ ಯೋಗದಲ್ಲಿರುವ ರಾಜ್ಯ ಸರ್ಕಾರ ಪರಿಹಾರ ಕಾಮಗಾರಿಗಳಿಗೆ ಕನಿಷ್ಠ 2-3 ಸಾವಿರ ಕೋಟಿ ವಿನಿಯೋಗಿಸಬೇಕಿದೆ. ಕೇಂದ್ರದ ಅನುದಾನ ದೊಡ್ಡ ಮಟ್ಟದಲ್ಲಿ ಬಂದರೆ ಪರಿಸ್ಥಿತಿ ಸುಧಾರಿಸೀತು. ಆದರೆ ಪುನರ್ನಿರ್ಮಾಣ ಏನಿದ್ದರೂ ಜನವರಿಯಿಂದಾಚೆ ಎಂಬ ಸತ್ಯದೊಂದಿಗೆ ಲೋಕಸಭಾ ಚುನಾವಣೆಯ ಭರಾಟೆ ನೆನಪಿಸಿಕೊಂಡರೆ ಪರಿಹಾರ ಎಷ್ಟರ ಮಟ್ಟಿಗೆ ಸಕಾಲದಲ್ಲಿ ಪೂರೈಸೀತು ಎಂಬ ಚಿಂತೆ ನಮ್ಮನ್ನು ಕಾಡಬೇಕು.
ಆದ್ದರಿಂದಲೇ ನಾವು ಈ ಆಡಳಿತ ಯಂತ್ರದ ನಡೆಗಳ ಮೇಲೆ ಕಣ್ಣಿಡಲು ಸನ್ನದ್ಧರಾಗಬೇಕಿದೆ.

 

– ಕೆ.ಪಿ.ಸುರೇಶ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...